ಒಟ್ಟು 56 ಕಡೆಗಳಲ್ಲಿ , 23 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವರದೇಂದ್ರವಿಜಯ121ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |ಸರಸೀರುಹದಲ್ಲಿ ಸತತ ನಾ ಶರಣಾದೆನು |ವರಸಮೀರಗ ಕೃಷ್ಣ ರಾಮಹಯಮುಖವ್ಯಾಸ |ನರಹರಿ ಪ್ರಿಯರಿವರು ಸಾಧುವರಪ್ರದರು ಪರಂಗನ ಪಾದೋದಕವು ಸುಪವಿತ್ರ ತಮವೆಂದುಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವುಶಂಕೆಇಲ್ಲ ಬ್ರಹ್ಮಗುರು ಶಿವ ಶಿಷ್ಯಕೇಳಿಕೇನ1ರಜತ ಜಾಂಬೂನವ ತಾಮ್ರವÀನು ಮರಗದವ |ವಜ್ರಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |ರಾಜಿಸುತೆರವಿಸೋಮತಾರೆಗಳ ಜ್ಯೋತಿಯಿಂದ2ರಾಘವ ಯಾದವ ವೇಂಕಟಧಾಮ ಹನುಮ ಭೀಮ |ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |ಅಘದೂರ ಗುಣನಿಧಿ ಸಮೀರಗ ಮಹಿದಾಸ - |ನಿಗೆ ಪ್ರಿಯಬೃಹತಿಋಕ್ ಶ್ರೀ ವಿಷ್ಣು ಸಾಸಿರ ನಾಮ3ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿಸುರವೃಂದದವರು ಮರುದ್ಗಣದವರು ತೋರಿ |ಇರುತಿದ್ದ ಕಾಲದಲಿವಿಜ್ಞಾನಭಕ್ತಿ ಯೋಗೀಶ |ವರದೇಂದ್ರ ತೀರ್ಥ ಗುರುರಾಜ್ವಿಜಯಮಾಡಿದರು4ಜಗನ್ನಾಥದಾಸರಸಖಶಿಷ್ಯರಾಗಿಹ ನಮ್ಮ |ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5ತಮ್ಮದ್ವಿತೀಯಸವನ ಮಧ್ಯ ಬ್ಯಾಗವಟ್ಟಿನರ- |ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿಶ್ರೀ ಮಾಧ್ವ ಬಾದರಾಯಣಿಪರವಿದ್ಯಾಗ್ರಂಥಗಳ |ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆಹೇತು7ಪಾದಪೂಜೆ ಸಭ್ಯರಿಂದಲಿಗುರುಮರ್ಯಾದೆಗಳು |ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |ಬಂದು ನೆರೆದ ಜನರಲಿಗಮನಬೀರಿದರು8ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |ಎನ್ನುತ ಅನವಶ್ಯ ಹೆಚ್ಚುಸೊಲ್ಲುವೆಚ್ಚ ಮಾಡದೇ |ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯಗುರುಮಹಂತರು |ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |ಇನ್ನುಳಿದ ತಮ್ಮವಿಜಯಯಾತ್ರೆ ಕ್ಷೇತ್ರಗಳಿಗೆ12`ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿಗುರುನಿಂತರು14ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿಶ್ವಾಸಉಕ್ಕುತ ಪ್ರಾಣೇಶದಾಸರು ವೃಂದಾವನವ |ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |ಆಪ್ರಾಕೃತವಾದ್ದು ಹಸ್ತಸ್ಥಪ್ರಾಕೃತಪೀಯೂಷದೋಳ್ |ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |ಹರಿಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ19ದೋಷೋಜ್ಜಿತಗುಣಪೂರ್ಣ ಶ್ರೀಹರಿ ತುಳಸೀನಾಮ |ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |ವೃಷಭಶ್ರೀಯಕ್ ಸಪರಿವಾರ ಜ್ವಲಿಸುತಿಹನು20ಉತ್ತಮ ಶ್ಲೋಕ ಪರಮೈಶ್ವರ್ಯರೂಪವಿಷ್ಣುವೇಅಧಿ|ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21ಸುಮನಸವಂದಿತ ತುಳಸೀನಾಮಕ ಲಕ್ಷ್ಮಿಯು |ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22ಬಾದರಾಯಣತಾನೇ ನುಡಿಸಿದೀ ನುಡಿಗಳ್ ಭಕ್ತಿ |-ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |ವಿತ್ತವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ23 ಪ|| ಇತಿ ಶ್ರೀ ವರದೇಂದ್ರವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯಪ್ರಿಯ ತೀರ್ಥವಿಜಯ124ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಅಶೇಷಗುಣಗಣಾಧಾರ ವಿಭುನಿರ್ದೋಷಹಂಸ ಶ್ರೀ ಪತಿಯಿಂದುದಿತ ಗುರುಪರಂಪರೆಗೆಬಿಸಜಭವ ಸನಕಾದಿದೂರ್ವಾಸಮೊದಲಾದವಂಶಜರು ಅಚ್ಚುತ ಪ್ರೇಕ್ಷರಿಗೆ ನಮಿಪೆ 1ಪುರುಷೋತ್ತಮ ತೀರ್ಥ ಅಚ್ಚುತ ಪ್ರೇಕ್ಷರಕರಕಮಲ ಜಾತರೂ ಮಹಾಭಾಷ್ಯಕಾರರುವರವಾಯು ಅವತಾರ ಆನಂದ ತೀರ್ಥರಚರಣವನಜದಿ ನಾ ಸರ್ವದಾ ಶರಣು 2ಪದ್ಮನಾಭನರಹರಿಮಾಧವಅಕ್ಷೋಭ್ಯಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತಮೇಧಾ ಪ್ರವೀಣ ಜಯ ತೀರ್ಥಾರ್ಯರಿಗೂವಿದ್ಯಾಧಿರಾಜರಿಗೂ ನಮೋ ನಮೋ ಶರಣು 3ವಿದ್ಯಾಧಿರಾಜರಿಗೆ ಶಿಷ್ಯರು ಈರ್ವರುಮೊದಲನೆಯವರು ರಾಜೇಂದ್ರ ತೀರ್ಥಾರ್ಯನಂತರ ಕವೀಂದ್ರ ತೀರ್ಥಾರ್ಯ ಇವರುಗಳಪಾದಾರವಿಂದಗಳಿಗೆ ನಾ ನಮಿಪೆ 4ವಾಗೀಶತೀರ್ಥರು ಕವೀಂದ್ರ ಹಸ್ತಜರುವಾಗೀಶಕರಜರು ರಾಮಚಂದ್ರಾರ್ಯಈ ಗುರುಗಳಿಗೀರ್ವರು ಶಿಷ್ಯರು ಇಹರುಬಾಗುವೇ ಇವರ್ಗಳಿಗೆ ಸಂತೈಸಲೆಮ್ಮ 5ಮೊದಲನೆಯವರು ವಿಭುದೇಂದ್ರ ತೀರ್ಥಾರ್ಯರುವಿದ್ಯಾನಿಧಿ ತೀರ್ಥಾರ್ಯರು ಅನಂತರವುವಿದ್ಯಾನಿಧಿ ಸುತ ರಘುನಾಥ ತೀರ್ಥರುವಂದಿಸುವೆ ಈ ಸರ್ವಗುರು ವಂಶಕ್ಕೆ 6ರಘುನಾಥ ಕರಕಮಲ ಜಾತ ರಘುವರ್ಯರಿಗೂರಘೂತ್ತಮ ವೇದವ್ಯಾಸ ವಿದ್ಯಾಧೀಶವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥಸತ್ಯಾಭಿನವ ಸತ್ಯಪೂರ್ಣರಿಗೆ ನಮಿಪೆ 7ಸತ್ಯಪೂರ್ಣ ತೀರ್ಥರಿಗೆ ಶಿಷ್ಯರು ಇಬ್ಬರುಸತ್ಯವರ್ಯ ತೀರ್ಥರು ಮೊದಲನೆಯವರುಸತ್ಯವಿಜಯ ತೀರ್ಥರು ಎರಡನೆ ಶಿಷ್ಯರುವಂದನಾದಿ ಮರ್ಯಾದೆ ಮಾಳ್ಪುದು ಜೇಷ್ಠರಿಗೆ 8ಸತ್ಯವರ್ಯ ತೀರ್ಥರೇ ಮುಂದಕ್ಕೆ ಸತ್ಯಪ್ರಿಯರೆಂದು ಕರೆಸಿಕೊಂಡರು ವಿರಾಗಿಕೋವಿದರುಸುಂದರ ದೇಶವು ಗೋದಾವರೀ ಕ್ಷೇತ್ರಕ್ಕೆಸತ್ತತ್ವ ಬೋಧಿಸಲುವಿಜಯಮಾಡಿದರು9ಸತ್ಯ ವಿಜಯರುಗುರುಆಜೆÕಯಿಂ ತಾವೂನೂತತ್ವಬೋಧಸಂಚಾರ ಮಾಡಿದರು ಆಗಸತ್ಯಪೂರ್ಣ ತೀರ್ಥರು ತಾವೇ ಕರ್ನಾಟಕಪ್ರಾಂತ್ಯಕ್ಕೆ ಹೊರಟರು ದಿಗ್ವಿಜಯಕಾಗಿ 10ಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರೀಯರುಗೋದಾವರೀ ತೀರವಿಜಯಮಾಡುವಾಗಭೂದೇವ ನರದೇವಪುರಿನಗರಪ್ರಮುಖರುಉತ್ಸಾಹದಿ ಭಕ್ತಿ ಮರ್ಯಾದೆ ಮಾಡಿದರು 11ಬಿಸಾಜಿಪಂತ ನಾರಾಯಣ ನರಳೀಪಂತವಿಶ್ವಾಸದಿ ಇಂಥಾ ಪ್ರಮುಖ ಜನರುಈ ಸಂನ್ಯಾಸ ರತ್ನ ಸತ್ಯಪ್ರಿಯ ಆರ್ಯರಿಗೆಸ್ವಾಗತ ಪೂಜೆ ಮಾಡಿದ್ದು ಖ್ಯಾತ 12ಸಜ್ಜನರು ದೊಡ್ಡವರು ನಾಯಕರು ಗುರುಗಳಪೂಜಿಸುವ ಸಮಯ ಬಂದು ಅಲ್ಲಿ ಮೊದಲನೆಬಾಜೀರಾವ್ ಎಂಬಂಥ ಅರಸನು ಅವನೂ ಸಹನಿಜ ಭಕ್ತಿ ಭಾವದಿಂದಲಿ ಪೂಜಿಸಿದ 13ತಾನು ಪೂಜಿಸಿ ಗ್ರಾಮ ದಾನ ಮಾಡಿದ್ದಲ್ಲದೆಘನಮಹಾತ್ಮ ಸ್ವಾಮಿಗಳ ಪೂಜಿಸಿರೆಂದುತ್ನನ ಮುದ್ರೆ ಪತ್ರ ಬೇರೆ ರಾಜರ್ಗೆ ಕಳುಹೆಂದುತನ್ನ ಸಹ ಬಂದಿದ್ದ ಮಂತ್ರಿಗೆ ಹೇಳಿದನು 14ಗೋದಾವರೀ ತೀರ ಸ್ಥಳಗಳಲಿ ಈ ರೀತಿಸತ್ಯಪ್ರಿಯ ಆರ್ಯರು ಸಂಚರಿಸಲಾಗಸತ್ಯ ಪೂರ್ಣ ತೀರ್ಥರು ದಕ್ಷಿಣದಲ್ಲಿಕ್ಷೇತ್ರಾಟನದಿ ಇರುತಿದ್ದರು ಮುದದಿ 15ಸತ್ಯಪೂರ್ಣರಿರುತ್ತಿದ್ದ ಸಂಚಾರ ಸ್ಥಳದಹತ್ತಿರವೆ ಕೊಂಗು ನಾಡುತೋಂಡದೇಶಸತ್ಯವಿಜಯರು ಅಲ್ಲಿ ಸಂಚರಿಸಿ ಬಂದರುಸತ್ಯ ಪೂರ್ಣರುಹರಿಪಾದಸೇರುವಾಗ16ಸತ್ಯವಿಜಯರ ಕೈಗೆ ಸಂಸ್ಥಾನ ಬರಲುಸತ್ಯಭಿನವ ಸತ್ಯಪೂರ್ಣರ ಪದ್ಧತಿಯಂತೆ ಸಂಸ್ಥಾನ ಆಡಳಿತ ಮಾಡುತ್ತಾಮತ್ತೂತೋಂಡದೇಶ ಸಂಚಾರಕ್ಕೆ ಹತ್ತಿದರು17ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 18 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸೌಭಾಗ್ಯ ಪ್ರದ ಹನುಮಂತ(ಅಣು ಸುಂದರ ಕಾಂಡ)67ಶರಣು ಪಾಲಿಸೋ ಹನುಮ |ಕರುಣಾಳು ಅಂಜನಾಸೂನು ನಿನ್ನ ಮಹಿಮೆವರ್ಣಿಸಲು ನಾಬಲ್ಲೆನೆ ಹೇ ವಾಯು ಪುತ್ರನೇ ಅಸಮಬಲಜ್ಞಾನ ರೂಪನೆ ನಿನಗೆ ಇಷ್ಟ ಶ್ರೀರಾಮಜೀವರಲಿ ನೀ ಉತ್ತಮ |ಶರಣು ಫಲ್ಗುಣಸಖಪಿಂಗಾಕ್ಷನೇಶರಿಧಿ ದಾಟಿದಿಅಮಿತವಿಕ್ರಮವಾರ್ತೆ ಸೀತೆಗೆ ಪೇಳಿ ದಶಮುಖಸರ್ವತರದಿ ಸೌಮಿತ್ರಿ ಪ್ರಾಣ ಪ್ರ -ದಾತಹರಿವರಶರಣು ಶರಣು ಮಹಾತ್ಮ ಸಹೃದನೇಶರಣು ಪಾಲಿಸೋ ಹನುಮ ಪಪೂರ್ಣಪ್ರಜÕನೀನೆಂದು ಬಹು ಹರುಷ ತೋರಿದ |ರಾಘವನ ಕರೆತಂದು ರವಿಜನಿಗೆ ಸಖ್ಯ | ಮಾಡಿಸಿ ನೀಸಿಂಧು|ದಾಟುತ್ತ ಮೈನಾಕನ್ನೇ | ಶ್ಲೇಷಿಸಿನಿಂದುವಿಶ್ರಾಂತಿ ಕೊಳ್ಳದೆ ಮುಂದು |ಹಾರಿ ಸುರ ಸೆಯೊಳ್ ಲೀಲೆಯಿಂದಲಿ ಹೊಕ್ಕು ಹೊರಟು -ಸುರರುಪೂಮಳೆಕರಿಯೇ ಸಿಂಹಿಕಾ ಉದರ ಸೀಳಿ ದ್ವಾರ ಪಾಲಕೆಯನ್ನ ಜಯಿಸಿಪುರಿ ಪ್ರವೇಶವ ಮಾಡಿ ಸೀತಾಕೃತಿಯ ಕಂಡುಂಗರುವ ಕೊಟ್ಟುಕ್ರೂರ ರಾಕ್ಷಸ ಅಕ್ಷಾದಿಗಳ ಕೊಂದು ಲಂಕಾಪುರಿಯ ಸುಟ್ಟುಭರದಿ ತಿರುಗಿ ಬಂದು ರಾಘವನಂಘ್ರಿಯಲಿ ಸನ್ನಮಿಸಿ ಸೀತೆಯಚೂಡಾರತ್ನವನಿಟ್ಟು ರಾಮಾಲಿಂಗನ ನೀಕೊಂಡಿಯೋ ಸೌಭಾಗ್ಯ ನಿಧಿಯೇಶರಣು ಪಾಲಿಸೋ ಹನುಮ 1ಜಯತು ಶರಣು ಶ್ರೀರಾಮ | ಶರಣೆಂದವಿಭೀಷಣನನ್ನ | ಅತಿ ಪ್ರೇಮದಿಂದ ನೀ ಸ್ವೀಕರ್ಯನೆನಲು ಶ್ರೀರಾಮ |ಬಂದು ಅಭಯವ ನಿತ್ತ ಪೂರ್ಣಕಾಯ |ಅಮಿತ ಸುಗುಣ ಸುಧಾಮ|ಮಾರ್ಜಗಾರಿ ಸಸೈನ್ಯ ರಾವಣ ನನ್ನ ಜಹಿಯಲು | ಸೇತು ಕಟ್ಟಿಸಿ |ಸುಜನರಕ್ಷಕ ಉರುಪರಾಕ್ರಮ ಅಜಿತರಾಮನು ಪೋಗೆ ಲಂಕೆಗೆ |ಜಾಂಬವಾನ್ ಸುಗ್ರೀವ ಸಹ ನೀ ಜಾನಕೀಶಗೆ ಸೇವೆ ಸಲ್ಲಿಸಿ |ಸಂಜೀವಿನಿಗಳ ತಂದು ರಾಮಾನುಜಗೆ ಪ್ರಾಣವನಿತ್ತು ರಾವಣಭಂಜನವ ರಘುರಾಮ ಮಾಡಿ ಅಯೋಧ್ಯೆಬರುವುದು ಪೇಳಿ ಭರತಗೆ |ನಿಜ ಸಂತೋಷದಿ ಸೀತಾರಾಮಗೆ ರಾಜ್ಯ ಪಟ್ಟಾಭಿಷೇಕ ಗೈಸಿದಿ -ಶುಭಸುಚರಿತನೆ ಶರಣು ಪಾಲಿಸೋ ಹನುಮ2ರಾಮಭದ್ರನು ನಿನ್ನ | ಅನುಪಮೋತ್ತಮ ಸೇವೆ ಮೆಚ್ಚಿ ಏನನ್ನ |ನೀನಗೀವುದು ನಿನ್ನ ಸೇವೆ ಸಮ ಬಹುಮಾನ |ಮೋಕ್ಷ ಸಾಲದು ಪೇಳು ಬೇಕಾದ್ದನ್ನ | ಎನಲು ನೀ ರಾಮನ್ನ |ನಮಿಸಿ ಪ್ರೇಮದಿ ರಾಮಚಂದ್ರನೆ ನಿನಗೆ ಇಷ್ಟ ಸರ್ವಜೀವರುರಾಮನಲ್ಲಿ ಮಾಳ್ಪ ಭಕ್ತಿಗೆ ಅಧಿಕನಿತ್ಯಪ್ರವೃದ್ಧವಾದಪರಮಭಕ್ತಿವೊಂದನ್ನೇ ಈವುದು ಎಂದು ನೀ ಕೇಳೆ ವಿನಯದಿಪ್ರೇಮದಿಂದ ತಥಾಸ್ತು ಎನ್ನುತ ಬ್ರಹ್ಮಪದ ಸಹಭೋಗ ಸಾಂಪ್ರತಸಮಸ್ತವಾದ ಸೌಭಾಗ್ಯ ಸಮೃದ್ಧಿಯ ಇತ್ತು ಒಲಿದನು ಅಜನಪಿತ ಶ್ರೀರಮೆಯ ಅರಸ ಪ್ರಸನ್ನ ಶ್ರೀನಿವಾಸ ಭೂಮ ಏಕಾತ್ಮ ರಾಮಪ್ರಮೋದಿ ವಿಭುವು _ ಶರಣು ಪಾಲಿಸೋ ಹನುಮ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀರಾಮಮಂತ್ರ22ಶ್ರೀರಾಮ ಸೀತಾರಮಣ ಮಾಂಪಾಹಿಪಉರು ಜ್ಞಾನ ಸುಖರೂಪ ನಮೋವಾಸುದೇವಅ.ಪಶ್ಯಾಮ ರಮಣೀಯ ಉರು ಆಮ್ನಾಯಕೂ ಅಮಿತರಮೆ ಸೀತಾಯುತ ನಮೋ ಹನುಮಾದಿಸೇವ್ಯವಾಮಹಸ್ತದಿಚಾಪಚಿನ್ಮುದ್ರೆ ಶರಬಲದಿಅಮಿತಾರ್ಕಸೋಮ ಸ್ವಕಾಂತಿ ಶ್ರೀರಾಮ 1ಪರಮೇಶ ಏಕಾತ್ಮಅರದೂರಪರಿಪೂರ್ಣಉರು ಸುಗುಣವಾರಿನಿಧಿ ನೀನೇ ಸ್ವತಂತ್ರಅರವಿಂದಜಾಂಡಾದಿ ಜಗತ್ಸರ್ವ ಕರ್ತಜಸುರರ ಮೊರೆಕೇಳಿದಶರಥನ ಸುತನಾದೆ2ಚತುರ್ವದನ ಸಂಸೇವ್ಯ ಹಯವದನ ಷಡ್ರೂಪಚತುರ್ವಿಂಶಾಕ್ಷರ ಸುಮಂತ್ರ ಪ್ರತಿಪಾದ್ಯತ್ರಾತಪ್ರೇರಕಸ್ವಾಮಿ ರಾಮನೇ ಎಂದರಿತುಸಂಧ್ಯಾಸುಮಂತ್ರ ಋಷಿ ಬಂದು ಪ್ರಾರ್ಥಿಸಿದ 3ಸುದುಪಾಸ್ಯ ನಿನ್ನ ಋಷಿ ಆಶ್ರಮಕೆ ಕರದೊಯ್ಯೆಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯಪ್ರತ್ಯಕ್ಷ ಅವತಾರರೂಪ ನೀನೆಂದರಿತುಸಿದ್ಧರು ಭಕ್ತಿಯಿಂದಲಿ ವಂದಿಸಿದರು 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ತಚ್ಛಕ್ತಿ ಬೋಧಯನ್ಅಸ್ತ್ರದೇವತೆಗಳೀ ತತ್ವವನು ಅರಿತುಸತ್ತಾದಿದಾತನೇ ಶಾಸ್ತ್ರಸ್ವಾಮಿ ವಿಷ್ಣೋಪ್ರತ್ಯಗಾತ್ಮನೆ ರಾಮ ನಿನಗೆ ನಮಿಸಿದರು 5ಯಜÕಗೆ ಯಜÕಗೆ ವಿಶ್ವಾಮಿತ್ರಗೆ ನಮೋಯಜÕಭುಕ್ ಯಜಮಾನ ಯಜÕ ಯಜೆÕೀಶಇಜ್ಯ ಪೂಜ್ಯಗೆ ಸ್ವಾಮಿ ಮನ್ಮನೋವಾಕ್ಸಂಸ್ಥಯಜÕಸ್ಥಯಜÕ ಮಾಂಪಾಹಿನಮೋ ನಮಸ್ತೆ6ವೇದವತಿತ್ವದಧೀನೆ ಸರ್ವಜಗದಾಧಾರೆಭೂದೇವಿ ಸುಖಪೂರ್ಣೆ ಅಜೆ ನಿತ್ಯಮುಕ್ತೆವೈದೇಹಿ ಜಾನಕಿ ಸೀತಾನಾಮದಿ ತಾನೆಈ ಧರೆಯೊಳ್ ತೋರಿಹಳು ನಿನ್ನನನುಸರಿಸಿ 7ಸುರಾಜಗಜಇಕ್ಷುಜಲ್ಲೆಯನು ಮುರಿವಂತೆಪರಫಲಿಬಲಿನೀನು ಶಿವಚಾಪ ಮುರಿಯೆಸುರರುನರವರ್ಯರು ಹರುಷದಿಂದಲಿ ನೋಡೆಸಿರಿಸೀತೆ ವರಮಾಲೆ ನಿನಗೆ ಹಾಕಿದಳು8ಶರಭಂಗಶಬರಿ ಜಟಾಯು ಮೊದಲಾದವರವರಭಕ್ತಿಗೆ ಮೆಚ್ಚಿ ಯೋಗ್ಯ ಗತಿಯಿತ್ತೆಮಾರುತಿಗೆ ಪ್ರಿಯರೆಂದು ರವಿಜಗೆ ವಿಭೀಷಣಗೆಕರುಣಿಸಿದೆ ನಿರಪೇಕ್ಷ ನೀ ಪೂರ್ಣಕಾಮ 9ಕ್ರೂರ ಪೌಲಸ್ತ್ಯಾದಿ ರಕ್ಕಸರ ತರಿದು ನೀಧರೆಯಲಿ ಸುಕ್ಷೇಮ ಧರ್ಮ ಸ್ಥಾಪಿಸಿದೆಸರಸಿಜಾಸನ ಲೋಕದಂತಾಯಿತೀ ಲೋಕವರವಿಷ್ಣುಭಕ್ತಿಯು ಸೌಖ್ಯ ಎಲ್ಲೆಲ್ಲೂ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸನೆಸರಿ ಮಿಗಿಲು ನಿನಗಿಲ್ಲ ಯಾರು ಎಂದೆಲ್ಲೂಸಿರಿಸೀತಾಯುತರಾಮ ಎಂದೂನು ಎಲ್ಲೆಲ್ಲೂಮಾರುತಿ ಸೌಮಿತ್ರಿ ಭರತಾದಿಸೇವ್ಯ11
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಹರಿಸಂಕೀರ್ತನೆ6ಅಚ್ಯುತಅಮರಾರ್ಚಿತ ಮುನಿವಂದಿತಅಚ್ಯುತಅಮರಾರ್ಚಿತಪದಾಸರವಿಜಯ ಭೂಸುರಗಣಪ್ರಿಯಶೇಷಾದ್ರಿಗಿರಿನಿಲಯ 1ಪರಮಪುರುಷಪರಮಪ್ರಕಾಶಕರುಣಾಬ್ಧಿಶಶಿ ರಮೇಶ 2ದುರಿತವಿದೂರ ಶರಣು ಸುಖಂಕರಪುರಂದರಪರಾತ್ಪರ3ಸುಜನಸಂಜಾತ ಕುಜನಕುಠಾರಭಜಿಪರ ಭಯವಿದೂರ 4ಭಕ್ತ ನಿಸ್ಸೀಮ ಮುಕ್ತಿಗೆಸೋಮಭಕ್ತಾಂತರಾತ್ಮ ಶ್ರೀರಾಮ 5
--------------
ರಾಮದಾಸರು
ಸದಾಶಿವನೆ ರುದ್ರಾ | ಕಳೆವುದ ಭದ್ರಾ |ಸದಾಗತಿಯ ಪದ | ಮಧುಕರ ನೆನಿಸುತಸುಧಾ ರಸವನೆರೆ || ಭಜಿಸುವವರ ಪೊರೆ ಪಗಜಅಜಿನಾಂಬರ |ಭುಜಗಭೂಷವರವಿಜಯಗಿತ್ತೆ ಶರ |ವೃಜಿನವೃಂದ ಹರಬಿಜಯಿಸಿ ಮನದಿ | ರಜವ ಕಳೆಯೊ ತ್ವರ ಅ.ಪ.ಕೃತ್ತಿವಾಸನೆ | ಭಕ್ತರಾರ್ತಿಹ |ಚಿತ್ತದಲಿನೆಲೆ| ಸುತ್ತ ಪಾಲಿಸೋ ||ಎತ್ತೆ ಈಭವ| ತಪ್ತನಾಗಿಹ |ಗುತ್ತಮೋತ್ತಮ |ವಿತ್ತಕೊಡು ಹರ 1ರೂಪವೈಕೃತ |ರೂಪತೈಜಸ|ರೂಪತಾಮಸ| ಈ ಪರಿಯಕೊಂಡ||ಶ್ರೀಪ ಪದಕ | ಲಾಪದಲ್ಲಿಡು |ವೈಪರೀತ್ಯ ಪ್ರ | ಲಾಪಕಳೆಶಿವ 2ಹೇ ಪವನಜನೆ | ತಾಪಸ ಪ್ರಿಯ |ತಾಪಕಳೆ ಗೌ | ರೀಪನೇಭವಕೂಪಕಳೆವ ದ | ಯಾ ಪಯೋ ನಿಧಿ |ಗೋಪಗುರುಗೋವಿಂದ ವಿಠಲಾಪ್ತ 3
--------------
ಗುರುಗೋವಿಂದವಿಠಲರು