ಒಟ್ಟು 126 ಕಡೆಗಳಲ್ಲಿ , 35 ದಾಸರು , 115 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸ ಬಂದೆವೊ ಪ ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಅ ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರಸನ್ನುತ ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ- ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ1 ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ ಇಂದು ಹೋಗಿರೆಂಬೆ ನೀನು2 ಶಮದಮಾದಿ ಗುಣಗಳಿಂದಲಿ ಸಜ್ಜನರು ಮೂರ್ತಿ ಮನದಲಿ ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ 3 ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ ಪಕ್ಷ ವಹಿಸಿದಂತೆ ನಮ್ಮನು ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ 4 ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ ತನುವು ಮನವು ನಿನಗೆ ಅರ್ಪಿಸಿ ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ 5
--------------
ವಿಜಯದಾಸ
ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ | ಶ್ರೀಯರಸನ ಮೊರೆ ಹೋಗದೇ ಪ ಸಾಧುರಾ ಸಂಗ ಜರಿದು ಕುಜನರ ನೆರೆವಿಡಿದು | ಮೇದಿನಿಯೊಳು ನಿನ್ನ ನೀ ಮರೆದು 1 ಇರಲು ಮುಳ್ಳಿನಾಗ್ರದಲಿ ಹೀನ ಕೀಟಕಾವಳಿ | ಪೊರೆವಾನಿತ್ತು ಆಹಾರದಯಲೀ 2 ಮನುಜರಿಗೆ ತಲೆವಾಗಿ ಗೇಣು ವಡಕಲಾಗಿ | ಮನಸಾ ಹಿಡಿವರೇ ಪರರು ಹೋಗಿ 3 ಹುಟ್ಟಿಸಿದಾ ದೇವನು ಹುಲ್ಲು ಮೇಯಿಸುವನೇನು | ಅಷ್ಟಾಸಾಯಸ ಬಡದಿರು ನೀನು 4 ಅನುದಿನ ಗುರುಮಹಿಪತಿ ಚರಣಾ | ತಂದಿದಿರುಡುವ ನಿಧಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡೆಲೆ ಸುಮತಿ ಪೆಣ್ಮಣಿಗೊಲಿದ ಗಾಡಿಗಾರ ಚೋರ ರೂಢಿಗೆ ರಂಗ ಪ. ಈಡುಂಟೇ ಶತ ಜೋಡಿಶೆ ಶಿಶುಗಳ ಬೇಡ ಪಂಥ ನಿನ್ನ ಬೇಡಿಕೊಂಬೆನೆ ಕುಮತಿಅ.ಪ. ಅಪ್ರಾಮೇಯನ ಗುಡಿಯೊಳಗಿದನೆ ಸುಪ್ರಕಾಶ ಎನ್ನಪ್ಪಾ ಮುಂಗುರುಳುಗಳೊ ಳೊಪ್ಪುತಲಿಹನೆ ಬೆಡಗಿಂದೊಡನೆ ಅಪ್ಪನ ಬ್ರಹ್ಮಗಂಟುಡಿದಾರ ಉಡುಗೆಜ್ಜೆ ಬೊಮ್ಮ ನಪ್ಪ ಅಂಬೆಗಾಲಿಕ್ಕಿ ನೆಲಸಿಹನೆ ಕಂ ದರ್ಪ ಕೋಟಿ ತೇಜದಿ ಮೆರೆವನ 1 ಅರವಿಂದದಳ ವೆಂಕಟನಿರುವಲ್ಲೆ ತಿರುಮಲ ನಾರಾಯಣ ಚರಿತಾಪ್ರಮೇಯ ಚೆÉನ್ನಪಟ್ಟಣ ತೀರ ಮುಳೂರಲ್ಲೆ ಸರಸ ಸಂಚರಿಸುವ ವರ ಚೈತ್ರದ ರಥ ಅರಿವಿಲ್ಲವೆ ಕಣ್ತೆರೆದು ನೋಳ್ಪರಿಗೆ ದುರಿತ ದೂರ ಕಣಿ ವರಪ್ರದ ದೇವ ಅರಿದವರಿಗೆ ಕಣ್ ತೆರೆವನು ದೇವ ನೋಡೆ 2 ಅಪ್ಪ ಕೃಷ್ಣಗೆ ಬೆಣ್ಣೆ ಹಣ್ಣನುಗೊಡಲು ಇಪ್ಪನೆ ತನಯರನು ಸುತ್ತೇಳು ಲೋಕದಿ ನೋಡಲು ಇಲ್ಲೆಲ್ಲೆಲ್ಲೂ ಶಿಶು ಇಹನಲ್ಲೇ ಅಪ್ಪ ಶ್ರೀ ಶ್ರೀನಿವಾಸ ಒಪ್ಪನೋ ತಪ್ಪನೆಲ್ಲವಪ್ಪಿಪ್ಪನೊ ಕರುಣವ ಸರ್ಪಶಯನ ತಿಮ್ಮಪ್ಪನ ಕರುಣ ಒಪ್ಪ ತೆರದಿ ಸ್ತುತಿ ಮಾಡುವ ಬಾರೆ 3
--------------
ಸರಸ್ವತಿ ಬಾಯಿ
ಪಂಕಜವನು ಕಂಡೆ ಶ್ರೀಧರ ಪ ಮಂಕುಮನುಜ ಪಾಮರ ನಾ ನಿ ಜೀವರೂಪ ಜೀವಿತೇಶನೆ ಜೀಯ ರಾ- ಭಾವವೇನೊ ತಿಳಿಯದು ಸ್ವ- ಕಾವ ಕೊಲುವ ನೀನೆ 1 ಸುಗುಣ ಶುದ್ಧ ಸತ್ವ ನೀ ಬಲು ನಗಧರ ದೀನಬಂಧು ಮೂ- ಜಗದೊಡೆಯನೆ ಸಲಹು ಎನ್ನ ಜಗದಿಂದಾದರೂ ಹೊರಗುಮಾಡು ಅಗಣಿತ ಮಹಿಮಾಪ್ರಮೇಯ 2 ತೀರ್ಥ ಪ್ರಸಾದ ಮಾರಿ ಹಣವನು-ಗಳಿಸುವೆ ನೀ ಕರ್ತನೀನು ಪದ್ಮಾವತೀ ಭರ್ತ ಶ್ರೀ ಗುರುರಾಮವಿಠಲ ಆರ್ತಜನರ ಕೃಬಿಡದಿರು 3
--------------
ಗುರುರಾಮವಿಠಲ
ಪಂಕಜಾಸನ ವಂದ್ಯ | ವೆಂಕಟಾದ್ರಿ ವಿಠಲ ತವಕಿಂಕತನ ವಿತ್ತವಗೆ | ಸಂಕಟವ ಕಳೆಯೊ ಪ ಮಂಕುಹರಿಸುಜ್ಞಾನ | ದಂಕುರಕೆ ಮನಮಾಡಿಬಿಂಕದಿಂ ಪೊರೆಇವನ | ಅಕಳಂಕ ಮಹಿಮಾ ಅ.ಪ. ಸತ್ಯಶೌಚಾಚಾರ | ಕೃತ್ಯದಲಿ ಮನವಿರಿಸುನಿತ್ಯತವ ಮಹಿಮಗಳ | ಸುತ್ತಿಇರಲಿ ಇವಗೇನಿತ್ಯನೂತನ ಮಹಿಮ | ತತ್ವಗಳ ತಿಳಿಸುತ್ತಭೃತ್ಯವತ್ಸಲ ಕಾಯೋ | ಮೃತ್ಯುಹರದೇವಾ 1 ತತ್ವಾರ್ಥ ತಿರುಳುಗಳೆ | ಚಿತ್ರಿಸುವ ಕಲೆವೃದ್ಧಿವಿಸ್ತರೀಸಿವನಲ್ಲಿ | ನಿಸ್ತುಲಾತ್ಮಕನೇ |ಅರ್ಥಕಾಮಸುರೂಪ | ಪೊತ್ತುಪೊರೆಯುವ ದೇವಾಪ್ರತ್ಯೇಕ ಪ್ರಾರ್ಥನೆಯ | ಕೃತ್ಯವೇಕಿನ್ನು 2 ನಾನು ನನ್ನದು ಎಂಬ | ಹೀನಮತಿಕಳೆದಿನ್ನುನೀನು ನೀನೇ ಎಂಬ | ಜ್ಞಾನಮಹಬರಲೀ |ಪ್ರಾಣ ಪ್ರಾಣನೆ ಜಗ | ತ್ರಾಣನಹುದೆಂಬ ಸುಜ್ಞಾನ ಪಾಲಿಸಿ ಪೊರೆಯೋ | ಮನಿಮಧ್ವ ವರದಾ 3 ಮೀನಾಂಕ ಜನಕಾಮಾನಮೇಯಾನುಭವ | ಸಾನು ಕೂಲಿಸುವಕೋನೇರಿವಾಸ ಕಾರುಣ್ಯ | ತೋರಿವಗೇ4 ಗೋವತ್ಸದನಿ ಕೇಳಿ | ಆವುಧಾನಿಸುವಂತೆನೀವೊಲಿದು ಕಾಪಾಡು | ಬಾವುಕರ ಪಾಲಾ |ಪೂವಿಲ್ಲನಯ್ಯಗುರು | ಗೋವಿಂದ ವಿಠಲತವಪಾವನವ ಪದ ತೋರೆ | ಓವಿ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಪರಾತ್ಪರಾ ಕೃಪಾ ಸಮುದ್ರ ಪಾಹಿಮಾಂ ಸದಾ ಪ ಸುಜನ ಸೌಖ್ಯದಾ ಅ.ಪ ಅಪ್ರಮೇಯ ಆದಿಕಾರಣಾ ಸನಂದನಾದಿ ಮೌನಿಸೇವ್ಯ ಜಗನ್ಮೋಹನಾ 1 ಭಂಜನ ನವ ಕಂಜ ಲೋಚನಾ ಸರಿಸೃಪಾಧಿಪಶಯನ ಶಿವ ಚಾಪಖಂಡನಾ 2 ಧರಾತ್ಮಜಾ ಮನೋಹರ ನಿಜ ದಾಸ ಪೋಷಕಾ ಗುರುರಾಮ ವಿಠಲ ಕುಶಿಕಪುತ್ರ ಯಾಗ ರಕ್ಷಕಾ 3
--------------
ಗುರುರಾಮವಿಠಲ
ಪಾದ | ನಿತ್ಯದಿ ಭಜಿಸುವ ಭೃತ್ಯನೆ ಬಲು ಧನ್ಯನೋ ಪ ಭೃತ್ಯ ಜನಕೊತ್ತೊತ್ತಿ ಪೇಳುವ ಅ.ಪ. ಮುನಿಕುಲ ಸನ್ಮಾನ್ಯ ಸತ್ಯಜ್ಞಾನರ ಕರಜಮಾನ ಮೇಯ ಜ್ಞಾನ ನಿಪುಣಾಹೀನ ಮಾಯ್ಗಳ ಗೋಣ ಮುರಿಸು | ಸ್ವಾನುಭಾವದಿ ಬ್ರಹ್ಮ ಸತ್ಯಜ್ಞಾನ ಆನಂದನೆನುತಲಿ | ಆನುಪೂರ್ವ ವೇದಾರ್ಥ ಪೇಳ್ದ 1 ಈ ಮಹಿಯೊಳು ಭರತ | ಭೂಮಿಯೊಳಖಿಳ ಸುಸೀಮೆಯ ಚರಿಸುತಲೀ ||ನೇಮದಿಂದಲಿ ವಾದ ಭಿಕ್ಷೆಯ | ಪ್ರೇಮದಿಂದಲಿ ಬಯಸಿ ಬರುತಗ್ರಾಮ ಗ್ರಾಮದ ಭ್ರಾಮಕ ಜನ | ಸ್ತೋಮವ ನಿಸ್ತೇಜ ಗೈಸಿದ 2 ಪರಮ ಹಂಸೋತ್ತಮ | ಪರವಾದಿ ಗಜಸಿಂಹಗರುವ ರಹಿತ ಸಾರ್ವಭೌಮಾ ||ವರ ಸುವತ್ಸರ ಚಿತ್ರ ಭಾನುವು | ಚೈತ್ರ ಶುಕ್ಷದಿ ಅಷ್ಟಮೀ ದಿನಸಿರಿ ಗುರು ಗೋವಿಂದ ವಿಠಲನ | ಚರಣ ಸರಸಿಜ ಸೇರಿ ಮೆರೆದ 3
--------------
ಗುರುಗೋವಿಂದವಿಠಲರು
ಪಾಲಿಸೋ ಪರಿಪಾಲಿಸೋ ಪ ಪಾಲಿಸೋ ನೀ ಕಾಲನಾಮಕ-ಶ್ರೀಲೋಲ ಕಾಲಕರ್ಮದಲೆನ್ನಕರುಣಿಸಿ ನೀನೀಗ ಅ.ಪ ದುಷ್ಟಜನರ ಸಂಹಾರಕ-ಸರ್ವ ಶಿಷ್ಟಜನರ ಪರಿಪಾಲಕ-ದೇವ ಸೃಷ್ಟ್ಯಾದ್ಯಷ್ಟಕರ್ತುಕ-ತ್ವದ್ಭಕ್ತರಾ- ಭೀಷ್ಟದಾಯಕಾ 1 ಜಗದ್ಭರಿತ ಜಗದಂತರ್ಯಾಮಿ-ಸರ್ವ ಜಗದಾದ್ಯಂತ ಭಿನ್ನನೇಮಿ-ನೀನೆ ಸ್ವಗತಭೇದಶೂನ್ಯಮಹಿಮಾ ಇನ್ನು ಜಗದ್ಭುಕು ಮಮಕುಲಸ್ವಾಮಿ 2 ಪರಮೇಷ್ಟಿಭವಇಂದ್ರವಂದಿತ-ಕ್ಷರಾ- ಕ್ಷರ ಪುರುಷ ಪೂಜಿತ-ಪಾದ ನಿರವಧಿಕಗುಣಗಣಾನ್ವಿತ ನೀನೆ ಜರಾಮರಣನಾಶ ವರ್ಜಿತ 3 ಮುಕ್ತಾಮುಕ್ತಾಶ್ರಯದೇವನೆ-ಸರ್ವ ಭಕ್ತಮುಕ್ತಿಪ್ರದಾತನೆ-ವ್ಯಕ್ತಾ ವ್ಯಕ್ತಪುರುಷದೇವನೆ ಪುರುಷ- ಸೂಕ್ತಸುಮೇಯ ಅಪ್ರಮೇಯನೆ 4 ಸ್ವರವರ್ಣ ಶಬ್ದವಾಚ್ಯನೆ-ದೇವ ಸುರಾಸುರಾರ್ಚಿತ ಪಾದನೆ ಓಂ- ಕಾರ ಪ್ರಣವ ಪ್ರತಿಪಾದ್ಯನೆ ನಿತ್ಯ ನಿಖಿಳಾಗಮದೊಳು ಸಂಚಾರನೆ5 ಅಚಿಂತ್ಯಾನಂತರೂಪಾತ್ಮಕ-ನಿನ್ನ ಭಜಕರ ಭವಬಂಧ ಮೋಚಕ-ಸರ್ವ ಅಬುಜಾಂಡ ಕೋಟಿನಾಯಕ ನೀನೆ ಜಗದಾದ್ಯಂತ ವ್ಯಾಪಕ6 ವೇದ ವೇದಾಂತ ವೇದ್ಯನೆ-ನೀನೆ ಆದಿಮಧ್ಯಾಂತದೊಳ್ ಖ್ಯಾತನೆ ಗುರು ಮೋದತೀರ್ಥರ ಹೃತ್ಕಾಂತನೆ ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲನೆ 7
--------------
ಉರಗಾದ್ರಿವಾಸವಿಠಲದಾಸರು
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ಪ ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು ಕಾರುಣ್ಯನಿಧಿ ಹರಿ ಒಲಿವಾ ಅ.ಪ. ಕ್ಷೇತ್ರ ಮಧುರೆ ಗೋಕುಲ ವೃಂದಾವನ ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ ದರ್ಭಶಯನ ಮಧ್ಯಾರ್ಜುನ 1 ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ ಚಿದಂಬರ ವೀರ ರಾಘವ ದೇವ ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ ಒಂದೊಂದು ಕೋಟೀಶ್ವರಾ 2 ಸಿರಿ ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ ವೀರ ನಾರಾಯಣವೋ ಕೇದಾರ ಕುರುಕ್ಷೇತ್ರ ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ 3 ಉದ್ಭವ ಆದಿ ಅನಂತ ಬಲಕ್ಷೇತ್ರ ಪುಂಡರೀಕಾಕ್ಷ ಸುಧಿಯೆಂದು ಕನ್ಯಾಕುಮಾರಿ ಮುದದಿ ಮಹಂಕಾಳಿ ಹಸ್ತಿಪಳಿನಾಥ ಪದ ಮುರಳಿ ತ್ರಿವಿಕ್ರಮ 4 ಕೂರ್ಮ ನೆಲ್ಲನಪ ಧರಣೀಧರ ಚಾಪವಾಣಿ ಕ್ಷೇತ್ರ ಶ್ರೀನಿವಾಸನೆದ ನಿಧಿ ಗೌರೀ ಮನೋಹರ 5 ಶಂಕರನ ಕ್ಷೇತ್ರ ಗೋಗರ್ಭ ಶೇತುವನ ಗಜಾರಣ್ಯ ಓಂಕಾರನಾಥ ದೇವಾ ವೇದಿ ಗೋಪಾಲನಿಧಿ ಅಲಂಕಾರ ಮುಕ್ತಿ ಕ್ಷೇತ್ರ 6 ಮಳೂರಪ್ರಮೇಯ ಶಿವಾ ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ ನೀಲಾರಣ್ಯ ರಾಜವನ ನೈಮಿಷ ಭೋಕ್ತ 7 ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ ಮಹಾಲಕುಮಿ ರಘುನಾಥ ಶಿವಗಂಗೆ ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ 8 ಪೇಳಿದುದಕ್ಕೆ ಆರಿಗೆ ಅಳವಲ್ಲ ನೆನಸೋದು ಮಾನವರು ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ- ಪಾಲಿಸುವ ಕುಲಕೋಟಿಗಳ9
--------------
ವಿಜಯದಾಸ
ಪುಷ್ಪಸೇವೆಯ ಗೀತೆ ಪುಷ್ಪಸೇವೆಯ ನೋಡುವಾ ಬನ್ನಿರೆ ನ ಮ್ಮಪ್ರಮೇಯ ರಂಗನಾ ಪ. ಕ್ಷಿಪ್ರದಿಂದಲೆ ಬಂದು ಚಪ್ಪರದಲಿ ನಿಂದು ವಿಪ್ರರೆಲ್ಲರು ತಂದು ಪುಷ್ಪ ಸಮರ್ಪಿಸುವ ಅ.ಪ. ಮೇಷರಾಶಿಗೆ ರವಿಯು ಬರಲು ವಾಸುದೇವ ಹರಿಯು ಆಗ ಬೇಸಿಗೆ ತಾಪವ ಪರಿಹರಿಸುವೆನೆಂದು ವಾಸನೆಗಂಧವ ಮೈಯೊಳು ಪೂಸಿದ 1 ಕರ್ಪೂರದ ಕಸ್ತೂರಿ ಗಂಧವ ತಂದು [ಒಪ್ಪದಿಂ] ವಕ್ಷಸ್ಥಳದಿ ಧರಿಸಿ ವಕುಳ ಪುಷ್ಪಗಳಿಂದ ಮೌಳಿಯ [ಲಂಕ]ರಿಸಿದ ರು ಪನ್ನೀರವಲ್ಲಿಯ ಚೆನ್ನಾಗಿ ಪ್ರೋಕ್ಷಿಸಿದರು2 ಮರುಗ ಮಲ್ಲಿಗೆ ಜಾಜಿ ಮುಡಿವಾಳ ಇರವಂತಿಗೆ ಪಚ್ಚೆ ದವನ ಕೇದಿಗೆ ಪಾ ಕಮಲ ಸಂಪಿಗೆ ಪುಷ್ಪಮಾಲೆಯ ಧರಿಸಿ ಪನ್ನೀರ ತಳಿದರಾಗ 3 ಪುಷ್ಪದ ದುಬಟಿಯನು ತಂದು ನಮ್ಮ ಸರ್ಪಶಯನನಿಗ್ಹೊದ್ದಿಸೆ ಕ್ಷಿಪ್ರದಿಂದಲೇ ತೀರ್ಥಪ್ರಸಾದವನಿತ್ತು ಎ ನ್ನಪ್ಪ ರಂಗನು ಬಂದ ಒಯ್ಯಾರ ನಡೆಯಿಂದ 4 ಪರಿಪರಿ, ವಾದ್ಯಂಗಳು ಭೋರಿಡುತಿರೆ ವರಾಂಗನೆಯರು ಪಾಡೆ ಸುರರು ಭೂಸುರ ನರರೆಲ್ಲರ ಕೂಡಿ ದೊರೆಯುಮಂಟಪಕ್ಕಾಗ ಪರಮಪುರಷ ಬಂದ 5 ಅಲ್ಲಿ ಪೂಜೆಯ ಗ್ರಹಿಸಿ ರಂಗಯ್ಯ ತಾ ಎಲ್ಲರೊಡನೆ ಪೊರಟಿರೆ ವಲ್ಲಭನನು ವೀಣೆಸೊಲ್ಲಿನಿಂ ಪಾಡುತಿರೆ ಲಕ್ಷ್ಮೀ ಮೆಲ್ಲಮೆಲ್ಲನೆ ಬಂದ ಏಕಾಂತದಿ ರಂಗ 6 ಚಿತ್ರಪೌರ್ಣಮಿಯಲ್ಲಿ ಶ್ರೀರಂಗ ವಿ ಚಿತ್ರದಿಂದಲೆ ಪೊರಟು ಉತ್ತರಕಾವೇರಿ ತೀರದ ಮಂಟಪದಲಿ ನಿಂದು ಭಕ್ತವತ್ಸಲನು ಮಜ್ಜನವ ಮಾಡಿದನಾಗ 7 ಮಕರಿ ಕಾಲ್ಪಿಡಿಯಲಾಗ ಮತಂಗ ವು ಕರೆಯೆ ನಿಮ್ಮನು ಅತಿ ವೇಗದಿಂದ ಚಕ್ರದಿ ನಕ್ರನ ಕೊಂದು ಕರಿಯ ರಕ್ಷಿಸಿ ಬಂದ ಕರುಣದಿಂದಲೇ ರಂಗ 8 ಕಲಿಯುಗದೊಳಗಿರುವ ಕರ್ಮಿಗಳನ್ನು ಸಲಹುವೆನೆಂದೆನುತಾ ಕರುಣದಿಂ ದಲೆ ಅರ್ಚಾವತಾರವ ಮಾಡಿ [ಸಲೆ] ಬಿರುದು ಧರಿಸಿ ಬಂದ ವರದವೆಂಕಟರಂಗ 9
--------------
ಯದುಗಿರಿಯಮ್ಮ
ಪೊರಿಯದಲಿರುವರೇನು ಶ್ರೀಹರಿ ನೀನು ಪ ನಿರುತ ನಿನ್ನನಾನು ಸ್ಮರಿಸುತಲಿರುವೆನು ಕೌಸ್ತುಭ ಭೂಷಾ ಹರುಷದಿ ಮಂಜುಭಾಷಾ 1 ಭವಾರ್ಣವ ಪಾರಗಾಣಿಸೋ ದೇವಾ ಸಾರಸದಲನೇತ್ರ ನೀರದ ನಿಭಗಾತ್ರ 2 ದಿನಕರ ಕೋಟಿ ತೇಜ ಘನ ಗರುಡಧ್ವಜ ವನಧಿ ಕನ್ಯಾಧವ 3 ವರಗಿರಿಧರ ಕರುಣಾಕರ ಶುಭವದನ ಶರಣರ ಕಾಯುವಂತಹ ಬಿರುದು ನಿನ್ನದೊ ಅನಂತ 4 ಪರಮ ಪಾವನನಾದ ತರುಳ ಪ್ರಹ್ಲಾದಗೊಲಿದ ನರಹರಿ `ಹೆನ್ನೆಯ ಪುರನಿಲಯ ಪ್ರಮೇಯ 5
--------------
ಹೆನ್ನೆರಂಗದಾಸರು
ಬಂದ-ಬಂದ _ ಇಂದಿರೇಶ ನಂದನಂದನಾ ನಿಖಿಳ ಜನಕ ಕಂಧರಾಶ್ರಯಾ ಪ ಬಂದ ಬಂದ ಭಜಕ ಬಂಧು ಮಂದರಾದ್ರಿಧರ ಅರ- ವಿಂದನಯನ ಸುಂದರಾಂಗ ಸಿಂಧುಶಯನ ನಳಿನನಾಭ ಅ.ಪ. ನೀಲಮೇಘ ಶ್ಯಾಮಸುಂದರಾತನಿಗೆ ಮೇಲುಸಮರು ಇಲ್ಲವೆನಿಸಿದ ಲೀಲೆಯಿಂದ ಜಗವ ಸೃಜಿಸಿ ಪಾಲಿಸುತ್ತ ಮತ್ತೆ ಅಳಿಸಿ ಆಲದೆಲೆಯಮೇಲೆ ಸಿರಿ ಲೋಲನಾಗಿ ಮೆರೆವ ಕೃಷ್ಣ 1 ಐದು ರೂಪದಿಂದ ಕ್ರೀಡಿಪಾ ಪ್ರಕೃತಿ ಬೋಧ್ಯ ಸಿರಿಗುನಾಥ ನಾಯಕಾ ಆದಿಮಧ್ಯ ಅಂತ್ಯ ಶೂನ್ಯ ಮೋದಪೂರ್ಣ ಜ್ಞಾನಕಾಯ ಮೋದ ಮುನಿಯ ಹೃದಯಸದನ ಗೋಧರಾತಪತ್ರ ಶ್ರೀಪ 2 ಆದಾನಾದಿ ಕರ್ತ ಬ್ರಹ್ಮನೂ ದಿವಿಜ ಸಾಧುಸಂಘ ಸೇವೆ ಗೊಂಬನೂ ವೇದವೇದ್ಯ ವೇದ ವಿನುತ ವೇದ ಭಾಗಗೈದು ಪೊರೆದ ಛೇದ ಭೇದರಹಿತ ಗಾತ್ರ ಸಾಧು ಪ್ರಾಪ್ಯ ಬಾದರಾಯಣ 3 ದಾಸಜನಕೆ ಮುಕ್ತಿನೀಡುವ ಮಹಿ- ದಾಸಕಪಿಲ ಪೂರ್ಣ ಕಾಮನೂ ದೋಷ ದೂರ ನಾಶರಹಿತ ವಾಸುದೇವ ಕ್ಲೇಶವಿದೂರ ಈಶವಿಧಿಗಳನ್ನು ಕುಣಿಪ ಕೇಶವಾದ್ಯನಂತ ರೂಪ4 ಮೊತ್ತಜಗಕೆ ಸತ್ತೆನೀಡುವಾ ನಿಖಿಳ ಸತ್ಯ ಜಗದ ಚೇಷ್ಟೆನಡೆಸುವಾ ಮೊತ್ತಶಬ್ದ ಘೋಷವರ್ಣ ಮತ್ತೆ ಪ್ರಣವ ಮಂತ್ರಗಣದಿ ನಿಖಿಳ ಯಜ್ಞ ಭೋಕ್ತನಾಥ ಅಂಗಭೂತ 5 ಜಿಷ್ಣುಸೂತ ಕೃಷ್ಣೆಕಾಯ್ದವಾ ಸ್ವರತ ವಿಷ್ಣು ಪುರುಷಸೂಕ್ತ ಸುಮೇಯಾ ವಿಶ್ವಕರ್ತ ವಿಶ್ವಭೋಕ್ತ ವಿಶ್ವರೂಪ ವಿಶ್ವಭಿನ್ನ ವಿಶ್ವವ್ಯಾಪ್ತ ಶಶ್ವದೇಕ ತೈಜಸ ಪ್ರಾಜ್ಞತುರ್ಯ 6 ಸತ್ಯಧರ್ಮಗಳನು ಕಾಯುವಾ ದುಷ್ಟ ದೈತ್ಯತತಿಯ ದಮನಗೈಯ್ಯುವಾ ಮತ್ಸ್ಯಕೂರ್ಮ ಕೋಲ ಚರಿತ ಭೃತ್ಯಭಾಗ್ಯ ನಾರಸಿಂಹ ಸತ್ಯಶೀಲ ಬಲಿಯವರದ ಕ್ಷಿತಿಪದಮನ ಕ್ಷಾತ್ರವೈರಿ ಪರಶುಧಾರಿ7 ವಿಶ್ವ ಬಿಂಬನು ರಾ ಜೀವಪೀಠನನ್ನು ಪಡೆದನೂ ರಾವಣಾರಿ ಕೃಷ್ಣ ಬುದ್ಧ ಭಾವಿಕಲ್ಕಿ ನಿತ್ಯಮಹಿಮ ಭಾವಜಾರಿ ಪ್ರೀಯ ಸಖನು 8 ಹಯಗ್ರೀವ ದತ್ತ ಋಷಭನೂ ಅಪ್ರ- ಮೇಯ ಹಂಸ ಶಿಂಶುಮಾರನು ಜಯಮುನೀಂದ್ರ ವಾಯುಹೃಸ್ಥ ಜಯೆಯ ರಮಣ ಕೃಷ್ಣವಿಠಲ ದಯದಿ ಪೊರೆಯಲೆಮ್ಮನೀಗ ಜಯವು ಎನುತ ನಲಿದು ನಲಿದು 9
--------------
ಕೃಷ್ಣವಿಠಲದಾಸರು
ಬ್ರಹ್ಮಣ್ಯ ತೀರ್ಥ ಗುರು ರಾಜಾ | ನಿನ್ನನಮ್ಮಿದೆನೊ ಭಾಸ್ಕರ ಸುತೇಜಾ | ಭಾವಿಬೊಮ್ಮ ಮತವರುಹಿ ಮಹೋಜಾ | ಸಲಹೊಪ್ರಮ್ಮೇಯಂಗಳ ನಿಧಿಯ ಸಹೋಜಾ ಪ ಓದ್ದಾಡುತಿಹೆನೊ ಈ ಭವದೀ | ಸುಖಗದ್ದುಗೆಯನೇರ್ವಂಥ ಹಾದೀ | ತೋರಿಉದ್ಧರಿಸೊ ಬಲು ಕೃಪಾಜಲಧೀ | ಗುರುವೆಶುದ್ಧ ಬುದ್ಧಿಯ ನೀಯೊ ಮುದದೀ 1 ಯಾತ್ರೆಗಳ ಮಾಡ್ದೆನೆಂಬ | ಬಿಂಕದ್ವಾರ್ತೆಯೊಂದಲ್ಲದಲೆ ಇಂಬ | ಕಾಣೆಕ್ಷೇತ್ರ ಮೂರ್ತಿಯ ಕಾಂಬನೆಂಬ | ಆಶೆಪೂರ್ತಿ ಮಾಡೆನ್ನ ಗುರು ಬಿಂಬ 2 ಧನವನಿತೆ ವಿಷಯದಲ್ಲೀ | ಬಹಳ ಮನ ಮಾಡಿ ನೊಂದೆನಲ್ಲೀ | ಹರಿಯಮನ ಮುಟ್ಟೊ ಭಜಿಸು ಎಂಬಲ್ಲೀ | ಇನ್ನುಘನ ಜ್ಞಾನ ಭಕುತಿ ಇಲ್ಲಲ್ಲೀ 3 ಜೀವಗೆಲ್ಲಿಯ ಸ್ವತಂತ್ರಾ | ಹರಿಗುರುತಾವಲ್ಲಿ ಮಾಡುತಿಹ ತಂತ್ರ | ದಿಟವಿದುಜೀವನೇ ಮಾಳ್ಪುನೆಂಬುದೆ ಕುತಂತ್ರ | ತಿಳಿಸೊಭಾವ ಜಾನಯ್ಯನ ಸ್ವತಂತ್ರ 4 ಸಾರ ವ್ರಾತ | ತಿಳಿಸೊಜ್ಞಾನ ನಿಧಿ ಪುರುಷೋತ್ಮ ತಂತ್ರ 5 ಕಾರಕ ಕ್ರಿಯ ದ್ರವ್ಯವೆನಿಪ | ಭ್ರಮವುಮೂರರಿಂದಲಿ ದೂರ ಮಾಳ್ಪ | ಮಾರ್ಗತೋರಿಸಲಹುವುದು ಯತಿ ಭೂಪ | ತವಪದವಾರಿ ಜತೆ ಈ ನೀಚ ಬೀಳ್ಪ 6 ತ್ರ್ಯಕ್ಷಾಂಶ ಭೂತರಾದ | ಸನ್ಯಾಸಿಅಕ್ಷೋಭ್ಯ ಕರಜರಾದ | ಅಜೇಯಇಕ್ಷುಚಾಪನ್ನ ಗೆಲಿದ | ಜಯಾರ್ಯಭಿಕ್ಷುವಿನ ಮಾರ್ಗರಾದ7 ಮೋದ | ಪಡೆವದಾಯ ತೋರಿದಿ ನಿರ್ವಿವಾದ | ಇನ್ನುಗಾಯನದಿ ಮಹಿಮೆ ಅಗಾಧ | ಪೇಳ್ವಆಯತವ ನೀಯೋ ಸುಭೋಧ 8 ಬೃಹತೀ ಸಹಸ್ರ ಮಂತ್ರ | ಜಪಿಪಮಹಯೋಗದಾತ ಮಹಾಂತ | ಬೇಡ್ವೆಬೃಹತಿನಾಮಕನು ಎಂಬಂಥ | ಹರಿಯಮಹ ಮಹಿಮೆ ಕಂಡು ಹಿಗ್ವಂಥ 9 ಸೃಷ್ಟ್ಯಾದಿ ಅಷ್ಟಕಗಳ | ಗೈವಕೃಷ್ಣನ್ನ ಮಹಿಮೆಗಳ | ಕೇಳಿಹೃಷ್ಟರಾಗುವ ಜನಗಳ | ಸಂಗಕೊಟ್ಟುದ್ಧರಿಸೊ ನಮ್ಮಗಳ 10 ಸದನ 11
--------------
ಗುರುಗೋವಿಂದವಿಠಲರು
ಭವ ಪಾರಗಾಣಿಸಲು ಭಾರತಿ ರಮಣ ಸಮೀರನಲ್ಲದೆ ಬೇರೆ ಪ ವೀರ ಹನುಮ ರಘು ವೀರ ಭಕುತ ಬ್ರಹ್ಮ ಚಾರಿಯಾಗಿ ಜೀವ ಸಾರವೆನಿಸಿದೆ ಅ.ಪ ಶೇಷ ಗರುಡ ಶಿವ ಮುಖಸುರರೊಬ್ಬರೂ ದೋಷದೂರಲ್ಲವೊ ಪವಮಾನ ಈಶದಜ್ಞಾನ ಸಂಶಯ ಭ್ರಮೆ ಪೊಂದದೆ ಶ್ರೀಶನ ಪರಮ ಸಂತೋಷಕೆ ಪಾತ್ರನು 1 ವೀರರಧಿಕರೆಲ್ಲರು ನಿನ್ನೆದುರಲಿ ಸಾರಮೇಯದಂತಾದರೊ ಭೀಮ ನಾರಾಯಣನಿಗೊಬ್ಬನಿಗಲ್ಲದೆ ಶಿರಬಾಗದೆ ಮರೆದೆಯೊ ಧೀರ ಕಂಠೀರವ 2 ಶಾಂತನು ನೀ ಬಲುದಾಂತನು ನೀನೆ ಸ್ವಾಂತದಿ ಹರಿಯು ಪ್ರಸನ್ನನು ಸತತವು ಅಂತಿಮಭಾಷ್ಯಾದಿಗಳ ರಚಿಸಿ ವೇ ದಾಂತ ಸಾಮ್ರಾಜ್ಯದಿ ಸಾರ್ವಭೌಮ ಯತಿ3
--------------
ವಿದ್ಯಾಪ್ರಸನ್ನತೀರ್ಥರು
ಮಾಧವ ಮಾಯ ಜಾಲಗಳ್ ಜಾಣÀ ನೀನೆಲೈ ಮಧುರ ನುಡಿಯೊಳು ಮಾನವಳಿದ ಮೇಲ್ ಪ್ರಾಣವೇತಕೆ ಕಾಣಬಂದಿತು ನಿನ್ನ ಕಪಟವು 1 ಶೋಕ ಕಾರಣವರಿಯದಂತೆ ನೀ ನೇಕೆ ಪೇಳುವೆ ಬರಿದೆ ಎನ್ನನು ಸಾಕು ಸಾಕು ಈ ಸರಸವಾಕ್ಕುಗಳ್ ಶೋಕವಹ್ನಿಗೆ ಆಜ್ಯ ಸುರಿವರೆ 2 ಭಾಮೆ ಕೃಷ್ಣನ ಪ್ರೇಮ ಪುತ್ಥಳಿ ಸಾಮ್ಯರಹಿತವೀ ಸ್ನೇಹವೆನ್ನುತ ಭೂಮಿಯೊಳ್ ಜನ ಪೊಗಳುತ್ತಿದ್ದರು ಈ ಮಹಾಭ್ರಮೆ ಪೋಯಿತೀಗಲೆ 3 ಚಾರುನುಡಿಗಳಾಪಾರವೆನ್ನೊಳು ಸಾರ ಪ್ರೇಮವು ರುಕ್ಮಿಣಿಯೊಳು ಪಾರಿಜಾತದ ಪುಷ್ಪವವಳಿಗೆ ನೀರಸೋಕ್ತಿಗಳೆನ್ನ ಪಾಲಿಗೆ 4 ಅಮರ ಮುನಿಪನು ನಿನ್ನ ಸಮುಖದೊಳ್ ಅಮಿತವಾಗಿ ತಾ ಸ್ತುತಿಸೆ ಭೈಷ್ಮಿಯ ಕುಮತಿಯಿಂದ ತಾನೆನ್ನ ತೆಗಳಲು ಅಮಮಯೆಂದೆಯಾ ಅಪ್ರಮೇಯನೆ 5 ಕುಸುಮ ಮಾಲೆಯು ಉರಗನಾದೊಡೆ ಮಾಳ್ಪುದೇನು ಶರದ ಚಂದ್ರನ ಕಿರಣ ತಪಿಪೊಡೆ ಹಿರಿದು ಕರ್ಮವ ಫಲವಿದೆಲ್ಲವೇ 6 ಕರಿಗಿರೀಶನ ಚಿತ್ತವೀಪರಿ ಇರಲು ಸುಮ್ಮನೆ ಕೊರಗಲೇತಕೆ ಸರುವ ಸಂಗವ ತೊರೆದು ತಪದೊಳು ನಿರತಳಾಗುವೆ ನೀರಜಾಕ್ಷ ಕೇಳ್ 7
--------------
ವರಾವಾಣಿರಾಮರಾಯದಾಸರು