ಒಟ್ಟು 61 ಕಡೆಗಳಲ್ಲಿ , 26 ದಾಸರು , 60 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಿನ್ನಾದರೆ ರಂಗ ಸುರಾರಿಭಂಗಕರುಣಿಸಿನ್ನಾದರೆ ರಂಗ ಪ.ಹುಳು ಹಕ್ಕಿ ನಾಯಿ ನರಿ ಗಿಡ ಹುಲ್ಲು ಮುಳ್ಳುಗಳಜನ್ಮವಾಂತು ನಾ ಬಳಲಿದೆ ರಂಗನೆಲೆಗಾಣೆನಿನ್ನು ಮಾನಿಸನಾಗಿ ವೃಥನಾದೆಗುಳದ ಹಣ್ಣಿಗೆ ಸೊರಗಲ್ಯಾಕೊ ರಂಗ 1ತುದಿಮೊದಲಿಗೆ ಮದ ಮತ್ಸರದಿಂ ಬೇಗುದಿಗೊಂಡು ನಿನ್ನಂಘ್ರಿ ಮರೆದೆನೊ ರಂಗಪದುಮನಾಭನೆ ನನ್ನ ಹೊರೆಯಲಾರೆಯಹುಲ್ಲೆವದನಕ್ಕೆ ಮುಳ್ಳ ಕಡಿವಾಣ್ಯಾಕೊ ರಂಗ 2ಮಲೆತವನಾದರೊದಿಯೊ ನಿನ್ನಂಗಣದೊಳುತೊಳಲುವ ನಾಯಿಗೆ ಕ್ಲೇಶವು ಸಲ್ಲ ರಂಗಹಲವು ದುಷ್ಕøತ ನಿನ್ನ ನಾಮ ಘೋಷಣೆಯಲ್ಲಿನಿಲ್ಲಬಲ್ಲವೆ ಪ್ರಸನ್ವೆಂಕಟ ರಂಗ 3
--------------
ಪ್ರಸನ್ನವೆಂಕಟದಾಸರು
ಕಾಡದಿರೆನ್ನ ಕಿಡಿಗೇಡಿ ಮನವೆಓಡದಿರು ಅಚ್ಯುತಾಂಘ್ರಿನೋಡುಮನವೆಪ.ಬೆಲೆಯಿಲ್ಲದಾಯು ರತ್ನದ ಮಾಲೆ ಹರಿದಿದೆಆಲಸಿಕ್ಯಾತಕೆ ಹರಿಯ ಊಳಿಗಕೆಹುಲಿಯ ಬಾಯಿಯ ನೊಣನ ತೆರನಂತೆ ಮೃತ್ಯುಮುಖದಿಸಿಲುಕಿಹೆನು ಸರಸವಾಡದೆ ನಂಬು ಹರಿಯೆ 1ಕಂಡ ಕಡೆಯಲಿ ತಿರುಗಿ ಬಳಲಿದೆಯಲ್ಲದೆ ಬೇರೆಉಂಡುಟ್ಟು ಸುಖಿಸಿ ಯಶಸೊದಗಲಿಲ್ಲಪುಂಡರೀಕಾಕ್ಷಾಂಘ್ರಿ ಪುಂಡರೀಕವ ಹೊಂದಿಬಂಡುಣಿಯೆನಿಪರ ಸೇರು ಸಾರು 2ಗೋವರಂತಖಿಳ ಪಶುಗಳನು ದಾತಾರನಿಗೆತಾವು ಒಪ್ಪಿಸುವಪರಿಸತಿಸುತರನುದೇವದೇವ ಪ್ರಸನ್ನ ವೆಂಕಟಪಗರ್ಪಿಸಿಹೇವಹೆಮ್ಮೆಯ ಬಿಟ್ಟು ಸತತ ಹೊಗಳದೆ3
--------------
ಪ್ರಸನ್ನವೆಂಕಟದಾಸರು
ಗೋವಿಂದ ಗೋವಿಂದ ಗೋವಿಂದ ನನ್ನತಾಯಿ ತಂದೆ ಗೋವಿಂದ ಪ.ತಿರುಗಿ ಭವದಲಿ ಗೋವಿಂದ ವೃಥಾಮರುಗಿ ಬಳಲಿದೆನೊ ಗೋವಿಂದಕರಗಿ ತಾಪದಿ ಗೋವಿಂದ ಸಿಡಿಲೆರಗಿಸಿಕೊಂಡೆನೊ ಗೋವಿಂದ 1ಎಚ್ಚರ ಹಾರಿತು ಗೋವಿಂದ ನಾಮೆಚ್ಚಿದೆ ವಿಷಯಕೆ ಗೋವಿಂದಹುಚ್ಚು ಮಾಡಿತು ಮನ ಗೋವಿಂದ ನಿನ್ನುಚ್ಚರಣಡಗಿತು ಗೋವಿಂದ 2ಆಸೆಯ ಬಿಡಿಸೈ ಗೋವಿಂದ ನಿನ್ನದಾಸರೊಳಿರಿಸೈ ಗೋವಿಂದಪ್ರಸನ್ನವೆಂಕಟ ಗೋವಿಂದಭವಘಾಸಿಯ ತಪ್ಪಿಸು ಗೋವಿಂದ 3
--------------
ಪ್ರಸನ್ನವೆಂಕಟದಾಸರು
ಚಿಂತೆಯ ಪರಿಹರಿಸೊ ತಿಮ್ಮಯ್ಯಚಿಂತಾಯಕಕಂತುಕಮಲೆಯ ರಾಯಪ.ಸಾಧ್ಯವಲ್ಲದುದನ್ನು ಹಂಬಲಿಸಿಬುದ್ಧಿಭ್ರಾಂತಿಲಿ ಬಲು ಸುಖ ಬಯಸಿಕದ್ದ ಕಳ್ಳನಂತೆ ವೃಥಾ ಕುದಿದೆಮದ್ದು ಮೆದ್ದಿಲಿಯಂತೆ ಬಳಲಿದೆ 1ತಿಳಿದು ಮಾಯದ ಬಲೆಗೆ ಮೈಗೊಟ್ಟೆಬೆಲೆಗಟ್ಟಿ ವೃಥಾ ಹುಚ್ಚು ದೈನ್ಯಬಟ್ಟೆಆಲಿಸಿ ಮೋಕ್ಷದ ನೆಲೆಯ ಕೇಳದೆ ನಾಕಳವಳಗೊಂಬೆ ಕರುಣಾಸಂಪನ್ನ 2ಚಿಂತೆಗೆ ಚಿಂತೆ ಸಹಾಯವಾಗಿಅಂತರಂಗದಕ್ಲೇಶಹೇಸಿತು ಬಾಗಿಶಾಂತಮೂರ್ತಿ ಪ್ರಸನ್ವೆಂಕಟೇಶ ಏಕಾಂತದಾಸರ ನೆಳಲನೆ ತೋರಿಸೊ 3
--------------
ಪ್ರಸನ್ನವೆಂಕಟದಾಸರು
ತೇಲಿಸೊ ಇಲ್ಲ ಮುಳುಗಿಸೊ- ನಿನ್ನ-|ಪಾಲಿಗೆ ಬಿದ್ದೆನೊಪರಮದಯಾಳೊಪಸತಿ-ಸುತ-ಧನದಾಶೆ ಎಂತೆಂಬ ಮೋಹದಿ |ಹಿತದಿಂದ ಅತಿನೊಂದು ಬಳಲಿದೆನೊ ||ಗತಿಯನೀವರ ಕಾಣೆ ಮೊರೆಯ ಲಾಲಿಸೊ ಲಕ್ಷ್ಮೀ-|ಪತಿನಿನ್ನ ಚರಣದ ಸ್ಮರಣೆಯಿತ್ತೆನ್ನ1ಜರೆರೋಗ ದಾರಿದ್ರ್ಯ ಕಶ್ಮಲವೆಂತೆಂಬ |ಶರಧಿಯೊಳಗೆ ಬಿದ್ದು ಮುಳುಗಿದೆನೊ ||ಸ್ಥಿರವಲ್ಲ ಈ ದೇಹ ನೆರೆನಂಬಿದೆನು ನಿನ್ನ |ಕರುಣಾಭಯವನಿತ್ತು ಪಾಲಿಸೊ ಹರಿಯೆ 2ದೋಷವುಳ್ಳವ ನಾನು ಭಾಷೆಯುಳ್ಳವ ನೀನು |ಮೋಸ ಹೋದೆನೊ ಭಕ್ತಿರಸವ ಬಿಟ್ಟು ||ದಾಸರ ಸಂಗವಿತ್ತು ಪಾಲಿಸೊ ಹರಿಯೆ 3
--------------
ಪುರಂದರದಾಸರು
ನನಗೆ ಮನಕೆ ಬಡಿದಾಟೆಳೆದಾಟ ಶ್ರೀಸನಕಾದಿವಂದ್ಯ ಬಿಡಿಸಿ ಕಾಯೊದಾತಪ.ಸಲಿಲಸ್ನಾನವ ಮಾಡಿ ಊಧ್ರ್ವ ತಿಲಕವನಿಟ್ಟುನಳಿನಾಕ್ಷ ನಿನ್ನಂಘ್ರಿ ಜಪಿಸೆಂದರೆಛಲದಿಂದ ವಿಹಿತವಲ್ಲದ ದಾರಿಗೊಯ್ದೆನ್ನತೊಳಲಿಸಿ ನೆಲೆಗಾಣಿಸದೆ ಛಲವಿಡಿದಿದೆ 1ಬೇಡಿಕೊಂಡರೆ ಕೇಳದಾಡಿಕೊಂಡರೆ ಕೇಳದೀಡಾಡಿ `ಬಿಸುಟೆನ್ನ ದಣಿಸುತಿದೆನೋಡುನಾನಾಕ್ರೋಶ ಮಾಡಿದರಂಜದುಬಾಡಿ ಬಳಲಿದೆನೆನ್ನ ಕರುಣಿಲ್ಲವಿದಕೆ 2ಮನಪಶುಕಟ್ಟಲು ಜ್ಞಾನಧಂಗಡವಿಲ್ಲಘನವೈರಾಗ್ಯದ ಕಟ್ಟು ದೃಢವಿಲ್ಲವುಮಿನುಗುವ ಭಕುತ್ಯೆಂಬ ಎಳೆಹುಲ್ಲಿನಾಸಿಲ್ಲನೀನೆ ವಶಮಾಡಿಕೊ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯಎನ್ನ ಗುಣದೋಷಗಳ ಎಣಿಸಬೇಡಯ್ಯ ಪಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತುಮೇಲೆ ಯೌವನಮದದಿ ಮುಂದರಿಯದೆ ||ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನುಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು 1ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲಕೇಶವನೆ ಕ್ಲೇಶವನು ನಾಶ ಮಾಡಯ್ಯ 2ಈ ತೆರದಿ ಕಾಲವನು ಕಳೆದೆ ನಾನಿಂದಿರೇಶಭೀತಿ ಮೋಹದಿ ಙ್ಞÕನರಹಿತನಾದೆ ||ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆದಾತಶ್ರೀಪುರಂದರವಿಠಲ ದಯಮಾಡೈ3
--------------
ಪುರಂದರದಾಸರು
ನೋಡೊ ನೋಡೊ ರಂಗ ತನ್ನಖೋಡಿತನ ಬಿಡದೋಡು ಚಿತ್ತವು ಪ.ಎಳೆ ಎಳೆದು ನಾನೆ ಬಳಲಿದೆ ತಾ ತನ್ನತಿಳಿದ ಕಡೆಯಲಿ ಸುಳಿದಾಡಿತುಒಲಿದು ಭಕುತಿಯ ಬಲಿದಿರೆಂದರೆಛಲದಿ ಶುಭಮಾರ್ಗ ಕೊಳದು ದಾತಾರ 1ಕ್ಷಣದೊಳಾರೆ ನಾರಾಯಣ ದಾಮೋದರಮುನಿಧ್ಯೇಯನೆ ನಿನ್ನ ನೆನೆದಾಡದೆಹಣಿದಾಡೆನ್ನೊಳು ಒಣ ಧ್ಯಾನಿಸುತಿದೆಜನದೂಷಣದೊಳು ದಣಿದಾಡುತಿದೆ 2ಇನ್ನಾವಗೆ ಪೇಳಲೆನ್ನ ಒಡಲ ಮಾತಎನ್ನ ಒಡೆಯ ಪಾವನ್ನಕಾಯ ಪ್ರಸನ್ನ ವೆಂಕಟರನ್ನ ಒಲಿಯೊ ನೀಅನ್ಯ ವಿಷಯಕೆ ದೈನ್ಯವಾಗಿದೆ 3
--------------
ಪ್ರಸನ್ನವೆಂಕಟದಾಸರು
ಪವಡಿಸು ಪರಮಾತ್ಮಾ ಶ್ರೀ ಶ್ರೀಶಾಪವಡಿಸು ಪರಮಾತ್ಮಾ ಪಪರಮಭಕ್ತರನು ಪೊರೆಯುವ ದೇವನೆಅ.ಪರನ್ನಮಂಟಪದೊಳು ಕನ್ನಡಿಯಂದದಿಸ್ವರ್ಣವರ್ಣದಲಿಹ ಪನ್ನಂಗ ಕಾದಿಹ 1ಸುತ್ತಲು ತುಂಬುರರು ನಾರದರು ಸ್ತೋತ್ರವ ಮಾಡಿಅತ್ಯಂತ ಹರುಷದಿ ಚಿತ್ತೈಸೆಂದೆನುವರು 2ಥಳಥಳಿಸುವ ದಿವ್ಯತಾರೆಗಳಂದದಿಲಲನೆಶ್ರೀ ಭೂದೇವಿಯರು ಸೇವಿಪರು ನಿನ್ನ3ವೇದವ ಕದ್ದನ ಭೇದಿಸಿ ಅಜನಿಗೆವೇದವ ತಂದಿತ್ತು ಆದರಿಸಿದ ದೇವ 4ಮುಳುಗಿದ ಗಿರಿಯನು ಧರಿಸಿ ಬೆನ್ನಲಿ ಬೇಗಸುರರಿಗೆ ಅಮೃತವ ಕುಡಿಸಿದಮಾಧವ5ಸುರಮುನಿಗಳಿಗೆಲ್ಲಾ ಅಭಯವ ನೀಡುತವರಹರೂಪತಾಳಿ ಬಳಲಿ ದಣಿದು ಬಂದಿ6ಕಂದನಿಗಾಗಿ ದೊಡ್ಡ ಕಂಬದಿಂದುದಿಸಿ ಖಳನಕೊಂದು ಕರುಳ ವನಮಾಲೆ ಧರಿಸಿ ದಣಿದಿ 7ಮೂರಡಿ ಭೂಮಿಯ ಬೇಡಿ ಬಲೀಂದ್ರನದೂಡಿ ಪಾತಾಳಕೆ ಬಹಳ ಬಳಲಿ ಬಂದಿ 8ಭೂಮಿ ಪಾಲಕರನ್ನು ಸೋಲಿಸಿಬಾರಿಬಾರಿವಾರಿಜಾಕ್ಷ ಶ್ರೀರಾಮರಿಗೊಲಿದೆಯೊ 9ಸೇತುವೆಯನ್ನುಕಟ್ಟಿದೂರ್ತರಾವಣನ ಕುಲವಘಾತಿಸಿ ಕೊಂದ ರಘುನಾಥನೆ ಬಳಲಿದೆ 10ವಸುದೇವ ಕಂದನೆ ಶಿಶುರೂಪಿನಿಂದಲಿಅಸುರೆ ಪೂತಣಿ ಅಸುಹೀರಿ ಬಳಲಿ ಬಂದಿ 11ತಿದ್ದಿ ತ್ರಿಪುರಾಸುರರ ಮರ್ದಿಸಿ ಸುಜನರಿಗೆಮುದ್ದು ತೋರಿದ ಸುಪ್ರಸಿದ್ಧ ಮೂರುತಿ ಬೇಗ 12ಕರದಿ ಖಡ್ಗವ ಧರಿಸಿ ಸಿರದಿ ಕಿರೀಟ ಹೊಳೆಯೆಇಳೆಯ ಮನುಜರಿಗೆಲ್ಲ ಸುಲಭನಂದದಿ ತೋರ್ಪಿ 13ಮಂಗಳಚರಿತ ವಿಹಂಗವಾಹನ ಸುರಗಂಗೆಯಪಿತ ಸಾಧುಸಂಗವಂದಿತ ದೇವ 14ಗರುಡಗಮನ ಕೃಷ್ಣ ಉರಗನ್ಹಾಸಿಗೆಯೊಳುಸಿರಿದೇವಿ ಸಹವರ ಕಮಲನಾಭ ವಿಠ್ಠಲ 15
--------------
ನಿಡಗುರುಕಿ ಜೀವೂಬಾಯಿ
ಪ್ರಹ್ಲಾದ ವರದ ಭಯಗಜಕೆ ಸಿಂಹಪರಮಆಹ್ಲಾದಪದವಿತ್ತು ಪೊರೆಯೊ ನರಸಿಂಹÀ ಪ.ಹಿಂದೆ ಹಿರಣ್ಯಕನುದರದಲಿ ಜನಿಸಿ ಪ್ರಹ್ಲಾದನೊಂದವನ ಬಾಧೆಯಲಿ ಮರಳಿ ಮರಳಿಇಂದಿರೇಶ ಸಲಹೆನಲು ಗಡಾ ಸ್ತಂಭದಲೊದಗಿಬಂದವನುರವ ಬಗಿದು ರುಧಿರವನು ಸವಿದೆ 1ಅಸುರ ಕೆಡೆದದ ಕಂಡು ಅತಿ ಹರುಷದಿಂದ ತ್ರಿದಶರಂಬರದಿ ಪೂಮಳೆಗರೆಯಲುಶಿಶುವೇಕ ಮಾನಸದಿ ಮರೆಹೊಕ್ಕು ಪೊಗಳುತಿರೆಬಿಸಜಾಕ್ಷ ಕರುಣದಿಂದವನ ಸಲಹಿದೆಯಾಗಿ 2ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯನಳಿನಾಕ್ಷ ನಿಮ್ಮ ಗುರುತವ ಕಾಣದೆಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದವಿಡಿದೆಗೆಲಿಸು ಭವದುರಿತವ ಪ್ರಸನ್ವೆಂಕಟ ನೃಸಿಂಹ 3
--------------
ಪ್ರಸನ್ನವೆಂಕಟದಾಸರು
ಬಾರೋ ಮಗನೆ ಬಳಲಿದೆಯಾಡಿಬಾರೊ ಮಗನೆ ಪ.ಎಲ್ಲಿಗೆ ಹೋಗಿದ್ಯೊ ಎನ್ನೆದೆಝಲ್ಲು ಝಲ್ಲು ಎನುತಲಿದೆಮೆಲ್ಲೆದೆಗಾರ್ತಿ ಗೊಲ್ಲತೀರು ನಿನ್ನಗಲ್ಲ ಕಚ್ಚಿಹರಲ್ಲೊ ಹಸುಳೆ 1ಬಾಡಿತೊವದನಇಂದಾರೊಳುಮಾಡಿದ್ಯೊಕದನಕಾಡುವ ಬಾಲ ಪ್ರೌಢಿಯರ ತೋರಿಸುನಾಡ ಬಿಟ್ಟವರನೋಡಿಸುವೆ ನಡೆ 2ಕೂಸಿನಾಟವಲ್ಲೊ ಜಟ್ಟಿಗನವಿೂಸಲಂಜಿಕಿಲ್ಲೊಹೇಸದೆ ಬೆಣ್ಣೆಯ ಸವಿದು ನಿರ್ದೋಷ ಕೃಷ್ಣ ನೀ ಘಾಸಿಯಾದೆ 3ಕೋಮಲಾಂಗವಿದು ಕಲ್ಲೆದೆಕಾಮಿನಿಯರೊಯಿದುಕಾಮುಕಿಯರತಿ ಪ್ರೇಮದಲಪ್ಪಪ್ಪಿದಾಮಸಡಿಲ್ಯದೆ ಶ್ರೀಮುರಾರಿ4ಮುದ್ದಿನಾಮೃತೆ ಬಾ ಪೊಂದೊಟ್ಟಿಲೊಳ್ನಿದ್ರೆಗೈಯಲಿಲ್ಲ ಎದೆಗದ್ದಿಗೆಲಿದ್ದು ನಲಿದಾಡೊ ಪೂರ್ಣಶುದ್ಧ ಪ್ರಸನ್ವೆಂಕಟ ಶ್ರೀಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಭಂಡನಾದೆನು ನಾನು ಸಂಸಾರದಿ |ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ಪಕಂಡ ಕಲ್ಲುಗಳಿಂಗೆ ಕೈಮುಗಿದು ಸಾಕಾದೆ |ದಿಂಢೆಗಾರರ ಮನೆಗೆ ಬಲು ತಿರುಗಿದೆ ||ಶುಂಡಾಲನಂತೆನ್ನ ಮತಿ ಮಂದವಾಯಿತೈ |ಪುಂಡರೀಕಾಕ್ಷನೀ ಕರುಣಿಸೈ ಬೇಗ1ನಾನಾವ್ರತಂಗಳನು ನಾ ಮಾಡಿ ಬಳಲಿದೆನು |ಏನಾದರೂ ಎನಗೆ ಫಲವಿಲ್ಲವು ||ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ |ನೀನಾದರೂ ಕೃಪೆಯನಿಡು ಬೇಗ ಹರಿಯೇ 2ಬುದ್ಧಿಹೀನರ ಮಾತಕೇಳಿನಾ ಮರುಳಾದೆ |ಶುದ್ಧಿ ಇಲ್ಲದೆ ಮನವು ಕೆಟ್ಟು ಹೋಯ್ತು ||ಮಧ್ವನುತಸಿರಿಪುರಂದರವಿಠಲ ತತ್ವದ |ಸಿದ್ಧಿಯನು ದಯೆಗೆಯ್ದು ಉಳುಹು ನೀ ಎನ್ನ 3
--------------
ಪುರಂದರದಾಸರು
ವಂದಿಪೆ ಶ್ರೀವರನೇ | ಸುಂದರನೇ |ವಂದಿಪೆ ಶ್ರೀವರನೇಪಆಶ ಪಾಶಕ್ಲೇಶವ ಬಿಡಿಸೈ |ದಾಸಗೆ ದಯತೋರಿ1ಧೀರನೆ ಶೂರನೆ | ವೇದೋದ್ಧಾರನೆ |ತೋರಿಸೊ ಮುಖವನ್ನೆ2ಶೋಕಮೋಹಾನೇಕದಿ ಬಳಲಿದೆ |ನೀ ಕೃಪೆ ತೋರಿನ್ನು3ನಂದನ ಕಂದ ಗೋವಿಂದನ ¥್ಞಲಿ¸Àುಚಂದದಿ ಮೈದೋರಿ4<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ವ್ಯಾಪಾರವೆನಗಾಯಿತುಶ್ರೀಪತಿಯ ಪಾದಾರವಿಂದ ಸೇವೆಯೆಂಬ ಪಹರಿಕರುಣವೆಂಬಂಗಿಗುರುಕರುಣಮುಂಡಾಸುಹರಿದಾಸರ ದಯವೆಂಬ ಒಲ್ಲಿ ||ಪರಮಪಾಪಗಳೆಂಬ ಪಾಪೋಸವನೆ ಮೆಟ್ಟಿದುರುಳಾತ್ಮರಾದವರ ಎದೆ ಮೇಲೆ ನಡೆವಂಥ 1ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿನಾಲಗೆಯೆಂಬ ಲೆಕ್ಕಣಿಕೆ ||ಶ್ರೀಲೋಲನ ದಿವ್ಯನಾಮವೆಂಬುವ ಲೆಕ್ಕಶೀಲದಿ ಬರೆದು ಶ್ರೀಹರಿಗೆ ಒಪ್ಪಿಸುವಂಥ 2ನುಡಿನುಡಿಗಾನಂದ ಬಾಷ್ಪ ರೋಮಾಂಚನಮುಡುಪಿನೊಳಗೆ ಇಟ್ಟ ಕೈಜೀತವು ||ಕಡಿಮೆ ಸಂಬಳಕೆಲ್ಲ ಮುಕ್ತಿಸಾಧನವನ್ನುಕೊಡುವ ತೆರನಂತೆ ಚೀಟಿ ಬರೆಸಿಕೊಟ್ಟ 3ಹಿಂದಿನ ಸಂಸಾರ ಆಗಮನದ ಭಯಎಂದೆಂದಿಗದರ ಚಿಂತೆಯು ಬಿಟ್ಟಿತು ||ಮುಂದಿನ ಸಂಸಾರ ಸ್ಥಾನ ಭಾರಕೆಲ್ಲಸಂದಾಯವನು ಮಾಡಿ ಕತಬಿ ಹರಿಸಿಕೊಟ್ಟ 4ಕಂಡಕಂಡವರ ಕಾಲುಗಳಿಗೆರಗಿ ನನ್ನಮಂಡೆದಡ್ಡುಗಟ್ಟಿ ಬಳಲಿದೆನೊ ||ಪುಂಡರೀಕಾಕ್ಷಶ್ರೀಪುರಂದರವಿಠಲನುಕಂಡು ವೀಳೆಯ ಕೊಟ್ಟು ತನ್ನ ಸೇವೆಗೆ ಇಟ್ಟ 5
--------------
ಪುರಂದರದಾಸರು
ಹಿಂದಿಲ್ಲಾ ಇನ್ನು ಮುಂದಿಲ್ಲಾ |ಹಿಂದಿಲ್ಲಾ ಮುಂದಿಲ್ಲಾ | ಒಂದಿನ ಸುಖವಿಲ್ಲಾಪನಂದ ಗೋಪನ ಮುದ್ದು | ಕಂದ ನೀನಲ್ಲದೆ ಅ.ಪಉಡುವರಿವೆ ಇಲ್ಲಾ ಉಂಬರನ್ನವು ಇಲ್ಲ |ನಡೆವರೆ ಮುಂದೆ ದಾರಿಯು ಕಾಣೆನಲ್ಲ ||ಪೊಡವಿ ಪಾಲಕ ಶ್ರೀಕೃಷ್ಣ ನೀನಲ್ಲದೇ |ಬಡವನ ಬಾರೆಂದು ಕರೆದು ಮನ್ನಿಪರಿಲ್ಲ1ಕಾಸು ಕೈಯೊಳಗಿಲ್ಲ | ಆಸೆ ದೇಹದೊಳಿಲ್ಲ ||ದೇಶ ದೇಶವ ಸುತ್ತಿ ಬಳಲಿದೆನಲ್ಲಾ ||ಭಾಸುರಾಂಗನೆ ಶ್ರೀನಿವಾಸ ನೀನಲ್ಲದೇ |ಲೇಸನೆಣಿಸುವರ ಕಾಣೆ ರುಕ್ಮಿಣಿನಲ್ಲ2ಸತಿಸುತರೆನಗಿಲ್ಲ |ಗತಿಮುಂದೆ ಶಿವ ಬಲ್ಲ ||ಹಿತದಿಂದಲಿರಲೊಂದು ಮನೆ ತನಗಿಲ್ಲ ||ಪೃಥವಿ ಪಾಲಕ ಸೀತಾರಾಮ ನೀನಲ್ಲದೇ |ಹಿತವ ಬಯಸುವರ ಕಾಣೆ ಜಗದ ನಲ್ಲ3ತಂದೆ ತಾಯಿಗಳಿಲ್ಲ | ಬಂಧು ಬಳಗವಿಲ್ಲ |ಒಂದು ವಿದ್ಯವ ನಾನು | ಕಲಿತವನಲ್ಲಾ ||ಇಂದಿರೆಯರಸ ಗೋವಿಂದ ನೀನಲ್ಲದೇ |ಬಂದ ಭಾಗ್ಯಗಳೊಂದು ನಿಜವಾದುದಲ್ಲಾ4<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ