ಒಟ್ಟು 49 ಕಡೆಗಳಲ್ಲಿ , 26 ದಾಸರು , 47 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ನಿನ್ನಂಥ ಕೂಸೆಲ್ಲಿ ಕಾಣೆ ಜಗದಿ ಹೊರಗೆದೃಷ್ಟಿ ತಾಕೀತು ಹೋಗಬೇಡೆಂದು ಎಷ್ಟು ಹೇಳಲಿ ಮಗನೆ ಪ.ಗೊಲ್ಲತೀರೆಳೆ ಮಕ್ಕಳ ಗುಣವ ನೋಡಬಾರದೊಹೊಲ್ಲತನ ಬೇಡ ಮನೆ ಹೊಂದಿರೊ ಅಯ್ಯಫುಲ್ಲಲೋಚನ ನೀಯೆನ್ನ ಪ್ರಾಣದ ಪದಕವಯ್ಯಪಳ್ಳಿಯ ಗೋಪರೈದಾರೆ ಪುಟ್ಟ ನಿನ್ನ್ಯೆತ್ತ ನೋಡಲೊ 1ತರಳರಂಗಿ ಕುಲಾಯವ ತೊಟ್ಟು ನಿಂತಿಹರು ಕಂಡ್ಯಹಿರಿಯ ಗುಮ್ಮಗಂಜುವೆ ಹೆದರಿ ಕಂಡ್ಯಬರಿಮೈಯಾ ಬಿಸಿಲೊಳು ಬಾಡಿತೊ ಮಂಗಳ ಮುಖಬರಿದೆ ಬೊವ್ವ ಕಚ್ಚದೇನೊ ಬೆಟ್ಟದ ಭಾಗ್ಯನಿಧಿಯ 2ಕಂದ ಬರಲೆಂದುಣದೆ ಕುಳಿತಿಹನೊ ನಿಮ್ಮಯ್ಯಹೊಂದಳಿಗೆ ಪಾಯಸ ಹಸನಾಗಿದೆಅಂದದಿ ಸಕ್ಕರೆ ತುಪ್ಪ ಅನುಗೂಡಿಸುಣಿಸುವೆತಂದೆ ಪ್ರಸನ್ನವೆಂಕಟ ನಿನಗೆ ಹಸಿವೆ ಮರೆದೆಯೊ 3
--------------
ಪ್ರಸನ್ನವೆಂಕಟದಾಸರು
ಯಾಕೆ ಮೂಕನಾದೆಲೋ ಗುರುವೆ ನೀ -ನ್ಯಾಕೆ ಮೂಕನಾದ್ಯೋ ಪಸಾಕುವೊರಾರಯ್ಯಾ ಶ್ರೀಕರ ರಾಘವೇಂದ್ರ ಅ.ಪಮಂದಿಯಂದಿದ ಎನ್ನ - ಮಂದನ ಮಾಡೀಗ 1ಬೇಕಾಗದಿದ್ದರೆನ್ನ - ಯಾಕೆ ಕೈಯಾ ಪಿಡಿದಿಕಾಕುಜನರೊಳೆನ್ನ- ನೂಕಿ ಬಿಟ್ಟು ಈಗ2ನಿನ್ನಂಥ ಕರುಣಿಲ್ಲ - ಎನ್ನಂಥ ಕೃಪಣಿಲ್ಲಘನ್ನ ಮಹಿಮ ನೀ - ಎನ್ನನು ಬಿಟ್ಟೀಗ 3ಇಂದುನೀ ಬಿಟ್ಟರೆನ್ನ- ಮುಂದೆ ಕಾಯುವರ್ಯಾರೋ4ಜನ್ಯಾನು - ನಾನಯ್ಯ - ಎನ್ನ ಜನಕನು ನೀನುಮನ್ನಿಸು ನೀ ನಿತ್ಯಾ - ನನ್ನ ಶರಣನಲ್ಲೆ 5ಈಗ ಪಾಲಿಸದರೆ-ಯೋಗಿಕುಲವರ್ಯರಾಘವೇಂದ್ರನೇಭವ- ಸಾಗುವಧ್ಯಾಗಯ್ಯ6ನಾಥನು ನೀನಯ್ಯಾ - ನಾಥನು ನಾನಯ್ಯಾಪಾಥೋಜ ಗುರುಜಗ -ನ್ನಾಥ ವಿಠಲ ಪ್ರೀಯ 7
--------------
ಗುರುಜಗನ್ನಾಥದಾಸರು