ಒಟ್ಟು 458 ಕಡೆಗಳಲ್ಲಿ , 64 ದಾಸರು , 336 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ - ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ ಮುಂದೆ ಗತಿ ಏನಯ್ಯ ಮುಕುತರ ಹಿಂದುಳಿದವನಲ್ಲದಲೆ ತನು ಸಂ - ಬಂಧಿಗಳ ವಶನಾಗಿ ದುರ್ವಿಷ - ಯಾಂಧಕಾರದಿ ಮುಳುಗಿದೆನೊ ನಾ ಅ.ಪ. ಹಲವು ಜನ್ಮದ ನೋವಾ ನಾ ಹೇಳಿಕೊಳಲೇನೆಲವೊ ದೇವರ ದೇವಾ ನೀ - ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ ಸುಲಭರೊಳಗತಿ ಸುಲಭನೆಂಬುವ ಅಲವಬೋಧಮತಾನುಗರು ಎನ - ಗೊಲಿದು ಪೇಳಲು ಕೇಳಿ ನಿಶ್ಚಂ - ಚಲದಿ ನಿನ್ನನೆ ಧೇನಿಸುವೆ ನಾ ಕಲುಷ ಸಂಸ್ಕಾರಗಳ ವಶದಿಂ ಹೊಲಬುಗಾಣದೆ ಹರುಷಗುಂದುವೆ ಹೊಲೆ ಮನದ ಹರಿದಾಟ ತಪ್ಪಿಸಿ ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1 ಭಾರತೀಪತಿಪ್ರೀಯಾ ಎಂದೆಂದು ಭಕುತರ ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ - ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ ತಾರಕನು ನೀನೆಂದು ತಿಳಿಯದ ಕಾರಣದಿ ಸುಖ ದುಃಖಮಯ ಸಂ - ಸಾರ ದುಸ್ತರ ಶರಧಿಯೊಳು ನಾ ಪಾರಗಾಣದೆ ಪರಿದು ಪೋಪೆನೊ ದೂರನೋಳ್ಪದು ಧರ್ಮವಲ್ಲವೊ ದ್ವಾರಕಾಪುರನಿಲಯ ಪರಮೋ - ದಾರ ತನುವೆಂದೆನ್ನ ಪಾಲಿಗೆ ಬಾರದಲ್ಲದೆ ಭವವಿಮೋಚನ 2 ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ - ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ - ಸುಖಗುಣಾರ್ಣವ ಶ್ರೀದವಿಠಲಪ್ರಸೀದ ಸಕಲ ಕ್ರಿಯ ಯೋಗಗಳು ತನು ಬಂ- ಧಕವು ನಿನಗೊಪ್ಪಿಸದಿರಲು ಎನೆ ನಿಖಿಳ ಜೀವರ ಭಿನ್ನ ನಿನ್ನಯ ಯುಕುತಿಗೆ ನಮೊ ಎಂಬೆನಲ್ಲದೆ ಯುಕುತ ಯುಕ್ತಿಗಳೊಂದರಿಯದ - ರ್ಭಕನ ಬಿನ್ನಪ ಸಲಿಸಿ ನವವಿಧ ಭಕುತಿ ಭಾಗ್ಯವ ಕೊಟ್ಟು ತವ ಸೇ - ವಕರ ಸೇವಕನೆನಿಸದಿರ್ದೊಡೆ 3
--------------
ಶ್ರೀದವಿಠಲರು
ಎಲ್ಲವು ನಿನ್ನಾಧೀನ | ನಾ ಬಲ್ಲೆನೆಂಬುದಜ್ಞಾನ ಪ ವಿಧಿ ಪರಿಯಂತವು ನೀ- ನಿಲ್ಲದೆ ಕದಲದು ನಿಜವಿದು ನಿಜವಿದು ಅ.ಪ ಸುಖವನಪೇಕ್ಷಿಸುತಿಹರು | ದು- ಸಖ ನೀನೆನ್ನದೆ ದಾರಾ ಪುತ್ರಾ- ದ್ಯಖಿಳ ಸಂಪದವ ಬಯಸಿ ಕೆಡುವರು 1 ಹಣ ಸಂಪಾದಿಸುವದಕು | ಸ- ದ್ಗುಣ ವಂತನೆನಿಸುವದಕೂ ಹೆಣಕೆ ಸಮಾನನು ಇವನೆಂಬುವದಕೂ | ಹಿರಿಯ- ನೆನಿಸಿ ಪೂಜಿಸಿ ಕೊಂಬುವುದಕೂ 2 ನೀನೊಲಿದರೆ ವಿಷವಮೃತ | ಬರಿ- ಜ್ಞಾನಿಗಳರಿಯುವರೀ ನಾನಾ ಬಗೆ 3 ಜ್ಞಾನ ಭಕ್ತಿಯು ವಿರಾಗ | ವೆಂ- ಬೀನಿದಾನವೇ ಯೋಗ ಆನಂದ ಪಡುವುದೇ ಬಲು ತ್ಯಾಗ 4 ಕ್ಷೇಮದಿಂದಲಿರುವದಕೂ | ನಿ- ರ್ನಾಮವೈದಿ ಕೆಡುವುದಕೂ ಪಾಮರ ಜೀವರು ತಾವರಿಯರು ಗುರು ರಾಮ ವಿಠಲ ನೀನಾ ಮಮತೆ ಕೊಡದಿರೆ 5
--------------
ಗುರುರಾಮವಿಠಲ
ಎಲ್ಲಾ ಶಾಸ್ತ್ರದ ಸಾರದ ತಿಳಲ್ಮನ ದಲ್ಲಿ ಹರಿಯನು ಕಾಂಬುದಕೆ ಪ. ಮನದಲಿ ಹರಿಯನು ಕಾಂಬುವ ಸೊಬಗು ಬಲ್ಲಿದ ವೈಕುಂಠಕೋಡ್ವದಕೆ ಅ. ವಿಧಿನೀಷೇಧಗಳಾಚರಿಸುವುದು ವಿಧ ವಿಧ ಜೀವರ ಸಾಧನಕೆ ವಿಧ ವಿಧ ಸಾಧನ ನಂತರ ತಿಳಿವುದು ವಿಧಿ ಜನಕನ ಪದಪಿಡಿವುದಕೆ 1 ಸ್ನಾನಜಪಾಹ್ನೀಕಗಳೆಲ್ಲವು ತನ್ನ ಧ್ಯಾನಕೆ ಶ್ರೀಹರಿ ನಿಲ್ವುದಕೆ ಧ್ಯಾನಕೆ ಶ್ರೀಹರಿ ನಿಂತ ಮೇಲೆ ಸು ಜ್ಞಾನದಿಂದ ತನ್ನರಿವುದಕೆ 2 ನೆಲೆ ಇಲ್ಲದ ಕರ್ಮಾಳಿಗಳ್ ದೇಹದ ಮಲಿನ ತೊಳೆದು ಶುದ್ಧಿಗೈವುದಕೆ ಮಲಿನ ತೊಳೆದು ಮನಶುದ್ಧದಿ ಹೃದಯದಿ ಇಳೆಯರಸನ ನೆಲೆ ಅರಿವುದಕೆ 3 ಅಗ್ನಿ ಹೋತ್ರಯಜ್ಞಾದಿ ಕಾರ್ಯಗಳ್ ಶೀಘ್ರದಿ ಹರಿಯನು ಕಾಂಬುದಕೆ ಶೀಘ್ರದಿ ಹರಿಯನು ಕಂಡ ಮ್ಯಾಲೆ ಇವು ಅಗ್ರಜವಲ್ಲೆಂದರಿವುದಕೆ 4 ರಂಗನ ಮೂರ್ತಿಯನಿಟ್ಟು ಪೂಜಿಸುವುದು ಅಂಗÀದಲ್ಲಿ ತಾನು ಕಾಂಬುದಕೆ ಅಂಗದಲ್ಲಿ ತಾನು ಕಂಡ ಮೇಲೆ ಇವು ಅಂಗಡಿ ಎಂತೆಂದರಿವುದಕೆ 5 ನಿತ್ಯ ನೈಮಿತ್ತಿಕ ಕರ್ಮಗಳೆಲ್ಲವು ಚಿತ್ತದಿ ಹರಿಯನು ತೋರ್ಪುದಕೆ ಚಿತ್ತದಿ ಹರಿಯನು ಕಂಡ ಮೇಲೆ ಇವು ಮತ್ರ್ಯರಿಗೆಸಗಿ ಮೌನಾಗ್ವುದಕೆ 6 ಚಾಂದ್ರಾಯಣ ವ್ರತ ಉಪವಾಸಗಳು ಇಂದ್ರಿಯ ನಿಗ್ರಹ ಮಾಡ್ವದಕೆ ಇಂದ್ರಿಯ ಚಲಿಸದೆ ಮನ ಧೃಡವಾಗಲು ಹಿಂದಿನ ಹಂಬಲ ತ್ಯಜಿಪುದಕೆ 7 ಮಧ್ವಶಾಸ್ತ್ರದ ಸಾರತತ್ವ ಮನ ಶುದ್ಧಿಯಗೈಸುತ ಸುಖಿಪುದಕೆ ಶುದ್ಧರಾದ ಶ್ರೀ ಗುರು ಕರುಣವು ಅನಿ- ರುದ್ಧನ ಹೃದಯದಿ ತೋರ್ವದಕೆ 8 ನೇಮದಿ ದ್ವಾದಶ ನಾಮಧಾರಣೆ ಹರಿ ನಾಮದ ದೇಹ ಬೆಳಗ್ವದಕೆ ಕಾಮಕ್ರೋಧವ ಬಿಡುವುದು ವಳಗಿನ ಶ್ರೀ ಮನೋಹರನನು ಕಾಂಬುದಕೆ 9 ಹೊರಗಿನ ವಸ್ತು ದೃಷ್ಟಿಸುವುದು ಶ್ರೀ ಹರಿ ವರ ವಿಶ್ವರೂಪವ ತಿಳಿವುದಕೆ ವರ ವಿಶ್ವರೂಪಧ್ಯಾನದಿಂದ ತನ್ನ ವರ ಬಿಂಬನ ಕಂಡು ನಲಿವುದಕೆ 10 ಅರಗಣ್ಣ ಮುಚ್ಚುವ ಅಭ್ಯಾಸಗಳೆಲ್ಲ ಸ್ಥಿರಮನವಾಗುವ ಕಾರಣಕೆ ಸ್ಥಿರಮನ ಶ್ರೀ ಹರಿ ದಯ ಮಾಡಲು ನೇತ್ರ ತೆರೆಯದೆ ಬಿಂಬನ ಕಾಂಬುದಕೆ 11 ಶಾಸ್ತ್ರದಿ ಪೇಳುವ ಧ್ಯಾನ ಪ್ರಕರಣವು ಶ್ರೋತ್ರದಿ ಕೇಳುತ ತಿಳಿವುದಕೆ ಗಾತ್ರದಿ ಶ್ರೀ ಗುರು ಕೃಪೆ ಮಾಡಲು ವಳ ನೇತ್ರದಿ ಸರ್ವವು ಕಾಂಬುದಕೆ 12 ಪಕ್ಷಮಾಸ ವ್ರತ ಪಾರಾಯಣ ಅಪ- ರೋಕ್ಷ ಪುಟ್ಟಲು ದಾರಿ ತೋರ್ವದಕೆ ಶಿಕ್ಷ ರಕ್ಷಕರಾದ ಗುರುಕರುಣವು ಅಪ- ರೋಕ್ಷ ಪುಟ್ಟಿಸಿ ನಿಜವರಿವುದಕೆ13 ಪರಿ ಜನರನು ಸೇವಿಸುವುದು ತನ್ನ ಪರಮಾರ್ಥತೆ ದೂರಾಗ್ವದಕೆ ಗುರುಚರಣವ ಸೇವಿಸುವುದು ಶ್ರೀ ಹರಿ ಅರಘಳಿಗಗಲದೆ ಪೊರೆವುದಕೆ 14 ಡಾಂಭಿಕ ಸಾಧನವೆಲ್ಲವು ಶ್ರೀ ಹರಿ ಡಿಂಬದೊಳಗೆ ಮರೆಯಾಗ್ವದಕೆ ನಂಬಿ ಶ್ರೀ ಹರಿ ಗುರು ಚರಣವ ಪೊಗಳ್ಪದು ಡಿಂಬದೊಳಗೆ ಹರಿ ಕಾಂಬುದಕೆ15 ಕರ್ಮ ವೈರಾಗ್ಯಗಳೆಲ್ಲವು ಪುಟ್ಟಿಸಲೂ ಭಕ್ತಿ ಜ್ಞಾನಕ್ಕೆ ಪುಟ್ಟಲು ಭಕ್ತಿ ಜ್ಞಾನ ಪಾಂಡುರಂಗ ವಿಠ್ಠಲನೊಬ್ಬನ ಪಿಡಿವುದಕೆ 16 ಯಾತ್ರೆ ತೀರ್ಥ ಚರಿಪುದು ಶ್ರೀ ಹರಿ ತನ್ನ ಗಾತ್ರದಲ್ಲಿರುವನೆಂದರಿವುದಕೆ ಗಾತ್ರವೆ ಕ್ಷೇತ್ರವೆಂದರಿತ ಮೇಲೆ ಸ ರ್ವತ್ರದಿ ವಿಠಲನ ಕಾಂಬುದಕೆ17 ಎಂತೆಂತೋ ಮಾರ್ಗಗಳರಸುವುದು ಚಿಂತನೆಗೆ ಹರಿ ನಿಲ್ವುದಕೆ ಚಿಂತನೆಗೆ ಹರಿ ನಿಂತ ಮೇಲೆ ತಾನು ಶಾಂತನಾಗಿ ಜಡನಾಗ್ವದಕೆ 18 ಹೊರಗಿನ ಸಂಸ್ಕಾರಗಳೆಲ್ಲವು ತನ್ನ ವಳಗಿನ ಸಂಸ್ಕಾರ ತೆರೆವುದಕೆ ವಳಗಿನ ಸಂಸ್ಕಾರ ತೆರೆದಮ್ಯಾಲೆ ತನ್ನ ಇರವರಿತು ಸುಖ ಸುರಿವುದಕೆ19 ಸಾಸಿರ ಜನ್ಮದ ಸಾಧನಗಳು ಹರಿ ದಾಸನಾಗಿ ತಾನು ಮೆರೆವುದಕೆ ದಾಸನಾದ ಮೇಲೆ ಕ್ಲೇಶಕೆ ಸಿಲುಕದೆ ಶ್ರೀಶನ ಹೃದಯದಿ ಕಾಂಬುದಕೆ 20 ಸಾರತತ್ವವನು ಅರಿವುದು ಗುರು ಮಧ್ವ- ಚಾರ್ಯರ ಮಾರ್ಗವ ಪಿಡಿವುದಕೆ ಪ್ರೇರಕ ಗೋಪಾಲಕೃಷ್ಣವಿಠಲ ಮನ ಸೇರಲು ಕಂಡು ತಾ ನಲಿವುದಕೆ 21
--------------
ಅಂಬಾಬಾಯಿ
ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ ಪ ಕುಸುಮನಾಭನ ಕೂಡೆನೆಂಬೋ ಭರದಿಂದಬಿಸಿ ಹಾಲನೆ ಹೊತ್ತಳು ಅ ಮಾನಿನಿ ರನ್ನೆಕೇಳೀದ್ದು ಕೊಡುವೆನೆಂದ 1 ಕಮ್ಮನೆ ಕಾದಿಹ ಎಮ್ಮೆಯ ಹಾಲಿಗೆಒಮ್ಮನ ಹೊನ್ನೆಂದಳುಬೆಣ್ಣೆಗಳ್ಳ ಕೃಷ್ಣ ಕಣ್ಣು ಸನ್ನೆಯ ಮಾಡಿನಿನ್ನ ಮೋಹಿಪೆನೆನ್ನಲು 2 ಕೆಟ್ಟೆ ಕೆಟ್ಟೆನೊ ಕೃಷ್ಣ ಇತ್ತಲೇತಕೆ ಬಂದೆಅತ್ತೆ ಮಾವಂದಿರುಂಟುಥಟ್ಟನೆ ಕಂಡರೆ ಬಿಟ್ಟು ಬಿಡರು ನಿನ್ನಮುಟ್ಟದಿರೆಂದಳಾಕೆ3 ಎಂದ ಮಾತಿಗೆ ನಾನಂಜುವನಲ್ಲವೆಇಂದಿನ ದಿನದೊಳಗೆಮಂದಿರದೊಳಗಿದ್ದು ಮರುದಿನ ಪೋಗೆಂದುಮುಂಗೈಯ ಪಿಡಿದುಕೊಂಡ4 ಗಂಡನುಳ್ಳವಳ ಮುಂಗೈಯ ಪಿಡಿವಂಥಪುಂಡುತನವು ಸರಿಯೆಪುಂಡರೀಕಾಕ್ಷಿ ಕೇಳ್ ದುಂಡುಮಲ್ಲಿಗೆ ಹುವ್ವಕಂಡರೆ ಬಿಡುವರೇನೆ 5 ಬಾಳುವ ಹೆಣ್ಣಿನ ತೋಳನೆ ಪಿಡಿವುದುನ್ಯಾಯವೇನೋ ನಿನಗೆಫುಲ್ಲನಯನೆ ಕೇಳೆ ಆಯ್ದ ಮಲ್ಲಿಗೆ ಹುವ್ವಬಲ್ಲವರು ಬಿಡುವರೇನೆ6 ಬೈಗಾಯಿತು ಬೈದಾರು ಮನೆಯಲ್ಲಿಬಿಡು ಬಿಡು ಎಲೊ ಗೋವಳಐಗಾರ ನಾ ಕಾಣೆ ಜಗದಲ್ಲಿ ಜೀವರಹಿಡಿದು ಬಿಡುವನಲ್ಲವೆ 7 ಸಕ್ಕರೆ ಚಿಲಿಪಾಲು ಅರ್ಥಿ ಆಯಿತೆಂದುಎತ್ತಿಕೊಂಡು ಕುಡಿದಅಕ್ಕರೆಯಿಂದಲಿ ಬೇಡು ನೀ ಕೇಳಿದವಸ್ತುವ ಕೊಡುವೆನೆಂದ8 ವಸ್ತುವೇತಕೆ ಪರವಸ್ತುವೆ ನಾ ನಿನ್ನಮೆಚ್ಚಿ ಬಂದೇನೆಂದಳುಭಕ್ತರ ಸಿರಿಕೃಷ್ಣ ಕುಕ್ಷಿಯೊಳಗೆ ಇಟ್ಟುರಕ್ಷಿಸು ಎಂದಳಾಕೆ 9
--------------
ವ್ಯಾಸರಾಯರು
ಏಕನಾದ ಹರಿಗುರುಗಳ ಬಿಟ್ಟು ನರಸ್ತುತಿಗಳನು ಮಾಡಬಾರ್ದು ಪ ಸಿರಿವುರಿಯಲಿ ಸಿಕ್ಕಿ ನರಹರಿ ಚರಣವ ಬಿಡಬಾರ್ದು ಅ.ಪ. ಒಂಟಿಲಿ ಸತಿಯನು ಪತಿವ್ರತೆ ಎನ್ನುತ ಬಿಡಬಾರ್ದು ನೆಂಟೆಗೆ ಮಿತ್ರಗೆ ಸೂಳೆಗೆ ಸಾಲವ ಕೊಡಬಾರ್ದು ತುಂಟರ ಕುಡುಕರ ಜಾರರ ನೆರೆಹೊರೆ ಇರಬಾರ್ದು ಒಂಟಿಯ ಊಟವ ಪಯಣವ ಕಲಹವ ಬೆಳೆಸಬಾರ್ದು 1 ಮಾವನ ಮನೆಯಲಿ ದುಡಿಯದ ಅಳಿಯನು ನಿಲ್ಲಬಾರ್ದು ಕೋವಿದರಡಿಗಳ ಸುಜನರ ಸಂಗವ ಬಿಡಬಾರ್ದು ಜೀವರು ಹರಿ ಸಮ ಮಾಯವೆ ಜಗಸರಿ ಎನಬಾರ್ದು ದೇವನ ದೂಡುತ ವಿಷಯವ ಹರಿಸುತ ಕೆಡಬಾರ್ದು 2 ಮನೆಕದ ಮುಂದಿಲಿ ಪತಿವ್ರತೆ ತಾನು ನಿಲಬಾರ್ದು ತನುವನು ತೋರುತ ಸೆರೆಗನು ಬೀರುತ ನಡಿ ಬಾರ್ದು ವನಿತೆಯ ಸಂಗಡ ಗುಟ್ಟಿನ ವಿಷಯವ ನುಡಿಬಾರ್ದು ಮಣಿಯದೆಲೆಂದಿಗು ಹಿರಿಯರ ಚರಣಕೆ ನಡಿಬಾರ್ದು3 ನುಡಿಯುವ ತೆರೆದಲಿ ನಡೆಯದ ಮನುಜನ ನಂಬಬಾರ್ದು ತಡೆಯದೆ ಕೋಪವ ದುಡುಕುವ ನೆಡೆಯಲಿ ನಿಲ್ಲಬಾರ್ದು ಬೆಡಗನು ತೋರುವ ನಾರಿಯ ಕಡೆಯಲಿ ನೋಡಬಾರ್ದು ದುಡುಕುತ ಲೊಡನೆಯೆ ಯಾವುದು ನಿಶ್ಚಯ ಮಾಡಬಾರ್ದು 4 ಕೆಟ್ಟರೆ ನೆಂಟರನೆಂದಿಗು ಮಾನಿಯು ಸೇರಬಾರ್ದು ಕಷ್ಟವು ಬಂದೆಡೆ ಧೈರ್ಯವನೆಂದಿಗು ಬಿಡಬಾರ್ದು ಗುಟ್ಟಿನ ಮಂತ್ರವು ಘಟ್ಟಿಲಿ ಜಪಿಸುತ ಕೂಗಬಾರ್ದು ಶಿಷ್ಯರಿಗಲ್ಲದೆ ದುಷ್ಟಗೆ ಶಾಸ್ತ್ರವ ನುಡಿಬಾರ್ದು 5 ತಿಂಡಿಯ ಚಪಲವ ನರಹರಿ ತೊಂಡನು ಮಾಡಬಾರ್ದು ಹೆಂಡರ ಭಜಕನ ಜಾರನ ನುಡಿಗಳ ನಂಬಬಾರ್ದು ಸತಿ ಸಹ ಸರಸವ ಮಾಡಬಾರ್ದು ಮಂಡೆಲಿ ಚರಣದಿ ಬರಿತೆರ ವೆಂದಿಗು ಹೋಗಬಾರ್ದು 6 ಹುಡುಗರ ಶಾಲೆಗೆ ಕಲಿಯಲು ಹುಡುಗಿಯ ಕಳಿಸಬಾರ್ದು ಮಡದಿಗೆ ಭಂಟಗೆ ಒಡನೆಯೆ ಸದರವ ನೀಡಬಾರ್ದು ಹುಡುಗಿಯ ಕಾಣದ ಜನರಿಗೆ ದೇಶಕೆ ಕೊಡಬಾರ್ದು ನಡೆನುಡಿ ನೋಟ ವಿಶೇಷದಿ ನೇಮವನಿಡದಲೆ ಇರಬಾರ್ದು 7 ಯಾಚಕ ಸವಿನುಡಿ ವಿನಯ ವಿವೇಕವ ಮರಿಬಾರ್ದು ಯೋಚನೆ ಗೈಯದೆ ನೆರೆಹೊರೆ ಹಗೆತನ ಗಳಿಸಬಾರ್ದು ಒಗೆತನ ಹುಳುಕನು ಹಾಕಬಾರ್ದು ಮೋಚಕ ನಿಜ ಸಖ ಹರಿತಾನೆಂಬುದ ಮರಿಬಾರ್ದು 8 ದೊಡ್ಡವರೆಡೆಯಲಿ ಹುಡುಗರು ಸರಸವ ಮಾಡಬಾರ್ದು ದುಡ್ಡಿನ ಜನಗಳನೆದುರಿಸಿ ಬಡವನು ನಿಲ್ಲಬಾರ್ದು ಸಡ್ಡೆಯ ಮಾಡದೆ ಅಡ್ಡಿಗಳೆಲ್ಲವ ಸರ್ವರಿಂ ದೊಡ್ಡವ ಶ್ರೀ ಕೃಷ್ಣವಿಠಲನ ಭಜನೆಯ ಬಿಡಬಾರ್ದು 9
--------------
ಕೃಷ್ಣವಿಠಲದಾಸರು
ಏಕಮೇವಾ | ಅದ್ವಿತೀಯನೆ ಪಾಹಿ | ಏಕಮೇವ ಪ ಏಕಮೇವ ತ್ರೈಲೋಕ ಜನಕ ಕರುಣಾಕರ ಹರಿಯೇ ಅ.ಪ. ಮಾನ್ಯ ಮಾನದ | ನಾನ್ಯಪ ಹರಿ ಸತ್‍ಶೂನ್ಯಾಭಿಧ ಸರಿ | ವಾಣ್ಯಾದಿಯ ಹರ 1 ಭವ ಸುರ | ಕರಣಶಕ್ತಿ ಹರ 2 ಉದರದೊಳಗೆ ಜಗ | ಹುದುಗಿಸಿ ಸರ್ವವಅದುಭುತ ತಮದಲಿ | ವಿಧಿಸಿದ ಹರಿಯೇ 3 ಪ್ರಲಯೋದಧಿ ಶಯ | ಚೆಲುವ ಬಾಲ ಬಲ್‍ಒಲವಿನಿಂದ ಪದ ಬೆ | ರಳನೆ ಸವಿದಾ 4 ಸೃಷ್ಟಿಗೊಡೆಯ ಲಯ | ಅಷ್ಟ ಭಾಗವಿರೆಚೇಷ್ಟಿಸಿ ದುರ್ಗೆಯ | ಹೃಷ್ಟಳ ಮಾಡಿದೆ 5 ಕರ್ಮ ತವಕೃತ್ಯವನಂತವು | ಭೃತ್ಯರ ಸುದತರು 6 ಕಮಲಾರಮಣನೆ | ಕಮಲಜಾದಿ ನುತನಿಮಿಷೋನ್ಮಿಕರ | ಸುಮನಸಕಪ್ಪುದೆ 7 ದುರ್ಗೆ ತುತಿಸೆ | ಕರ್ಗತ್ಲೆ ಕುಡಿದು ನಿಜಸರ್ಗಕೆಣಿಸಿದೇ | ದುರ್ಗಮ ಮಹಿಮ 8 ಮುಕ್ತರೊಡನೆ ಸೇ | ವ್ರ್ಯಕ್ತಿಗಳಲಿ ಅಭಿವ್ಯಕ್ತನು ಲೀಲಾ | ಸಕ್ತ ಸುಪುರುಷಾ 9 ಗೂಹಿಸಿ ಸರ್ವವ | ವ್ಯೂಹ ಚತುರಕೆಮೋಹಿಸಿ ಪುಮಜನ | ಬಾಹಿರ ತೆಗೆದ 10 ಪತಿ ತಾ ಸರ | ಸ್ವತಿ ಭಾರತಿ ಎಂಬಸುತೆಯರ ಪಡೆದು | ಸುತರೊಡನೈರಸಿದ12 ಪುಮಜಗೆ ಪ್ರಕೃತಿಯಿಂ | ಸುಮನಸ ಶೇಷನುಕ್ರಮದಿ ಸೂತ್ರನಿಂ ಜ | ನುಮವು ಕಾಲಿಗೆ 13 ಎರಡು ಒಂದು ತನು | ಹರನಿಗೆ ಬಂದವುಸರಸಿಜ ಸಂಭವ | ಮರುತೋರಗದಿಂ14 ಪತಿ ಸೇವೆಗೆ 15 ವಿಧ ವಿಧ ಜೀವರು | ಉದುಭವವಾದರುವಿಧಿ ಪಿತ ಮಹಿಮೆಯ | ಅದು ಭುತ ಕೇಳೀ 16 ಮುದದಿ ಇಟ್ಟ ತನ್ | ಉದರದೊಳೆಲ್ಲರಅದುಭುತ ಚರಿತ ಅನಿ | ರುದ್ಧ ಮೂರುತಿ 17 ಗುಣೋಪಾದಾನದಿ | ತನು ಸೂಕ್ಷ್ಮಗಳನುಅನಿರುದ್ಧನು ನಿ | ರ್ಮಾಣವ ಮಾಡಿದ 18 ಪರಿ ಬಹು ಲಿಂ | ಗೋಪ ಚಯಿವಗೈದಾಪರ ಬೊಮ್ಮನು | ಸ್ಥಾಪಿಸಿದನು ಜಗ 19 ಪದುಮ ಕಲ್ಪ ಮುನ್ | ಉದುಭವಿಸಿತು ಮತ್‍ತದನನು ಸಿತವರ | ಹದ ಕಲ್ಪೋದಯ 20 ಸರಸಿಜ ಭವನಿಂ | ವಿರಚಿಸಿದನು ಜಗವೈಡೇಳ್ಭುವನವು | ಭರಿತವು ಜೀವರಿಂ 21 ಈ ವಿಚಿತ್ರ ಸ | ರ್ಗಾವವ ತಿಳಿಯಲುಸೇವಿಸುವುದು ಸತ್ | ಕೋವಿದ ಜನಪದ 22 ಪಾವಮಾನಿ ನಿಜ | ಭಾವಕೆ ಸರಿಯಾಹಸೇವೆಗೊಲಿದ ಗುರು | ಗೋವಿಂದ ವಿಠ್ಠಲ 23
--------------
ಗುರುಗೋವಿಂದವಿಠಲರು
ಏನು ಕಾರಣವೆಮ್ಮ ದೂರಕೆ ನೀನು ನೂಕಿದನೆನಿಸಿದೆಹಾನಿ ವೃದ್ಧಿಗಳನ್ನು ಕಾಣಿಸಿ ದೀನಧೀರರ ಮಾಡಿದೆ ಪಎಲ್ಲರೊಳು ನೀ ಪೂರ್ಣ'ರುತಿಲ್ಲವೆಮ್ಮೆಡೆಯೊಳಗೆನುವ ಭ್ರಮೆಯಲ್ಲಿ ಬಂದುದು ಎಮಗೆ ಠಾ'ನ್ನೆಲ್ಲಿ ನಿನ್ನನಗಲುವರೆಉಳ್ಳವನೆ ನಿನಗಿಂತು ಬರುತಿರುವಲ್ಲಿ ನ'್ಮುರವನ್ನು ಪೇಳ್ವದುಜಳ್ಳು ನೀನಿದಿರಿಟ್ಟು ತೊಲಗಿದೆಯಲ್ಲ ಶ್ರೀಗುರುವರ್ಯನೆ 1ಹಲವು ಪರಿಯಲಿ ಚಿತ್ತಪಾಕವ ತಿಳಿದು ಶ್ರುತಿತಾ ಸಾರಿದರ್ಥವುಹೊಳೆಯದೊಂದೊಂದರ್ಥದಲಿ ಮನತೊಳಲಿ ಮಾರ್ಗವ ಕಾಣದೆನಲುಗಿ ಭವಮೃತಿಯೊಂದಿ ಜೀವರು ಬಳಲುತಿರಲವತರಿಪನೆಂಬರುತಿಳಿ'ಯಗಲುವನೆಂದರ ನುಡಿಯಳವಡದು ಗುರುವರ್ಯನೆ 2ಕೊರಗಿ ಕರಗುವ ಜೀವರಾರೈ ಬರುವೆ ನೀನೆಲ್ಲಿಂದ ಸಮಯಕೆಇರುವೆ ನೀನಾವೆಡೆಯೊಳಜ್ಞತೆ ಬರುವದಿವರಿಂಗೇತಕ್ಕೆಹರೆವದೆಂತದರಂದತೋರದು ಧರಿಸುತಿಹೆ ನೀನೆಂತು ತನುವನುಮರೆಯ ಮಾಳ್ವೆಯದೇಕೆ ಮೂರ್ತಿಯ ಕರುಣಿಸೈ ಗುರುವರ್ಯನೆ 3ನಿನ್ನ ನಿನ್ನೊಳು ನೀನೆ ನಾನೆಂದೆನ್ನದೆಂಬುದರಿಂದ ತಿಳಿದರೆನನ್ನ ನಿನ್ನೊಳು ಕಾಣ್ಬೆ ಅಂದು ಪ್ರಸನ್ನನಾಗಿಯೆ ಕರುಣಿಸಿಎನ್ನೊಳಗೆ ಸರ್ವವನು ಸರ್ವರೊಳೆನ್ನ ತಿಳಿದನ್ಯಾರ್ಥವನೆ ಮರತುನ್ನತಾಮಲ ಪೂರ್ಣನಹೆಯೆಂದಿನ್ನು ತೋರದು ದೇವನೆ 4ಸಾಕು ಸನಿಯವ ಸೇರಿಸೆಮ್ಮೊಳು ನೂಕು ಕ'ದಿಹ ತಮವ ಸುಖವನುಸೋಕಿಸೈ ಕಡೆಗೊಳಿಸು ಚಿಂತೆಯ ಬೇಕು ನಿನ್ನಡಿ ಸೇವೆಯುಶ್ರೀಕರನೆ ಚಿಕನಾಗಪುರ ವರದರಸನೆ ಗುರುವಾಸುದೇವನೆತಾಕು ತಡೆ ಬರದಂತೆ ನಿನ್ನೊಳಗೇಕತೆಯ ದಯಮಾಡಿಸೈ 5
--------------
ವೆಂಕಟದಾಸರು
ಏನು ನಡತೆಯೋ ಏಕೆ ಕೆಡುವೆಯೋಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ ಹಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ 1 ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡುಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನುಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದುಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ 2 ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದುನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡುನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲುಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ 3
--------------
ಚಿದಾನಂದ ಅವಧೂತರು
ಏನೆಂಬೆನು ಪವಮಾನ ದೇವನಲಿ ಶ್ರೀನಿವಾಸ ಕರುಣಾ ತಾನಾಗೀತನಕಡೆಯಲಿ ಬಹ ಲಕ್ಷ್ಮೀಮಾನ, ದೀನ ಶರಣಾ ಪ. ದುರುಳ ದಶಾಸ್ಯನ ಸೆರೆಯೊಳಗಿಕ್ಕಿದ ಸುರವರನಣುಗನನೂ ನೆರೆಯದೆ ಮಾರುತಿ ಇರುವ ನಿಮಿತ್ತದಿ ಕರಿಸಿದ ರವಿಜನನು ತಿರುಗಿ ದ್ವಾಪರದಿ ಬರಲಾರ ರವಿಜನ ನರನಿಂದೊರಸಿದನು ಎರಡು ಯುಗದೊಳೀ ತೆರದಲಿ ಭಾರತಿ ವರನನು ಸೇರಿದನು 1 ಶ್ರೀಕರ ಜೀವರಿಗೇಕೀ ಭಾವವ ಪೋಕ ಮೃಗಗಳಂದೂ ಕಾಕರಟನದಂತೊರೆವದನರಿತು ದಿ- ವೌಕಸಗಣಬಂದು ಶ್ರೀಕಮಲಾಸನ ವಂದ್ಯನೆ ಸಲಹೆನೆ ಸಾಕುವ ತಾನೆಂದೂ ಈ ಕಲ್ಯಾಣ ಗುಣಾಢ್ಯನ ಭೂಮಿಗೆ ತಾ ಕಳುಹಿದನಂದು 2 ಅದರಿಂ ತರುವಾಯದಲಿ ಸುಖಾಂಭುದಿ ಒದಗಿದ ತ್ವರೆಯಿಂದ ಪದುಮನಾಭ ಮೂರುತಿಯ ಕೆಲದಿ ನಿಂ- ದದುಭುತ ಭರದಿಂದಾ ವಿಧಿಭವ ಲೋಕಾದ್ಯಧಿಕೃತ ಪುಣ್ಯಾ ಸ್ಪದ ತೋರುವೆನೆಂದಾ ವಿಧಿ ಪದ ಯೋಗ್ಯನ ಚದುರತನಕೆ ಮೆಚ್ಚಿ ಪೂರ್ಣಾನಂದ 3 ವರ ವೈಕುಂಠವ ರಜತ ಪೀಠ ಸ- ತ್ಪುರದೊಳಗಿರಿಸಿಹನು ವಿರಜೆಯ ಮುನಿಕಡತ ಸರಸಿಗೆ ಕರೆಸಿದ ಮುರದಾನವಹರನು ಚರಣಾಂಬುಜಕಿಂಕರವರ ಚಂದ್ರೇ- ಶ್ವರನಲಿ ಕರುಣವನು ಇರಿಸಿ ಭಜಿಪ ಸುರತರುವೆನಿಸಿದ ಶ್ರೀ- ವರನ ಮಹಾತ್ಮೆಯನು 4 ಜ್ಞಾನಾನಂದಾಂಬುಧಿ ಶೇಷಾದ್ರಿಯ ಶ್ರೀನಿವಾಸನಿವನು ತಾನಾಗಿಲ್ಲಿಗೆ ಬಂದಿಹ ಭಕ್ತಾ- ಧೀನ ದಯಾಕರನು ಮಾನಸಗತ ಮಾಲಿನ್ಯವ ಕಳೆದನು ಮಾನವ ಬಿಡಿಸುವನು ನಾನಾಭೀಷ್ಟವ ನಿರವಧಿ ಕೊಡುತಿಹ ಮೌನಿ ಜನಾರ್ಚಿತನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಒಂದು ಕೊಟ್ಟರೆ ಶಿವ ಮತ್ತೊಂದು ಕೊಡನಯ್ಯ ಆನಂದ ವಸ್ತುವಿಗೊಂದು ಲೀಲೆ ಇದಯ್ಯ ಪ ರೊಕ್ಕವಿದ್ದವರಿಗೆ ಮಕ್ಕಳೆಂಬವರಿಲ್ಲ ಮಕ್ಕಳಿದ್ದರೆ ತಕ್ಕವನಿತೆಯಿಲ್ಲ ಚೊಕ್ಕಸತಿಯು ಸಿಕ್ಕಿತಾನುರೂಪದೊಳಿರೆ ಪಕ್ಕನೆ ಅಗಲಿ ಪೋಗುವರಯ್ಯ 1 ಚೆಲುವ ಹೆಣ್ಣೆಗೆ ತಕ್ಕ ಚೆಲುವ ಪುರುಷನಿಲ್ಲ ಚೆಲುವ ನಾದವ ಗೊಳ್ಳೆಲಲನೆಯಿಲ್ಲ ಹಲವು ಜನ್ಮದ ಪುಣ್ಯ ಫಲದಿಂದ ಸೇರಲು ಹೊಳೆದು ಹೋಗುವರಿದರೊಳಗೊಬ್ಬರಯ್ಯ 2 ಸತಿ ಸುತರು ಇರುತಿರಲು ದಾರಿದ್ರ ತಿಂಬುವುದಕಿಲ್ಲ ಗತಿಯಿಲ್ಲದವನಿಗೆ ನರಕವಿಲ್ಲ ಅತಿಶಯವಾಗಿ ತಿಂಬುದಕ್ಕಿದ್ದ ನರರಿಗೆ ಸತತ ಶಾರೀರ ಸುಖವಿಲ್ಲವಯ್ಯ 3 ಉಂಬಲೂಡಲು ಸರ್ವಸಕಲ ಸಂಪತ್ತೆಲ್ಲ ತುಂಬಿರಲು ತನ್ನ ಗೃಹದೊಳೆಲ್ಲ ಬೆಂಬಿಡದೆ ರೋಗವು ಪುಟ್ಟಿತನುವಿನೊಳ್ ತಿಂಬುದಕವಗೆ ಬಾಯಿಗಳಿಲ್ಲವಯ್ಯ 4 ಸಕಲ ಜೀವರಿಗು ಚಿಂತೆಗಳಿಲ್ಲದವರಿಲ್ಲ ಸುಖವು ಸ್ವಪ್ನದೊಳು ಕಾಣುವುದಿಲ್ಲವಯ್ಯ ಬಕನ ವೈರಿಯ ಕೋಣೆಯ ಲಕ್ಷ್ಮೀಪತಿ ಪ್ರಿಯ ಮಕರ ಕೇತನ ವೈರಿಯಾಟವಿದಯ್ಯ 5
--------------
ಕವಿ ಪರಮದೇವದಾಸರು
ಒಂದೇ ನಾಮದಲಡಗಿದವೊ ಅಡಗಿದವೋ ಆಪ ಅಖಿಳ ವೇದಗಳು ಅ ಪ ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು ಒಂದೇ ನಾಮವೆ ಅಜಾಮಿಳಗೆ ವೊಲಿದಿತು ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ ನಂದ ಪದವಿಯಿತ್ತ ಅದ್ಭುತ ಮಹಿಮೆಯು 1 ಮಚ್ಛಾದ್ಯನಂತಾವತಾರಾ ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ ಕಚ್ಛಪ ತ್ರಿಜಗಕೆ ಆಧಾರ ತನ್ನ ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ 2 ಒಬ್ಬರಿಂದಲಿ ತನಗಿಲ್ಲ ತಾ ನೊಬ್ಬನೆ ಜೀವರ ರಕ್ಷಿಪನೆಲ್ಲಾ ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ ದರ್ಭೆಯ ರಮಣನ ಸುಗುಣಗಳೆಲ್ಲಾ 3
--------------
ವಿಜಯದಾಸ
ಕಟ್ಟಿದಳು ಕಂಕಣವ ನಾರಿ ಲಕುಮಿವಿಷ್ಣು ಮೂರುತಿ ಕರಕೆ ವೈಕುಂಠರಾಣಿ ಪ.ಅವಿಯೋಗಿಯಾದ ಶ್ರೀ ಸತಿಯ ಸೇವೆಗೆ ಒಲಿದುಪವಮಾನನೊಡೆಯ ವರ ಬೇಡೆನ್ನಲುಭುವನೇಶ ನಿನ್ನ ಕೃಪೆ ಪೂರ್ಣಳಾನೆಂದೆನುತಹವಣೆಯಿಂ ಕೇಳ್ದಳೆರಡೊರವ ಲೋಕೋದ್ಧಾರಿ 1 ಶರಣಾಗತ ರಕ್ಷಕನು ಎಂಬ ಬಿರುದೊಂದುಶರಣಾಗತ ವತ್ಸಲನು ಎಂಬುದೊಂದುಧರಿಸು ಈ ಬಿರುದು ಹರಿ ವರವು ಅದೆ ಎನಗೆನಲುಕಿರುನಗೆಯ ನಗುತ ಒಲಿದನು ಸತಿಯ ನುಡಿಗೆ 2 ನಾರಿರನ್ನಳೆ ನಿನ್ನ ಕೋರಿಕೆಯ ತೆರನಂತೆಆರಾಧನೆಯ ಮಾಳ್ಪ ಶರಣರಿಗೆ ಒಲಿವೆತೋರಲೀ ಬಿರುದುಗಳು ನಿನ್ನ ಕರಗಳಲೆಂದುಶ್ರೀ ರಮೆಯ ಕರಕೆ ಕಂಕಣಗಳನೆ ತೊಡಿಸಿದನು 3 ನಾರಿ ಈ ಕಂಕಣವ ನಿನಗ್ಯಾಕೆ ಅರ್ಪಿಸಲುತೋರದೆನ್ನುತ ನಟನೆಗೈವನಿತರೊಳ್‍ಕ್ಷೀರಸಾಗರ ಮಥನ ಕಾಲದಲಿ ಜನಿಸುತಲಿಶ್ರೀ ರಮೇಶಗೆ ಒಲಿದು ಮಾಲೆ ಹಾಕಿದಳು 4 ಭಕ್ತಿ ಪ್ರೇಮಕೆ ಒಲಿದು ಭಕ್ತವತ್ಸಲ ಅಭಯಹಸ್ತವನು ಶಿರದಲ್ಲಿ ಇಡಲು ನಾರಿಚಿತ್ತದಲಿ ಆನಂದಪುಳಕಾಂಕುರಿತಳಾಗಿಚಿತ್ತದೊಲ್ಲಭನ ಮುಖಕಮಲ ವೀಕ್ಷಿಸುತ 5ಈಕ್ಷಿಸಲು ಶ್ರೀ ಹರಿಯ ಕರಕಮಲ ಲಕ್ಷಣವಲಕ್ಷ್ಮಿ ಬೆರಗಾಗಿ ಮುನ್ನಿನಕಿಂತ ಅಧಿಕಅಕ್ಷಯದ ಸಾಮುದ್ರಿ ಲಕ್ಷಣವ ಕಾಣುತಲಿಪಕ್ಷಿವಾಹನನ ಮೊಗ ಈಕ್ಷಿಸುತ ನಗುತ 6 ನೀನಿತ್ತ ವರದಾನ ಕಂಕಣದ ಬಂಧನವನಿನಗರ್ಪಿಸುತ ಧನ್ಯಳಾಗ್ವೆನೆಂದುಆನಂದದಲಿ ಮಾಡಿ ಕಂಕಣವ ಕಟ್ಟಿದಳು 7 ಜಗವನಾಡಿಸುವಂಥ ಸೂತ್ರವನೆ ಹದಿನಾರುಬಗೆ ಕಲೆಗಳೆಂಬ ಎಳೆ ಮಾಡಿ ಹಳದಿಮಿಗೆ ಕಾಂತಿ ಬಣ್ಣದಲಿ ಮಂಗಳಾಕಾರದಜಗಕೆ ವಿೂರಿಸಿದಂಥ ಕಂಕಣವ ಕಟ್ಟಿದಳು 8 ಕರಿ ಕೆಂಪು ಬಿಳುಪು ವರ್ಣವು ಪ್ರಳಯ ಕಾಲದಲಿಇರಲಾರದೆಂದು ತ್ಯಜಿಸುತ ಹಳದಿಯವರಕಾಂತಿ ಬಣ್ಣವನು ಪೂಸಿ ಮಂಗಳವದನೆಸರದಿಂ ಮೂರು ಗ್ರಂಥಿಯ ಬಿಗಿದಳಾಗ 9 ಪರಿ ಏನು ಪೇಳೆಂದು ಸರಸದಲಿ ಹರಿ ಕೇಳೆ ಹರಿಣಾಕ್ಷಿಯು ಪರಮ ಪುರುಷನೆ ನೀನು ಅರಿಯದಿನ್ನುಂಟೆ ಕೇಳ್ ಸರಸವಾಣಿಯಲಿ ಪೇಳ್ಪೆನು ದೇವ ದೇವ 10 ಒಂದು ಮುಕ್ತಿಯ ಗ್ರಂಥಿ ಒಂದು ಕರ್ಮದ ಗ್ರಂಥಿ ಒಂದು ಅಜ್ಞಾನ ನಿನ್ನ ಬಂಧಕರ ಗ್ರಂಥಿ ಇಂದಿರೇಶನೆ ಇದರ ಗುಟ್ಟು ಅರುಹುವÉ ಕೇಳು ಒಂದೊಂದು ವಿವರಗಳ ವಂದ್ಯ ಬ್ರಹ್ಮಾದಿ 11 ಕರ್ಮಗ್ರಂಥಿಯು ಬ್ರಾಹ್ಮಣರ ಯಜ್ಞದುಪವೀತ ಕರ್ಮ ಬಿಡುಗಡೆ ಇದು ಯತಿರತ್ನಗಳಿಗೆ ನಿಮ್ಮ ಬಂಧಕರ ಗ್ರಂಥಿ ಅಜ್ಞಾನಿ ಹೃದಯಕ್ಕೆ ನಿಮ್ಮ ಕೃಪೆಯಿಂದ ಬಿಡುಗಡೆ ಕೇಳು ಜೀವರಿಗೆ 12 ಮುಕ್ತರಿಗೆ ಸಂಸಾರ ಮತ್ತೆ ಬರದಂದದಲಿ ಕತ್ತರಿಸಿ ಲಿಂಗವನು ಕಾಯ್ದು ನಾನು ಚಿತ್ತಜಾಪಿತನೆ ನಿನ್ನಸ್ತಕೊಪ್ಪಿಸಿ ಬಿಗಿದು ಸುತ್ತಿ ಕಗ್ಗಂಟು ಹಾಕಿರುವೆ ನೀ ಗ್ರಂಥಿ 13 ಬಿಚ್ಚಲಾರೆಯೊ ನೀನು ಬಿಚ್ಚಲಾರೆನೊ ನಾನು ಬಿಚ್ಚಿಕೊಳಲಾರರೊ ಮುಕ್ತ ಜನರು ಅಚ್ಯುತನೆ ಇದೆ ನಿನಗೆ ಹೆಚ್ಚಿನಾ ಬಿರುದು ನಾ ಮೆಚ್ಚಿ ಕಟ್ಟಿರುವೆ ನೀ ಗ್ರಂಥಿ ಕಂಕಣವ 14 ಎರಡು ಗ್ರಂಥಿಯ ತೊಡಕು ಹರಿದು ಭಕ್ತರ ಕಾಯ್ದು ಪರಮ ಆನಂದ ಮುಕ್ತರಿಗೆ ಶರೆ ಮಾಡಿ ಮೆರೆಯೊ ಶರಣಾಗತರ ರಕ್ಷಕನೆ ಎಂದೆನುತ ಸಿರಿ ಮುತ್ತಿನಾರತಿಯನೆತ್ತಿದಳು 15 ಸಿರಿಹರಿಯ ಏಕಾಂತ ಸರಸ ವಚನಗಳಿದನು ಅರಿತವರು ಯಾರೆಂಬ ಅನುಮಾನ ಬೇಡಿ ಹರಿಶಯನನಾದವನು ಅರಿತು ಧೈರ್ಯದಿ ಜಗದಿ ಹರಹಿದುದ ಸಜ್ಜನರು ಅರಿತು ಆನಂದಿಸಲಿ 16 ಸಿರಿ ಒಲಿಯೆ ಶ್ರೀಹರಿಯು ತ್ವರಿತದಲಿ ಒಲಿಯುವನು ಮರುತ ಒಲಿಯಲು ಸಿರಿಯು ತಾ ಒಲಿವಳು ಗುರುವು ಒಲಿಯಲು ಮರುತ ಮರುಕ್ಷಣದಿ ಒಲಿಯುವನು ಅರಿವುದಿದರಿಂ ಗುರುವ ಒಲಿಮೆ ಅಧಿಕೆಂದು 17 ಪರಮ ಸುಜ್ಞಾನದಿಂದರಿತು ತತ್ವಾರ್ಥಗಳ ಶರಣ ನಾ ನಿನಗೆನಲು ವಾತ್ಸಲ್ಯದಿ ಸಿರಿಯರಸ ತನ್ನಭಯ ಹಸ್ತ ಶಿರದಲಿಟ್ಟು ಶರಣರನು ಪಾಲಿಸುವ ಮುಕ್ತಿ ಪದವಿಯನಿತ್ತು 18 ಹರಿಸಿರಿಯ ಲೀಲೆಗಳ ಗುರುಕರುಣ ಬಲದಿಂದ ಅರುಹಿದ ಮಹಿಮೆ ಧರೆಯಲ್ಲಿ ಮೆರೆದು ಪರಮ ಮಂಗಳ ಕೊಡಲಿ ನಿರುತ ಸದ್ಭಕ್ತರಿಗೆ ಕರುಣಾಳು ಗೋಪಾಲಕೃಷ್ಣವಿಠ್ಠಲನ ದಯದಿ 19
--------------
ಅಂಬಾಬಾಯಿ
ಕಂಡೆ ನಾ ಕಣ್ಣೆದುರಲಿ ಕೃಷ್ಣನಾ ಪ ಕಂಡೆ ನಾನೀಗ ಬ್ರಹ್ಮಾಂಡದೊಡೆಯ ತಾ ತಾಂಡವಾಡಿ ಭೂಖಂಡದಿ ಮೆರೆದನ ಅ.ಪ ಜಯಮುನಿಹೃತ್ಕುಮುದಾಲಯದಿ ಸುಲೀ- ಲೆಯಾಡುತಿಹ ವಾಯ್ವಂತರ್ಗತ ಕೃಷ್ಣ ಜಯಜಯಜಯ ಶ್ರೀ ವಿಜಯಸಾರಥಿ ಭವ- ಭಯಹಾರಿ ಭಕ್ತರಭಯಪ್ರದಾಯಕ ದಯವನಧಿಯೆ ಮನದಾಮಯ ಕಳೆದು ನಿ- ರ್ಭಯ ದೊಳು ಕಾಯುವ ಜಗದೊಡೆಯಾ ಧೇಯವು ನಿನಗಿದು ಸದ್ಭಕುತರಾಶ್ರಯ ತಟಿತಕೋಟಿ ನಿಭಕಾಯ ಶ್ರೀಭೂಕಾಂತ ದೈತ್ಯಕೃತಾಂತ ಜಗದಾದ್ಯಂತ ನಿಂತು ಜೀವರಾದ್ಯಂತ ಕೃತ್ಯಗಳ್ ಸಂತತನಡೆಸುವ ಕಂತುಪಿತನ ನಾ 1 ಶ್ರೀಕಳತ್ರ ಪರಲೋಕೈಕನಾಥ ಜಗ- ದೇಕವಂದ್ಯನೆ ನರಲೋಕದ ಕ್ರೀಡೆಯೊಳ್ ಭೀಕರಿಲ್ಲದೆ ಬಕಶಕಟಾಕಂಸಾದಿಗಳ ಏಕಘಳಿಗೆ ಯೊಳು ನೀ ಕೊಂದು ನಲಿದು ನಿಂದೆ ಪಾಕಶಾಸನ ದಿವೌಕಸವಂದ್ಯನೆ ಪ್ರಕಟನಹುದೊ ನಿಪ್ಕುಟಿಲರಿಗೆ ದಿಟ್ಟತನದಿ ಹೃತ್ತಟದಲಿ ಧೇನಿಸೆ ತಟಿತದಂದದಲಿ ಒಳಗೇ ಭಟಜನರುಗಳಾ ಕಂಟಕದೆಡರಾಕಟಕಪರಿಹರ ವಿಟ್ಟು ಕರುಣಾಕಟಾಕ್ಷದಿಂದ ಸಂತ ವಿಟ್ಟು ನಟಿಸುವಾ ಸೃಷ್ಟಿಕರ್ತನ ನಾ 2 ರಂಗಾ ನಿನ್ನವರುಗಳಿಂಗಿತದಂತೆ ಮಾ- ತಂಗವರನ ನಿನ್ಹಾಂಗೆನಡೆಸಿ ಶುಭಾಂಗ ಸದ್ಭಕ್ತಕೃ- ಪಾಂಗ ಮಂಗಳಾಂಗ ತುಂಗಮಹಿಮ ಸ- ಪ್ತಾಂಗ ಏಕೋನವಿಂಶತಿ ಮಂಗಳವಿಶ್ವನೆ ಕಂಗಳಲಿದ್ದು ಜಗಂಗಳ ಕಾರ್ಯಂಗಳಿಗೀವೆ ಹಿಂಗಿಸಿ ಅಂಗದ ಕಾರ್ಯವ ನೀ ಮನ ಕಂಗಳಿಗಿತ್ತು ಎಂದಿಗು ಪೊರೆವಾ ಮಂಗಳ ಪ್ರಾಜ್ಞಭೋಗಂಗಳ ಪ್ರಜ್ಞ ಆಗದುಸೂಜ್ಞ ರಂಗನಾಥ ಹೃದ್ರಂಗದಿ ನಲಿಯುತ ಹಾಂಗೆ ನಿಂದಿಹ ಈ ಶ್ರೀವೇಂಕಟೇಶನ ನಾ 3
--------------
ಉರಗಾದ್ರಿವಾಸವಿಠಲದಾಸರು
ಕಂಡೆನು ನಾನೊಂದು ಕೌತುಕ ಕಲಿಯುಗದೊಳಗೊಂದು ಧ್ರುವ ಮೈಯೊಳಗಿಹುದು ಕೈಯೊಳಗೆಂದಿಗೆ ಸಿಲುಕದು ಇಂದು 1 ವೇದಕ ನಿಲುಕದು ಸಾಧಕರಿಗೆ ತಾ ಸಿಲ್ಕುವದು ಭೇದಿಸಿದರೆ ಹೊಳೆವುದು ಸಾಧು ಜನರಿಗೆ ತಿಳಿವುದು 2 ಭಾವಕ ಸುಲಭದೇವಾದಿಗಳಿಗೆ ದುರ್ಲಭ ಜೀವರ ನೆಲೆನಿಭü ಮಹಿಪತಿ ಪ್ರಾಣದೊಲ್ಲಭ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು