ಒಟ್ಟು 54 ಕಡೆಗಳಲ್ಲಿ , 21 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮವಂದಿತ ವಿಠಲ | ಅಣುಗನನ ಪೊರೆಯೋಮಣಿದು ಪ್ರಾರ್ಥಿಪೆನಯ್ಯ | ಪಿಡಿ ಇವನ ಕೈಯ ಪ ಯೇಸೋ ಜನ್ಮದ ಪುಣ್ಯ | ರಾಶಿವದಗುತ ನಿನ್ನದಾಸತ್ವ ಪ್ರಾರ್ಥಿಸುವ | ಯೆನ್ನೊಳಗೆ ಹರಿಯೇ |ಕೇಶವನೆ ಸ್ವಪ್ನದೊಳು | ಸೂಸಿಸೂಚಿಸಿದ ಉಪ-ದೇಶವಿತ್ತಿಹೆ ಇವಗೆ | ಶ್ರೀಶಉದ್ಧರಿಸೋ 1 ತೀರ್ಥಕ್ಷೆತ್ರವ ಚರಿಸಿ | ಗಾತ್ರಪಾವಿತ್ರತೆಲಿಅರ್ಥನಾಗಿಹ ಭಕ್ತ | ಪ್ರಾರ್ಥನೆಯ ಸಲಿಸೇ |ಕೀರ್ತಿಸಿಹೆ ರಾಮತವ | ಮೂರ್ತಿಜಪಿಸಲು ನಿತ್ಯಗೋತ್ರಾರಿಸುಪ್ರಿಯ | ಸೂತ್ರಾಂತರಾತ್ಮಾ 2 ಶ್ರವಣಸಾಧನವಿತ್ತು | ಭವವನದಿ ಉದ್ಧರಿಸುಪವನ ಮೂರಲಿ ನಿನ್ನ | ಪಾವನಸ್ಮøತಿಯಾ |ಹವಣಿಸುತ ತ್ರೈತಾಪ | ಬವಣೆಗಳ ಕಳೆಯೊತ್ರೈಭುವನಗಳ ಒಡೆಯ ಮಾಧವನೆ ಭಿನ್ನವಿಪೇ 3 ಸುಪ್ತಿಜಾಗರತ್ರಯಾ | ವಸ್ಥೆಗಳ ಪ್ರೇರಕನೆಉತ್ತಮನು ಸಾಧನದಿ | ಯುಕ್ತನೆನಿಸಿವನಾ |ಕರ್ತೃಕರ್ಮವುಕರಣ | ಎತ್ತನೋಡಿದರುತವಾವ್ಯಾಪ್ತಿಯನೂ ತಿಳಿಸೂ | ಸರ್ವೋತ್ತಮನೆ ಹರಿಯೇ 4 ಶರ್ವಾದಿ ದಿನಿ ಜೇಡ್ಯ | ನಿರ್ವಿಕಾರನೆ ದೇವಗುರ್ವಂತರಾತ್ಮಗುರು | ಗೋವಿಂದ ವಿಠಲಾ |ಸರ್ವಜ್ಞ ನೀನಿರಲು | ಪೇಳ್ವುದೇನಿಹುದಿನ್ನುದುರ್ವಿಜೀವಿಯ ಕಾವ ಹವಣೆನಿನದಲ್ಲೇ 5
--------------
ಗುರುಗೋವಿಂದವಿಠಲರು
ಹರಿಕೃಷ್ಣ ವಿಠಲಾ | ಕರುಣಿಸಿವಳೀಗೆ ಪ ಕರುಣಾನಿಧಿ ಎಂದೆನುತ | ಮರೆಹೊಕ್ಕೆ ದೇವಾ ಅ.ಪ. ಜ್ಞಾನವರ್ಜಿತಳಾಗಿ | ಆಜ್ಞೆಳೆಂದೆನಿಸಿಹಳುಮಾನನಿಧಿ ನೀನಾಗಿ | ಜ್ಞಾನ ಸಾಧನವಾಸಾನುಕೂಲಿಸೆ ಕಾಯೊ | ಮೌನಿಜನ ಸದ್ವಂದ್ವನೀನೆಗತಿ ಎಂದೆನುತಾ | ತನುವನರ್ಪಿಪಳೊ 1 ಕತೃ ನೀನೆಂಬಂಥಾಉತ್ತಮದ ಮತಿಯಿತ್ತು | ಬೃತ್ಯಳನು ಪೊರೆಯೋ 2 ಕ್ಲೇಶಮೋದಗಳು ಸಮ | ಭಾಸವಾಗಲಿ ದೇವವಾಸವಾದ್ಯಮರನುತ | ವಾಸುದೇವಾ ಖ್ಯಏಸೇಸು ಜನ್ಮಗಳ | ರಾಶಿ ಪುಣ್ಯದ ಫಲದಿದಾಸ ದೀಕ್ಷೆಗೆ ಮನವ | ಆಶಿಸಿಹಳಯ್ಯಾ 3 ರಾಜೀವ ನಯನ ಹರಿಓಜಸ್ಸುಗಳ ಕೊಟ್ಟು ಕಾಪಾಡೊ ಇವಳಾ 4 ಸರ್ವಜ್ಞ ಸರ್ವೇಶ | ಸರ್ವಕಾರಣ ಮೂರ್ತಿಊರ್ವಿಯಾಳಿವಳೊಬ್ಬ | ದರ್ವಿಯಂತಿಹಳೋಸರ್ವದಾ ತವಸ್ಮರಣೆ | ಕೃಪೆಗೈದು ಪೊರೆ ಇವಳಾಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿಗುರು ಪ್ರಸನ್ನ ವಿಠಲ | ಪೊರೆಯ ಬೇಕಿವಳಾ ಪ ದುರಿತ ರಾಶಿಯ ಕಳೆದು | ಕಾಪಾಡೋ ಇವಳಾ ಅ.ಪ. ಭವ ವಂದ್ಯ | ಕೋಮಲಾಂಗನೆ ದೇವಕಾಮಿತಾರ್ಥದವನಾಗಿ | ಕಾಪಾಡ ಬೇಕೋ 1 ಬೋಧ ತಿಳಿಸುತಲೀಸಾಧನವ ಗೈಸಿ ಸ | ಮ್ಮೋದ ಕೊಡು ಇವಳೀಗೆಹೇ ದಯಾನಿಧಿ ಹರಿಯೇ | ಬಾದರಾಯಣನೇ 2 ಪತಿಸುತರೊಳು ಹರಿಯೇ | ವ್ಯಾಪ್ತಿಯನೆ ತಿಳಿಸುತ್ತಹಿತದಾದ ಸೇವೆಯಲಿ | ರತಳೆನಿಸೊ ಹರಿಯೇಹಿತವಹಿತವೆರಡನ್ನು | ಸಮತೆಯಲಿ ಉಂಬಂಥಮತಿಯ ನೀ ಕರುಣಿಸುತ | ಅತಿಹಿತದಿ ಪೊರೆಯೋ 3 ಭವವನದಿ ನವಪೋತ | ತವದಿವ್ಯಸ್ಮøತಿ ಇತ್ತುಶ್ರವಣ ಸುಖ ವದಗಿಸುತ | ಸಾಧನವ ಗೈಸೋಭುವನ ಪಾವನ ದೇವ | ತವನಾಮ ಜಪಗಳನುಸರ್ವದಾ ಕರುಣಿಸುತ | ಉದ್ಧರಿಸೋ ಇವಳಾ 4 ಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರುವೆ ಭಾರತಿನಾಥ | ಶರಣು ಲಾಲಿಸೋ ಮಾತ |ಹರಿಪದಾರ್ಚನೆ ಕೊಟ್ಟು ಪೊರೆಯೋ ದಯೆಯಿಟ್ಟು ಪರಾಮ ಸೇವಕನಾಗಿವಾನರಕಟಕನೆರಹಿ |ನೀಂ ಮುದದಿ ಲವಣಾಬ್ಧಿ ದಾಟಿ ಪೋಗಿ ||ಭೂಮಿ ತನುಜೆಳಿಗೆ ವಾರ್ತೆಯನೆ ಪೇಳಿ | ರಾಗಟಿಯಸ್ವಾಮಿಗರ್ಪಿಸಿದ ಬಲವಂತ ಹನುಮಂತ 1ರಾಜಸೂಯವ ಮಾಡುವದಕೆ ಮಾಗಧನ ಕೊಂದೆ |ಮಾಜಿಸಿದೆ ಕುರುಪತಿಯ ಸಂತತಿಯನು ||ಸೋಜಿಗವು ನಿನ್ನ ಲೀಲೆಯು ಆಯುಜಾತ ಬಿ |ಡೌಜ ರಕ್ಷಕ ದ್ರೌಪದೀಶ ಬಲವಂತ 2ಬುಧಮಧ್ಯಗೇಹನಲಿ ಅವತರಿಸಿ ಕುಮತಗಳ |ಬೆದರಿಸಿತ್ರಿದಶಸಪ್ತ ಗ್ರಂಥ ಮಾಡಿ ||ಸುದಯದಿಂದುತ್ತಮರಿಗಿತ್ತು ಮತವನು ನಿಲಿಸಿ |ಬದರಿಯೋಳ್ ಪ್ರಾಣೇಶ ವಿಠಲನಲ್ಲಿರುವೆ 3
--------------
ಪ್ರಾಣೇಶದಾಸರು
ನಂಬಿದೆ ನಿನ್ನ ಗಣೇಶ ಜಗ-ದಂಬಿಕಾತನಯ ವಿಶ್ವಂಭರದಾಸ ಪ.ಲಂಬೋದರ ವಿಘ್ನೇಶ ಶರ-ಣೆಂಬುದು ಸುರನಿಕುರುಂಬ ಮಹೇಶ ಅ.ಪ.ತರುಣಾದಿತ್ಯಪ್ರಕಾಶ ನಿನ್ನಶರಣಾಗತನಾದೆ ಮೋಹನ ವೇಷಸುರುಚಿರಮಣಿಗಣಭೂಷ ಜಗದ್ಗುರುವೆ ಗುಹಾಗ್ರಜ ಪೊರೆಯೋನಿರ್ದೋಷ1ಸಂತಜನರ ಮನೋವಾಸ ಮೋಹಭ್ರಾಂತಿಯಜ್ಞಾನಧ್ವಾಂತವಿನಾಶಶಾಂತಹೃದಯ ಸುಗುಣೋಲ್ಲಾಸ ಏಕದಂತ ದಯಾಸಾಗರ ದೀನಪೋಷ 2ಲಕ್ಷ್ಮೀನಾರಾಯಣನೆ ವ್ಯಾಸಗುರುಶಿಕ್ಷಿತ ಸುಜ್ಞಾನ ತೇಜೋವಿಲಾಸಅಕ್ಷರಬ್ರಹ್ಮೋಪದೇಶವಿತ್ತುರಕ್ಷಿಸು ದನುಜಾರಣ್ಯಹುತಾಶ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ 1ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ 3ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
--------------
ಗೋವಿಂದದಾಸ