ಒಟ್ಟು 521 ಕಡೆಗಳಲ್ಲಿ , 73 ದಾಸರು , 449 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ನಾಲ್ಕು ವಚನ ಮುಂದೆ ಬ್ರಹ್ಮಾದಿಗಳು ಇಂದಿರಾದೇ ವಿಗ್ಹೀಗೆಂದು ಮಾತಾ ಇಂದು ಕುಳಿತಿರುವ ನೀ ಮುಂದ್ಹೋ ಮಂದ ಗಮನೆಯು ತಾನು ಕಾರ್ಯ ನನ್ನಿಂದ ಆಗದು ಕಳುಹಿಸಲವನು ಹರಿಚರಣಾರವಿಂದಲಿ ಸಾಷ್ಟಾಂಗ ತಲೆಯ ಮೇಲೆ ಚಂದಾಗಿ ಕೈಯಿ ಪ್ರಹ್ಲಾದ ಹೀಗೆಂದು ಪ್ರಾರ್ಥಿಸಿದಾ 1 ರಾಗ ದಯಮಾಡೊ ಹರಿಯೆ ದಯಮಾಡೊ ಪ ದಯಮಾಡ್ಹರಿಯೆ ಅಭಯಕೊಟ್ಟು ನೋಡೋ ಅ.ಪ ನಿನ್ನ ಕೋರೆಗಂಜುವ ಪಾರುಮಾಡೋ 1 ಭಯಾಂಕಿತನಲ್ಲವೋ ಭಯಾಂಕಿತನಾದೆನು ಶಂಕಿಸಬೇಡೋ 2 ಬೀಳದೆ ಕದನ ನಡುಗವೆ ಒದಗಿ ಬೇಗನೆ ಬಂದು ಬದಿಯಲಿ ಕೂಡೋ 3 ಮಾಳ್ಪ ಪರಮಪರಾಧವ ನಾನಿನ್ನ ಮರೆತರು ನೀನೆನ್ನ ಮರೆಯಲು ಬೇಡವೋ 4 ನಿನ್ನಡಿಗಳ ಮರಗುವೆ ಮರೆಯದಂಥ ವರತ್ವರದಲಿ ನೀಡೋ 5 ವಚನ ವ್ಯಾಪಿಸಿರುವಂಥ ಆಕೋಪ ಕೋಪವದು ಆಜಗದ್ವ್ಯಾಪ ಶ್ರೀಪತಿಯ ಸೇವೆಯಲಿ ವ್ಯಾಪರಕ್ಹಿಗ್ಗುತ ನಿಶಾಪತಿ ಪ್ರಸನ್ನನಾಗುತಲೆ ಈ ಪರಿಯ ನುಡಿದಾ 1 ರಾಗ ಹಿಡಿ ನೀ ವರವಾ ಹಿಡಿ ನೀ ವರವಾ ದೃಢವಾಗಿರುವಾÀ ಪ ಕಡು ಪ್ರಹ್ಲಾದನೆ ಬಿಡುಸಂಶಯವಾಅ.ಪ ನೇಮಿಸಿ ಕೊಡುವೆ 1 ಮಾನ್ಯರಾಗುವರು 2 ಬಿಟ್ಟು ಬಂದಿರುವೆ3 ವಚನ ಅಚ್ಚಸ್ನೇಹವ ಮಾಡಿ ಇಚ್ಛಿಸದೆ ಮನ ಭಕುತಿಯನು ಅಚ್ಯುತನ ವತ್ಸರೊಳು ಗಣನಿಲ್ಲ ಜ್ಞಾನದಲಿ ಹೆಚ್ಚಿನವ ತಾನು ಬೇರಿಚ್ಛೆ ಯವನಲ್ಲ ತನ್ನಿಚ್ಛೆಯಿಂದಲಿ ನುಡಿದ ಸ್ವಚ್ಛ ನರಹರಿಗೆ 1 ರಾಗ ನಾವೆಲ್ಲನು ವರಗಳ ಹರಿಯೆ ನಾವಲ್ಲೆನು ಪ ವಲ್ಲೆನು ವರ ಲಕ್ಷ್ಮೀವಲ್ಲಭನೆ ಅ.ಪ ಕೊಟ್ಟೆನ್ನ ವಂಚಿಸಬೇಡಾ 1 ಮುಕ್ತಿಯಾದರು 2 ಬಡುವೆ ಅನಂತಾದ್ರೀಶನೆ 3 ರಾಗ ಹೀಗೆಂದು ನುಡಿದನು ನೃಪಗೆ ನರಸಿಂಹಾ ಪ ಇಂಥಾ ಬಲ್ಲಿದ ಆಗ್ರಹವೇಕೋ ನರಸಿಂಹಾ1 ಭಕ್ತನೋ ನಾನು ನರಸಿಂಹಾ 2 ಭಕ್ತನೆಂದು ತಿಳಿದುಕೊಡುವೆ ನೃಪಸಿಂಹಾ ಸ್ವಚ್ಛ ಭಕ್ತಿಯೊಂದೆ ಸಾಕೊ ಎನಗೆ ನರಸಿಂಹ3 ಐಶ್ವರ್ಯವ ಭೋಗಿಸು ನೀನು ನೃಪಸಿಂಹಾ ಅಷ್ಟು ಐಶ್ವರ್ಯ ಸಲ್ಲೋದು ನಿನಗೆ ನರಸಿಂಹಾ 4 ರಾಜ್ಯದಿಂದ ಫಲವೇನೊ ನರಸಿಂಹಾ 5 ಕೊಂಡಾಡುವೆ ನರಸಿಂಹಾ 6 ನಿಷ್ಕಾಮುಕನೆಂಬುದರಿಯಾ ನರಸಿಂಹಾ 7 ಮುಕ್ತಿಯನ್ನು ತಂದೆಗೆ ಕೊಡು ನೀ ನರಸಿಂಹಾ 8 ಅನಂತಾದ್ರೀಶ ನರಸಿಂಹಾ 9 ವಚನ ಕೊಟ್ಟವರ ಬಿಡಬೇಡ ಬಿಟ್ಟು ನನ್ನಲಿ ಚಿತ್ತ ಬಿಟ್ಟುಸಂಶಯ ಮುಂದೆ ಇಷ್ಟುಮಾತುಗಳಾಡಿ ತಟ್ಟನವನೊ ಮೇಲಭಯವನು ಸೃಷ್ಟಿಕರ್ತನೆ ಕರಕೊಂಡು ಪಟ್ಟಗಟ್ಟಿದವಗೆ ಆ ಪಟ್ಟದಾಸನದಲ್ಲಿ ಕುಳಿತಾ 1 ಕೊಟ್ಟರಾಕಾಲದಲಿ ಪಟ್ಟಿಯನು ನಡುವಿನಲಿ ಇಟ್ಟು ಸಕಲಾಭರಣ ಅಷ್ಟು ಆಭರಣದಲೆ ದಿಟ್ಟಾಗಿ ಕಸ್ತೂರಿ ಬಟ್ಟಿಟ್ಟ ಕೈಯಲ್ಲಿ ಪಟ್ಟದಾನೆಯ ಭಯಪಟ್ಟು ಬಳಕುತ ಪ್ರಹ್ಲಾದನ್ನ ದೃಷ್ಟಿಯಿಂದಲಿ ಬೆಳಗಿದರು ದಿಟ್ಟನಾರಿಯರು 2 ರಾಗ ಮಂಗಲಂ ಜಯ ಮಂಗಲಂ ತಿಳಿದವಗೆ ಹಿರಣ್ಯ ಪತ್ನಿಯ ಗರ್ಭದಲಿರುತಲಿ ಗುರುನಾರದನಿಂದರಿತವಗೆ 1 ವೃದ್ಧನಾದವಗೆ ಶೋಧಿಸಿ ಪುತ್ರ ಪ್ರಹ್ಲಾದನಿಗೆ 2 ಪೇಳ್ದವಗೆ ಭೂಲೋಕ ಮುಖ್ಯದಿ ಮೂಲನಿಗೆ 3 ಇರುವವಗೆ ಸಿರಿಯು ಸಿಟ್ಟು ಬಿಡಿಸಿರುವವಗೆ 4 ಸಂತತ ನಿಸ್ಪøಹನಾದವಗೆ ಸಂತೋಷದಿ ಕುಳಿತಿರುವ ಸತತ ಶ್ರೀ ಮದನಾಂತಾದ್ರೀಶನ ಚಿಂತನದಿಂದಿರುವಂಥವಗೆ 5 ವಚನ ಮುಂದೆ ಪ್ರಹ್ಲಾದ ತಾನಿಂದಿರೇಶನ ಆಜ್ಞೆ ಯಿಂದ ಇದು ಹರಿಸೇವೆಯೆಂದು ರಾಜ್ಯವ ಮಾಡಿ ಬಂದ ಬಂದವರಿಗೆ ಮುಂದಕ್ಕೆ ಕರೆದು ಆ ನಂದದಿಂದತಿ ಮನಕೆ ಬಂದದ್ದು ಕೊಟ್ಟುತ್ವರ ದಿಂದ ಮಾಡಿದ ಪುಣ್ಯ ಅಂದಿಗರ್ಪಿಸಿ ಹರಿಗೆ ಚಂದಾಗಿ ನಿರ್ಲಿಪ್ತನೆಂದೆನಿಸಿಕೊಂಡಾ ಮುಂದೆ ಈ ಕಾಲದಲಿ ಹಿಂದೆ ಮಾಡಿದ ಪುಣ್ಯ ಮುಂದೆ ಮೋಕ್ಷಕ್ಕೆ ಒಂದು ಉಪಯುಕ್ತವಲ್ಲ ಬಂದ ಬಂದವರಿಗೊಂದೊಂದು ನಾ ಕೊಡುವೆನು ಎಂದು ಪ್ರಹ್ಲಾದ ರಾಜೇಂದ್ರನೆ ಶ್ರೀರಾಘ ವೇಂದ್ರ ರಾಯರು ಎನಿಸಿ ಬಂದು ಮಂತ್ರಾಲಯಕೆ 1 ಮುಂದೆ ಅಲ್ಲಿರುವ ಬಹುಚಂದದಿಂದ ಲೋಕದಲಿ ಪ್ರಹ್ಲಾದನೀ ಕಥೆಯ ಕೇಳ್ವವರು ಲೋಕÀಮಾನಿತರವರು ಬೇಕಂತ ಭಕ್ತಿಯಲಿ ಸ್ವೀಕರಿಸಿ ಪಠಿಸಿದರೆ ವಾಕ್ಚಪಲರಾಗುವರು ತೂಕ ಇಲ್ಲವರಿಗೆ ಬೇಕಾದ ಸ್ಥಳದಲಿ ಬೇಕಾದ್ದು ಬರುವದು ತೋಕರುಗಳಾಗುವರು ತಾ ಕರೆದು ಕೊಡುವ
--------------
ಅನಂತಾದ್ರೀಶ - ಕಥನಕಾವ್ಯಗಳು
ಅನಂತಗಿರಿವಿಠಲ | ಪಾಲಿಸೋ ಇವಳಾ ಪ ಗುಣಪೂರ್ಣ ಶ್ರೀಹರಿಯೆ | ಬೇಡುವೆನು ಧೊರೆಯೇ ಅ.ಪ. ಸಿದ್ಧಿಸುತ ಶಿಷ್ಯತ್ವ | ಶುದ್ಧ ಸ್ವಪ್ನದೊಳೀಕೆಉದ್ಧಾರಕೆಂದೆನುತ | ಪ್ರಾರ್ಥಿಸುತ್ತಿಹಳೋ |ಮಧ್ವರಮಣನೆ ದೇವ | ಸಿದ್ದಾಂತ ಸಾರವನುಬುದ್ದಿಗೇ ನಿಲುಕಿಸೋ | ಭದ್ರಮೂರುತಿಯೆ 1 ಪ್ರಾಚೀನ ದುಷ್ಕರ್ಮ | ಮೋಚನೆಗೆ ಮನಮಾಡೋವಾಚಾಮ ಗೋಚರನೆ | ಖಚರಾರಿ ವಂದ್ಯನೀಚೊಚ್ಚ ತರತಮವ | ವಾಚಿಸುತ ಕರ್ಮಗಳಪಾಚಿಯನೆ ಕಳೆಸವ್ಯ | ಸಾಚಿ ಸಖದೇವಾ 2 ಹರಿಪಾದ ರತಿ ಕೊಟ್ಟು | ಹರಿ ಗುರು ಸೇವೆಗಳನಿರುತಗೈಯುವ ಮನವೆ | ಪರಿಪಾಲಿಸ್ಹರಿಯೇಅರವಿಂದನಾಭಹರಿ ಸರ್ವ ಸತ್ಸಾಧನವನೆರವೇರಿಸೆಂದೆನುತ | ಪ್ರಾರ್ಥಿಸುವೆ ಹರಿಯೇ 3 ಜ್ಞಾನಾನು ಸಂಧಾನ | ಮಾಣದಲೆ ಇತ್ತಿವಳಧ್ಯಾನ ಮಾರ್ಗಕೆ ತಂದು | ಮೌನಿ ಜನ ವಂದ್ಯಾಸಾನುರಾಗದಿ ನಿನ್ನ | ಹೃದಯ ಗಹ್ವರದಲ್ಲಿಕಾಣುವ ಸುಸಾಧನವ | ನೀನೇ ಮಾಡಿಸೊ ಹರಿಯೇ 4 ಸರ್ವಾಂತರಾತ್ಮಕನೆ | ದುರ್ವಿ ಭಾವ್ಯನೆ ದೇವಸರ್ವಕರ್ಮದಿ ನಿನ್ನ | ಸಂಸ್ಕøತಿಯ ನಿತ್ತುದರ್ವಿಜೀವಿಯ ಕಾಯೋ ಸರ್ವೇಶ ಶ್ರೀಹರಿಯೆಶರ್ವನೊಡೆಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಅನಂತಶಯನ ವಿಠಲಾ | ಕಾಪಾಡೊ ಇವಳಾ ಪ ಸಾರ ಅ.ಪ. ತಾಪತ್ರಯಗಳು ಎಂಬ | ಕೂಪಾರದಲಿ ಬಿದ್ದು ಶಾಪಕೊಳಗಾಗಿ ಹಳ ಕಾಪಾಡಬೇಕೊದ್ರೌಪದಿಯವರದ ಕರು | ಣಾಪಯೋನಿಧಿಹರೆಯೆನೀ ಪೊರೆಯದಿರಲನ್ಯ | ಕಾಪಾಡ್ವರ್ಯಾರೊ 1 ತೈಜಸನೆ ನೀನಾಗಿ | ಸೂಚಿಸಿಹ ಅಂಕಿತವಯೋಜಿಸಿಹೆ ಇವಳೀಗೆ | ಅವ್ಯಾಜ ಕರುಣೀಪ್ರಾಜ್ಯ ಎನ ಸಂಸಾರ | ಗೌಜು ಕಳೆಯಲ್‍ವೆನ್‍ತ್ರ್ಯಜಗದ್ವಾಪನೆ | ವಾಜಿವದನಾಖ್ಯ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಪೇರ್ಮೆಯಲಿ ಪತಿಸೇವೆ | ಕರ್ಮಪ್ರಾಧಾನ್ಯಧರ್ಮವನೆ ತಿಳಿಸುತ್ತ | ಭರ್ಮಗರ್ಭನ ಪಿತನೆಕರ್ಮಬೀಜವ ಕಳೆಯೊ | ಬ್ರಹ್ಮಣ್ಯದೇವಾ3 ಮರುತಾಂತರಾತ್ಮನೆ | ಮೂರೆರಡು ಭೇದಗಳತರತಮಂಗಳನರುಹಿ | ಪೊರೆಯೊ ಇವಳಾಅರುಹುವೆನೊ ಸರ್ವಜ್ಞ | ತರುಳೆಬಹುಭಕ್ತಿಯಂತೆಕರುಣಿಸೆಲೊ ಕೃಪಾಸಾಂದ್ರ | ಕಂಜಜಾನಯ್ಯ 4 ಗಾವಲ್ಗಣೀ ವರದ | ಭಾವದಲಿ ಮೈದೋರಿನೀ ವೊಲಿಯೆ ಬಿನ್ನಪದೆ | ಗೈಯೆ ಶ್ರೀಹರಿಯೆಕೋವಿದೊತ್ತಂಸ ಗುರು | ಗೋವಿಂದ ವಿಠಲನೆಕಾವ ಕರುಣಿ ಎಂದು | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ಅಪ್ರಾಕೃತ ಕಾಯಾ ಪ ಶ್ರೀಕರಾರ್ಚಿತಪಾದ ಲೋಕೇಶ ವಂದಿತ ಅ- ವ್ಯಾಕೃತಾಕಾಶದೊಡೆಯನೆ ವಾಸುಕೀಶಯನ ಸರ್ವೇಶ ನೀನೆ ಪ್ರಾಕೃತ ಸಜ್ಜಮಜ್ಜನ ಕಾರ್ಯಕೆ ಕಾರಣನಯ್ಯ ಏಕೋ ನಾರಾಯಣ ಅ.ಪ ಪ್ರಳಯಕಾಲದಿ ಜೀವರ ನಿಲಯಾ ಕಲ್ಪಿಸಿ ತತ್ತ ನಾಲ್ಕುವಿಧಗಳ ರೂಪಗಳನು ಧರಿಸಿ ಪ್ರಳಯದೊಳಿಂಬಿಟ್ಟು ಎಳೆಸಿದ ಕಟಾಕ್ಷವೀಕ್ಷಣದಿಂದಲಿ 1 ಅಳವು ಇಲ್ಲದ ಸೃಷ್ಟಿಯನೆಸಗಿದೇ ಸಾಧುಜೀವರು ತಮ್ಮ ಸಾಧನ ಪೊರೈಸಿ ಸ್ವದೇಹದೊಳು ಬಂದ ಮೋದದಿಂದಲಿ ನೋಡಿ ಬಾಧಿಪ ಲಿಂಗಭಂಗವೈದಿಹ ಪ್ರಾರಬ್ಧನಾಶನವಿಹ ವಿ- ವಿಧ ಸುಜೀವರ ಮೋದಪಡಿಸಿ ನಿ- ಉದರದೊಳಿಟ್ಟ್ಯಯ್ಯ ಸದಮಲಮೂರುತಿ ಅದುಭುತಮಹಿಮ ಶ್ರೀ ವಾಸುದೇವನೆ2 ಸಂಚಿತ ನೀಗಿ ಪ್ರಾರಬ್ಧ ಶೇಷ ಭೋಗ ಉಳ್ಳವರೆಲ್ಲ ಆಗದೆ ಪೂರ್ಣ ಸಾಧನೆ ನೀಗದೆ ಲಿಂಗಭಂಗ ಆಗ ಬಿಂಬನ್ನ ನೋಳ್ಪರ ನಾಗಶಯನ ನಿನ್ನಂಗದೊಳಿಂಬಿಟ್ಟೆ ಜಾಗುಮಾಡದೆ ನೀನಾಗಲೆ ಜೀವರ ಭೋಗವ ತರಲು ಭಾಗವಗೈಸಿ ಭೂಭಾಗದ ಸಾಧನ ಮಾಳ್ಪ ಜೀವಗಣ ಭಾಗವ ಕಾಯ್ದೆ ಸಂಕರುಷಣ ಮೂರುತೆ 3 ನಿತ್ಯಸಂಸಾರಿಗಳಿಗೆ ಇತ್ತೆ ನಿನ್ನುದರದೊಳು ಮುಕ್ತರೊಡೆಯ ದೇವ ಶಕ್ತನಹುದೋ ನೀ ಮೊತ್ತ ಮೊದಲು ನೀನಿತ್ತು ಪೊರೆದೆ ಬರಲಿತ್ತ ಕಾರಣ ಪ್ರ- ಸುತ್ತಿ ಸುತ್ತಿರುವೆ ಬಿತ್ತರಿಸಲೇನನಿರುದ್ಧಮೂರುತೇ 4 ಅಣುವಿಗೆ ಅಣುವಾಗಿ ಘನತೆ ಘನತಮನಾಗಿ ತೃಣಜೀವರಾದಿ ಬ್ರಹ್ಮಗಣರೆಲ್ಲರೊಳು ಗಣನೆ ಇಲ್ಲದ ಕಾರ್ಯ ಕ್ಷಣಬಿಡದಲೆ ನಡೆಸಿ ಎಣೆಯಿಲ್ಲದಿಹ ಸುಗುಣ ಸಾಂದ್ರನೆ ಪ್ರಣವದೊಳು ಪ್ರತಿಪಾದ್ಯನಾಗಿಹೆ ತ್ರಿಗುಣರಹಿತ ಮುಖ್ಯ ಪ್ರಾಣಾಂತರ್ಗತ ಪ್ರಣತಕಾಮದ ಪೂರ್ಣ ಸಂಪೂರ್ಣ5 ಮುಕ್ತಾಮುಕ್ರಾಶ್ರಯ ಭಕ್ತಪರಾಧೀನ ಶಕ್ತಾನೆ ಸರ್ವವೇದೋಕ್ತ ಮಹಿಮಾತೀತ ಉಕ್ತನಾಗಿಹೆ ಪುರುಷಸೂಕ್ತಾದೊಳಪ್ರಮೇಯ ಶಕ್ತಿಯನರಿಯರು ಅಜಭವಾದ್ಯರು ಶಕ್ತನೆ ಜೀವನ್ಮುಕ್ತರೌಘ ಸಕ್ತರಾಗಿ ನಿನ್ನ ಸ್ತೋತ್ರವ ಮಾಳ್ಪರು 6 ಶ್ರೀಶಾ ಸರ್ವೋತ್ತಮ ವಾಸ ವೈಕುಂಠಾಧೀಶ ವಾಸವಾದಿ ವಂದಿತ ಭಾಸುರಾಂಗನೆ ವಿಶ್ವಾಸ ನಿನ್ನೊಳಿಟ್ಟ ದಾಸ ಜನರ ಕಾಯ್ವ ಈಶಾವ್ಯಾಸಮಿದಂಸರ್ವಂ ಎಂದೆಂದು ಎಂದು ಉಸುರುವ ವೇದಗಳ್ ಏಸುಕಾಲಕು ಸಾಕಲ್ಯದಿ ವರ್ಣಿಸ ಲೀಶ ಕೋಟಿ ಪ್ರವಿಷ್ಟೆಗೆ ಅಸದಳ 7 ಅಂಗಜಪಿತ ರಂಗ ಮಂಗಳಾಂಗನೆ ಮಾ- ತಂಗವರದ ದೇವ ಗಂಗಾಜನಕ ಕಾಳಿಂಗನಾ ಮದ ಮೆಟ್ಟಿ ಭಂಗಾಗೈಸಿದ ಭುಜಂಗಶಯನ ಎನ್ನಂತಾ- ರಂಗದಿ ನಿಲ್ಲೋ ಇಂಗಿತ ಬಲ್ಲೆ ಶ್ರೀರಂಗಶಾಯಿ ಸಾ- ರಂಗಪಾಣಿ ಕೃಪಾಂಗ ಎನ್ನಯ ಭವಭಂಗಗೈಸಿ ಸ- ತ್ಸಂಗವೀಯೋ ಯದುಪುಂಗವ ಮಂಗಳಮೂರುತಿ ಶೌರೇ8 ಕಾಲ ಜಾಲವ ತಂದೆ ಪಾಲಿಪ ಸಲಹಿಪ ಕರ್ತ ನೀನಲ್ಲದಿ- ನ್ನಿಲ್ಲವಯ್ಯ ಶ್ರೀ ವೇಂಕಟೇಶ ಪ್ರಭೋ 9
--------------
ಉರಗಾದ್ರಿವಾಸವಿಠಲದಾಸರು
ಅಸಾಧಾರಣ ವಿಠಲ ನೀ ಸಲಹೊ ಇವಳಾ |ಈಶಾದಿ ದಿವಿಜೇಡ್ಯ | ಶ್ರೀರಾಮಚಂದ್ರಾ ಪ ವಿಶ್ವ ಮೂರುತಿಯೇ |ಮೀಸಲ ಮನದಲಿರೆ | ನೀ ಸ್ವಪ್ನ ಸೂಚಿಸಿದೆಏಸು ಕರುಣವೊ ನಿನಗೆ | ದಾಸ ಜನರಲ್ಲೀ1 ಪರಿಪರಿಯ ಭವಣೆಗಳ | ಪರಿಹರಿಸಿ ಭಕ್ತಳಿಗೆಪೊರೆಯೊ ಕರುಣಾವನಧಿ ನರಹರಿಯೇ ಸ್ವಾಮೀ |ತರತಮದ ಜ್ಞಾನ ಸ | ದ್ವೈರಾಗ್ಯ ಭಕುತಿಯನುಕರುಣಿಸೀ ಪೊರೆ ಇವಳ | ಮರುತಾಂತರಾತ್ಮ 2 ಪಂಚಾತ್ಮಕನೆ ಪ್ರಾ | ಪಂಚ ಸುಖದೊಳಗೆ ತವಸಂಚಿಂತನೆಯ ಕೊಟ್ಟು | ಕಾಪಾಡೊ ಹರಿಯೇಪಂಚಭೇದವು ಅಂತೆ | ನೀಚೋಚ್ಚ ಕ್ರಮ ತಿಳಿಸೀವಾಂಛಿತಾರ್ಥದ ಕಳೆಯೊ | ಸಂಚಿತಾಗಮವಾ 3 ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಭ್ರಷ್ಟಸಂಗವ ಕೊಡವೆ | ಶಿಷ್ಟರಲ್ಲಿಡಿಸೋ |ಇಷ್ಟ ಮೂರ್ತಿಯ ಮನದಿ | ಸ್ಪಷ್ಟ ತೋರುತ ಸಲಹೋಶಿಷ್ಟ ಜನ ಸದ್ವಂದ್ಯ | ವಿಷ್ಣು ಪ್ರಾರ್ಥಿಸುವೇ 4 ಗೋವರ್ಧನೋದ್ದರಗೆ | ಭಾವುಕರ ಪರಿಪಾಲಪಾವನಕೆ ಪಾವನನೆ | ಕಾವುದೀಕೆಯನುದೇವನೀನಲ್ಲದಲೆ | ಕಾವರನ್ಯರನ ಕಾಣೆಗೋವಿದಾಂಪತಿ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಅಸುರಾಂತಕನರಸಿಯೆ ನೀಬೇಗ ಪ ಕುಸುಮಾಕ್ಷತೆ ಲಾಜಗಳಿಂದಲಿ ಮೇ- ಲೆ ಸುರಾರ್ಚೆಲ್ಲಿ ಪ್ರಾರ್ಥಿಸುವರು ನಿನ್ನ ಅ.ಪ ಸುರರು ಮೋದದಿಂದ ತಾವು ಪೊಗಳುತಿಪ್ಪರು ಪಾದನೂಪುರವಲುಗದಂತೆ ನೀ ಸಂ- ಮೋದವ ಬೀರುತ್ತ ಸುಜನರಿಗೆಲ್ಲ 1 ಗಿರಿಜಾವಾಣೀಯಾರ್ಕರವ ಕೊಡಲು ಅರುಂಧತಿ ಮುಖರೆಚ್ಚರಿಕೆ ಪೇಳಲು ಕರುಣಾರಸವ ಸುರಿಸುತ್ತ ನೀ ಭ- ಕ್ತರು ಬೇಡಿದಿಷ್ಟಾವರವ ನೀಡಲು2 ಇಂದಿರೆ 3
--------------
ಗುರುರಾಮವಿಠಲ
ಆ ವೆಂಕಟಗಿರಿನಿಲಯನಂಘ್ರಿ ರಾ ಜೀವಯುಗಳಗಾನಮಿಸುವೆನು ಪ ಸೇವಿಪ ಜನರಿಗಮರ ತರುವೆನಿಸಿ ಧ ರಾವಲಯಾಖ್ಯ ದಿವಿಯೊಳೆಸವ ಅ.ಪ. ನಿಖಿಳ ಜಗತ್ತಿಗೆ ಪಾವನತರವೆಂದೆನಿಸುವುದು ಶ್ರೀ ವಿಧಿಭವ ಶಕ್ರಾದ್ಯರು ಆವನ ಸೇವಕ ಸೇವಕರೆನಿಸುವರು ತಾ ಉತ್ತಮ ಪುರುಷನೆನಿಸಿ ಜಗವ ಸ ದಾವಕಾಲ ಸಂತೈಸುವನು ಜೀವಾಂತರ್ಗತನಾಗಿ ವಿವಿಧ ವೇ ದಾವಳಿಯಿಂದ ತುತಿಸಿ ಕೊಂಬಾ 1 ಪಾತನೊಳಹಿಪ ವಿರೋಧಿಸೆ ತವಸ ತ್ವಾತಿಶಯನ ತೋರೆಂದೆನುತಾ ಜಾತರೂಪ ಶೈಲಾತ್ಮಜನಪ್ಪಿರೆ ವೀತಿ ಹೋತ್ರ ಸಖ ಕಿತ್ತೊಗೆಯೆ ವೀತ ಕರ್ನನಳವಳಿದು ವೇಗ ಧಾತ ಮಹಿಳೆ ತೀರ್ಥದಿ ಭೂ ಲಕ್ಷ್ಮೀಸ ಮೇತನಾಗಿ ಮೋದಿಸುತಿಪ್ಪೆ 2 ಭೂಸುರನೊರ್ವನು ತೊಂಡಮಾನ ಧರ ಣೀಶÀನ ನಿಲಯದೊಳುಳುಹಿ ಸತಿಯ ನೃಪತಿ ಮರೆಯೆ ನಿ ಶ್ವಾಸ ವನೈದಿದಳಾ ಸತಿಯು ಆ ಸಮಯದಿ ದ್ವಿಜವರ್ಯನು ಬೆಸಗೊಳೆ ಕ್ಲೇಶದಿ ಭೂಮಿಪ ಸಂಸ್ತುತಿಸೆ ಕೇಶವ ತಾನಸ್ಥಿಗಳ ತರಿಸಿ ಸು ವಾಸಿನಿ ಶಿಶು ಸಹ ಒಲಿದಿತ್ತಾ 3 ವೃದ್ಧ ಬ್ರಾಹ್ಮಣನು ತುತಿಸೆ ಸಲಿಲದೊಳ ಗದ್ದಿ ಕುಮಾರತ್ವವನಿತ್ತ ಅಧ್ವರವೆಸಗಿದ ಋಷಿಗಳ ಮಂತ್ರದ ಪದ್ದತಿ ತಿದ್ದಿಯಜ್ಞವ ಮಾಡ್ದ ಮಧ್ಯರಾತ್ರಿಯೊಳು ಬೆಸಗೊಂಡ ನೃಪನು ಪದ್ರವ ಕಳೆದಾಯುಧವಿತ್ತು ಮೃದ್ಭಾಂಡವ ರಚಿಸುವನಿಗೊಲಿದವನ ಚೋದ್ಯ ತೋಂಡಮಾನಗೆ ತೋರ್ದ 4 ಸಂಚಿತ ಕುಕರ್ಮಗಳ ಮನೆಯ ಮುರಿದು ಆಗಾಮಿ ಫಲಂಗಳ ಅನುಭವಕೀಯದೆ ಪ್ರಾರಬ್ದಾ ಮೂರ್ತಿ ಚಿಂ ತನೆ ಇತ್ತು ಸ್ವರೂಪಸುಖಾ ಅನುದಿನದಲಿ ವ್ಯಕ್ತಮಾಡಿಸಿ ಕೊ ಟ್ಟನಿಮಿತ್ತಾಪ್ತನೆನಿಸುತಿಪ್ಪ 5 ಏಕಮೇವ ರತ್ನಾಕರ ಮಂದಿರ ಆಕೂತಿಜ ಯಜ್ಞಾಕರನೇ ಲೊಕವಿಲಕ್ಷಣ ಸೂಕರಾತ್ಮ ಪಿ ವಿನುತ ಲಕ್ಷ್ಮೀ ಕಾಂತಾ ಗೋಕುಲ ಮಂದಿರ ಏಕಾಂತಿಗಳ ನಿ ರಾಕರಿಸಿದೆ ಲೋಕೈಕ ಸುಖ ಶೋಕ ರಹಿತ ನಿಜಲೋಕವಿತ್ತು ನಿ ರಾಕುಲ ಸುಖಗಳ ತಾ ಕೊಡುವಾ 6 ದಿನಪನೊಳಗೆ ವೃಜಿನಿ ವಸು ತಾ ಎಂ ದೆನಿಸಿ ಜಯಾಪತಿ ಪ್ರದ್ಯುಮ್ನ ಅನಿರುದ್ಧಾದಿ ಚತುರ್ಮೂತ್ರ್ಯಾತ್ಮಕ ತನಗೆ ತಾನೆ ಪೂಜಕ ಪೂಜ್ಯ ಅನುಪಮ ನಾಮದಿ ಕರೆಸುತಲಿಹ ತ ನ್ನನು ಈ ಪರಿಧೇನಿಸುತಿಪ್ಪ ಮನುಜರಿಗೊಲಿದು ಜಗನ್ನಾಥವಿಠ್ಠಲ ಜನನ ಮರಣಗಳ ಪರಿಹರಿಪಾ 7
--------------
ಜಗನ್ನಾಥದಾಸರು
ಆಡುವನೀಶ್ವರ ಜೀವಪಗಡೆಯ ಕಾಯಆಡುವನವರವರ ಕರ್ಮಾನುಸಾರಆಡಿಯೆ ತನಗೆ ಬೇಸರವಾಗೆ ಕಟ್ಟುವಆಡುವ ವಿವರವ ಹೇಳುವೆ ಕೇಳಿ ಪ ಪ್ರಪಂಚ ಹಾಸಂಗಿ ಪ್ರಾರಬ್ಧ ಲತ್ತವುಪಾಪ ಅಜ್ಞಾನ ಲಿಂಗತನುವೆಂಬ ಚಿಟ್ಟೆಯುರೂಪು ನಾನಾ ಬಗೆಯ ಜೀವಕಾಯನೆ ಮಾಡಿಭಾಪು ಭಳಿರೇ ಎಂದು ಕೊಂದು ಹೂಡಾಡುತ 1 ಒಂದಕೊಂದರಬಲ ಒಂದಕೆ ಜೋಡು ಬಲಒಂದು ಜೋಡಿಗೆ ಒಂದು ಜೋಡು ಬಲ ಮಾಡಿಒಂದರಿಂದೊಂದು ಕೊಂದು ಜೋಡಿಂದ ಜೋಡು ಕೊಂದುಅಂದು ಹುಟ್ಟಿ ಸಾಯುವುದಕ್ಕೆ ಕಡೆಯಿಲ್ಲದೇ 2 ಈ ಪರಿಯಲಾಡುತ್ತ ತನಗೆ ಬೇಸರ ಹುಟ್ಟೆಪಾಪಿಗಳನೆಲ್ಲ ಪಾಪ ಚೀಲದಿ ಕಟ್ಟಿಭೂಪ ಚಿದಾನಂದನು ಆದ ಈಶ್ವರ ತಾನುರೂಪು ವಿರೂಪಾದ ನಿದ್ದೆಯಲಿ ಮಲಗುವ 3
--------------
ಚಿದಾನಂದ ಅವಧೂತರು
ಆತ್ಮನಿವೇದನೆ ಏನು ಕಾರಣವೆನಗೆ ತಿಳಿಯಲಿಲ್ಲದೀನ ರಕ್ಷಕನಾದ ಹರಿಯೆ ತಾ ಬಲ್ಲ ಪ ಕಾನನದೊಳಗೆ ಕಡುತಪಿಸಿ ತೃಷಿಯಾದವಂಗೆತಾನಾಗೆ ಮೋಡೊಡ್ಡಿ ಮೇಘ ಕವಿದುನಾನು ಧನ್ಯನೆಂದು ನರ್ತಿಸುವ ಸಮಯದಲಿಕಾಣದೇ ಪೋಯಿತು ಬಿಂದು ಮಾತ್ರ 1 ಪಾದ ಭಜನೆಯನ್ನುಹರುಷದಲಿ ಪಾಡಿ ಹಗಲಿರುಳು ಪ್ರಾರ್ಥಿಸುವಂಗೆಪುರುಷಾರ್ಥ ಪೂರೈಸಿ ಬಾರದಿಪ್ಪ ಬಗಿಯು 2 ಅನ್ನಾದಿಯಿಂದ ಅನ್ನಂತ ಜನ್ಮದಿ ಬಂದುಉನ್ನಂತ ಮಾಡಿದ ಪಾಪರಾಶಿ-ಯನ್ನು ಉಣದನಕ ಭೂವನ್ನದೊಳು ಮತ್ತೆ ಪಾ-ವನ್ನರಾ ಪಾದಗಳು ಪಡೆಯಲರಿಯದೊಯೇನೊ 3 ಅನ್ನಾಥ ಬಂಧು ಹರೆಯೆನ್ನುವಾ ಬಿರುದಿಗೆನಿನ್ನಂಥ ಮಹಿಮನಾ ಕರೆದು ವೊಂದೂಎನ್ನಂಥ ಪರಮ ಪಾತಕಿಯನುದ್ಧರಿಸಿತಾ-ಸನ್ನಗೊಳಿಸಿ ಸತತ ಸಲಹದಿಹುದು ಏನು 4 ಅರಸಿನಾಲೋಚನಿಯು ಸತತ ಸನ್ನಿಧಿಯೊಳನು- ಸರಿಸಿದ ಆಳುಗಳು ಬಲ್ಲ ತೆರದಿಸರಸಿಜ ನಯನ ವೆಂಕಟ ವಿಠಲನ ಪಾದಸರಸಿಜದಿ ಸರಸರೊಳು ನಲಿದು ನೀ ಬಾರದಿಹುದು 5
--------------
ವೆಂಕಟೇಶವಿಟ್ಠಲ
ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ. ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು 1 ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ 2 ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು 3 ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ 4 ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ 5 ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ 6 ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ 7 ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ 8 ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ 9 ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ 10 ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ 11
--------------
ಗುರುಗೋವಿಂದವಿಠಲರು
ಆನಂದನಿಲಯ ವಿಠ್ಠಲನೆ | ನೀನಿವಳ ಸಲಹಬೇಕೊಜ್ಞಾನಗಮ್ಯನೆ ದೇವ | ಮೌನಿಮಧ್ವರ ಹೃದಯಾ ಪ ಪಾದ ಸೂಸಿ ಸೇವಿಪಳೋ |ವಾಸುಕೀಶಯನ ಮ | ಧ್ವೇಶ ತವಪದ ಕಮಲದಾಸಳೆಂದೆನಿಸುತ್ತ | ನೀ ಸಲಹೊ ಹರಿಯೇ 1 ಉದ್ಯೋಗ ವ್ಯವಹಾರ | ವಿದ್ಯೆಯಲಿ ಚಾತುರ್ಯಮಧ್ಯೆ ಮಧ್ಯೇ ಬರುವ | ಹೃದ್ರೋಗಗಳು ಸರ್ವಪ್ರದ್ಯುಮ್ನ ತವ ಸೇವೆ | ಎಲ್ಲ ಇವು ಎಂಬಂಥಶುದ್ಧ ಜ್ಞಾನವಿತ್ತು | ಉದ್ಧರಿಸೊ ಹರಿಯೇ 2 ಭವ ಕಳೆಯೋಈರ ಕರುಣಾ ಪಾತ್ರ | ಗೌರಿಪತಿ ಶಿವವಂದ್ಯಗೌರಿದೇವಿಯ ಅಭಯ | ತೋರ್ದೆ ಸ್ವಪ್ನದಲೀ3 ಪತಿಸೇವೆ ಇತ್ತಿವಳ | ಕೃತಕಾರ್ಯಳೆಂದೆನಿಸುಹಿತಮಿತ್ರ ಪಿತೃಮಾತೃ | ಬಂಧು ಬಳಗದಲೀ |ಕೃತಿಪತಿಯು ಸರ್ವರಲಿ | ವ್ಯಾಪ್ತನಾಗಿಹನೆಂಬಮತಿಯಿತ್ತು ಸಲಹಿವಳ | ಗತಿ ಪ್ರದನೆ ಹರಿಯೇ 4 ಗುರುಧರ್ಮ ಗುರುಸೇವೆ | ಪರಮ ಭಕುತಿಯಲಿಂದಚರಿಪ ಸನ್ಮತಿಯಿತ್ತು ಕರುಣದಲಿ ಕಾಯೋಗುರುವಂತ ರಾತ್ಮನನ | ತೋರೆಂದು ಪ್ರಾರ್ಥಿಸುವೆಪರಮ ಪುರುಷನೆ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಆನಂದಾನಂತ ವಿಠಲ ನೀನಿವನ ಸಲಹೊ ಪ ಜ್ಞಾನಿಜನ ಸುಪ್ರೀಯ ನೀನೆಂದು ಭಿನ್ನವಿಪೆ ಅ.ಪ. ಪ್ರಾಚೀನ ದುಷ್ಕರ್ಮ ನಿಚಯದಿಂದಲಿ ಬಳಲಿಸ್ವೋಚಿತ ಸುಕರ್ಮಕ್ಕೆ ಅವಕಾಶ ವಿರದೇ |ವಾಚಿಸುತಲೀ ನಿನ್ನ ನಾಮಾಮೃತವ ಸವ್ಯಸಾಚಿ ಸಖನೇ ನಿನ್ನ ಮೊರೆಯ ಹೊಕ್ಕವನಾ 1 ಕರ್ಮ ಆಧೀನ ನಿನದಲ್ಲೆ |ನೀದಯದಿ ಸಂಚಿತವ ಮೋದದಲಿ ಕಳೆದು |ವೇದಗಮ್ಯನೆ ಹರಿಯೆ ಭೇದಮತ ಸುಜ್ಞಾನ ಭೋದಗೈವುದು ಎಂದು ಪ್ರಾರ್ಥಿಸುವೆ ನಿನ್ನಾ 2 ಮಂತ್ರನಿಲಯರ ನಿರುತ ಸ್ವಾಂತದಲಿ ಭಜಿಸುತ್ತಸಂತ್ರಸ್ತಸಜ್ಜನರ ಪೊರೆಯೆ ಮೊರೆಯಿಡುತ |ಭ್ರಾಂತ ಮಾಯಾತ್ಮ ತೊರೆದು ಅಂತರಂಗದಿ ಮಧ್ವಅಂತರಾತ್ಮನ ಭಜಿಪ ಸಂತದಾಸನ್ನಾ 3 ಅಂಬರ ಸುವಾಣಿಯಿಂದಂಬೆ ರಮಣನು ರುದ್ರಬಿಂಬ ನರಹರಿ ನೀನೆ ಇಂಬಿನಂಕಿತವನಂಬಿ ಬಂದಿಹಗಿತ್ತು ಸಂಭ್ರಮದಿ ಕರುಣಿಸಿಹೆಬಿಂಬ ಕ್ರಿಯ ಸುಜ್ಞಾನ ತುಂಬು ಇವನಲ್ಲೀ 4 ದೋಷದೂರನೆ ಹರಿಯೆ ದಾಸನ ಸದ್‍ಹೃದಯ ದಾಶಯದಿ ತವರೂಪ ಲೇಸು ತೋರೆಂಬಾ |ಮೀಸಲು ಪ್ರಾರ್ಥನೆಯ ಸಲಿಸೆಂದು ಭಿನ್ನವಿಪೆವಾಸುಕೀ ಶಯನ ಗುರು ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಆಮಿತ ಮಹಿಮೋಪೇತ ವಿಠಲ ಸಲಹೋ ಪ. ವಿಮಲಮತಿ ಇತ್ತಿವಗೆ ಕಾಮಿತಾರ್ಥವನೇಅ.ಪ. ತೈಜಸನೆ ನೀನಾಗಿ ನಿಜಯಾರ್ಯನುಗ್ರಹವಯೋಜಿಸಿಹೆ ಸ್ವಪ್ನದಲಿ ಕಾರುಣ್ಯಮೂರ್ತೇಭ್ರಾಜಿಷ್ಣು ಸುಜ್ಞಾನ | ವೈರಾಗ್ಯ ಭಾಗ್ಯಗಳಮಾಜದಲೆ ಕರುಣಿಸೆಂದಾನಮಿಪೆ ಹರಿಯೇ 1 ಹೇ ಸದಾಶಿವ ವಂದ್ಯ | ಕ್ಲೇಶತೋಷಗಳಲ್ಲಿಭಾಸಿಸಲಿ ತವನಾಮ | ಮೀಸಲದ ಮನದೀ |ಆಶುಗತಿಮತ ಪೊಂದಿ | ದಾಸದೀಕ್ಷಾಕಾಂಕ್ಷಿವಾಸವಾನುಜ ಇವನ | ದಾಸನೆಂದೆನಿಸೋ 2 ಭವ ಉತ್ತರಿಪಸದ್ವಿದ್ಯ ಪಾಲಿಪುದು ಮಧ್ವಾಂತರಾತ್ಮಾ 3 ಹರಿಗುರೂ ಸದ್ಭಕ್ತಿ | ದುರ್ವಿಷಯನಾಸಕ್ತಿಎರಡು ಮೂರ್ಭೇದಗಳ | ಅರಿವ ನೀನಿತ್ತೂತರತಮದ ಸುಜ್ಞಾನ | ಕರುಣಿಸುವುದೆಂದೆನುತಕರಿವರದ ಭಿನ್ನವಿಪೆ ಪ್ರಾರ್ಥನೆಯ ಸಲಿಸೋ 4 ಕಾಯ ಬೇಕೋ 5
--------------
ಗುರುಗೋವಿಂದವಿಠಲರು
ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ ವಾಸವಾಗದಂತೆ ಕಾಯೋ ಮೋಹನ್ನಾ ವಾಸುದೇವನೆ ನಿನ್ನ ಸ್ಮರಣೆಯೊಳಗೆ ಮನ ಸೂಸದಂತೆ ಸ್ಥಿರ ನಿಜದಲ್ಲಿ ನಿಲಿಸಯ್ಯಾ ಪ ಬೆಂಬಿಡದೆಲೆ ನಿಜದರಿವನ್ನು ಕೊಡುವಾ ಕುಂಭಿಣಿಯೊಳಗೆಲ್ಲಾ ನೀನಲ್ಲದೆ ಎನ್ನಾ ನಂಬಿಗೆ ಕೊಡುವವರ್ಯಾರೋ ನಾರಾಯಣಾ 1 ಬೆಂದೆನು ನಾ ಭವದೊಳಗೆ ಎನ್ನಾ ತಂದೆ ನೀ ಕಾಯೋ ನಿಜಪದದೊಳಗೆ ಹಿಂದಿನ ಪ್ರಾರಬ್ಧ ಬವಣೆಯ ತೀರಿಸಿ ಮುಂದೆ ನೀ ಸಲಹೊ ಪರಮಪುರುಷನೆ ಹರಿ 2 ವಾಸನೆ ಬಂಧವೇ ಜೀವಾ ನಿ ರ್ವಾಸನೆಯನು ಕೊಟ್ಟು ಸಲಹೊ ಮಾಧವಾ ಶೇಷಶಯನನೆ ನಿಜ ಧ್ಯಾನದೊಳಿರಿಸೆನ್ನಾ ಆಶೆಯನು ಸಲಿಸಯ್ಯಾ ಮುರಾರಿ 3 ಅನಂತ ಮಹಿಮಾ ಮೇಘಶ್ಯಾಮಾ ನಿಶ್ಚಿಂತ ನಿಜ ಶಾಂತಿ ಸ್ವಸುಖವೀವಾ ನಂತಪರಾಧವ ಕ್ಷಮಿಸೆನ್ನಾ ಗುರುವೇ 4
--------------
ಶಾಂತಿಬಾಯಿ
ಆಳ್ವಾರಾಚಾರ್ಯ ಸ್ತುತಿಗಳು 1. ವಿಶ್ವಕ್ಸೇನ ಪ್ರಾರ್ಥನೆ ಶ್ರೀನಾಥಜ್ಞಾಪ್ರಕಾರ ನಡೆಯುವ ಸೂತ್ರವತೀರಮಣ ಮಾನಿತ ಪ್ರದಾನ ಮಂತ್ರೀ ಪೂಜಿಪೆ ವಿಘ್ನೇಶಾ ನಮಿಪೆ ಪ ಬಿಳಿಯುಡೆ ತುಂಬಿದ ತಿಂಗಳ ಬೆಳಗಾ ತೊಳಗುವ ನಾಲಕು ತೋಳುಗಳ ಒಲಿದಿಹ ನಗೆಮೋಗ ವಿಷ್ಣು ನೆನೆವೆ ಸುಲಭದಿ ಕಾರ್ಯವ ಗೈಸುವನೆ1 ದ್ವಿರದವಕ್ತ್ರತಾ ಮೊದಲಾಗಿರುವ ಪರಿಜನ ನೂರ್ವರಿಂದೊಪ್ಪಿರುವೇ ಪರಿಪರಿ ತಡೆಗಳ ತರಿದೋಡಿಸುತ ಪೊರೆ ವಿಶ್ವಕ್ಸೇನಾಶ್ರಿತ ನಾನು 2 ಬಿಡುಗಣ್ಣರ ಬೆಡಗಿನ ಒಡಲುಳ್ಳ ಕುಡಿನೋಟದ ತಾವರೆಗಣ್ಣ ಪಿಡಿದಹ ಶಂಖ ಚಕ್ರ ಗದಾಯುಧ ಒಡೆಯ ಮುಕುಂದ ದ್ವಾರನಿಲಯನೇ 3 ಬೊಮ್ಮ ಭವಸುರರು ನಯದಿಂ ಮೊದಲಾರಾಧಿಪರು ಶುಭ ಫಲದಾಯಕ
--------------
ಶಾಮಶರ್ಮರು