ಒಟ್ಟು 1009 ಕಡೆಗಳಲ್ಲಿ , 99 ದಾಸರು , 844 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷರ ಮಾಲಾ ಅದ್ವೈತ ಅಗಣಿತಆದ್ಯಂತ ರಹಿತಇಹ ಪರಕೆ ವರ್ಜಿತಈಶ್ವರಯ್ಯ |ಉದಯಾಸ್ತಗಳಿಲ್ಲಊ(ಉ)ಚ್ಚ ನೀಚಗಳಿಲ್ಲಋಷಿಯ ಮೂಲವ ಬಲ್ಲವರಾರಿಲ್ಲಲೃ ಚೇಕಗಳಿಲ್ಲಲñ ಗಳಿಲ್ಲಏಕಮೇವ ತಾನೆಲ್ಲಐಕ್ಯ ಮೊದಲಿಗಿಲ್ಲ ಸೌಖ್ಯಾನಂದಓದಲಿಕೆ ಅಳವಲ್ಲಔದಾಸೀನ ಶೀಲಅಂತ ತಿಳಿಯದು ಬಹಳಅ:(ಹ)ರ್ನಿಶಿಯಲಿ || ಹರ ಹರಾ ಮಹಾದೇವ ಶಿವ ಶಿವ ಮಹಾದೇವ ಶಂಕರಾ ಮಹಾದೇವ ದೇವ ದೇವಾ 1 ಮೂರ್ತಿ ನೀಕಿರಣ ಕೋಟಿ ಪ್ರಕಾಶ ಮಹಿಮ ಕೀರ್ತಿ ನಿಮ್ಮದು ಬಹಳಕುಳಿತಲ್ಲಿ ನಿಂತಲ್ಲಿಕೂ(ಖೂ)ನ ನಾ ತಿದ್ದದೆ ಕಾಲಿಲೊದ್ದುಕೇಳಿ ಬಂದೆನು ಮಹಿಮೆಕೈ ಮುಗಿದು ಶರಣೆಂಬೆಕೋಟಾಳ (ಕೋಟಲೆ) ನಮ್ಮದು ಬಿಡಿಸು ದೇವಾಕೌ (ಕವಿ)ದು ಕೊಂಡಿದೆ ಮಾಯೆಕಂಬನಿಯ ತೆರೆ ಗುಡಿದುಕಃ(ಷ)ಷ್ಟ ಕಷ್ಟ ಜನ್ಮ ಬಹಳ ಕಷ್ಟ || ಹರಹರಾ 2 ಖಳರ ಸಂಗತಿಯಿಂದಖಾತಿಗೆ ನಾ ಬಿದ್ದೆಖಿನ್ನನಾದೆ ಅಳುಕಿ ಭಿನ್ನನಾದೆ ಖೀ(ಕೀ) ಸುತಿದೆ ಬಲು ಬಯಕೆಖುರ ಖುರಿ ಗುಟ್ಟುತಲಿಖೂನ ತೋರಿಸಿ ನಮ್ಮ ಕಡೆದಾಟಿಸು ಖೇದವನು ಬಡಲಾರೆಖೈರದ ಮನೆಯಲಿಖೋಡಿತನ ನಮ್ಮದು ಬಿಡಿಸು ದೇವ ಖೌ(ಖವ)ಟ ಮನವನು ಬಿಡಿಸಿಖಂ ಮಗೆ (ಖಮಂಗ) ಮಾಡಯ್ಯಖಃಖಃ ಎನುತಲಿ ಕೆಮ್ಮಲಾರೆ || ಹರಹರಾ 3 ಗದ್ದಲ ಮನದಿಂದ ತಿದ್ದಲಾರದೆ ಹೋದೆಗಾವಿಲ ನಾನಾದೆ ಕರುಳನಾದೆಗಿರಿಜೇಶ ನೀ ಕೇಳು ಪ್ರಳಯಕ್ಕೆ ಒಳಗಾದೆ ಉಳಿದು ಕೊಂಡರೆ ನಿಮ್ಮ ಮರೆಯೆನೆಂದು |ಗೀತ ಹಾಡಿದರೇನು ನಾಥನನು ಕೊಳಲಿಲ್ಲ ಪ್ರೀತಿಗಳು ನಡಲಿಲ್ಲ ಗುರುವಿನಲ್ಲಿ | ಗುಣಕರ್ಮಕಾಡುತಿದೆ ಗೂಳಿಯನೆ ಮಾಡುತಿದೆ ಗೆಲವ ಹಾದಿ ಬಯಲ ಜ್ಞಾನವಿಲ್ಲ |ಗೈಯಾಳ ತನದಿಂದ ಹೈಯಾಲಿಕೆಗೆ (ಹುಯಿಲಿಕೆಗೆ) ಬಿದ್ದು ಗೊಡ್ಡತನ ಎಷ್ಟೆಂತು ಹೇಳಲಯ್ಯಗೌಪ್ಯದ ಮನೆಯೊಳಗೆಗಂಭೀರತನ ಬಿಟ್ಟುಗಃ(ಗಾಹ)ಳ ಹರಿಸೊ ಬಹಳ ಕೃಪೆಯಿಂದಲಿ || ಹರಹರಾ 4 ಘ(ಗ)ಳಿಸಲಾರೆನು ಪರವುಘಾ(ಗಾ)ಳಿಯಾಗಿದೆ ಮನಸುಘಿಲಕೆಂದರೆ ಬೆದರಿಘೀರಿಡುತಲಿಘುಮ್ಮರಿ ಸಿಕ್ಕುತದಘೂ(ಗೂ)ಳಿ ಸೊಕ್ಕಿದ ಹಾಗೆ ಘುರಘೂರಿಯ ತಪ್ಪಿಸಿ ಹರವ ಮಾಡು ||ಘೇರಿ ಬಂದೆರಗಿತುಘೃರಿಸುವರಿನ್ನಾರುಘೋರದಲಿ ಮುಳುಗಿದೆ ತಾರಿಸಯ್ಯಘೌ(ಗೌ)ರವನು ಮಾಡೆನಗೆಘಂಮನೆ ವರವಿತ್ತುಘಃ(ಘಾ)ಸಿಯಾಗಿಸಬೇಡ ಯಮನ ಬಾಧೆಯಲಿ || ಹರಹರಾ 5 ಸಾರ ಗುಹ್ಯ ಜ್ಞಾನಿ ಸಂಗದ ಗೋಷ್ಟಿಜ್ಞಾನಿಗೇ ಪರಿಪಾಟಿಜ್ಞಾನಿಯೆಂದರೆ ಕೋಟಿ ಕೋಟಿ ಪುಣ್ಯ ಜ್ಞಾನಕ್ಕೆ ಸರಿಯಿಲ್ಲಜ್ಞಾನಿಯಾದವ ಬಲ್ಲಜ್ಞಾನಿಯೆಂದರೆ ಕಲ್ಲು ಹಾಕುತಾರೆ || ಹರಹರಾ 6 ಚರಣವನು ಪಿಡಿಯಾದೆಚಾರ್ವಾಕ ನಾನಾದೆಚಿರಕಾಲ ಬದುಕುವಚೀ(ಚಿ)ಹ್ನ ವಿಲ್ಲ ಚುಲಕ ಬುದ್ಧಿಯ ಹಿಡಿದುಚೂಕ (ಚುಕಾ)ರಾದೆನು ಬಹಳಚೇರಿಗೇಡಿತನವನು ಬಿಡಿಸು ದೇವಾ |ಚೈತನ್ಯನೆಂಬವನು ಒಳ ಹೊರಗೆ ಐದಾನೆಚೋರತನವನು ಮಾಡಿ ಕದ್ದನನ್ನಚೌಖಂಡಿ ಒಡೆದನೊಚಂನಾಗಿ ಹಗಲವೆಚಃ(ಚಾ)ಡಿ ನೋಡುತಲಿದ್ದೆ ಉಲವಿಲ್ಲವು ಹರಹರಾ 7 ಛಲದ ಬುದ್ದಿಯ ಹಿಡಿದುಛಾನಸ ನಾನಾದೆಛಿಛೀ ಎಂದರು ಸಾಧು ಜನರುಛುಲಕತನಕೆಲ್ಲಛೂರಿಯನೆ ಹಾತುತಲಿಛೇದಿಸಲು ತಡವಿಲ್ಲಛೈ ತಾಳಿಸಿಛೋದವನು ಬಡುವರು ಭಕ್ತರಾದವರೆಲ್ಲಛೌಕಂಠ ನಮ್ಮಯ್ಯ ಕೂಡಿಕೊಂಡಛಂದಾಗಿ ಸಲಹಯ್ಯ ಆನಂದ ಪದವಿಯ ಕೊಟ್ಟು ಛತ್ರವನು ಮೇಲಿಟ್ಟು ಛಃ(ಛಾ)ಯ ವಾಗೋ ಹರಹರಾ 8 ಜಪ ತಪಗಳ ನಾ ಮಾಡಿಜಾಗ್ರತ ನಾನಾದೆಜಿತೇಂದ್ರಿಯಾದೆನೊಜೀವದಿಂದ ಜುಗಳನೆಲ್ಲವನುಜೂಜನಾಡಿ ಗೆದ್ದೆಜೇನವನಿಕ್ಕಿದೆ ನೆಲಕಬ್ಬಿಗೆಜೈ ಜಯಾಕಾರವನು ಜಗವೆಲ್ಲ ಮಾಡುವರುಜೋಗುಳ ಹಾಡುವರು ಪ್ರೇಮದಿಂದಜೌನಾಗಳೆ (ಯೌವನಾಗಲೆ) ಹೋಗಿಜಂಬುಲಿಂಗನ ಕೂಡಿ ಜಃ(ಹ)ಜ ನಾಡಿ ಹರಹರಾ 9 ಝ(ಜ)ಳಕವನು ಮಾಡಿದೆಝಾರಿ ಬ್ರಹ್ಮನ ಕೈಯ ಉದಕವೇ ಉಷ್ಣವನು ಬಿಡಿಸಿತಲ್ಲಝಿಂಜ ಬೀಜ ಮಲ ತೊಳೆದುಝೀ ಎಂಬ ಖಣಿಯೊಳಗೆಝುಣಿಝೂಣಿಸುವನಾದಝೇಲಿಸಿಕೊಂಡಝೈಯ ರಾಗದ ಯೋಗಝೋತಿ ಮಾಡಲಿ ಬೇಕುಝೌಗರದ ಒಳ ಮೊಲಿಯ ಭಾರಿಡುತಲಿ ಝಂಮನೊದಗಿತು ಮೇಘ ಝಳಮಳ ಮಿಂಚೇರಿಝಃಗ ಝಗಿಸುವ ದಿವಾ ರಾತ್ರಿಯಲಿ ಹರಹರಾ 10 ಕೊಂಡ ಹೊತ್ತರು ಆತ್ಮಜ್ಞಾನಿಗಳು ಟೀಕು ಆಯಿತು ಹೀಗೆಟುಕಿಲಿ ತಿಳಕೊಳ್ಳಿಟೂಕ ಮಾಡಲಿ ದೇಹ ಮೋಕ್ಷವಿಲ್ಲ ಟೇಕದ ಮೇಲೇರಿ ಜಾರಿ ಬಿದ್ದರೆ ಕೇಡುಟೈಳತನದಲಿಟೊಂಕ ಮುರಿದುಕೊಂಡಟೌಕರಕ ಗತಿಗಾಣಟಂಮನೆ ಕೆಲಸಕ್ಕೆಟಃ(ಟಾ)ಹ ಬಡೆವವರಿಲ್ಲ ಹುಟ್ಟಮೂಕಗೆ ಹರಹರಾ 11 ಲಂಡ ಸಾಕುಸಾಕುಠೊಂಬಿಯ ಮತದವನುಠೌಳಿಕಾವನು ಬದ್ಧಠಂಮೆಂದರೆ ನಮ್ಮರಸು ಸಿಕ್ಕಠಃ (ಠಾ)ವು ಬಲ್ಲಿದವನಲ್ಲ ಠಾಣೇ ಕುಳಿತವನಲ್ಲ ಠಾಕುರಾಯಿ ಕಾದು ಗೋವ ನಾದ ಹರಹರಾ 12 ಡಗಳ ಮುದ್ರಿಯ ಹಾಕಿಡಾಗಿನ ಪಶುವಾಗಿಡಿವರಿ ಎಂದರೆ ಖೋ ಎನುತಲಿ ಡೀಂಗರಿಗಲ್ಲದೆಡುರುಕು ಹಾಕುತಲಿದೆಡೂ(ಡು)ಳಿಕಿಸುತಲಿಹ ಸೊಕ್ಕಿನಲ್ಲಿ ಡೇಗಣಿ ಕಟ್ಟದೆಡೈಳತನ ಹೋಗದುಡೊಂಗ ತಟ್ಟಿದ ಬಳಿಕ ನೋಡು ಅಳುಕಡೌಲಿಸಿದ ಮಡವಿನಲಿ ನೀರ ಕುಡಿಯಲು ಹೋಗಿಡಂಕ ಮೊಸಳಿಯ ಕಂಡುಡಃ(ಡ)ಳಮಳಿಸಿತು ಹರಹರಾ 13 ಢಣಿಢಣಿಸುವ ಜ್ಯೋತಿಢಾಳಾಗಿ ತೋರುತದೆಢಿಳಿಗ್ಯಾತಕ ಹೋದಿ ಇಲ್ಲಿ ನೋಡು ಢೀಗು ಬಿದ್ದ ಮುನ್ನೆಢುಮಿಢೂಮಿಗುಟ್ಟುತಲಿಢೇಕರವ ಕೊಟ್ಟುಂಡು ತೃಪ್ತನಾಗೊ ಢೈಯಾಳಿತನದಿಂದಢೋಗರ ಬೀಳಲಿ ಬೇಡಢೌಳಿ (ಡೌಲು) ಮಾಡಲಿ ಬೇಡ ಸಾಧುರೊಳಗೆ ಢಂಮನಾಗಿರ ಬೇಡ ಅಹಂಕಾರ ತಲೆಗೇರಿಡಃ(ಢಾ)ಣಕ ನೀಗವಲ್ಲದೆ ಬಳಲುವಿ ಹರಹರಾ 14 ತುಂಬಿ ಕೊಂಡಿದೆ ನೋಡುತೂ (ತು)ಳಕುವ ತೆರೆ ನೋಡುತೇಲಿ ಬರುತದೆ ನೋಡುತೈ ಧಾಂಗೆ (ತೆಯ್ಧಾಂಗೆ)ತೊಳೆದ ಮುತ್ತನು ನೋಡುತೌರಮನೆಯನು (ತವರಮನೆಯನು) ಕೂಡುತಂದೆ ಶಿವರಾಯನ ಆನಂದ ನೋಡುತಃ(ತಾಹ) ಕುಡುತದೆ ನೋಡು ಬಹಳ ಅಭ್ಯಾಸ ಮಾಡು ದೇಹವಳಿದು ಆತ್ಮನೊಡಗೂಡು ಹರಹರಾ 15 ಥರ ಗೊಳಿಸುವ ಜ್ಞಾನ ಸ್ಥಾ(ಸ್ಥ)ಳವ ಶುದ್ಧ ಮಾಡು ಸ್ಥಿರವಾದ ಮನಸಿನ ಸೂತ್ರವಿಡಿದು ಸ್ಥೀ(ಸ್ಥಿ)ತಿ ಉತ್ಪತ್ತಿ ಪ್ರಲಯ ಮೀರಿದ ಮುಹೂರ್ತದಲಿ ಕೇಸರಗಳ ಹಾಕಿದರು ಯೋಗಿಗಳು ಉಪ್ಪಾರ ಈಶ್ವರಣ್ಣ ಬಡಿಗೇರ ಬೊಮ್ಮಣ್ಣ ಕಟ್ಟಲೀ ಜಾಣರು ಸೃಷ್ಟಿರಚನಾ ಮುಟ್ಟಿತು ಮುಗಿಲಿಗೆ ದಟ್ಟಿಸಿತು ಭೂಮಿಗೆ ಪಟ್ಟದರಸನು ನಮ್ಮ ಗುರುರಾಯನು ಹರಹರಾ 16 ದಗಿಯ ಬೀಳಲಿ ಬೇಡದಾ(ದ)ಯದ ಮನೆಯನು ಗಳಿಸುದಿನ ದಿನಕ ಭಕ್ತಿಯಿಂದೀರ್ಘವಾಗಿದುಗುಣಿಸಿದ ಪ್ರೇಮಗಳುದೂರ ಬೀಳದ ಹಾಗೆದೇವರಿಗೆ ಅರ್ಪಿಸಿದೈವ ಪಡೆಯೊ ದೊರಕೊಂಬ ತಡವೇನುದೌಲಿತನ ಹೋದರೆದಂಭವೆಂಬುದು ಎಲ್ಲದಃ(ಹ)ನವಾಗಿ ದಾವ ದರಶನದೊಳಗೆ ದೇವದರ್ಶನ ಮೇಲು ನೀನ್ಯಾಕ ಕೊಳವಲ್ಲಿ ಏನು ಬಂತೋ ಹರಹರಾ... 17 ಧನಕೆ ಹೆಣಗಲಿ ಬೇಡಧಾರುಣಿಗಂಜ ಬೇಡಧಿಗಿ ಧಿಗಿಗೊಳ ಬೇಡಧೀರನಾಗೊಧುಗಿ ಧುಗಿಸಲಿ ಬೇಡಧೂಳಿ ಕೂಡಲಿ ಬೇಡಧೇನು ಕರೆವುತಲಿದೆ ಸಂತರಲ್ಲಿಧೈರ್ಯವನು ಬಿಡಬೇಡ ಧೊ(ದೊ)ರೆಗೆ ಶರಣೋಗ ಬೇಡಧೌತ ರಂಗದ ಬಿರುದುಧಂಮ ಧಂಮಿಸುತಧಾ(ಧಃ)ಹಕಿಲ್ಲ ಮೃತ್ಯುವಿನ ಸೋಂಕಿಲ್ಲ ಜನ್ಮದ ಏಕಾಂತ ದಲಿರುತಿಹ ಶಿವಶರಣನು ಹರಹರಾ 18 ನರದೇಹಿ ಆದುದಕೆನಾಗಭೂಷಣನ ಭಜಿಸು ನಮ್ಮನಿª6Éಲ್ಲರಿಗೆ ಮೋಕ್ಷ ನೀರ ಮುಣುಗಲಿ ಯಾಕೆನುಡಿಯ ಬಂಧನವ್ಯಾಕೆನೂರಾರ ಶರಣ್ಯಾಕೆ ಬೆಂಡಾಗುತನೇಮ ಕೊಳಬೇಕ್ಯಾಕೆನೈಷ್ಠಿಯ ಕಟ್ಟಲ್ಯಾಕೆನೊಗನ ಹೊತ್ತಾನಂತ ನೆನಿಸಲ್ಯಾಕೆನೌಸರದ (ನವಸಿಗರ) ಪರಿಯಾಕೆನಂಮಯ್ಯನಗಲಲ್ಯಾಕೆನಃ(ನಾ)ನಾತ್ವವನಳಿದರೆ ಅಷ್ಟೇ ಸಾಕು ಹರಹರಾ 19 ಮೂರ್ತಿ ಶರಣು ಶರಣು ಪೇತು ಪತಿಗೆ ಶರಣುಪೈಜ ಗೆದ್ದವಗೆ ಶರಣುಪೊಡವಿ ಕೈಲಾಸದ ನಿಧಿಗೆ ಶರಣುಪೌರೋಹಿತನೆ ಶರಣುಪಂಥ ದುರಿತನೆ ಶರಣುಪಃ(ಪಾ)ರ್ವತಿ ಕಾಂತನ ಪಾದಕ್ಕೆ ಶರಣು ಹರಹರಾ 20 ಫಲವ ಬಯಸಲಿ ಬೇಡಫಾಸಿ (ಪಾಶದಿ) ಬೀಳಲಿ ಬೇಡಫಿರ್ಯಾದಿಗಳ ಹಳಿತಲ ಬೇಡಫೀ (ಫಿ)ತವಿ ಮಾಡಲಿ ಬೇಡಫುಗಸಾಟಿ ಕೆಡಲಿ ಬೇಡಫೂರಸೊತ್ತಿತೆನಬೇಡ ಶಿವ ಶಿವಗೆ ಫೇಡಿ ಮಾಡಲಿ ಬೇಡಫೈಣ್ಯ ಹೂಡಲಿ ಬೇಡಫೋಡಣಿ ಕೊಡಬೇಡ ಸಮುದ್ರಕೆಫೌಗೊಂಡ ಹೂವಿನಫಂಗಡಿಯನೆ ತಂದುಪಃ(ಫಾ)ರ ಪರಮಾತ್ಮಂಗೆ ಅರ್ಪಿಸಯ್ಯ ಹರಹರಾ 21 ಭರವಸವು ನಿನಗೇನುಭಾಗ್ಯ ಬಂದೀತೆಂದುಭಿಕ್ಷೆ ಬೇಡುವಗಿನ್ನುಭೀತಿಯಿಲ್ಲ ಭುವನದೊಳಗಿದಿರಿಲ್ಲಭೂತಾಳ ಕೆಳಗಿರಲಿಭೇದವಿಲ್ಲದೆಭೈರವನು ಕಾವ ಭೋಜನಂಗಿರುತಿಹನುಭೌತ್ಯ ವ್ಯಾಳೆ ಬಂದದಕೆಭಂಗ ಬಡಿಸಿಲಕಿಲ್ಲ ಸಂಗ ಸಿಲುಕಿ ಭಃ(ಭಾ)ಲ ಲೋಚನ ಚಂದ್ರಶೇಖರನ ಸ್ಮರಣೆಗೆ ಭಾರನಿಳುಹಿ ಭೂಮಿಯ ಹೊರಗಾಗಿ ಹರಹರಾ 22 ಮರಣ ಬರುತದೆ ಕೊಮಾರಗಳ ಹಾಕುತಲಿಮಿ (ಮೀ)ರಲಿಕ್ಕಲಿದುಮೀ(ಮಿ)ಥ್ಯಾವಲ್ಲ ಮುನಿಯು ಆದರೆ ಏನುಮೂರು ಕಣ್ಣಿರಲೇನುಮೇರು ಸಹಿತಾಗಿದು ನುಂಗುತದೆ ಮೈಯ ತಾಳಿದ ಬಳಿಕಮೋಕ್ಷ ಪಡೆಯಲು ಬೇಕುಮೌನವ ಹಿಡಿದಂಗೆ ದೇಶ ಭಂಗಮಃ(ಮ)ಹಾ ಪ್ರಲಯಕೆ ಹೊಂದದ ಮಹಾತ್ಮಂಗೆ ಭಯವೇನು ಮಹಾದೇವನ ಮೈಯ ಕೂಡಿಕೊಂಡ ಹರಹರಾ 23 ಯದಿಯ (ಎದೆಯ) ಬಲ್ಲಿದನಾಗುಯಾತ್ಯಾತಕಂಜದೆಯಿ(ಈ) ತನೆಯೀ(ಈ)ಶ್ವರನು ಈಶ ಗುಣದಿ ಯುವತಿ ಇದ್ದರು ಏ£4ಯೂ(ಯು)ಗದ ಅಂಜಿಕೆ ಏನುಯೇ(ಏ)ಸೊಂದು ಗ್ರಹಗಳು ಬಂದರೇನುಯೈ(ಐ)ದಿಸಿ ಸಾಯೋಜ್ಯಯೋಗಿಯಾದ ಬಳಿಕಯೌವನಾಗಿರುತಿರಲಿ ಬಹು ವೃದ್ಧನುಯಂ(ಎಂ)ಮ ಬಸವನ ತಮ್ಮನಾಗಲಿಕೆ ಪರಬೊಮ್ಮಯಃಕಾಕಸಾರೆ ನಿಮ್ಮಯೇಕಾಕನಂದ ಹರಹರಾ 24 ರಮಣ ನಾಯಕತೆಯರುರಾಗವನೆ ಮಾಡುವರು ಸ-ರಿಗದಲಿ (ಸರಿಗಮದಲಿ) ಹಾಡುವರುರೀತಿಯಿಂದರುಣಿ ಝಣಿಸುವ ತಂತಿರೂಪದ ಮೃದಂಗರೇಖ್ಯಕೊಳಗಾಗದೆರೈಷಕೂಡಿರೋಮಾಂಚ ಗುಡಿಗಟ್ಟಿರೌದ್ರಾವತಾರದಲಿರಂಗ ದಾರಿಗೆ ಸಿಲುಕಿರಃ(ರಾ)ಹಣ ಒದಗಿ ರಾಯಪಂಚಾಕ್ಷರವ ಪರಶಿವನ ಕೊಂಡಾಡಿ ವರವ ಪಡೆದರು ಪ್ರತ್ಯಕ್ಷವಾಗಿ ಹರಹರಾ 25 ಲವಲವಿಕೆ ನನಗೆ ಹುಟ್ಟಿಲಾವಕೆ ಹೆಣಗಿದೆಲಿಂಗವನು ಗಳಿಸಿದೆಲೀಲೆ ಗಮನೆಲುಪ್ತವಾದೀತೆಂದುಲೂಟನೆ ಮಾಡಿದೆಲೇಸು ಲೇಸೆಂದರು ಭಕ್ತರೆಲ್ಲ ಲೈಕ್ಯದ ಹೆಸರೇನುಲೋಕದಂತಾಗದೆಲೌಸಡಿಯಿಲ್ಲದೆಲಂಭತನವೇ ಶಂಭುಶಂಕರ ನಿಮ್ಮಲಃ(ಲಾ)ಹಣೆವು ನರಗುಂಟು ಲೋಹ ಪರಿಸಕೆ ತಾ ಸೋಂಕಿದಂತೆ ಹರಹರಾ 26 ವಶವಾದ ಪರಬ್ರಹ್ಮವಾಸವಾಗಿರಲಿಕ್ಕೆವಿಷಯ ತಪ್ಪಿಸಿದೆನುವೀ(ವಿ)ಪರೀತ ಕೇಳಾ ವು(ಉ)ದಾಸವಿಲ್ಲದೆವೂ(ಉ)ಪರತಿಯ ಹೊಂದದೆವೇದವನು ಫುಂದದೆವೈದಿಕನೆ ಓದಿದ ಫಲವೇನುವೌಂ(ವಂ)ಶಿತ ನಾಗದೆವಂಮನವ ಬೀರದೆ ದೊಡ್ಡತನವೇ ವಃ(ವೋಹ)ಳ ಸೋಹಳವುಂಟು ತಾಮಕರ ದಾಮ ನಂಟು ವಾಸುದೇವನ ಗಂಟು ಕಟ್ಟಿಕೊಳ್ಳಿ ಹರಹರಾ 27 ತಿಮಿರ ನಿದ್ರಿ ಕಣ್ಣು ತೆರೆದ ಹರಹರಾ 28 ಸಕಲ ಶಾಸ್ತ್ರವನೋದಿಸಾಕಾರ ತಿಳಿಯದು ನಿರಾಕಾರ ಎಂಬುದು ಬಹಳ ದೂರಸಿದ್ಧವಾಗಿದ್ದದ್ದುಸೀ(ಸಿ)ಕ್ಕದು ಕೈಯೊಳಗೆಸುಳವಿಲ್ಲ ಕಳವಿಲ್ಲಸೂಕ್ಷ ಘನವು ಸೇರಿ ಬಾರದ ನುಡಿಗೆಸೈರಾವೈರಾವೆಲ್ಲಸೊನೆ ಸೊನೆ........ಸನ್ನಿಹಿತನುಸೌರಸಾ(ಸುರಸ)ವಾದನುಸಂಮ್ಯಗ್ ಜ್ಞಾನವು ಬಲ್ಲಸಃ(ಸಹ)ಜಾನಂದ ತುಂಬನು ಲೌಕಿಕಕ್ಕೆ ಹರಹರಾ 29 ಹರ ಹರಾ ಎನುತಲಿ ಶಿವನಹಾಡಿಕೊಂಡೆಹಿತವು ತೋರಿತು ಘನಾಹೀ(ಹಿ)ತಕಾರಿಗೆಹುಗವರಿ ಕೇಳೊಲ್ಲಹೂ(ಹು)ಸಿಯ ತೀರ್ಥ3ಮಿಂದುಹೇತುವರ್ಜಿತನೆಂದು ಫಲವು ಕೊಂಡಹೈಯೆಂದು ನಿಂತಿತುಹೊಂಗಲ್ಲವಾ ಹಾಡುಗಳುಹಂಸ ಅರಿತುದಿಲ್ಲ ಬಲ್ಲ ತನವೇ ಹಮ್ಮು ನಡಿಯದು ಇಲ್ಲಿಹಃ(ಹಾಹಾ)ಕಾರ ಮಾಡಿದರೆ ಹಸಿದವನು ಉಣಬೇಕು ಬ್ರಹ್ಮರಸವ ಹರಹರಾ 30 ಕ್ಷಣ ಕ್ಷಣಕೆ ಶಿವನಿನ್ನಕ್ಷಾ (ಖ್ಯಾ)ತಿ ಕೊಂಡಾಡಿದಕ್ಷಿತಿಯ ಮೇಲಿಹುದುಕ್ಷೀರ ಉದಧಿಕ್ಷುದ್ರ ಕರ್ಮಿಗಳುಕ್ಷೂ(ಕ್ಷು)ದ್ರನೆ ಎನಿಸುವರುಕ್ಷೇಮ ಕಲ್ಯಾಣವ ಪಡೆಯರೆಂದೂಕ್ಷೈ(ಕ್ಷಯ) ವ್ಯಾಧಿ ಹೊಡೆದವನುಕ್ಷೋಭೆಯನು ಬಡುವನುಕ್ಷೌತಿಯನು ಕೂಡುತಿಹ ಜನ್ಮ ಜನ್ಮಕ್ಷಂ(ಕ್ಷೇ)ಮ ಸಾಯೋಜ್ಯಕ್ಕೆಕ್ಷಃ(ಕ್ಷಾ)ಳ ಸಕಲಪಾಪ ಪರಮಾತ್ಮ ಗತಿಗೆ ಕೋಪ ಪರಮ ಸಾಧು ಹರಹರಾ 31 ಅಮೃತ ಬಿಂದು ಪ್ರಕಾಶ ತಾನು ಶರಣರಿಗೆ ಇದು ಬೇಕು ಚರಣ ಸಾರಿದ ಟೀಕುಪರಬ್ರಹ್ಮದಾ ತೂರು ತೂಗಿಕೊಳ್ಳಿ 32 ಹರಹರಾ ಮಹಾದೇವ ಶಿವ ಶಿವಾ ಮಹಾದೇವಶಂಕರಾ ಮಹಾದೇವ ದೇವ ದೇವಾ ||
--------------
ನರಸಿಂಹ
ಅಚ್ಚರಿಯೊಳಚ್ಚರಿಯು ಅಚ್ಯುತನ ನಾಮವಿದು ತುಚ್ಛ ಬುದ್ಧಿಯ ಬಿಟ್ಟು ಎಚ್ಚೆತ್ತು ನೋಡೊ ಪ ನಿಧಿಯು ತನ್ನೆದುರಿಗಿರೆ ವದರಿ ದುರ್ಯೋಧನನು ಮದಡನಾದನು ಬರಿದೆ ದಳವ ಕೊಂಡು ಸದಮಲಾತ್ಮನ ದಿವ್ಯ ಪದವನರ್ಜುನ ಪಿಡಿದು ಮುದದಿ ಭಾಗ್ಯವ ಪಡೆದನದ್ಭುತವ ನೋಡ 1 ಹರಿಯ ಯೋಗದ ಸಿರಿಯು ಇರುವ ನಿಜವರಿಯದೆ ಕುರುಡನಣುಗನು ಜರಿದು ಹಾಳಾದನು ಉರುತರದ ಭಕ್ತಿಯಿಂದೆರಗಿ ಕರಗಳ ಮುಗಿದು ನರ ತನ್ನ ಹೆಸರನ್ನು ಸಾರ್ಥಕವಗೈದ 2 ನೀಚಯುಕ್ತಿಗಳಿಂದ ಗೋಚರಕೆ ಬಹನಲ್ಲ ವಾಚಾಮಗೋಚರನು ಶ್ರೀಕಾಂತನು ಕೀಚಕಾರಿ ಪ್ರಿಯನ ಶ್ರೀ ಚರಣ ಭಕ್ತಿ ಭವ-ಮೋಚನಕೆ ಸೂಚನೆಯು ಆಚರಿಸಿ ನೋಡೋ 3
--------------
ಲಕ್ಷ್ಮೀನಾರಯಣರಾಯರು
ಅಂಜನಾಸುತ ವರದ | ವಿಠಲ ಪೊರೆ ಇವನಾ ಪ ಕಂಜಜನಯ್ಯ ಹರಿ | ಸಂಜೆ ಚರಹರನೇ ಅ.ಪ. ಕರ್ಮ | ಮಾಡಿ ಮಾಡಿಸುತಾಮತಿರಹಿತ ಜೀವನಿಗೆ | ಫಲ ಎಂಬ ತೆರಮಾಳ್ವೆಕೃತುಭುಜನೆ ಈ ತರಳ | ನುದ್ಧಾರಗೈಯ್ಯೊ 1 ಆದ್ಯಂತರಹಿತ ಸ | ದ್ಬುದ್ಧಿಗಳ ಪ್ರೇರಕನೆಶ್ರ್ರದ್ಧಾಳು ಎನಿಸಿವನ | ಮಧ್ವಮತದಲ್ಲೀಪದ್ಧತಿಯ ಪ್ರಕಾರ | ಬದ್ದನಾಗಿಹದಾಸಶುದ್ಧ ದೀಕ್ಷೆಯಲಿವನ | ಉದ್ಧರಿಸೋ ದೇವ 2 ಉತ್ತಮಾಧಮರೆಂಬ | ತತ್ವ ತರತಮ ತಿಳಿಸಿಆರ್ಥಿಯಿಂದಿವನ ಭಾವ | ಉತ್ತರಿಸೊ ಹರಿಯೇ |ಕತೃ ಸರ್ವಕೆ ನೀನೆ | ಅತ್ಯಂತ್ಯ ಆಪ್ತ ತಮಮತ್ತೊಬ್ಬರಿಲ್ಲಿವಗೆ | ಸ್ತುತ್ಯ ಶ್ರೀಹರಿಯೇ 3 ಕಂಸಾರಿ ತವತಾಮಶಂಸನಕೆ ಎಡೆಗೊಟ್ಟು | ಸಲಹ ಬೇಕಿವನಾಅಂಶ ಅವತಾರಗಳ | ಶಂಸನದಿ ತವಪಾದಪಾಂಸುವನೆ ಭಜಿಪಂಥ | ಸನ್ಮತಿಯನೀಯೊ 4 ಸತ್ಸಂಗ ದೊರಕಿಸುತ | ಕುತ್ಸಿತರ ದೂರಗೈಮತ್ಸ್ಯಧ್ವಜ ಪಿತ ಶ್ರೀ | ವತ್ಸಲಾಂಛನನೇನಿತ್ಯ ತವ ಸಂಸ್ಮರಣೆ | ಇತ್ತುಪಾಲಿಪುದಿವನಚಿತ್ಸುಖಪ್ರದ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ಪ. ಕುಂಜರಗಮನೆ ಕಮಲಾಕ್ಷಿಕುಂಜರಗಮನೆ ಕಮಲಾಕ್ಷಿ ದ್ರೌಪದಿಅಂಜಬ್ಯಾಡ ಅಭಯಕೊಡತೇವ1 ಭಯವುಳ್ಳ ಬಾಲೆ ನೀ ಐವರಿಗೆ ಇಂತಿಪ್ಪೆಸೈವಲ್ಲದ ಮಾತು ಜಗಕಿದುಸೈವಲ್ಲದ ಮಾತು ಜಗಕಿದು ಈ ನಡೆತೆನಯವಲ್ಲವೆಂದು ನಗುತಾರೆ2 ಲೋಕದೊಳೊಬ್ಬಳಿಗೆ ಏಕಪತಿಯುಂಟುಏಕಕಾಲದೆ ಐವರ ಏಕಕಾಲದಲೆ ಐವರನ ಕೂಡೋದುನಾ ಕಾಣಿನೆಲ್ಲೂ ಕೌತುಕವ3 ಕೆಂಡವ ತುಂಬಿದ ಕುಂಡದಿ ಪುಟ್ಟಿದಿಕಂಡ ಜನಕೆಲ್ಲ ಭಯವಾದಿಕಂಡ ಜನಕೆಲ್ಲ ಭಯವಾದಿ ಭೀಮಸೇನನಿನ್ನ ಗಂಡ ಎಂಥ ಎದೆಗಾರ4 ಎಲ್ಲ ನಾರಿಯರೊಬ್ಬ ನಲ್ಲನಬೆರಿಯೆಬಲ್ಲಿದ ಭೂಪ ರೈವರುಬಲ್ಲಿದ ಭೂಪರೈವರ ನೊಲಿಸಿದಿಎಲ್ಲರಂತಲ್ಲ ಬಲುಧೀರೆ 5 ಪಲ್ಯಾದ ತುದಿಯಿಂದ ಎಲ್ಲ ಪದಾರ್ಥಮಾಡಿಬಲ್ಲಿದ ಮುನಿಗೆ ಉಣಿಸಿದಿಬಲ್ಲಿದ ಮುನಿಗೆ ಉಣಿಸಿದಿ ಇಂದ್ರÀಜಾಲಬಲ್ಲವಳಿಗಿಂಥ ಭಯವುಂಟೆ6 ಕೇಳ ದ್ರೌಪತಿ ರಾಜ್ಯವಾಳೊಗಂಡನ ಕೈಲೆಲಾಳಿ ತಕ್ಕೊಂಡ ಪರಿಯಂತೆಲಾಳಿ ತಕ್ಕೊಂಡ ಪರಿಯಂತೆ ಈ ನಡತೆಕೇಳಿದವರೆಲ್ಲ ನಗುತಾರೆ 7 ಅತ್ತೆಯ ಮಗ ನಿನ್ನ ಅತ್ಯಂತ ನಗೆನೋಡಿತಪ್ತವಾಗೊಮ್ಮೆ ತಿರುಗಿದತಪ್ತವಾಗೊಮ್ಮೆ ತಿರುಗಿದ ದ್ರೌಪತಿಮತ್ತಾರೆ ಬುದ್ಧಿ ಬರಲಿಲ್ಲ8 ಅರಸನ ಮಡದಿ ಒಬ್ಬ ಅರಸನ ಮನೆಯಲ್ಲಿನಿರುತ ದಾಸಿಯೆಂದು ಇರುತಲೆನಿರುತ ದಾಸಿಯೆಂದು ಇರುತಲೆ ಸೇವಿಸೋದುಈ ಸರಸ ರಮೇಶಗೆ ಹರುಷೇನ9
--------------
ಗಲಗಲಿಅವ್ವನವರು
ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು ಪ ಅಂಜಿಸೊದ್ಯಾಕ‌ಘ ಭಂಜಕನೆನಿಸಿ ನೀ ಕಂಜನಾಭನ ಭಕ್ತಿ ಪಂಜರದೊಳಿಡದೇ ಅ.ಪ ಹೊಂದÀದೀ ನರಜನ್ಮವ ಇಂದಿರೇಶನು ಎಲ್ಲ ಹೊಂದೀ ಹೊದರಿಯದ ಮಂದಮತಿಯನು 1 ಬಿಂಬ ಮೂಡಲು ಪ್ರತಿಬಿಂಬ ಮಾಡುವುದೆಂದು ಶಂಬರಾರಿಯ ಪಿತನ ನಂಬದ ಢಂಬಿಯೊಳಂ ಜಿಸೋದ್ಯಾತಕಯ್ಯಾ2 ಶ್ರೀ ನರಹರಿಪಾದ ಧ್ಯಾನವ ಮಾಡದೆ ಬುದ್ಧಿ ಹೀನನಾದವಗೆ ಸುಜ್ಞಾನ ಕೊಡದೆ ಸುಮ್ಮನಂ ಜಿಸೋದ್ಯಾತಕಯ್ಯಾ 3
--------------
ಪ್ರದ್ಯುಮ್ನತೀರ್ಥರು
ಅಜ್ಞಾನಿ ಜೀವನಿಗೆ ಅಭಿಮಾನ ಬಹಳ ಸುಜ್ಞಾನಿಯಾ ನುಡಿಯ ಲಕ್ಷಿಸನು ಕೇಳಾ ಪ ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ ಇದ್ದುದನು ಮರೆತು ತಾ ಜಾಣನೆನಿಸುವನು ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು ಗುದ್ದಾಡುತಲಿ ತಾನು ಸುಖವ ಹುಡುಕುವನು 1 ಸಟಿಯಾದ ಸಂಸಾರ ದಿಟವೆಂದು ನಂಬುತಲಿ ಸೆಟೆದಾಡುತಿರುವೆಯೋ ತಿಳಿದು ನೋಡಾ ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು ನಟನೆಯಾ ಮಾತಲ್ಲವೆನೆ ಕೇಳನವನು 2 ಅರಿ ನೀನು ನಿನ್ನ ಅರಿವಿನಾ ಹೊರತು ನೀ ಸುಖ ಪೊಂದಲಾರೆ ಆರು ಸುಖಪಡೆದಿಲ್ಲ ಅಜ್ಞಾನದಿಂದೆನಲು ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ 3 ಬಾಳುವೆಯು ನಿಜವೆಂದು ನಂಬಲಿವನಾ ಗೋಳು ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು ಮೇಲೆ ನೀರೆರೆದಂತೆ ಎನೆ ಕೇಳನವನು 4 ಗೊಡ್ಡು ಮಾತೆಂದು ತಾ ಜ್ಞಾನಕೆರವಾಗುತಲಿ ದಡ್ಡತನವನೆ ತೋರಿ ದುಃಖಿಯಾಗುವನು ಶುದ್ಧಜ್ಞಾನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು 5
--------------
ಶಂಕರಭಟ್ಟ ಅಗ್ನಿಹೋತ್ರಿ
ಅಥ ಹನುಮದ್ವ್ರತ ಕಥಾ ಸುಳಾದಿ ಧ್ರುವ ತಾಳ ವೃತವೆ ಉತ್ತಮ ವೃತವೆಂದು ಪೇಳಿಹರು ಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳು | ಸತತ ಅಧ್ಯಾತುಮ ಅನಂತ ವೃತವೆಂದು | ಕ್ಷಿತಿಯೊಳು ಈ ವೃತಕೆÀ ಸರಿಗಾಣೆನೊ | ಪತಿತ ಮಾನವರ ಉದ್ಧಾರಗೋಸುಗವಾಗಿ ದ್ವಿತಿಯ ಉತ್ತಮ ವೃತವು ಹನುಮದ್ಪ್ರತವೂ | ಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತ | ಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯವೃತವೊ | ಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದು | ಮತಿವಂತರು ಮನಕೆ ತಂದು ತಿಳಿದು | ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವೃತವೊ | ಪತಿಭಕುತಿಯುಕುತಳಾದ ದ್ರೌಪದಿಯು | ಪತಿ ಮೂರ್ಲೋಕದ ಶ್ರೀ ಕೃಷ್ಣನುಪದೇಶದಂತ್ಯೆ | ಮಿತ ಜ್ಯಾನದಿಂದ ಚರಿತ ವ್ರತವೊ | ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಆ | ಚ್ಯುತನಾದ ರಾಮನುಮತಿವಾನ್ ಹನು | ಮಂತನ ಭಕುತಿಗೊಲಿದು ಮಾಡ್ಡ ವೃತವೊ | ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ | ಮಿತಿ ಇಲ್ಲದೇ ಪೇಳಿ ಮಾಡಿಸಿದ ವೃತವೊ | ವೃತತಿಜಾಸನ ಪ್ರಿಯ ಸುತ ಸುಂದರ ವಿಠಲನ ಭ | ಕುತಿ ಜ್ಞಾನವೀವ ಮಹಾ ಶ್ರೇಷ್ಠ ವೃತವೊ 1 ಮಟ್ಟತಾಳ ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು | ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ | ಮೇಣು ಭಕುತಿಯಿಂದ ಙÁ್ಞನವಂತರೆ ನಿಮ್ಮಿಂ | ನಿತ್ಯ | ಧೇನಿಸುವೆವು ಹರಿಯಾ ಪುನೀತರ ಮಾಡುವಾ | ಕಾಣೋವನ್ಯ ವೃತವು ಆವುದುಪೇಳೆನಲು | ನಿತ್ಯ ಶೂದ್ರಾದಿ ನಾಲ್ಕು | ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ | ಏನು ಬೇಡಿದರೆ ತಡಿಯದೆ ಕೊಡುವುದೊ | ಜ್ಞಾನಿ ಜನಗಳಿಗೆಲ್ಲ ಮಂಗಳತಮ ವೃತವು | ಪುತ್ರಾದಿಗಳೀವುದು ಶ್ರೇಣಿ ದಿನ ಪ್ರತಿ ದಿನದಲ್ಲಿ ವರವಿದ್ಯ ಪ್ರದವೊ ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ | ಮಾನನಿಧಿ ಸುತ ಸುಂದರ ವಿಠಲನ | ಧ್ಯಾನ ಧಾರಣವೀವ ಉತ್ತುಮಾಮಹವೃತವೊ 1 ರೂಪಕ ತಾಳ ಒಂದಾನೊಂದು ಸಮಯದಲ್ಲಿ ಶ್ರೀ ವ್ಯಾಸ ಶಿಷ್ಯ | ವೃಂದದಿಂದೊಡಗೂಡಿ ಯುಧಿಷ್ಠರನ ನೋಡಲು | ಅಂದುಳ್ಳ ದ್ವೈತ ವನಕೆ ನಡೆತಂದರು ಏನಂಬೆ | ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ | ಕುಂದ ಮಂದಾರಾದಿ ಪುಷ್ಪಫಲ ವೃಕ್ಷಗಳಿಂ ಶೋಭಿಪ | ಕುಂದು ದೂರೋಡಿಸಿದ ಜ್ಞಾನಿಗಳ ಸಮೂಹವು | ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ | ಮುಂದೆ ಅಧ್ಯಯನ ಶ್ರುತಸಂಪನ್ನರಾದವರು | ಒಂದೊಂದು ವೇದ ಋಗು ಯಜು:ಸಾಮಾಥರ್ವಣ ಒಂದೋಂದು ಶಾಖಾಶಾಸ್ತ್ರದಿ ಪ್ರವಚನಾಸಕ್ತರು | ಮಿಂದು ಹರಿಪದಜಲದಿ ಚತುರ ವೇದ ಘೋಷದಿ | ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ | ಎಂದೆಂಬುವ ಹರಿಕಥಾಮೃತ ಪಾನ ಮಾಡುವ | ಸಂದೋಹ ಮುನಿಗಳಿಗೆ ನಿತ್ಯನ್ನದಾನವ ಮಾಡಿ | ಬಂಧುಗಳಿಂ ಸಹಿತ ಇರುವ ಯುಧಿಷ್ಟರನನ್ನು | ಸುಂದರ ವಿಠಲಾತ್ಮಕ ವ್ಯಾಸದೇವನು | ಅಂದು ದ್ವೈತವನದಲ್ಲಿ ಕೃಪಾ ದೃಷ್ಟಿಯಿಂದ ನೋಡಿದನು 3 ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ | ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ | ಜೇಷ್ಠನಾದ ಯುಧಿಷ್ಠರನು ತಾ ದೂರ ನಡೆತಂದುವಾ | ಸಿಷ್ಟ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ | ರ್ದಿಷ್ಟವಾದೆಕಾಂತ ಸ್ಥಳಕೆ ಕರೆತಂದು | ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ | ಜೇಷ್ಟಾದಿಕೃಷ್ಣೇಯೊಡನೆ ಉತ್ಕøಷ್ಠ ಪೂಜೆಯ ಮಾಡೆ ಪರ ಮೇಷ್ಠಿ ಜನಕನು ತಾನು ತುಷ್ಟ ನಾಹೆ | ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ | ರ್ದುಷ್ಟ ಭೀಮಾರ್ಜುನರೆ ಅಶ್ವಿನಿಯರೇ ಮನ | ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೇ? ಧಿಟ್ಟತನದಲೆ ತಪವನೆಸಗಿ ಕಿರಿಟಯು | ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು | ತ್ಕøಷ್ಟಾಸ್ತ್ರ ಸಂಪಾದನೆಯ ಮಾಡಿದದು ಕೇಳಿ | ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ | ಕಷ್ಟಬಡುತಿರುವ ನಿನ ದುಃಖ ಶಾಂತ್ಯರ್ಥ | ಇಷ್ಟವೀವುದಕಾಗಿ ಬಂದಿಹನು ರಾಜಾಯು | ದ್ಯಿಷ್ಟರನೆ ಕೇಳುತ್ತಮ ವೃತವು ನಿನಗೋಸುಗ | ನಿಷ್ಠಿಯಿಂದಲಿ ಧರ್ಮತನಯ ನುಡಿದನು 4 ತ್ರಿವಿಡಿ ತಾಳ ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ | ನಮೊ ನಮೊ ನಮೊ ಎಂದು ಬಿನ್ನೈಸುವೆ | ಶ್ರಮ ಪರಿಹರವೃತವಾವುದದÀರ ಮಹಿಮೆ | ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ | ಕುಮತಿ ಪರಿಹರಿಸುವ ದೇವತೆ ಆರು ಉ | ತ್ತಮ ನಿಯಮ ಆವುದು ಪೂಜಾ ಕ್ರಮವು | ಶಮೆ ದಮೆವೀವ ನಿಯಮ ತಿಥಿ ಆವುದು | ರಮೆ ರಮಣನೆÉ ಆವ ಮಾಸದಲಿ ಮಾಡೋದು | ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ | ಗಮನವು ಎಮ್ಮಯ ಕಷ್ಟ ದೊರೋಡಿಸಲು | ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ | ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು | ಭ್ರಮಣ ಮತಿಯ ಕಳೆವ ಹನುಮಾನ್ ಹ ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು | ಆಮಮ ಪೇಳಲೇನೊ ಹನುಮದ್ವ್ರತವೋ | ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ | ಸಮಸ್ತ ಕಾರ್ಯ ಸಿದ್ದಿಪದು ಸಂಶಯ ಬ್ಯಾಡಿ | ಆ ಮಹಾ ದುಷ್ಟ ಗ್ರಹೋಚ್ಛಾಟನ ಜ್ವರಾದಿ | ತಾಮಸ ರೋಗ ನಿವರಣವಾಗುವದು | ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ? ಸೀಮೆಗಾಣದ ಅಭೀಷ್ಟಪ್ರದಾಯಕವೊ ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ ಶ್ರೀ ಮದ್ವಿಷ್ಣುವೆ ಕೃಷ್ಣ ಪಾಂಚಾಲಿಯನಿ ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ ನುಮದ್ವ್ರತವನ್ನು ಉಪದೇಶಿಸಿ | ನೇಮದಿಂದಲೀ ವ್ರತವು ಮಾಡಿರೆನಲು ಕಾಮಿತಫಲವೀವಾ ವ್ರತದ ಮಹಿಮೆ ಆ | ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯದಿ ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ | ಈ ಮಹಾ ವೃತ ಮಹಿಮೆ ತಿಳಿಯದ ಪಾರ್ಥನು ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ ಹೇ ಮಹಿಷಿಯೆ ಇದೆನೆನ್ನಲಾಗಿ | ತಾಮರಸನಯನೆ ಶ್ರೀ ಹನುಮದ್ದೋರವನ್ನೆ | ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ | ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ | ಕಾಮಿತ ಫಲ ಕೊಡಬಲ್ಲದೆ ಕೇಳಿನ್ನು ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು ಕಾಮಿ ಜನರ ತೆರದಿಂದಲಿ ಅರ್ಜುನನು ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ ಆ ಮುದದ ದೋರವನು ಹರಿದು ಬಿಸಾಟಲು ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ | ಶ್ರಿಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು | ಪರಿಯಂತ | ರಾಮ ಮನೊರಮನು ಇನಿತು ನುಡಿಯೆ | ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು | ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು 5 ಧ್ರುವ ತಾಳ ಕೇಳಯ್ಯಾ ಧರ್ಮರಾಜ ಆಲಸ ಮಾಡದೆ | ಪೇಳುವೆ ನಿನಗೊಂದು ಪುರಾತನ ಕಥೆಯು | ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು | ಶೀಲೆ ಸೀತೆಯ ನೋಡುವ ಇಚ್ಛಾಉಳ್ಳ ಮಾ ನಿತ್ಯ ಲಕ್ಷ್ಮಣನೊಡಗೂಡಿ | ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ ಹಾಳ ಮತಿಯುಳ್ಳ ವಾಯುಜ ಮಾಡಿಸೆ | ಮಾಸ ಮಳೆಗಾಲವು ವಾಸ ಮಾಡ್ಡ | ಕಾಲದಲಿ ಹನುಮನು ರಾಮದೇವಗೆ ನಮಿಸಿ | ನೀಲ ಮೇಘ ಶ್ಯಾಮ ಶ್ರೀ ರಾಮ ನೀನಿನ್ನ | ಬಾಲನ ಬಿನ್ನಪ ಮನಕೆ ತರಲು | ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ ಮೇಲುಸಿಲೆಯನದ್ಧರಿಸಿದ ಶ್ರೀರಾಮ ನೀನಙ್ಞನೆ | ಕಾಲ ಜನನದಲಿ ಇಂದ್ರನಿಂದಲಿ ಎನ್ನ ಮೇಲಾದ ವಜ್ರಾಯುಧದಿಂದ ಹನುಘಾತಿಸಲು ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗಿ | ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ | ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು | ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ | ಈ ಲೀಲೆಯ ತಿಳಿದು ಲೋಕ ಶಿಕ್ಷಣ ಗೋಸುಗ | ಕಾಲವಜ್ರಾಯುಧದಿಂದ ಹೊಡೆಯಲು ಮೂರ್ಛಿತ | ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ | ಲೋಲನ ಸಖನಾದ ವಾಯುದೇವನು ಎನ್ನ | ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ | ಕಾಲನಾಮಕ ಭಗವಾನಿಚ್ಛೆಯಂತ ತೃಟಿ | ಕಾಲಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ | ಲೋಲನಿಂದನ್ನ ಪುತ್ರನ ಕೆಡಹಿರಲವನನ್ನು ಈ | ಕಾಲಲವದಲ್ಲಿ ಕೆಡಹೆನೆನಲು ಆ | ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ | ಓಲೈಸಿ ಪೆಳ್ದ ಮಾತು ಎನಗೋಸುಗ ಆಂಜನೇಯಾ | ಬಾಲನೆ ಚಿರಜೀವಿಯಾಗು ನೀನೆ ಪರಾಕ್ರಮಿ | ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ | ಬಾಲ ಹನುಮನ ಪೂಜೆ ಮಾಡ್ಡರು ದೇವತೆಗಳು | ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ | ಕಾಲ ಅಭಿಜಿನ್ ಮೂಹೂರ್ತದಲ್ಲಿ ಆರು ಪೂಜಿಪರೊ | ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು | ತಾಳ ಮ್ಯಾಳರೊಡನೆ ವರವ ನೀಡಿ ಪೋದರು | ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ | ಪೇಳೆ ಸುಂದರ ವಿಠಲ ರಘುರಾಮನು ನಸುನಗೆ | ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು 6 ಮಟ್ಟತಾಳ ಭಕುತ ವತ್ಸಲ ನೀನು ಭಕುತರಿಚ್ಛವ ನೀನು | ಭಕುತ ಭಾಂಧವ ನೀನು ಭಕುತರೊಡಿಯ ನೀನು | ಭಕುತ ಪಾಲಕನೆಂಬ ಬಿರುದುಳ್ಳವ ನೀನು | ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು | ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ | ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು | ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ ವ್ಯಕುತವಾಗ್ವದು ಸತ್ಯ ಸರ್ವಙ್ಞನು ನೀನು | ಭಕುತರ ಮನದಿಂಗಿತ ತಿಳಿಯದವನೆ ನೀನು | ಅಖಿಳ ಬ್ರಹ್ಮಾಂಡÀರಸನೆ ನಮೊ ನಮೊ ನಮೊ ನಮೊ | ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು | ಭಕುತರು ನಿನ್ನಿಂದಲೆ ಕೀರ್ತಿವಂತರÀಹರು | ಅಕುಟಿಲ ಪ್ರಭೋ ನೀನು ನಾ ನಿನ ನಿಜ ಭಕ್ತ | ಸಕಲ ಕಾಲದಲ್ಲಿ ನಿನ್ನನಾ ಮರೆಯದಲೇ | ಮಾಳ್ಪದು ನಿಜವಾಗೆ | ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ | ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ | ಭಕುತ ಹನುಮಂತ ಇನಿತು ವಿಙÁ್ಞಪಿಸಿ ನಿಲಲು | ಪ್ರಕಟಿತ ಅಶರೀರ ವಾಕ್ಯವು ಬಿಡದಲೆ | ಸಕಲ ನುಡಿ ಹನುಮಾ ಸತ್ಯನಾಡಿದನೆನಲು | ಸುಕರ ಏಕಮೇವ ದ್ವಿತಿಯ ಸುಂದರವಿಠಲ ತುಷ್ಟನಾಹೆ 7 ಝಂಪಿತಾಳ ಮಾಸಮಾರ್ಗಶೀರ್ಷ ಶುದ್ಧ ತ್ರೊಯೋದಶಿ | ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ | ಶ್ರೀಶರಾಮನು ಹನುಮದ್ವ್ರತವ ಮಾಡ್ಡ ತ್ರಯೋ | ದಶ ಗ್ರಂಥಿüಯುತ ಹರಿದ್ರಾದೋರಗಳಲಿ | ಭಾಸುರಾಮತಿವೀವ ಹನುಮನಾವ್ಹಾನಿಸಿ | ಪೇಶಲಾಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ | ಶ್ರೀಸೀತೆವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ | ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದನೇನೆಂಬೆ | ಲೇಶಬಿಡದೇ “ಓಂ ನಮೋಭಗವತೇ ವಾಯುನಂದನಾಯ” | ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ಡನೋ | ದೇಶಪರಿಮಿತ ಪ್ರಸ್ಥತ್ರಯೋಶಗೋಧೂಮವನು | ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತದಾನ | ಮೀಸಲಾ ಮನದಿ ಈ ಸತ್ಕಥೆಯನು ಕೇಳಿ | ಭೇಶಮುಖಿ ಸೀತಿಯಳ ಕೊಡ್ದನೆಂಬದು ಖ್ಯಾತಿ | ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ | ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ | ತೋಷದಲಿ ವಿಭೀಷಣ ಶ್ರೀರಾಮನಾಙÉ್ಞಯಿಂ ಮಾಡ್ಡು | ದೇಶಲಂಕೆಯ ರಾಜ್ಯವನು ಪಡೆದನು | ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ | ಲೇಸುವಿಶ್ರುತವಾದಿತೈ ಹನುಮದ್ವ್ರತವೂ | ಪರಿಯಂತ ಮಾಡ್ಡುದ ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೆ | “ಮಾಸಾನಾಂ ಮಾರ್ಗಶೀರ್ಷೋಹಂ” ಎಂದು ಗೀತೆÀಯಲಿ ಆ ಸ್ವಾಮಿ ದಿವ್ಯನುಡಿಯುಂಟು ಕೇಳ್ ಧರ್ಮಜನೆ | ಸ್ತ್ರೀಸಹಿತ ಅನುಜರೊಡನೇ ಈ ವ್ರತವನು | ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ | ಕೋಶ ಭಾಂಡಾರಪ್ರಾಪ್ತಿಯಾಗುವದು | ಲೇಶ ಸಂಶಯ ಬ್ಯಾಡೆನಲು ಶ್ರೀ ವ್ಯಾಸ | ಆ ಸುಂದರ ವಿಠಲನ ಭಕುತರು ಮುದಭರಿತರಾಗೆ 8 ರೂಪತಾಳ ರವಿಯು ವೃಶ್ಚಿಕ ರಾಶಿಗೆ ಬರಲಾಗಿ | ಸವೆಯಾದ ಪದವೀವ ವ್ರತವಮಾಡುವದಕ್ಕೆ | ಕವಳಾ ಅಜ್ಞಾನಾಖ್ಯ ರಾತ್ರಿಕಳೆದು | ಸುವಿಮಲಾಜ್ಞಾನಾಖ್ಯ ಪ್ರಾತಃ ಕಾಲದಲೆದ್ದು | ಕವಿವ್ಯಾಸರ ಮುಂದೆ ಮಾಡಿ ಧರ್ಮಜನು | ಸುವಿವೇಕಬುದ್ಧಿಯಿಂ ಸ್ನಾನಾದಿಗಳ ಮಾಡಿ | ಹವಿಷಾದಿ ದ್ರÀ್ರವ್ಯಗಳಲಿ ಹರಿಯಚಿಂತಿಸಿ ಮಾ | ಧವÀನಾಜ್ಞೆಯಂತೆ ಉದ್ಯಾಪನವಂಗೈದು | ಕವ್ಯವಾಹನನಲ್ಲಿ ಮೂಲಮಂತ್ರದಿಂದ | ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ | ನವಭಕುತಿಯಲಿ ಹನುಮಂತನ ವ್ರತಾಚರಿಸಲು | ಹವಣಿಸಿ ಸಂವತ್ಸರವು ಪೋಗಲು ಪಾಂಡವರು | ಬವರದಲ್ಲಿ ಕೌರವರಗೆ
--------------
ಸುಂದರವಿಠಲ
ಅಂದಾರಮ್ಮಾ ಆ ನಾರಿಯರು ನನ್ನಂದಾರಮ್ಮಾ ಪ ಗೋಪಾಲನೆಲ್ಲಾ ಸೂರೆಗೊಂಬುವೆ ನಂತೇ ಕುಡಿದು ಗಡಿಗೆಯ ಒಡೆದು ತೂತು ಮಾಡಿದೆನಂತೆ 1 ನಾರೀಮಣಿಗಳೆಲ್ಲ ನೀರಿಗೆ ಪೋಪಾಗ ದಾರಿಗಡ್ಡವಕಟ್ಟಿ ಒಳ್ಳೆ ಬುದ್ದಿ ಇಲ್ಲಾವಂತೇ ಯನ್ನ ಹೋಗ್ಹೋಗಂದರಮ್ಮಾ2 ಕಟ್ಟಿ ಬರಿದ ಬಾಧಿಸುವರೇ ಸುಳ್ಳಾಡಿ ಕೊಂಬೋರೆ 3 ಮುದ್ದು ಮಾಡಿದಿಯಂತೆ ಬುದ್ಧಿ ಕಲಿಸಲಿಲ್ಲವಂತೆ ಮೊಸರು ಬೆಣ್ಣೆಗಳನು ಮೆದ್ದು ಓಡುವೆನಂತೆ 4 ಮಡುವನ್ನಾದರು ಪೋಗಿ ಧುಮುಕುವೆನೇ ತಾಯೆ 5
--------------
ರಾಧಾಬಾಯಿ
ಅದು ನಿರಾಲಂಬ ಅದು ನಿರಾಲಂಬಅದು ನಿರಾಲಂಬ ಕೇಳದು ನಿರಾಲಂಬ ಪ ತನು ಹಂಗು ಇಲ್ಲದೆ ಮನ ಹಂಗು ಇಲ್ಲದೆತನಗೆ ತಾನಿಹುದದು ನಿರಾಲಂಬ 1 ಬುದ್ಧೀಂದ್ರಿಯಕೆ ಅತ್ತ ಅಹಂಕಾರಕೆ ಅತ್ತಸುದ್ದಿಲ್ಲದಹುದದು ನಿರಾಲಂಬ 2 ಇಂದ್ರಿಯಕೆ ನಿಲುಕದೆ ಇಂದ್ರಿಯಕೆ ಸುಖಿಸದೆಇಂದ್ರಿಯಗಳರಿಯದುದು ನಿರಾಲಂಬ3 ಅರಿವುದು ಕಾಣದೆ ಮರೆವುದುತೋರದೆ ಅದು ಚಿದಾನಂದ ಅದು ನಿರಾಲಂಬ 4 ಬಹಿರಂತಲ್ಲದೆ ಬೇರೆಂಬುದಿಲ್ಲದೆಮಹಾ ಬೆಳುದಿಂಗಳದೆ ನಿರಾಲಂಬ 5
--------------
ಚಿದಾನಂದ ಅವಧೂತರು
ಅದ್ಭುತ ಅದ್ಭುತ ಪರಮಾದ್ಭುತನೆ ಪ ಮಧ್ವರ ಚರಣದಿ ಬಿದ್ದ ಜನರಪರಿ ಶುದ್ಧಗೈದು ಸುಖ ಸಿದ್ಧಿಗೊಳಿಪ ಹರಿ ಅ.ಪ ಅನವದ್ಯ ಪರಾತ್ಪರ ಶುದ್ಧ ಸುಖಾತ್ಮಕ ಕದ್ದನೆ ಬೆಣ್ಣೆಯನು ಮಧ್ವರ ದೇವನು ಪದ್ಮಾಲಯ ಪತಿ ಸಿದ್ಧಿ ಸುವಂದಿತ ಕದ್ದನೆ ಕನ್ಯೆಯನು 1 ಮೇದಿನಿ ತಂದವ ಮೇದಿನಿ ಅಳಿಯನೆ ವೇದವ ತಂದವ ವೇದಸು ಬÉೂೀಧಕ ಬುದ್ಧನು ಆಗುತ ವೇದವ ನುಳುಹಿದನೆ 2 ಸತ್ಯವತೀ ಸುತ ಸತ್ಯನ ಸತ್ಯನು ಬತ್ತಲೆ ನಿಲ್ಲುತ ಸತಿಯರ ಕೆಡಸಿದನೆ ಕತ್ತಲೆ ಕಾಣದ ಉತ್ತುಮ ದೇವನು ಮಿಥ್ಯಾಜ್ಞಾನವ ಬಿತ್ತಿದನೆ 3 ಅನ್ನಾದನ್ನನು ಅನ್ನದ ಬೃಹತೀ ಅನ್ನನು ಸತಿಯರ ಅನ್ನವ ಬೇಡಿದನೆ ಉಣ್ಣದೆ ರಾಜನ ಅನ್ನವ ವಿದುರನ ಅನ್ನವ ನುಂಡನು ಸಣ್ಣವನೆನ್ನದಲೆ 4 ನಿಂದೆಯ ಸುರಿಸಿರೆ ನಂದವ ನೀಡಿದ ವಂದಿಸಿ ರಾಜ್ಯವ ಮುಂದಿಡೆ ಜರಿದವನೆ 5 ಅಣ್ಣನ ಕೊಂದು ತಮ್ಮನ ಸಲಹಿದ ಸಣ್ಣನು ತಮ್ಮನ ಅಣ್ಣನ ಮಾಡಿದ ಅಣ್ಣ ತಮ್ಮಂದಿರ ನುಣ್ಣಗೆ ಸವರಿದ ಅಗಣ್ಯ ಮಹಿಮ ಮೈಗಣ್ಣಗೆ ವಲಿದಿಹನೆ 6 ಭಾರೀ ಗಿರಿಧರ ನಾರಿಯು ಆದನು ಮಾರನ ಪಡೆದವ ನಾರೇರಿ ಗೊಲಿದನೆ ನಾರಿಯು ಮೊರೆಯಿಡೆ ಸೀರೆಯ ಕರೆದವ ಜಾರನು ಎನಿಸುತ ಶೀರೆಯ ಚೋರನೆ 7 ಇಲ್ಲಿಹೆ ಅಲ್ಲಿಹೆ ಎಲ್ಲಾಕಡೆಯಿಹ ಎಲ್ಲರ ಒಳಗಿಹ ಎಲ್ಲರ ಹೊರಗಿಹ ಎಲ್ಲವ ಬಲ್ಲನು ಬಲ್ಲ ವರಿಲ್ಲವೆ 8 ಅಣುಕಿವÀ ಅಣುತಮ ಘನಕಿವ ಘನತಮ ಅಣು ಘನ ಮಾಡುವ ಘನ ಅಣುಮಾಡುವ ಅಣುವಲಿ ಅಡಗಿಪ ಘನವನು ಬಲ ಬಲ ತೃಣ ಸಹ ಚಲಿಸದು ಚಿನುಮಯ ನಿಲ್ಲದೆ 9 ಜಾಗರ ಸ್ವಪ್ನ ಸುಷುಪ್ತಿಗಳೆಲ್ಲವ ಆಗಿಸಿ ಕಾಯುವ ಯೋಗಸು ಭೋಕ್ತನು ಬೀಗರ ಮನೆಯಲಿ ಸಾಗಿಸಿ ಯಂಜಲ ತೇಗಿದ ತಿನ್ನುತ ಶಾಖವ ನಿಜಕರುಣಿ 10 ಲೋಕವ ಸೃಜಿಸುವ ಲೋಕವ ನಳಿಸುವ ಲೋಕನು ಪಾಲಕ ಲೋಕ ವಿಲಕ್ಷಣನೆ ನಾಕರ ನಾಯಕ ನಾಕಗತಿ ಪ್ರದ ಶೋಕವಿದೂರಗೆ ತಾಕಿತು ಕೊಡಲಿ ಬತ 11 ಎಲ್ಲಾ ನಾಮವು ಇವನದೆ ಸರಿಸರಿ ಎಲ್ಲಾ ರೂಪವು ಕೂಡ್ರವ ದಿವನಿಗೆ ಎಲ್ಲಾ ಚೇತನ ಜಡದಿಂ ಭಿನ್ನನು ಎಲ್ಲಾ ಕಾಲದಿ ಒಂದೇ ಸಮನಿಹ 12 ಎಲ್ಲಾ ರೂಪಗಳೊಂದೇ ಸಮ ಬತ ಎಲ್ಲಾ ರೂಪದನಂತ ಗುಣಂಗಳು ಎಲ್ಲಾ ರೂಪವು ನಿತ್ಯಸು ಪೂರ್ಣವು ಎಲ್ಲಾ ಮಹಿಮೆಯ ಯಾರು ಕಾಣರು 13 ಜೀವರ ಬಿಂಬನು ಜೀವನ ಸಹವಿಹ ಜೀವರಿ ಗುಣಿಸುವ ಸುಖ ದುಃಖಂಗಳ ಸಾರ ಸುಭೋಕ್ತನು ಜೀವರಿ ಗಲ್ಲವೆ ಕರ್ಮದ ಲೇಪವು 14 ಅಗಣಿತ ಮಹಿಮನು ನಗೆಮೊಗ ಶ್ರೀ ಕೃಷ್ಣವಿಠಲ ಪರಾತ್ಪರ ಸಿಗುವನು ಭಕ್ತಿಗೆ ಸರಿಮಿಗಿಲಿಲ್ಲವೆ ಬಗೆಯನೆ ದೋಷವ ಶರಣೆಂದವರ15
--------------
ಕೃಷ್ಣವಿಠಲದಾಸರು
ಅಧ್ಯಾಯ :ನಾಲ್ಕು ಪದ್ಯ ಮುಂದೆ ತ್ರೇತಾಯುಗವು ಬಂದಂಥ ಕಾಲದಲಿ ಇಂದಿರೇಶನು ರಾಮಯೆಂದು ದಶರಥನಲ್ಲಿ ಕಂದನಾಗ್ಯವತರಿಸಿ ತಂದೆ ಆಜ್ಞದಿ ಸೀತೆಯಿಂದ ಲಕ್ಷ್ಮಣನಿಂದ ಚಂದಾಗಿ ಬಡಗೂಡಿ ವನ ಚರಿಸಿ ಬಂದ ಯಮುನಾದ್ರಿಯಲಿ ನೊಂದು ನೀರಡಿಸಿ ತನ್ನ ಬಾಣದಿಂದ ಭೇದಿಸಿದಾ|| 1 ತಡವು ಇಲ್ಲದೆ ಭೂಮಿ ಒಡೆದು ಬಂದಿತು ಆಗ ಕಡು ಭೋಗವತಿ ನಾರಿಯು ಗುಡದಂಥ ಸವಿನೀರು ಕುಡಿದು ನರನಂತೆ ದೃಢನಿದ್ರೆಗೊಂಡ ಜಗದೊಡೆಯ ರಾಘವನು|| ದೃಢವಾಗಿ ಬಹುಕಾಲ ಬಿಡದೆ ಅಲ್ಲಿರುವ ಆ ಮೃಡನ ರಾಣಿಯು ತಾನು ನಡೆದು ಬಂದಳು ಅಲ್ಲೇ ಶರಗರಾದಿ ಕೈಯಲ್ಲಿ ಹಿಡಿದು, ಆರತಿಯನ್ನು ದೃಢಭಕುತ ಲಕ್ಷಣನು ದೃಢ ನಿದ್ರಿಗೊಂಡಂಥ ಒಡಿಯಗೆಚ್ಚರ ಮಾಡಗೊಡದೆ ಆಕೆಯ ಕಂಡು ನುಡಿದನೀಪರಿಯ|| ಪದ ರಾಗ:ಭೈರವಿ ಅಟತಾಳ ಸ್ವರ ಋಷಭ ದಾವಾಕಿ ಪೇಳಮ್ಮಾ|| ಬಂದವಳು ನೀ ದಾವಾಕಿ|| ದಾವಾಕಿ ಪೇಳಮ್ಮಾ ದಾವ ರಾಜನ ಸತಿ ದಾವ ಕಾರಣದಿಂದ ಧಾವಿಸಿಲ್ಲಿಗೆ ಬಂದೆ|| ಪ ಸುಂದರಿ ವಾಣಿಯೋ|| ಅಥವಾ ಮುಶುಂದನ ರಾಣಿಯೋ|| ಇಂದ್ರನ ರಾಣಿಯೋ|| ಚಂದ್ರನ ರಾಣಿಯೋ|| ಚಂದ್ರಮುಖಿಯೇ ನೀನು ಚಂದಾಗಿ ಪೇಳಮ್ಮಾ|| 1 ಭಾತೃರಾದವರು ನಾವು|| ಪರಸ್ಪರ ಪ್ರೀತಿಯಿಂದಿರುವೆವು|| ಸೀತಾವಿರಹದಿಂದ ಸೋತುಬಂದೆವು ಇಲ್ಲೆ ಮಾತೇ ಮೌನವು ಬಿಟ್ಟು ಮಾತಾಡು ಬ್ಯಾಗನೇ|| 2 ಬ್ರಹ್ಮಚರ್ಯವೆಂಬುದು|| ಈ ಕಾಲಕ್ಕೆ ನಮ್ಮಲ್ಲಿ ಇರುವುದು|| ತಮ್ಮ ಲಕ್ಷ್ಮಣ ನಾನು ನಿರ್ಮಲ ಗುಣರಾಮ ನಮ್ಮಣ್ಣನಿವ ಪರಬ್ರಹ್ಮಾನಂತಾಧ್ರೀಶಾ|| 3 ಆರ್ಯಾ ಲಕ್ಷ್ಮಣ ನಾಡಿದ ಮಾತೂ|| ಲಕ್ಷಿಗೆ ತರಲಿಲ್ಲ ದೇವಿ ಮಾತಾಡಿದನೂ ಹೀಗೆಂದೂ|| ಪದ ರಾಗ:ಧನ್ಯಾಸಿ ಆದಿತಾಳ ನಡಿ ನಡಿ £ಡಿ ನೀನು || ನುಡಿಯದ ಭಾಗಿಯೇನು|| ನ || ನಡಿ ನಡಿ ಹಿಂದಕು ಬಡಿವಾರೇನಿದು ಬಿಡು ಬ್ಯಾಗನೆ ನಿನ್ನ ಎನಗೆ ಬಿಡದೆ ಬಾಣದಿಂದೊಡೆವೆನು ನಾನು| ಪ ಎಕಾಂತ ಸ್ಥಳಕೆ ಕಾಲಕೆ ಒಬ್ಬಾಕೆ ಬರುವದಿದು ದಿಂದ ನೀ ಬೇಕಾದಲ್ಲೆ|| 1 ವನವನ ಚರಿಸುಲವ ವನವಾಸಿಗಳಿಗೆ ವನುತಿಯ ಸಂದರ್ಶನ ನಮಗ್ಯಾಕಿದು ಗುಣವಂತಿಯೆ ಅರಕ್ಷಣ ನಿಲ್ಲದಲೆ 2 ಕಾಲದಲಿ ಗದ್ದಲ ಮಾಡದೆ ಬುದ್ಧಿವಂತೆಯೆ|| 3 ಅನುಜನ ಈಪರಿ ಸಿಟ್ಟು || ಅನುಸರಿಸುತಾ ಎದ್ದ ನಿದ್ರೆಯನು ಬಿಟ್ಟು || ವನುತಿಯ ನೋಡಿದ ರಾಮ|| ವಿನಯದಿ ಮಾತಾಡಿವನು ಗುಣಧಾಮ || 1 ಪದ ರಾಗ:ದೇಶಿ ಅಟತಾಳ ಸ್ವರ :ಷಡ್ಜ ದಾರ್ಹೇಳಮ್ಮಯಾ ಉದಾರ್ಹಳಗಿರುವೆ ನೀ || ದಾರ್ಹೇಳಮ್ಮಯ|| ದಾರಿಲ್ಲಿ ಸ್ಥಳದಲ್ಲಿ ದಾರನ್ಹುಡುಕುವಿ ನಿ|| ದಾ|| ಪ ವನದಲ್ಲೆ ಇರುವಂಥ ವನದೇವತೆಯೇ ನೀ|| ದಾ|| ಮನಿಯಲ್ಲೇ ಇರುವಂಥ ಮನಿದೇವತೆಯೋ ನೀ || ದಾ|| 1 ಪ್ರಾಯಶ ಶ್ರೀಹರಿ ಮಾಯಾರೂಪಿಯೋ ನೀನು || ದಾ|| ಆಯಾದ ವಿಲ್ಲದೆ ಬಾಯಿಲೆ ಬಿಚ್ಚಾಡು || ದಾ||2 ಕ್ಲೇಶ ವೋಡಿಸುವಂಥ ಈಶನ ರಾಣಿಯೋ || ದಾ|| ದೋಷರಹಿ ತಾನಂತಾಧ್ರೀಶನ ರಾಣಿಯೋ|| 3 ಆರ್ಯಾ ಕೋಮಲತರ ವಚನಗಳೂ || ರಾಮನ ಬಾಯಿಂದ ಮಾತಾಡಿದಳು ಹೀಗೆಂದೂ|| 1 ಪದ ರಾಗ:ದೇಶೀ ಆಟತಾಳ ಸ್ವರ :ಷಡ್ಜÀ ಕೇಳೋ ರಾಮನೆ ನಿನಗ್ಹೇಳುವೆ ಗುರುತವ || ಕೇಳೋ ರಾಮ|| ಕೇಳುತ ನಿನ್ನ ಮಾತು ಬಾಳ್ಹಾನಂದಾಯಿತು || ಕೇಳೋ|| ಪ ವನದೇವತೆ ಅಲ್ಲ ಮನಿಯ ದೇವತೆ ಅಲ್ಲ || ಕೇ|| ವನಜಾಕ್ಷ ತುಳಜಾಯಂದ್ಯನಿ ಕೊಂಬುವೆ ನಾನೂ || ಕೇ|| 1 ಮಾಯಾರೂಪಿಯು ಅಲ್ಲ ಆಯಾಸಯನಗಿಲ್ಲ ||ಕೇ|| ಮಾಯಾರಮಣ ನಿನ್ನ ತಾಯಿ ಯಂದ್ಯನಿಸುವೆ || ಕೇ|| 2 ಶುದ್ಧ ಚಿನ್ಮಯ ಅನಂತಾದ್ರಿರಮಣ ನೀನು || ಕೇ|| ಸಿದ್ಧಾಗಿ ನಾ ಯಮುನಾದ್ರಿಯಲ್ಲಿರುವೆನು||3 ಆರ್ಯಾ ಕಾಯಜ ಪಿತ ಕೇಳಿದನೂ|| ಹಾಯಿದು ಏನೆಂದೂ|| ಮಾತನಾಡಿದನೂ || ಆಯತಾಕ್ಷಿ ಆದವಳೂ || ತಾಯಿಯು ಎನಗ್ನಾಂಗಾದಿ ನೀ ಪೇಳೆ|| 1 ರಾಮನ ಮಾತಿಗೆ ತುಳಜಾ || ಪ್ರೇಮದಿ ಮಾತಾಡಿದಳು ತಾವಿರಜಾ || ರಾಮಗ ಕಥಿ ಆದಂತಾ|| ನೇಮಿಸಿ ಹೇಳಿದಳು ಪೂರ್ವ ವೃತ್ತಾಂತಾ|| 2 ಪದ್ಯ ರಾಮಕೇಳು ಪೂರ್ವದಲ್ಲಿ ಜಮದಾಗ್ನಿಯು ಪರಶುರಾಮನಾಗಿರುವಿ ನೀನಾ ಮಹಾಮುನಿ ಪತ್ನಿ ನಾಮದಲೆ ರೇಣುಕಿಯು ನೀ ಮಗನು ಎನಗಾದಿ ಭೂಮಿಯಲಿ ಪ್ರಾಖ್ಯಾತ ನಾಮತಿ ಕೃತವೀರ್ಯಜನು ಕಾಮಧೇನುವು ಬಯಸಿ ಆ ಮುನಿಯ ಕೊಂದಿರಲು ಆಮ್ಯಾಲ ಪತಿಯಿಂದ ನೇಮದಲಿ ಸಹಗಮನ ನಾ ಮಾಡಿದೆನು|| 1 ಪತಿಯ ಪ್ರೇಮದಲಿ ಸ್ಮರಿಸಿ ಪರಶುರಾಮನು ಎನ್ನಸ್ಮರಿಸಿ ಕೈಮುಗಿದು ಈ ಪರಿಯು ಮಾತಾಡಿದನು ವರ ಮಾತೆಯನು ಕೂಡಿ ಇರದೆ ನೀ ಹೋದಿ ಸಂದರ್ಶನವು ಎಂದಿನ್ನ ತ್ವರದಿ ನೀ ಹೇಳೆನಗೆ ಕೇಳುತಲೆ ತ್ವರದಿಂದ ನಾನು ಸುಂದರ ರೂಪವ ತೋರಿ ಈ ಪರಿಯು ಮಾತಾಡಿದೆನು ವರಪುತ್ರ ಕೇಳು ಮುಂದಿರುವ ತ್ರೇತಾಯುಗವು ಬರುತಿರಲು ಆಗ ಸಂದರ್ಶನವ ಕೊಡವೆ|| 2 ಹೀಗೆಂದು ಹೇಳಿದ್ಯಾಗ ಆತಗ ನಾನು ಈಗ ಆತನೇ ನೀನು ರಾಘವನು ಆಗಿರುವಿ || ಹಿಂಗೆನಲು ಮುಂದೆ ಆ ರಾಘವನು ಕೊಟ್ಟಳಾಗ ತುಳಜಾದೇವಿ ಬ್ಯಾಗ ನಿನ್ನ ಕಾರ್ಯ ಚನ್ನಾಗಿ ಆಗುವುದೆಂದು || ನಾಗವೇಣಿಯು ತಾನು ಹೋಗಿಬರುವೆನೆಂದು ಆಗ ಅಲ್ಲೇವೇ ಗುಪ್ತಾಗಿ ಇರುವುವಳು|| 3 ಪದ ರಾಗ:ಶಂಕರಾಭರಣ ಆದಿತಾಳ ಸ್ವರ :ಮಧ್ಯಮಾ ತಂದನು ಕೇವಳ್ಹಾಗ್ನಿಯ ಸಾಕ್ಷಿಯಿಂದೆ|| 1 ಆದರೂ ಇಷ್ಟಾರ್ಥಗಳು ಕೊಡುವೋದು|| 2 ವರದ ಶ್ರೀರಾಮ ವರವು ಕೊಟ್ಟಿರುವಂಥಾ ತುಳಜಾ ದೇವಿಯ ದಿವ್ಯ ಮಹಿಮೆ || ಹರುಷದಿ ಕೇಳಿದರೆ ಹರುಷವ ಕೊಡುವುದು ಪರಿಹರಿಸೋದು ಕಷ್ಟವೆಲ್ಲಾ 3 ಪುತ್ರರು ಆಗುವರು ಪೌತ್ರರು ಆಗುವರು ಸತ್ಯಮಾತಿದು ಭಾವವ ಬಿಟ್ಟು|| 4 ಗ್ರಂಥವೆಂಬುವದಿಂದು || ಎಂಥಾದಾದರೂ ಎನೂ ಸಂತೋಷ ನಮ್ಮ ಗುರುಗಳಿಗೆ|| ಸಂತರೆಂಬುವರಿಗೆ ಸಂತೋಷಾಗಲಿ ನಮ್ಮಾನಂತಾದ್ರೀಶನೆ ನುಡಿಸಿದಾ|| 5 ಆರ್ಯಾ ವರ ಕವಿತಾ ರZನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ || ಚರಿಸದೆನ್ನ ಉಪಾಯಾ || ಗುರುಕೃಪೆಯಿಂದಾಯಿತು ನಾಲ್ಕು ಅಧ್ಯಾಯಾ|| 1 ಪದ ರಾಗ:ಪೂರ್ವಿ ಅಟತಾಳ ಸ್ವರ:ಮಧ್ಯಮಾ ನಿತ್ಯ ಮಂಗಳವನು ಕೊಟ್ಟು ಸಲಹುವ ತಾಯಿಗೆ|| ಪ ಘನತರ ಕೈಲಾಸ ಮನಿಯು ಮಾಡಿದವಳಿಗೆ|| ಅನುದಿನ ಅಲ್ಲಿರುವಂಥಾಕಿಗೆ | ಅನುಭೂತಿ ತಪಸಿಗೆ ಅನುಕೂಲಾಗುವೆನೆಂದು ಅನುಮಾನಿಲ್ಲದೆ ಬಂದಿರುವಾಕಿಗೆ|| 1 ಅಷ್ಟಭುಜಗಳುಳ್ಳಂಥಾಕಿಗೆ || ಅಷ್ಟೆಶ್ಚರ್ಯದಿಂದಿರುವಾಕಿಗೆ|| ದುಷ್ಟದೈತ್ಯನ ಕೊಂದಂಥಾಕೆಗೆ|| 2 ಅಮಿತ ಮಹಿಮೆ ಉಳ್ಳಂಥಾಕೆಗೆ|| ಯಮುನಾದ್ರಿಯಲಿ ಬಂದಿರುವಾಕೆಗೆ|| ಗಮನದಿಂದಲಿ ರಾಮ ಶ್ರಮಬಟ್ಟು ಅಲ್ಲೇ ವಿಶ್ರಾಮಿಸಲು ದರ್ಶನ ಕೆÀೂಟ್ಟಾಕೆಗೆ|| 3 ಕಾಮಿತ ಫಲವನು ಕೊಡುವಾಕೆಗೆ|| ರಾಮನು ಸಾವಿರ ನಾಮದಿ ಸ್ತುತಿಸಲು|| ಪ್ರೇಮದಿವರವು ಕೊಟ್ಟಂಥಾಕಿಗೆ|| 4 ಚಿಂತಿಸುವರ ಮುಂದ ನಿಂತಾಕೆಗೆ|| ಸಂತೋಷವನು ಕೊಡುವಂಥಾಕಿಗೆ|| ಅಂತರಂಗದಲ್ಲಿಹ ಚಿಂತೆಯ ಬಿಡಿಸಿ|| ಅನಂತಾದ್ರೀಶನ ತೋರುವಂಥಾಕೆಗೆ|| 5
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಆರು ರಾಗ:ನಾಟಿ ಝಂಪೆತಾಳ ಅಘಟ್ಯಘಟಿನಾಟ್ವೀ ಪುಲಿಂದಾ ಶ್ರೀಪತೇಸ್ತನುಃ ನೃಪಜಾಸ್ಮರಪೀಡಾಂ ತಾಂ ಕಥಯಂತೀ ಹರೇದಘಮ್ ನಿತ್ಯ ಸಂತೋಷ ಜಯತು ಜಯ ಲಕ್ಷ್ಮೀಶಾ ವೆಂಕಟೇಶಾ 1 ಪದ್ಮಜಾಕೃತಯಾತ್ರೆ ಪ್ರದ್ಮವಿಕಸಿತ ನೇತ್ರಾ ಪ್ರದ್ಮಾಜಾಸನ ಮುಖ್ಯ ಪದ್ಮನಾಭಾಖ್ಯ 2 ಗುರ್ವನುಗ್ರಹ ಗಮ್ಯ ಗುರುಗುಣಾರ್ಣವಸೌಮ್ಯ ಗುರ್ವನಂತಾದ್ರೀಶ ಗುರುಸುಪ್ರಕಾಶ3 ವಚನ ಪುರುಷನ ಪಾದ ನಿತ್ಯ ಮರೆಯದಲೆ ಮನದಲ್ಲಿ ಕರವ ವರಬುದ್ಧಿಯಲಿ ಎನ್ನ ಶಿರಮೆಟ್ಟಿ ಕರಮುಗಿದು ಕೊರವಂಜಿ ಕಥೆಯ 1 ಮುನ್ನಾಗಿ ನಾರೀಕುಲ ತನ್ನ ಕಾರ್ಯಕೆ ಕಳುಹಿ ಎನ್ನ ಕಾರ್ಯಕೆ ಅನ್ಯ ತನ್ನ ಕಾರ್ಯವು ಮತ್ತೆ ಮಾಡುವರಲ್ಲ ಚನ್ನವಾಗಿ2 ಉಬ್ಬುಬ್ಬಿ ವನಿತೆಯರು ಈ ರೀತಿ ಅವಲಂಬಿ ಗಂಭೀರಕೊರವಿ ಮುಖ ಬಾಯ್ವಳಗ್ಹಲ್ಲು ಎಂಬುವದು ಒಂದಿಲ್ಲ ಲಂಭಕರ್ಣಗಳಿಹವು ಲಂಭಕುಚಗಳು ಮತ್ತ ಲಂಬೋದರಿ ಯೆನಿಸಿಕೊಂಬುವಳು ತಾನು 3 ಜಡೆಗಳ ಧರಿಸಿ ಧೀರ ಮಾಡಿ ಸಾರ ಚಾರುನವಧಾನ್ಯಗಳ ಪೂರ ಚಾರು ತಿಲಕವನಿಟ್ಟು ಹಾರ ಗೀರುಕಂಕಣ ಕೈಗೆ ಚಾರು ತಾ ಐವತ್ತು ಪೂರ ವಯದವಳಾಗಿ ತೋರುತಿಹಳು4 ಮಣಿ ಮಾಲೆಗಳ ಧರಿಸಿ ಮಣಿ ಮೇಲೆ ಕರ್ಪೂರ ಮಣಿಯು ಮೇಲೆ ಸಾಲ್ಹಿಡಿದು ವಿವಿಧಮಣಿ ಬಾಲಕನ ಉಡಿಯಲ್ಲಿ ಕೋಲು ಕೈಯಲಿ ಪಿಡಿದು ನಡೆದಳಾಗ 5 ರಾಗ:ಶ್ರೀರಾಗ ಆದಿತಾಳ ಗಿರಿಯಿಂದಲಿ ನಾರಾಯಣ ಪುರಕೆ ಬಂದಳು ಪುರದ ಬಾಗಿಲುಗಳನ್ನೆಲ್ಲ ತ್ವರದಿ ದಾಟಿದಳು ತಿರವಿದ ಸೆರಗು ತಿರುಗಿ ಹೊದೆಯುತಲೆ ತಿರುಗಾಡುತ ಬಂದಳು ತಿರುಕೊಂಬುವರಂತೆ ಮನೆ ಮನೆ ಬಾಗಿಲನು ಮೆಟ್ಟುತಿಹಳು ಮನಸಿಗೆ ಬಂದ್ಹಾಂಗೆ ಧ್ವನಿಮಾಡುತಿಹಳು ಮನಗೊಟ್ಟು ಕೇಳಿರಿ ಎನ್ನ ತಾಯಿಗಳಿರಾ ಮನದ ಮಾತುಗಳ್ಹೇಳುವೆ ಮನೆಯವ್ವಗಳಿರಾ 1 ಹಿಂದಾದದ್ದು ಹೇಳೇನು ಇಂದಾದದ್ದು ಮತ್ತೆ ಚಂದಾಗಿ ಪೇಳೇನು ಮುಂದಾಗುವದೆಲ್ಲಾ ಹಿಂದಕ್ಕೆ ನಾ ಬಹಳ ಮಂದಿಗ್ಹೇಳಿದೆನು ಒಂದೂ ಸುಳ್ಳಾಗಿಲ್ಲ ಸಂದೇಹವಿಲ್ಲ 2 ಸಾಮಭೇದವ ಬಲ್ಲೆ ಸಾಮುದ್ರಿಕಿ ಬಲ್ಲೆ ಹೈಮಾದಿ ಜ್ವರಕೌಷಧ ನಾ ಮಾಡಲು ಬಲ್ಲೆ ಕಾಮಿನಿಯರಿಗಾದ ಕಾಮಜ್ವರ ಬಲ್ಲೆ ಕೌಮಾರಿಗಳಿಗಂತು ನಾ ಮುಂಚೆ ಬಲ್ಲೆ 4 ಭೂತ ಬಿಡಿಸಲು ಬಲ್ಲೆ ಬೇತಾಳವ ಬಲ್ಲೆ ಮಾತಾಡದ ಮೂಕರನು ಮಾತಾಡಿಸಬಲ್ಲೆ ನೀತಿನುಡಿಗಳ ಬಲ್ಲೆ ಜ್ಯೋತಿಷ್ಯವ ಬಲ್ಲೆ ಕೂತು ಕೇಳಿದರೆಲ್ಲ ಮಾತ್ಹೇಳಲು ಬಲ್ಲೆ5 ಹಸನಾಗಿ ಪೇಳುವೆ ಕುಶಲಾದವಾಣಿ ಹುಸಿಯಲ್ಲವಿದು ಎನ್ನ ಹಸುಗೂಸಿನಾಣಿ ಅಸು ಹೋದರು ನಾನಲ್ಲ ಹುಸಿಯಾಡುವ ಕೊರವಿ ವಸುಧೆಯೊಳಗೆ ನಾ ಹೆಸರಾದ ಕೊರವಿ6 ನರನಾರಾಯಣಲಿ ಇರುವಂಥ ಕೊರವಿ ವರನಂತಾದ್ರೀಶನ ನೆರವುಳ್ಳ ಕೊರವಿ ಕೊರವಿ ಮಾತನು ಕೇಳಿ ಪುರದ ನಾರಿಯರು ಅರಸನ ರಾಣಿಗೆ ತ್ವರದಿ ಪೇಳಿದರು7 ರಾಗ:ಪೂರ್ವಿರಾಗ ಭಿಲಂದಿ ತಾಳ ಬಂದಳಮ್ಮ ಇಲ್ಲೆ ಜನರು ನೆರೆದು ಬಹಳ ಆತುರ ಪಟ್ಟು ಕೇಳುತಿಹರÀುಪ ಮಾತನಾಡುತಿಹಳು ಮುದದಿ ಕೇಳಿ ದ್ಹೇಳುವಳು ಮುದಕಿಯಾಗಿ ತೋರುತಿಹಳು 1 ತನ್ನ ಮಕ್ಕಳಾಣೆ ಕೊಡುತಿಹಳು 2 ನರನಾರಾಯಣರು ಎಲ್ಲಿ ಇವರೊ ಅಲ್ಲೆ ಇರುವಳಂತೆ ವರದನಂತಾದ್ರೀಶ ಕೊಟ್ಟ ವರವುಳ್ಳ ಕೊರವಿಯಂತೆ 3 ರಾಗ:ಕನ್ನಡ ಕಾಂಬೋದಿ ಅಟತಾಳ ಬೇಗ ಅರಸನ ಪಟ್ಟದ ರಾಣಿ ಪನ್ನಗವೇಣಿ 1 ತಿರುಗಿ ಬಂದರು ಮತ್ತಲ್ಲೆ ಕೊರವಿ ಇದ್ದಲ್ಲೆ 2 ಎಂದು ಕರೆದರು ಕಯ್ಯ ಬೀಸುತ ಕಣ್ಣುತಿರುವುತ 3 ನುಡಿದಾಳೀಪರಿ ವಾಣಿ ಮಾತಿನ ಜಾಣೆ 4 ಆಕೆ ಸೌಭಾಗ್ಯದ ಒಡವಿ ಹುಟ್ಟನಾ ಬಡವಿ 5 ನೋಡಿ ಎನ್ನ ಒಡವೆಯ ನೋಡಿರಿ ಮಾತನಾಡಿರಿ 6 ಎನ್ನ ಕರಿದಾಳೆಂಬುವದು ಅಪಹ್ಯಾಸವಿದು 7 ನಕ್ಕು ಮಾತಾಡುವಿರಾ ಬಂಡು ಮುದಕಿಯ ಕಂಡು 8 ಅಂಜಿ ಮಾತಾಡಿದರಾಗ ವಿನಯದಿ ಬೇಗ9 ಒಮ್ಮೆಗಾದರುದಕ್ಕೀತೆ ಆಡೋದು ರೀತೆ10 ಬಂದು ನಡೆದಳು ಮುಂದೆ ಆನಂದದಿಂದ11 ಅರಮನೆಗೆ ಬಾಗಿಲೊಳಗೆ ಅಂಗಳದೊಳಗೆ 12 ಕೋಲುಕೋಲೆಂದು ಪಾಡುವಳು ಮಾಯಾತೋರುವಳು 13 ರಾಗ:ಶಂಕರಾಭರಣ ಆದಿತಾಳ ಕೋಲೆನ್ನ ಕೋಲು ಲೀಲೆಕೊಂಡಾಡುತಲಿ ಪ ಭರದಿಂದೊದೆಯುತಿರೆ ತಿರುಗಿ ಕಾಲ್ಹಿಡಕೊಂಡು ಪರಿಪರಿಸ್ತುತಿಸಿದಾ 1 ನೋಡಿ ಸಹಿಸದೆ ಕೊಲ್ಲಾಪುರಕೆ ನಡೆದಳು 2 ಹರಿ ವೈಕುಂಠದಿಂ ಧರೆಗಿಳಿದನು 3 ಹುತ್ತಮನೆಯ ಮಾಡಿ ಗುಪ್ತದಲ್ಲಿರುತಿಹ4 ನೆತ್ತಿಯ ಒಡಕೊಂಡು ಭಕ್ತನ ಸಲುಹಿದೆ 5 ಗುರುವಕರೆದ ಅವನಿಂದ ತಲೆ ಗಾಯವ ಕಳೆದನು 6 ತಾ ಬೇಡಿ ಸ್ವಾಮಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ಮೃಗ ಬ್ಯಾಟಯಲಿ ಹೊರಟ್ಹೋಗುವಾ ಯಕ್ಷಾನುಗರಿಂದ ತಾ ಮೃತನಾಗುವಾ ಮಗ ಬಾರಾನೆಂದು ತಾಯಿ ಮಿಡುಕುತಾ ರಾಜ್ಯ ಅಗಲಿ ಹೋಗ್ವಳು ತಾ ಹುಡುಕುತಾ 7 ಅಂತ:ಕರುಣ ತಾಪದಲಿ ಕಾಡಾಕಿಚ್ಚಿ ನಂತದೊಳಗೆ ಬೀಳೋಳು ಗಾಡಾ ಚಿಂತೆಯಾಕೆ ನೃಪಹೋಗಿನ್ನ ನಿ ಶ್ಚಿಂತೆಯಿಂದಲಿ ರಾಜ್ಯ ಮಾಡಿನ್ನ 8 ಎಂದು ಹಸ್ತವ ಶಿರದಲ್ಲಿಟ್ಟು ಆ ನಂದದಿಂದಲಿ ವರಗಳನು ಕೊಟ್ಟು ಮುಂದನಡೆದ ಪಕ್ಷಿವಾಹನನು ಜಗ ದ್ವಂದ್ಯ 'ಶ್ರೀ ಅನಂತದ್ರೀಶ' ನು 9 ಪದ ಆದಿ ಮೂರುತಿ ಶ್ರೀರಮೇಶಾ ತನ್ನ ಧಾಮಕ್ಕ್ಹೋದನು ಮೋದರಹಿತನಾಗಿ ಬಾಲದೀರ್ಘ ಉಸುರಗಳದನು ಪೋದನೆಂದು ದು:ಖದಿಂದ ತಿರುಗಿ ಪುರಕ ನಡದನು ಯಾದವೇಶ ಹಾ ಮುರಾರಿ ಎಂದು ಆಗ ನುಡದನು 1 ಪೂರ್ವ ಪುಣ್ಯದಿಂದ ನಿನ್ನ ರೂಪ ಯನಗ ತೋರಿದಿ ಶರ್ವಮಿತ್ರಯೆನ್ನಾ ವಿಷಯ ಮಡುವಿನೊಳಗ ಹಾಕಿದಿ ಸರ್ವಕಾರ್ಯ ಬಿಟ್ಟು ಕರುಣಾದಿಂದ ಆಗ ನೋಡಿದಿ ಗರ್ವಯುಕ್ತನಾಗಿ ಯನ್ನಬಿಟ್ಟು ಈಗವೋಡಿದಿ 2 ಸಿಕ್ಕಿದಂಥ ದಿವ್ಯಮಾಣಿಕ್ಯ ಕಳದಂತಾಯಿತು ಫಕ್ಕನೆದ್ದು ಕುಳಿತು ಕಂಡಾಕನಸಿನಂತಾಯಿತು ಮಿಕ್ಕ ವಿಷಯ ಭೋಗ ಬೇಡಿ ಜನ್ಮ ವ್ಯರ್ಥವಾಯಿತು ತಕ್ಕ ಮುಕ್ತಿ ಬೇಡಲಿಲ್ಲಾ ಯನ್ನ ಬುದ್ಧಿ ಹೋಯಿತು 3 ಕ್ಲೇಶ ಬಿಟ್ಟು ಈಗ ಬಹಳ ವಿಷ್ಯ ಸೌಖತು” ಏಸು ಜನ್ಮ ಪೂಜೆ ಮಾಡಿದಾರು ದೇವ ದೊರಕನು ಮಾಸ ಪಂಚದಿಂದ ಯನ್ನ ದೃಷ್ಟಿ ವಿಷಯ ನಾದನು 4 ಆಶಿಇಂದ ಆಗ ವಿಷಯ ಸËಖ್ಯವನು ದೈವಕೆ ಮಾಡಿಕೊಂಡು ಹೀಂಗ ಮನಸ್ಸಿನಲ್ಲಿ ಬಂದ ಪಟ್ಟಣಕೆ ಕೊಂಡ ಪುರಸಮೀಪಕೆ 5 ಶ್ಲೋಕ ಆಗ ನೋಡಿದ ಒಬ್ಬ ಧ್ರುವನ್ನಾ ವೇಗ ಪುಟ್ಟಿತು ಮನಸಿಗೆ ತನ್ನ ಬ್ಯಾಗ ಪೇಳಿದ ಅರಿಸಿನ ಮುಂದಾ ಬಾಗಿ ಬಿನ್ನಯಿಸಿ ತಾನಯ ದಿಂದಾ 1 ಪದ ರಾಜಭೂಪಾನೆ ನಿನ ಕಂದ ಬಂದಾ|| ಪೂಜಿಸಿ ದೇವೇಶನ ಛಂದದಿಂದ || ಪರಿಪರಿಯಿಂದಾ ಗುರುಕೃಪೆಯಿಂದಾ | ತಿರುಗಿ ಇಲ್ಲಿಗೆ ಕ್ಷೇಮದಿಂದಲಿಂದಾ 1 ಪುಣ್ಯಗಳಿಂದಾರಣ್ಯದಲಿಂದಾ ಸಣ್ಣಬಾಲನು ಭಾಳನಂದದಿಂದಾ 2 ಅನಂತರದಿಂದಾ ಅನಂತ ಸÉೀವಿಂದಾ 'ನಂತ್ರಾದೀಶನಾ’ ದಯದಿಂದ ಲಿಂದಾ 3 ಆರ್ಯಾ ಕಾಂಬೆನು ಯಂದಾ ಹುಟ್ಟಿತು ಆನಂದಾ1 ಪದ ರಾಗ :ಶಂಕರಾಭರಣ ಆದಿತಾಳ ಸುದ್ದಿ ಹೇಳಿದಾತಾಗೆ ಬೇಕಾದ್ದು ಕೊಟ್ಟು ಹರುಷದಿಂದ ಯದ್ದು ರಥವಾನೇರಿ ತಾ ಸನ್ನದ್ಧ ನಾದನು 1 ಇಬ್ಬರ ಹೆಂಡಿರ ಕೂಡಿ ಒಬ್ಬ ಪುತ್ರನಿಂದ ಕೂಡಿ ಅಬ್ಬರದಿಂದಲಿ ತಾ ಉಬ್ಬುಬ್ಬಿ ನಡದಾನು 2 ಮಂತ್ರಿಗಳು ವಿಪ್ರಾರು(ಗಳು) ಮಂತ್ರಜ್ಞಾರು ಮಾನವಾರು ಸಂತ್ರೋಧಾರ ನಡದಾರು ಬಜಂತ್ರಿ ಘೋಷಾದಿ 3 ಮೃದಂಗ ಘೋಷ ಸಾರಿಸಾರಿ ನುಡದಾವು ಅಬ್ಬಾರದಿಂದಲಿ 4 ತಂಬೂರಿಘೋಷಾ ಜಾಣೆ ರಾಮಂಜುಳಗೀತಾವಾಣಿ ಘೋಷಾವು 5 ಅಂಗಾನೇರು ಕುಂಕುಮಾದಿ ಮಂಗಲ ಭೂಷಾದಿಂದ ಶೃಂಗಾರಿಸಿ ಕೊಂಡಾರು ಕುರಂಗ ನೇತೆÀ್ರರು 6 ಧಟ್ಟಿ ಪೀತಾಂಬರನುಟ್ಟ ಬಟ್ಟಾ ಕುಚದಲ್ಯೊಪ್ಪುವಾ ಕಠ್ಠಾಣಿ ಮೋಹನ ಮಾಲೆನಿಟ್ಟು ಕೊರಳಿಗೆ 7 ರಂಬೇರು ವೀಳ್ಯವ ಮೆದ್ದು ತಾಂಬೂಲಗಲ್ಲಾದಲ್ಯೊತ್ತಿ ತುಂಬಿ ಹರುಷದಿಂದ ಚಂದ್ರ ಬಿಂಬ ಮುಖಿಯರು 8 ಮೀರಿದಾ ಸಂಭ್ರಮದಿ ಶೃಂಗಾರವನು ಮಾಡಿಕೊಂಡು ಥೋರಾಗನ್ನಡಿಲಿ ತಮ್ಮ ಮಾರಿ ನೋಡೋರು 9 ಕುಡಿಗಣ್ಣ ನೋಟಾದವರು ನಡಸಣ್ಣಾದಿ ಬಳಕುವರು ಮಂದ ನಡಗಿ ವಂತರು 10 ಪಟ್ಟಾಣದಿಂದಲಿ ವಳ್ಳೇ ಧಿಟ್ಟನಾರಿಯರು ಕಾಲಾ ಬಟ್ಟಿನಲಿ ಕಾಲುಂಗುರ ಮೆಟ್ಟಿ ನಡದಾರು11 ಪರಿಪರಿ ವಿಲಾಸದಿಂದ ಕರದಲ್ಲಿ ಕರತಳಾನಿಕ್ಕಿ ಕಿರಿನಗಿಯಿಂದಲ್ಲೆ ನಗುತಾ ಬರುವುತೀಹರು 12 ಹಿಂಡುಜನರಾಗಳ ಕೂಡಿಕೊಡು ರಾಜಾಬಂದು ಮಗನಾರಥವಾನಿಳುದು ಅಪ್ಪಿಕೊಂಡಾ ಹರುಷದಿ 13 ಮೂಸಿ ನೋಡಿತನ್ನ ಜಲಜಾ ಲೋಚನಗಳಿಂದ ಜಲವಾಧರಿಸಿದ 14 ಛಂದಾದಿ ಬಾಲಾನು ತನ್ನ ತಂದಿ ಪಾದಾದೊಳು ಯರಗಿ ಪಾದ ಬಂದು ಯರಗಿದ 15 (ತಾಯಿಯರ ಪಾದಗಳಿಗೆ ಪೋರ ಬಂದು ಯರಗಿದ) ಸಾಧುತಂದಿತಾಯಿ ಆಶೀರ್ವಾದ ಯುಕ್ತನಾಗಿ ತನ್ನ ಮೋದ ಬಟ್ಟಾಳು 16 ಏಳಯ್ಯಾ ಎಳಯ್ಯಾಯೆಂದು ಭಾಳಾನಂದಾದಿಂದ ಲ್ಯಪ್ಪಿ ಭಾಳಾಯುಷ್ಯಾವಂತನಾಗೊ ಬಾಲಾಯೆಂದಾಳು 17 ಉತ್ತಮ ಧ್ರುವನು ತಾತಾ ಗುಣೋತ್ತಮ ಇಬ್ಬರು ಕೂಡಿ ಅತ್ಯಂತ ಹರುಷಗೊಂಡಾರಂತ:ಕರುಣದಿ 18 ಇಂದಿಗೆ 'ಅನಂತಾದ್ರೀಶಾ’ ಹೊಂದಿಸಿದಾ ನಮ್ಮಿಬ್ಬರಾ ನೆಂದು ಮಾತನಾಡಿದರು ಕಂದರಿಬ್ಬಾರು 19 ಛಂದ ಹೆತ್ತ ತಾಯಿಗೆ ಚಿತ್ತಸಂಭ್ರಮಾ ಮತ್ತ ಜನರಿಗೆ ಚಿತ್ತ ವಿಭ್ರಮಾ ಪುತ್ರನಷ್ಟಿ ತಾ ಯೆತ್ತಿಕೊಂಡಳು ಸುತ್ತ ಚಿಂತಿಯಾ ಮರ್ತುಬಿಟ್ಟಳು 1 ಸುಂದರಾಂಗಿಯ ಆನಂದ ಬಾಷ್ಪದಾ ಬಿಂದು ಸ್ನಾನವು ಕಂದ ಮಾಡಿದಾ ಮುಂದ ರಥದಲ್ಲಿ ಬಂದು ಕುಳಿತನು ಮುಂದಿರುವ ಬಾಲನ ಒಲಿದು ನೋಡುತಾ ಮೊಲಿಯ ಪಾಲು ಚೆಮ್ಮಿ ತಲಿಯಲಿ ಹರುತಾ ಹಲವು ರಾಜ್ಯಕೆ ಮುಂದ ಸೂಚನಾ2 ಕುದರಿಸೈನ್ಯದಿಂದ ನಡದನು ಭಾಳ ಬಿರುದಿನಾ ಕಾಳಿ ಊದುತಾ ತಾಳ ವಾದ್ಯವು ಭಾಳ ನುಡುವುತಾ ಕೇಳಿಪುರದಲ್ಲಿ ಬಾಲಪುರುಷರು ಮಾಳಿಗಿಯಲಿ ಭಾಳ ನಿಂತರು 3 ಉತ್ತಮಾರ್ಯರು ಮತ್ತ ಸ್ತ್ರೀಯರು ಹತ್ತಿ ಮಾಳಿಗಿ ಸುತ್ತ ನಿಂತರು ಯೆತ್ತ ನೋಡಲು ರತ್ನ ಭೂಷಿತಾ ಉತ್ತುಮಾ ಪುರಿ ಭರ್ತ ಪಾಲಿತಾ 4 ಸಾಲು ಸಾಲಕೆ ವಿಶಾಲ ಮಂಟಪಾ ಸಾಲ ದೀಪದಿ ಭಾಳ ಶೋಭಿಪಾ ಸೆಲ (ಚೆಲ್ವ?) ಮುತ್ತಿನ ಸಾಲಯಳಿಗಳು ಮ್ಯಾಲ ಮಲ್ಲಗಿ ಮಾಲಕಿಗಳು 5 ಆರ್ಯಾ ಮಂದ ಮಾರುತಾನಿಂದ ಭಾಳಮಕರಂದ ಪುಷ್ಟದಾ ವಾಸನವು ಮುಂದ ಪತಾಕಿಗಳಿಂದ ಕಣ್ಣಿಗೆ ಛಂತ ತೋರಿಪಾ ಪಟ್ಟಣ್ಣವು 1 ವೇಗದಿಂದ ರಥ ಸಾಗಿಸಿ ಧ್ರುವ ಛಂ ದಾಗಿ ನಡೆದನು ಪುರದೊಳಗೆ ಬ್ಯಾಗ ಗೋಪುರದ ಬಾಗಿಲದಾಟಿ ಪೋಗಿ ಕುಳಿತನು ಸಭಿಯೊಳಗೆ 2 ಬಾಲನ ಕಂಡು ಭೂಪಾಲನು ಹಿಗ್ಗುತಾ ಭಾಳಪುಟ್ಟಿ ಮನದುದ್ರೇಕಾ ಕಾಲ ಮೂಹೂರ್ತದ ವ್ಯಾಳಯವು ಸಾಧಿಸಿ ಬಾಲಗ ಮಾಡಿದ ನಭಿಷೇಕಾ3 ಕೊಟ್ಟರಾಜ್ಯವನು ಪಟ್ಟಗಟ್ಟಿ ಮುಂ ದಿಟ್ಟ ಶಿಖಾ ಮುದ್ರಿಕಿಯನ್ನು ಅಷ್ಟ ವಿಭೂತಿಗ¼ಷ್ಟು ಕೊಟ್ಟು ಸಂ ತುಷ್ಟನಾದ ಭೂಪತಿ ತಾನು 4 ಛಂದದಿ ದೇವರಿಗೊಂದಿಸಿ ಧ್ರುವ ಆ ನಂದದಿ ಬ್ರಾಹ್ಮರಿಗೆರಗಿದನು ತಂದಿ ತಾಯಿಗಳಿಗೊಂದಿಸಿ ಬಹುತ್ವರ ದಿಂದ ಏರಿದಾ ಪೀಠವನು 5 ಸುಂದರ ಸಭಿಯಲಿ ಬಂದು ಕೂಡಲು ದೇ ವೇಂದ್ರನಂತೆ ಬಹು ಶೋಭಿಸಿದಾ ಬಂಧು ಜನರಿಗ್ಯಾನಂದವ ತೋರುತ ಚಂದ್ರಮನಂತೆ ಶೋಭಿಸಿದ 6 ಝಗಿಝಗಿ ತೋರುವ ಬಗಿಬಗಿ ಕುಪ್ಪುಸ ಬಿಗಿಬಿಗಿ ಇಂದಲಿ ತೊಟ್ಟವರು ಲಗು ಬಗೆಯಿಂದಲಿ ನಗಿನಗಿ ಮಾತಿನ ಸೊಗಸು ಗಾರಿಕೆ ಬಲ್ಲವರು 7 ಥೊರಮುತ್ತು ಜರತಾರ ಮಯದ ಉಡ ಗೊರಿ ತಂದರು ಆ ಜನರು ಸಾರ ಸಿಂಹಾಸನಯೇರಿದ ಧ್ರುವನಿಗೆ ಆರುತಿ ತಂದರು ನಾರಿಯರು 8 ಮುತ್ಹಚ್ಚಿದ ಹೊಸ ನತ್ತುಗಳಿಂದಲಿ ಮತ್ತಿಷ್ಟೊಪ್ಪುವ ಮುಖದವರು ಪುತ್ಥಳಿ ಸರಘುನ ಮುತ್ತಿನ ಸರಗಳು ಉಳ್ಳವರು9 ಹತ್ಹೊರಷುದ ಮ್ಯಾಲ್ಮತ್ತೆರಡೊರ್ಷದ ಉತ್ತಮ ಪ್ರಾಯದ ಬಾಲಿಯರು ಮತ್ತ ಕಾಲುಂಗರ ವತ್ತೊತ್ತಿ ನಡುವುತ ಗತ್ತಿನಿಂದಲೆ ನಡುವುವರು 10 ಪದ ತಂದ್ರು ಆರುತಿ ಚಂದ್ರ ಮುಖಿಯಾರು ತಂದ್ರು ಆರುತಿ ಬಹು ಸುಂದರ ಸುಗುಣೇರು ಪ ಚಂದುಟಿ ಕಚ್ಚುತ ನಿಂದ್ರದ ಮದದ ಗ ಜೇಂದ್ರ ಗಮನಿಯರು ಬಂದ್ರಾಗಲೇ ದೇ ವೇಂದ್ರನ ಸಮರಾಜೇಂದ್ರನÀ ಸುತಗೆ ಅ.ಪ ಬಣ್ಣಗಾರಿಕೆಯಲಿ ಸಣ್ಣಕುಂಕುಮನಿಟ್ಟ ಕಣ್ಣಕುಡಿ ಹುಬ್ಬು ಕುಣಿಕುಣಿಸ್ಯಾಡುತ ಹೆಣ್ಕೋಕಿಲ ಸ್ವರ ಸಣ್ಕಂಠದಿ ನುಡಿ ಸಣ್ಕದಿ ಪಾಡುತ 1 ಕೈ ಬೆರಳಿಗೊಪ್ಪುವ ಹರುಳಿನುಂಗುರ ಇಟ್ಟವರು ಯರಳಿಯಂತೆ ಹೊರಹೊರಳಿ ನೋಡಿ ಮುಂ ಗುರುಳ ಗೂದಲಾ ತೀಡುವರು ಜಾಣಕಾಂತಿಯರು 2 ಮೇಲ್ಮಾಟದ ಬಗಿಯುಲ್ಮಾತಾಡುತ ಬಲ್ಮೋಹದಿ ಬಹು ಮೆಲ್ಲಮೆಲ್ಲನೆ ಹೆಜ್ಜೆ ನೆಲ್ಲ ಮ್ಯಾಲಿಕ್ಕುತ ಸೊಲ್ಮುಡಿನೇವರಿಸಿ ಮ್ಯಾಲ್ಮಲ್ಲಿಗಿ ಸರಗಳ ಮುಡಿಯವರು 3 ಸದ್ರಸ ಕುಂಕುಮ ಮುದ್ರಾಂಕಿತ ಕುಚ ಘದ್ರಿಸುತಲಿ ಬಹು ಉದ್ರೇಕದಿ `ಅನಂತಾದ್ರೀಶನ ' ಮುದ್ರಿಕಿ ಪದಗಳು ಘದ್ರಿಸಿ ನುಡಿವುತಾ ಭದ್ರಾಂಗಿಯರು 4 ಪದ ಮಂಗಳ ಮೂರುತಿ ಬಾಲಾಗೆ ಶ್ರೀ ನೃಪಾಲಾಗೆ ಮಂಗಳ ಗುಣಶೀಲಾಗೆ ಮಂಗಳಮೂರುತಿ ಛಂದಾ ಬಗಿಯಿಂದಾ ಪ ಶುಭದಿಂದಾ ಆನಂದದಿಂದಾ ಅಂಬೂಧಿಯೊಳಗಾಡಿ ಗಂಭೀರಾಗಿರಿಪೊತ್ತಾ ಜಾಂಬುನದಾಕ್ಷಾರಿ ವರ ಪ್ರಿಯಾಗೆ ಗಂಭೀರಾ ನೃಸಿಂಹಾನ ನೆಂಬಿ ರಕ್ಷಿತ ನೀಗೆ ರಂಭೇರು ಕರುಣಾದಿ ನೋಡಿ ಒಡಗೂಡಿ ಕೊಂಡಾಡಿ ತ್ವರಗೂಡಿ ಪಾಡಿ 1
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ರಾಗ ಭೂಲೋಕವನು ಜೈಸುತ ಬಲದಿಂದಾ ಇಂದ್ರನೇ ಮೊದಲಾದ ಬೇಗಾ ದೇವೇಂದ್ರ ನಾಸನಕೆ 1 ಉಗ್ರಶಾಸನ ಮಾಡು ಮಾಡುವಂಥಾ ಉಗ್ರಶಾಶನ ಶೀಘ್ರದಿಂ ಹರಿಗೆ 2 ಬಿಡದೆ ದಯದಿ ಅನಂತ ಇಂಥ ಕಾಲಕೆ ಎಲ್ಲಿ `ಅನಂತಾದ್ರೀಶನೆ ' ನಿಂತು ನುಡಿದನು ಅಂತರಿಕ್ಷದಲಿ 3 ರಾಗ ಅಂಜಬೇಡಿರಂಜ ಬೇಡಿರೋ ನೀವಿನ್ನು ಮೇಲೆ ಪ ಪಂಜರದೊಳಗಿರುವೆ ನಿಮ್ಮನಂಜಿಸುವನ ಭಂಜಿಸುವೆನು ಅ.ಪ ಎಂದು ದ್ವೇಷ ಮಾಡುವನೋ ಅಂದಿಗವನ ಕೊಂದÀು ಬಿಡುವೆ 1 ದ್ವೇಷವನ್ನು ಮಾಡಿದವನು ಉಳಿಯ ಮುನ್ನ ಬಹಳ ದಿವಸ ಸತ್ಯ 2 ಪ್ರಹ್ಲಾದ ಇದ್ದ ಸ್ಥಳದಲ್ಲಿರುವೆ ನಾನು 3 ವಚನ ಶ್ರೀ ಲಲಾಮನವಾಣಿ ಕೇಳಿ ಉಳಿದವನಲ್ಲ ಕಾಲ ಹಿರಣ್ಯಕನಿಂದ ಬಾಲ ಕಾಲಕಾಗುವದೆಂದು ಕಾಲವನು ನೋಡುತಲೆ ಕಾಲಗಳೆದರು ಲೋಕಪಾಲಕರು ಎಲ್ಲಾ 1 ರಾಗ ಕೈಯಲಿಕೊಟ್ಟು ನಕ್ಕು ನುಡಿದಾನು 1 ಇರಲಿ ಬುದ್ಧಿವಂತನಾಗಲಿ ಪ್ರಸಿದ್ಧನಾಗಲಿ2 ಆಗ ಪ್ರಹ್ಲಾದನ್ನ ಕರದ್ಹೇಳಿದರು ಆಹ್ಲಾದದಿಂದಾ3 ಸಂಭ್ರಮದಿಂದ ಉತ್ತಮ ಶ್ರೀ ಹರಿನಿಂದಾ ಶಾಸ್ತ್ರ ನುಡಿದರು 4 ತ್ರೈವರ್ಗಿಕ ಶಾಸ್ತ್ರ ನುಡಿದರು 5 ಪಾಠಮಾಡಲಿಲ್ಲ ಸವಿದು ಹರಿ ಚರಿತಾಮೃತವನ್ನು ಸವಿ ಇನ್ನೊಂದನರಿಯಾ 6 ನುಡಿದನು ಅವನು ನವನೀತ ಧಾಂಗಿರುವಂಥಾದು ನವವಿಧ ಭಕ್ತಿ 7 ಅವರಿಗೆ ಮತ್ತಾರಿಗಾದರು ಅವನಂಜುವನಲ್ಲಾ 8 ಅವನು ಚಲುವ ನಂತಾದ್ರೀಶನಲ್ಲೆ ಛಲ ಬಿಟ್ಟನಲ್ಲಾ 9 ವಚನ ಕೂಡಿಸಿಕೊಂಡು ಮಂದ ಮುಂದ್ಹೇಳು ಇಷ್ಟುದಿನ ಒಂದು ಬಿಡದಲೆ ಹೀಗೆ ಅಂದ ಮಾತಿಗೆ ಮತ್ತೆ ಕಂದ ಪ್ರಹ್ಲಾದ ಹೀಗೆಂದನಾಗ 1 ರಾಗ ಬರೆಯಲಿಲ್ಲ ಓದಲಿಲ್ಲವೋ ಅಪ್ಪಯ್ಯ ನಾನು ಪ ಹರಿಯ ನಿಂದಿಸುವ ಶಾಸ್ತ್ರ ಬರೆಯಲ್ಹ್ಯಾಗೆ ಓದಲ್ಹ್ಯಾಗೆ ಅ.ಪ ಹರಿಯ ಗುಣಗಳನ್ನು ಮಾಡುವೆನು ಹರಿಯಪಾದ ಹರಿಯ ವಂದಿಸುವೆ ನಿತ್ಯಾ 1 ಅಂಥಾದು ಎನ್ನ ಮನಸು ಮನಸಿಲ್ಲೆ ವಿಷಯಗಳನ್ನು ನೆನೆಸುವೆ ಸುಹರಿಯ ರೂಪಾ2 ಗೆಳೆಯನಾದ ತಾನು ಅಂತರಂಗದಲ್ಲಿ ತಾನು ನಿಂತು ಪ್ರೇರಿಸುವ ಅಂತರಂಗದಂತೆ ಇರುವೆ 3 ವಚನ ಸಿಟ್ಟು ಮಾಡುತಲಿಂಥ ಥಟ್ಟನ್ಹೇಳಿರಿಯೆನಲು ಥಟ್ಟ ನಾವಲ್ಲ ಕೊಟ್ಟವರು ಕೊಟ್ಟ ಬುದ್ಧಿಯು ಅಲ್ಲ ರಾಗ ಕೇಳಿರಿ ನೀವೆಲ್ಲ ಭಾಳ ಭಕುತಿಯಲಿ ಕೇಳಿರಯ್ಯಾ ಪ ಬಾಳ ಮಾತುಗಳೇಕೆ ಹೇಳುವೆ ಸಾರಾಂಶ ಕೇಳಿರಯ್ಯಾ ಅ.ಪ ಅಲ್ಲ ಕೇಳಿರಯ್ಯಾ ದಿಟ್ಟಾಗಿ ಶ್ರೀ ಹರಿಯು ಕೊಟ್ಟ ಬುದ್ಧಿಯು ಇದು ಕೇಳಿರಯ್ಯ 1 ಶ್ರೀ ಜಗದೀಶನಿಂದೀ ಜಗ ತಿರಗೋದು ಕೇಳಿರಯ್ಯಾ 2 ಅನಂತಾದ್ರೀಶನು ತಾನೆ ಆಡುವದು ಕೇಳಿರಯ್ಯಾ 3 ವಚನ ದೈತ್ಯ ಅಡಿಯಿಟ್ಟು ನೀತಿಯಲಿ ಕಿಡಿಗಣ್ಣಿನೊಳು ನೋಡಿ ಒಡಲೊಳಗೆ ಸಿಟ್ಟಿನಲಿ ದೃಢವಾಗಿ ಇರುವಂಥ ಭೃತ್ಯರುಗಳಿಗೆ ನುಡಿದನೀಪರಿಯ 1 ರಾಗ ಕಡಿದ್ಹಾಕಿರೀತನ ||ಪಲ್ಲ|| ಬಗೆ ದುಷ್ಟಮಾತುಗ- ವಿಷ್ಣುವ ಸೊಗಸಾಗಿ ಪೂಜಿಸಿ ನಗುತಿಪ್ಪನ 1 ಸುತನಾಗದಿದ್ದರೂ ಸುತನವನೆ ಅತಿರಭಸದಲೆ ವಿಶ್ರುತವಾಗಿ ಹುಟ್ಟಿದ ವಿತತರೋಗ ತನಗ್ಹಿತವಾಗಿರುವದೇನು 2 ನಾನಾರೀತಿಗಳಿಂದ ಹಾನಿಯ ಅನಂತಾದ್ರೀಶನ ಧ್ಯಾನದಲ್ಲಿರುವನ 3 ರಾಗ ಆಗೆಲ್ಲ ಮಂದಿಗಳನ ನೆರಸಿದಾ1 ಮುರಿದು ಅವನ ಭಯ ಬಿಡಿಸಿದಾ 2 ಹರಿಯು ಬಂದು ಉಳಿಸಿದಾ3 ಸರ್ಪಶಯನ ಬಂದು ಭಯವಾ ಬಿಡಿಸಿ4 ವಿಷವ ತಂದು ಯತ್ನದಿಂದ ಕುಡಿಸಿದಾ ಹರಿ ತಾ ವಿಷವಮೃತ ಮಾ ಡಿ ಸೌಖ್ಯ ಬಡಿಸಿದಾ 5 ಘಟ್ಟ್ಯಾಗ್ಹಿಡಿದು ಶ್ರೀಹರಿ ಸಾಕಿದಾ 6 ತಾನೆ ತಾರಿ ಸಿದಾ7 ಶೀತಾಗಿ ಸೌಖ್ಯ ಬಡಿಸದಾ 8 ನಾನಾರೀತಿಯಿಂದಲವನನು ಸರಿಸಿದಾ ಅಚ್ಯುತನಂತಾದ್ರೀಶನು ಸೌಖ್ಯ ಸುರಸಿದಾ 9 ವಚನ ಮಾಡಿದರಿವಗೆ ಇನ್ನದೇನು ಪಾಯವುಯೆಂದು ಮಾನಿತರು ಗುರುಗಳಾ ದಾನವೇಂದ್ರ ನೀನು ದೀನನಾಗುವದು ಮುಂದೆ ನೀನು ತಿಳಿಯೊ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ಸ್ವಾತ್ಮಾನಾಪಿ ವರಾಹೇಣ ದತ್ತಾವಾಸ ಸ್ಥಳೋsಚ್ಯುತಃ ಮಾಯಾವೀ ಬಕುಲಾಲಾಭ ತುಷ್ಟೋ ವ್ಯಾsದ್ವೇಂಕಟೇಶ್ವರ ಅರುಣೋದಯದಲೆದ್ದನು ಅಂದಿಗಲ್ಲೆ ಭೂ ವರಾಹನು ಬಂದು ಗರ್ಜನೆ ಮಾಡುತೆದುರಿಗೆ ಮುಂದಕಲ್ಲೆ ಅಡಗಿದನು ಭಯದಿಂದ ವೇಂಕಟನು 1 ಪಿಡಿದನು ಭೂವರಾಹನು ಮಂದ ಜನರನೆ ಮೋಹಿಸುತ ಹೀಗೆಂದ ವೇಂಕಟಗೆ ಇಂದು ನೀನ್ಯಾರೆಲೊ ಪೋಗುವಿಯೆಲ್ಲಿ ನೀ ಎನ್ನ ಮುಂದೆ ನುಡಿಬೇಗ 2 ಮಾತಾಡಿದನು ವೇಂಕಟನು ಆತುರನ ಪರಿಯ ಕೂತುಪೇಳಿದನಾಗ ತನ್ನ ಪುರಾತನ ಕಥೆಯಲ್ಲ ಆತಗೆ ಈ ತಲೆಯ ಔಷಧಕೆ ಬಂದೆನುನೀ ತಿಳಿಯೋ ಎಂದ 3 ಅಪ್ಪಿಕೊಂಡೀ ಮಾತಿಗವನಾ ಮುಪ್ಪಿನವ ತಾ ಕ್ರೋಢರೂಪಿಯು ತಪ್ಪದಲೇ ಅಪ್ಪಿಕೊಂಡಿಹ ಭೂವರಾಹನು ಹಾಲಿಗೆ ಹೆಪ್ಪು ಕೊಟ್ಟಂತೆ 4 ದುಃಖಗಳ ಪೇಳುತ ಸುಮ್ಮನಾಗದೆ ನಿಮ್ಮಾ ಭೆಟ್ಟಿ ಇದು ಸಂಭ್ರಮವು ರಮ್ಯಗಿರಿಯಲ್ಲಿ 5 ಮಾತಾಡಿದನುನಂದೊಂದು ಇಂದು ನಮ್ಮಿಬ್ಬರೊಳಗೆ ಒಂದು ಮಾತು ಉಳಿಯಲಿಲ್ಲಾ ನಿಂದೊಂದು ಮಾತೇನು ಪೇಳೊ ಶ್ರೀ ಲಕ್ಷ್ಮೀಕಾಂತಾ1 ಇರವೆ ಸ್ಥಳ ಒಂದಿಷ್ಟು ಸುದ್ದಿ ಒಂದು ಬಿಟ್ಟು ನಿನ್ನ ಬುದ್ಧಿ ಶ್ರೀ ಲಕ್ಷ್ಮೀಕಾಂತಾ2 ನಿನ್ನವನಾಗಿರುವೆÀ ಒಳ್ಳಿತು ನಿನ್ನಿಂದ ಫಲ ಪೇಳೊ ಶ್ರೀ ಲಕ್ಷ್ಮೀಕಾಂತಾ 3 ಮಡದಿಯ ಕಳೆದು ಮೇಲೆ ಕೊಡು ನೀ ಲಕ್ಷ್ಮೀಕಾಂತಾ 4 ಪದುಮಾವತಿಯ ಶ್ರೀಧರಣಿಕಾಂತಾ ಋಣಮುಕ್ತನಾಗಿ ಅದರಮೇಲೆ ಕೊಟ್ಟೀಯೇನೋ ಶ್ರೀ ಲಕ್ಷ್ಮೀಕಾಂತಾ 5 ಋಣಮುಕ್ತನಾನಾದಮೇಲೆ ಕ್ಷಣಮಾತ್ರ ಇಲ್ಲಿರುವವನಲ್ಲಾ ಒಣಮಾತೇನೋ ಸ್ಥಳ ಪೇಳೆನಗೆ ಶ್ರೀ ಧರಣಿಕಾಂತಾ ಗುಣಗಳುನಿನ್ನಲ್ಲೆ ಇಲ್ಲಹಣವು ಕೊಡಲಾಗುದು ಮತ್ತೆ ಒಣಸ್ನೇಹಕ್ಕೆ ಸ್ಥಳ ಬಂದೀತೆ ಲಕ್ಷ್ಮೀಕಾಂತಾ 6 ಇಲ್ಲೆ ಚಂಚಲ ನಾಗ ಬೇಡಾ ಶ್ರೀ ಧರಣಿಕಾಂತಾ ವಂಚಕ ನೀಸರಿಯೋ ಒಂದಕು ಕೊಡದ ಲೋಭಿ ಒಳ್ಳೆಹಂಚಿಕೆಯನೋ ನೀನು ಶ್ರೀ ಲಕ್ಷ್ಮೀಕಾಂತಾ7 ಕಡೆಗೆ ಚನ್ನಾಗಿ ಪೇಳೊ ನೀನು ಲಕ್ಷ್ಮೀಕಾಂತಾ8 ನಿನ್ನ ಅಭಿಷೇಕವು ಗೆಲಿಸುವಿಯೊ ಧನ್ಯ ಶ್ರೀ ಲಕ್ಷ್ಮೀಕಾಂತಾ 9 ಸ್ವಾಮಿ ಪುಷ್ಕರಣೆಯ ಮೂರು ಪಾದದಿಂದ ಪಾದಕಂತು ಎಷ್ಟೊ ಲಕ್ಷ್ಮೀಕಾಂತಾ 10 ಮತ್ಯಾಕೀಪರಿ ಮಾತಾಡುವಿ ಹೊತ್ತು ಬಹಳಾಯಿತು ಎನಗೆ ಪಥ್ಯಕ್ಕೆ ತಡವಾಯಿತೇಳೋ ಶ್ರೀಧರಣಿಕಾಂತಾ ಸತ್ಯ ನೂರುಪಾದ ಸ್ಥಳವ ಕ್ಲಿಪ್ತ ಮಾಡಿಕೊಟ್ಟೆ ನಿನಗೆ ಸ್ವಸ್ಥದಿಂದ ಇರುಹೋಗೋನೀ ಲಕ್ಷ್ಮೀಕಾಂತಾ 11 ಸ್ವಸ್ಥದಿಂದ ಇರುವೆನ್ಹ್ಯಾಂಗೆ ಪಥÀ್ಯದಡಿಗೆ ಮಾಡುವಂಥ ಹೆತ್ತತಾಯಿ ಇಲ್ಲವೋ ಎನಗೆ ಶ್ರೀ ಧರಣಿಕಾಂತಾ ಹೆತ್ತಾಯಿಯ ಪರಿಯಾಗಿ ನಿನಗೆ ಪಥÀ್ಯದಡಿಗೆ ಮಾಡುವದಕೆ ಮತ್ತ ಬಕುಲಾವತಿಯ ಕೊಡುವೆ ಶ್ರೀ ಲಕ್ಷ್ಮೀಕಾಂತಾ 12 ಇಂಥ ಘಾಯ ಮಾಯುವತನಕ ಜೇನ್ತುಪ್ಪಸಾಮೆಯ ಅನ್ನ ಸಂತತ ಬೇಕಲ್ಲಾ ಎನಗೆ ಶ್ರೀಧರಣಿಕಾಂತಾ ಚಿಂತಾಮಣಿಗೆ ಸರಿಯಾದಂಥ ನಂ ತಾದ್ರಿಯಲ್ಲಿದ್ದ ಮೇಲೆ ಚಿಂತೆಯಾಕೆ ಅದನು ಕೊಡುವೆ ಶ್ರೀ ಲಕ್ಷ್ಮೀಕಾಂತಾ 13 ವಚನ ಧರಣಿಯ ರಮಣ ಈ ಪರಿಯು ಬೇಡಿದ್ದುಕೊಟ್ಟು ತಿರುಗಿದನು ಸ್ವಾಮಿ ಪುಷ್ಕರಣೀಯ ತೀರಕ್ಕೆ ಸರಸದಲಿ ಮುಂದಲ್ಲೆ ಇರುವ ನಿತ್ಯದಲಿ ಪರಮ ಭಕುತಳು ಆಗಿ ಇರುವ ಬಕುಲಾವತಿಯ ಕರದಿಂದ ಪಥ್ಯ ಸ್ವೀಕರಿಸುತಲೇ ನಿತ್ಯದಲಿ ಸುರತಾನಂತಾಖ್ಯ ಗಿರಿಯಲ್ಲಿ ಇರುವವನ ಕರುಣದಲಿ ಮುಗಿಯಿತೆರಡು ಅಧ್ಯಾಯ1
--------------
ಅನಂತಾದ್ರೀಶ - ಕಥನಕಾವ್ಯಗಳು