ಒಟ್ಟು 58 ಕಡೆಗಳಲ್ಲಿ , 2 ದಾಸರು , 58 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ1 ನೇಮದಿ ಕಾರ್ಯವನು ಬಗೆದು ಭೂಮಿಜಾತೆಯ ಕಂಡವಗೊಲಿದ 2 ಕರುಣಾಮೂರುತಿಯೊಲುಮೆವಡೆದು ಪರಮಪುಣ್ಯ ವಿಭೀಷಣ ಒರದ 3 ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ 4 ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ 5
--------------
ಶಾಮಶರ್ಮರು
ರಾಮಚಂದ್ರನು ಶೋಭಿಪನಿಂದು ಸದ್ಭಕ್ತಬಂಧು ಪ ಸಾರಸಾಕ್ಷನು ಸಾಮಜವರದನು ಭೂರಿಫಲಪ್ರದ ಭೂಮಿಜೆಯುತನು ಅ.ಪ ಧರೆಯಭಾರವ ತಾಕಳೆಯಬಂದು ಕಾರುಣ್ಯಸಿಂಧು ನರರೂಪವ ಧರಿಸುತ್ರ ನಿಂದು ಕೋದಂಡವ ಪಿಡಿದು ದುರುಳ ದೈತ್ಯರ ಶಿರವನೆ ತರಿದು ಪರಿಪರಿ ವಿಧದಲಿ ಶರಣರಿಗೊಲಿಯುತ ದುರಿತ ಸಂಕುಲವ ಪರಿಹರಿಸಿ ಪೊರೆವ ಶ್ರೀ 1 ಸೂರ್ಯಸುತನ ಸೈನ್ಯದವರ ಸುಮನಸರ ಧೈರ್ಯದಿಂ ಸಮರಗೈದವರ ವೀರಾಧಿವೀರರ ಕಾರ್ಯವ ಸಾಧಿಸಿದಾ ವಾನÀರರ ಪಾರವಶ್ಯರನು ಪರಮೇಷ್ಠಿಯಿಂದ ಧಾರೆಯನೆರೆದಮೃತದಿ ಬದುಕಿಸಿದ ಶ್ರೀ 2 ಘನವಂತ ವಿಭೀಷಣಂಗೆ ಅನುವನು ತೋರಿ ಸಾರಿ ಅನುಜಾತ ಭಕುತಂಗೆ ಅನುಗ್ರಹಬೀರಿ ಆನಂದವೇರಿ ಜನನಿಯರಾಶೀರ್ವಚನವ ಪಡೆದು ಸನುಮತದಿಂ ಪುರಜನರೊಲುಮೆಯೊಳು ದಿನಕರಪ್ರಕಾಶ ಜಾನಕಿನಂದ ಜಾಜೀಶ್ರೀಶ ಶ್ರೀ 3
--------------
ಶಾಮಶರ್ಮರು
ರಾಮಾನುಜಾಚಾರ್ಯ ಮೌನಿವರ್ಯ ನೇಮದಿಂದಲಿ ಗೈದೆ ನೀಂ ಸ್ವಾಮಿ ಕಾರ್ಯ ಪ ಆದಿಯೊಳು ನೀನಾದಿಶೇಷನು ಹರಿಶಯ್ಯೆ ಮೋದಕರ ಪ್ರಹ್ಲಾದ ಎಂದೆನಿಸಿದೆ ಸೋದರದಿ ಸೌಮಿತ್ರಿ ಸಂಕರ್ಷಣನು ಆದೆ ನಾಥ ಯಾಮಾನ ಪಥದಿ ಅರಿಗಳನು ಗೆಲ್ದೆ 1 ಗೀತ ಸೂತ್ರಕೆ ಭಾಷ್ಯಕಾರ ನೀನಾಗಿರುವೆ ಖ್ಯಾತಿಸಿದೆ ವ್ಯಾಸ ಪರಾಶರರ ಹೆಸರ ಪೂತ ಆಳುವಾರುಗಳ ಶ್ರೀಸೂಕ್ತಿ ಪ್ರಕಟಿಸಿದೆ ಮಾತೆವೊಲು ಉಭಯವೇದಗಳ ಪೊರೆದೆ 2 ನೂರೆಂಟು ತಿರುಪತಿಯ ಯಾತ್ರೆಗಳ ಮಾಡುತ್ತ ದಾರಿತೋರಿದೆ ಹರಿಯ ಸೇವಿಸುವ ಪರಿಯ ಪರಮಾರ್ಥಿಕರಾಗಿ ಪರಮವೈಷ್ಣವರಿರಲು ಸಾರಸುಖ ಪದತೋರ್ದೆ ಯತಿಸಾರ್ವಭೌಮ 3 ಎಂದೆಂದು ಮರೆಯದ ಕೂರೇಶರಾ ಸಖ್ಯ ಅಂದು ಬೋಧೆಯ ಕೊಟ್ಟ ಪೂರ್ಣಾರ್ಯರ ನೊಂದಕಾಲವ ನೆನೆದು ಕಣ್ಣೀರ ಕರೆಯುವೆನು ತಂದೆ ಗುರುವಿನ ಗುರುವೆ ದೇವಮಾನ್ಯ 4 ಯಾದವನ ಚೋಳನ ಕೃತ್ರಿಮದ ಕೋಟೆಗಳು ಮಾಧವನ ಡೆಲ್ಲಿಯಿಂ ಕರೆತಂದುದು ಬಾಧಿಸದೆ ಬ್ರಹ್ಮಪೀಡೆಗಳು ಓಡಿದುದು ಈ ಧರೆಯ ಕೀರ್ತಿಗೆ ಮೊದಲಾದವು 5 ರಾಮಚಂದ್ರನ ಕಾಡವಾಸವಂ ನೆನಪೀವ ಸ್ವಾಮಿಯರು ಗಿರಿಸೇರ್ದ ಗುರಿ ಎಲ್ಲವೂ ತಾಮಸರು ಸಾವಿರರ ಒಂದೆ ವಾರದಿ ಗೆಲ್ದ ಮಾಮೈಮೆ ಯಾರಿಗಿದೆ ಭೋಗಿರಾಜಾ 6 ಸಿರಿರಂಗ ತಿರುಪತಿ ಕಂಚಿ ಯದುಶೈಲಗಳ ಪರಮಪದಕೂ ಮಿಗಿಲು ವೈಭವವ ಗೈದೆ ನಿರುತ ತಮ್ಮವರಿಂಗೆ ಸಕಲ ಪಾಪವ ಸುಟ್ಟು ಹರಿಯ ಭರವಸೆ ಪಡೆದೆ ಮೋಕ್ಷ ಕೊಡುವಂತೆ 7 ನಿನ್ನಂತೆ ನಡೆವ ಪ್ರಪನ್ನರೇ ಧನ್ಯರು ಮನ್ನಣೆಯ ಪಡೆದಿರವ ಶ್ರೀಮಂತರು ಎನ್ನ ಬಿನ್ನಪ ಕೇಳಿ ನಿನ್ನವನ ಮಾಡಿಕೋ ಮೂರ್ತಿ ಜಾಜೀಶ ಕೀರ್ತಿ 8
--------------
ಶಾಮಶರ್ಮರು
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ ಪ ಅಭಯ ಹಸ್ತದಿ ಉಭಯಕುಶಲ ಕಾಯುವ ಹರಿಗೆ ಅ.ಪ ಆಲದೆಲೆಯ ಮೇಲೆ ಪವಡಿಸಿ ಬಂದ ಹಾಲುತನದ ಬದುಕ ಭೂಮಿಗೆ ತಂದ ಹಾಲುಗಲ್ಲದ ಮುದ್ದÀು ಕೃಷ್ಣನು ಬರುತಿಹ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 1 ನಟ್ಟನಡುರಾತ್ರಿಯಲಿ ದಿಟ್ಟ ಕಾವಲಿನಲ್ಲಿ ದಟ್ಟ ಕತ್ತಲನೆಲ್ಲ ಜಗದಿಂದ ಜಾಡಿಸುತ ಬಟ್ಟ ಬೆಳಕನು ಬೀರಿ ಮೂಡುತಿಹ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ2 ಅಷ್ಟಮಿಯ ದಿನದಂದು ರಂಗವಲ್ಲಿಯ ಮೇಲೆ ಇಷ್ಟತಿಂಡಿಗಳನಿಷ್ಟಿಷ್ಟೆ ಮೆಲ್ಲಲು ಪುಟ್ಟ ಹೆಜ್ಜೆಯನಿಟ್ಟು ಬರುತಿರುವ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 3 ರುಕುಮಾಂಗದನ ತಂತ್ರ ಫಲಿಸದಂತಳಿಸಿ ರುಕುಮಿಣಿಯ ಮನಗೆದ್ದು ರಥದ ಮೇಲಿರಿಸಿ ಅಕ! ಅಲ್ಲಿ ಬರುತಿಹ ಮದುವಣಿಗ ಕೃಷ್ಣಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 4 ಚೆಲುವ ಚೆನ್ನಿಗ ನಮ್ಮ ಜಾಜೀಪುರೀಶಂಗೆ ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 5
--------------
ನಾರಾಯಣಶರ್ಮರು
ಶೌರಿ ಪ ಸಾಕೇತಾಪುರಿಗೀಶನು ಪೂಜ್ಯ ಸಾಮ್ರಾಜ್ಯ ಭಾಸ್ಕರ ಶತತೇಜಅ.ಪ ಸುಖಕರ ಸುಧಾಂಬುಧೀ ನಿತ್ಯಪರಿಪೂರ್ಣ ಹಿರಣ್ಯವರ್ಣನೆ 1 ಮಮತೆಯ ತೋರಿಸುತ ಪೊರೆವಾತ ಜಾಜೀನಾಥ 2
--------------
ಶಾಮಶರ್ಮರು
ಶ್ರೀನಾಯಕಾ ನೀ ಕೋಪಬಿಡು ಪ ದೀನ ಬಂಧುವೇ ನಂಬಿರುವೆನೈ ಅ.ಪ ನಾನೇನ ಮಾಡಿದೆನಯ್ಯ ತಪ್ಪ ನೀನು ಕಾಣದಿರುವೆಯಾ ಮನ್ನಿಸೈ 1 ತಾಯಿ ತಂದೆ ಪ್ರೇಮಾತುರದಿ ಪುತ್ರರ್ಗೆ ಶ್ರೇಯವೀಯದಿಹುದು ಅನ್ಯಾಯವೈ 2 ಕಾಯಬೇಕು ನೀ ಜಾಜೀಶ ಶ್ರೀಶ ದಾಯಕಾಣದೈ ಬಿನ್ನೈಸಿದೇ 3
--------------
ಶಾಮಶರ್ಮರು
ಶ್ರೀಯದುಕುಲತಿಲಕ ದೇವ ಕಾಯಬೇಕು ನೀ ಕರುಣಾವಾಲ ಪ ಶ್ರೀಯಶೋಧೆಯಮಾಯೆಯತನಯ ರಾಯನೆ ದಯೆದೋರು ಅ.ಪ ದೇವಕೀವಸುದೇವ ಜಾತ ನೀ ವಿನೋದದೆ ನಂದನೊಳಿರುತ ಆವ ಪೂತನಿಶಕಟರಸುವದೇವಹರಿಸಿದೆಭಕ್ತಭಯಹರಶ್ರೀ ಗೋವಕಾಯ್ದ ಗೋವಿಂದ ವಿಧಿಪುರಂದರಾದಿವಂದ್ಯ ಪಾವನ ಯಮನಾನಂದ ಫಣಿತರ ಫಣಿಯೊಳುನಿಂದ 1 ನಳಿನನಾಭಗೋಪಾಲ ಪುಳಿನ ಕ್ರೀಡೆಯಾಡಿಬಾಲ ರೊಳಗೆ ಮೇಲೆನಿಪ ಸುಶೀಲ ತುಳಿದೆ ಬಕ ಆಘಪ್ರಲಂಬಾದಿ ದೈತ್ಯಜಾಲ ಕಳವಳಗೊಳ್ಳುತ ಸೆರೆಯೊಳ್ ಬಳಲುವ ವನಿತಾಜನದೊಳ್ ಒಲಿಯುತ್ತಲಿ ನರಕಾಸುರ ಶಿರವರದಿನೆ ದುರಿತಶಯನ 2 ಬೃಂದಾವನ ಸಂಚಾರ ಬೆಳ್ದಿಂಗಳೊಳು ಗೋಪಿಯರ ಬಂಧುರ ವೇಣುಗಾನತೋರಿ ಹೊಂದುತಾನಂದ ನಿಧಿ ತೋರಿದ ಪರಾತ್ಪರ ತಂದೆ ತಾಯ್ಗಳ ಪೊರೆಯುತ ನಿಂದು ಕಂಸನಕೊಂದು ಅಪ್ರಮೇಯ ಜಾಜೀಶ್ವರ 3
--------------
ಶಾಮಶರ್ಮರು
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಶ್ರೀರಾಮೇಶ ಪೊರೆವುದೆನ್ನ ನೀರವ ಮುನಿವಿನುತ ಚೆನ್ನ ಪ ಧ್ಯಾನ ಜಪತಪಗಳನರಿಯೆ ಹೀನ ಮನುಜ ನಾನು ಹರಿಯೆ ಧೀನಬಂಧುವಾದ ನಿನ್ನ ನಾನು ನೋಡೆ ತೋರೊ ಮುನ್ನ 1 ಸುಲಭನಾದ ನಿನ್ನ ಮರೆತು ಕಲಿಯ ದೋಷದೊಳಗೆ ಬೆರೆದೆ ಕಲುಷಹರಣ ಭಕ್ತಪ್ರಾಣ ನಿಲುಕಿಸೆನಗೆ ನಿನ್ನ ಚರಣ 2 ಜಾಜೀಶನೆ ನಿನ್ನಯಪದ ರಾಜೀವದ ದಾಸನೆನಿಸಿ ಪೂಜೆಮಾಡಿ ನಲಿಯುವಂತೆ ರಾಜಿಪ ಪದವೀಯೋ ಶಾಂತ 3
--------------
ಶಾಮಶರ್ಮರು
ಶ್ರೀವರ ಕೀರ್ತಿಯಂ ಅರ್ಥಿಯಿಂದಾಲಿಸೈ ಚಿತ್ತಶುದ್ಧಿಯಿಂ ಪ ಭಾವಿಸಿವಾರ್ತೆಯ ವ್ಯಾಸ ವಾಲ್ಮೀಕಿಯು [ಆವರ]ಶುಕ ಮನುಶ್ರೇಷ್ಠರೆಲ್ಲ ನಿತ್ಯಪಠಿಪರೋ ಅ.ಪ ಘೋರಾರಣ್ಯದಿ ತಿರುಗುತ್ತ ಶೌರ್ಯದಿ ಗೋಗ್ರಹಣವನು ಸಾಧಿಸುತಲಿ ಮೀರಿ ಸಂಧಿಕೇಳದ ದುರ್ಯೋಧನರ ಹತಗೈದ 1 ರಾಮನು ಕಾಡೊಳು ಮೃಗವನು ಮರ್ದಿಸಿ ಭೂಮಿಜೆಯಂ ತರೆ ರವಿಜನಿಂ ಆ ಮಹಾಸಾಗರವನು ಬಂಧಿಸಿ ಲಂಕಾ ಪ್ರೇಮಿಯನ್ನು ಕೊಂದು ಬಂದ ರಾಮಚರಿತಮಂ2 ದೇವಕಿಸುತ ಗೋಪೀಗೃಹವರ್ಧನ ಗೋವರ್ಧನಗಿರಿಯೆತ್ತಿದ ಮಾವಕಂಸಾದಿ ದುರ್ದೈತ್ಯರ ಖಂಡಿಸಿ ಸೇವಿಸುವ ಸಿಂಧುಗಳ ಸಲಹುವ ಜಾಜೀಶನು 3
--------------
ಶಾಮಶರ್ಮರು
ಸೌಭಾಗ್ಯ ಸಂಪನ್ನ ಸಂಪೂರ್ಣ ಶ್ರೀ ಭೂನೀಳಾ ರಮಣ ಕಲ್ಯಾಣ ಪ ಆಧಾರದೇವ ಭೇದ ರಹಿತ ಭಾವ ಮೋದಕರಾ ಶ್ರೀವಾಸುದೇವ 1 ಯಶೋದೆಯ ಸಂಗದ ಮರಿಯೆ ದಶಾವತಾರಿ ಶೇಷಶಾಯಿಯೆ 2 ಗರುಡವಾಹನ ಗಜವರದ ಗಮನ ದುರಿತನಾಶನ ಜಾಜೀಜನಾರ್ಧನ 3
--------------
ಶಾಮಶರ್ಮರು
ಹರಿಯೆನೀನು ಒಲಿದಮೇಲೆ ಪರರ ಭಯವುಂಟೇ ಪ ಪÀರುಷವೇದಿ ಸೋಂಕಿದ ಕಬ್ಬಿಣ ಹೊನ್ನಲ್ಲವೇ ಸುರನದಿ ಭಾಗೀರಥಿಯೊಳು ಮಿಂದೂ ಪಾಪಿಯೇ1 ಗರುಡದೇವನಿದಿರೊಳು ಉರಗಬಾಧೆಯಿರುವುದೇ ಧರೆಯೊಳ್ ರವಿಯು ಉದಯನಾಗೆ ರಾತ್ರಿ ನಿಲ್ವುದೇ2 ಗುರುವಿನ ದಯೆಯಿರುವರೇ ಕುಲದವರೇಂ ಗಯ್ಯುವರು ಉರಿವ ಕಿಚ್ಚಿನಿದಿರೊಳಗೆ ಚಳಿಯ ಭೀತಿಯೇ 3 ಸಂಜೀವನ ಪಿಡಿದವಂ ಮರಣಕೆ ತಾನಂಜುವನೇ ಕಂಜನಯನ ಕಾಯ್ವನಿರಲು ಶನಿಯು ಹಿಂಸಿಪನೇ 4 ರಾಜತನ್ನವನಾಗಿರಲ್ ವಿರಾಜಿಸುತ್ತಲಿರುವನೈ ಜಾಜೀಶ ಕೇಶವನೇ ನಾನು ನಿನ್ನವನೈ 5
--------------
ಶಾಮಶರ್ಮರು
ಹರಿಯೇ ನಿನ್ನಯ ಸಿರಿಯನು ಬಣ್ಣಿಸೆ ನರನಾದೆನಗಳವೇ ಪ ಕರುಣಾಳುವೆ ನಾಂ ಕರಗಳ ಮುಗಿವೆ ಪÀರವಾಸುದೇವ ಪರಮಾತ್ಮಾ ಅ.ಪ ಸತಿಶ್ರೀದೇವಿಯು ನುತಚತುರಾನನ ಪತಿತೋದ್ಧರೆ ಗಂಗೆಯು ಮಗಳು ಸ್ತುತಿಗೈಯುವವೇದ ತತಿಯಿಂ ನಿತ್ಯ ಭೃತ್ಯರು ಸುರಗಣ ಸರ್ವೇಶಾ 1 ಸಾಗರ ಮಧ್ಯದಿ ಭೋಗಿಯನೊರಗಿ ಯೋಗೀಜನರ ಹೃದಯದಿ ನೆಲಸಿ ಆಗಮ ಪೂಜೆಯ ರಾಗದಿ ಪಡೆವ 2 ಶಂಖಸುದರ್ಶನ ಪಂಕಜಧರಶ್ರೀ ವೆಂಕಟವರದ ಶೀರಂಗ ಕಿಂಕರ ಪಾಲಕ ಜಾಜೀಶಾ 3
--------------
ಶಾಮಶರ್ಮರು