ಒಟ್ಟು 108 ಕಡೆಗಳಲ್ಲಿ , 28 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಾತ್ಪರಪರಮಪಾವನನೆಪರಾಕುಫಣಿಶಯನ ಪಾಪಘ್ನಪ.ಸುರಾಸುರಾರ್ಚಿತ ಪುರಾಣಪುರುಷೇ-ಷ್ಟರ ನಿರಾಮಯ ಮುರಾರಿ ಶ್ರೀಹರಿ ಅ.ಪ.ನಯವೀತಭಯ ಪಾರ್ಥಪ್ರಿಯ ಸರ್ವನಿಯಾಮಕ ಚಿನ್ಮಯದಯಾವಂತ ಜಯಾಕಾಂತಹಯಾಸ್ಯಪಯೋಬ್ಧಿಶಯನ ವಿಯಾನ1ರಮಾರಮಣ ನಮಸ್ತೇ ನಿರುಪಮ ಮಹಿಮಸುಮೇಧ ಸುರೋತ್ತಮಮಮಾಪರಾಧ ಕ್ಷಮಾ ಕುರು ವಿ-ರಾಮ ನಿಯಮ ಪದುಮದಳನಯನ 2ಗುಣಾರ್ಣವ ಶರಣಾಗತಭರಣ ನಿ-ರ್ಗುಣ ಶ್ರೀ ಲಕ್ಷ್ಮೀನಾರಾಯಣಪ್ರಾಣಸುತ್ರಾಣದೇವಗಣಾಗ್ರಣಿಯಾನಂದ ಗೋವಿಂದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಕ್ಷಿಸು ಮಹಮಾಯೆ ಕರುಣ ಕ-ಟಾಕ್ಷದಿಂದಲಿ ತಾಯೆ ಪ.ದಾಕ್ಷಾಯಿಣಿ ದೈತ್ಯಾಂತಕಿವರನಿಟಿ-ಲಾಕ್ಷನ ರಾಮಿ ನಿರೀಕ್ಷಿಸು ಜನನೀ ಅ.ಪ.ವಾಸವಮುಖವಿನುತೆ ರವಿಸಂ-ಕಾಶೆ ಸುಗುಣಯೂಥೇಭಾಸುರಮಣಿಗಣಭೂಷೆ ತ್ರಿಲೋಕಾ-ಧೀಶೆ ಭಕ್ತಜನಪೋಷೆ ಪರೇಶೆ 1ಗುಹಗಣಪರಮಾತೆ ದುರಿತಾ-ಪಹೆ ದುರ್ಜನ ಘಾತೆಬಹುಕಾಮಿತಪ್ರದೆ ಭಜಕಜನೋರ್ಜಿತೆಮಹಿತೆ ಯೋಗಿಹೃದ್ಗುಹನಿವಾಸಿನಿಯೆ 2ಶುಂಭಾಸುರಮಥಿನಿ ಸುರನಿಕು-ರುಂಬಾರ್ಚಿತೆ ಸುಮನಿರಂಭಾದಿಸುರನಿತಂಬಿನೀ ಜನಕ-ದಂಬಸೇವಿತಪದಾಂಬುಜೆ ಗಿರಿಜೆ 3ಅಷ್ಟಾಯುಧಪಾಣಿ ಸದಾಸಂ-ತುಷ್ಟೆ ಸರಸವಾಣಿಸೃಷ್ಟಿಲಯೋದಯಕಾರಿಣಿ ರುದ್ರನಪಟ್ಟದ ರಾಣಿಪರಾಕುಕಲ್ಯಾಣಿ4ನೇತ್ರಾವತಿ ತಟದ ವಟಪುರ-ಕ್ಷೇತ್ರಮಂದಿರೆ ಶುಭದಾಸುತ್ರಾಣಿ ಲಕ್ಷ್ಮೀನಾರಾಯಣಿ ಸ-ರ್ವತ್ರ ಭರಿತೆ ಲೋಕತ್ರಯನಾಯಕಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಾಘವನಾಡಿದ ಮಾತಿಗಾಂಜನೇಯ ಬಿನ್ನವಿಸುವದು |ಈಗ ಪೇಳುವೆ ಸಜ್ಜನರಾಲಿಸುವದು ಪಆ ರವಿನಂದನನು ತಾ ಮೇರೆ ಮಾಡಿ ಅಟ್ಟಿದನು |ವಾನರರುಗಳನು ತಿಂಗಳು ಮೀರಿತಿಂದಿಗೆ ||ಮಾರುತಿ ಕೇಳೀ ಮಾತು ಇನ್ನಾರ ಕಾಣೆ ಬಲ್ಲಿದರ |ನಾರಿಯೆಲ್ಲಿಹಳೋ ವಾರ್ತೆ ತಾರೋ ನೀ ಪೋಗಿ 1ಸ್ವಾಮಿ ಪಾಲಿಸೊ ಅಪ್ಪಣೆ ನಾ ಮುಂಚೆ ಪೋಗುವೆ |ತಡವ ಮಾಡದೆ ಎಲ್ಲೀಗೆನ್ನ ಭೂಮಿಜಾ ರಮಣ ||ಈ ಮುದ್ರೆ ಕೊಂಡು ಪೋಗೋ ಶಾಮಲಾಪತಿ ದಿಕ್ಕಿಗೆ |ಸಮುದ್ರ ದಾಟಿ ವೇಗಪಾವಮಾನಿಕೇಳೋ 2ಭೂತಲಾಕಾಶ ಲೋಕಾದಿ ಪಾತಾಳದೊಳಗಿರಲಿ |ನಾ ತರುವೇನು ವಾರ್ತೆ ಜಗನ್ನಾಥಪರಾಕು||ಹೇತರಳತ್ರಿಲೋಕ ವಿಖ್ಯಾತನಾಗಿಹ ರಾವಣ |ಪಾತಕಕೊಂಡು ಪೋಗಿಹ ಸೀತೆಯ ಕೇಳು 3ಬುದ್ಧಿದೇವ ನೀ ಕೊಟ್ಟಂಥ ಬುದ್ಧಿಯಿಂದಲೇ ಅವನ |ಗುದ್ದಿ ಸರ್ವ ಬಲವನ್ನೂ ಒದ್ದು ಬರುವೆನೊ ||ಮುದ್ದು ಕಂದ ರಕ್ಕಸರವಧ್ಯರೋವರಪಡೆದು |ರುದ್ರನಿಂದ ಮಾಡದಿರೊ ಗದ್ದಲ ಕೇಳೋ 4ತಂದೆ ರಾಮಾ ನಿನ್ನ ದಯೆಯಿಂದ ಈಡಲ್ಲವೊ ಯನಗೆ |ನಂದಿಧ್ವಜಾ ಈ ರಕ್ಕಸರೊಂದು ತೃಣವೋ ||ಕಂದ ಈ ವೇಳೆಯೊಳೇನು ಬಂದುದನು ಭೋಗಿಸಿ ನಾನು |ಕೊಂದು ಹಾಕುವ ದಿನವೂ ಮುಂದುಂಟು ಕೇಳೋ5ದೇವಿಯ ನೋಡಿ ಬರುವಾಗ ತಾವಂತು ಕೆಣಕಲು ದಾ- |ನವರು ಸುಮ್ಮನಿರಲೇನು ದೇವದೇವೇಶ ||ಕೋವಿದಾಗ್ರೇಶನೆ ನೀನು ಸಾವಿರಾಳಿಗೆ ಒಬ್ಬನೇ |ಆ ವಿಚಾರ ಮನಕೆ ತರುವದೇ ಕೇಳೋ 6ಹೇಳಿದ ಮಾತು ಕಟ್ಟಿದ ಕೂಳು ನಿಲ್ಲವೊ | ಆ ವನ-ದೊಳೇನಹದೊ ಬಲ್ಲೆನೇ ಪ್ರಾಣೇಶ ವಿಠಲಾ ||ಬಾಲಕ ಹನುಮಂತ ನಿನ್ನೊಳಗೆನ್ನಾ ರಾಣಿಯಲ್ಲಿ- |ಹಳೋ ನೋಡಿ ಬರುವುದಕಾಲಸ್ಯ ಕೇಳೋ 7
--------------
ಪ್ರಾಣೇಶದಾಸರು
ಶ್ರೀಪತಿಪರಾಕುಮಹೀಪತಿಪರಾಕುಪ.ಅಂಜನಗಿರಿತಟನಿಲಯಪರಾಕುಕಂಜನಯನ ಖಳಪ್ರಳಯಪರಾಕುಅಂಜನೆತನಯ ಸುಸೇವ್ಯಪರಾಕುಮಂಜುಳಗಾತ್ರ ಮುಕುಂದಪರಾಕು1ಕನಕೋದರನ ಪಡೆದನೆಪರಾಕುಸನಕಾಧಿಕಋಷಿಪ್ರಿಯಪರಾಕುಮಣಿಖಚಿತಾಭರಣತನುಪರಾಕುವಿನಿರ್ಜಿತ ಮಾಯಕೋಟಿಪರಾಕು2ಅನಸೂಯ ತನುರತ್ನಪರಾಕುಅನಪೇಕ್ಷಿತ ನಿರ್ಯತ್ನಪರಾಕುಮನುಕನ್ಯಾತ್ಮಜ ಕಪಿಲಪರಾಕುಚಿನ್ಮಯ ಚಿದ್ಗುಣವಿಪುಲಪರಾಕು3ಗುಹ್ಯಾತ್ಗುಹ್ಯ ಸ್ವರೂಪಪರಾಕುಅಸಹ್ಯ ನಿರ್ಲೇಪ ಸುರೇಶಪರಾಕುಸಿಂಹನರರೂಪ ಹರಿಯೆಪರಾಕುದಹ್ಯದನುಜಕುಲವೈರಿಪರಾಕು4ಭಕ್ತಾಭೀಷ್ಟ ಪ್ರದಾತಪರಾಕುಮುಕ್ತಾಮುಕ್ತರಿಂಸೇವ್ಯಪರಾಕುನಕ್ತಂಚರಕುಲನಾಶಪರಾಕುಭೋಕ್ತø ಪ್ರಸನ್ವೆಂಕಟೇಶಪರಾಕು5
--------------
ಪ್ರಸನ್ನವೆಂಕಟದಾಸರು
ಸಾಮಧಾನವು ಸಾಮಧಾನ ಪವಮಾನಶ್ರೀಮನ್ಮಹಾಸುಗುಣಧಾಮಸುತ್ರಾಣಪ.ಲೋಕ ಮುಳುಗುವದು ನೀನೀ ಕೆಲಸಮಂಗೈಯೆಸಾಕುವವರ್ಯಾರು ಜಗದೇಕವೀರಶ್ರೀಕಾಂತಸುಪ್ರೀತ ಶೋಕಮೋಹವಿಧೂತಸಾಕು ಬಿಡು ಸೈರಿಸುಪರಾಕುಮುಖ್ಯಪ್ರಾಣ1ಜಗಕೆ ನೀನಾಧರ ಜನ್ಮ ಮೃತಿಭಯದೂರಚಾಗಮಾಗಮವಿಚಾರ ನಿತ್ಯಶೂರಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆಮಗುಚಬೇಡೈ ಧರೆಯ ಮುಗಿವೆ ನಾ ಕೈಯ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸ್ವಾಮಿಪರಾಕುಮಹಾಸ್ವಾಮಿ ಸಜ್ಜನಪ್ರೇಮಿಪ.ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯಪಾರಮೇಷ್ಠಿ ಪ್ರಮುಖಾಮರಪೂಜಿತಚಾರುಪದಾಬ್ಜದ್ವಯ ದನು-ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮದೂರನುಲಾಲಿಸುಚಿನ್ಮಯ ಜಯ1ದುಷ್ಟ ನಿಶಾಚರರಟ್ಟುಳಿಘನಕಂಗೆಟ್ಟುದು ಸುರಮುನಿಗಣ ಆಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ-ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮಕಷ್ಟವು ಪದಕರ್ಪಣ ಪರಾಯಣ 2ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲುಭ್ರಾಂತಿವಿಜ್ಞಾನವಿತಾನಧುರೀಣರ್ಸಂತಾಪಿಪರು ಮುರಾರಿ ನಮ್ಮಸಂತೈಸೈ ಗಿರಿಧಾರಿ ಶ್ರೀಕಾಂತ ಕೃಪಾರ್ಣವಶೌರಿಜಗ-ದಂತ ವಿಹಾರಿ ನಿರಂತ ಪರಂತಪ 3ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮಬಿನ್ನಪಲಾಲಿಸುತ್ರಿಭುವನವನ್ನುಸನ್ನುತಶುಭಾಂಗ ಸ-ರ್ವೋನ್ನತ ಮಹಿಮತರಂಗದುರಿತಾನ್ವಯತಿಮಿರಪತಂಗ ಸುಪ್ರಸನ್ನಸದೋದಿತವಿಹಂಗತುರಂಗ4ನೀಲೇಂದೀವರ ಶ್ಯಾಮಲ ಕೋಮಲಕಾಲನಿಯಾಮಕ ಪ್ರಾಣ ನಿನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣನತಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ-ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ