ಒಟ್ಟು 501 ಕಡೆಗಳಲ್ಲಿ , 85 ದಾಸರು , 437 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಮಾ ಹಿಮಗಿರಿ ಸಮಸ್ತ ಸಮಾನ ಸುಗುಣವಂದ್ಯೆ ಪ ಕಮಲಾಕ್ಷನÀ ಭಗಿನಿಯೆನ್ನಮಲನ ಮಾಡಿ ವಿಮ¯ ಮನಸು ಶಮದಮಗಳ ನೀಡಮ್ಮ ಅ.ಪ. ತ್ರಿಪುರ ಸುಂದರಿ ನಿನ್ನ ಅಪಾರ ರೂಪಕೆ ತ್ರಿಪುರಾರಿ ಮರುಳಾದನಮ್ಮ ಶಫರಾಕ್ಷಿ ಕೇಳೆನ್ನ ಬಿನ್ನಪವನು ಮನ ಚಪಲಾಕೆರಗದಂತೆ ಕೃಪೆ ಮಾಡಬೇಕಮ್ಮ 1 ಜಪವ ನಾನರಿಯೆನು ತಪವ ನಾನರಿಯೆನು ಎ ನ್ನಪರ ಬುದ್ಧಿಯ ಬಿಡಿಸಮ್ಮ ಕೃಪಣ ವತ್ಸಲೆ ಎನ್ನ ಕುಪಥಾವ ತಪ್ಪಿಸಿ ಅಪವರ್ಗ ಸೇರುವ ಸುಪಥವ ತೋರಮ್ಮ 2 ಅಪ್ಪ ರಂಗೇಶವಿಠಲ ಒಪ್ಪುವ ರೀತಿಲಿ ತಪ್ಪದೆ ಮತಿ ಪ್ರೇರಿಸಮ್ಮ ತಪ್ಪು ಒಪ್ಪುಗಳೆಲ್ಲ ಸರ್ಪಶಯನಗೆಅರ್ಪಿಸಿ ಎನ್ನ ನಿರ್ಲಿಪ್ತನ ಮಾಡಿಸಮ್ಮ 3
--------------
ರಂಗೇಶವಿಠಲದಾಸರು
ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಪ ಶ್ಲೋಕ - ಘನ ಅನವರತÀ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ನಗರ ನಿಲಯಾ | ಅಮಿತÀ ಆನಂದ ಕಾಯಾ | ನಾಗ ತಲ್ಪೋರು ಗಾಯಾ 1 ಪದ - ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ | ಅಪ್ರತಿ ಧನ್ಯನೆ | ಪರಮ ಪುರುಷ ಅಸಮಾನ್ಯನೆ | ಮಹ ಪುಣ್ಯನೆ | ಪ್ರಳಯ ಕನ್ಯೆನೆ | ಕರುಣ ಸಾಕ್ಷಿಗನೆ ಲಾವಣ್ಯನೆ | ಅನುಗಣ್ಯನೆ ಪ್ರಾಕೃತ ಶೂನ್ಯನೆ 1 ಶ್ಲೋಕ - ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ | ಚರಿಸಿದೆ ವಿಷಯ ಯಾತ್ರಾ | ಪಾರಗಾಣೆನೋ ಮಿತ್ರಾ | ಕೊರಳಿಗೆ ಮಮತೆ ಸೂತ್ರಾ | ಉರುಲು ಬಿದ್ದಿದೆ ಚಿತ್ರಾ | ಸುರಕು ಬಡಿಪ ತನುತ್ತಾ | ಕಮಲ ನಿನೇತ್ರಾ | 2 ಪದ - ನರಕ ನರಕ ಉಂಡು ಬೆಂದೆನೊ | ಇಲ್ಲಿ ನಿಂದೆನೊ | ಗತಿಗೆ ಮುಂದೇನೊ | ಕುರುಡ ಕಿವುಡನಾಗಿ ನೊಂದೆನೊ | ಇನ್ನೊಂದೇನೊ | ಉಪಾಯವಂದೆನೊ | ಮರಹು ಸಾಗರದೊಳು ಸಂದೆನೊ | ಅಂದು ಹಿಂದೆನೊ | ಸುಜನರಿಗಂದೇನೊ 2 ಶ್ಲೋಕ - ಸುಲಲಿತ ರುಚಿರಪಾಂಗಾ | ಶುದ್ದ ಸ್ವಭಾವÀ ರಂಗಾ | ಪಲಿಪರಮಾಣು ಸಂಗಾ | ಪಾವನ ಕೋಮಲಾಂಗಾ | ವೊಲಿಸಿದವರ ಭಂಗಾ | ಪರಿಸುವ ಶಿಂಗ ಶಿಂಗಾ | ವರಬಲಗುಣ ತರಂಗಾ | ಸರಸಿಜ ಹೃತ್ಪುಂಗಾ3 ಪದ - ಚಿಂತಿಸುವೆನೊ ನಿನ್ನ ವಿಗ್ರಹಾ | ಮನೋನಿಗ್ರಹಾ | ವಾಗಲಿ ಅನುಗ್ರಹಾ | ಸಂತತ ಎನಗಿದೆ ಸಂಗ್ರಹಾ | ದೇಹವೈಗ್ರಹಾ | ದುರುಳರ ಪ್ರತಿ ಗ್ರಹಾ | ಮುಂತೆ ಕೈಕೊಂಬ ದುರಾಗ್ರಹಾ | ಯೈವ ವಿಗ್ರಹಾ | ಮಾಣಿಸು ಶಿರಿಗ್ರಹಾ | ಸಂತೈಸು ಕರುಣವಾರುಣಗ ಅನಿಗ್ರಹಾ 3 ನವನೀತ ಗೋಪಿ ವಸ್ತ್ರಾಪಹಾರಾ | ಕಾಲ ಧಾರಾ | ಕಂಸದಾನವ ಸಂಹಾರಾ | ಧ್ರುವ ಬಲಿಕರಿ ಉದ್ಧಾರಾ | ನಾನವತಾರ ಧೀರಾ | ಪವನ ಮನಮಂದಿರಾ ಪಾಲಿಸೊ ವಾರಂ ವಾರ4 ಪದ - ವಿಜಯನಗರಾಧೀಶ ಸರ್ವೇಶಾ | ಮಣಿಮಯ ಭೂಷಾ | ಸೂರ್ಯ ಕೋಟಿ ಪ್ರಕಾಶಾ | ತ್ರಿಜಗದೊಳಗೆ ನೀನೆ ನಿರ್ದೋಷಾ | ಶಕ್ತಿ ವಿಶೇಷಾ | ಐಶ್ವರ್ಯ ವಿಲಾಸಾ | ಋಜುಜ್ಞಾನ ಕೊಡುವದೊ ಮನೋತ್ತರಿಸಾ | ಮಂಜುಳ ಭಾಷಾ | ಭೂದಾ ರಜವಾಸಾ | ನಿರ್ಜರ ಕೋಶಾ | ಹೃದಯ ಕಾಶಾ | ನಾಮಕ ಮಹಿದಾಸಾ 4
--------------
ವಿಜಯದಾಸ
ಎಂಥಾ ಠೌಳಿಗಾರನಮ್ಮ ಗೋಪಮ್ಮ ನಿನ್ನ ಮಗ ನ್ನೆಂಥಾ ಠೌಳಿಗಾರನಮ್ಮ ಪ. ಎಂಥಾ ಠೌಳಿಗಾರ ಪಂಥಾದಿ ಬೆನ್ನಟ್ಟಿ ಬಂದು ನಿಂತಲ್ಲೆ ನಾನಾರೂಪವೆಂತು ತಾಳುವ ನೋಡೆ ಎಂಥಾ ಅ.ಪ. ನೀರೊಳು ಮೀಯಲು ಪೋದೆನೆ ಗೋಪಮ್ಮ ಸಾರಿ ಪಿಡಿಯಲು ಹೋದೆ ಆರು ಅರಿಯರೆಂದು ಪೊತ್ತು ಮರೆಯಾದನೇ ಗೋಪಮ್ಮ 1 ಗೋಪಿ ಧೂಳು ಕೆದರಿ ಕೋರೆ ತೋರುವನ ಖೂಳ ದೈತ್ಯನ ಸೀಳೆ ಕೇಳಿ ಕಂದನ ನುಡಿ ಭಾಳ ಕ್ರೂರ ಮೃಗ ಕೇಳಿದೊಡಲು ಭಯ ತಾಳಿ ಬಂದೆ ಇಂಥ2 ದೊರಕಿದನೆಂದೆ ತಿರುಕ ಬ್ರಹ್ಮಚಾರಿ ತಿರುಗಿ ನೋಡೆ ಥೋರ ಕೊಡಲಿ ಪಿಡಿದು ನಿಂತು ಮಾರುತಿ ಸೇವಿತನಾದ ಗಮನ ದೇವನು ಎಂಥಾ 3 ಚಿತ್ತಜನೈಯ್ಯನು ನಾನೆತ್ತ ಪೋದರು ಬಿಡ ಸುತ್ತಿ ಬಹನೆ ಕೃಷ್ಣಾ ಮುತ್ತ ತಾರೆನುತ ಕತ್ತಲೆಯೊಳು ಪೋದೆ ವಿಸ್ತರಿಸುವೆನೆಂತು ಗೋಪಿ ಇಂಥಾ 4 ಶ್ರೀಪತಿ ಶ್ರೀನಿವಾಸನ ಪಿಡಿದು ಗೋಪಾಲನ ಎಳತಂದೆ ನಿನ್ನೆಡೆಗೆ ತಾ ಪರಾರಿಯಾಗಿ ಗೋಪತಿ ಹಯನೇರಿ ಏಪರಿ ಪೋದನೊ ತಾಪತಾಳಲಾರೆ ಎಂಥಾ 5
--------------
ಸರಸ್ವತಿ ಬಾಯಿ
ಎನ್ನ ಸಲಹೋ ಚರಣವನ್ನು ದೋರಿ ಪರಮ| ನಿನ್ನ ಕಿಂಕರನೆಂದು ಘನ್ನದಯವನು ಬೀರಿ ಎನ್ನಾ ಪ ಶರಣ ಜನ ಮಾನ ರಕ್ಷಕನೇ ವರಕಮಲ ಕರಕಮಲ ಪದವಿಮಲ ಮಹಿಮನೇ ಸಕಲ ಗುಣಧಾಮ ಘನಶ್ಯಾಮ ಸುರ ರಿಪು ಮಥನ| ಗೋಕುಲರಿ ಸೋದರಾನಂತ ಗುಣಾ ಶ್ರೀ ಹರಿ ಭಕ್ತರ ವಸರಕೊದಗುವೆ ನೀ ಪರೋಪರಿ| ಸುಕಲ್ಪತರು ದನುಜ ಕುಲಸಂಹಾರ ಸರ್ವದುರಿತ ನಿವಾರಾ 1 ಅಖಿಳ ಶೃತಿ ಸ್ಮøತಿ ನಿಕರಲಿಂದ ನುತಿಸಿಕೊಂಬೆ| ವಿಕಸಿತನುಪಮ ವದನಬ್ಜ ಕುಲ ಅಬ್ಜರವಿ ಪ್ರಕಟದೊಳೊದಗಿ ಬಂದೆ ಸರಸೀರುಹ ನಯನ ಜಗದ ತಂದೇ| ಸಿರಿನಂದ ನಂದನ ಪರಮುದಾರೇ| ಸುರವೃಂದ ರಕ್ಷಕ ವರ ಮುರಾರೇ 2 ಶರಣಾಗತ ಜನರ ಪಾಲಾ| ಸಿರಿ ಉರಗಾರಿಗಮನ ಸೂರಾರಿ ಸಿಬಿಕುಲ| ಶೌರಿ ನರಸಹಕಾರಿ ಗಿರಿಧರನೇ| ಕರುಣಾಕರ ತ್ರಯದಿ ಸ್ಮರಣ ಮಾಳ್ಪರ ಭಯವ| ಹರಣ ಶರಣ ಕೌಸ್ತುಭಾಭರಣ ನೀಲವರಣಾನಂದ3 ವರ ಶ್ರೀರಮಣ ದೇವ ಜಗಜೀವ ಮಹಿಪತಿ ನಂದ ನೊಡಿಯ| ಪರಮಾನಂದ ಜೀವದೊರಿಯೇ| ಭವ ವಿನುತ ಮತಿ ಚರಿತಾ ಸಿಂಧೂರ| ನವನೀತ ಚೋರ ಜಗದೀಶ ಹರಿಯೇ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನಪರಾಧವ ಮನ್ನಿಸಿ ಪೊರೆ ಸುಪ್ರ- ಸನ್ನ ಕುಮಾರ ದೇವ ಪ ನಿನ್ನಂಥ ಕರುಣಾಳು ಇನ್ನಿಲ್ಲ ಲೋಕದೊ-ಳೆನ್ನನುದ್ಧರಿಸು ದೇವಾಅ.ಪ ನೀರಜನೇತ್ರ ಮಯೂರವಾಹನ ಭಕ್ತೋ-ದ್ಧಾರ ಶಂಕರನ ಸುತಾ | ಶೂರಾಖ್ಯ ಪೂರ್ವಸುರಾರಿಗಳಂತಕ ಮಾರನಾಕಾರದಾತಾ , ಪುನೀತಾ 1 ಕಂಬು ಕಂಧರಶರಜ ಮು-ಕುಂದನ ಸಖ ಚಿದ್ರೂಪ ಪ್ರತಾಪ 2 ಈಶನ ಸುತ ಕಮಲಾಸನಾರ್ಚಿತ ರವಿ-ಭಾಸ ಸೇನಾನಿ ಧೀರಾ ದೋಷರಹಿತ ಪಾವಂಜೇಶನೆ ತವಪಾದ ದಾಸರ ಕುಲ ಉದ್ಧಾರ | ಗಂಭೀರ 3
--------------
ಬೆಳ್ಳೆ ದಾಸಪ್ಪಯ್ಯ
ಎರಡನೆಯ ಸಂಧಿ ಶ್ರೀಕಾಂತನ ಕರುಣವುಳ್ಳವಗೆ ಕುಂತಳಪುರಕೆ ಕಳುಹಿದನು 1 ಗಂಧಾಕ್ಷತೆ ಫಲಪುಷ್ಪದಿಂದ ಸಾಕ್ಷಾತು ಗಣಪತಿಗರ್ಪಿಸಿ ತರಳನ ಶಿಕ್ಷಾಗುರುವಿಗೆ ಒಪ್ಪಿಸಿದ2 ಮಣ್ಣ ಹರಹಿ ಅಕ್ಷರವ ಬರೆದು ಎನ್ನಣ್ಣನೀ ತಿದ್ದು ಬಾ ಎನಲು ಎನ್ನೊಡೆಯ ಶರಣೆಂದು ಬರೆದ 3 ನಿನ್ನ ಜ್ಞಾನ ಬೇರೆ ಚಿತ್ತ ಬೇರೆ 4 ಎಂದು ಧಿಕ್ಕರಿಸಿ ಹೇಳಿದನು 5 ಚಾತುರ್ಯದ ಬುದ್ಧಿ ಬೇರೆ ತೊಡರು ತಾತಗೆ ಒಯ್ದು ಒಪ್ಪಿಸಿದ 6 ಮುಕುಂದನ ಭಜಕನೆಂದೆನದೆ ಬಂದ ಹಾಂಗಿರಲೆಂದು ಸುತನ 7 ಧ್ರುವ ಪ್ರಹ್ಲಾದ ಅಕ್ರೂರಾಂಬರೀಷ ಮಾಧವ ಮುರಾರಿಯನ್ನು ಭಜಿಸಿ ಭವ ಭಯಾದಿಗಳಿಲ್ಲ ನಮಗೆ 8 ಕಟ್ಟಿಕೊಟ್ಟರು ಕರಲೇಸು ಎನುತ ಕಟ್ಟೆದರ್ ವೇದೋಕ್ತದಲಿ 9 ಓದಿಸಿದರು ಗುರುಮುಖದಿ ಮಾಧವನಲ್ಲದೆ ಅನ್ಯತ್ರರಿಲ್ಲವೆಂದು ಭೇದಾಭೇದವನೆಲ್ಲ ತಿಳಿದು 10 ಹೊಳೆವ ಶ್ರೀ ಮುದ್ರಿಕೆಯಿಟ್ಟು ಗೆಳೆಯರೆಲ್ಲರಿಗೆ ಬೋಧಿಸಿದ 11 ಪತಿತರಾದಪಗತಿ ಕುಮಾರರಿಗೆಲ್ಲ ಸದ್ಗತಿಯಾಗಬೇಕೆಂದೆನುತ ಮಾಡಿಸಿದನಾಜೆÉ್ಞಯಲಿ 12 ದ್ವಾದಶ ನಾಮವ ಹಚ್ಚಿ ಸಾದಿ ಸಾಧಿಸಿರಿ ಏಕಾದಶಿ ವ್ರತವೆಂದು ಬೋಧಿಸಿದನು ಎಲ್ಲರಿಗೆ13 ಜಾಗರ ಮಾಡಿ ಫುಲ್ಲನಾಭನ ಭಜಿಸುವರು ಪರಗೋಷ್ಠಿಯಿಲ್ಲ 14 ಬೆಳೆಸುವ ಹÀರಿಭಕ್ತರೊಡನೆ ಪರಾಕ್ರಮಿಯೆನಿಸಿದನು 15 ಇಮ್ಮಡಿಯನು ಗೆದ್ದು ಹೇರಿಸಿದನು ತನ್ನ ಪುರಕೆ 16 ತಂದು ಆರತಿಗಳನೆತ್ತಿ ಚರಣಕ್ಕೆರಗಿದನು 17 ಜಗದಧಿಪತಿಯಾಗು ಎಂದು ಹರುಷವನೆ ತಾಳಿದಳು 18 ಲೇಸಾದ ಶುಭಲಗ್ನವ ಕಟ್ಟಿ ಸುತನ ಸಿಂಹಾಸನದಲ್ಲಿ ಕುಳ್ಳಿರಿಸಿ ಭೂಸುರ ಬಂಧುಗಳೆಲ್ಲರು ನೆರೆದಿಂದುಹಾಸಗೆ ಪಟ್ಟಗಟ್ಟಿದರು19 ಪರಿ ಪಾಲಿಸುತ್ತ ರಾಜ್ಯನೀತಿಯಿಂದಾಳುತಲಿಹನು 20 ಲಾಲಿಸು ಕುಂತಳೇಶ್ವರಗೆ ಕಾಲಕಾಲಕೆ ಕಪ್ಪವ ಕೊಟ್ಟು ಬಹೆವು ಆಲಸ್ಯವಾಯಿತು ಎಂದ21 ಉದಾರಬುದ್ಧಿಯಲಿಂದುಹಾಸ ವಿಚಾರಿಸಿದನು ತನ್ನಪಿತನ 22 ಜೋಯಿಸ ಪುರೋಹಿತಗೆ ಕಾಂತಿಗೊಡದ ಕನಕಾಭರಣವೆಲ್ಲವ ಅಂತಸ್ಥದಿಂದ ಕಟ್ಟಿದನು23 ಜ್ಞಾನವುಳ್ಳ ಭೃತ್ಯರೊಡನೆ ದಾನವಾಂತಕನ ಕಿಂಕರನು 24 ತೆರಳಿದರಲ್ಲಿಂದ ಮುಂದೆ ಹೆಬ್ಬಾಗಿಲ ಮುಂದೆ 25 ದಿಟ್ಟರಾರೆಂದು ಕೇಳಿದನು ಅಟ್ಟಿದೆನ್ನೊಡೆಯ ಪುಳಿಂದ 26 ಮಂದಿರಕಾಗಿ ಕರೆಸಿದ ಕರವ ಮುಗಿದರು 27 ಕಡೆಗಣ್ಣಲಿ ನೋಡಲಿಲ್ಲವರೊಳು ಮಾತನುಡಿಯದೆ ಸನ್ಮಾನಿಸದೆ ಝೇಂಕರಿಸಿ ಕೇಳಿದನು 28 ಜೀಯ ಹಸಾದ ನಿಮ್ಮಡಿಗೆ ಇಂದಿನ ವಾಯಿದ ಕಟ್ಟಿದ ಧನವು ದೇವರು ಕೈಕೊಂಬುದೆನಲು 29 ನಗ ನಾಣ್ಯ ದೇವಾಂಗವನು ನಗ ನಾಣ್ಯ ದೇವಾಂಗವನು 30 ಸೊಗಸಾಗಿ ಮಾಡಿಸು ಎಂದ ನಗೆಮುಖದಿಂದ ಹೇಳಿದನು 31 ಸಣ್ಣ ರಾಜಾನ್ನದಕ್ಕಿಯನ್ನ ಶಾಕವು ಅಣ್ಣೆವಾಲೆರೆದ ಪಾಯಸವು ಉಣ್ಣೇಳಿರೆಂದು ಕರೆದರು 32 ನಿರಾಹಾರವು ನಮಗೆ ಎಂದು ಕೇಳಿದನು 33 ಎಮ್ಮೊಡೆಯನ ಸುಕುಮಾರ ತಮ್ಮ ರಾಜ್ಯದಲ್ಲಿ ಏಕಾದಶಿವ್ರತ ನಿರ್ಮಾಣವನ್ನೆ ಮಾಡಿದನು34 ಸತಿ ಎಂದೆಲ್ಲರು ಹೇಳುತಲಿಹರು ಎಲ್ಲಿದ್ದ ಆತಗೆ ಸುತನು 35 ಹಿಂದಟ್ಟಿ ಹೋದನು ಪುಳಿಂದ ಅಟ್ಟಡವಿಯೊಳಗಿರಲು 36 ಪೋಷಣೆಯನು ಮಾಡಿದರು ಭೂಸುರರನೆ ಪಾಲಿಸುವನು 37 ನಟ್ಟಂದದಿ ಮನದೊಳು ಮರುಗಿ ಎಂದು ತಾ ಮನದೊಳು ತಿಳಿದ 38 ಅನುಕೂಲವಾದ ಕಾರ್ಯವು ಮನದಲ್ಲಿ ಚಿಂತೆ ಮಾಡಿದನು 39
--------------
ಹೆಳವನಕಟ್ಟೆ ಗಿರಿಯಮ್ಮ
ಎಲೆ ಮನ ಮುರಾರಿಯನು ಕೊಂಡಾಡು ಪ ಸಾಧನಕಿದು ಉಪಾಯ ನೋಡು ಅ.ಪ ಕಾಲನ ದೂತರ ಕಾಲಿಗೆ ಬಿದ್ದರೆ | ನಾಳೆಗೆ ನಿಲುವರೆ ನೋಡು 1 ಮಂದಿಯ ಮಾತಿಗೆ ಎಂದೆಂದು ಮರುಗದೆ | ಮುಂದಿನ ಗತಿ ನೀ ನೋಡು 2 ರಾಜೀವ ಮುಖಿಯರ ಸೋಜಿಗ ಮೆಚ್ಚದೆ | ವಿಜಯವಿಠಲನ ಪಾಡೋ3
--------------
ವಿಜಯದಾಸ
ಎಲ್ಲಿ ಸುವರಗಳು ಇಲ್ಲದಿದ್ದರೆ ಇವ | ನಲ್ಲದೆ ಮತ್ತಾರಾ | ವಲ್ಲಿ ಕಾಣದೆ ಪೋದೆ ಪ ಸಾರುವ ಶರೀರ ಧರಿಸಿ ಬಾಳಿದ ಮಹಾ | ಭಾರವಾಗಿದ್ದ ಪಾಷಾಣವ ಪೊತ್ತವ | ಗೊರುವ ನೆಲನಂದು ಕಾಷ್ಟದಿಂದಲಿ ಬಂದ | ಹಾರುವನಾಗಿ ತಿರದುಂಡು ಕುಲಧರ್ಮ | ಮೀರಿ ನಡೆದವ ಉಪವಾಸದವÀನಿಂದ | ಊರ ಎಂಜಲಿಗೆ ಹೇಸದೆ ಓಡಾಡಿದವ | ನಾರಿಯರ ವ್ರತ ಕೆಡಿಸಿ ರಾವುತನಾಗಿ | ಕಾಯ | ಆರಿಂದ ಜನಿತನಿವ ನೋಡಲಾಗಿ | ಧಾರುಣಿಯೊಳಗಿದ್ದವ ಸರ್ವರನ್ನ | ಮೀರಿ ನಡೆತÀಲಿದ್ದವ ಇವಗೆ ಮೆಚ್ಚಿ | ಧಾರಿ ಎಂದ ನಿನ್ನ ಮಗಳೆ ಬೇಕೆಂದವ 1 ಬಿರಿಗಣ್ಣೆನವನಿವ ಆವಾವ ಕಾಲಕ್ಕೆ | ಶಿರವಾಗಿ ಕೊಂಡಿಪ್ಪ ಶೀಲ ಸ್ವಭಾವದಿ | ಕೊರಳ ತಿರುಹಲಾರ ಕರುಳ ಮಾಲೆಯುವ | ಪರರ ಬಾಗಿಲ ಕಾವರಾಜ್ಯವಿಲ್ಲದವ | ಸುರರ ಕೋತಿಯ ಮಾಡಿ ಕುಣೆಸಾಡಿದವನಿವ | ದಿಗಂಬರನಾಗಿ ಚರಿಸಿದೆನೆಂದು ಕೋಪದಿಂದ | ಕರವಾಳ ಹಸ್ತದವ || ಪರಾಕ್ರಮ ಉರಗನ್ನ ಮೇಲಿದ್ದವ ಇವನ ಖೂನ | ಅರಿಯನು ದಾವದಾವ | ಭೇದವನಿಕ್ಕಿ | ತಿರುಗಿಸುವನು ಲೋಕವ ವಂಚಕನಿಗೆ | ಪರಮ ಪ್ರೀತಿಯಿಂದ ಕೊಟ್ಟದನೆಣಿಸುವ 2 ತನ್ನ ಜಾತಿಗಳನ್ನು ನುಂಗುವನವನಿವ | ಬೆನ್ನ ಮೇಲಿನ ಒಂದೆ ಬುಗುಟಿ ಪಲ್ಲಿನ ತುದಿ | ಮಣ್ಣು ತೋರುವನಿವ ವಿಕಾರ ಮೊಗದವ | ಕಣ್ಣು ಚುಚ್ಚಿದ ಒಬ್ಬ ಹಾರವನ್ನು ನೋಡಿ | ಹೆಣ್ಣಿಗಭಯವಿತ್ತು ಕಾದಿ ಸೋತವನಿವ | ರಣ್ಯ ವಾಗನಿವ ರಣದೊಳೋಡಿದನಿವ | ಅನ್ಯಾಯ ಪೇಳಿದ ನಂಬಿದವರಿಗೆ | ಮುನ್ನೆ ಕುದುರಿಯೇರಿದಾ ಇವನು ತಾನೆ | ಅನಂತ ಮಾಯಮೋದಾ ಎಂಥವರಲ್ಲಿ | ಪಾದ ಇಟ್ಟು ಇದ್ದು | ಕಣ್ಣಿಗೆ ಪೊಳಿಯೆ ಖೇಡ ಬಡಿಸವಂಥ | ಬಣ್ಣಾಣಿಗಾರನು ಬಂದೆಲ್ಲಿ ದೊರಕಿದಾ 3 ಮೀಸಿ ಕಟ್ಟಿಸಿಕೊಂಡಿವನೀವ ಪ್ರಳಯಾದಿ | ದ್ವೇಷವನಿಕ್ಕಿದ ದೇವದಾನವರಿಗೆ | ಏಸು ದಿವಸವಾಗೆ ಅದೋ ದೃಷ್ಠಾಯವನಿವ | ಭಿಕ್ಷೆ ಪಾತ್ರಿಯವ | ಬಿಗಿಯನೆ ಮುರದು ಬಿಟ್ಟವನಿವ | ಕೊಂಡ ಲಜ್ಜೆಗೇಡಿ | ಘಾಸೆತನಕೆ ಶೂರನು ಒಮ್ಮ್ಯಾದರು || ಮಾಡುತಲಿಪ್ಪನು ಇವನು ಹೆಣ್ಣು | ವೇಷ ಧರಿಸಿಕೊಂಬನು ಕೇವಲ ಅವ | ಕಾಶ ಯಿಲ್ಲದ ಸ್ಥಾನದಲ್ಲಿ ವೊಂದಿಪ್ಪನು 4 ದೃಷ್ಟಿ ಮುಚ್ಚದಿಪ್ಪನವನಿವ ಆವಾಗ | ಬೆಟ್ಟವೆ ಗತಿ ಎಂದು ಸೇರಿಕೊಂಡವನಿವ | ದಿಟ್ಟ ಕಠೀಣ ಕಾಯದವನಿವ ಎದುರಿಗೆ | ಎಷ್ಟಗಲ ಬಾಯದೆರೆದಿಪ್ಪ ಪಾದದ | ಬಟ್ಟಿನಿಂದಲಿ ನೀರು ಸುರಿಸುವ ಬಗೆ ಉಂಟು | ಕುಟ್ಟಿ ಮಾತೆಯ ಶಿರ ಕೆಡಹಿದನಿವ ಜಡೆ | ಗಟ್ಟಿಪ್ಪ ಚೋರನಾಯಕ ಮೌನಪ್ರಾಂತಕ್ಕೆ | ದುಷ್ಟನೆನಸಿ ಮೆರೆವ ಹತ್ತದೆಂದು || ಅಟ್ಟಿಬಿಟ್ಟರೆ ಬರುವ ತನ್ನೆಲ್ಲಿಗೆ | ಕೆಟ್ಟವರನ ಕರೆವ ಉತ್ತಮರನ್ನು | ಪಟ್ಟದ ರಾಣಿಗೆ ಪೇಳದೆ ಜವಾ | 5 ಜಲದೊಳಗಾಡುವನಿವ ಹೊರೆ ಹೊತ್ತು | ಕಲೆಪರಟಿಯಾಗಿ ತಿರುಗುವನಿವ ಮೂಗಿಲ್ಲಿ | ಳಿದು ಬಂದವನಿವ ಗೊಗ್ಗರÀ ಧ್ವನಿಯವ | ತಲುವರಿ ಇವ ತಾನೆ ಶಿಷ್ಯಗೆ ವಿದ್ಯವÀ | ಕಲಿಸಿ ಶ್ಯಾಪವ ಕೊಟ್ಟನವನಿವ ವೈರತ್ವ | ಬಳಸದವನ ಮೇಲೆ ಕಲ್ಲು ಹಾಕಿಸಿದವ | ಬಲು ಭಂಡುಗೋವಳ ಅನ ಬರದದು ಬಿಟ್ಟು | ಕಲಿಯಾಗಿ ಓಡಾಡಿದ | ಹೆರರಿಗಾಗಿ ಸ್ತಳ ದ್ರವ್ಯವ ಮಾಡಿದಾ ದಾನವರಿಂದ | ಬಲವಾವನು ಬೇಡಿದಾ ಬೊಮ್ಮಾಂಡದ | ಒಳಗೆ ಹೊರಗೆ ಕಾಡಿದಾ | ಬಹು ಠಕ್ಕನು | ತಿಳಿದು ತಿಳಿದು ಈರ್ವರಿಗೆಯಲ್ಲಿ ನೋಡಿದಾ 6 ಸವಿ ನೋಡದದರ ರೂಪನಾದವನಿವ | ಅವಯವಂಗಳೆಲ್ಲ ಮುದುರಿಕೊಂಡಿಪ್ಪಾನಿವ | ಅವನಿಗೋಡಿ ಪೋದನಿವ ಮೃಗವಲ್ಲ ಮಾ | ನವನಲ್ಲ ವದ್ಭೂತನಾಗಿ ತೋರುವನಿವ | ಬವರಿಗಾದವನಿವ ತನ್ನ ಕಾಲಕೆ ತಪ್ಪ | ಭವನವಿಲ್ಲದೆ ದಿನ ಕಳೆದವ ಯಾಗದ | ನ್ನವನುಂಡು ನಾನಾ ಶಸ್ತ್ರವನ್ನು ನುಂಗಿದವನಿವ || ಯುವತಿ ಧರಿಸಿದ ಸಂಗಾ ಹಾ | ರುವ ಪಕ್ಕಿ ದಿವಸ ದಿವಸ ತುರುಗಾನಾಗಿಪ್ಪದು | ಅವಧೂತ ಮಾರ್ಗ ತುಂಗಾ | ಪರ್ವತವನು | ಲವಕಾಲಬಿಡದೆ ಬಾಯಲಿ ಕಚ್ಚಿದ ರಂಗಾ 7 ಮಾರಧ್ವಜನನವತಾರ ತಾಳಿದನಿವ | ನೀರೋಳಗಡಿಗಿಪ್ಪ ಎರಡು ಭಾಗಗಲ್ಲಿ | ಕೋರೆಗಳದ್ದಿ ಮಸÀದು ಮತ್ಸರಿಸುತಿಪ್ಪ | ಚೀರಿ ಕೂಗುವ ಮಹಾ ಬೊಮ್ಮಾಂಡವಡದಂತೆ | ಮೂರಡಿಯೊಳಗೆ ತ್ರಿಲೋಕವÀನಿಟ್ಟವ | ಬೇರು ಕಡುವನಂತೆ ಕೊಡಲಿಕಾರನಿವ | ಆರೋಗಣಿಗೆ ಶಬರಿಯ ಹಣ್ಣು ಮೆದ್ದವ | ಬುದ್ಧ ಉದ್ದಂಡಾ ಏಕನು ಇವ || ಕೊಂಡ ಬಹು ಕಡೆ | ಬೀರಿದನ್ನವ ಕೈಕೊಂಡಾ ಒಂದು ತುತ್ತು | ಆರಗೀಯದಲೆ ಉಂಡಾ ಇವನನ್ನು | ಹಾರೈಸಿದವರಿಗೆ ಏನು ಲಕ್ಷ ಹೆಚ್ಚಳ ಕಂಡಾ 8 ಉದಕ ಬಿಟ್ಟರೆ ಬದುಕಲಾರದವನಿವ | ಎದೆಗಟ್ಟಿಯವನಲ್ಲಿ ಮುಟ್ಟಿ ನೋಡಿದರೆ | ಪೊದೆ ಪೊದರಿನೊಳು ಸೇರಿ ಕೊಂಡವನಿವ | ಎದುರಿಗೆ ಒಬ್ಬರ ಬರಗೊಡದವ ತನ್ನ | ಪದದ ಕೆಳಗೆ ಕೊಟ್ಟವನ ಇಟ್ಟವನಿವ | ಮದಕಾವ ಮಾಡಿ ತನ್ನೊಳು ತಾನೆ ಸೋತವ | ಸುದತಿಯುಳಟ್ಟಿದ ಪಾರ್ಥಗಾಳಾದ | ಚದುರ ಕ್ರೂರರಿಗೆ ಕ್ರೂರಾ ನಿರಂತರ | ಉದಧಿ ಎಂಬೊದೆ ಮಂದಿರಾ ಇವಗೆ ನೋಡು | ಬದರಿ ಗಿಡವೆ ಆಸರಾ ಏನೆಂಬೆನೊ | ಕದರು ಮೋರಿಯೆ ಶೃಂಗಾರ ತನ್ನಯ ಗುಣ | ಮೊದಲಿದೆ ಕಡೆ ಎಂದು ಆರಾರಿಗೆ ತೋರಾ 9 ಚಪಲಾಕ್ಷದವನಿವ ಚಲುವನೆಂತೆಂಬೆನೆ | ವಿಪರೀತ ನಿದ್ರೆ ಮಾಡುವನಿವ ಕರೆದರೆ | ಕುಪಿತವಾಗುವ ಕಿಡಿ ಉಗುಳುವನಿವ | ಕಪಟದಲ್ಲಿ ಗಟ್ಟಿ ತಲೆ ಹೊಡಕ ರಾಮ | ಕಪಿಯ ಮೋಸದಿಂದ ಕೆಡಹಿದ ಮಾವನ್ನ | ನಿಪತನ ಗೈಸಿದ | ದೋಷಕ್ಕೆ ಶಂಕಿಸಾ | ತ್ರಿಪುರವ ಕೆಡಸಿದ ಹರಗೆ ಸಾಯುಕವಾಗಿ | ಅಪಕಾರಿ ಝಗಳಗಂಟ ಒದಿಸಿಕೊಂಡ || ವಿಪುಳದೋಳೇನು ಒಂಟಾ ಉಚ್ಚರಿಸುವೆ | ಕೃಪಣ ಜನರಿಗೆ ನೆಂಟಾಸನಕ್ಯಾದರ | ಶಪತದಲ್ಲಿಗೆ ಪೊರವಂಟಾ ಉತ್ತಮರಿಂದ | ಉಪದೇಶವಿಲ್ಲದ ಬಾಳುವ ಮಹಾತುಂಟಾ 10 ಇವರೀರ್ವರಿಗೆ ಈಡೆ ತಪ್ಪಿಸಲು ಪದ್ಮ | ಭವಗಳವಲ್ಲವು ನಿನ್ನ ಕುವರಿಗೆ | ಸವಿಗಾರ ಇವನಲ್ಲದೆ ಮತ್ತಾವಾವಾ | ವಿವರಿಪೆ ಎಂಥವರಕೆ ಅಂಥ ಕನ್ನಿಕೆ | ಹವಣವಾಗಿದೆ ಸತ್ಯ ಸಂಕಲ್ಪವೆ ಸಿದ್ಧಾ | ಶ್ರವಣಾದಿ ಇಂದ್ರಿಂಗಳಿಗಗೋಚರಾ | ಸ್ಥವಿರ ಯೌವನ ಬಾಲ ಒಂದಾದರಿವನೆಲ್ಲಾ | ನವನವ ಬಗೆ ಸುಕಾಯಾ || ಮೋಹನ್ನ ಯಾ | ದವರಾಯಾ ಶಿರಿ ವಿಜಯವಿಠ್ಠಲ ಕೃಷ್ಣ | ಶಿವಕುಲ್ಲ್ಯ ಪುರಿ ನಿಲಯಾ ಭಕ್ತರ ಪ್ರೀಯಾ | ಮಾಯಾ ಜಗದ್ಗುರು | ಪವನವತಾರ ಶ್ರೀ ಆನಂದ ಮುನಿಗೇಯಾ11
--------------
ವಿಜಯದಾಸ
ಏಕಾದಶಿ ಉತ್ಸವಗೀತೆ ಲೋಕನಾಯಕನ ಏಕಾದಶಿಯ ಉತ್ಸವಕೆ ಅ ನೇಕ ವಿಧದಿಂದ ಪಟ್ಟಣವ ಸಿಂಗರಿಸಿ 1 ಸುಣ್ಣ ಕೆಮ್ಮಣ್ಣಿಂದ ಕಾರಣೆಯನು ರಚಿಸಿ ಚೀಣೆ ಚೀಣಾಂಬರದ ಮೇಲುಕಟ್ಟುಗಳು 2 ಕದಳಿಯ ಕಂಬಗಳು ಗೊನೆಸಹಿತ ನಿಲ್ಲಿಸಿ ತೆಂಗು ಕ್ರಮುಕದ ಫಲವ ತಂದು ಸಿಂಗರಿಸಿ 3 ವಿಧ ವಿಧವಾದ ಪುಷ್ಪಗಳನು ತರಿಸಿ ಮದನನಯ್ಯನ ಮಂಟಪವ ಸಿಂಗರಿಸಿ 4 ಶುದ್ಧ ಪಾಡ್ಯದ ದಿವಸ ಮುದ್ದು ಶ್ರೀರಂಗ ಅಧ್ಯಯನೋತ್ಸವಕೆಂದು ಪೊರಟು ತಾ ಬಂದ 5 ಭಟ್ಟರು ವೇದಾಂತಿ ಜಯಿಸಿದರ್ಥವನು [ನಟ್ಟ]ಮಾವಾಸೆರಾತ್ರಿಯಲಿ ಅರೆಯರ್ಪಾಡಿದರು 6 ಸಂಧ್ಯಾರಾಗವ ಪೋಲ್ವ ಅಂಗಿಕುಲಾವಿ ಛಂದ ಛಂದದ ಆಭರಣವನು ಧರಿಸಿ 7 ಸಿಂಹನಡೆಯಿಂದ ಮೂರಡಿಯಲಿ ನಿಂದು ಮಹಾಶ್ರೀವೈಷ್ಣವರಿಗೆ ಶ್ರೀಪಾದವಿತ್ತು 8 ಮಂತ್ರಿ ಎದುರಲಿ ನಿಂತು ಮಾಲೆಗಳನಿತ್ತು ಕಂತುಪಿತ ಬಂದ ನಾಗಿಣಿಯ ಮಂಟಪಕೆ 9 ವಾಸುಕೀಶಯನಮಂಟಪದಲಿ ನಿಂತು ದಾಸಿ ವರವನು ಸಲಿಸಿದ ಕ್ಲೇಶನಾಶಕನ 10 ಸುರರಿಗೊಡೆಯನು ಸುಂದರಾಂಗ ತಾ ಬಂದು [ವರ]ಸುಲ್ತಾನಿ ಎದುರಲಿ ನಲಿನಲಿದು ನಿಂದು 11 ಕುಂದಣದ ಛತ್ರಿ ಚಾಮರಗಳಲುಗಾಡೆ ಇಂದಿರಾರಮಣ ಸತಿಯಿದುರೆ ನಲಿದಾಡೆ 12 ಆದಿಮೂರುತಿ ಮಂಟಪದೊಳು ನಿಂತು ಆದಿ ಆಳ್ವಾರುಗಳಿಗೆಲ್ಲ ಆಸ್ಥಾನವಿತ್ತು 13 ವಿಷ್ಣುಚಿತ್ತರು ಮಾಡಿದರ್ಥಂಗಳನ್ನು [ವಿಶೇಷ]ದಭಿನಯದಿಂದ ಪೇಳಿದರು14 ಅರೆಯರು ಬಂದು ತಾವೆದುರಲ್ಲಿ ಪಾಡೆ ಭೂ ಸುರೋತ್ತಮರೆಲ್ಲ ಹರುಷದಿಂ ನೋಡೆ 15 ಮಂಟಪದಲ್ಲಿ ನೇವೇದ್ಯವನ್ನು ಗ್ರಹಿಸಿ ವೈ ಕುಂಠವಾಸನು ಬಂದ ವೈಯ್ಯಾರದಿಂದ16 ದರ್ಪಣದೆದುರಲ್ಲಿ ನಿಂತು ಶ್ರೀರಂಗ ಕಂ ದರ್ಪನಾಪಿತ ಬಂದ ಆನಂದದಿಂದ 17 ಮದಗಜದಂತೆ ಮೆಲ್ಲಡಿಯಿಟ್ಟು ಬಂದು ಒದಗಿ ಮೂರಡಿಯಲ್ಲಿ ತಿರಿಗುತಾ ನಿಂದು 18 ಅಡಿಗೊಂದು ಉಭಯವನ ಗ್ರಹಿಸಿ ಶ್ರೀರಂಗ ಬೆಡಗಿನಿಂದಲೆ ಬಂದ ಮಂಟಪಕೆ ಭವಭಂಗ 19 ಶ್ರೀಧರನು ಮಂಟಪದಲ್ಲಿ ತಾ ನಿಂತು ಮ ರ್ಯಾದೆಯನಿತ್ತು ಶ್ರೀವೈಷ್ಣವರಿಗೆ 20 ವೈಯ್ಯಾರ ನಡೆಯಿಂದ ಒಲಿದೊಲಿದು ಬಂದು [ನಯ] ಸೋಪಾನದೆದುರಲಿ ನಲಿನಲಿದು ನಿಂದು 21 ಕರ್ಪೂರ ಪುಷ್ಪವನು ಬೆರೆಸಿ ತಾವ್ತಂದು ಅಪ್ರಮೇಯನ ಶಿರದೊಳೆರೆಚಿದರು [ಅ]ಂದು 22 ಇಂದಿರಾರಮಣ ಗುಂಭಾರತಿಯ ಗ್ರಹಿಸಿ ಎಂದಿನಂದದಿ ತನ್ನ ಮಂದಿರಕೆ ನಡೆದ 23 ಬಿದಿಗೆ ತದಿಗೆಯು ಚೌತಿ ಪಂಚಮಿಯಲ್ಲಿ ವಿಧವಿಧದ ಆಭರಣಮನೆ ಧರಿಸಿ 24 ಷಷ್ಠಿ ಸಪ್ತಮಿ ಅಷ್ಟಮಿ ನೌಮಿಯಲ್ಲಿ ಸೃಷ್ಟಿಯೊಳಗುಳ್ಳ ಶೃಂಗಾರವನೆ ಮಾಡಿ 25 ದಶಮಿಯ ದಿವಸದಲಿ ಕುಸುಮನಾಭನಿಗೆ ಶಶಿಮುಖಿಯ ಅಲಂಕಾರವನ್ನು ಮಾಡಿದರು 26 ಸುರರು ಅಸುರರು ಕೂಡಿ ಶರಧಿಯನು ಮಥಿಸೆ ಭರದಿ ಅಮೃತವು ಬರಲು ಅಸುರರಪಹರಿಸೆ 27 ಸುರರೆಲ್ಲರು ಬಂದು ಶ್ರೀಹರಿಗೆ ಇಡಲು ಮೊರೆ ಸಾಧಿಸುವೆನೆಂದೆನುತ ವರಗಳನು ಕೊಡಲು 28 ಎನಗೆ ತನಗೆಂದು ಹೋರಾಡುವ ಸಮಯದಿ ವನಜನಾಭನು ಮೋಹಿನಿಯ ರೂಪಿನಲಿ 29 ವಾರೆಗೊಂಡೆಯವನು ವೈಯ್ಯಾರದಿಂದ ಧರಿಸಿ ತೋರಮುತ್ತಿನ ಕುಚ್ಚುಗಳ ಅಳವಡಿಸಿ 30 ಹೆರಳು ರಾಗಟೆಯು ಬಂಗಾರಗೊಂಡ್ಯಗಳು ಅರಳುಮಲ್ಲಿಗೆ ಹೂವ ದಂಡೆಗಳ ಮುಡಿದು 31 ಪಾನಪಟ್ಟಿಯು ಸೂರ್ಯಚಂದ್ರಮರನಿಟ್ಟು ಫಣೆಯಲ್ಲಿ ತಿದ್ದಿದ ಕಸ್ತೂರಿ ಬಟ್ಟು 32 ಚಾಪವನು ಪೋಲುವಾ ಪುಬ್ಬಿನಾ ಮಾಯ ಆಪ್ತಭಕ್ತರನು ಕರುಣದಿಂ ನೋಡುವ ನೋಟ 33 ತಿಲಕುಸುಮವನು ಪೋಲ್ವ ನಾಸಿಕದ ಚಂದ ಥಳಥಳಿಸೆ ಮುತ್ತಿನ ಮುಕುರದ ಅಂದ 34 ಕುಂದಕುಸುಮವ ಪೋಲ್ವ ದಂತಪಂಕ್ತಿಗಳು ಕೆಂ[ದ]ವಳಲತೆಯಂತಿರುವ ಅಧರಕಾಂತಿಗಳು 35 ಚಳತುಂಬು ಬುಗುಡಿ ಬಾವುಲಿಗಳನಿಟ್ಟು ಥಳಥಳಿಪ ವಜ್ರದ ಓಲೆ ಅಳವಟ್ಟು 36 ಗಲ್ಲದಲಿ ಪೊಳೆಯುವ ದೃಷ್ಟಿಯ ಬೊಟ್ಟು ಮೊಗ ದಲ್ಲಿ ಮಂದಹಾಸದ ಕಾಂತಿ ಇನ್ನಷ್ಟು 37 ಕೊರಳೊಳಗೆ ಹಾರ ಪದಕವನು ತಾನಿಟ್ಟು [ಉರದಿ] ದುಂಡುಮುತ್ತಿನ ದಿವ್ಯಸರಗಳಳವಟ್ಟು 38 ಧರಿಸಿ ನಾನಾವಿಧ ಪುಷ್ಪ ಗಿಣಿಮಾಲೆಯನು ಅರಳುಮಲ್ಲಿಗೆ ಹೂವಸರಗಳಲಂಕರಿಸಿ 39 ಉಂಗುರ ವಂಕಿ ಬಾಜಿಯ ಬಂದುದ್ವಾರ್ಯ(?) ಕೈಕಟ್ಟು ಮುಂಗೈ ಮುರಾರಿಯನ್ನು ಇಟ್ಟು 40 ಬಿಳಿಯ ಪೀತಾಂಬರವ ನಿರಿಹಿಡಿದುಟ್ಟು ಥಳಥಳಿಪ ಕುಂದಣದ ವಡ್ಯಾಣವಿಟ್ಟು 41 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನ್ನು ಅಳವಟ್ಟು 42 ಈ ರೂಪಿನಿಂದ ಅಸುರರನು ಮೋಹಿಸುತ ಸುರರಿಗೆ ಅಮೃತವನು ಎರೆದು ಪಾಲಿಸುತ 43 ಮೂರುಕಣ್ಣುಳ್ಳವನು ಮೋಹಿಸಿದ ರೂಪ ಈ[ರೇಳು]ಲೋಕದವರಿಗೆ ತೋರಿದನು ಭೂಪ 44 ಗರುಡಮಂಟಪದಲ್ಲಿ ನಿಂತು ಶ್ರೀರಂಗ ಬೆರಗಿನಿಂದೆಲ್ಲರಿಗೆ ಬಿಡದೆ ಸೇವೆಯನಿತ್ತು 45 ಆಳ್ವಾರುಗಳಿಗೆಲ್ಲ ವಸ್ತ್ರಗಂಧವನಿತ್ತು ಅವರವರ ಆಸ್ಥಾನಕ್ಕವರ ಕಳುಹಿಸುತ 46 ಬಂದು ಬಾಗಿಲ ಹಾಕಿ ಇಂದಿರಾರಮಣ ನಿಂದ ವೆಂಕಟರಂಗ ಆನಂದದಿಂದ 47
--------------
ಯದುಗಿರಿಯಮ್ಮ
ಏನೂ ಸಾರ್ಥಕವಿಲ್ಲವೋ ಪ ಏನೂ ಸಾರ್ಥಕವಿಲ್ಲ ಜ್ಞಾನಮಾರ್ಗಗಳಿಲ್ಲ ಮಾನಸ ಸ್ಥಿರವಿಲ್ಲ ಶ್ರೀನಾಥನಿದಬಲ್ಲ ಅ.ಪ ಎರಡುಕಂಬದ ಮೇಲೆ ಇರುವ ಪಂಜರವಿದು ಬರಿಯಡಂಭದ ಜಗವು ಸ್ಥಿರವೆಂಬ ತನುವಿನೊಳು 1 ತೈಲವಿಲ್ಲದ ದೀಪ ಮಲಿನವಾಗುವ ತೆರದಿ ಸುಲಭದೊಳಿಹ ಪ್ರಾಣ ತೊಲಗಿದ ಬಳಿಕಿನ್ನು 2 ಸಂತೆಗೈದಿದ ಜನದಂತೆ ಪಂಚೇಂದ್ರಿಯವ ನಾಂತ ದೇಹವು ವ್ಯರ್ಥ ಅಂತರಾತ್ಮನು ಹೋಗೆ 3 ರಸನೆ ತೊದಲುವ ಮೊದಲು ಅಸುವು ಪೋಗುವ ಮೊದಲು ಅಸುರಾರಿ ಎಂಬ ಮಧುವ ರಸನೆಯೊಳಿಡೋ ಮನುಜ4 ದಿನದಿನ ಹರಿಕೃಷ್ಣ ವನಮಾಲಿಯ ನುತಿಸೋ ತನುವ ಪ್ರಾಣವ ಬಿಡುವ ದಿನವನರಿಯೆ ನೀನು 5 ದೇವದೇವನೆ ನಿನ್ನ ಸೇವಕನೆಂದೆನ್ನ ಭಾವಿಸೋ ಮದನಾಂಗ ಮಾವಿನಕೆರೆರಂಗ6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಪಟನಾಟಕನೀತ ಕೃಪಾಸಿಂಧು ಸಾಕ್ಷಾತ ಧ್ರುವ ಸಗುಣ ಸುಪಥ ದೋರಿ ನಿರ್ಗುಣನಾಗಿಹ ಶ್ರೀಹರಿ ಅಗಣಿತ ಗುಣದೋರುವ ಅನೇಕಾಪರಿ ಜಗದೊಳು ಮುರಾರಿ 1 ಹಿಡಿದೇನೆಂದರೆ ಸಿಲುಕ ಗೂಡಿನೊಳಗೆ ಮಾಡಿಹ್ಯ ಮಲಕ ನೋಡೇನೆಂದರೆ ಭಕ್ತಿಗೆ ನಿಲುಕ ಒಡಿಯ ಗೋಪಾಲಕ 2 ಕುಲಗಳ್ಳಗೆ ಕೊಡುವ ಮ್ಯಾಲೆ ಹುಯಲು ತಾ ಮಾಡುವ ಬಲುಖಳ ದೈವ 3 ಭಾಷೆ ಕೊಟ್ಟರೆ ತಪ್ಪ ಋಷಿ ಮುನಿಗಳ ಪಾಲಿಪ ಭಾಸುತ ಭಕ್ತರ ಹೃದಯದೊಳಗಿಪ್ಪ ಭಾಸ್ಕರ ಸ್ವರೂಪ 4 ಗುಹ್ಯ ಆಗೋಚರ ಸೋಹ್ಯ ತಿಳಿಯಲು ಸಾಕ್ಷಾತ್ಕಾರ ಇಹಪರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರಿಗಿರಿ ದುರ್ಗ ನಿವಾಸಾ | ದಯಾಪರಿಪೂರ್ಣ ಪೊರೆಯನ್ನ ಅನಿಶ ಪ ಶಿರಿ ಅಜಭವ ವಿಪಗೇಶಾ | ಹೃತ್‍ಸರಸಿಜ ವಾಸ ಲಕ್ಷ್ಮೀಶಾ ಅ.ಪ. ಗಜ ಬಿಸಜ ಕಿಂಜಲ್ಕದ ಯಸಳು ರಜವ ಶಿರಸಿಯೊಳಗೆ ನೀನಿರಿಸೋ 1 ಮೇಶ ಬ್ರಹ್ಮೇಶ ನಾಶವ ಗೈವೆ ಸಶೇಷಶೇಷಶಯ್ಯ ಜೀವಾದ್ಯರ ಪೋಷಾಈ ಸಮಸ್ತ ಜಗ ನಿನ್ನುದರದಿ ವಾಸಾಕೇಶಾಸುರಪಾದೀಶ ಪರೇಶನೆ ವ್ಯಾಸಾಈಶಿತವ್ಯ ತವ ದಾಸರಿಗೆಲ್ಲ ಉಪದೇಶಿಸು ಶಾಸ್ತ್ರ ವಿಶೇಷ ರಹಸ್ಯ ಮಹಿದಾಸ ಕುಶೇಶಯ ವಿಷಯ ವಿಲಾಸದಿಪೋಷಿಸು ಮನ ಮಧ್ವೇಶ ಮಹಾಪ್ರಭೋ 2 ಕರಿವರ ವರ ಶರಣಾಗತ ಪಾಲಾತರಳೆಗಿತ್ತೆ ನವ ನವ ಸೀರೆಯ ಜಾಲಾವರಸ್ತಂಭೋದಿತ ಹರಿಭಕ್ತಿ ಸುಪಾಲಾಗುರು ಗೋವಿಂದ ವಿಠ್ಠಲಾ ಕಾಲಾಸುರಪಾದಿಯ ತನು ವರ ರಥ ರೂಢ ಪು-ರಾರಿ ಭಯಹರ ಮುರಾರಿ ಮಹ ಭವತರಿ ಎನಿಸಿಹ ಸುಖ ತೀರಥ ಸನ್ಮತಧರಿಸಿಹೆ ಕಣ್ಣೆದುರಿಲಿ ನೀ ಕುಣಿಯೋ 3
--------------
ಗುರುಗೋವಿಂದವಿಠಲರು
ಕರಿಯನೆರಿರೇ ಮುರಾರಿಗೆ ಪ ಹಂಸವಾಹನ ಶಿವರಂಶಗಳನು ಕೂಡಿಕಂಸ ಶಾಸ್ತ್ರವ ತ್ರಿವಂಶ ಬೆಳೆಸಿದಾ 1 ಗೋಪಿ ಪುತ್ರನ ಪಾಡಿ2 ಕರಿಪುದಸರಾಧ್ವರ ಧನುರ್ದನು ತನ್ನಕರದಿ ಮುಟ್ಟುತ ಮೃತ ತರುಳನ ಕಾದಾ 3 ರಾಮನಾಮದಿ ಭೂಪ ಧಾಮದೊಳಗೆ ಪುಟ್ಟಿಕಾಮಿನಿ ಸಹ ಕೂತ ಪ್ರೇಮ ಪುರುಷಗೆ 4 ಕರ ಕರದೊಳು ಸುರಭಿ ಕುಸುಮವೆತ್ತಿಪರಮ ಪುರುಷ ವಿಪತ್ ಪರಿಹರಿಸಿದನು 5 ಕರ ಕತ್ತರಿಸುವೆನೆಂಬೋ-ನ್ಮತ್ತನಾಸ್ತ್ರವ ಕರೆ ಕಿತ್ತು ರಕ್ಷಿಸಿದಾ 6 ಪೇಸಿಯಿಂದಲಿ ಪುಂಸ್ತ್ರೀ ಕೂಸುಗಳನೆ ಮಾಡಿತೋಷಿಸಿದನು ಬದರೀಶ ಮೌನಿಜನು 7 ಇಂಥ ಮಹಿಮೆಗಳಾನಂತ ಮಾಡಿದ ಲಕ್ಷ್ಮೀ-ಕಾಂತಗಬ್ದಾಪತ್ತಿ ಶಾಂತಿ ಮಾಡುವುದೇ 8 ಸುಂದರ ಭೂಷಣಗಳಿಂದ ಶೋಭಿಪ ಬಾಲಇಂದಿರೇಶನ ಕೃಪಾ ಪೊಂದಿ ಸುಖಿಸುತಿರೆಕುಂದಣದಾರತಿ ನಿಂದು ಬೆಳಗಿರೆ 9
--------------
ಇಂದಿರೇಶರು
ಕರುಣದಿ ಎನ್ನ ಪೊರಿಯೇ ತೊರಮ್ಮ ಶಿರಿಯೇ ಪ ಚರಣಯುಗಕೆ ನಾ ಶರಣು ಮಾಡಿದೆ ದೇವೀ ಅ.ಪ ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿ ಮಾರಾರಿ ಮುಖಸುರ ಸಂತ್ರಾಣಿ ವಾರವಾರಕೆ ನಿನ್ನ ಸಾರಿಭಜಿಪೆ ಎನ್ನ ದೂರ ನೋಡದೆ ಪೊರಿಭಾರ ನಿನ್ನದು ತಾಯಿ 1 ಸೃಷ್ಟಿ ಸ್ಥಿತಿಲಯ ಕಾರಿಣೀ ಸುಗುಣಸನ್ಮಣಿ ಕಷ್ಟ ದಾರಿದ್ರ್ಯ ದುಃಖ ಹಾರಿಣೀ ದುಷ್ಟರ ಸಂಗದಿ ಕೆಟ್ಟಿಹ ಎನ್ನನು ಥಟ್ಟನೆ ಕರುಣಾದೃಷ್ಟಿಲಿ ನೋಡಿ 2 ಜಾತರೂಪಳೆ ಶುಭಗಾತ್ರಿ ತ್ರಿಜಗಕೆ ಧಾತ್ರೀ ಸೀತೆ ಸತ್ರಾಜಿತನ ಪುತ್ರಿ ದಾತ ಗುರುಜಗನ್ನಾಥವಿಠಲನ ನೀತ ಸತಿಯೆ ಎನ್ನಮಾತೆ ವಿಖ್ಯಾತೇ 3
--------------
ಗುರುಜಗನ್ನಾಥದಾಸರು
ಕರುಣಾದಿ ಪಿಡಿ ಕರವಾ ದೇವರ ದೇವ ಪ ಕರುಣಾದಿ ಪಿಡಿಕರ ಸರಸಿಜಾಂಬಕ ಎನ್ನ ಗುರು ರಘುಪತಿ ಪಾಲಾ ಮರುತಾಂತರಿಯಾಮಿ ಅ.ಪ ಗತಶೋಕ ಜಿತಮಾಯ ಪತಿತ ಪಾವನವೇದ್ಯ ಪ್ರತಿಪಾದ್ಯ ಕ್ಷಿತಿಪ ಭಾರತಿ ಕಾಂತ ವಂದ್ಯಾ ಆ ನತರ ಪಾಲಕ ದುಷ್ಟದಿತಿಜಾರಿ ತವಪಾದ ಶತಪತ್ರ ಬಿಡದೆ ಸಂತತ ಭಕುತಿಯಲಿಂದ ಸ್ತುತಿಪಾರ ಮಿತ ಅಘವಾ ಕಳೆದು ಮತ್ತೆ ಹಿತದಿ ಸದ್ಗತಿ ಕೊಡುವಾ ನಿನ್ನಯ ದಿವ್ಯಾಚ್ಯುತವಾದ ಘನದಯವಾ ಪೊಗಳು ವಂಥ ಮತಿವಂತರನು ಕಾಣೆ ಶತಮುಖಜಜ ಮಾವಾ 1 ಅನಿಮಿತ್ಯ ಬಂಧುವೆ ವನಚಾರಿ ಕೂರ್ಮನೆ ಕನಕ ನೇತ್ರಾರಿ ಪಾವನತರ ನರ ಪಂಚ ನಾನಾ ರೂಪದಿಂದ ಬಾಲನಾ ಕಾಯ್ದೊನರ ಹರಿಬಲಿ ನಿತ್ಯ ಅನಘಾತ್ಮ ಜನನೀಯ ಕೊಂದಾನೆ ಜನಕ ಜಾಪತಿಯ ರು ಕ್ಮಿಣಿ ಮನೋಹರನೆ ವಸನದೂರ ಹಯರೂಢ ಜನನ ರಹಿತ ವಿಖ್ಯಾತಾ ನಮಿಸುವೆ ಅನಿಮಿಷಪಜನ ಸುತಾ ಬೇಡಿಕೊಂಬೆ ಅನುದಿನದಲಿ ಮಮತಾ ಕನಕೋದರನ ತಾತಾ 2 ಸರಿವೀರ ಹಿತ ಬಲಿಸರಸಿ ಜಾಂಬಕ ಮುರ ಹರ ಹರ ವಂದಿತ ಹರಿಮುಖ ಹರಿನುತ ಪಾದ್ಯ ಹರಸು ಎನ್ನಯ ಅಘ ನಿರುತ ನಿನ್ನ ಡಿಂಗರರ ನೀಕರದಿತ್ತು ಗುರುವಿನ ಚರಣಾದಿ ಸ್ಥಿರ ಭಕುತಿಯ ಕೊಟ್ಟು ವರ ಶಿರಿಗೋವಿಂದ ವಿಠಲನೆ ನೀ ಯನ್ನ ಮರಿಯದೆ ಮಮತೆಯಿಂದಾ ನಿತ್ಯ ಗರಿಯುತಲಿರು ಆನಂದಾ ನಿನ್ನಯ ಪಾದಾದಿರಲಿ ಮನಸು ಮುಕುಂದಾ ದುರುಳ ಭವದ ಬಂಧ 3
--------------
ಅಸ್ಕಿಹಾಳ ಗೋವಿಂದ