ಒಟ್ಟು 383 ಕಡೆಗಳಲ್ಲಿ , 82 ದಾಸರು , 349 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು - ಜಗ ಪ ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ಅ ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿಅರೆಮತಿಯ ಕೊಂಕು ಮಾತುಗಳನಾಡಿಚರಣಕೆರಗದ ಮನುಜರಿರಬಾರದೆಂದೆನುತಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯ1 ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿಹೆತ್ತವರ ನಿರ್ಬಂಧಕೊಳಗು ಮಾಡಿಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ2 ಕಳ್ಳತನವನು ಕಲಿತು ಕಾಲೋಚಿತವ ಕೇಳ್ದುಸುಳ್ಳು ಮಾತುಗಳಾಡಿ ಒಡಲ ಪೊರೆದುಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ 3 ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆಸಲೆ ಭಕ್ತಿಯಿಂ ವೇದಶಾಸ್ತ್ರವನೋದದೆಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ-ನೊಲಿದು ಹೊರಲಾರೆನೆಂದು ನಡುಗಿದೆಯ 4 ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತುನರಕುರಿಗಳೆಲ್ಲರು ನಡೆಗೆಟ್ಟರೆಂದುಗುರುವೆ ಕೇಳಯ್ಯ ಕನಕ ಪ್ರಿಯ ತಿರುಪತಿಯಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ 5
--------------
ಕನಕದಾಸ
ಏಕೆ ಪೋಗುವೆ ರಂಗಾ, ರಂಗಯ್ಯ ರಂಗ ಪ ಏಕಾಂತದೊಳು ಪೇಳ್ವ ವಾಕ್ಕುಗಳನು ಕೇಳಿ ಅ.ಪ ಮುನಿಸತಿ ಶಿಲೆಯಾಗಿ ವನಜನಾಭಾಯೆಂದು ನೆನೆಯುತಲಿಲ್ಲವೋ ಮನ ಮೋಹನಾ ತನಯ ಪ್ರಹ್ಲಾದ ತಾ ಜನಕಾ ಬಾರೆನಲಿಲ್ಲ 1 ದುರುಳ ಮಕರಿಯಿಂದೆ ಪರಿತಾಪವಾಂತಿಲ್ಲ ಸ್ಮರಿಸಲಿಲ್ಲ ದುರುಳ ಕದ್ದೊಯ್ಯಲಿಲ್ಲ ಸರಸಿಜಾನನನೀಗ ಚರಣಕೆರಗಲಿಲ್ಲ 2 ಹದಿನಾರು ಸಾವಿರ ಸುದತೀ ಮಣಿಯರೆಲ್ಲ ಮದನಾಂಗ ಬಾರೆಂದು ಕರೆಯಲಿಲ್ಲ ಉದಧಿ ನಿನ್ನರಸಲಿಲ್ಲ ಪದುಳದೆ ಬಲಿ ನಿನ್ನ ಚದುರ ಬಾರೆನಲಿಲ್ಲ 3 ಕರದೆ ಕೊಡಲಿಯ ಪಿಡಿದು ಮರದೆ ನಿ[ಲ್ಲೆನುತಲಿ] ನೂರಾರು ಕೈಯವ ಕರೆಯಲಿಲ್ಲ ಹರನೀಗ ತ್ರಿಪುರರ ತರಿಯೆ ಬಾರೆನಲಿಲ್ಲ ವರತುರುಗವೇರಿ ಧುರಕೆ ಬಾರೆಂಬರಿಲ್ಲ4 ಕಾಮಿತವೀಯೆಂದು ಪ್ರೇಮದಿ ಭಜಿಸುವ ಪಾಮರರಿಲ್ಲಿಗೇ ಬರುತಿರ್ಪರೋ ಶಾಮನೆ ಮಾಂಗಿರಿಗಾಮಿಯಾಗಿಹೆಯೇಕೆ ಕಾಮಹರನೆ ಬಾರೊ ರಾಮದಾಸಜೀವ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನ ಬಣ್ಣಿಪೆನಮ್ಮ ಪ. ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ಅ.ಪ. ಮಧ್ವಸರೋವರ ತೀರದ ಮುದ್ದುಕೃಷ್ಣನ ಪ್ರ-ಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ1 ಭವಬಂಧ ಮಾಯಿಗಳ ಕಾಲಲೊದ್ದು [ಮೂಲೆಲ್ಹಾಕಿ]ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ 2 ಸಿರಿ ಹಯವದನನ ಚರಣಕಮಲವನುನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ 3
--------------
ವಾದಿರಾಜ
ಏನು ಕರುಣೆಗೈದೆ ನಳಿನಾಕ್ಷ ಪ ಈ ನಿನ್ನ ಭಕ್ತನೊಳೇನು ಮಮತೆಯೋ ನಿನಗೆ ಅ.ಪ. ಹಿಂದೆ ಬಲಿಯು ತಾ ಯಜ್ಞವ ಮಾಡಲು ಇಂದ್ರ ಪದವು ಪ್ರಾಪ್ತಿ ನಿನ್ನಿಂದಲ್ಲದೆ ಇಂದು ಆ ಪದವಿಯನತಿಯುಕ್ತಿಯಿಂದಲಿ ಸಂದೇಹವಿಲ್ಲದೆ ಸೂರೆಗೈದವ ನೀನೆ 1 ಪರಮ ವಿದ್ವಾಂಸರನು ಧೈರ್ಯಶೀಲರನು ನೆರೆಮೋಹಗೊಳಿಸುವುದೈಹಿಕ ಭಾಗ್ಯವು ಪರಮ ಕಾರುಣ್ಯದಿಂದೊಲಿದು ನೀನಿವನನು ಸಿರಿಮೋಹದಿಂದಲಿ ಪಾರುಮಾಡಿದೆ ದೇವ 2 ನೀನಿಂದು ಗೈದುದು ಪರಮೋಪಕಾರವು ನಾನದರೊಳು ಲೇಶದೋಷವೆಣಿಸನಯ್ಯಾ ಶ್ರೀನಿಧಿ ಕರಿಗಿರೀಶನೆ ನಿನ್ನ ಚರಣಕ್ಕೆ ಆನಮಿಸುವೆನಿಂದು ದೀನವತ್ಸಲ ಸ್ವಾಮಿ 3
--------------
ವರಾವಾಣಿರಾಮರಾಯದಾಸರು
ಏನು ನಡತೆಯೋ ಏಕೆ ಕೆಡುವೆಯೋಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ ಹಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ 1 ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡುಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನುಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದುಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ 2 ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದುನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡುನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲುಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ 3
--------------
ಚಿದಾನಂದ ಅವಧೂತರು
ಏನು ಪವಮಾನಿ | ಏನು ಪವಮಾನಿ | ಈ ನಿಧಿಯಲಿ ಬಂದು ನಿಂದ ಕಾರಣ | ಮಾಣದೆ ಪೇಳು ನಿ | ದಾನದಿಂದಲಿ | ಮಾನಸದಲಿ | ದಾನವಾರಿಯ | ಧ್ಯಾನ ಮಾಡುವ ಜಾಣ ಜಗದ ಪ್ರಾಣ ಸುಂದರಾ | ನಾನಾ ಮಹಿಮಾ ಗುರುವೆ ಪ ಕೇಸರಿನಂದನ ಪಾಶವಿನಾಶ ನಿರ್ದೋಷ | ಭಾರತೀಶ ಈಶಾ | ಶೇಷಾದ್ಯರಿಗುಪದೇಶದ ಕರ್ತಾ | ಲೇಸು ಸದ್ಗುಣಗಣ ಕೋಶ ಸರಸಿಜಾಸನ ಪದವಿಗೆ ಸೇರುವಾತಾ || ದೇಶದೊಳು ಬಲುಭೂಷಣ ಪಾಕಶಾಸನ ಶರದ ಶರೀರ | ದಾಶರಥಿ ಪಾದಾಸರವಿಡಿ | ದೇಸು ಬಗೆಯಲಿ | ಮೋಸ ಪೋಗದಾಯಾಸಬಡದಲೆ | ಮೀಸಲ ಮನ ಸೂಸು ವನರಾಸಿ ಲಂಘಿಸಿ 1 ಪರಿಸರ ಪೋಗಲಾಸಮಯದಲ್ಲಿ | ಭಾಸುರ ಲಂಕೆ | ಯ ಶೋಧಿಸಿದನಾ ಗೋ | ಸಾಸಿರವಿತ್ತು ಕೂಸಿನಂದದಲಿ || ಭಾಷಿಯನಾಡಿ ಪದ್ಮಾಸನಿಗೆ ಸಂ | ಸವರಿ ಫಲ ಸವಿದು ಖಳನ ನಗುತ | ನಾಶಗೊಳಿಸಿದ ಸಮರ್ಥನೆ 2 ಹಿಂದೆ ಪ್ರಳಯದಲ್ಲಿಂದಿರೇಶನು ಸುರ್ವೃಂದ ಉದರದೊಳು | ಪೊಂದಿಟ್ಟುಕೊಂಡು ಆಗ | ಅಂದು ನೀನೊಬ್ಬನೇ ಮಂದನಾಗದೆ ನಯದಿಂದಲಿ ಎಚ್ಚತ್ತು | ಪೊಂದಿಕೊಂಡು ಇದ್ದೆ | ಇಂದು ಕದನದೊಳು ಇಂದ್ರಜಿತನು ಕರದಿಂದ ಸೆಳೆದÀ ಶರ | ದಿಂದಲಿ ಸಿಗಿಬಿದ್ದು | ಬಂಧಿಸಿಕೊಂಡಂಜಿನಿಂದಂತೆ ಮೈದೆಂದಿಗಿಲ್ಲದಂತೆ ನಂದವ ತೋರಿದೆ ಇಂದು ಮೌಳಿಯ ಪೊಂದಿದದಶ | ಕಂಧರನ ಮೊಗ ಮುಂದೆ ಭಂಗಿಸಿ | ಬಂದು ಗುದ್ದಿಲಿನೊದ್ದನು ಅವನಿರೆ | ಮಂದಹಾಸದಲಿಂದ ನಗುತ 3 ಪುರವನುರುಹಿ ಅಸುರರ ಸದೆದು ತೀ | ವರದಿಂದ ಶರಧಿಯ ಮರುಳೆ ಹಾರಿ ಬಂ | ದುರವಣಿಯಿಂದ ಶ್ರೀ | ಹರಿ ಚರಣಕ್ಕೆರಗಿ ಪೊಡಮಟ್ಟು | ಕರವನೆ ಮುಗಿದು | ಚೂಡಾಮಣಿ ಇಡೆ ಮುಂದೆ ವಿವರಿಸಿದೆ | ರಿಪುಗಳಾ | ಗರದ ವಿಸ್ತಾರ | ಸುರರು ಭಾಪುರೆ ಎಂದಂಬರದಲಿವಾದ್ಯ | ಬೆರೆದಲ್ಲಿ ಮೊರೆಯಾಗಿ ಅರಮರೆಯಿಲ್ಲದೆ | ತರಿಸಿ ಮಾರ್ಗವಸರದಲಿ ವಿಸ್ತರಿಸಿ | ಧುರದೊಳಗರಿಗಳಿಂದಲಿ ಮರಣವಾದವರನ ಎಬ್ಬಿಸಿ 4 ಪಾತಾಳದೊಳು ಹತ್ತು ತಲೆಯವನಿರಲು ಕಾತುರದಿಂದ ಹೋ ಮಾತುರಕಾರ್ಚಿಸೆ | ಮಾತು ಮುಂಚದ ಮುನ್ನ ಭೀತಿ ಇಲ್ಲದೆ ಪೋಗಿ | ಪಾತಕನವಧಾನ | ದಾತಗೆ ದಿವ್ಯವರೂಥವೆಂದೆನಿಸಿ ವಿ| ಧೂತ ರಾವಣನ ವಿ | ಪಾತನ ಗೈಸಿದೆ | ಪ್ರೀತಿ ಬಡಿಸಿ ನಿಜಾರಾತಿ ವಿಭೀಷಣಗೆ ತಪ್ಪದೆ ಲಂಕಾ | ನಾಥನ ಮಾಡಿ ನೀ | ರಘುನಾಥನ ಯಡೆ ನೀ ತೆಗೆದುಂಡೆ | ಶ್ರೀ ತರುಣೇಶ ವಿಜಯವಿಠ್ಠಲನ ದೂತಾ ಹನುಮಾ 5
--------------
ವಿಜಯದಾಸ
ಏನು ಬಲ್ಲಿದನೋ ಹನುಮಂತ ನೀನು ಏನು ಬಲ್ಲಿದನೋ ಪ ಏನು ಬಲ್ಲಿದನಯ್ಯ ನೀನು ಜ್ಞಾನಮೂರುತಿ ಜಾನಕೀಶನ ಧ್ಯಾನ ಸುಖಸಾಮ್ರಾಜ್ಯದಲ್ಲಿ ಲೀನನಾಗಿ ಸುಖಿವೆ ಬಲವಂತ ಅ.ಪ ಶರಧಿ ಜಿಗಿದವನೋ ಭರದಿ ದುರುಳನ ಪುರವ ಸೇರಿದನೋ ನಿರುತ ದೊರೆಮಾತೆ ದರುಶನಾದನವನೋ ಪರಮವೀರನೋ ಧರೆಯ ಮಾತೆ ಕೃಪಾಪಾತ್ರನಾಗಿ ಪರಮಪಾವನ ವರವ ಪಡೆದು ಮರಳಿ ದುರುಳನ ವನವ ಸೇರಿ ಧುರವ ಜೈಸಿದಿ ಧೀರಮಾರುತಿ 1 ತಿರುಗಿ ಅಂಗದನ ಬಲವನ್ನು ಸೇರಿ ಸಾರ ಕಥನವನ್ನು ಅರುಹಿ ಮುಂದೆ ಪರಮಪಾವನನ ಚರಣಕಂಡಿನ್ನು ಇರಿಸಿ ಹರಿಯಾಜ್ಞಂಗೀಕರಿಸಿ ತ್ವರದಿ ದಕ್ಷಿಣಶರಧಿ ಹೂಳಿಸಿ ಭರದಿ ಲಂಕೆಗೆ ಮುತ್ತಿಗಿತ್ತಯ್ಯ 2 ಬುದ್ಧದೇಹದ ಕುಂಭಕರ್ಣನ ಕ್ಷುದ್ರ ಇಂದ್ರಜಿತುನ ಮತ್ತವನ ತಂದೆ ಬುದ್ಧಿಹೀನನ್ನ ಹತ್ತು ತಲೆಯವನ ಯುದ್ಧದಿಂದ ಬದ್ಧರಕ್ಕಸ ರೊದ್ದು ಬೇಗನೆ ಛಿದ್ರ ಮಾಡಿ ಜ ಗದ್ರಕ್ಷ ಶ್ರೀರಾಮ ಪಾದಪದ್ಮಕ್ಕೆ ಮುದ್ದು ಮುಖಿಯನು ತಂದುಕೊಟ್ಟೆಯ್ಯ 3
--------------
ರಾಮದಾಸರು
ಏನು ಮಾಡಲಿಯನ್ನ ಮನಸಿನಟ್ಟುಳಿ ಘನ | ನೀನೆ ನಿಲಿಸೋ ಹರಿಯೇ ದೊರೆಯೆ ಪ ಪರಮ ಪಾವನ ನಿನ್ನ ಚರಿತವ ಕೇಳದು | ಬರಡ ಮಾತಿಗೆ ಪ್ರೇಮಾ ನೇಮಾ 1 ಸಿರಿವರ ಮೂರ್ತಿಯನು ನೋಡಲೊಲ್ಲದು | ಸತಿಯರ ರೂಪಕೆಳಸುವದು ಹರಿದು 2 ಸಂತರ ಚರಣಕೆರಗಿ ಬಿಗಿದಪ್ಪದು | ಭ್ರಾಂತ ಜನರೊಳಗೆ ಸಂಗಾ 3 ಹರಿಯಂದೊದರಲು ನಾಲಿಗೆ ಬಾರದು | ಪರನಿಂದೆ ಜಪಿಸುವದು ಸರಿದು 4 ಸಿರಿ ಚರಣಾರ್ಪಿತ ತುಲಸಿಯ ಸೇರದು | ಪರಿಮಳದಲಿ ಬೋಗಿಲಿ ಸಾಗಿ 5 ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ | ವಿರಿಸಿಯನ್ನನುಳಹೋ ಸಲಹೋ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ ನಸುಗೆಂಪಾಗಿ ತಾರಕಿಗಳಡುಗುತಿದೆ ಬೊಂಪು ಹರಿದೋಡುತಿದೆಕೋ ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| 1 ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| 2 ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು ರಕ್ಕಸಾಂತರನೆವಳು ಮನೆಮನೆ ಬಿಡದೆ ಅಮ್ಮಿಯನು ಹುಡುಕುತಿವೆ ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || 3 ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ ತ್ಕøತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು ದಧಿ ಮಥಕನುವಾಗಿ ಕುಳಿತು ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ ನೀನು ಉಪ್ಪವಡಿಸ 4 ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ ಗೆದೆಯ ಧೈರ್ಯಗುಂದುವ ಸಮಯ ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ ಮುದ್ದು ಗೋಪಾಲಕೃಷ್ಣ 5 ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ ಸನಕ ದೂರ್ವಾಸ ಕೌಶಿಕ ಕಪಿಲರು ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ ಈ ಸಮಸ್ತಾದಿ ಹರಿಯೇ || ಸ್ವಾಮಿ || 6 ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || 7 ಗಂಗೆ ಗೋದಾವರಿಯ ಭೀಮರತಿವರದೆ ವರ ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು ಅಂಗನೆಯರೆಲ್ಲರೂ ಕೂಡಿ ರಂಗು ಮಾಣಿಕದ ಆಭರಣಗಳಲಂಕರಿಸಿ ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು ಮಂಗಳಭಿಷೇಕಕೆಂದು ಸ್ವಾಮಿ 8 ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು ವರ ಪಾಂಡುರಂಗ ವಿಠಲ ಹರಿಸುತನ ಹಯವರೂಥವ ಹರಿಸಿದವನೆ ಏಳು ಹರಿಸುತನ ಸುತನ ಸುತನ ಕಾಯ್ದವನೆ ಏಳು ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ ನೀನು ಉಪ್ಪವಡಿಸಾ ||ಕೃಷ್ಣ || 9
--------------
ಕವಿ ಪರಮದೇವದಾಸರು
ಕಂಗಳಿದ್ಯಾತಕೋ ಚಿನುಮಯ ರಂಗನ ನೋಡದಾ ಸಂಗರಹಿತಾತ್ಮನ ನೋಡದಾ ಪ ಶರೀರವೇ ತಾನೆಂದು ನಂಬಿ ಮೆರೆದು ನಿಜಾನಂದವನ್ನು ದೃಷ್ಯಂಗಳನ್ನು ನೋಡುವಾ 1 ತಾನಿದ್ಯಾರು ತನಗೆ ತೋರ್ಪ ತನುವಿದೇನೆಂದರಿವುತಿರ್ಪ ಜ್ಞಾನದೃಷ್ಟಿಯಿಲ್ಲದಂಥ ಆನನಂಗಳನು ನೋಡುವ 2 ಹಂಸ ತಾನಾಗಿ ಚರಿಪ ಹಂಸನ ಪ್ರಕಾಶವನ್ನು ಶುಂಶುಮಾರದಿ ಬೆಳಗುತಿರ್ಪಭ್ರಂಶಿತಾಂ ತನ್ನ ನೋಡದಾ 3 ಸಂತಸಾಧು ಚರಣಕ್ಕೆರಗಿ ಚಿಂತೆಗಳನು ಹರಿದು ಭರದಿ ಶಾಂತಿ ಸುಖವನಿತ್ತ ಗುರು ಶಾಂತಮೂರುತಿ ನೋಡಲಾರದ 4
--------------
ಶಾಂತಿಬಾಯಿ
ಕಂಡು ಎಂದಿಗೆ ಧನ್ಯಳಾಗುವೆ ನಾನು ಪಾದ ಪುಂಡರೀಕವನೂ ಪ. ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ ಪಾಂಡವರ ಪ್ರಿಯ ಬಂಧು ನೆಲಸಿದಂಥಾ ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ 1 ಕೋಮಲದ ಚರಣಕಭಿನಮಿಸಿ ಕರಯುಗದಿಂದ ಶ್ಯಾಮವರ್ಣನ ಪಾದಕಮಲ ಮುಟ್ಟೆ ಆ ಮಹಾ ಆನಂದ ಅನುಭವಿಪ ಭಾಗ್ಯವನು ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ 2 ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ ಆಪಾದ ಮೌಳಿ ಈಕ್ಷಿಸುತ ಹೃದಯದಲಿ ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ ಗೋಪಾಲಕೃಷ್ಣವಿಠಲನ ಎಂದು ಕಾಂಬೆ 3
--------------
ಅಂಬಾಬಾಯಿ
ಕಂಡೆ ಕಂಡೆ ಪಂಡರೀಶನ | ಕಂಡೆ ಕಂಡೆ ಪ. ಕಂಡೆ ಪಂಡರಿಪುರದಿ ಮೆರೆವನ ಕಂಡೆ ಭಕ್ತರ ಕಾವ ಬಿರುದನ ಕಂಡೆ ಮಂಡೆಯ ಚರಣದಲ್ಲಿಡೆ ಹಿಂಡು ಅಘಗಳ ತರಿವ ವಿಠಲನ ಅ.ಪ. ಕಟಿಯಲೀ ಕರವಿಟ್ಟು ಮೆರೆವನ ಹಟದಿ ವಗದಿಟ್ಟಿಗೆಲಿ ನಿಂತನ ಕಟಕ ಮಕುಟನ ವಟದೆಲೆ ಮೇಲೊರಗಿದಂಥನ ಕುಟಿಲ ಕುಂತಳ ಫಣಿಯ ತಿಲುಕನ ತೃಟಿಯು ತೆರವಿಲ್ಲದಲೆ ನಮಿತನ ವಟುವೆನಿಸಿ ಬಲಿರಾಯಗೊಲಿದನ ನಟನೆಗೈಯ್ಯವ ದಿವ್ಯರೂಪನ 1 ಚಂದ್ರಭಾಗಾ ತೀರದಲ್ಲಿಹನ ಚಂದ್ರ ಕೋಟಿಸ್ಮರನ ರೂಪನ ಇಂದಿರೆಯ ಸಹಿತದಲಿ ನೆಲಸುತ ಚಂದ್ರದ್ಹಾರಗಳಿಂದಲೆಸವನ ಬಂದ ಭಕ್ತರ ಭೇದ ನೋಡದೆ ಸಂದರುಶನಾನಂದವೀವನ ಚಂದ್ರಮಂಡಲ ಮಧ್ಯವರ್ತಿಯ ಚಂದ್ರಕುಲಕೆ ತಾ ಚಂದ್ರನೆನಿಪನ 2 ವಿಠ್ಠಲನ ಪುರದಲ್ಲಿ ಹರಿಯುವ ಶ್ರೇಷ್ಠ ಇಂದುಭಾಗೆಯಲಿ ಮಿಂದು ಮುಟ್ಟಿ ವಿಠಲನ ಚರಣಕಮಲವ ಬಿಟ್ಟು ಮನದ್ಹಂಬಲಗಳೆಲ್ಲವ ವಿಠ್ಠಲಾ ನೀನೆ ಗತಿ ಕೈ ಗೊಟ್ಟು ಕಾಯೆಂದೆನುತ ಸ್ತುತಿಸಿ ಕಷ್ಟಹರ ಗೋಪಾಲಕೃಷ್ಣ ವಿಠ್ಠಲನ ಚರಣಾಂಬುಜಗಳನು 3
--------------
ಅಂಬಾಬಾಯಿ
ಕಂಡೆನಯ್ಯ ಚನ್ನಕೇಶವರಾಯನ ವೇಲಾಪುರದರಸನ ಸುಕೃತ ಫಲದಿಂದ ಪ ಹೇಯ ವಿಷಯದಿ ರಂಗನಾಕನ ಮರೆದ ಪಶುವಾನು ಹೇಯನಲ್ಲದೆ ನರಕದಲಿ ಬೀಳ್ವವನು1 ಕಂಡೆ ಶಂಖ ಚಕ್ರ ಪದುಮಧರನ ಕಿರೀಟ ಕುಂಡಲಧರನ ಪೀತಾಂಬರಧರನ 2 ಸುರಸಿಂಧು ಜನನ ಕಾರಣ ಚರಣಕಮಲ ವಿಕಾಸ ಧರನ ಕರುಣಾಪವರಧರನ ರಂಗನಾಯಕನ 3
--------------
ಬೇಲೂರು ವೈಕುಂಠದಾಸರು
ಕದವನಿಕ್ಕಿದ ಕಾರಣೇನೆ ಮುದದಿ ಕೇಳೆ ಮೋಹನಾಂಗಿ ಸದನಕ್ಕಾಗಿ ಬಂದೆ ನಾನು ಸರಸವ್ಯಾತಕೆ ಸುಂದರಾಗಿ ಪ ಇಂದು ನಾನು ಬಂದೆ ದ್ರೌಪದಿ ಬಂದು ಬಾಗಿಲನ್ಹಾಕುವೋದು ಚೆಂದವೇನೆ ಚಂದ್ರಮುಖಿಯೆ ಬಂದು ಬಾಗಿಲು ತೆಗೆಯೆ ನೀನು 1 ಅಂಧಕಾರ ರಾತ್ರಿಯಲಿ ಬಂದವರ್ಯಾರೆಂದು ಅರಿಯೆ ನಿಂದು ಗುರುತೇನೆಂದು ಪೇಳಲು ಬಂದು ಬಾಗಿಲು ತೆಗೆವೆ ನಾನು 2 ಕಂಡರಿಯೆ ಎನ್ನ ಪರಾಕ್ರಮ ಖಾಂಡವವನವ ದಹಿಸಿದೆನೆ ಗಾಂಡೀವಾರ್ಜುನರಾಯ ನಾನು 3 ಗಾಂಡೀವಾರ್ಜುನರಾಯನಾದರೆ ದುಂಡು ಬಳೆ ಕಂಕಣಗಳಿಟ್ಟು ಗೊಂಡ್ಯ ರಾಗಟೆ ಹೆರಳಲ್ಹಾಕಿ ನೀ ಷÀಂಡರೂಪವ ಧರಿಸ್ಹೋಗೊ 4 ಕ್ಷೀರಸಾಗರದಲ್ಲೆ ತಾ ಮಂ- ದರ ಪೊತ್ತಮೃತವನೆ ತಂದ ಧೀರ ಕೂರ್ಮಗೆ ಮೈದುನಾದಂಥ ಶೂರ ಫಲ್ಗುಣರಾಯ ನಾನೆ 5 ಫಲ್ಗುಣರಾಯನಾದರೇನೊ ಸದ್ಗುಣ ಸಂಪನ್ನ ಬಿರುದು ಭದ್ರದೇವಿಯ ಕದ್ದು ತರುವಾಗ ಬುದ್ಧಿ ದಾರಲ್ಲಿಟ್ಟೆದ್ದಿರ್ಹೇಳೊ 6 ಪರಮೇಶ್ವರನ ಒಲಿಸಿಕೊಂಡು ಪಾಶುಪತಾಸ್ತ್ರ ಪಡೆದೆ ನಾನು ಪರಮ ಆಪ್ತ ವರಾಹನ ಕರುಣಕ್ಕೆ ಪಾತ್ರನಾದಂಥ ಪಾರ್ಥರಾಯನೆ 7 ಪಾಶುಪತಾಸ್ತ್ರ ಪಡೆದರೇನು ದೇಶ- ದೇಶ್ಯಾತ್ರೆತೀರ್ಥ ಚರಿಸಿ ಆಸೆ ಬಿಡದೆ ಸನ್ಯಾಸಿಯಾದಂಥ ಮೋಸಗಾರನೆ ಮನೆಗೆ ಪೋಗು 8 ಕೋಟಿ ದೈತ್ಯರ ಕೊಂದೆ ಎನ್ನಸರಿ- ಸಾಟಿಯಾರೀ ಲೋಕದೊಳಗೆ ಆ- ರ್ಭಟದವತಾರ ನಾರಸಿಂಹನೆ ನೀಟಾದಭಕ್ತ ಕಿರೀಟಿಯಲ್ಲವೆ 9 ಕೋಟಿ ದೈತ್ಯರ ಕೊಂದು ಜೂಜಿ- ನಾಟ ಸೋತ್ವನ ತೋಟ ತಿರುಗಿ ಪಾಟುಬಟ್ಟು ವಿರಾಟನಲ್ಲೆ ನಾ(ನ?)ಟರಾಟಕೆ ನಿಂತಿರ್ಯಾಕೊ 10 ಮಾತಿಗೆ ಮಾತಾಡೋರೇನೆ ಅ- ಭೂತಳವ ಬೇಡಿದ್ವಾಮನಗೆ ದೂತ ನಾ ಶ್ವೇತೂವಾಹನನೆ 11 ಶ್ವೇತೂವಾಹನ ನಿಮ್ಮ ಸತಿಗೆ ನಾಥರಿದ್ದೂ ಅನಾಥಳಂತೆ ಅ- ಜ್ಞಾತದಲ್ಲಿ ಸುದೇಷ್ಣೆ ಸೇವೆಗೆ ದೂತಿಯಾದ ಪ್ರಖ್ಯಾತಿ ದಾರದೊ 12 ಹೆತ್ತತಾಯಿ ಶಿರವನಳಿದ ಕ್ಷತ್ರೇ- ರಂತಕ ಭಾರ್ಗವಗೆ ನಿತ್ಯದಲಿ ನಿಜಸೇವಕ ಭೀ- ಭತ್ಸುರಾಯ ನಾನಲ್ಲವೇನೆ 13 ಧೀರ ಭೀಭತ್ಸುರಾಯ ನಿನ್ನ ನಾರಿಯ ಸಭೆಗೆಳೆದು ತಂದು ಸೀರೆ ಸೆಳೆವಾಗ ಶೂರರಾದರೆ ದಾರದಾರಂತೆ ನೋಡಿರ್ಯಾಕೊ 14 ಕಾಮ ಮೋಹಗಳಿಂದ ನಿನ್ನಲ್ಲೆ ಪ್ರೇಮದಿ ನಾ ಬಂದೆನೀಗ ರಾಮರಾಜÉ್ಞಗೆ ನಿಜ ಸೇವಕ- ನಾದ ವಿಜಯರಾಯ ನಾನೆ 15 ವಿಜಯರಾಯ ನೀನ್ಹೌದೊ ತೇಜಿದಿ- ಗ್ವಿಜಯಕೆನುತದರ್ಹಿಂದೆ ಪೋಗಿ ಮಗನ ಕೈಯಿಂದ ವಧೆಯು ನೀತವೆ ಮೊದಲೆ ಪರಾಜಿತನಾದಿರ್ಯಾಕೊ 16 ಶ್ರೇಷ್ಠರೊಳು ಮಹಾಶ್ರೇಷ್ಠ ನಾನೆ ಅಸ್ತ್ರವಿದ್ಯದಲ್ಲಧಿಕನೆಂದು ಕೃಷ್ಣಮೂರುತಿ ಒಲಿಸಿಕೊಂಡಂಥ ಕೃಷ್ಣೆ ನಲ್ಲನೆ ಕೃಷ್ಣೆ ಕೇಳೆ 17 ಸಾರಥಿ ಆದ್ದರಿಂದ ಹಸ್ತಿನಾವತಿ ಪಟ್ಟಣಾಳ್ವುದು ಇಷ್ಟು ದಾರ ದಯದಿಂದ್ಹೇಳೊ 18 ಅಂಗನಾಮಣಿ ನಿನ್ನ ಅಂಗ- ಸಂಗ ಬಯಸಿ ನಾ ಬಂದೆನೀಗ ಅಂಗದ್ವಸ್ತ್ರವಬಿಟ್ಟ ಬೌದ್ಧಗೆ ಸಖನು ನಾ ಸವ್ಯಸಾಚಿ ಅಲ್ಲವೆ 19 ಭುಜ ಪರಾಕ್ರಮಿ ಸವ್ಯಸಾಚಿ ನಿನ್ನೆರಡು ಕೈದಡ್ಡಿನ್ಯಾತಕೇಳೊ ದ್ವಿಜರ ಸುತರ ತಂದುಕೊಡದೆ ಮೊದಲೆ ಮಾಡಿದ ಪ್ರತಿಜ್ಞವೇನೊ 20 ಅಂಜೋನಲ್ಲ ನಾನರಿಗಳಿಗೆ ಕಲಿ- ಭಂಜನ ಕಲ್ಕ್ಯಾವತಾರಗೆ ಕಂಜಚರಣಕ್ಕೆ ವಂದಿಸುವೆ ಧ- ನಂಜಯ ನಾನಲ್ಲವೇನೆ 21 ಸೈಯೊ ನೀ ಧನಂಜಯರೇಯ ಸುರಪತಿಗೆ ಪತ್ರವನೆ ಬರೆದು ಶರದ ಪಂಜರ ಕಟ್ಟಿ ನೀ ಕುಂ- ಜರವನಿಳಿಸಿದ ಕಾರಣೇನೊ 22 ನಿನ್ನ ಸರಿ ಮಾತಾಡುವೋರ ಧನ್ಯರ ನಾ ಕಾಣೆನೆಲ್ಲು ಳನ್ನು ಕೇಳಿದಿನ್ಯಾಕೆ ತಡೆವೆ 23 ದಶ ನಾಮಗಳ ಕೇಳಿ ದ್ರೌಪದಿ <ಈಔಓಖಿ ಜಿಚಿ
--------------
ಹರಪನಹಳ್ಳಿಭೀಮವ್ವ
ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ ಬಗೆಬಗೆ ಶೃಂಗಾರವಾಗಿ ಬಂದ ರಂಗನು 1 ಅಂಬರ ಜರನಿರಿಗಳಲಿ ಕುಂದಣದುಡಿದಾರವ ಕಟ್ಟಿ ಚÉಂದುಳ್ಳ ಭುಜಕೀರ್ತಿ ಕರ್ಣಕುಂಡಲನಿಟ್ಟು2 ಶಂಖ ಚಕ್ರ ಕರಗಳಲ್ಲಿ ಕಂಕಣ ಭೂಷಣಗಳಿಂದ ಕಿಂಕಿಣಿ ನೂಪುರಗಳಿಂದ ಅಲಂಕಾರವಾಗಿ 3 ಕಸ್ತೂರಿ ಕೇಸರಿಯು ಗಂಧ ಬುಕ್ಕಿ ್ಹಟ್ಟು ಪರಿಮಳದ ಚೆಂದ ಕರ್ಪೂರ ತಾಂಬೂಲ ಬಾಯಲೊಪ್ಪುವ ರಂಗ 4 ನಿತ್ಯ ಸೂರ್ಯ ಪ್ರಕಾಶ ಮಲ್ಲಿಗೆ- ಮಾಲೆ ಮುಡಿದು ಹೊರಟ ಜಗದಮೋಹನ ರಂಗ5 ಸಾಲು ಸಾಲು ಮನೆಗಳಲಿ ಮೇಲು ಮೇಲುಪ್ಪರಿಗೆನೇರಿ ಬಾಲಕೃಷ್ಣ ಬರುವ ಭರವ ನೋಡುತ್ತಿದ್ದರು 6 ವಾರಿಗೆ ಸತಿಯೇರ ತನ್ನ ವಾರೆನೋಟದಿ ನೋಡುತ ಮಾರನಯ್ಯನು ಬಂದನು ತಾ ಬಜಾರ ಮಧ್ಯದಿ 7 ಚೆಲ್ವೆಯರೆಲ್ಲರು ಅರಳುಮಲ್ಲಿಗೆ ಕರದಲ್ಲಿ ಪಿಡಿದು ಫುಲ್ಲಾಕ್ಷನ ಮ್ಯಾಲೆ ನಗುತ ಚೆಲ್ಲುತಿದ್ದರು 8 ಯಾದವರೇಶನೆ ನಿನಗೆ ಭೇದವ್ಯಾಕೆನ್ನ ಮ್ಯಾಲೆ ನೀ ದಯಮಾಡೆನ್ನ ಮನೆಗೆನುತ ರಾಧೆ ಕರೆದಳು 9 ವಜ್ರದ ಗೊಂಬೆಯಂದದಿ ವೈಯಾರಿ ಮೆಲ್ಲನೆ ಬಂದು ಪದ್ಮನಾಭ ಬಾ ನಮ್ಮನೆಗೆನುತ ಭದ್ರೆ ಕರೆದಳು 10 ಅಂತರಂಗದಲ್ಲಿ ಕೋಟಿ ಪಂಥವ್ಯಾತಕೆನ್ನಮ್ಯಾಲೆ ಸಂತೋಷದಿ ಬಾರೆನುತ ಜಾಂಬವಂತಿ ಕರೆದಳು 11 ಸತ್ಯಭಾಮೆ ರುಕ್ಮಿಣಿದೇವಿ ಮಿತ್ರೆನೀಲಾ ಜಾಂಬವಂತಿ ಲಕ್ಷಣಾ ಕಾಳಿಂದಿ ಭದ್ರೆ ಕರೆಯುತಿದ್ದರು 12 ಇಷ್ಟುಮಂದಿ ಸತಿಯರೊಳಗೆ ನಿಷ್ಠುರವಾಗುವೆನೆಂದು ಎತ್ತ ಕಡೆಗೆ ಪೋಗಲೆಂದು ಶ್ರೀಕೃಷ್ಣ ನುಡಿದನು 13 ಹರಿಯ ಮಾತುಗಳನೆ ಕೇಳಿ ಸರುವರು ಸುಮ್ಮನೆ ನಿಲ್ಲೆ ಕರದಿ ವೀಣೆಯ ಪಿಡಿದು ಬಂದನು ಭರದಿ ನಾರದ 14 ಭಂಗ ಬಂದಿತೇನೊ ನಿನಗೆ ಇಂದೆನ್ನ ಹಿಂದೆ ಬಾರೆನುತ ನಾರಂದ ಕರೆದನು 15 ಕೇಳಿ ನಾರದರ ಮಾತು ತಾಳಲಾರದೆ ರುಕ್ಷ್ಮಿಣಿಯು ದಾನ ಒಯ್ದು ದಕ್ಕಿಸಿಕೊಂಡಿರೆಂದು ನುಡಿದಳು 16 ಅಕ್ಕನ ಮಾತಿನ ಬಾಣ ನೆಟ್ಟಿತು ಎನ್ನೆದೆಗೆ ಬಂದು ಕೃಷ್ಣ ನೀ ಕೇಳೊ ಕೇಳೆಂದು ನುಡಿದಳು ಭಾಮೆ 17 ಬಿಟ್ಟು ಬಾಣವ ಮಾಡಿ ಯುದ್ಧ ದಿಟ್ಟಳೆನಿಸುವುದೆ ಸಿದ್ಧ ಪೃಥಿವಿಯೊಳಗೆ ಬಾಣನಂದಿ ಎಂದು ಪ್ರಸಿದ್ಧಿ 18 ದಾರಿಗೆ ತೆಗೆಸಿದೆ ನೀನು ಮೋರೆಗಡ್ಡ ಮಂಡಿ ಪನ್ನಿ ಹೀನ ಕಾರ್ಯವ ಮಾಡಲು ನೀ ಅರಿಯೇನೆ ರುಕ್ಮಿಣಿ 19 ಗುಣನಿಧಿ ಗೋಪಾಲ ಹರಿಗೆ ಮಡದಿ ಎನಿಸುವುದೆ ಸರಿಯೆ ಮಣಿಯ ಕಳವು ಇಟ್ಟದ್ದು ನಿಮ್ಮ ಗುಣವ ನಾನರಿಯೆ 20 ಮಾಯಕಾರ್ತಿ ಮಾತುಗಳ ಅನ್ಯಾಯವೊ ನ್ಯಾಯವೊ ನಾನು ಬಾಯಬಿಟ್ಟರೇನುಳಿದೀತೆ ನಿನ ಮಾರ್ಯಾದೆ ರುಕ್ಮಿಣಿ 21 ಸಾಕು ಸತ್ಯಭಾಮೆ ನಿನಗೆ ಯಾಕೆ ಕೋಪ ಬಂದಿತೆಂದು ನಾಲ್ಕು ತೋಳಿಂದಪ್ಪಿಕೊಂಡನು ಶ್ರೀಕಾಂತ ನಗುತ 22 ಎಲ್ಲ ಸತಿಯರನು ತಾನಿದ್ದಲ್ಲಿಗೇ ಕರೆಸಿದ ಕೃಷ್ಣ ವಲ್ಲಭೆ ರುಕ್ಮಿಣಿಯ ಚರಣಕ್ಕೆ ಎರಗಿಸಿದನಾಗ 23 ರುಕ್ಮಿಣಿದೇವೇರ ತೊಡೆಯ ವಿಚಿತ್ರದ್ಹಲಿಗೆ ಮಂಚಮಾಡಿ ನಕ್ಷತ್ರದೊಳು ಚಂದ್ರನಂತೆ ಹೊಳೆಯುತ್ತಿದ್ದನು 24 ಆರ್ಯಳು ಎನ್ನ ಪಟ್ಟದ ಭಾರ್ಯಳು ರುಕ್ಮಿಣಿಯ ಮಾತು ಮೀರಬ್ಯಾಡಿರೆಂದೆನುತ ಸಾರಿ ಹೇಳಿದ 25 ಹಚ್ಚಿದ್ಹಗಲು ಬತ್ತಿಯಂತೆ ಹದಿನಾರು ಸಾವಿರ ಮಂದಿ ಭೀಮೇಶ ಕೃಷ್ಣನ ಚರಣಕ್ಕೆರಗಿ ನಗುತ ಕುಳಿತಿರಲು 26
--------------
ಹರಪನಹಳ್ಳಿಭೀಮವ್ವ