ಒಟ್ಟು 5088 ಕಡೆಗಳಲ್ಲಿ , 132 ದಾಸರು , 3232 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಶಿಲೆಯಲ್ಲಿ ಮಮತೆಯೇ ಸಿದ್ಧ ಪುರುಷ ಇಳೆಮೂರು ವ್ಯಾಪಕಗೆ ಈ ಮುನಿಯ ಬಳಿಯಾ ಪ. ದಶರಥಾತ್ಮಜ ಸೇತು ಬಂಧನವ ಗೈಯಲೂ ಅಸಮ ಸಾಹಸದಿ ಗಿರಿಗಳನೆ ತಂದೇ ಹಸನಾದ ಶಿಲೆಯೊಂದರಲಿ ರೂಪ ಮೂಡುವಡೆ ವಸುಧಿ ಸುತೆಪತಿ ಬೇಡವೆನುತಿರ್ದನೇನೈ 1 ನಡುಗೆ ಹುಲಿ ಘರ್ಜನೆಗೆ ಪಡೆದವಳ ಕೈ ಜಾರೆ ವಡೆದು ಶತವಾಗಲಾ ಗಿರಿಯಲ್ಲಿ ಮಮತೇ ವಡಮೂಡದವಗೆ ಈ ವಡೆದ ಪ್ರತೀಕದಲಿ ಇಡುತ ಅಭಿಮಾನವನು ಕಡು ಪೂಜೆಗೊಂಬೇ 2 ಧರೆಯಲ್ಲಿ ಚರಿಸಿ ಸದ್ಭಕ್ತರ ಜ್ಞಾನವನು ಹರಿಸಿ ಸಧ್ಗ್ರಂಥ ಕನ್ನಡಿಯ ತೋರಿ ಗಿರಿ ಏರುವಾಗ ಬೇಕೆನಲು ಶಿಲೆ ಇರಲಿಲ್ಲೆ ಬಿರುಕಾದ ಕಲ್ಲಿನಲ್ಲಿ ನೆಲಸಿರುವದೇನೈ 3 ಶಿಲೆಯೆ ನೀನೆನ್ನಲು ಅಜ್ಞಾನಿ ನುಡಿಯಹುದು ಶಿಲೆಯಲ್ಲಿ ನೀನೆಲು ಮತ್ತೊಂದು ಶಿಗದೇ ಬಲು ಛಿದ್ರ ತಂತಿಯಲಿ ಬಿಗಿಸಿ ಪೂಜೆಯಗೊಂಬ ಬಲವಂತದಾ ಮಹಿಮೆ ತಿಳಿಯಲಳವಲ್ಲಾ 4 ತಾಪಸರ ಪೂಜೆ ಸತ್ವವ ತೋರ್ವ ವೈಭವವೋ ಆಪನ್ನರನೆ ಕಾಯ್ವ ಆನಂದವೋ ಶ್ರೀ ಪರಮಹಂಸ ಪ್ರದ್ಯುಮ್ನತೀರ್ಥರಿಗೊಲಿದೆ ಗೋಪಾಲಕೃಷ್ಣವಿಠ್ಠಲನ ನಿಜದಾಸ 5
--------------
ಅಂಬಾಬಾಯಿ
* ಸೂರ್ಯ | ನಾರಾಯಣ ರಥ ಸೂರ್ಯ ಪ. ಸೂರ್ಯ ರಥವನು ಭಾರಿ ವಸನಾಭರಣ ತೊಡುತಲಿ ಮೂರುಲೋಕವ ಬೆಳಗು ಮಾಡುತ ಭಾರಿ ತಮವನು ಛೇದಿಸುತ್ತ ಅ.ಪ. ಸಪ್ತ ಹಯೆಗಳ್ ಕಟ್ಟುತ | ಚಕ್ರೇಕ ರಥಕೆ ಸಪ್ತ ಋಷಿಗಳ್ ಪೊಗಳುತ | ಅರುಣ ಸಾರಥ್ಯ ಸಪ್ತ ಜಿಹ್ವನ ತೆರದಿ ತೋರುತ ಸಪ್ತ ಶರಧಿಯ ದಾಟಿ ಸಾರುತ ಸಪ್ತಗಿರಿ ಮೇರು ಸುತ್ತುತಾ ರಥ ಶುಭ ದಿವಸದಲ್ಲಿ 1 ವಾಲಖಿಲ್ಯರು ಎದುರಲಿ | ಅರವತ್ತು ಸಾವಿರ ಓಲಗ ತೊಡುತಲಲ್ಲೀ | ಹಿಂದು ಮುಂದಿನಲಿ ಗಾಲಿದಬ್ಬುವ ರಕ್ಕಸೊಬ್ಬನು ವ್ಯಾಳನೊಬ್ಬನು ರಜ್ಜರೂಪಕೆ ಮೇಲೆ ಯಕ್ಷಕಿನ್ನರರು ಸುತ್ತಲು ಕರ್ಮ ಸಾಕ್ಷಿಯು 2 ಉತ್ತರಾಯಣ ಮಾಘದಿ | ಸ್ನಾನವಗೈದು ಉತ್ತಮರಘ್ರ್ಯ ಕರದಿ | ಪಿಡಿಯುತ್ತ ಭರದಿ ಉತ್ತಮ ಗಂಗಾದಿ ತೀರ್ಥದಿ ಉದಿಸಿ ಬರುವಗೆ ಕೊಡುವ ಕತದಿ ಚಿತ್ತ ನಿರ್ಮಲದಿಂದ ಕಾದಿರೆ ಹತ್ತಿ ಛಾಯೆಯೆ ಸಹಿತ ರಥದಿ 3 ಜಗಚಕ್ಷುವೆನಿಸಿದನೂ | ಧರ್ಮಜಗೆ ವಲಿದು ಮಿಗೆ ಅಕ್ಷಪ್ರದನಾದನೂ | ಸವಿತೃ ನಾಮಕನೂ ಬಗೆ ಬಗೆಯ ಜೀವರುಗಳಯುವ ತೆಗೆದು ಸೆಳೆಯುತ ದಿನದಿನದಲಿ ನಿಗಮಗೋಚರ ನಾಜ್ಞೆಧಾರಕ ಸುಗುಣರಿಗೆ ಸುಜ್ಞಾನವೀಯುತ 4 ಕಮಲ | ಗದೆಯ ಧರಿಸಿ ಕಿಂಕರಾದ್ಯರ ನುತಿಗಳ | ಕೇಳುತ್ತ ಬಹಳ ಶಂಖ ಚಕ್ರಾಂಕಿತನು ಶಿರಿಸಹ ಶಂಕಿಸದೆ ತನ್ನ ಹೃದಯದಲ್ಲಿರೆ ಬಿಂಕ ಗೋಪಾಲಕೃಷ್ಣವಿಠಲಗೆ ಕಿಂಕರನು ತಾನÉಂದು ಪೊಗಳುತ 5
--------------
ಅಂಬಾಬಾಯಿ
* ಹರಿಗುರು ಕರುಣದಿ ದೊರಕಿದುದೆನಗೀ ಪರಮ ಪಾವನ ತಂಬೂರಿ ಪ. ನರÀಹರಿ ಭಕ್ತರು ಒಲಿದೆನಗಿತ್ತರು ಸುಲಲಿತ ನಾದದ ತಂಬೂರಿ ಅ.ಪ. ತಂದೆ ಮುದ್ದುಮೋಹನರು ಸ್ವಪ್ನದಿ ತಂದು ತೋರಿದಂಥ ತಂಬೂರಿ ನಂದ ಕಂದನ ಗುಣ ಅಂದದಿ ಸ್ತುತಿಸೆ ಆ- ನಂದವ ತೋರುವ ತಂಬೂರಿ ಇಂದಿರೇಶನ ಭಕ್ತರಂದದಿ ಧರಿಸುವ ರೆಂದೆಂದಿಗು ಈ ತಂಬೂರಿ ನೊಂದು ಭವದೊಳು ತಪ್ತರಾದವರಿಗೆ ಬಂಧನ ಬಿಡಿಸುವ ತಂಬೂರಿ 1 ಅಂತರಭಕ್ತರು ಹರುಷದಿ ನುಡಿಸುವ ಕಂತುಪಿತಗೆ ಪ್ರೀತಿ ತಂಬೂರಿ ಸಂತತ ಮಾನಾಭಿಮಾನವ ತೊರೆದು ಏ- ಕಾಂತದಿ ಸುಖಿಸುವ ತಂಬೂರಿ ಶಾಂತದಿ ನಾರದಾದಿಗಳು ವೈಕುಂಠದಿ ನಿಂತು ನುಡಿಸುವಂಥ ತಂಬೂರಿ ಪಂಥದಿ ಹರಿಪಾದಂಗಳ ಭಜಿಸೆ ನಿ- ಶ್ಚಿಂತೆಯ ಮಾಳ್ಪಂಥ ತಂಬೂರಿ2 ಬಲು ಬಲು ಪರಿಯಲಿ ಹರಿದಾಸತ್ವಕೆ ಬರುವಂತೆ ಮಾಡಿದ ತಂಬೂರಿ ಛಲದಿಂದಲಿ ಶ್ರೀ ಹರಿ ತಾನಿಡ್ಹಿಸಿದ ಒಲುಮೆಯಿಂದಲಿ ಈ ತಂಬೂರಿ ನೆಲೆಯಾದೆನು ಹರಿದಾಸರ ಮಾರ್ಗದಿ ಕಲುಷವ ಕಳೆದಿತು ತಂಬೂರಿ ಸುಲಭದಿಂದ ಶ್ರೀ ಗುರುಗಳು ಕರುಣಿಸಿ ನೆಲೆಗೆ ನಿಲಿಸಿದಂಥ ತಂಬೂರಿ 3 ಶ್ರೀನಿವಾಸನು ತಾ ಕೊಡಿಸಿದನು ಏನೆಂಬೆನು ಈ ತಂಬೂರಿ ಮಾನಾಭಿಮಾನವ ತೊಲಗಿಸುವುದಕೆ ಕಾರಣವಾಗಿಹ ತಂಬೂರಿ ಶ್ರೀನಿಧಿ ಸೊಸೆ ಬಹು ಆನಂದದಲಿ ತಾ ನುಡಿಸುವಳೀ ತಂಬೂರಿ ಗಾನಲೋಲ ಕೃಷ್ಣ ತಾನೊಲಿವುದಕೆ ಕಾರಣ ಮಾಡಿಹ ತಂಬೂರಿ 4 ಬೆಟ್ಟದೊಡೆಯ ತಾನಿಷ್ಟು ಹಟವ ಮಾಡಿ ಕೊಟ್ಟೀ ಕೊಟ್ಟನು ತಂಬೂರಿ ಎಷ್ಟು ನಾಚಿಕೆಪಟ್ಟರು ಬಿಡದಲೆ ಕಷ್ಟ ಕಳೆಯಲಿತ್ತ ತಂಬೂರಿ ಭವ ಕಟ್ಟು ಇಂದೆನ್ನನು ಮುಟ್ಟಿಸಿತ್ಹರಿಪುರ ತಂಬೂರಿ ಎಷ್ಟು ಹೇಳಲಿ ಶ್ರೀನಿಧಿ ಗೋಪಾಲ ಕೃಷ್ಣವಿಠ್ಠಲನಿತ್ತ ತಂಬೂರಿ 5
--------------
ಅಂಬಾಬಾಯಿ
1. ಗಜೇಂದ್ರಮೋಕ್ಷ ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ ಘೋರ ಭವದುಃಖ ಸಂಹಾರಾಯ ಪ ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ- ತಾ ಶುಂಡಾಲನಾದನರಸ 1 ಕ್ಷೀರಸಾಗರ ತಡದೊಳೈವತ್ತು ಯೋಜನ ವಿ- ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ ವಾರಣೀಂದ್ರನು ಮೆರೆದನು 2 ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ ಕಂಡಿತು ಪಾನಾಭಿಲಾಷೆಯಿಂದ ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ ಏನಿದೆತ್ತಣ ರಭಸವೆಂದುಗ್ರಕೋಪದಿಂ ನೆಗಳು ಏನೆಂಬೆನಾಕ್ಷಣದೊಳು 3 ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ ಸೆಳೆದುದು ಬಿಡದೆ ನೆಗಳವು ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ ಚಿಂತಿಸುತ ಮತ್ತ್ಯಾರು ತನಗೆನುತಲಿ 4 ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು ಮುಕುಂದ ಮುನಿವೃಂದವಂದ್ಯಾ ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ ಮಾಯಾಪ್ರಬಂಧದಿ ನೆಗಳಿನಿಂ 5 ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ ಪರಮೇಷ್ಠಿ ಪರಮಪುರುಷಾ ನಿರುಪಮ ನಿಜಾನಂದ ನಿರ್ಭಯ ನಿರಾವರಣ ನಿರಂಜನ ನಿರಾಧಾರ ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6 ಗುಪಿತ ಕಂಠಧ್ವನಿಯೊ ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ ದಂತಿವದನನ ನೆಗಹಿದಾ 7 ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ ಕುಂಡಲದಿಂದ ಮಿಗೆ ಶೋಭಿಸುತಲೆಸೆದನು ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ ಅಮರರೊಲುಮೆಗೆ ನೆರೆದನೋಲೈಸುತ 8 ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು [ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ ಸಿರಿ ಮೊಗದ ಪೀತಾಂಬರದಾಲಂಕೃತದ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9 ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10 ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ- ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ ತಾ ವಿಹಂಗಾಧಿಪನನೇರಿ ಬಿಜಯಂಗೈದ ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11
--------------
ಬೇಲೂರು ವೈಕುಂಠದಾಸರು
3. ತಿರುವಂಗೂರು ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ ಭೋರೆಂಬ ವಾದ್ಯರವದಿ ಪ ಪರಾಕು ವಾರಿಸುವ ಪಾಠಕರ ಮೇಳದಿಂ ರಾಮನೂ ಅ.ಪ ಮುತ್ತು ನವರತ್ನ ಕೆತ್ತಿಸಿ ಬಿಗಿದಚಲ್ಲಣದ ಇತ್ತರದ ಸಮಕಟ್ಟಿನಾ ಝಲ್ಲಿಯಾ ಸುತ್ತ ಮುಖದಲಿ ಮಿನುಗುವರಳೆಲೆಯ ಢಾಳದಿಂ ದೊತ್ತಿಸಿದ ಕಡಿವಾಣದಾ ಮುಖಾರಂಬದಾ ಕತ್ತಿ ಸಿಂಗಾಡಿ ಕೆಡೆಯ ಬತ್ತಳಿಕೆ ಬಿಗಿ ದೊತ್ತಿ ಕುಣಿಕುಣಿದು ಬರುವಾ ತೇಜಿಯಾ ಅರ್ತಿಯಿಂ ರಾಮರಾವುತನೇರಿ ದೈತ್ಯವಿಪಿನಕ್ಕೆ ಪೊರಮಟ್ಟೈದಿದಾ ರಾಮನೂ 1 ಸುರರು ಫೌಜಾಗಿ ತೋರಲು ಸೋಮಸೂರಿಯರು ವರಛತ್ರವನುವಾಗಿ ಪಿಡಿದು ನಿಲಲೂ ಸರಸಿಜೋದ್ಭವನು ಸಾರಥಿಯಾಗಿ ನಡೆಸುತಿರೆ ವರರಥವ ಸಿಂಗರಸಿ ಹರಿ ಸ್ಮರಿಸಿ ತನ್ನಾ ವರವಾಹನವನೇರಿ ಚರಿಸುತುತ್ಸಾಹದಿಂ ತ್ವರದಿಂದ ನಡೆಯುತಿರಲೂ ಖರದೂಷಣ ತ್ರಿಶಿರ ಮಾರೀಚ ಮೃಗಕುಲವ ತರಿದು ಬೇಟೆಯನಾಡಿದಾ ರಾಮನೂ 2 ದಶಶಿರ ಕುಂಭಕರ್ಣ ಮೊದಲಾಗಿದ್ದ ಖ ಳರ ಖಂಡಿಸಿ ಕದನದಲ್ಲಿ ಗೆಲಿದೂ ಮರೆಹೊಕ್ಕ ವೀರವೈಷ್ಣವ ವಿಭೀಷಣನೆಂಬ ಶರಣನನು ಪರಿಪಾಲಿಸಿ ಜಗದೊಳೂ ಪರಿವುತಿಹ ಕಾವೇರಿ ಉತ್ತರದ ಭಾಗದಲಿ ಮೆರೆವ ತಿರುವಂಗೂರಿನಲೀ ಸುಖದಲೀ ಸ್ಮರರೂಪ ವೈಕುಂಠರಾಮ ಬೇಟೆಯನಾಡಿ ಪರಮ ಹರುಷದಿ ಬಂದು ನಿಂದ ಸಂಭ್ರಮದಿ 3
--------------
ಬೇಲೂರು ವೈಕುಂಠದಾಸರು
4. ಗೊರೂರು ಹೇಮಾವತೀ ತೀರ ನಿಲಯಾ ನಮೋ ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ ಪ ಅರಸು ಮುನಿವಾಗ ಆತ್ಮರು ಮೊಗವ ತೆಗೆವಾಗ ದುರುಳ ಮಾನವರಿಟ್ಟೆಡೆಯಲಿರುವೆಂಬಾಗ ಸುರರು ಮ ತ್ಸರಿಪಾಗ ನರಸಿಂಹ ಶರಣೆನ್ನು ಮನವೇ 1 ಮುಗಿಲಗಲದಾಪತ್ತು ಕವಿವಾಗ ಕ್ರೂರಗೃಹ ಪಗೆಗಳಿಟ್ಟುಣಿಪಾಗ ಅನಲ ಜಲಭಯದಿ ಮಿಗೆ ಮುಳುಗುವಾಗ ರೋಗಗಳು ಪೀಡಿಸುವಾಗ ಮೃಗರಾಜವದನ ಶರಣೆನ್ನು ಬಿಡದೆ ಮನವೇ 2 ಸುಖವ ಪಡುವಾಗ ದು:ಖಕ್ಕೆ ಮನವ ತೆಗೆವಾಗ ಅಖಿಲ ಪಾತಕದ ನೆರೆಕಾಲಲೊದೆವಾಗ ಮಖಮಥನ ಕಮಲಭವಮುಖ ದಿವಿಜವಂದ್ಯಪದ ನಖನೆ ಶ್ರೀ ವೈಕುಂಠಪತಿ ಚನ್ನರಾಯ[ನೆನುಮನವೆ] 3
--------------
ಬೇಲೂರು ವೈಕುಂಠದಾಸರು
ಅಂಕಿತ-ಗಿರಿಧರಸುತ ಗುರುಮಹೀಪತಿರಾಯಾ | ಕೊಡು ಎನಗೆ ಸುಮತಿಯಾ ಪ ಭಕ್ತರ ಸುರಧೇನು | ಐಗಳಿ ವೃತ್ತಿಯನು | ಮನಕೆ ತಾರದೆ ಘನ ವ್ಯಾಪರವನು | ಮಾಡುತ ಭಾಗ್ಯವನು | ಮಾಡಲು ತಿಮ್ಮವ್ವನು 1 ಭಾಸ್ಕರ ಮುನಿ ಬಂದು | ಧಾರುಣಿ ಜನರುದ್ಧರಿಸಲಲ್ಲೆ ನಿಂದು | ಇರಲು ದಯಾಸಿಂಧು | ನಾರಿಶಿರೋಮಣಿ ದರುಶನಕ್ಕೆ ತಂದು | ನೀನೆ ಗತಿಯೆಂದು | ಆರು ತಿಂಗಳಾರಾಧಿಸೆ ಸಲಹೆಂದು | ದೀನಜನ ಬಂಧು | 2 ಸತಿಪತಿಗಳ ಚಿತ್ತಾ | ಆಗುದು ಎನೆ ವನಿತಾ | ನಮಿಸಲು ಗುರುತಾತ | ಆತರಿದನು ತವ ಮುಖವನು ಈಕ್ಷಿಸುತಾ ಪಕ್ವಾಫಲವೆನುತಾ 3 ಮಂದಹಾಸದಿಂ ನುಡಿದನು ನಿಜಗುಟ್ಟು | ವ್ಯಾಪಾರವ ಬಿಟ್ಟು | ಚಂದದಿ ಯಾಚಕ ವೃತ್ತಿಲಿ ಮನನಟ್ಟು | ಎನೆ ಸಮ್ಮತ ಬಟ್ಟು | ಮಂದಿ ಕುದುರಿಗೆಲ್ಲರಿಗಪ್ಪಣೆ ಕೊಟ್ಟು | ನಿಲ್ಲದ್ಹರುಷ ತೊಟ್ಟು | ಉಪದೇಶವ ಕೊಟ್ಟು 4 ಯೋಗಧಾರಣದ ಕೀಲವ ದೋರಿಸಲು | ದೂದಿಯವೋಲ್ | ನಾನಾ ಬಯಕೆಗಳು | ತ್ಯಾಗವ ಮಾಡುವ ಅನ್ನ ಉದಕಗಳು | ಕ್ಲಪ್ತಕೆ ನಿಲ್ಲಿಸಲು | ಮುಗಿದವು ಹಸ್ತಗಳು 5 ಭ್ರೂಮಧ್ಯದ್ವಿದಳದಾ | ದ್ವಾರವ ತ್ಯಜಿಸುತ್ತಾ | ತ್ರಿಕುಟ ಶ್ರೀಹಟ ಗೋಲ್ಹಟ ಗೋಪುರದಾ | ನೋಡುತ ಸಂಭ್ರಮದಾ | ಪಂಕಜದೊಳಗಿದ್ದ 6 ನಿತ್ಯ ಪ್ರಭೆಯು ಅನುದಿನಾ | ಕಾಣುತ ಸಂಪೂರ್ಣಾ | ತಿಳಕೊಂಡ್ಯೋ ಪ್ರವೀಣಾ | ದಿಂದಲೇ ಭಯಹರಣಾ 7 ಅಂತಹದು ಬೇಗ | ನೋಡೆಂದನು ಅನಘಾ | ನಿನ್ನಲ್ಲೇ ಈಗಾ | ದುಷ್ಕøತ ತರುನಾಗಾ 8 ಆಗುದು ನಿರ್ಧಾರಾ | ನಿನ್ನುದರದಿ ಕುವರಾ | ಸಂಶಯ ಬಿಡು ಅದರಾ | ಭಕ್ತರ ಸಹಕಾರಾ 9 ಮುನಿವರನಾಜ್ಞೆದಿ ಸ್ವಸ್ಥಾನಕೆ ಬರುತಾ | ಕೆಲ ದಿವಸಲ್ಲಿರುತಾ | ಸತ್ಪುರುಷರೆನಿಸುತಾ | ಇರಲು ದಯವಂತಾ | ವೇಧಿಯು ಬಂತೆನುತಾ 10 ಅಂತರಂಗದಲಿ ತಿಳಿಯತಲಾಗ್ರಾಮ | ತ್ಯಜಿಸಿದೆ ನಿಸ್ಸೀಮಾ | ಧಾಮಾ ಮಾಡಿದೆ ನಿಷ್ಕಾಮಾ | ಬಟ್ಟರು ಬಹುಪ್ರೇಮಾ | ಗುರುಸಾರ್ವಭೌಮಾ 11 ಅಲ್ಲಿ ಮೂರು ಸಂವತ್ಸರ ಇರಲಾಗಿ | ಶರಣ್ಹಾಳಿಯು ಬಾಗಿ | ಇಲ್ಲಿ ನೀವು ದಯಮಾಡುವದೊಳಿತಾಗಿ | ಸರಿ ಬಾರದಾಗಿ | ಬಂದ್ಯೋ ಮಹಾತ್ಯಾಗಿ | ಬರಲು ವರಯೋಗಿ12 ಕರೆದೊಯ್ದರು ಸ್ತುತಿಸಿ | ಕರಣಿಕ ತನ್ನಯ ಸ್ಥಳದಲಿ ಗೃಹ ರಚಿಸಿ | ಕೊಡಲಂಗೀಕರಿಸಿ | ಹರುಷದಿ ವರಭಾಸ್ಕರ ಮುನಿಕರ ಸರಿಸಿ | ರುಹಜಾತನೆನಿಸಿ | ಇರುತಿರೆ ತೋರಿತು ಸಂತತಿ ಉದ್ಭವಿಸಿ | ಗುರುವಾಕ್ಯಫಲಿಸಿ 13 ಆರಿಂದಾಗದು ನೈರಾಶ್ಯಾಚಾರಾ | ನಡೆಸಿದೆ ಗಂಭೀರಾ | ಧಾರುಣಿ ಜನರಿಂದಧಿಕೃತ ಸಂಸಾರ | ಜಲ ಪದ್ಮಪ್ರಕಾರಾ | ಅನುದಿನ ವೈರಾಗ್ಯದಾಗರಾ | ಸಂಪತ್ತು ಅಪಾರಾ | ತಿಳಿದ್ಯೋ ಸುಕುಮಾರಾ 14 ಕೊಟ್ಟರ್ಹಿಡಿಯಲಿಲ್ಲ ಓರ್ವರ ಧನವು | ಪೂರ್ವದ ಸಂಗ್ರಹವು | ಸತಿಸುತ ಪರಿವಾರವು | ಭಕ್ತರ ಸಮುದಾಯವು | ಮೃಷ್ಟಾನ್ನ ಭೋಜನವು 15 ತುಕ್ಕವ್ವಳು ನಿಮ್ಮತ್ತಿಗೆ ಭಾವಿಕಳು | ಪ್ರೀತಿಯ ಶೇವಕಳು | ಫಕ್ಕನೆ ವಿನಯದಿ ಮೃದು ಮಾತಾಡಿದಳು | ಸತ್ಪುರುಷರಿಳೆಯೊಳು | ಅಕ್ಕರದಲಿ ದೋರುವರು ಶಿದ್ಧಿಗಳು ನೀವೇನಿಲ್ಲೆನಲು | ಆದೀತೆಂದೆನಲು16 ಸೊಸಿಯೊಳು | ತುಕ್ಕವ್ವ ತಿಳಿಸಲು | ಕೈಯ್ಯನೆಳೆಯಲು | ನೋಡುತ ಬೆರಗಾದಳು 17 ಲೋಕವನುದ್ಧರಿಸಲು ನೀನವತರಿಸಿ | ಜಡದೇಹವ ಧರಿಸಿ | ಕೊಟ್ಯೋ ಗುಣರಾಶಿ | ಕೊಂಡ್ಯೋ ಸುಖವಾಸಿ | ಬಹು ನರಕದ ವಾಸಿ 18 ಜಗದೊಳಗಿಹ ಶಿದ್ಧರ ಮುಕುಟದ ಮಣಿಯೇ | ಸಾಧಕರೊಳಗೆಣೆಯೆ | ದುರಿತಾಂಧ ದ್ಯುಮಣಿಯೆ | ಕುಹಕರಿಗೇನ್ಹೊಣೆಯೆ | ವರಸತ್ವದ ಗುಣಿಯೆ 19 ಕಾಲ ತಪ್ಪಿಸುವದೇನೈ ನಿಮಗರಿದೆ | ಮನದೊಳು ನೀನರಿದೆ | ತಾಳಿದ ದೇಹವ ಸಾಕೆನುತಲಿ ಜರಿದೆ | ಚಿದ್ರೂಪವ ಬೆರೆದೆ | ಬಹು ಭಕ್ತರ ಪೊರೆದೆ | ತಡಮಾಡಗೊಡದೆ20
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಧ್ಯಾಯ ಐದು ಲೋಕ ಮೋಹಕ: ಪಾತು ಮಾಧವ: ಧ್ವನಿ ರಾಗ:ಯರಕಲ ಕಾಂಬೋದಿ ಅಟತಾಳ ತಿರುಗಿ ವೇಂಕಟಗಿರಿ ಏರಲು ಪ ಪದ್ಮನಾಭನ ಸ್ಮರಿಸಿ ಬಿದ್ದಳು ಮೂರ್ಛಿತಳಾಗಿ ಸದ್ದು ಮಾಡಿದರಲ್ಲಿ ಇದ್ದ ಗೆಳತಿಯರೆಲ್ಲ ಮುದ್ದು ಮುಖದವಳೆ ನೀ ಎದ್ದು ಮಾತಾಡೆಂದರು ಪದ್ಮಿನಿಯು ತಾ ಕೇಳಿ ಎದ್ದು ನುಡಿಯದೆ ಇರಲು ಸಿದ್ಧಮಾಡಿ ಬೇಗೊಬ್ಬ ಬುದ್ಧಿವಂತೆಯ ಕಳುಹಿ ಗದ್ದಲಮಾಡದೆ ಅಂದಣವನು ತರಿಸಿ ಪದ್ಮ ಗಂಧಿಯ ಕೊಂಡು ಎದ್ದು ನಡೆದರು ಪುರಕೆ ಸುದ್ದಿ ಹರಡಿತು ಅಲ್ಲಿ ಗದ್ದಲಾಯಿತು ಬಹಳ 1 ಬಂದಳಲ್ಲಿಗೆ ತಾಯಿ ಅಂದಳೀಪರಿ ನೋಡಿ ಇಂದು ಎಲ್ಲಿಗೆ ಚಿಕ್ಕ ಕಂದಮ್ಮ ನೀ ಪೋಗಿದ್ದೆ ಇಂದು ಬಾಡಿಹುದೇಕೆ ಇಂದು ಮೈಯೊಳು ಜ್ವರ ಬಂದಿಹುದೇಕಮ್ಮಯ್ಯ ಮುಂದೆ ಮಾತಾಡದಿರಲು ತಂದೆ ಕೇಳಿದನಾಗ ಸುಂದರಿಯಳೆ ದಾರೇನಂದರಮ್ಮಯ್ಯ ನಿನಗೆ ಅಂದು ಅವರನು ಬಿಡದೆ ಕೊಂದು ಹಾಕುವೆ ಪೇಳು ಅಂದ ಮಾತಿಗೆ ತಾನು ಒಂದು ಮಾತಾಡಲೊಲ್ಲಳು 2 ತಿಳಿಯಲೊಲ್ಲದು ಎಂದು ಬಳಲಿ ಆಕಾಶರಾಜ ಕಳವಳಿಸುತ ಕರೆಕಳಿಸಿ ಬಲ್ಲವರನು ತಿಳಿಯಬಲ್ಲವರೆಲ್ಲ ತಿಳಿದು ಹೇಳಿರಿ ಎಂದ ಕೆಲವರೆಂದರು ಪಿತ್ತ ತಲೆಗೆ ಏರಿಹುದೆಂದು ಕೆಲವರೆಂದರು ಭೂತ ಬಲಿಯ ಚಲ್ಲಿರಿ ಎಂದು ಕೆಲವರೆಂದರು ಗ್ರಹಗಳ ಬಾಧೆ ಇರುವದು ಉಳಿದ ಮಂದಿಗೆ ಮತ್ತೆ ತಿಳಿಯಲಾಗದಾಯಿತು ಚಲುವನಂತಾದ್ರೀಶನ ಚಲುವಿಕೆಯನೆ ಕಂಡು 3 ವಚನ ಬಹುಶೋಕವನು ಮಾಡುತಲಿ ತಾ ಕರಿಸಿ ಕೇಳಿದನು ನಾಕೇಶಗುರು ಹೀಗೆ ತಾ ಕೇಳುತಲಿ ನುಡಿದ ಆಕಾಶನೃಪ ಚಿಂತೆಯಾಕೆ ಬ್ರಾಹ್ಮಣರ ಏಕಾದಶಾವರ್ತಿ ಏಕಚಿತ್ತದಲಿ 1 ಲೇಸಾಗಿ ತಿಳಿಯೆಂದು ಉರ್ವೀಶ ಭಕುತಿಯಂ ಆಸನಾದಿಗಳಿಂದ ಭೂಸುರರಿಗೆ ಅರ್ಪಿಸಿ ಸಂತೋಷವನು ಮಾಡಿರಿ ಎಂದು ಆಶು ಕಳುಹಿದನಗಸ್ತೇಶ್ವರನಾಲಯಕೆ 2 ಧ್ವನಿ ಕೇವಲ ಚಿಂತೆಯಿಂದಲೇ ದೇವಿಬಕುಲಾವತಿ ತಾನು1 ಪರಿವಾಣದಲ್ಲಿಟ್ಟುಕೊಂಡು ಇದ್ದಲ್ಲೆ ಗೋವಿನಂತೆ 2 ಆಲಯದಿ ಜಗತ್ಪಾಲಯ ಮಲಗಿದ್ದು ಕಂಡು ಬಾಲೆ ತಾಮಾತಾಡಿದಳು ಇಂದು 3 ಹೆಚ್ಚಿನ ವರಹ ಅಚ್ಯುತ ವಾಮನ ಏಳೊ 4 ಉದ್ಧರಿಸಿದಾತನೆ ಏಳೊ ಮುದ್ದು ಹಯವದನ ಏಳೋ 5 ಕೊಡದೆ ಸೃಷ್ಟಿಕರ್ತನು ಹರಿವಾಣ ಕೆಳಗಲ್ಲೆ ದಿಟ್ಟನಡೆದಳು ಬದಿಯಲಿ6 ಎನುತ ಮುಸುಕ ಕಂಡು ಅಂತ:ಕರಣದಿ ನುಡಿದಳು7 ಧ್ವನಿ ರಾಗ:ಕಾಪಿ ಅಟತಾಳ ಯಾಕೆ ಮಲಗಿದೆ ನೀ ಏಳೋ ಅಣ್ಣಯ್ಯಾ ವೇಂಕಟ ಯಾಕೆ ಮಲಗಿದೆ ಏಳೋ ಏನು ಚಿಂತೆಯು ಪೇಳೊ ಲೋಕ ಸಾಕುವ ದಯಾಳೋ ಅಣ್ಣಯ್ಯ ವೇಂಕಟಪ ಬಾಳ ಬಳಲಿದಿಯೊ ಹಸಿದು ಮಾತಾಡದಂಥ ಮೂಲ ಕಾರಣವೇನಿದು ಹಾಲುಸಕ್ಕರೆ ತುಪ್ಪಾಯಾಲಕ್ಕಿ ಪರಮಾನ್ನ ಬಾಲಯ್ಯ ನೀನು ಉಣಲೇಳೋ 1 ವಟದೊಳು ಹೆಬ್ಬುಲಿಯ ಕಂಡಂಜಿದಿಯೇನೊ ನೆಲೆಯು ತಿಳಿಯದು ನಿನ್ನ ಪ್ರಳಯ ಕಾಲಕ್ಕೆ ಆಲದೆಳೆಯೊಳು ಮಲಗಿದವನೋ2 ಹಗಲ್ಹೊತ್ತು ಮಲಗಿದ ದವನಲ್ಲೊ ಹೆತ್ತತಾಯಿ ಆಣೆ ಸತ್ಯವಾಣಿ ನೀಪೇಳೋ ಚಿತ್ತ ವ್ಯಾಕುಲವು ಯಾಕೆ3 ಕೊಂಬುವರೋಮುನ್ನ ಇಂದು ಮೋಹಿತನಾಗಿರುವಿ4 ಬಾಹುವದುಕಂಡು ಮರಳು ಮಾಡಿದಳೋ ನಿನ್ನ 5 ತಕ್ಕ ಉಪಾಯಾ ಅಕ್ಕರವಾಗುವದೆನಗೆ 6 ಎನ್ನ ಮುಂದೆ ನೀ ಸಂಶಯ ಬಿಡು ಚನ್ನಿಗನಂತಾದ್ರೀಶನೆ 7 ವಚನ ಕಣ್ಣೀರುವರಸುತಲೆದ್ದು ಕೀರವಾಣಿಯೇಕೇಳು ಘೋರು ದು:ಖವ ತನಗೆ ಆರಿಗುಸರಲಿ ನಾನು ಆರಿ ಹೇಳುವೆ ನಿನಗೆ ಸಾರಾಂಶ ಮಾತು 1 ನೀನೆ ಎನಗ್ಹಿರಿಯಣ್ಣ ನೀನೆಗಜರಾಜೇಂದ್ರ ವರಧ್ರುವರಾಯ ನೀನು ಸರ್ವವು ಅಭಿಮಾನ ರಕ್ಷಕಳು 2 ಎಂಬೋರನ್ಯಾರನು ನಾ ಎನ್ನ ಮನಸ್ಸಿನ ಅರಣ್ಯದೊಳು ರೂಪ ಲಾವಣ್ಯ ಮುಖವು ಹುಣ್ಣಿಮೆಯ ಚಂದ್ರ 3 ಕಣ್ಣಮೂಗಿಲೆ ಸಂಖ್ಯೆ ಜನ್ಮದಲಿ ಮಾಡಿದ್ದು ಅನ್ಯಾಯದಲಿ ಎನ್ನ ಪ್ರಾಣವನು ಬಿಟ್ಟಿತು ಉಳಿದೆ ಮುನ್ನವಳ ಹೊರತು ಮನ ಉಣ್ಣಲೊಲ್ಲದು ನಿದ್ರೆ ಕಣ್ಣಿಗಿನ್ನೆಲ್ಲಿ 4 ನೀನು ಎಂದದು ಮೋಹಿಸುವಂಥ ಜಾಣೆಯನು ಕಳೆದಂಥ ಮಾನಿನಿಯ ಇರಲುನಾನು ಬದುಕುವನಲ್ಲ ಖೂನ ಪೇಳುವೆನು 5 ಯಾನ ಬರುವದು ಹೆಚ್ಚು ಉಂಟು ಕ್ಷೋಣಿಯಲಿ ಕಟ್ಟಿ, ದಾನದೊಳು ಸಾಹಸ್ರದಾನ ಪಾತ್ರರಿಗೆ ತಿಳಿ ಒಂದು ಕಲ್ಯಾಣ ಕಟ್ಟಿದರೆ 6 ಧ್ವನಿ ರಾಗ:ಸಾರಂಗ ಭಿಲಂದಿತಾಳ ಬಕುಲಾದೇವಿ ತಾ ನುಡಿದಳು ಆ ಕಾಲಕ್ಕೆ ಹೀಗೆ ದೇವಾಧೀಶನೆ ನಿನ್ನ ಕೇವಲ ಮರುಳು ಈವತ್ತಿಗೆ ಮಾಡಿದಳು ಯಾವಕೆ ಅವಳು 1 ಪೂರ್ವಜನ್ಮದಲಾಕೆ ಯಾವಕೆ ಬಂದಿಹಳು ಆ ವಾರ್ತೆ ಪೇಳೊ 2 ಇಂಥ ಮಾತನು ಲಕ್ಷ್ಮಿಕಾಂತಾ ಚಿಂತಿಸಿ ನುಡಿದಾ 'ಶ್ರೀಮದನಂತಾದ್ರೀಶ’ 3 ವಚನ ತಾ ವನದರಲಿರುತಿರಲು ದೇವಿಯನು ಅಪಹರಿಸಿ ತಾ ಒಯ್ಯ ಬೇಕೆಂಬೋ ಭಾವದಲಿ ಬಂದಾ ಆ ವೇಳೆಯಲಿ ಅಗ್ನಿದೇವ ಪತ್ನಿಯಲ್ಲಿದ್ದ ಶ್ರೀ ವೇದವತಿಯನ್ನು ದೇವೇಂದ್ರನ ಸಹಿತ ಆವಾಹನ ಮಾಡಿ ತಾ ವಾಸಮಾಡಿದಳು ಕೈಲಾಸದಲ್ಲಿ1 ಮುಂದೆ ರಾಮನು
--------------
ಅನಂತಾದ್ರೀಶ - ಕಥನಕಾವ್ಯಗಳು
ಉಪದೇಶಾತ್ಮಕ ಪದಗಳು ನೀಚವೃತ್ತಿಯ ಬಿಟ್ಟು ಸೋಚಿತ ಕರ್ಮವನೇ ಯೋಚನೆ ಮಾಡುತಾ ಪ ನೀಚ ಜನರುನು ಯಾಚಿಸದೆ ಸವ್ಯ ಸಾಚಿಯ ಸಖನ ಭಜಿಸೋ ಪ್ರಾಣೀ ಸರಸ ಸಲ್ಲಾಪ ಶ್ರೀ ಹರಿಕಥಾ ಶ್ರವಣ ನೀ ಪರಮಭಕ್ತರ ಸಂಗವಾ ನಿರುತದಲಿ ನೀ ಮಾಡಿ ಹರುಷ ಮನವನು ತಾಳಿ ಚರಿಸೊ ಈ ಧರಣಿ ಮಂಡಲಾ ಅರಸಿಗಾದರು ಒಮ್ಮೆ ಶಿರಸುಬಾಗದಲೆ ಶ್ರೀ ಹರಿದಾಸರಾ ಚರಣಕೆ ಎರಗ್ಯವರ ಮನಿದ್ವಾರಪರಿಚರನು ಎಂದೆನಿಸಿ ಭರದಿಂದ ಬಾಳಿ ಬದಕೋ ಇದಕೋ 1 ಅಲ್ಪ ಆಶೆಯ ಮಾಡಿ ಅಲ್ಪ ಮಾನವನಾಗಿ ಕಲ್ಪನೀಯನು ಮಾಡದೆ ಸ್ವಲ್ಪ ಫಲದಲಿ ಮನಸು ಕಲ್ಪಿಸಿ ಪ್ರಿತಿದಿನವ ನಲ್ಪ ಜನರನು ನಿಂದಿಸೀ ಅಲ್ಪನಾರೇರು ಮಾಳ್ಪ ಒಲ್ಪಿಗೆ ಮರುಳಾಗಿ ಪಲ್ಕಿಸಿದು ಬಾಯ್ದೆರೆಯದೆ ಸ್ವಲ್ಪಗಾಲದಲಹಿತಲ್ಪ ಪದಪದುಮಗಳ ಕಿಂ - ಜಲ್ಕ ನೀನಾಸ್ವಾದಿಸೋ ಲೇಸೋ2 ಪೊಡವಿ ಮೊದಲಾದ ಈ ಮಡದಿ ಮಕ್ಕಳು ಗೇಹ ವಡವಿ ವಸನವ ಬಯಸದೆ ಪೊಡವಿಮಂಡಲದಿ ಬಹು ಬಡವ ನಾನೆನುತಲೀ ಪೊಡವಿ ಪಾಲರ ಸೇವೆಯಾ ಧೃಢಮನದಿ ನೀ ಮಾಡೆ ಕೊಡರೊಂದು ದುಗ್ಗಾಣಿ ಕಡುಮೂರ್S ಎಲೊ ಪಾಪಿಯೇ ಬಿಡದೆ ದೈನ್ಯದಿ ನೀನು ಜಡಜನಾಭನ ಪಾದ ಬಿಡದೆ ಸೇವಿಸಲು ಫಲವ ಕೂಡುವಾ 3 ನಾ ಮಾಡೋ ವ್ಯಾಪಾರ ನೀ ಮಾಡಿಸುವಿ ಎಂಬ ಈ ಮಹಾಙÁ್ಞನ ಮಾರ್ಗ ನೇಮವಾಗಿ ತಿಳಿದು ಗ್ರಾಮ ಗ್ರಾಮದಲ್ಲಿದ್ದ ಪಾಮರೋತ್ತಮ ಜನರಿಗೆ ಧಾಮನಾಗಿಹ ನಮ್ಮ ರಾಮದೇವನ ಪಾದ ತಾಮರಸ ಕೊಂಡಾಡುತಾ ಪ್ರೇಮ ಹರುಷಾಮರ್ಷ ಯಾಮಯಾಮಕೆ ಬರಲು ಕಾಮಿಪುದು ನಿನಗೆ ಸಲ್ಲಾ ಖುಲ್ಲಾ 4 ನಗುವ ಜನರಾ ಕಂಡು ನಗುವುದೇ ಲೇಸೆಂದು ಸಿಗದೆ ಜನರೊಳು ತಿರುಗುತಾ ಬಗೆ ಬಗೆಯ ಮಾತುಗಳ ಬೊಗಳುವಾ ಜನರಿಗೆ ಹಗಲಿರಳು ಹರಿ ಕಾಯಲೀ ನಿಗಮ ವಂದಿತನ ಪ್ರತಿ ಮೆಗಳು ಇವು ಎಂದು ತಿಳಿಯೇ ನಗುತ ಹರುಷವ ಕೊಡುವ ಸುಗುಣಪೂರಣ ಗುರು ಜಗನ್ನಾಥವಿಠಲರಾಯಾ ಮರೆಯಾ 5
--------------
ಗುರುಜಗನ್ನಾಥದಾಸರು
ಕಥನಾತ್ಮಕ ಅರಸಿಕೊಂಬೆ ಮನಸ್ಸಿಗೆ ಬಂದವಳ ಪ ಶ್ರೀ ರುಕ್ಮಿಣಿ ಸಂಗಡ ಕೇಳಿಯಲಿ ಶ್ರೀ ರಮಣ ಇರಲು | ಕೊಂಡು ಮಾತಾಡಿ ಬೇಡಿದ 1 ನಾರಿಯರು ನಿನಗೆ ಉಂಟಾಗ ಈರೈದು ಸಾವಿರ ಪರಾಕು 2 ಕೇಳೈ ಮಹ ತಪಸಿಯನ್ನೀಗ ವೇಳ್ಯ ಮೀರಗೊಡದೆ | ಸತಿ ವೇಗ ಪೋಗು ನೀ ಸಾಗು 3 ನಿಂದಿರದೆ ನಾರದಾ ಗೋಪಿಯವರ ಮಂದಿರವ ಸುತ್ತಿದಾ | ಒಂದೊಂದು ಮನೆಯಲಿ ಸೋಜಿಗ ಅತಿಶಯ | ಅಂದು ನಾರದಗೆ ತಾ ತೋರಿದ ಬಿರುದಾ 4 ಒಂದೆ ಮನೆಲಚ್ಯುತಾ ಅನಂತ ಒಂದು ಕಡೆ ಗೋವಿಂದ | ಪರಿಯಂತ ಏಕಾಂತ 5 ಚದುರಂಗ ನಗೆಕೂಟ ಒಂದು ಮನೆ | ಮಗುವು ಮುದ್ದಾಡಿ ಮಂಚದ ಮೇಲೆ ಮಡದಿಯಾ | ಬಿಗಿದಪ್ಪಿ ಸವಿನಾಡುವ ನೋಡಾ6 ಹೋಯಿದಾಟ ಒಂದು ಮನೆ | ಮನ್ಯರಾದ ಶುದ್ಧಿ ಮಕ್ಕಳ ಶೋಭನಾ | ಪಯಣಗತಿಯಲಿದ್ದ ವಾರ್ತಿ ಒಂದರ್ಥಿ7 ಕರುಗಳು ಒಂದು ಕಡೆ ಬಿಡುತ ತುರುಗಳ ಒಂದು ಮನೆ | ಕರಕೊಂಡು ಕುಡಿಯುತಾ | ಕುಸುಮವ ಮುಡಿಸುತ ನುಡಿಸುತಾ8 ಸ್ನಾನವು ಒಂದು ಕಡೆ ಸಂಧ್ಯಾನ ಮೌನವು ಒಂದು ಕಡೆ | ಧ್ಯಾನ ಜಪ ತಪ ವ್ಯಾಖ್ಯಾನ ಪುರಾಣ | ದಾನ ಧರ್ಮಗಳ ಕೊಡುವನು ನಡೆವನು 9 ಮಿಂದುಂಡು ಒಂದು ಮನೆ | ಅನಂತ ಇದ್ದಾ ಅನಿರುದ್ಧಾ10 ಬಂದು ಹರಿಯ | ಚರಣಕ್ಕೆ ಬಿದ್ದು | ಪರಬ್ರಹ್ಮ ನೀನಲ್ಲದಿಲ್ಲಾ ಇನ್ನಿಲ್ಲಾ 11
--------------
ವಿಜಯದಾಸ
ಕಥನಾತ್ಮಕ ಬಾಗಿಲಿಕ್ಕಿದ ಬಗಿಯೇನೆ | ಬೇಗ ಬ್ಯಾಗದಿಂದ ಪೇಳೆ ನೀನೆ | ನಾಗವೇಣಿಯೆನ್ನ ಕೂಡ ಜಾಗುಬ್ಯಾಡ ಬಾಗಿಲುತೆಗೆಯೆ ಪ (ಬಂದೆಯಾದರಿಂದಿನದಿನದಿ) | ಛಂದದಿಂದ ಪೇಳೊ ಮದದಿ ನಾಮವುಸಾರೊ ಮುದದಿ 1 ಅಚ್ಯುತಾನ ಇಚ್ಛೆಯಿಂದ | ಸ್ವೇಚ್ಛ ದೈತ್ಯರಾಳಿದೇನೆ ಮತ್ಸ್ಯರೂಪಗೈದುನಾನೆ | ಭೀಭತ್ಸು ರಾಯ ನಲ್ಲವೇನೆ 2 ಯೇಸು ಪೇಳಿದ್ರಿಗುಣವನ್ನು | ಈಸು ಮಂದಿಯೊಳು ನೀನು ಬೂಸುರಾಗೆ ಭಾಷೆಕೊಟ್ಟು | ಕೂಸೀನ ಕೊಡದಾವ ನೀನು 3 ಪಾರ್ವತಿಯ ಪತಿಯನೊಲಿಸಿ | ಪಾಶು ಪತಾಸ್ತ್ರವ ಗೆಲಿಸಿ ಪಾರ್ಥರಾಯನೆ ಪಾಂಚಾಲಿ 4 ಪಾರ್ಥರಾಯ ನೀನಾದರೇನು, ಕೀರ್ತಿಯೆಲ್ಲಾ ಬಲ್ಲೆನಾನು ಸ್ತೋತ್ರ ಮೂರುತಿ ತಂಗಿಗೀಗ | ತೀರ್ಥಯಾತ್ರೆಲಿ ಗೆಲಿಹೋಗೊ 5 ಫುಂಡತೊರೆವ ಗಂಡನಾನೆ | ಖಾಂಡವನ ದಹಿಸಿದೆನೆ ಗಂಡುಗಲಿ ವರಹನ ದಾಸಾ | ಗಾಂಡೀವರ್ಜುನ ನಲ್ಲವೇನೆ 6 ಧೀರ ನೀನಾದರೆ ಏನು ಭಾರಿ ಗುಣವೆಲ್ಲಾ ಬಲ್ಲೆನಾನು ಯತಿಯಾಗಿರು ಹೋಗೋ 7 ವಟುರೂಪನ್ನ ವಲಿಸಿದೆನೆ ಕಿರೀಟಿ ಅಲ್ಲವೆ ಕೃಷ್ಣಿನಾನೆ 8 ಕೋಟಿರಾಯಗೆ ಮೇಟಿ ನೀನು | ಮಾಟವಾದ ಮುಖದವನು | ಬೂಟಿತನದಿ ವಿರಾಟನಲ್ಲಿ | ಆಟವಾ ಕಲಿ ಸ್ಹೋಗೊ ನೀನು 9 ಘಾತುಕ ಕರ್ಮಗಳನ | ಖ್ಯಾತಿಯಿಂದ ಚೈಸಿದ್ದೇನೆ ಮಾತೆ ಅಳಿದಗೆ ದೂತನಾನು ಶ್ವೇತವಾಹನ ದ್ರೌಪದಿನಾ 10 ವಾಹನ ನೀನಾದರೇನು | ಖ್ಯಾತಿಯೆಲ್ಲ ಬಲ್ಲೆ ನಾನು ಜೂತದಲ್ಲಿ ಸೋತವ ನೀ | ಅಗ್ನಾತವಾಸದಲ್ಲಿರು ಹೋಗೋ 11 ವಿಪಿನಾವಾಸದಿಯುದ್ಧ | ವಿಪರೀತ ಮಾಡಿದೇನೇ ಶ್ರೀ ಪತಿ ಶ್ರೀ ರಾಮದೂತ, ಭೂಪ ವಿಜಯನಾ ವಿಮಲಾಂಗೀ 12 ಭಾಳ ಪೇಳಿದಿ ಗುಣವನ್ನು ಕೇಳಲಿಕೆ ಅಶಕ್ಯವಿನ್ನು ಭಾಳ ಹರುಷದಿಗೆಲಿ ಹೋಗೋ 13 ಮೀನು ಫಕ್ಕನೆ ಖಂಡಿಸಿದೆನೇ ಪತಿ ಶ್ಯಾಲ ನಾನು | ಹೆಚ್ಚಿನ ಸವ್ಯಸಾಚಿ ನಾನು 14 ದುಷ್ಟ ಕುರುಪಕಿಗೆ ಭಯವ ಬಿಟ್ಟು | ಶ್ರೇಷ್ಟ ಸ್ತ್ರೀ ವೇಷ ಬಿಟ್ಟು ಅಷ್ಟು ಜನರೊಳು ಗುಟ್ಟುತೋರದೆ | ಧಿಟ್ಟದ್ವಿಜನಾಗಿ ಹೋಗೊ 15 ಬೌದ್ದ ರೂಪಗೆ ಬಂಧು ನಾನು | ಪ್ರಸಿದ್ಧ ಕೃಷ್ಣ ನಾನಲ್ಲವೇನು 16 ಯುದ್ಧದಲ್ಲಿ ಪ್ರಸಿದ್ದನೆಂದು | ಸಿದ್ದಿಗಳನು ಹೇಳಿದಿಂದು ಮುದ್ದು ಬಬ್ರುವಾಹನನಲ್ಲಿ | ಬಿದ್ದ ಸುದ್ದಿಯ ಪೇಳೊ ಇಲ್ಲಿ 17 ಕಂಜ ಮುಖಿಕಲಿ ಭಂಜನಾನ ಮಾಯಾ ಕೇಳೆ ನಾರಾಯಣನಲ್ಲವೇನೆ 18 ವಜ್ರದಬಾಗಿಲು ತೆಗೆದು | ಅರ್ಜುನನಪ್ಪಿದಳ್ ಬಿಗಿದು ದೊಡೆಯಗೆ ಕೈಮುಗಿದು 19 ನಿರುತವೀ ಸಂವಾದ ಪಠಿಸಲು ಭರಿತವಾದ ಸುಖವೀವೊದು ವಿಠಲನ್ನ ನೆನೆಯೋದು 20
--------------
ಓರಬಾಯಿ ಲಕ್ಷ್ಮೀದೇವಮ್ಮ
ಗಣೇಶ ಪ್ರಾರ್ಥನೆ ವಂದಿಸುವೆ ನಾನಿಮ್ಮ ನನುದಿನ ವಂದಿಸುವೆ ಗಣನಾಥನೆ ವಂದೆ ಮಾನಸದಿಂದಲಿ ಪ ಭುಜಗಭೂಷಣ ಪಾರ್ವತೀಶನ ಪುತ್ರನೆನಿಸಿದ ದೇವನೆ ಆದಿಪೂಜೆಯ ಗೊಂಬನೆ 1 ಮೇಲ್ ಮಾಡಿದನೆ ಕೋಮಲಾಂಗನೇ 2 ಬೇಡುತಿಹ ಭಕ್ತರಿಗೆ ವಿದ್ಯಾವೃಷ್ಟಿಯನು ಕೊಡುತಿರುವನೆ ಪಾಲಿಸೆನಗೆ ಮತಿಯನು 3 ಅಂಗಭೇದ ವಿನೋದನಾದನೆ ಆರುಮುಖದವನಣ್ಣನೆ ಮಾನದಲಿ ಕಡೆ ಹಾಯಿಸು 4 ಗುಳಗಿ ಗಡುಬಿನಪ್ರಿಯನೆ ನಲಿಯುವವನೆ
--------------
ಹೆನ್ನೆರಂಗದಾಸರು
ಚಂದ್ರಶೇಖರ ಸುಮನಸೇಂದ್ರ ಪೂಜಿತ ಚರಣಾ ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯಾ ಪಾಲಿಸಮ ರೇಂದ್ರ ನಿನ್ನಡಿಗೆ ಶರಣೆಂಬೆ 1 327ನಂದಿವಾಹನ ವಿಮಲ ಮಂದಾಕಿನೀಧರನೆ ವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರ ಎನ್ನ ಮನ ಮಂದಿರದಿ ನೆಲೆಸಿ ಸುಖವೀಯೊ 2 328ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ ನ್ನತ್ತ ನೋಡಯ್ಯ ಶುಭಕಾಯ ಭಕ್ತರಪ ಮೃತ್ಯು ಪರಿಹರಿಸಿ ಸಲಹಯ್ಯ 3 329 ನೀಲಕಂಧರ ರುಂಡಮಾಲಿ ಮೃಗವರಪಾಣಿ ಶೈಲಜಾರಮಣ ಶಿವರೂಪಿ | ಶಿವರೂಪಿ ನಿನ್ನವರ ನಿತ್ಯ ಪರಮಾಪ್ತ 4 330ತ್ರಿಪುರಾರಿ ನಿತ್ಯವೆನ್ನಪರಾಧಗಳ ನೋಡಿ ಕುಪಿತನಾಗದಲೆ ಸಲಹಯ್ಯ | ಸಲಹಯ್ಯ ಬಿನ್ನೈಪೆ ಕೃಪಣವತ್ಸಲನೆ ಕೃಪೆಯಿಂದ 5 331ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ ಸಂಚಿತಾಗಾಮಿ ಪ್ರಾರಬ್ಧ | ಪ್ರಾರಬ್ಧ ದಾಟಸು ವಿ ರಿಂಚಿಸಂಭವನೆ ಕೃತಯೋಗ 6 332 ಮಾನುಷಾನ್ನವನುಂಡು ಜ್ಞಾನ ಶೂನ್ಯನು ಆದೆ ಅನುದಿನ | ಅನುದಿನದಿ ನಾ ನಿನ್ನ ಧೀನದವನಯ್ಯ ಪ್ರಮಥೇಶ 7 333 ಅಷ್ಟಮೂತ್ರ್ಯಾತ್ಮಕನೆ ವೃಷ್ಟಿವರ್ಯನ ಹೃದಯಾ ಧಿಷ್ಠಾನದಲ್ಲಿ ಇರದೋರು | ಇರದೋರು ನೀ ದಯಾ ದೃಷ್ಟಿಯಲಿ ನೋಡೊ ಮಹದೇವ 8 334 ಪಾರ್ವತಿರಮಣ ಶುಕ ದೂರ್ವಾಸ ರೂಪದಲ್ಲಿ ಉರ್ವಿಯೊಳಗುಳ್ಳ ಭಕುತರ | ಭಕುತರ ಸಲಹು ಸುರ ಸಾರ್ವಭೌಮತ್ವ ವೈದಿದೆ 9 335 ಭಾಗಿಥಿಧರನೆ ಭಾಗವತ ಜನರ ಹೃ ದ್ರೋಗ ಪರಿಹರಿಸಿ ನಿನ್ನಲ್ಲಿ | ನಿನ್ನಲ್ಲಿ ಭಕ್ತಿ ಚೆ ನ್ನಾಗಿ ಕೊಡು ಎನಗೆ ಮರೆಯಾದೆ 10 336 ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು ಬಡವ ನಿನ್ನಡಿಗೆ ಬಿನ್ನೈಪೆ | ಬಿನ್ನೈಪೆನೆನ್ನ ಮನ ದೃಢವಾಗಿ ಇರಲಿ ಹರಿಯಲ್ಲಿ 11 337 ವ್ಯೋಮ ಕೇಶನೆ ತ್ರಿಗುಣನಾಮ ದೇವೋತ್ತಮ ಉ ವಿರುಪಾಕ್ಷ ಮಮ ಗುರು ಸ್ವಾಮಿ ಎಮಗೆ ದಯವಾಗೊ 12 338 ಅಷ್ಟ ಪ್ರಕೃತಿಗನೆ ಸರ್ವೇಷ್ಟ ದಾಯಕನೆ ಪರ ಮೇಷ್ಟಿ ಸಂಭವನೆ ಪಂಮಾಪ್ತ | ಪರಮಾಪ್ತ ಎನ್ನದಯ ದೃಷ್ಟಿಯಿಂದ ನೋಡಿ ಸಲಹಯ್ಯ 13 339ಪಂಚಾಸ್ಯ ದೈತ್ಯಕುಲ ವಂಚಕನೆ ಭಾವಿ ವಿ ರಿಂಚಿ ಶೇಷನಲಿ ಜನಿಸಿದೆ | ಜನಿಸಿದೆ ಲೋಕತ್ರಯದಿ ಸಂಚಾರ ಮಾಳ್ಪೆ ಸಲಹಯ್ಯ 14 340 ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ ಸಂತೈಸಿ ಇಂದ್ರಿಯವ ನಿಗ್ರಹಿಪ ಶಕ್ತಿ ಕರುಣೀಸೊ 15 341 ಲೋಚನತ್ರಯ ನಿನ್ನ ಯಾಚಿಸುವೆ ಸಂತತವು ಗುಣರೂಪ ಕ್ರಿಯೆಗಳಾ ಲೋಚನೆಯ ಕೊಟ್ಟು ಸಲಹಯ್ಯ16 342ಮಾತಂಗ ಷಣ್ಮುಖರ ತಾತ ಸಂತತ ಜಗ ನ್ನಾಥ ವಿಠ್ಠಲನ ಮಹಿಮೆಯ | ಮಹಿಮೆಯನು ತಿಳಿಸು ಪ್ರೀತಿಯಿಂದಲೆಮಗೆ ಅಮರೇಶ 17 343 ಭೂತನಾಥನ ಗುಣ ಪ್ರಭಾತ ಕಾಲದಲೆದ್ದು ಪ್ರೀತಿಪೂರ್ವಕದಿ ಪಠಿಸುವ | ಪಠಿಸುವರ ಜಗ ನ್ನಾಥವಿಠಲನು ಸಲಹುವ 18
--------------
ಜಗನ್ನಾಥದಾಸರು
ನಾ ವಂದಿಸುವೆ ನಲಿದಾಡುವೇ ಪ ಪವಿತ್ರಳಾದೇ ನಿತ್ಯ ಪರಮಾತ್ಮನ ಕಂಡು ಕೃತಾರ್ಥಳಾದೇ 1 ವಜ್ರ ಮಂಟಪ ವೈಭವನೋಡಿದೆ ನೋಡಿ ಉಧೃತಳಾದೇ 2 ಸತ್ಯಧ್ಯಾನರು ಎತ್ತಿ ಮಾಡುವಂಥ | ಮಂಗಳಾರ್ತಿಯನೆ ಕಂಡೆನೇ ವಿಸ್ತರ ನೋಡಿದೆ3 ಕೊಂಡಾಡುವುದ ನಾ ಕೇಳಿದೆ ಹಿಂಡು ಪಡೆವುದ ನೋಡಿದೆ 4 ಮುಟ್ಟಿಪೂಜಿಸಿದ ಮೂರ್ತಿಯು ಮತ್ತೆ ಕುಬೇರನ ಅಳಕಾ ಪಟ್ಟಣವೇ ಪ್ರತ್ಯಕ್ಷ ಬಂದಿರುವುದಿಲ್ಲಿ 5 ಬೆಳ್ಳಿ ಭಂಗಾರದ ಮಿಳ್ಕೆ, ತಂಬಿಗಿ ಢಾಲಿಯನು ಕೈಯಲಿ ಜನರು ಕೊಂಡೊಯ್ವರು ಭಾಳಿರುವುದು 6 ಪ್ರತ್ಯಕ್ಷವೈಕುಂಠವೆನಿಪುದೂ ದಾಯಪಿಡಿವರೂ 10 ನೋಡಿ ಸಂತುಷ್ಟಳಾದೇ ಈ ಮಠದಲಿ 11 ಮತ್ಯಾರಿಗೀಡಿಲ್ಲನೋಡು ಸೃಷ್ಟಿವೊಳಗಿನವರಿಗೀಡಿಲ್ಲನೋಡು 12 ವಾದಿಮತದ್ವಾದಿನೀ ಸೋಲಿಸುವರು | ಮಾಯಮತಿಗಳ ಮಾಯಮಾಡುವರೂ ಪಾಠದಿಬೋಧಿಸುವರೂ 13 ಸುರಲೋಕ ಪೂಜ್ಯರಿವರೂ ಶಿರೋಮಣಿಯೆಂದು ಕರೆಸಿಕೊಳ್ಳುವರೂ 14
--------------
ಓರಬಾಯಿ ಲಕ್ಷ್ಮೀದೇವಮ್ಮ
ನಾನೊಂದು ಕನಸು ಕಂಡೆ ಕೇಳಕ್ಕಾ ಪ ನರರಂತೆ ಬಂದ ನಲ್ಲೆ ಕೇಳಕ್ಕಾ | ಪರಿಪರಿಲಿ ಬೋಧಿಸಿದನೇ ಕೇಳಕ್ಕಾ 1 ಅಯ್ಯ ನಂಘ್ರಿಗೆ ಸಿರಸನು | ನಾ ಚಾಚಿ | ಜೀಯ ಸಲಹೆನ್ನಯನಲು ಕೇಳಕ್ಕಾ ಕೈಯ ಬಿಡೆನೆಂದಿಗೆಂದು ಕೇಳಕ್ಕಾ 2 ಕನ್ನಡಿಯೊಳಡಗಿದಂತೆ ಕೇಳಕ್ಕಾ | ಲಿನ್ನು ಮನ ಬೆರಗಾಯಿತೆ ಕೇಳಕ್ಕಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು