ಒಟ್ಟು 138 ಕಡೆಗಳಲ್ಲಿ , 50 ದಾಸರು , 107 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾನೇನೆಂದೆ ನಿರ್ಮಲ ರೂಪನೆ | ಪನ್ನಗ ಭೂಷಣ ಪರಮ ಸದಾಶಿವ ಪ ಸುರರು ಮೊರೆಯಿಡೆ ವಿಷವ ಧರಿಸಿ ಜಗ | ಉರಿಯಹದೆನುತ ಕಂಠದಿರಿಸಿದನು || ದುರಳ ದೈತ್ಯನ ಕೊಲ್ಲಲಾಗಿ ಅರ್ಧಾಂಗವ | ಹರಿಗೆ ನೀಡಿದ ದೇವ ಶರಣೆಂದೆನಲ್ಲದೇ || ಉರಗಣ್ಣಿನವನೆಂದೇನೇ | ಪರಹೆಣ್ಣವ | ಶಿರದೊಳಿಟ್ಟವನೆಂದೆನೇ | ಜಗದೊಳು || ಅರೆ ಮೈಯ್ಯವನೆಂದೆನೇ | ನಿಜಪದ | ಶರಣರಿಷ್ಟಾರ್ಥವ ನೀವನೇ ಬಾಯಂದೆ 1 ಸದ್ಗತಿ ನೀಡಿದ ಬ್ಯಾಡಗ ಮರ ದೊಪ್ಪ | ಲುದುರಿಸವಗ ನಿಜವ ದೋರಿದ || ಮುದದಿಂದ ಪಾಶುಪತವಾನಿತ್ತ | ಸದಮಲಾ ನಂದನೇ ಶರಣೆಂದೇ ಕಾಲಿಲಿಂ || ದ್ವೋದಿಸಿ ಕೋಂಡವನೆಂದೆನೇ | ಬಾಯಿಂದುಗು | ಳಿದರೆ ತಾಳ್ದದವನೆಂದೆನೇ | ನರಕಾಳ || ಗದಿ ಸೋತವನೆಂದೆನೇ | ವರಮುನಿ | ತ್ರದಶಾಧಿಪತಿ ಮುಖ್ಯ ಸೇವಿತ ಬಾಯಂದೆ 2 ಸರಸಿಜ ಭವನ ತಲೆಯ ನೊಂದು ಶಳದುಸಾ | ವಿರಭುಜ ನೀಡಿದ ಬಲಿಸುತಗ || ಸಿರಿಯೊಳನ ಕುಟುಂಬಕ್ಕೆ ಕೈವಲ್ಯವ | ಕರುಣಿಸಿದರಸನೆ ಬಾಯಂದೆ ಕಪಾಲ || ಕರದಿ ಪಡಿದವನೆಂದೆನೇ | ನರಮಾಂಸಕ | ಹರಿದು ಪೋದವನೆಂದೆನೇ | ಬಾಗಿಲಕಾವಾ || ಸುರನ ಬಂಟನೆಂದೆನೇ | ಸಲಹುವಾ | ಗುರು ಮಹಿಪತಿ ಪ್ರಭು ನಮೋ ನಮೋ ನಿನಗೆಂದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ನಾನೇನೆಂದೆನೊ - ರಂಗಯ್ಯ ರಂಗನಿನ್ನ ನಾನೇಂದೆನೊ ಪ ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ಅ ಧೀರ ಸೋಮಕ ವೇದಚೋರ ಖಳನನು ಸೀಳಿವಾರಿಧಿಗಿಳಿದು ಪರ್ವತವನೆತ್ತಿಧಾರಿಣಿಯನು ಕದ್ದ ದನುಜದಲ್ಲಣನಾದನಾರಸಿಂಹ ನಿನಗೆ ನಮೊ ಎಂದೆನಲ್ಲದೆನೀರ ಪೊಕ್ಕವನೆಂದೆನೆ - ಬೆನ್ನಲಿ ಘನ್ನಭಾರ ಪೊತ್ತವನೆಂದೆನೆ - ಮಣ್ಣನಗೆದುಬೇರ ಮೆದ್ದವನೆಂದೆನೆ - ರಕ್ಕಸನೊಳುಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ 1 ಪಾಷಾಣ ಪತಿ ಶರಣೆಂದೆನಲ್ಲದೆತಿರುಕ ಹಾರುವನೆಂದೆನೆ - ಹೆತ್ತ ತಾಯಶಿರವ ತರಿದನೆಂದೆನೆ - ವನವಾಸಕೆಭರದಿ ಚರಿಸಿದನೆಂದೆನೆ - ಪೂತನಿಯನುಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ 2 ಚಿತ್ತಜಕೋಟಿ ಲಾವಣ್ಯ ಮುಪ್ಪುರದಉತ್ತಮಸ್ತ್ರೀಯರ ವ್ರತವಳಿದುಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದಹತ್ತವತಾರದ ಹರಿಯೆಂದೆನಲ್ಲದೆಬತ್ತಲೆ ನಿಂತವನೆಂದೆನೆ - ತೇಜಿಯನೇರಿಒತ್ತಿ ನಡೆದವನೆಂದೆನೆ - ಬಾರಿಬಾರಿಗೆಸತ್ತು ಹುಟ್ಟುವನೆಂದೆನೆ - ಆದಿಕೇಶವಭಕ್ತವತ್ಸಲನೆಂದು ಪೊಗಳಿದೆನಲ್ಲದೆ 3
--------------
ಕನಕದಾಸ
ನಿನ್ನ ನಾನೇನೆಂದೆನೊ | ಗುರುವೆ ಜಗದ್ಗುರುನಿನ್ನ ನಾನೇನೆಂದೆನೋ ಪ ನಿನ್ನ ನಾನೇನೆಂದೆ ನಿಖಿಲ ಜೀವರ ಒಡೆಯಪನ್ನಗ ನಗಧೀಶ ಪತಿತೋದ್ಧಾರನ ದೂತಅ.ಪ. ವಾರಿಧಿಯನೆ ದಾಟಿ | ನಾರಿ ಚೋರನ ಜರೆದುನಾರಿಗೋಸುಗ ಕೌರವರ ಸವರೀ ||ಮಾರಮಣನೆ ಸಾರತಮನೆಂಬ ವೇದಾಂತಸಾರ ಪೇಳ್ದಗೆ ಶರಣೆಂದೆನು ಅಲ್ಲದೇ ||ಭಾರಿ ಕೋತಿಯು ಎಂದೆನೆ - ಕುಪ್ಪುಸ ತೊಟ್ಟುನಾರಿಯಾದವನೆಂದೆನೆ - ಕಾವಿಯನುಟ್ಟುಪೋರಯತಿಯು ಎಂದನೆ - ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ 1 ನೆರಹಿ ಕಪಿ ಸೈನ್ಯವ | ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಿಸೀ ||ಜರೆಯ ಸುತನ ಸೀಳಿ ಬದರೀಗೆತೆರಳೀದವಗೆ ನಮೋ ಎಂದನು ಅಲ್ಲದೇ ||ಗಿರಿಯ ಪೊತ್ತವನೆಂದನೆ - ರಕ್ಕಸಿಯಬೆರೆದ ನೆಂದವನೆಂದೆನೆ - ಕೌಪೀನವಧರಿಸಿದವನು ಎಂದೆನೆ - ಸುಜನರ್ಗೆಪರತತ್ವ ಪೇಳವನೆಂದೆನು ಅಲ್ಲದೆ 2 ಕರ್ತು ಹರಿಯೆ ಎಂದುನೀಚೋಚ್ಛ ತರತಮ ಪೇಳ್ದೆ ಎಂದೆಲ್ಲದೆ ||ಖೇಚರ ನೀನೆಂದೆನೆ - ವಿರಾಟನೊಳ್‍ಪಾಸಚಕ ನೀನೆಂದೆನೆ - ಭವಾಟವಿಮೋಚಕನೇ ಗುರು ಗೋವಿಂದ ವಿಠಲಅರ್ಚಕನೆಂದು ಸ್ತುತಿಗೈದೆನಲ್ಲದೆ 3
--------------
ಗುರುಗೋವಿಂದವಿಠಲರು
ನಿನ್ನ ನಾನೇನೆಂದೆನೋ | ಗುರುವೆ ಜಗದ್ಗುರು ನಿನ್ನ ನಾನೇನೆಂದೆನೋ ಪ ನಿನ್ನ ನಾನೇನೆಂದೆ ನಿಖಿಲ ಜೀವರ ಒಡೆಯಪನ್ನಗ ನಗಧೀಶ ಪತಿತೋದ್ಧಾರನದೂತ ಅ.ಪ. ವಾರಿಧಿಯನೆ ದಾಟಿ | ನಾರಿ ಚೋರನ ಜರೆದುನಾರಿ ಗೋಸುಗ ಕೌರವರ ಸವರೀ ||ಮಾರಮಣನೆ ಸಾರತಮನೆಂಬ ವೇದಾಂತಸಾರ ಪೇಳ್ವಗೆ ಶರಣೆಂದೆನು ಅಲ್ಲದೇ |ಭಾರಿ ಕೋತಿಯು ಎಂದೆನೆ - ಕುಪ್ಪಸ ತೊಟ್ಟುನಾರಿಯಾದವನೆಂದನೆ - ಕಾವಿಯನುಟ್ಟುಪೋರ ಯತಿಯು ಎಂದೆನೆ - ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ 1 ನೆರಹಿ ಕಪಿಸೈನ್ಯವ ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಸೀ ||ಜರೆಯ ಸುತನ ಸೀಳಿ ಬದರೀಗೆತೆರಳೀದವಗೆ ನಮೊ ಎಂದೆನು ಅಲ್ಲದೇ ||ಗಿರಿಯ ಪೊತ್ತವನೆಂದನೆ - ರಕ್ಕಸಿಯಬೆರೆದನೆಂದವ ನೆಂದೆನೆ - ಕೌಪೀನವಧರಿಸಿದವನು ಎಂದೆನೆ - ಸುಜನರ್ಗೆಪರತತ್ವ ಪೇಳ್ದೆವನೆಂದೆನು ಅಲ್ಲದೇ 2 ಕರ್ತು ಹರಿಯೆ ಎಂದುನಿಚೋಚ್ಛ ತರತಮ ಪೇಳ್ದೆ ಎಂದಲ್ಲದೆ ||ಖೇಚರ ನೀನೆಂದನೆ - ವಿರಾಟನೊಳ್‍ಪಾಚಕ ನೀನೆಂದನೆ - ಭವಾಟವಿಮೋಚಕನೇ ಗುರು ಗೋವಿಂದ ವಿಠ್ಠಲಾರ್ಚಕನೆಂದು ಸ್ತುತಿ ಗೈದನಲ್ಲದೆ 3
--------------
ಗುರುಗೋವಿಂದವಿಠಲರು
ನಿನ್ನ ನಾನೇನೆಂದೆನೋ ರಾಮೇಶ್ವರನಿನ್ನ ನಾನೇನೆಂದೆನೋ ಸಕಲ ಲೋಕವನ್ನು ಪೊರೆವ ಪಾರ್ವತೀಶನೆಂದೆನಲ್ಲದೆ ಪ ತಾರಕಾಸುರನ ಪುತ್ರರ ಬಾಧೆಯನು ತಾಳಲಾರದೆ ಹರಿಮುಖ್ಯ ನಿರ್ಜರರುಶ್ರೀರುದ್ರ ಸಲಹೆಂದು ಪಾದಕೆ ಮಕುಟವ-ನೂರೆ ಪೊರೆದ ತ್ರಿಪುರಾರಿಯೆಂದೆನಲ್ಲದೆ ವಿಧಿ ಶಿರವ ಕೈ-ಯ್ಯಾರೆ ಕಡಿದನೆಂದೆನೆ ಭಕ್ತವತ್ಸಲವಾರಿಜಭವನುತಿಲೋಲನೆಂದೆನಲ್ಲದೆ 1 ನಾರದಸಹಿತ ಮತ್ಯಾರು ಕಾಣದಂದದಿಓರುಗಲ್ಲರಸಿನ ಮನೆಗೆ ಪೋಗಿತೋರುವ ಭಿತ್ತಿಯ ಕೊರೆದಾತನಿಷ್ಟವಪೂರಿಸಿದನುಪಮಮಹಿಮನೆಂದೆನಲ್ಲದೆಚೋರರ ಗುರುವೆಂದೆನೆ ಪಾರ್ಥಚಾಪದಿಂ-ದೇರುವಡೆದನೆಂದೆನೆ ಬತ್ತಲೆಮದವೇರಿ ಕುಣಿದನೆಂದೆನೆ ಅರ್ಜುನಗೊಲಿದಾರಾಜಿಸುವ ಮಹಾನಟನೆಂದೆನಲ್ಲದೆ2 ಸುರರು ದಾನವರೆಲ್ಲ ನೆರೆದು ವಾದಿಸಿ ಕ್ಷೀರಶರಧಿ ಮಥನವ ವಿರಚಿಸಲುಉರು ಹಾಲಾಹಲಮೊಗೆದುರುಹಲು ಸರ್ವರಪೊರೆದ ಶ್ರೀನೀಲಕಂಧರನೆಂದೆನಲ್ಲದೆಗರವ ಕುಡಿದನೆಂದೆನೆ ಪೆಣ್ಣಿತ್ತನಶಿರವನರಿದನೆಂದೆನೆ ಊರೂರೊಳುತಿರಿದುಗರುವನೆಂದೆನೆ ದುಷ್ಟ ಶಿಕ್ಷಕವರ ಕೆಳದಿಯ ರಾಮೇಶ್ವರನೆಂದೆನಲ್ಲದೆ3
--------------
ಕೆಳದಿ ವೆಂಕಣ್ಣ ಕವಿ
ನೀ ನೋಡಿದರೆ ಏನಾÀಗಲೊಲ್ಲದೊ ಪ ಶ್ರೀ ನಿಕೇತನ ನಾನೇ ನಿದರ್ಶನ ಅ.ಪ ಪೂಜೆಯ ಮಾಡಿದ ಪುಣ್ಯದ ರಾಶಿಯು ರಾಜಿಸುತಿರುವುದೊ ಎನ್ನಯ ಶಿರದಲಿ1 ಸಾಕಲು ಹೆದರಿದ ಪರಿವಾರವನು ವ್ಯಾಕುಲವಿಲ್ಲದ ಗೋಕುಲ ಮಾಡಿದಿ 2 ಈ ಮಹಾಭಾಗ್ಯವು ನಿನ್ನದೋ ಶಿಷ್ಯರ ಪ್ರೇಮದ ಕವಚವ ಧಾರಣೆ ಮಾಡಿದೆ 3 ಪಾತ್ರನು ನಿನ್ನಯ ಕರುಣಕೆ ನಾನಿರೆ ಶತ್ರುಗಳೆಲ್ಲರು ಮಿತ್ರರಾಗಿರುವರೋ 4 ನಗುವೆನು ಕುಣಿವೆನು ನಗಿಸುವೆ ಕುಣಿಸುವೆ ಸೊಗಸನು ನೋಡಿ ನೀ ನಗೆಲೋ ಪ್ರಸನ್ನನೆ 5
--------------
ವಿದ್ಯಾಪ್ರಸನ್ನತೀರ್ಥರು
ನೀ ಮಾಡಿದ ಮಾಯವು ನಾನೇನು ಬಲ್ಲೆ ಸ್ವಾಮಿ ನೀ ಮಾಡಿದ ಮಾಯವು ಪ ಕಣ್ಣು ಕಿವಿ ಕೈಕಾಲು ಮುನ್ನ ನಾಲಗೆ ಬಾಯಿ ನಿನ್ನ ಸೂತ್ರದಲಾಡ್ವವೆನ್ನದೇನಪರಾಧ 1 ಕಾಯ ಎಂಬ ಗೊಂಬೆಯಾಕಾರ ನಿರ್ಮಿಸಿ ಬೇಕಾದಂತಾಡಿಸುವಿ ಶ್ರೀಕರ ಒಳಗಿರ್ದು2 ಭೂಮಿತ್ರಯವ ಸೃಷ್ಟಿ ನೀ ಮಾಡಿ ತೋರಿದಿ ಕ್ಷೇಮದಿಂ ಸಲಹೆನ್ನ ಸ್ವಾಮಿ ಶ್ರೀರಾಮ ತಂದೆ 3
--------------
ರಾಮದಾಸರು
ನೀನೆ ಗತಿಯೆನಗೆ ಮಾಂಗಿರಿಯ ರಂಗ ಪ ನಾನಾ ಜನುಮವ ನಾನೇ ಪಡೆದವ ಮಾನವ ಜನ್ಮವ ನೀನೆನಗಿತ್ತವ ಅ.ಪ ಹಿಂದಿನ ಜನ್ಮದ ಅಂದವ ಮರೆಸಿದು ದೊಂದುಪಕಾರವೋ ಇಂದಿರೆಯರಸ ಇಂದೆನ್ನ ಬಳಿಗೆ ನೀ ಬಂದು ಪಾಲಿಸಬೇಕು ಭವ ಬೇಡೆಂದು ಬೇಡುವೆನಯ್ಯ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನೇ ಅನಾಥ ನಾನೇ ಸನಾಥ ಪ ಜ್ಞಾನಿಗಳಾಡುವರು ಯೀಪರಿ ಮಾತಾ ಅ.ಪ ನಂಬಿರುವುದೆ ಸುಳ್ಳು ನಂಬಿದಿರುವದೆ ನಿಜ ಹಂಬಲಿಸಿದರೇನು ತುಂಬುವುದಿಲ್ಲ 1 ಇಲ್ಲಾ ಎಂಬೋದುಂಟು ಉಂಟೂ ಎಂಬೋದಿಲ್ಲ ಬಲ್ಲರು ಸರ್ವರು ಬಾಯಿಮಾತಲ್ಲ 2 ಮಾನಾಭಿಮಾನ ನಿನ್ನಧೀನವು ಹರಿಯೇ 3 ಕಾಣೋದು ಕೇಳೋದು ಮಾಣಾದೆ ಮಾಡೋದು ನೀನೆ ಯನ್ನೊಳಗಿದ್ದು ನಡೆಸುತ್ತಲಿರುವೆ 4 ಎನಗೇ ನೀನೆ ತಂದೆ ನಿನಗೇ ತಂದೆ ಕಾಣೆ ಸಿರಿನಲ್ಲ 5 ನಿನ್ನೊಳಗೆ ಜಗವು ಜಗದೊಳಗೆ ನೀನೆ ಪನ್ನಗ ಶಯನಾ ಪಾವನ ಚರಿತನೆ 6 ಸರುವಾರೊಳಗೂ ಗುರುರಾಮ ವಿಠ್ಠಲ ಪರಿಪೂರ್ಣನೆಂಬೋದು ಪ್ರಹ್ಲಾದ ಬಲ್ಲ7
--------------
ಗುರುರಾಮವಿಠಲ
ಪಾಲಿಸೊ ಶ್ರೀನಿವಾಸ ಜಗದೀಶ ಪ ಮೇಲುಗಿರೀಶ ಹೃತ್ಕುಮುದನಿವಾಸ ಸತೀಶ ನೀನೆ ಅವಿನಾಶನೆ ಅನಿಶ ಅ.ಪ ಅನಿಮಿತ್ತ ಬಂಧು ನೀ ನಿನ್ಹೊರತು ಅನ್ಯರುಂಟೇ ಅನಪೇಕ್ಷನು ನೀ ದೀನರಕ್ಷನೆ ನಾನೇನರ್ಪಿಸಬಲ್ಲೆ ನೀ ಬಲ್ಲೆ ಅನುದಿನ ಮನೋವಾಚಕಾಯದಿ ನಾನೆಸಗುವುದು ಬಲ್ಲೆ ಅಲ್ಲಲ್ಲೇ ಘನಮಹಿಮನೆ ಎನ್ನ ಮನದಲ್ಲಿ ಅನುದಿನ ನಿನ್ನ ನೆನೆಯುವುದನೆ ಇತ್ತು ಕೊನೆಗಾಣಿಸು ಇನ್ನು 1 ಸತ್ಯಸಂಕಲ್ಪ ನೀ ನಿತ್ಯನೂತನಪ್ರಭುವೇ ಅತ್ಯಧಿಕದಿ ಭಕ್ತೋತ್ತಮರು ನಿತ್ಯ ಸೇವಿಸುತಿಹರೋ ಅವರ ಭೃತ್ಯನೆನಿಪ ಸಂ- ಪತ್ತನಿತ್ತು ಆಪತ್ತು ಹರಿಸಿ ಭಕ್ತಿಯ ನೀಡಯ್ಯ ಕರ್ಮ ಬೆನ್ಹತ್ತಿ ಹತ್ತಿ ಆಸೆ ಪೊತ್ತು ಕೊನೆಗೆ ನಾ ಉನ್ಮತ್ತನಾದೆ 2 ಪ್ರಣವಸ್ತಗೆ ದೇವಾ ನೀ ಪ್ರಣತ ಕಾಮದ ಕಾವಾ ಪ್ರಣತ ಜನರ ಮುಖ್ಯಪ್ರಾಣಾಂತರ್ಗತ ಫಣಿರಾಜಶಯ್ಯ ಹೇ ಜೀಯ್ಯ ಗುಣಮಣಿ ಶ್ರೀ ವೇಂಕಟೇಶ ಕ- ರುಣಾಕರ ಇನ್ನು ನಿನಗೆಣೆಯ ದೊರೆಯೆ ಮಣಿದು ಬೇಡುವೆ ನಿನ್ನ ದಣಿಸಲಾಗದು ಇನ್ನೂ ಧಣಿಯು ನೀ ಉರಗಾದ್ರಿವಾಸ ವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಪೂಜೆಯ ನಾನೇನ ಮಾಡುವೆ|ವiಹಾ ರಾಜರಾಜ ಕುರುಣಾನಂದ ಮೂರುತಿ ಹರಿಯೇ ಪ ಧ್ಯಾನಧಾರಣ ಮಂಗಳ ಮೂರ್ತಿಯ ಮಾಡುವೆನೆಂದರೆ| ನಿನ್ನ ಸುಖದ ನೆಲೆಯ ಇಂದಿರಾ ದೇವಿಯರಿಯಳು ಹರಿಯೇ 1 ಶಂಖೋದಕದಿ ಅಭಿಷೇಕ ಮಾಡುವನೆಂದರೆ|ನಿನ್ನಪದ ಪಂಕಜದಲಿ ಭಾಗಿರಥಿ ಬಂದಳೂ ಹರಿಯೇ2 ವಸ್ತ್ರವನುಡಿಸುವೆನೆಂದರೆ ದ್ರೌಪದಿಯವಸರದಿ|ನಿನ್ನಯ ವಸ್ತ್ರದಿಂಡಿನ ಎಣಿಕೆಯ ದೋರದೆನಗೆ ಹರಿಯೇ3 ಗಂಧಪುಷ್ಪವನೀವೆನೆಂದÀರೆ ನಿನ್ನ ಚರಣಾಬ್ಜದಾ|ಮಕ ಭ್ರಮರ ಅಜಭವರಾದರು ಹರಿಯೇ 4 ಆರೋಗಣೆಯ ಮಾಡಿಸುವೆನೆಂದರೆ ನಿನ್ನಕೈಯದಿ|ಸುರರು ಆರೋಗಣೆಯ ಮಾಡಿ ಅಮರರಾದರು ಹರಿಯೇ 5 ನೀರಾಂಜನ ಮಾಡುವನೆಂದರೆ ಕೋಟಿ ಸೂರ್ಯಪ್ರಭೆಯತೇಜ| ಮೀರಿತು ಸ್ತುತಿಗಿನ್ನು ಶ್ರುತಿಗಳು ನಿಂತವು ಹರಿಯೇ6 ಗುರುವರ ಮಹೀಪತಿನಂದನ ಸಾರಥಿ|ನಿನ್ನ ಸ್ಮರಣೆಯ ಕೊಟ್ಟನುದಿನದಿ ರಕ್ಷಿಸುಹರಿಯೇ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಲ್ಲೆನೆಂದರೆ ನಾನೇನೇನರಿಯೆ ಅರಿಯೆನಂದರೆ ಸ್ವಲ್ಪ ತಿಳಿದಷ್ಟು ಬಲ್ಲೆ ಪ ಗುರುಚರಣದ ಸ್ಮರಣೆಯ ಮಾಡಿ ಬಲ್ಲೆ ಪರ ಕಡಿಸಿ ಹೊಟ್ಟೆ ಹೊರವುದನರಿಯೆ ಕೊರಳ ಕೊಯ್ವರ ಕಪಟವು ನಾನರಿಯೆ 1 ಸಾಧು ಸಮಾಗಮ ಸುಖವೆಂದು ಬಲ್ಲೆ ವಾದಿಸುವರ ಕೂಡ ಕಾದಾಡಲರಿಯೆ ಬೋಧಾಮೃತರಸಸ್ವಾದವು ಬಲ್ಲೆ ವೇದ ಶಾಸ್ತ್ರಂಗಳ ಓದಿ ನಾನರಿಯೆ 2 ಶರೀರ ಸುಖವು ನಶ್ವರವೆಂದು ಬಲ್ಲೆ ಪರಮಾತ್ಮ ತೊಲಗುವ ಪರಿಯ ನಾನರಿಯೆ ಗುರು ವಿಮಲಾನಂದಗೆ ಹಿಂಗಲರಿಯೆ 3
--------------
ಭಟಕಳ ಅಪ್ಪಯ್ಯ
ಬಾಗಿಲು ತೆರೆಯುವ ಹಾಡು ನಾರಿ ಶಿರೋಮಣಿ ವಾರಿಜ ಮುಖಿಯೆ ಗಂಭೀರಳೆ ಬಾಗಿಲು ತೆರೆಯೇ |ಗಂಭೀರಳೆ ಬಾಗಿಲ ತೆರೆಯೇ ಪ ಆರು ನಿನ್ನಯ ಪೆಸರೆನಗೆ ಪೇಳದಲೆ ದ್ವಾರವ ತೆಗೆಯೆನು ನಾನು |ನಾ ದ್ವಾರವ ತೆಗೆಯೆನು ನಾನು ಅ.ಪ. ನೀರೊಳು ಸಂಚರಿಸಿ ಕ್ರೂರ ತಮನ ಕೊಂದಧೀರ ಮತ್ಸ್ಯನು ಕಾಣೆ ನಾರೀ | ನಾಧೀರ ಮತ್ಸ್ಯನು ಕಾಣೆ ನಾರೀ ||ಧೀರ ಮತ್ಸ್ಯನು ನೀನಾದರೊಳಿತು ದೊಡ್ಡವಾರಿಧಿಯೊಳಗಿರು ಹೋಗಯ್ಯ | ದೊಡ್ಡವಾರಿಧಿಯೊಳಗಿರು ಹೋಗಯ್ಯ 1 ಶರಧಿ ಕೂರ್ಮ ಕೂರ್ಮ ಕಾಣೆ ||ಗಿರಿಯ ತಾಳಿದ ಕೂರ್ಮನಾದರೊಳಿತು | ದೊಡ್ಡಮಡುವಿನೊಳಗೆ ಇರು ಹೋಗಯ್ಯ | ದೊಡ್ಡಮಡುವಿನೊಳಗೆ ಇರು ಹೋಗಯ್ಯ2 ಧರೆಯ ಕದ್ದಸುರನ ದಾಡಿಯಿಂದಲಿ ಸೀಳ್ದವರಹ ಕಾಣೆಲೆ ವಾರಿಜಾಕ್ಷಿ | ನಾವರಹ ಕಾಣೆಲೆ ವಾರಿಜಾಕ್ಷೀ ||ವರಹ ನೀನಾದರೊಳಿತು ನಡೆ ನಡೆ | ದೊಡ್ಡವನಾಂತ್ರದೊಳಗಿರು ಹೋಗಯ್ಯ || ದೊಡ್ಡವನಾಂತರದೊಳಗಿರು ಹೋಗಯ್ಯ 3 ಮೃಗ ಮೃಗ ಮೃಗ ನೀನಾದರೊಳಿತು ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ | ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ 4 ಭೂಮಿ ಈರಡಿ ಮಾಡಿ ಬಲಿಯ ಪಾತಾಳಕಿಟ್ಟವಾಮನ ಕಾಣೇ ವಾರಿಜಾಕ್ಷೀ | ನಾವಾಮನ ಕಾಣೇ ವಾರಿಜಾಕ್ಷೀ ||ವಾಮನ ನೀನಾದರೊಳಿತು ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ | ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ 5 ತಂದೆ ಆಜ್ಞೆಯ ಪೊತ್ತು ತಾಯಿ ಸೋದರನ್ನಕೊಂದವ ನಾನೇ ಕೋಮಲಾಂಗೀ | ನಾಕೊಂದವ ನಾನೇ ಕೋಮಲಾಂಗೀ ||ಕೊಂದವ ನೀನಾದರೊಳಿತು ಮುನಿವೃಂದದಲ್ಲಿ ಇರು ಹೋಗಯ್ಯಾ | ಮುನಿವೃಂದಾದಲ್ಲಿ ಇರು ಹೋಗಯ್ಯ 6 ಲಂಡ ರಾವಣನ ಶಿರವ ಚಂಡಾಡಿ ಸೀತೆ ತಂದ | ಪ್ರ-ಚಂಡ ವಿಕ್ರಮ ರಾಮ ಕಾಣೇ | ನಾ ಪ್ರ-ಚಂಡ ವಿಕ್ರಮ ರಾಮ ಕಾಣೇ ||ಪ್ರಚಂಡ ವಿಕ್ರಮನಾದರೊಳಿತು ಕೋತಿಹಿಂಡುಗಳೊಳಗಿರು ಹೋಗಯ್ಯ | ಕೋತಿಹಿಂಡುಗಳೊಳಗಿರು ಹೋಗಯ್ಯ 7 ಮಧುರಾಪುರದಿ ಪುಟ್ಟಿ ಮಾವ ಕಂಸನ ಕೊಂದಚದುರ ಕಾಣೆಲೆ ಶಾಮಲಾಂಗೀ | ನಾಚದುರ ಕಾಣಲೆ ಶಾಮಲಾಂಗೀ ||ಚದುರ ನೀನಾದರೊಳಿತು ನಡೆ ನಡೆ ಗೋಪೇ-ರಧರ ಚುಂಬಿಸುತಿರು ಹೋಗಯ್ಯ | ಗೋಪೇ-ರಧರ ಚುಂಬಿಸುತಿರು ಹೋಗಯ್ಯ 8 ಶುದ್ಧ ಖಳನು ಆಗಿ ವ್ರತವನಳಿದು ಬಂದಬೌದ್ಧ ಕಾಣಲೇ ಮಂದಗಮನೇ | ನಾಬೌದ್ಧ ಕಾಣಲೇ ಮಂದಗಮನೇ ||ಬೌದ್ಧನು ನೀನಾದರೊಳಿತು ನಡೆ ನಡೆ ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ | ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ 9 ತುರಗವನೇರಿ ಕಲಿಯ ಕಡಿದು ಶಾಂತನ ಸಹೋ-ದರಗೆ ರಾಜ್ಯವನಿತ್ತೆ ಕಾಣೇ | ಸಹೋ-ದರಗೆ ರಾಜ್ಯವನಿತ್ತೆ ಕಾಣೇ ||ಪರಮ ಪುರುಷನಹುದೋ ರಾಹುತರಿರುವಸ್ಥಳದಲ್ಲಿರು ಹೋಗಯ್ಯ | ನೀರಾಹುತರಿರುವ ಸ್ಥಳದಲ್ಲಿರು ಹೋಗಯ್ಯ 10 ಕನ್ಯಾಮಣಿಯೆ ಕೋಮಲೆಯೇ ಗುಣಪೂರ್ಣ ಮೋ-ಹನ್ನ ವಿಠಲ ರಾಯ ಕಾಣೆ | ನಾ ಮೋ-ಹನ್ನ ವಿಠಲ ರಾಯ ಕಾಣೆ ||ಎನ್ನ ಅಪರಾಧ ಕ್ಷಮಿಸಬೇಕು ಎನುತಲಿಚೆನ್ನಾಗಿ ಪಾದಕ್ಕೆರಗಿದಳು ದೇವಿ 11
--------------
ಮೋಹನದಾಸರು
ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು | ತಾರಯ್ಯಾ ಒಂದು ಚುಂಬನ ಕರುಣ | ಬೀರಯ್ಯಾ ನಮ್ಮ ವಶಕೆ ಪ ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ | ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ 2 ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ | ಪೋರ ಬುಧ್ಧಿಗಳ ಬಿಡವಲ್ಲಿ 3 ತುರುಕರಗಳ ಕಾಯ್ದು | ಚರಿಸಿದೆ ಅಡವಿಯ | ಪರಸತಿಯರ ವ್ರತಗಳ | ಪರಸತಿಯರ ವ್ರತಗಳ ಕೆಡಿಸಿದ | ಪರಮಾತ್ಮನಿಗೆ ಎಣೆಯುಂಟೆ 4 ಕೇಸಕ್ಕಿ ತಿರುಮಲ ಲೇಸಯ್ಯಾ ನಿನ್ನ ಗುಣ | ಕಾಸುಕಾಸಿಗೆ ಬಿಡದಲೆ | ಕಾಸುಕಾಸಿಗೆ ಬಿಡದೆ | ಬಡ್ಡಿಕೊಂಬ ಆಶೆಗಾರನು ಬಹು ಸೂರಾಳೊ 5 ಅಣಕವಾಡಲಿ ಬೇಡ ಕೆಣಕಿದರೆ ನಿನ್ನ | ಹೊಣಿಕೆಹಾಕುವೆ ಹಿಡತಂದು ಎನ್ನಯ | ಮನವೆ ನಿನ್ನಯ ಚರಣಕ್ಕೆ ಶೋಭಾನೆ 6 ಬೆಟ್ಟದ ಕೊನೆ ಏರಿ ಎಷ್ಟು ದೂರ ಓಡೀ | ಗಟ್ಯಾಗಿ ನಿನ್ನ ಚರಣದ | ಗಟ್ಯಾಗಿ ನಿನ್ನ ಚರಣದ ಕೊನಿಯ ಉಂ ಗುಷ್ಟ ಕಚ್ಚದಲೆ ಬಿಡೆ ನಾನು 7 ಹಿಂದೆ ಯಾರು ಏನು ತಂದು ಕೊಟ್ಟರೋ ನಿನಗೆ | ಇಂದು ನಾನೇನು ಕೊಡಲಿಲ್ಲವೆಲೋ ತಂದೆ | ಕಣ್ಣಿರದು ನೋಡೊ ಕಮಲಾಕ್ಷ | ಶೋಭಾನೆ 8 ಭಕ್ತನ ನುಡಿಕೇಳಿ ಚಕ್ಕನೆ ಬಿಗಿದಪ್ಪಿ | ತೆಕ್ಕಿಸಿದಾ ವಿಜಯವಿಠ್ಠಲ ಎನ್ನ ಅಕ್ಕರವೆಲ್ಲ ತೀರಿಸಿದಾ | ಶೋಭಾನೆ 9
--------------
ವಿಜಯದಾಸ
ಬಾರೋ ಮನೆಗೆ ಭಾಗವತರ ಭಾಗದೇಯನೆ ಚಾರುವದನ ತಾಮರಸವ ತೋರು ಪ್ರೀಯನೆ ಪ ಹಗಲು ಇರುಳು ನೆನಹು ಬಿಡದು ಸುಗುಣ ಸುಂದರ ಬಗೆಯೊಳಿನ್ನ ಮರೆಯಬಹುದೆ ನಿಗಮಗೋಚರ 1 ಕಣ್ಣಿನಿಂದ ನಿನ್ನ ನೋಡಿ ಧನ್ಯನಾಗುವೆ ನಿನ್ನ ಚರಣಕೆನ್ನ ಶಿರದಿ ಮುನ್ನಬಾಗುವೆ 2 ನಿತ್ಯತೃಪ್ತನಿನಗೆ ನಾನೇ ಭೃತ್ಯನಾಗುವೆ ನೃತ್ಯಗೈದು ಪಾಡಿ ಕೃತಕೃತ್ಯನಾಗುವೆ 3 ಶ್ರೀನಿವಾಸ ನಿನ್ನ ದಾಸ ನಾನೇನಲ್ಲವೆ ಮಾನಪ್ರಾಣಗಳಿಗೆ ದೊರೆಯು ನೀನೆಯಲ್ಲವೆ 4 ಶರಣ ಜನರ ಭರಣಗೈವ ಕರುಣಿಯಾರೆಲಾ ಹರಣ ಹರಧರದೊಳಿರುವ ವರದ ವಿಠಲಾ 5
--------------
ವೆಂಕಟವರದಾರ್ಯರು