ಒಟ್ಟು 240 ಕಡೆಗಳಲ್ಲಿ , 62 ದಾಸರು , 228 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣಪತೇ - ಪಾಹಿ - ಗಣಪತೇ ಪ ಗಣಪತಿ ಪಾರ್ವತಿ ತನಯಾ | ಭಕ್ತಜನಕೆ ಕೊಡುವುದು ವಿನಯಾ | ಆಹಮನದೊಳು ನೀನಿಂತು | ಅನುಗಾಲ ಹರಿಗುಣಗಣಗಳ ಪೊಗಳುವ | ಮನವ ನೀ ಪಾಲಿಸೋ ಅ.ಪ. ಬಾಲೇಂದು ಮೌಳಿಯ ತನುಜ | ವರಶೈಲಜೆ ಶರೀರ ಮಲಜಾ | ಪುಟ್ಟಿಶ್ರೀಲೋಲ ಕೃಷ್ಣ ರುಕ್ಮಿಣಿಜ | ನೆಂದುಪೇಳುವರು ಮಾರನನುಜಾ | ಆಹಕಾಳಗದೊಳು ಬಲು | ಅಸುರರ ಅಸುಗಳಕೀಲಿಸುತಲಿ ಬಹು | ಭೂಭಾರ ನಿಳುಹಿದ 1 ಸುಜ್ಞ ಭಕ್ತಾಧೀನ ಗಣಪಾ | ಬಂದವಿಘ್ನಗಳ್ಹರಿಸುವೆ ಭೂಪ | ನೀನುಭಗ್ನ ಗೈಸೋ ಮನಸ್ತಾಪಾ | ಇಂಗಿತಜ್ಞ ಬೇಡುವೆ ತವ ಕೃಪಾ | ಆಹಮಗ್ನ ಮಾಡಿಸು ಮನ | ಮೊದಲಾದ ಕರುಣವಯಜ್ಞೇಶ ಶ್ರೀಹರಿ | ಪದದ್ವಯ ವನಜದಿ 2 ಸಿಂಧುರಾಸ್ಯನೆ ಬಹು ಗುಣ | ಪೂರ್ಣಮಂದರೋದ್ಧಾರಿಯೆ ಕರುಣ | ಪಾತ್ರನೆಂದು ಹೊಕ್ಕನೊ ತವ ಚರಣ | ಕಂದನೆಂದು ಕಾಯೆಲೊ ಬಹು ಕರುಣ | ಆಹನಂದ ನಂದನ ಗುರು | ಗೋವಿಂದ ವಿಠಲನಬಂಧುರ ಚರಣವಾ | ನಂದದಿ ತುತಿಪಂತೆ 3
--------------
ಗುರುಗೋವಿಂದವಿಠಲರು
ಗಿಣಿಯೆ ನಿನಗೇನು ಬೇಕದನೀವೆ ಹಯವದನ-ನೆನಿಪ ಹರಿಯನು ಕರೆತಾರೆ ಗಿಣಿಯೆಮುನಿ ವಾದಿರಾಜನಿಗೆ ವರವೀವ ದೇವನವನೆನೆವವರ ಬಿಡನೆಲೆ ಗಿಣಿಯೆ ಪ. ವೃಂದಾವನದಿ ಚಂದ್ರನಂತೆಸೆವ ಗೋವಿಂದಚಂದದಿ ನಿನ್ನ ಮಾತ ಮನ್ನಿಸುವನಂದಗೋಪಿಯ ಮುದ್ದುಕಂದನೆನಿಪ ಮುಕುಂದನ-ನಿಂದಿರುಳು ತಂದು ತೋರು ಗಿಣಿಯೆ 1 ಮೂರು ಬಣ್ಣದ ಕೊರಳ ತಿರಿಯುಳ್ಳ ಗಿಣಿ ನೀನುಮೂರು ಬಣ್ಣದ ಚಾರುನಯನಮಾರನನುಚರ ನೀನು ಮಾರನ ಜನಕನವನುಮೀರ ನಿನ್ನ ಬಿನ್ನಪವ ಗಿಣಿಯೆ 2 ಸತತ ಸಿರಿದೇವಿಯರ ಸುತನೆನಿಪ ಕಾಮನಿಗೆರಥವಾಗಿ ಮೆರೆವೆ ನೀ ಗಿಣಿಯೆಕೃತಕೃತ್ಯನಾದರೂ ಅದರಿಂದ ನಿನ್ನ ಮಾತಪ್ರತಿಪಾಲಿಸುವನೆÉಲೆ ಗಿಣಿಯೆ 3 ಎಲ್ಲರು ಭುಂಜಿಸುವ ಮೊದಲೆ ಭುಂಜಿಸುವ ನಮ್ಮಿನಿಯಬಲ್ಲಿದಾತನ ಬಿರುದ ನಿನಗಿತ್ತಚೆಲುವ ಸಸಿಗಳ ತೆನೆಯ ತಂದು ತಂದು ಮೆಲುವೆ ಗಡಸಲುವುದು ಮೋಹನದ ಗಿಣಿಯೆ 4 ಪಚ್ಚೆಯ ಬಣ್ಣದ ಗರಿಯ ಸಿರಿಯುಳ್ಳ ಗಿಣಿ ನೀನುಪಚ್ಚೆಯ ಬಣ್ಣದ ವ್ಯಾಸನವನುಎಚ್ಚರಿಸಿ ಕೊಡುತಿದೆ ನಿನ್ನ ಕಂಡರಾ ಮುನಿಯಮೆಚ್ಚಿದೆ ನಾನವನ ತಂದು ತೋರು ಗಿಣಿಯೆ 5 ಕೆಂದಾವರೆಯ ಪೋಲ್ವ ನಿನ್ನ ಚರಣ ಹರಿಯ ಪದದÀಂದವನು[ತಂದುತೋರು]ಗಿಣಿಯೆಚೆಂದದ ಅವನ ಚೆಂದುಟಿಯಂತೆ ನಿನ್ನ ಚೆಲುವ ಮುಖ ಕೆಂಪುತÀಂದು ಮುಂದಿರಿಸು ನೀ ಗಿಣಿಯೆ6 ಅವನ ವಾಹನನೆನಿಪ ಗರುಡನ ಕುಲದಲುದ್ಭವಿಸಿ-ದವ ನೀನೆಲೆ ಗಿಣಿಯೆಅವನ ಮುದ್ದು ನುಡಿಯ ಬಲ್ಲರೆ ನೀನು ಜಗದೊಳಗೆಸವಿಮಾತುಗಳ ನುಡಿವೆ ಗಿಣಿಯೆ 7 ಗಮನ ನಿನಗೆಸೊಗಸುನುಡಿಯಿಂದವನ ಪದಕೆ ಬಿನ್ನಹ ಮಾಡಿಸುಗುಣನ ಕರೆತಾರೆ ಗಿಣಿಯೆ8 ತಮ್ಮ ತಮ್ಮ ಮನೆಗಳಲ್ಲಿ ರಮೆಯರಸ ಕೃಷ್ಣನ-ನು ಮನದಲ್ಲಿ ಅರ್ಚಿಸಿ [ಪೂಜಿಸುವರು]ಸುಮುಖನೆಂದು ನಿನ್ನ ಮನೆಯ ಚಾವಡಿಯಲಿ ಇಹ-ನ ಮನ್ನಿಪರೆಲೆ ಗಿಣಿಯೆ 9 ಉರದಲ್ಲಿ ಸಿರಿವತ್ಸಯೆಂಬ ಕುರುಹುಂಟವಗೆಕರಗಳಲಿ ಶಂಖಚಕ್ರಗಳು ಕೊರಳಲ್ಲಿ ಕೌಸ್ತುಭಮಣಿಯಿಹ ಹಯವದನ ನ-ಮ್ಮರಸನೆಂದರಿತುಕೊ ಗಿಣಿಯೆ 10
--------------
ವಾದಿರಾಜ
ಗುಣಿಸುವೆ ಗಣನಾಥಾ ಪ ಗುಣಗಣ ಚರಿತನೆ ಗುಣದೊಳು ಮೊದಲಿಗನೆಂದು ಸಾರಿ ಸಾರಿ ನಿನ್ನ ಅ.ಪ. ಎಂದಿಗು ನಿನ್ನ ಪದದ್ವಂದ್ವ ನಂಬಿದ ಕಂದನ ಮಾತ ಲಾಲಿಸೊಇಂದುವರಿಯ ಎನ್ನ ಮಂದಿರದೊಳು ಬಂದು ತಂದೆ ಕರುಣದಿ ಪಾಲಿಸೊ 1 ಮಾರ ತಾಪಕೆ ಶಿಲುಕಿ ಮಾರಿ ಮೋರೆಯ ನೋಡಿ ಮರುಳಾದೆನೊಮಾರನನುಜನೆ ಎನ್ನ ಗಾರುಮಾಡದೆ ಪೊರೆಯೊ ನಿನ್ನ ಪಾದಕೆರಗಿದೆನಯ್ಯ 2 ಉಜ್ಜಿ ಕೂಪವ ನೋಡಿ ಮೆಚ್ಚಿ ಬಲುಪರಿ ಹುಚ್ಚನಾದೆನೊ ದೇವಾ ಇಚ್ಛೆ ಪೂರೈಸೊ ನಮ್ಮಸ್ವಚ್ಛ ತಂದೆವರದಗೋಪಾಲವಿಠಲನರ್ಚಕ 3
--------------
ತಂದೆವರದಗೋಪಾಲವಿಠಲರು
ಚಂಚಲಿಸಲು ಕೊಡದಿರು ನೀನೆನ್ನ ಮನಕೆ ಶ್ರೀಹರಿಯೇ ಪ ವಂಚಿಸುತಿಹುದೀ ಮನವು ಸ್ಥಿರಗೊಳಿಸಲರಿಯೇ ಅ.ಪ. ನಿನ್ನ ಪದದಿ ಏನಿರಿಸೆ ಇನ್ನು ಭಜಿಸಬೇಕೆಂದರೆಭಿನ್ನ ದೆಸೆಗೆ ಓಡಿಸದೆ ಅನ್ಯವನ್ನೆ ಚಿಂತಿಸುವುದು 1 ಕಡಲ ಕಡಿಯುವಾಗ ಗಿರಿಯು ನಡುಗದಂತೆ ಗಟ್ಟಿ ನಿಂತುಹಿಡಿದ ತೆರದೊಳಡಲ ಹೊಕ್ಕು ಜಡಿದು ಎನ್ನ ಮನದಿ ನಿಂದು 2 ಸದಾ ಭಜಿಸುವಂತೆ ಮಾಡೋ ಗದುಗು ವೀರನಾರಾಯಣ 3
--------------
ವೀರನಾರಾಯಣ
ಜಯ ಮಂಗಳಂ ಮಹಾ ಶುಭಮಂಗಳಂ ಕ್ಷಯ ರಹಿತ ಗುರುಪಾದಾಂಗುಷ್ಠ ತೀರ್ಥಕ್ಕೆ | ಜಯ ಮಂಗಳಂ ಪ ಚರಣ ನಾಲ್ಕುಗಳಿಂದ ತೋರುತಿಹ ಜಗದುದಯಚರಣಮಯ ಜಗವೆಂದು ತಿಳಿದು ನಿಜದಿಚರಣ ತೀರ್ಥವ ನಿರಂತರ ಸೇವಿಸುವ ಜನರಜನನ ಮರಣವ ಹಿಂಗಿಸುವ ತೀರ್ಥಕ್ಕೆ 1 ಅಜ್ಞಾನ ಮಲನಾಶನವಾದುದದರಿಂದ ಸುಜ್ಞಾನ ವೈರಾಗ್ಯ ಸಿದ್ಧಿಸುವದು ವಿಜ್ಞಾನ ಮನದಿ ಉಭಯ ಪದದಲಿ ಐಕ್ಯ ಜಿಜ್ಞಾಸೆ ಹರಿದು ಮುಕ್ತಿಯ ಕೊಡುವ ತೀರ್ಥಕ್ಕೆ 2 ಶುಭ ಮಂಗಳಂ 3
--------------
ಗುರುರಾಮಲಿಂಗ
ಜಯವೆನ್ನಿ ಜನರೆಲ್ಲ ಸ್ವಾಮಿ ಭವರೋಗವ್ಶೆದ್ಯಗೆ ಭಾವಜನಯ್ಯಗೆ ಕುವಲಯಧರಸ್ವಾಮಿಗೆ ನಾರಾಯಣ ಪ. ಆಗಮಚೋರನ ಗೆಲಿದ ರಾಮ ಬೇಗನೆ ಸುರರಿಗೆ ಸುಧೆಯೆರೆದ ಕೃಷ್ಣ ನಾಗಲೋಕವ ಹೊಕ್ಕವನ ಕೊಂದಾಗ ಶಿಶು ಕೂಗೆ ಕಂಬದಿ ಬಂದಗೆ ನಾರಾಯಣ 1 ಭಾಗೀರಥಿಯ ಪಡೆದೆ ರಂಗ ಬಾಗಿಸಿ ತಾಯ ಶಿರವ ಕಡಿದೆ ರಾಮ ನೀಗಿದಶ್ವವಾಹಕಗೆ ನಾರಾಯಣ 2 ಜಲದೊಳಗಾಳ್ದನ ಸೀಳ್ದ ರಾಮ ಅಲಸದೆ ಗಿರಿಯ ಬೆನ್ನಲಿ ತಾಳ್ದ ಕೃಷ್ಣ ನೆಲನ ಕದ್ದೊಯ್ದಸುರನ ಮರ್ದಿಸಿದ ಶಿಶು- ಗೊಲಿದು ಬಲಿಯ ತುಳಿದೆ ನಾರಾಯಣ 3 ಛಲಪದದಿ ರಾಯರ ಕಡಿದೆ ರಾಮ ಬಲು ಬಿಲ್ಲನು ಕರದಲ್ಲಿ ಪಿಡಿದೆ ಕೃಷ್ಣ ಕೋ- ಡುಳ್ಳವ ಕೋಪದ ಮುಖ ದೈನ್ಯದಿ ಬೇಡುವೆ ಕೊಡಲಿಗಾರ ನಾರಾಯಣ 4 ರೂಢಿಯೊಳು ರಾಯರ ಗೆಲಿದ ರಾಮ ಓಡಿ ಹೊಕ್ಕನೆ ದುರ್ಗದ ಜಲ ಕೃಷ್ಣ ನೋಡೆ ನಾರಿಯರ ವ್ರತವಳಿದೆ ಹಯವದನ ರೂಢರಾವುತನಾದ ನಾರಾಯಣ5
--------------
ವಾದಿರಾಜ
ಜಾನಕೀಶ ವಿಠಲ ನೀನಿವನ ಪೊರೆಯೋ ಪ ಮೌನಿಕುಲ ಸನ್ಮಾನ್ಯ | ಆನತೇಷ್ಟಪ್ರದನೆಆನಮಿಸಿ ಪ್ರಾರ್ಥಿಸುವೆ | ಭಿನ್ನಪವ ಪಾಲಿಸೋ ಅ.ಪ. ಸತಿ ಸ್ವಪ್ನದಲಿ | ಅವನಿಜೆಯ ವಲ್ಲಭನೆ ತವನಾಮ ಸೂಚಿಸಿಹೆ | ಎನ್ನ ರೂಪದಲೀಭವವನಧಿ ದಾಟಲ್ಕೆ | ತವನಾಮ ಸಂಸ್ಮರಣೆನವಪೋತವೆನಿಸಿಹುದು | ಪವನಾಂತರಾತ್ಮಾ 1 ನಿತ್ಯ ತವ ಪದದಲ್ಲಿ | ಭಕ್ತಿ ಕರುಣಿಸೋ 2 ಮಧ್ವಮತ | ಸಾಕಷ್ಟು ತಿಳಿಸುತ್ತಾಮಾಕಳತ್ರನೆ ಇವನಾ | ವ್ಯಾಕುಲದಲ್ಹರಿಸೀಲೌಕಿಕವೆಲ್ಲ ವೈ | ದೀಕ ವೆಂದೆನಿಸುತ್ತಪ್ರಾಕ್ಕು ಕರ್ಮವ ಕಳೆಯೊ | ಲೋಕ ಲೋಕೇಶಾ 3 ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತಮ ಹರಿಯು ನಿ | ಸ್ಸಾರ ಜಗವೆಂಬಾಚಾರುಮತಿಯನೆ ಇತ್ತು | ಪಾರಗಾಣಿಸು ಭವವಧೀರ ನೀನಲ್ಲದಲೆ | ಆರು ಕಾಯುವರೋ 4 ಜೀವ ಬಹು ಪರತಂತ್ರ ದೇವ ನಿಜ ಸ್ವತಂತ್ರಈ ವಿಧದ ಸುಜ್ಞಾನ | ಸಾರ್ವಕಾಲದಲೀದೇವ ನೀ ದಯದಿ ಈ | ಜೀವಂಗೆ ಕರುಣಿಸೇಭಾವದಲಿ ಬೇಡ್ವೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ತಂದೆ ಮುದ್ದು ಮೋಹನ್ನಾ ನಿನ್ನಯದ್ವಂದ್ವ ಪಾದವ ತೋರಣ್ಣಾ ಪ ಕಂದನ ಕುಂದನು ಒಂದನು ಎಣಿಸದೆಬಂದು ನಿಲ್ಲೊ ಮನ ಮಂದಿರದೊಳು ನೀ ಅ.ಪ. ಪರಾಕು ಪೇಳುವೆ ಓಹೋ |ಸಾಕು ಮಾಡು ಈ ಭವದ ಸಂಗವನು |ಸ್ವೀಕರಿಸೆನ್ನ ಕೃಪಾಕರ ಮೂರುತಿ 1 ವಾಸವ ಗುರವೇ ಪೋಷಿಸು ಎನ್ನನು ಮೀಸಲೆನಿಸಿ ಮನ ಶ್ರೀ ಶನ ಪದದಲಿ 2 ಚಾರು ಚರಣವನು 3
--------------
ಗುರುಗೋವಿಂದವಿಠಲರು
ತನು ಸದನದಿ ಪೀಠವಯ್ಯ | ಭಾನು ಕುಲೋದ್ಧೀಪಕ ಪ ಅನಿಲನೆ ಜೀವನಾ ಮಹಾ | ಮಂಚನವು ರಮಾ ಶಯ್ಯಕೆ ಬಾ ಅ.ಪ. ಸುನಾಮ ಮೂರ್ತಿ ಕರವ ಪಾದ 1 ಮಧು ವಿರೋಧಿ ವೇದಾಂತ | ವೇದ್ಯ ಸುಧಾ ಕಲಶ ಪಾಣಿವಿಧಿ ಭವಾದಿ ವಂದ್ಯ ಚರಣ | ಅದುಭುತ ಚರ್ಯ ಹರಿಯೆಪದದಿ ಸುರನದಿಯ ಪಡೆದವ | ನದಿಸುತ ಗೊಲಿದ ಮಹಿಮಯದುಕುಲೋತ್ತಮ ಶ್ರೀ ಕೃಷ್ಣನೇ ಹದುಳದಲಿ ಪೊರೆ ಬಾ 2 ತರಳ ದ್ರೌಪದಿಗೊಲಿದವನೆ | ಶೌರೀ ವರ ಅಹಲ್ಯಾ ವರದಗುರು ಮಡದಿ ತಾರಾವರದ | ಶರಣರ್ಗೆ ಸುರಧೇನು ||ಪರಮ ಪಾತಕಿಯಾದವರ | ಪೊರೆದ ಮಹಾದಯವಂತ ಪರಿಸರಾಂತರ್ಗತನೆ ಪೊರೆಯೊ | ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ ನೆರೆನಂಬಿದವ ಧನ್ಯನೋ ಪ ಗುರು ಮೂಲ ಪುರುಷ ನಾರಪ್ಪಯ್ಯ ಮುನಿಗೊಲಿದು ಕುರಿಕಿಹಳ್ಳಿಯಲಿ ಬಂದಾ ನಿಂದಾ ಅ.ಪ ವರಋಷಿಯ ಪೂರ್ವದಲಿ ತಿರುಪತಿಯ ಮುಟ್ಟಿ ಮಲ- ಗಿರಲು ಸ್ವಪ್ನವ ಕಾಣುತ ತುರುರೂಪದಲಿ ನಾನೆ ಬರುವೆ ಕಾ- ರ್ಪರ ವನಕೆ ದರುಶನವÀÀ ಕೊಡುವೆ ನಿರುತ ಬರುತ ಬರುತಲಿ ವಿಪ್ರ ತಿರುಗಿ ನೋಡಲು ಪದದಿ ಕಿರುಗಜ್ಜೆಗಳ ನುಡಿಸುತಾ ಕುರಿಕಿ ಹಳ್ಳಿಯ ಸುಮಂದಿರನೆನಿಸಿ ಸಿರಿಸಹಿತ ವರಶಿಲೆಯ ಮೇಲೆ ಪಾ ಲ್ಗರಿದು ನೆಲೆಸಿರುವಂಥ 1 ತೋಂಡಮಾನಕ್ಷಿತಿಪ ಪುಂಡಲೀಕಾದಿ ಬಹು ತೋಂಡರಿಗೆ ಒಲಿದು ದೇವಾ ಕುಂಡಲಿ ಪರ್ವತದಿ ತಂಡತಂಡದಿ ಭಕುತ ಮಂಡಲಿಗೆ ಫಲವ ಕೊಡುವ ದುಂಡುಮುತ್ತಿನಹಾರ ಮುಕುಟ ರತ್ನಾಭರಣ ಮಂಡಿತನಾಗಿ ಮೆರೆವ ಕಂಡೆನಾನಿಮ್ಮ ಪದ ಪುಂಡಲೀಕವನು ಈ ಗುಂಡಿನಾ ತಿಮ್ಮಯ್ಯನೆಂದು ಕರೆಸಿಕೊಳುವಿ 2 ಕರಮುಗಿವೆ ಮನ್ಮನದಿ ಕರುಣದಲಿ ತೋರೋತವ ಪರಮ ಸುಂದರ ಚರಣವ ನಿರುತ ಸ್ಮರಿಸುವ ಜನರ ದುರಿತ ತಿಮಿರಕೆ ದಿವಾ ಕರನೆನಿಸಿ ಸುಖವಗರಿವಾ ಸೇವ್ಯ ಕಾರ್ಪರನಿಲಯನೆನಿಸೆ ಬಹು ಶರಣು ಜನರನು ಪೊರಿಯುವಾ ವರಕೃಷ್ಣ ಗರ್ಭದಲಿ ಒಪ್ಪುವ ಪಿಪ್ಪಲಸ್ಥಶ್ರೀ ನರಹರಿಯ ಬಳಿಯಲಿರುವಾಮೆರೆವಾ 3
--------------
ಕಾರ್ಪರ ನರಹರಿದಾಸರು
ದಾಶರಥೇ ದಯಮಾಡು ನಿನ್ನ ದಾಸದಾಸನ ನೋಡುದಾಸದಾಸನ ನೋಡು ಮುದ್ದು ದಾಶರಥೇ ದಯ ಮಾಡು ಪ ನೀರಜಾಕ್ಷ ನಿಜ ಮಾಯ ಮಮತೆ ಸಂಸಾರ ಶರಧಿಯೊಳು ಬಿದ್ದುಪಾರುಗಾಣದೆ ಬರಿದೆ ಪೋಗುವಾ ತಾರಕ ಬ್ರಹ್ಮ ನೀನೆಂದೂ 1 ವಿಶ್ವ ಕುಟುಂಬನೆ ಎನಗಾ ಇಂಗುಗೊಡದೆಯೆಲ್ಲರ್ಗಲ್ಲಿ 2 ಇಂದಿರೇಶ ಮುಚುಕುಂದ ವರದ ಮುನಿ ವಂದ್ಯನೆ ದಶರಥ ಕಂದಾಚಂದದಿ ನಿನ್ನ ಪದದ್ವಂದ್ವಗಳನುದಿನ ವಂದಿಸುವೆನುಮುದದಿಂದಾ3
--------------
ಇಂದಿರೇಶರು
ದಾಸರ ದಾಸರ ದಾಸನೆಂದೆನಿಸುವ ಲೇಸು ಭಾಗ್ಯವ ಕೊಡೊ ಶಾಶ್ವತವಾಗಿಪ ಆಶಾಪಾಶವ ನಾಶನಗೈಸಿ ದೇಶಿಗರೆಲ್ಲರ ಕೂಸೆಂದೆನಿಸಿ ಅ.ಪ. ಉಪಟಳ ಬಹಳ ನೇಮ ನಿಷ್ಠೆಯ ಸುಳಿವೆನಗಿಲ್ಲ ತಾಮಸನಾಗಿ ಬಳಲಿದೆನಯ್ಯ ಪ್ರೇಮದಿ ಪಿಡಿದು ಸಲಹೊ ದಮ್ಮಯ್ಯ 1 ವದನದಿ ನಿನ್ನ ನಾಮವ ನುಡಿಸೊ ಪದದಲಿ ನಿನ್ನ ಯಾತ್ರೆಯ ನಡೆಸೊ ಹೃದಯದಿ ನಿನ್ನ ರೂಪವÀ ತೋರಿ ಅನುದಿನ ಶೌರಿ 2 ಭಕ್ತವತ್ಸಲ ಭಾಗ್ಯಸಂಪನ್ನ ಭಕ್ತರ ಸಂಗತಿ ಪಾಲಿಸೊ ಘನ್ನ ಉಕ್ತಿಯ ಲಾಲಿಸೊ ನಾನು ಅನಾಥ ಮತ್ತೇನು ಬೇಡೆನೊ ಶಕ್ತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ ಪ ದಾಸರ ನೆರೆನಂಬಿ ಯೇಸು ಜನ್ಮದ ಭವಪಾಶವ ಹರಿಸಿ ರಮೇಶನ್ನ ಮಹಿಮೆಯಲೇಸಾಗಿ ವಿರಚಿಸಿ ಪರಮೋಲ್ಹಾಸದಲಿ ಜೀ-ವೇಶ ಭೇದವ ಯೇಸು ಬಗೆಯಲಿ ತಿಳಿಯುತಲೆ ನೆರೆ-ದೋಷ ಬುದ್ಧಿಯ ನಾಶಗೈವರ ಅ.ಪ. ಇಂದು ನಿಜವು ಕಂದುಗೊರಳಮ-ರೇಂದ್ರವಂದ್ಯ ಮುಕುಂದನನು ಬಿಡ-ದಂದು ಭಜಿಪ ಪುರಂದರನ ಪದದ್ವಂದ್ವಯುಗಳರವಿಂದ ಮಧುಪರ ನಂದದಲಿ 1 ಕಂಟಕ ಬಂಧಹರವೆಂದು ಮನದಲ್ಲಿ ನೆರೆ ತಿಳಿದರಿಂದ || (ದುಡುಕು) ಪರಮ ಧನ್ಯರು ಧರಿಗೆ ಯಾದವ-ರರಸೆ ಪೊರೆವನು ಕರುಣದಲಿ ಭೂಸುರರಗುರುದೊರೆ ಮರುತ ಪೊರೆವನುಸುರರವರ ಕಾದಿಹರು ಯೆನಿಪರ2 ಸಿರಿ ಮಾ-ಧವ ಮೋಹನ ವಿಠಲರೇಯನಅವಸರದ ಕಿಂಕರರ ಭಜಕರು 3
--------------
ಮೋಹನದಾಸರು
ದಾಸವರ್ಯ ಪೋಷಿಸೆನ್ನನು ಪ್ರಾರ್ಥಿಸುವೆ ಶೇಷ ದಾಸವರ್ಯ ಪೋಷಿಸೆನ್ನನು ಪ ತರಿದು ಇಂದಿ- ರೇಶನಂಘ್ರಿಧ್ಯಾನವ ಪ್ರತಿವಾಸರದಲಿ ಒದಗುವಂತೆಅ.ಪ ದೇಶ ದೇಶಗಳಲಿ ಭಜಿಪ ದಾಸ ಜನರ ಮನದ ಅಭಿ- ಲಾಷೆಗಳನು ಸಲಿಸುತಲಿ ಸುರೇಶನಂತೆ ಮೆರೆದ ಶೇಷ 1 ಭಜಿಸೆ ಜಗದಿ ಪ್ರಾಜ್ಞ- ಸುಜ್ಞಾನವಿತ್ತು 2 ಮಾತ್ರದಿ ಭೂತ ಪ್ರೇತಗ- ದುರಿತ ಘನಕೆ ಮರುತರೆನಿಪ 3 ಪದದಿಂದೆ ತ್ರಿಪಥ ಗಾಮಿನಿಯಳ ತೋರಿ ಸ್ವಜನ ಕಾಮಿತವ ಪೂರೈಸಿದಂಥ4 ಶೇರಿದ ಪರಿವಾರಕೆ ಸುರ ಭೂರುಹವೆಂದೆನಿಸುವಂಥಾ ನೊಲಿಸಿದಂಥ 5
--------------
ಕಾರ್ಪರ ನರಹರಿದಾಸರು
ದೇವನಾ ದರುಶನಾ ಜೀವನಾ ಪಾವನಾ ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1 ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ ದುರುಳ ಭವ ಗುರುವಿತ್ತಾತ್ಮಾನುಭವ 2 ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3
--------------
ಶಂಕರಭಟ್ಟ ಅಗ್ನಿಹೋತ್ರಿ