ಒಟ್ಟು 286 ಕಡೆಗಳಲ್ಲಿ , 65 ದಾಸರು , 269 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶಿದನುಜನ ನಾಶಗೊಳಿಸಿದ ಕೇಶವನೆ | ಕಾಯೋ ಶ್ರೀಧರ ಪ ನಾಶರಹಿತ ಪರೇಶ ದಿನಪಸಂಕಾಶ | ಕ್ಲೇಶವಿನಾಶ ಭೂಧರ ಅ.ಪ ದೀನಪಾಲನೆ ಗಾನಲೋಲನೆ ಧೇನುಕಾಸುರ ಸೂದನೆ ಸಾನುರಾಗ ವಿನೋದನೆ 1 ರಥಾಂಗ ವೈರಿ ಗೋಪಾಲನೆ ಮಂಗಳಾಂಗ ಶುಭಾಂಗ ಮಾಂಗಿರಿ ರಂಗ ಗೋಪೀ ಬಾಲನೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೇಳೆಲೋ ಪ್ರಾಣಿ ನಂಬಿ ಪೂಜಿಸು ಹರಿಯ ಪಾದಾ | ಪಾಲಿಸುವಾ ಗರದು ಅನುಭವ ಬೋಧಾ ಪ ಗುರುವಿನಾ ಬಲಗೊಂಡು ಬಲಿಯೋ ಸ್ವಸುಖ ಪಡಕೋ | ಹರಿಯದೇ ನಾನಾ ಮಾರ್ಗವ ಕಂಡು 1 ಕಂಡ ದೈವಕ ಹಲ್ಲಾ ದೆರೆದು ಬಾಗುವದಲ್ಲಾ | ಮಂಡೆ ದಡವಲ್ಲದೇ ಮತ್ತೇನಿಲ್ಲಾ 2 ಇರಲು ಮನಿಲಿ ಧರಿಲುಳ್ಳಾ ಬಯಸಿದವಟಗಳೆಲ್ಲಾ | ತಿರುಕವ ಬೇಡಿ ಉಂಬುದು ಸಲ್ಲಾ 3 ನೀರಡಿಸಿ ಬರಿಗೈಯ್ಯಾ ನೆಕ್ಕಿದರೇನು ಶ್ರಯಾ | ಗುರುವಿನ ಕೇಳು ಸ್ವಹಿತೋಪಾಯ 4 ಹತ್ತು ಕಟ್ಟುವಕಿಂತ ಮುತ್ತು ಕಟ್ಟಬೇಕೆಂದೇ | ಅರ್ತರೊಲುವನು ಮಹಿಪತಿಸುತಂದೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೈತುತ್ತ ಹಾಕುವೆ ಬಾರೋ ರಂಗ ಮೈತುಂಬಾ ಒಡವೆಯ ಇಡುವೆನು ಬಾರೋ ಪ ಬೈತಲೆ ಬಾಚಿ ಹೂ ಮುಡಿಸುವೆ ಬಾರೋ ತೈ ತೈ ತೈ ಎಂದು ಕುಣಿದಾಡು ಬಾರೋ ಅ.ಪ ಬಿಸಿ ಬಿಸಿಯನ್ನವ ಮೊಸರಲಿ ಕಲಸಿ ಹಸುವಿನ ಬೆಣ್ಣೆಯ ಅದರ ಮೇಲಿರಿಸಿ ಕೇಸರಿ ಬೆರೆಸಿ ತುಸು ಏಲಕ್ಕಿಯ ಪುಡಿಮಾಡಿರಿಸಿ 1 ಬಸಿರಲ್ಲಿ ಜಗಂಗಳ ತುಂಬಿಹೆನೆಂದು ಹಸಿವಿಲ್ಲವೆನಬೇಡ ಅಸುರರಕೊಂದು ಬಿಸದ ಕಾಳಿಂಗನ ತುಳಿದೆದ್ದುನಿಂದು ಬಸವಳಿದಿರ್ಪೆನೀನಮರರ ಬಂಧು 2 ಹೊಸ ಪೀತಾಂಬರ ಕಟಿಬಂಧವಿಡುವೆ ವಿಸರವ ಪಸರಿಪ ಹೂಗಳ ಮುಡಿವೆ ರಸಸವಿನಾದದ ಕೊಳಲನು ಕುಡುವೆ ನಸುನಗೆ ತೋರೋ ಮಾಂಗಿರಿರಂಗ ನಲಿವೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೈಯ ಮುಗಿವೆನು ಮಹಾಲಿಂಗ ಜಗ- ದೈಯನೆ ವೃಷಭತುರಂಗ ಪ. ಧೈರ್ಯಸಾಹಸ ಸಮುದ್ರ ರುದ್ರ ಸುರ- ವರ್ಯನೆ ಸದಯಾಪಾಂಗ ಅ.ಪ. ಕೆಂಡಗಣ್ಣಿನ ಪರಶಿವನೆ ಸುಪ್ರ- ಚಂಡ ಚಂಡಿಕಾಧವನೆ ಮಂಡೆಯೊಳಗೆ ಭಾಗೀರಥಿಯ ತಾಳ್ದ ಕಂಡಪರಶು ಪಾವನನೆ 1 ಚಂದ್ರಕಲಾಧರ ಹರನೆ ಗೋ- ವಿಂದನ ವರ ಕಿಂಕರನೆ ಸುಂದರ ಶುದ್ಧಸ್ಫಟಿಕಶರೀರನೆ ವೃಂದಾರಕ ಮುನಿವೃಂದವಂದಿತನೆ2 ಪಾವಂಜೆ ಕ್ಷೇತ್ರವಾಸ ಪರಿ- ಪಾಲಿಸು ಫಣಿಪತಿಭೂಷ ದೇವ ಲಕ್ಷ್ಮೀನಾರಾಯಣದಾಸನ ಕಾವ ಕಲ್ಮಷವಿನಾಶ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕೈಯ ಮುಗಿವೆನು ಮಹಾಲಿಂಗ ಜಗ- ದೈಯನೆ ವೃಷಭತುರಂಗ ಪ. ಧೈರ್ಯಸಾಹಸ ಸಮುದ್ರ ರುದ್ರ ಸುರ- ವರ್ಯನೆ ಸದಯಾಪಾಂಗಅ.ಪ. ಕೆಂಡಗಣ್ಣಿನ ಪರಶಿವನೆ ಸುಪ್ರ- ಚಂಡ ಚಂಡಿಕಾಧವನೆ ಮಂಡೆಯೊಳಗೆ ಭಾಗೀರಥಿಯ ತಾಳ್ದ ಕಂಡಪರಶು ಪಾವನನೆ1 ಚಂದ್ರಕಲಾಧರ ಹರನೆ ಗೋ- ವಿಂದನ ವರ ಕಿಂಕರನೆ ಸುಂದರ ಶುದ್ಧಸ್ಫಟಿಕಶರೀರನೆ ವೃಂದಾರಕ ಮುನಿವೃಂದವಂದಿತನೆ2 ಪಾವಂಜೆ ಕ್ಷೇತ್ರವಾಸ ಪರಿ- ಪಾಲಿಸು ಫಣಿಪತಿಭೂಷ ದೇವ ಲಕ್ಷ್ಮೀನಾರಾಯಣದಾಸನ ಕಾವ ಕಲ್ಮಷವಿನಾಶ3
--------------
ತುಪಾಕಿ ವೆಂಕಟರಮಣಾಚಾರ್ಯ
ಕೊಂಡಾಡುವರ ಪ್ರಿಯನ ವಿಠ್ಠಲನ ಪ ಸಮಚರಣ ಭುಜನ ನಿಗಮಾ ಗಮತತಿಗೋಚರನಾ ಅಮಿತ ಪರಾಕ್ರಮನ ರುಕ್ಮಿಣಿ ರಮಣ ರವಿಕ್ಷಣನಾ ವಿಠ್ಠಲನ 1 ಕಾಮಿತಾರ್ಥ ಪ್ರದನ ಶ್ರೀ ತುಲಸೀ ಧಾಮ ವಿಭೂಷಿತನ ಪತಿ ಪಾಲನ ತ್ರಿಭುವನ ಸ್ವಾಮಿ ಚಿತ್ಸುಖಮಯನ ವಿಠ್ಠಲನ 2 ಗೋಕುಲ ಪೋಷಕನ ಮುನಿ ಪುಂಡ ರೀಕಗೋಲಿದು ಬಂದನ ಲೋಕವಿಲಕ್ಷಣನ ಪ್ರಣತರ ಶೋಕವಿನಾಶಕನ ವಿಠ್ಠಲನ 3 ವಿಧಿ ವಿಹ ಗೇಂದ್ರ ಮುಖಾರ್ಚಿತನ ಇಂದ್ರೋತ್ಪಲನಿಭನ ಗುಣಗಣ ಸಾಂದ್ರ್ರ ಸರ್ವೋತ್ತಮನ ವಿಠ್ಠಲನ 4 ಶ್ವೇತವಾಹನ ಸಖನ ಸತಿಗೆ ಪಾರಿ ಜಾತನ ತಂದವನಾ ವೀತ ಶೋಕ ಭಯನಾ ಶ್ರೀ ಜಗ ನ್ನಾಥ ವಿಠಲರೇಯನಾ 5
--------------
ಜಗನ್ನಾಥದಾಸರು
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ | ಕೋಲು ಸದ್ಗುರುವಿನಾ ಬಲಗೊಂಬೆ ಕೋಲೆ ಪ ಶರಣು ಶರಣು ಗುರುವೇ ಶರಣರ ಸುರತರುವೆ | ಶರಣರ ಹೃದಯದೊಳಗಿರುವೇ ಕೋಲೆ | ಅನುದಿನ | ಕರುಣದ ಮಳೆಯಾಗರೆವುತ ಕೋಲೆ 1 ಕರಣ ತೃಯದಿನಂಬಿ ಸ್ಮರಣೆಯ ಮಾಡಲು | ಧರಣಿಯಲಿಷ್ಟಾರ್ಥ ಕೊಡುತಿಹ ಕೋಲೆ | ಧರಣಿಯಲಿಷ್ಟಾರ್ಥ ಕೊಡುತಿಹ ಜನದಂತ ಕರಣದೊಳಗೆ ಬಯಕೆ ನಿಲದಂತೆ ಕೋಲೆ 2 ಚರಣ ಸರಸಿಜಕ ಶರಣ ಹೋಗಲು ಜನ್ಮ | ಮರಣದ ಭಯಕಂಜಿ ಜನರು ಕೋಲೆ | ಮರಣದ ಭಯಕಂಜಿ ಜನರು ಬರೆ ಕಂಡು | ಕರುಣಾ ಕಟಾಕ್ಷದಿ ನೋಡುವ ಕೋಲೆ 3 ಕರದಿಂದ ಪಿಡಿದವನ ತರಣೋಪಾಯದ ಬೋಧಾ | ಭರದಿಂದ ಬೀರುವೆ ಮನಸಿಗೆ ಕೋಲೆ | ಭರದಿಂದ ಬೀರುವೆ ಮನಸಿಗೆ ಭವದೊಳು | ಮರಳ್ಯವ ಸಿಕ್ಕದಂತೆ ಮಾಡುವೆ ಕೋಲೆ 4 ಜ್ಞಾನವೆಂಬಂಜನೆ ಸೂನಯನಕ ಊಡಿ | ಹೀನ ಅಜ್ಞಾನವ ಹರಿಸೂವ ಕೋಲೆ ಹೀನ ಅಜ್ಞಾನವ ಹರಿಸುವೆ ಬೇಗದಿ | ಸ್ವಾನುಭವದ ಸುಖ ಬೀರುವೆ ಕೋಲೆ 5 ನಾನಾ ಹಂಬಲವನ ಏನೆನುಳಿಯದ್ಹಾಂಗ | ತಾನಿದ್ದ ಬದಿಯಲಿ ಇಹಪರ ಕೋಲೆ | ತಾನಿದ್ದ ಬದಿಯಲಿ ಇಹಪರ ಸುಖಗಳ | ನೀನಿದಿರಿಡುತಿಹೆ ಸದಮಲ ಕೋಲೆ 6 ಎಂಟು ಸಿದ್ಧಿಗಳು ಉಂಟಾಗಿ ಬಂದರೆ | ವೆಂಟಣಿಸಿ ಅದರ ಕಡೆಗೇ ಕೋಲೆ | ವೆಂಟಣಿಸಿ ಅದರ ಕಡೆಗೇ ನೋಡ ನಿನ್ನ | ಬಂಟನೆಯ ಮಹಿಮೆಯ ಜಗದೊಳು ಕೋಲೆ 7 ನಿನ್ನ ಮಹಿಮೆಯನ್ನು ಇನ್ನು ನಾ ಪೊಗಳಲು | ಎನ್ನಳವಲ್ಲಾ ಜಗಕಲ್ಲಾ ಕೋಲೆ | ಎನ್ನಳವಲ್ಲಾ ಜಗಕಲ್ಲಾ ಸದ್ಗುರು | ನಿನ್ನ ಮಹಿಮೆ ಬಲ್ಲೆ ನೀನವೆ ಕೋಲೆ 8 ಮಹಿಗೆ ನೀ ಪತಿಯಾಗಿ ವಿಹರಿಸುತಿಹೆ ದೇವಾ | ಸಹಕಾರನಾಗಿ ಭಕ್ತರ್ಗೆ ಕೋಲೆ | ಸಹಕಾರನಾಗಿ ಭಕ್ತರ್ಗೆ ಅನವರತ | ಅಹಿತರವಂಡಣೆ ಮಾಡುತ ಕೋಲೆ 9 ಮುನ್ನಿನಪರಾಧವ ಇನ್ನೇನು ನೋಡದೇ | ಎನ್ನನುದ್ಧರಿಸು ದಯದಿಂದ ಕೋಲೆ | ಎನ್ನನುದ್ಧರಿಸು ದಯದಿಂದ ಮತಿಕೊಟ್ಟು | ನಿನ್ನ ಕೀರ್ತಿಯ ಕೊಂಡಾಡುವಂತೆ ಕೋಲೆ 10 ಎಂದೆಂದು ನಿಮ್ಮ ಪದ ಹೊಂದಿದ್ದವನು ನಾನು | ಕುಂದ ನೋಡದೇ ಸಲಹಯ್ಯಾ ಕೋಲೆ ಕುಂದ ನೋಡದೇ ಸಲಹಯ್ಯಾ ಮಹಿಪತಿ | ಕಂದನು ಮುಗ್ಧನೆಂದು ಬಿಡಬ್ಯಾಡಿ ಕೋಲೆ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕ್ಷೇತ್ರದರ್ಶನ ಅ. ಕಂಚಿ ಕರಿಗಿರಿವಾಸ ವರದರಾಜ ಕರಿಗಿರಿವಾಸ ಪ ದುರಿತ ವಿನಾಶನೆ ಸುರಮುನಿ ಪೋಷನೆ ಭವರೋಗ ನಾಶನೆ ಅ.ಪ ರಾಜನೆಂಬೊ ಬಿರುದು ಪೊತ್ತಿಹ ದೇವ 1 ಮಾಯೆಯ ಬಿಡಿಸೊ ನಿನ್ನಲಿ ಎನಗೆ ಮೋಹವ ನಿಲಿಸೊ ಪಾದಧ್ಯಾನವನಿತ್ತು ಕಾಯೊ ವರದರಾಜ 2 ಚತುರಹಸ್ತದಲೀ ಕೈಪಿಡಿದು ದಿವ್ಯವಾದ ಶಂಖಚಕ್ರಗದೆಯಲಿ ನಿಮ್ಮ ಪಾದವ ಸೇರಿಸು ಎನ್ನ ಚಿತ್ತಜಜನಕ 3 ಹಾ ಕೃಷ್ಣ ಎಂದು ದ್ರೌಪದಿ ಕರೆಯೆ ಮನಕೆ ನೀತಂದು ಅಕ್ಷಯ ಮಾಡಿದೆ ಪಕ್ಷಿವಾಹನ ಪಾಂಡವಪಕ್ಷ ಶ್ರೀಕೃಷ್ಣ 4 ಇನ್ನು ನಾ ಜನಿಸಲಾರೆನೊ ಹೀನಜನ್ಮದಿ ಮನ್ನಿಸಿ ರಕ್ಷಿಸೊ ಎನ್ನ ವರದರಾಜ5 ಭವಬಿಸಲಿನಲಿ ಬಳಲಿ ಬಂದೆ ತಾಪತ್ರಯದಲ್ಲಿ ನಿಮ್ಮ ಚರಣ ಪಂಕಜವೆಂಬೊ ಆತಪತ್ರದ ನೆರಳ ತಾಪ ದೂರ ಮಾಡಿಸೊ ದೇವ 6 ನಾಮಾಡಿದಂಥ ಪಾಪಗಳೆಲ್ಲ ಸಾವಿರ [ಅ]ನಂತ ಎಣಿಸಿ ನೋಡಲು ಏನೂ ದಾರಿಯ ಕಾಣೆನು [ಎನ್ನ] ಸರ್ವಾಪರಾಧವ ಕ್ಷಮಿಸಿ ರಕ್ಷಿಸೊ ದೇವ 7 ವಿಂದ್ಯಾರಣ್ಯದಲಿ ಭಕ್ತರು ಕರೆಯೆ ಬಂದೆ ಬೇಗದಲಿ ಇಂದಿರೆ ಸಹಿತಾಲೆ ತೀರ್ಥವ ಗ್ರಹಿಸಿ ಭಕ್ತರ ಕರೆ ತಂದು ಕರಿಗಿರಿಯಲಿನಿಂದ ವರದರಾಜ ಕರಿಗಿರಿವಾಸ 8
--------------
ಯದುಗಿರಿಯಮ್ಮ
ಗಾಯಿತ್ರಿ ಹಿರಿಮೆ ಹತ್ತು ರೂಪದ ಗಾಯಿತ್ರಿ ನಿನಗೆ ರಂಗದ ತಾನ ಹತ್ತು ರೂಪಗಳಲ್ಲಿ ಕುಣಿಯುತಿಹೆ ನೀನು ಹತ್ತು ಸಲವಾದರೂ ಗಾಯಿತ್ರಿ ಜಪಿಸದಿರೆ ನಿನ್ನಲ್ಲಿ ಭೂಸುರತೆ ಉಳಿಯುವದೆಂತು? 89 ತನ್ನಾಮದರ್ಥವೇ ವ್ಯಾಪ್ತಿರೂಪದ ಮೀನು ಅಮೃತಸವನದಕತದಿ ಕೂರ್ಮನಿಹೆ ನೀನು ಭೂವರಾಹನು ನೀನು ವರೇಣ್ಯನಾಮಕನು ಶತ್ರುಭರ್ಜನದಿಂದ ಭರ್ಗನಾಗಿರುವೆ 90 ಪ್ರಾಣವನು ಮೇಲೆತ್ತಿ ಅಪಾನವನು ಕೆಳಗಿರಿಸಿ ಮಧ್ಯದಲಿ ವಾಮನನು ದೇವ ನೀನಿರುವೆ&ಚಿmಠಿ;ಟಿ, bsಠಿ;91 ಮಹಿಯ ಭಾರವ ತೆಗೆದ ಪರಶುರಾಮನು ನೀನು ಪ್ರಾಣನ ಪ್ರೀತಿಕರ ರಾಮ ನೀನಿರುವೆ 92 ಕಲಿಯುಗದ ದೇವನೇ ಜ್ಞಾನರೂಪದ ಕೃಷ್ಣ ಬುದ್ಧ ನೀನಿರುವೆ ಧರ್ಮ ಪ್ರಸಾರಣಕೆ ಹಯವನ್ನು ಚೋದಿಸುವ ಕಲ್ಕಿನಾಮಕ ನೀನು ತಿಳಿದು ಜಪ ಮಾಡು 93 ಗಾಯನದಿ ರಕ್ಷಿಸುವೆ ಗಾಯಿತ್ರಿಯೇ ನಮಗೆ ಬ್ರಾಹ್ಮತೇಜವನುಳಿಸಿ ರಕ್ಷಿಪುದು ನಮ್ಮ ಗಾಧಿಪುತ್ರನು ತಾನು ಕ್ಷತ್ರಿಯನದಾದರೂ ಬ್ರಹ್ಮರ್ಷಿಯಾಗಿ ಬಾಳಿದನು ನಿಜವೈ 94 ಸಿರಿವರನೆ ನೀನು ಭಾಸ್ಕರನ ಮಂಡಲದಲ್ಲಿ ಕಮಲದಾಸನದಲ್ಲಿ ಶೋಭಿಸುತಲಿರುವೆ ಚಕ್ರ ಶಂಖ ಮಕರಕುಂಡಲಾದಿಗಳಿಂದ ಲೆನ್ನ ಹೃದಯಕೈತಂದು ನೆಲೆನಿಲ್ಲು 95 ನಿನ್ನ ಸೌವರ್ಣ ತೇಜದ ಬೆಳಕಿನಿಂದೆನ್ನ ಆತ್ಮದ ಜ್ಯೋತಿಯನು ಬೆಳಗಿಸುತ ನೀನು ನಿನ್ನನ್ನೆ ಹಂಬಲಿಪ ಭವಬಂಧ ತಪ್ಪಿಸುವ ನಿನ್ನ ಬಳಿಬರುವ ದಾರಿಯನು ತೋರಿಸೆಲಾ 96 ಗಾಯಿತ್ರಿಯ ಜ್ಯೋತಿ ನಂದದಂತಿರಲು ನಾನಷ್ಟಾಕ್ಷರಿಯ ಮಂತ್ರ ಜಪಿಸುವೆನು ನಾನು ವಿದ್ಯುತ್ತಿನದು ರಕ್ಷೆ ನಾರಾಯಣನ ಮಂತ್ರ ಅದರಿಂದ ರಕ್ಷಣೆಯ ಮಾಡುವೆನು ನಾನು 97 ಆತ್ಮರಕ್ಷಕನು ಹರಿ ದೇಹರಕ್ಷಕನು ಹರ ಹರನ ದೇಹವು ಪ್ರಕೃತಿಪಂಚಕದಿ ರಚಿತ ಆತ್ಮದಲ್ಲಿರುವಹಂಕೃತಿಗೊಡೆಯ ಹರ ಹರಿಹರರೇ ದೇಹಾತ್ಮ ರಕ್ಷಣೆಯ ಮಾಡಿ98 ವಿದ್ಯುತ್ತು ಬಿಳಿ ಕಪ್ಪು ಕೆಂಪು ನೀಲಿಗಳೆಂಬ ಐದು ಮುಖ ಹರನಿಗಿಹುದದರಿಂದ ನಾನು ಪಂಚಾಕ್ಷರಿಯ ಮಾಡಿ ಹರನನ್ನು ಧ್ಯಾನಿಸುವೆ ಧರ್ಮಾಯತನದ ದೇಹ ರಕ್ಷಣೆಯ ಮಾಳ್ಪೆ 99 ವೈರಿ ಮನದಲ್ಲೆ ಹುಟ್ಟಿದವ ಮನದೊಡೆಯ ರುದ್ರನನ್ನೇ ಹೊಡೆಯಲೆಂದು ಐದು ಬಯಕೆಗಳೆಂಬ ಬಾಣದಿಂ ಹೊಡೆಯುತಿರೆ ಕಾಮದಹನವ ಹೊಂದಿ ಬೂದಿಯಾದನವ 100 ಆ ಕಾಮನೇ ಮತ್ತೆ ಅಂಗಹೀನನದಾಗಿ ರುದ್ರನನ್ನರ್ಧನಾರೀಶ್ವರನ ಮಾಡಿ ಮನವನ್ನು ಕೆಡಿಸುತಲಿ ಮಾನವರೆಲ್ಲರನು ದುಃಖದಾ ಮಡುವಿನಲಿ ಕೆಡಹುವನು ನಿಜದಿ 101 ದೇಹಸೃಷ್ಟಿಗೆ ಮೂಲ ಮಣ್ಣು ತೇಜವು ನೀರು ಈ ಮೂರು ಮೂರುವಿಧವಾಗಿ ಪರಿಣಮಿಸಿ ಪಾಲನೆಯು ನಡೆಯುವದು ದೇವರಿಂದಲೇ ಇದನು ಉಪನಿಷತಿನಾಧಾರದಿಂದ ಪೇಳುವೆನು 102 ಭಕ್ಷ್ಯಭೋಜ್ಯವು ಲೇಹ್ಯ ಪೇಯವೆಂಬೀ ನಾಲ್ಕು ಪ್ರಾಣದಾಹುತಿಯನ್ನು ನಾವು ಕೊಡುತಿಹೆವು ಅದರಿಂದ ಪಾಕವನು ಮಾಡುತ್ತ ದೇವನವ ಸಪ್ತಧಾತುಗಳನ್ನು ಮಾಡಿ ರಕ್ಷಿಸುವ 103 ತೇಜವದು ವಾಗ್ರೂಪ ತಾಳುವದು ಮತ್ತದುವೆ ಅಸ್ಥಿಮಜ್ಜಗಳಾಗುವವು ನಿಜವ ಪೇಳ್ವೆ ವೈದ್ಯಕೀಯಪರೀಕ್ಷೆಗೊಳಗಾಗಿ ತಿಳಿವೆ ನೀನ್ ಶ್ರುತಿತತ್ವವೆಂದೆಂದು ಸಾರುತಿಹುದಿದನೆ 104 ಮಣ್ಣಿನನ್ನವೆ ಮೊದಲು ಮನವಾಗಿ ಮತ್ತದುವೆ ಮಾಂಸ ರೂಪವ ತಾಳಿ ಮಲವದಾಗುವುದು ನೀರೆ ಮುಖ್ಯ ಪ್ರಾಣ ಮತ್ತೆ ಶೋಣಿತವಾಗಿ ಮೂತ್ರರೂಪವ ತಾಳಿ ಹೊರಗೆ ಹೋಗುವುದು 105 ಸ್ವೇದಜೋದ್ಭಿಜ್ಜ ಮತ್ತಂಡಜ ಜರಾಯುಜಂಗಳು ಎಂಬ ನಾಲ್ಕು ವಿಧ ಜೀವಜಂತುಗಳು ನಾರಾಯಣನು ತಾನು ಜಲವಾಸಿಯಾಗುತಲಿ ಜೀವಜಂತುಗಳನ್ನು ಸೃಷ್ಟಿ ಮಾಡುವನು 106 ನಿನ್ನ ಗುಣದೋಷಗಳ ಪರರೆಂಬ ದರ್ಪಣದಿ ನೋಡಿದರೆ ತೋರುವವು ನಿನ್ನವೇ ತಿಳಿಯೈ ಪರರಲ್ಲಿ ಕಾಣುತಿಹ ದೋಷಗಳನು ತೊರೆಯುತ್ತ ಗುಣಗಳನು ಎಣಿಸುವವ ಲೋಕಮಾನ್ಯ 107 ಊಧ್ರ್ವಮೂಲದ ದೇವನೂಧ್ರ್ವದ ಹಿಮಾಲಯದೊ ಳುತ್ತುಂಗ ನಾರಾಯಣಪರ್ವತದಲಿ ತಾರಕನು ರಾಮನಂತೆಲ್ಲ ನರರನು ತನ್ನ ಬಳಿಗೆ ಕರೆದೊಯ್ಯಲ್ಕೆ ಮೇಲೆ ನಿಂತಿರುವ 108 ಮಧ್ವಗುರುಹೃದಯಭಾಸ್ಕರನು ನಾರಾಯಣನು ಬದರಿಯೊಳಿಹ ನೆಲೆಗೆ ಕರೆಯಿಸುತಲೆಮ್ಮನ್ನು ಸೇವೆಯನು ಕೈಕೊಂಡು ಭಾವಗತನಾಗಿದ್ದು ಪ್ರೇರಿಸಿದನೀಕೃತಿಗೆ ಪ್ರಕೃತಿ ಪರಮಾತ್ಮ&ಚಿmಠಿ;ಟಿbs, ಠಿ; 109 ಆತ್ಮದಲಿ ಒಳಗಿದ್ದು ಅಂತರಾತ್ಮನು ನೀನು ಆತ್ಮದ ಬಹಿರ್ಗತನು ಪರಮಾತ್ಮ ನೀನು ದೇಹದಿಂ ಹೊರಗಿದ್ದು ಕಾಲಾತ್ಮಕನು ನೀನು ನೀನಿಲ್ಲದಿಹ ದೇಶಕಾಲವೆಲ್ಲಿಹುದು? 110 ಮೂರು ನಾಮಗಳಿಹವು ಶ್ರೀನಿವಾಸನೆ ನಿನಗೆ ಅವುಗಳನು ನೆನೆದರೇ ಪಾಪ ಪರಿಹಾರ ಅಚ್ಯುತಾನಂತಗೋವಿಂದನೆನ್ನುವ ನಾಮ ಕೃತದೋಷ ಪರಿಹಾರಕಾಗಿ ಜಪಮಾಳ್ಪೆ 111 ಮಧುರಾಖ್ಯನಾಮವನು ಹಿಂದು ಮುಂದಾಗಿಸುತ ಮಧ್ಯದಕ್ಷರವನ್ನು ಕೈಯಲ್ಲಿಯಿರಿಸು ನಾಮಜಪ ಮಾಡದಿರೆ ಅವನ ಮುಖಕೆಸೆದು ನೀ ನನವರತ ಜಪಮಾಡಿ ಸಿದ್ಧಿಪಡೆ ಮನುಜಾ 112 ಅಣುವಿಂದ ಅಣುವಾಗಿ ಮಹದಿಂದ ಮಹತ್ತಾಗಿ ನಿನ್ನ ದರುಶನವು ಜನರಾರಿಗೂ ಇಲ್ಲ ಮಧ್ಯಕಾಲದಿ ಮಾತ್ರ ದರುಶನವು ವಸ್ತುವಿಗೆ ಅವತಾರ ರೂಪಗಳೆ ಪೂಜಾರ್ಹವಿಹವು 113 ಎಲ್ಲರೂ ಶ್ರೀಹರಿಯ ನೆಲೆಯೆಂದು ನೀನರಿತು ಮಮತೆಯಿಂ ನೋಡುತಲಿ ಸುಖವನನುಭವಿಸು ಹೊಲೆಯನಾದರು ನಿನ್ನ ನಂಬಿ ಮರೆಹೊಕ್ಕಿದರೆ ಕೈಬಿಡದೆ ನೀನವನ ರಕ್ಷಿಸಲೆ ಮನುಜಾ 114 ಹಲವಾರು ಜಾತಿಗಳು ಹಲವಾರು ಮತಗಳಿಹ ವವುಗಳಿಗೆ ಮೂಲಮತ ವೇದಮತವೊಂದೆ ಬೈಬಲ್ ಖುರಾನ್ ಮೊದಲಾದ ಪೆಸರಿಂದದುವೆ ಲೋಕದಲ್ಲೆಲ್ಲು ಪಸರಿಸುತಲಿಹವು 115 ಭವಬಂಧನವ ಕಳೆದು ತನ್ನ ಬಳಿಗೊಯ್ಯುವವ ನೀನಲ್ಲದಿನ್ನಾರು ಹರಿಯೆ ಶ್ರೀರಾಮ ಸಾಂತಾನಿಕದ ಲೋಕಕೊಟ್ಟು ರಕ್ಷಿಸಿದ ಹರಿ ತಾರಕನು ನೀನಿರುವೆ ನೀನೆ ಗತಿ ದೊರೆಯೆನಗೆ 116 ಪರಶುರಾಮನ ರೂಪದಿಂದ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದಿ ನೀನು ಅವನ ಹೃದಯವ ಹೊಕ್ಕು ಮಧ್ವಮತವನು ಜಗದಿ ದೇವ ಪಸರಿಸಿದೆ 117 ಮಿನುಗು ಹುಳಗಳ ಸೃಜಿಸಿ ಬೆಳಕನದರಲ್ಲಿರಿಸಿ ಕಗ್ಗತ್ತಲೆಯ ಕಾಡುಗಳಲಿ ರಕ್ಷಿಸುವೆಯೊ ಅಂತೆಯೇ ನಮ್ಮ ದೇಹದೊಳಗಿದ್ದು ನೀನ್ ಪ್ರತಿಬಿಂಬ ಜೀವವನು ರಕ್ಷಿಸುವೆ ದೇವಾ 118 ಪರಶುರಾಮನು ರಾಮ ಪರಶುರಾಮನು ಕೃಷ್ಣ ನರನು ನಾರಾಯಣನು ವ್ಯಾಸ ಮೊದಲಾಗಿ ಒಂದಾಗಿ ಬೇರೆಯಾಗಿಯೆ ರೂಪ ತಾಳುತ್ತ ಭಕ್ತರಕ್ಷಕನಾಗಿ ದುಷ್ಟವಂಚಕನು 119 ಇಂದ್ರಿಯಂಗಳ ಹೊರಮುಖವಾಗಿ ಸೃಷ್ಟಿಸಿದೆ ಹೃದಯಗುಹೆಯಲ್ಲಿರುವೆ ಕಾಣುವುದದೆಂತು? ಮನದಬಾಗಿಲ ತೆರೆದು ಅಂತರ್ಮುಖದಿ ನೋಡೆ ಪ್ರತ್ಯಗಾತ್ಮನು ನೀನು ಕಾಣುವದು ನಿಜವು 120 ಕುರುಡನಾಗಿಹೆ ನಾನು ಕುರುಡು ಇಂದ್ರಿಯಂಗಳಿಂ ತೋರುಬೆರಳಿಂದ ತೋರಿಸಲು ಬಯಸಿದೆನು ನನಗೆ ಅಂಜನಹಾಕಿ ತೋರು ನಿನ್ನ ಜ್ಯೋತಿ ವಿಶ್ವತಶ್ಚಕ್ಷು ಪರಮಾತ್ಮ ಶರಣೆಂಬೆ 121 ಕೋಟಿ ಗೋದಾನಕ್ಕೂ ಮಿಗಿಲಾಗಿ ಪುಣ್ಯಕರ ನಿನ್ನ ನಾಮದ ಜಪವು ತಾರಕನು ನೀನು ತಿಳಿದ ಗುಣಸಾಗರದ ಹನಿಗಳನು ಹೆಕ್ಕಿ ನಾನ್ ನುತಿಸಿದೆನು ನಿನ್ನನ್ನು ಮುಕ್ತಿದಾಯಕನೆ 122 ಸುಗುಣೇಂದ್ರ ಮೊದಲಾದ ಯತಿವರರ ಪೂಜೆಯಿಂ ಜ್ಞಾನರೂಪದ ನೀನು ಸಂತಸವ ತಾಳಿ ಜ್ಞಾನಭಂಡಾರಿ ಯತಿವರರಿಗೆಲ್ಲರ್ಗೆ ಜ್ಞಾನಾಮೃತವ ಕೊಟ್ಟು ರಕ್ಷಿಸುವೆ ಹರಿಯೇ 123 ಭವದಿ ಬಂಧಿಸಿಯೆನ್ನ ಭಾವಗತನಾಗಿದ್ದು ದುಷ್ಕರ್ಮ ಮಾಡಿಸುತ ಫಲ ಕೊಡುವದೇಕೆ? ಎನ್ನ ಕೈಯಿಂದೆತ್ತಿ ಬಳಿಗೆ ಕರೆದೊಯ್ಯು 124 ಉಚ್ಛ್ವಾಸ ನಿಶ್ವಾಸ ರೂಪದಿಂದೊಳಹೊಕ್ಕು ಆತ್ಮ ಸಂದರ್ಶನವ ಮಾಡುತ್ತ ವಾಯು ಇಪ್ಪತ್ತಒಂದುಸಾಸಿರ ಮತ್ತೆ ಆರ್ನೂರು ಹಂಸಮಂತ್ರದ ಜಪವ ಮಾಡುವನು ದಿನಕೆ 125 ಪರಶುರಾಮನು ರಾಜರೆಲ್ಲರನು ಸಂಹರಿಸಿ ಭೂಮಿಯನು ನಕ್ಷತ್ರಮಂಡಲವ ಮಾಡಿ ವಿಶ್ವಜಿತ್‍ಯಾಗದಲಿ ಕಶ್ಯಪರಿಗೀಯಲದ ಕಾಶ್ಯಪಿಯ ನಾಮವನು ಭೂಮಿ ಪಡೆಯಿತಲಾ 126 ಕಶ್ಯಪರ ತಪದಿಂದ ರಾಜರಿಲ್ಲದ ಭೂಮಿ ಭಾರದಿಂ ಕೆಳಗಿಳಿಯೆ ಊರುವಿಂದೆತ್ತಿ ಅವಳ ಮೊರೆ ಕೇಳಿ ರಾಜವಂಶವನ್ನುದ್ಧರಿಸೆ ಉರ್ವಿನಾಮವ ಪಡೆಯಿತು ಭೂಮಿ ನಿಜವು 127 ವ್ಯಾಸಪುತ್ರನದಾಗಿ ವ್ಯಾಸಪಿತ ನಾನಾಗಿ ವ್ಯಾಸಭವನದ ಒಳಗೆ ಭದ್ರನಾಗಿದ್ದೆ ಈ ಭವನದಿಂದೆನ್ನ ನಿನ್ನ ಭವನಕೆ ಒಯ್ಯು ಅಮೃತಲೋಕದಿ ನಿನ್ನ ಸೇ, ವೆ ಗೈಯ್ಯುವೆನು 128 ರಾಧಿಕಾರಮಣನೆ ಮಧುರಾಪುರಾಧಿಪತಿ ದಾನವಾಂತಕ ಕೃಷ್ಣ ಸತ್ಯಸ್ವರೂಪ ವಿಶ್ವಜ್ಞ ಪೂಜಿತನೆ ರಕ್ಷಿಸೆನ್ನನು ಹರಿಯೇ ಚಿತ್ತದಲಿ ನೆಲೆನಿಲ್ಲು ತಂದೆ ಕಾಪಾಡು 129 ಇಂದ್ರಾಣಿ ತಪಗೈದ ತಾನದಲಿ ಚ್ಯವನಮುನಿ ವೇದಾದ್ರಿ ಎಂಬಲ್ಲಿ ತಪಗೈಯುತ್ತಿದ್ದ ಸ್ವರ್ಣವರ್ಣವನ್ನಿತ್ತು ಕಣ್ಣಿತ್ತ ಸ್ವರ್ಣನದಿ ಹರಿಯುತಿಹುದಿಲ್ಲಿಯೇ ಈಗಲೂ ನಿಜವು 130 ಪ್ರಕೃತಿ ಪ್ರಕೃತಿಯ ಭೇದ ಪ್ರಕೃತಿ ಜೀವದ ಭೇದ ಜೀವ ಜೀವಗಳ ಭೇದ ಮೂರನೇಯದು ಜೀವೇಶ ಭೇದವದು ಪ್ರಕೃತೀಶ ಭೇದವೆಂ ದಿಹವು ಪ್ರಪಂಚದಲಿ ಪಂಚಭೇದಗಳು 131
--------------
ನಿಡಂಬೂರು ರಾಮದಾಸ
ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರುಹಾಳುಬಾವಿಯ ಪೋಲ್ವ ಭವದಿ ಬಳಲುವ ಜೀವರು ಪ. ಮೇಲೆ ಬಹ ಕಾರ್ಯಜಾಲ ಹಂಬಲಿಸುವಖೂಳ ಜಲಜದ ಕೋಳದೊಳು ಹಲುಬುವಳಿಯಂತೆಕಾಲಪಾಶಕ್ಕೆ ಸಿಕ್ಕಿ ಪುಸಿಯಾಗದೆ ಉಳಿಯಫಾಲದ ಬರಹವ ಮೀರಿ ನಡೆವ ಮನುಜನು ದಾವ 1 ತೈಲ ವಿಕ್ರಯದ ಶೆಟ್ಟಿ ಮೇಲೆ ಬಹ ಲಾಭಗಳಸಾಲ ಯೋಚಿಸಿ ತನ್ನ ಮೂಲಧನವ ನೀಗಿದ ಗಡಬಾಳುವ ಸುತನ ಬಯಸಿ ಮದುವೆಯ ಮಾಡಿದ ಚೆಲ್ವಬಾಲಕಿ ಬದುಕದೆ ಗರ್ಭದೊರಸೆ ಬಿದ್ದುಹೋಗಳೆ2 ಖೂಳಕೊಬ್ಬಿನಲ್ಲುಂಡು ಶಾಲ್ಯಾನ್ನ ದಕ್ಕದಿರೆನಾಳೆಬಹ ಸಂಕಟವನರಿಯದ ಮನುಜನಲ್ಲವೆತಾಳದಮರನÀ ನೆಳಲಿಗೆಂದು ಬಂದು ಕುಳಿತರೆಬೋಳುತಲೆಯಲಿ ಅದರ ಫಲ ಬಿದ್ದು ಸಾಯನೆÉ 3 ಸೂಳೆಯರ ಮೆಚ್ಚಿದವ ಅವರು ಕೊಟ್ಟ ಮದ್ದಿನಿಂದಬೀಳ್ವುದೀ ತನುವೆಂದು ಅಕಟಕಟ ಬಲ್ಲನೆಮಾಳಿಗೆಯ ತೊಲೆ ಮುರಿದು ಮರಣ ಬಂದೀತೆಂದುಲೋಲಾಕ್ಷಿಯರ ಸಂಗಡ ಮಲಗಿದವ ಬಲ್ಲನೆ 4 ಶೂಲಧರ ಖಳನಿಗೆ ವರವ ಕೊಟ್ಟು ಕಂಗೆಟ್ಟುಕೋಲುತಾಗಿದ ಹರಿಣನಂತೆ ಹರಿಯ ಸಾರ್ದಗಡಆಲಸ್ಯಭಯ ಭಕ್ತಿಭರಿತ ನರರೇನ ಬಲ್ಲರುಕೇಳೆಯಾನಋತೇ ಯೆಂಬ ಶ್ರುತಿಯ ಸಂಭ್ರಮವ 5 ಬೊಮ್ಮ ತಾಕಾಲೂರಿ ತಪಗೈದು ಜಗವ ಮಾಡಿದ ಗಡ 6 ಶ್ರೀಲೋಲ ಹಯವದನ ಸರ್ವಸ್ವತಂತ್ರ ತನ್ನತೋಳ ಬಲದಿಂದೊಬ್ಬನೇ ತೊಡಗಿದ ಕಾರ್ಯ ಈಡೇರಿಸುವಈಲೋಕವೆಲ್ಲವಳಿಯಲು ಆಲದೆಲೆಯ ಮೇಲೆಲೀಲೆಯಿಂ ಪವಡಿಸಿ ಸೃಜಿಸಿದಗೆ ಪರರ ಹಂಗೇ 7
--------------
ವಾದಿರಾಜ
ಗಿರಿಜಾತೆಯ ಸುತ ಸುರನರ ಪೂಜಿತ ಪರಮಪುರುಷ ಗುಹ ದಯದೋರೋ ಪ ದುರಿತ ವಿನಾಶ ಗುಹ ದಯದೋರೋ ಅ.ಪ ಸರ್ವೋತ್ತಮೋತ್ತಮ ಗುಹ ದಯದೋರೋ 1 ಇಂದಿರೆಯರಸನ ಕಂದನ ಗತರೂಪಾ- ಕುಂದಿಸಿದಾ ಗುಹ ದಯದೋರೋ 2 ಬಾಲೆ ವಲ್ಲಿಯವರ ಶೀಲ ಸುಗುಣ- ಲೋಲ ಪಾವಂಜೆ ಗುಹ ದಯದೋರೋ 3
--------------
ಬೆಳ್ಳೆ ದಾಸಪ್ಪಯ್ಯ
ಗಿರಿಜೆಯ ಪ್ರೀತಿಯ ಕುವರ ಪ ಧುರ ಧೀರ ಭವದೂರ ಉದಾರ ಗಂಭೀರ ತವ ಚರಣವ ತೋರೋ ಕುಮಾರ ಅ ತಾರಕ ದೈತ್ಯನ ವಿನಾಶ ಗುಹೇಶ ಸರ್ವೇಶಾ ಜಗ-ದೀಶಾಸೇನೇಶಾ ಗುಣವಾರಿಧಿ ಚಂಪಕನಾಸಾ 1 ಶುಭ ಚರಣ - ಕಡುಕರುಣಾಕರ ಪಲ್ಲವ ರತ್ನಾಭರಣ2 ಪಾವನ ಮೂರುತಿ ಈಶ ರವಿಭಾಶಾ ಅಘನಾಶಾ ಸದ್ ದಾಸಾ ಜನಪೋಷ ವರ ಪಾವಂಜೆ ಕ್ಷೇತ್ರ ನಿವಾಸ 3
--------------
ಬೆಳ್ಳೆ ದಾಸಪ್ಪಯ್ಯ
ಗುರು ಸ್ವರೂಪದರಹು ಗುರುತದೋರುವ ಕುರುಹು ಗುರುವ್ಹೆ ಇರುವ್ಹಾಂಗ ದೋರುದೆ ಪರಾತ್ಪರವು ಧ್ರುವ ಅರವಿನಾಗ್ರದಲಿಹ ಕುರುಹುದೋರುವ ಖೂನ ಗುರುತವಾಗುದೆ ಗುರುಕೃಪೆಯ ಜ್ಞಾನ ಮರವಿನ ಮೂಲವನು ಮರೆದು ಬಿಡುವಸ್ಥಾನ ಅರವೆ ಅರವಾಗಿದೋರುವ ನಿಜ ನಿಧಾನ 1 ಅರಹು ಮರವನೆ ದಾಟಿ ಮೀರಿ ದೋರುವ ಕುರುಹು ಅರಿತು ಕೊಂಬುದೆ ತತ್ವದರವ್ಹಿನರಹು ತಿರುಹು ಮುರುವ್ಹಿನ ಅರುಹದೋರಿ ಕೊಡುವುದೇ ಸ್ಥಿರವು ಬೆರೆದು ಕೊಡುವದೆ ಗುರುಙÁ್ಞÀ ನಾನಂದ ಕುರುಹು 2 ಕರೆದು ಕರುಣಿಸಿ ದಯವು ಬೀರಿದನುಭವ ಸುಖವು ಗುರುಭಾನುಕೋಟಿ ಪ್ರಕಾಶ ಎನಗೆ ಅರವೆ ಅರಿವ್ಹಾಗಿ ತೋರಿತು ಮನೋನ್ಮನವಾಗಿ ತರಳ ಮಹಿಪತಿಗೆ ಘನ ಬೆಳಗೆ ಬೆಳಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಬೋಧ ಪರಮಸುಖಕಾರಿ ಬಾರಿ ಬಾರಿಗೂ ಕೇಳೈ ಭವರೋಗೀ ಪ ಬಿಡು ಬಾಳಿನ ಭ್ರಮೆಯ ಸಂಸಾರಿ ದುಃಖದ ಬಾಳಿದು ವಿನಾಶಕಾರಿ ಇದರೊಳು ಸಿಗುತಿಹ ಸುಖವು ವಿಕಾರಿ ತಿಳಿಯೈ ಮುಕ್ತನಾಗಲಿದು ದಾರಿ 1 ಆರಿ ನಿನ್ನಯ ನಿಜವಾ ಸುವಿಚಾರಿ ಅರಿವೇ ನಿನ್ನಯ ಈ ಭವತಾರಿ ಬೇರಾವುದು ನಿನಗಾಗದು ದಾರಿ ಈ ನುಡಿ ಪೇಳುತಿಹುದು ಶೃತಿಸಾರಿ 2 ಜಾಗರಾ ಕನಸು ನಿದ್ರೆಯ ಮೀರಿ ಅಮರವಾಗಿರುವ ಪದವನೆ ತೋರಿ ಅದೆ ನೀನೆನ್ನುತ ಪರಿಪರಿ ಸಾರಿ ಶಂಕರಭೋಧವಿದುವೆ ಭವಹಾರಿ3
--------------
ಶಂಕರಭಟ್ಟ ಅಗ್ನಿಹೋತ್ರಿ
ಗುರುರಾಯ ನಂಘ್ರಿಯಾ ಹಿಡಿ ಹಿಡಿ ಹಿಡಿ ಪರಮ ಸದ್ಭಾವನೆ ಜಡಿ ಜಡಿ ಜಡಿ ಪ ಎರವಿನಾ ಮನೆಯೊಳು ಸ್ಥಿರವೆಂದು ಮೈಯ್ಯವ | ಮರೆವರೇ ಹರಿನಾಮಾ ನುಡಿ ನುಡಿ ನುಡಿ 1 ಕರವ ಮುಗಿದು ಬಾಗಿ ತರಣೋಪಾಯವ ನಿನ್ನ | ಅರಿತು ಸ್ವಹಿತದಲಿ ನಡಿ ನಡಿ ನಡಿ2 ತಂದೆ ಮಹಿಪತಿ ಕಂದಗೆಚ್ಚರಿಸಿದಾ | ಪಡಿ ಪಡಿ ಪಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು