ಒಟ್ಟು 145 ಕಡೆಗಳಲ್ಲಿ , 36 ದಾಸರು , 124 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸಯ್ಯ ವರವ ಹರಿಹರಿ ಪಾಲಿಸಯ್ಯ ವರವ ಪ ಪಾಲಿಸಯ್ಯ ವರ ಬಾಲಗೆ ಬೇಗನೆ ಕಾಲಕಾಲದಿ ನಿನ್ನ ಲೀಲಾನಂದವ ಅ.ಪ ಸತತದಿ ತವಭಜನೆ ಅಗಲಿಸ ದತಿ ಗುಪ್ತ ತತ್ವವನು ಯತಿತತಿ ಪೊಗಳುವ ಸ್ಮøತಿಶಾಸ್ತ್ರರ್ಥವನಿತ್ತು ಸುತಗೆ ಮಹಗತಿಯ ಪಥಕೆ ಹಚ್ಚು 1 ಮತಿ ಮಾನ್ಯರು ಸದಾ ಪೊಗಳುವ- ಪಾದ ಸತತ ನುತಿಪ ಅತಿಹಿತ ಮತಿಯಿತ್ತು ಪತಿತ ಪಾವನ ಮಾಡು ರತಿಪತಿಪಿತನೆ 2 ಜಡ ಬಡತನ ಕಡಿದು ಗಡನೆ ನ್ನೊಡಲಾಶೆಯ ತೊಡೆದು ನುಡಿನುಡಿಗಡಿಗಡಿಗೆಡಬಡದಲೆ ನಿ ನ್ನಡಿಧ್ಯಾನ ಕೊಡು ಎನ್ನೊಡೆಯ ಶ್ರೀರಾಮ 3
--------------
ರಾಮದಾಸರು
ಪುಂಡಲೀಕವರದನೇ | ಕುಂಡಲೀಶಯನನೇ ||ಗಂಡರಿಗೆ ಗಂಡನಾದ | ಪಾಂಡುರಂಗ ರಾಯನೇ ಪ ಅಮ್ಮಾ ನಮ್ಮ ಒಡೆಯನೇ | ಬೊಮ್ಮಾದಿಕರ ವಂದ್ಯನೇ ||ಹಮ್ಮಿನವರ ಹಲ್ಲು ಮುರಿದು | ಸಮ್ಮತರ ಸಲಹುವನೇ 1 ಕಾಲಕರ್ಮ ರಹಿತನೇ | ನೀಲಮೇಘಶ್ಯಾಮನೇ ||ಛಲನ ಮಾಡಿ ಬಲಿಯ ಗೆದ್ದ | ಚೆಲುವ ಪದ್ಮನಾಭನೇ 2 ಅವ್ಯಯ ಸ್ವರೂಪನೇ | ಸವ್ಯಸಾಚಿ ಮಿತ್ರನೇ ||ಹವ್ಯಕವ್ಯ ಭೋಕ್ತನಾದ | ದಿವ್ಯ ರುಕ್ಮಭೂಷನೇ 3
--------------
ರುಕ್ಮಾಂಗದರು
ಪುರಂದರ ದಾಸರಾಯರ ಪೋಷಿಸುವ ಸಂತೋಷದಿಂದಲಿ ಪ ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ 1 ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ2 ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ ಮುತ್ತಿನ ಮೂಗುತಿಯ ಕೊಡು ಎನೆ ಉತ್ತುಮಳು ತೆಗೆದಿತ್ತಳಾಕ್ಷಣ 3 ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ ಪಾಕಿ ಕೊಡೆಯೆನುತ ಅದು ಕಂಡು ಇದು ನ ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು ಎಂದಾಕೆ ಹೋದನು ತಿರೂಗಿ ಬಾರದೆ 4 ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ ಬರಿಯ ನಾಶಿಕವನ್ನೆ ಕಂಡುನು ಮೂಗುತಿಯ ಎಲ್ಲೆನೆ ಮುರಿದಿಹುದು ಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು ಕರದಿ ಬಟ್ಟಲು ಧರಿಸಲಾಕ್ಷಣ ತ್ವರಿತದಲಿ ಹರಿ ಅದರೊಳಾಕಿದ 5 ಪುರುಷನಾ ಕೈಕೊಳಗೆಯಿಡಲು ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ 6 ಬಂದಿದ್ದ ಪರಿಪಕ್ವವೆನಗೆ ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ ಕೋವಿದರ ಕರೆದಿತ್ತ ಹರುಷದಿ ಕಾವನಯ್ಯನ ದಾಸನಾದ 7 ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು ಅಪರೋಕ್ಷ ಪುಟ್ಟಲು ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ ಧೋಕ್ಷಜನು ಸಂರಕ್ಷಿಸಿದ 8 ಘೊರ ನರಕದೊಳಗೆ ಬಿದ್ದಾ ಪಾರ ಜನರು ಚೀರುತಿರಲು ದ್ಧಾರ ಮಾಡಿದ ನಾರದಾರಿವರು ಅವ ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ 9
--------------
ವಿಜಯದಾಸ
ಪುರುಷರೈವರು ಕೂಡಿ ಹರುಷದಿ ಬರುತಿರೆ ಸರಸದಿ ಕೃಷ್ಣೆ ಕದವಿಕ್ಕೆ ಸರಸದಿ ಕೃಷ್ಣೆ ಕದವಿಕ್ಕೆ 1 ನಾಗವೇಣಿಯೆ ನೀನು ಸಾಗಿ ಮುಂದಕ್ಕೆ ಬಂದು ಬಾಗಿಲಿಕ್ಕಿದ ಬಗೆ ಪೇಳೆ 2 ಸರ್ಹ್ಯಾಗೆ ತೆಗೆಯಲಿ ಕದವನು ಹ್ಯಾಗೆ ತೆಗೆಯಲಿ ಕದವನು 3 ಹರದಿ ದ್ರೌಪದಿ ಕೇಳೆ ದೊರೆಯು ಧರ್ಮರು ನಾವು ತ್ವರಿತದಿ ಬಂದೆವು ತೆಗೆ ನೀನು 4 ದೊರೆಗಳಾದರೆ ರಾಜ್ಯ ಪರರಿಗೆ ಕೊಟ್ಟು ತಾ- ನಡವಿ ಯಾತಕೆ ತಿರುಗೀರಿ ಅಡವಿ ಯಾತಕೆ ತಿರುಗೀರಿ5 ಪಟ್ಟದರಸನ ಕೂಡ ಇಷ್ಟು ಮಾತುಗಳ್ಯಾಕೆ ಶ್ರೇಷ್ಠ ಭೀಮನು ನಾ ಬಂದೀನೆ ಶ್ರೇಷ್ಠ ಭೀಮನು ನಾ ಬಂದೀನೆ 6 ಶ್ರೇಷ್ಠನಾದರೆ ಕೈಯ್ಯೊಳ್ಹುಟ್ಟು ಹಿಡಿದು ರಾಜ- ಗಟ್ಟ್ಟಿ ಅಡಿಗೆ ಉಣೀಸ್ಹೋಗೋ ರಾಜ- ಗಟ್ಟಿ ಅಡಿಗೆ ಉಣೀಸ್ಹೋಗೋ 7 ಪುಂಡಕೌರವರಿಗೆ ಗಂಡನೆನಿಸುವಂಥ ಗಾಂಡೀವರ್ಜುನ ನಾ ಬಂದೀನೆ ಗಾಂಡೀವರ್ಜುನ ನಾ ಬಂದೀನೆ 8 ದುಂಡು ಹರಡಿನಿಟ್ಟು ಗೊಂಡ್ಯದ್ಹೆರಳನ್ಹಾಕಿ- ಕೊಂಡು ವಿದ್ಯವ ಕಲಿಸ್ಹೋಗೊ ಹಾಕಿ- ಕೊಂಡು ವಿದ್ಯವ ಕಲಿಸ್ಹೋಗೊ 9 ಸಕಲವಿದ್ಯೆಗಳಲ್ಲಿ ಕುಶಲ ಸಂಪನ್ನನಾದ ನಕುಲರಾಯನು ನಾ ಬಂದೀನೆ ನಕುಲರಾಯನು ನಾ ಬಂದೀನೆ 10 ಸಕಲವಿದ್ಯೆಗಳಲ್ಲಿ ಕುಶಲನಾದರೆ ತೇಜಿ ಕೆಲಸ ರಾಯರಿಗೆ ತಿಳಿಸ್ಹೋಗೊ ಕೆಲಸ ರಾಯರಿಗೆ ತಿಳಿಸ್ಹೋಗೊ 11 ಪಾವಕÀತನುಜೆ ಮಾದೇವಹಾರದವೇಣಿ ಸ(ಹ) ದೇವರಾಯನು ನಾ ಬಂದೀನೀಗ ಸ(ಹ)- ದೇವರಾಯನು ನಾ ಬಂದೀನೀಗ 12 ಗೋವ ಕಾಯುತಲಿ ಗೋಪಾಲಕನಾಗಿ ಕೊಳಲೂದಿ ಗೊಲ್ಲರೊಳಾಡಹೋಗೊ ಕೊಳಲೂದಿ ಗೊಲ್ಲರೊಳಾಡಹೋಗೊ 13 ಮಾತುಳಾಂತಕನಲ್ಲಿ ಮಾತು ಕಲಿತು ಬಂದಿ(ಲ್ಲಿ) ಸೋತೆವೆ ನಿನಗೆ ಸುಂದರಾಂಗಿ ಸೋತೆವೆ ನಿನಗೆ ಸುಂದರಾಂಗಿ 14 ಸೋತರೇನಾಯಿತು ದ್ಯೂತಪಗಡೆ ಬಿಟ್ಟು ಅ- ಜ್ಞಾತವಾಸವನೆ ಚರಿಸ್ಹೋಗೊ ಅ- ಜ್ಞಾತವಾಸವನೆ ಚರಿಸ್ಹೋಗೊ15 ತಿರುಗಿ ತಿರುಗಿ ಭಾಳ ಬಳಲಿ ಬಂದೆವೆ ನಾವು ಕರುಣವಿಲ್ಲವೆ ಕಮಲಾಕ್ಷಿ ಕರುಣವಿಲ್ಲವೆ ಕಮಲಾಕ್ಷಿ 16 ಭಾಳ ಬಳಲಿದೆವೆಂದು ಹೇಳಿಕೊಂಡರು ಕರು- ಣಾಳು ನಾನಲ್ಲ ಕರೆಯಲು ಕರು- ಣಾಳು ನಾನಲ್ಲ ಕರೆಯಲು 17 ಕಾಮನಯ್ಯನ ಕರುಣಕ್ಕೆ ಪಾತ್ರರೆ ನಾವು ಸಾಮಜಗಮನೆ ಸರಸ್ಯಾಕೆ ಸಾಮಜಗಮನೆ ಸರಸ್ಯಾಕೆ 18 ಹೇಮಮಾಣಿಕ್ಯದ ಕದವ ತೆಗೆದು ಪತಿಗಳಿಗೆ ಪ್ರೇಮದಿಂದೆರಗಿ ಕರೆದಳು ಪ್ರೇಮದಿಂದೆರಗಿ ಕರೆದಳು 19 ಆದರದಿಂದ ಕರೆಯಲರ್ಜುನ ಭೀಮ ಧರ್ಮ ಸಾದೇವ ನಕುಲ ಸಹಿತಾಗಿ ಸಾದೇವ ನಕುಲ ಸಹಿತಾಗಿ 20 ಪಂಚಪಾಂಡವರು ಬಂದು ಪರಮ ಸಂಭ್ರಮದಿಂದ ಮಂಚದ ಮ್ಯಾಲೆ ಕುಳಿತಾರೊ ಮಂಚದ ಮ್ಯಾಲೆ ಕುಳಿತಾರೊ21 ಥsÀಳಕು ಬೆಳಕಿನಿಂದ ಝಳಕು ಮಿಂಚುಗಳಂತೆ ಬಳುಕುತ ಬಾಳೆಸುಳಿಯಂತೆ ಬಳುಕುತ ಬಾಳೆಸುಳಿಯಂತೆ22 ಗಂಡರೈವರ ಮುಂದೆ ಗರುವಿಲೆ ನಿಂತಳು ದುಂಡುಮಲ್ಲಿಗೆ ಶಿರ ಬಾಗಿ 23 ಕರಕಮಲವ ಪಿಡಿದು ಕರೆದು ಸಾದೇವ ಕೃಷ್ಣೆ- ತುರುವಿಗ್ಹೂಮಾಲೆ ಮುಡಿಸಿದ ಕೃಷ್ಣೆ- ತುರುವಿಗ್ಹೂಮಾಲೆ ಮುಡಿಸಿದ 24 ಮುಖಬೆವರ್ವೊರೆಸುತ ನಕುಲರಾಯನು ಭಾಳ ಸುಖದಿ ಮುದ್ದಿಸಿದ ಮಡದಿಯ ಸುಖದಿ ಮುದ್ದಿಸಿದ ಮಡದಿಯ 25 ಅರ್ಜುನಾಗಲೆ ಮೋಹದಿಂದ ಮುಂಗುರುಳು ತಿದ್ದಿ ವಜ್ರದಾಭರಣನಿಡಿಸಿದ 26 ಭೀಮ ನಗುತ ಬಿಗಿದಪ್ಪಿ ದ್ರೌಪದಿಯ ಧರ್ಮ- ರಾಯನ ತೊಡೆಯಲ್ಲಿರಿಸಿದ ಧರ್ಮ- ರಾಯನ ತೊಡೆಯಲ್ಲಿರಿಸಿದ 27 ಧರ್ಮ ಮುತ್ತಿನ ಹಾರ ಪದಕ ಕೊರಳಿಗೆ ಹಾಕಿ ವರಮೋಹನಾಂಗಿ ಒಲಿಸಿದ ವರಮೋಹನಾಂಗಿ ಒಲಿಸಿದ 28|| ಸಿಂಧುಸುತನ ಮುಖಬಿಂಬ ಸೋಲಿಸುವಂಥ ಚಂದ್ರವದನೆ ಮುನಿಸ್ಯಾಕೆ ಚಂದ್ರವದನೆ ಮುನಿಸ್ಯಾಕೆ 29 ಮಾತಿನರಗಿಳಿಯೆ ನೀ ಜ್ಯೋತಿ ಮುತ್ತಿನ ಗೊಂಬೆ ಪ್ರೀತಿಪತಿಗಳ ನೀ ನೋಡೆ ಪ್ರೀತಿಪತಿಗಳ ನೀ ನೋಡೆ 30 ಪ್ರಾಣಪದಕವೆಂದು ತಿಳದೆವೈವರು ನಿನ್ನ
--------------
ಹರಪನಹಳ್ಳಿಭೀಮವ್ವ
ಬಂದದ್ದನುಭವ ಮಾಡ್ವೆ ಕಂದನಾಗಿರುವೆ ತಂದೆ ನಿನ್ನಯ ದಯವೊಂದಿರಲಿ ಹರಿಯೆ ಪ ಮಂದಿ ಮಕ್ಕಳು ಎನ್ನ ಕುಂದಿಟ್ಟು ಜರೆಯಲಿ ಬಂಧು ಬಾಂಧವರೆಲ್ಲ ನಿಂದಿಸಿ ನುಡಿಲಿ ಬಂಧನವು ಬಿಡರಿರಲಿ ಎಂದೆಂದು ಮರೆಯದಂತೆ ಇಂದಿರೇಶ ನಿಮ್ಮ ಧ್ಯಾನವೊಂದೇ ಎನಗಿರಲಿ 1 ಭೂಪತಿಗಳೆನ್ನೊಳ್ಕೋಪಮಂ ತಾಳಲಿ ತಾಪಬಡಿಸಲಿ ಮಹಪಾಪಿವನೆನುತ ತಾಪತ್ರಯ ಬಿಡದಿರಲಿ ಪಾಪಲೋಪನೆ ಜಗ ದ್ಯ್ಯಾಪಕನೆ ನಿನ್ನ ಧ್ಯಾಸಪರೂಪ ಎನಗಿರಲಿ 2 ಕಂಡಕಂಡಂತೆ ಜನರು ಭಂಡನೆಂದೆನ್ನಲಿ ತಂಡತಂಡದಿ ಕಷ್ಟ ಅಂಡಲೆದು ಬರಲಿ ಹೆಂಡರು ಸೇರದೆ ಗಂಡನೆಲ್ಲೆಂದೆನಲಿ ಪಂಢರೀಶ ನಿನ್ನ ಪದೆನ್ನ ಮಂಡೆಮೇಲಿರಲಿ 3 ಎತ್ತ ಪೋದರು ಜನರು ಹತ್ರ ಬಡಿಯಲಿ ಎನಗೆ ವಿತ್ತಕೊಟ್ಟೊಡೆಯರು ನಿತ್ತರಿಸದೊದಿಲಿ ಮುತ್ತಿಕೊಂಡ್ವೈರಿಗಳು ಕುತ್ತಿಗೆ ಕೊಯ್ಯಲಿ ಚಿತ್ತಜಪಿತನಿನ್ನ ಭಕ್ತ್ಯೊಂದೆನಗಿರಲಿ 4 ಪೀಡಿಸಲಿ ಬಡತನವು ಕಾಡಿಸಲಿ ದಾರಿದ್ರ್ಯ ಓಡಿಸಲಿ ಪೊಡವಿಪರು ನಾಡ ಬಿಟ್ಟೆನ್ನ ನೋಡಲಿ ಮುನಿದೆನ್ನ ನಾಡದೈವಗಳೆಲ್ಲ ಬೇಡೆನೆ ಶ್ರೀರಾಮ ನಿನ್ನಡಿ ಬಲೊಂದೆನಗಿರಲಿ5
--------------
ರಾಮದಾಸರು
ಬಾರಯ್ಯ ದಯೆದೋರಯ್ಯ ನೀರಜನಾಭನೆ ಕರುಣಿಸು ಮಹರಾಯ ಪ ಸಂಸಾರಸರಕಿನೊಳು ಸಿಲುಕಿ ನಾ ಬಳಲುವೆ ಶಿಶುವಿನೊಳು ದಯವಿಟ್ಟು ಸೆರೆ ಬಿಡಿಸೆನ್ನಯ್ಯ 1 ಪುಸಿನುಡಿ ನುಡಿದು ನಾ ದೆಸೆ ಬಾಯ ಬಿಡುವೆನು ಕುಸುಮಾಕ್ಷ ಪಿಡಿದೆನ್ನ ಹಸನ ಮಾಡೆನ್ನಯ್ಯ2 ಜಡಭವತೊಡರನು ಗಡನೆ ಕಡೆಹಾಯ್ಸಿ ನಿ ನ್ನಡಿಭಕ್ತಿ ಕೊಡು ಬೇಗೆನ್ನೊಡೆಯ ಶ್ರೀರಾಮಯ್ಯ 3
--------------
ರಾಮದಾಸರು
ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ಪ ಕುಸುಮ ಗಂಧ ಪರಿಮಳ ಚಂದದಿ ಸಮರ್ಪಿಸುವೆನು ಪುಷ್ಪಫಲಗಳ1 ಮಂಗಳೆಂದು ಪಾಡುತ ಬೆಳಗುವೆನು ಆರುತಿ ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ2 ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ 3 ನಿತ್ಯ ಮಾಡಿಸೆ ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ 4 ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ5 ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ 6 ಶರಣು ಜನರ ಪೊರೆವ ಕಾರ್ಪರ ನಾರಸಿಂಹನ ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ 7
--------------
ಕಾರ್ಪರ ನರಹರಿದಾಸರು
ಬಾಲಕನೆಂದೆತ್ತಿಕೊಂಡೆನೆ - ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ ಪ ಬಾಲಕನೆಂದೆತ್ತಿಕೊಂಡರೆ - ವಾರೆ ಮಾಡಿ ಮೋರೆ ನೋಡಿಶ್ರೀಲತಾಂಗಿಯರ ಲೋಲ - ಮಾರನಾಟವಾಡಿ ಪೋದನೆ ಅ ಹೊತ್ತರೆದ್ದು ಮನೆಗೆ ಬಂದನೆ - ಯಶೋದೆ ಕೇಳೆ ಎತ್ತಿಕೊಂಡು ಮುತ್ತುಕೊಟ್ಟೆನೆಎತ್ತಿಕೊಂಡು ಮುತ್ತು ಕೊಟ್ಟರೆಮುತ್ತಿನ್ಹಾರ ಕೊರಳಿಗ್ಹಾಕಿಚಿತ್ತಜಾತ ಕೇಳಿಯಲ್ಲಿಬತ್ತಲೆ ನಿಂದೆತ್ತು ಎಂದನೆ1 ಗಂಡನಂತೆ ಮನೆಗೆ ಬಂದನೆ - ಯಶೋದೆ ಕೇಳೆಮಿಂಡನಂತೆ ಕಣ್ಣು ಹೊಡೆದನೆಪುಂಡಪೋಕರನ್ನು ಮೀರಿದುಂಡು ಕುಚಗಳನ್ನು ಪಿಡಿದುದಿಂಡುರುಳಿಸಿ ಒಂದುಸರಲಿಬಂಡನುಂಡು ಹಾರಿ ಪೋದನೆ 2 ಏಸು ಮೋಸ ಕಲಿತ ಜಾಣನೆ - ಯಶೋದೆ ಕೇಳೆವಾಸುದೇವ ಮಾಯಕಾರನೆಹಾಸುಮಂಚದ ಹಾಸುಗೆಯಲಿತೋಷದಿಂದ ಬಾಚಿ ಸೆಳೆದುಶೇಷನನ್ನು ಪೂಜಿಸೆಂದಶ್ರೀಶ ಬಾಡದಾದಿ ಕೇಶವ 3
--------------
ಕನಕದಾಸ
ಬಿಡಿಸೊ ಕಡು ದಯಾನಿಧಿಯೆ ಕಡುಕಷ್ಟದುರುಲನ್ನು ಗಡನೆ ಎನ್ನಯ್ಯ ಪ ಕಡಿವಲ್ಲದೆನಗಿನ್ನು ಕಡುದು:ಖ ಜಡಮಯ ತೊಡರು ಸಂಸಾರಭಾದೆ ತಡಿಲಾರೆನಭವ 1 ತನುಬಾಧೆ ರಿಣಬಾಧೆ ವನಿತೆ ಮಕ್ಕಳ ಬಾಧೆ ಜನನಮರಣದ ಹೇಯ ಘನಬಾಧೆಯಕಟ 2 ಸೀಮೆಯಿಲ್ಲದೆ ಕಾಡ್ವ ಈ ಮಹಾಭವ ಕಳೆದು ಕ್ಷೇಮದಿಂ ಪೊರೆಯೈ ಶ್ರೀರಾಮ ಪ್ರಭು ತಂದೆ 3
--------------
ರಾಮದಾಸರು
ಬಿಡೊ ಬಿಡೊ ಬಡಿವಾರಾ ಬೀರದಿರು ನಡಿ ನಡಿ ಹೋಗೈ ಸಾಕು ಪ ಗಂಡನುಳ್ಳವಳೆಂದರಿಯದೆ ನೀನೆಂಥಾ ಪುಂಡಾಟಿಕೆ ಯಾರಿಗೆ ಬೇಕೊ 1 ತಕ್ಕ ಬುದ್ಧಿ ಹೇಳುವರಿಲ್ಲದೆ ನಿ - ನ್ನಕ್ಕ ತಂಗಿಯರನೆ ಸೋಕೊ 2 ಶ್ರೀದವಿಠಲ ಸುಮ್ಮನೆ ಹೋಗದೆ ನಡು ಬೀದಿಯೊಳಗೆ ಮಾಡೊರೆ ಹೋಕು 3
--------------
ಶ್ರೀದವಿಠಲರು
ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ ಪ ಭೇದಿಸಿ ನೋಡುವರುಂಟು ಬೆಂಬತ್ತಿ ಬಾರದಿರಯ್ಯ ಅ ಕಂಡ ಕಂಡ ಠಾವಿನಲಿ ಕಣ್ಣೆತ್ತಿ ನೋಡದಿರಯ್ಯಕಂಡಿಯೊಳು ಕೈಸನ್ನೆ ಮಾಡದಿರಯ್ಯಗಂಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯಕೊಂಡೆಗಾತಿಯರುಂಟು ದುಡುಕದಿರಯ್ಯ 1 ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಯಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯಆಳುವ ಅರಸಾಗಿ ನಿನಗಾವ ಬರವಯ್ಯಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ 2 ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯಮಾಡುವ ದೈನ್ಯ ಬಲ್ಲೆ ಮದ್ದೂರು ನರಸಿಂಹಯ್ಯಕೂಡಿದ ಕನಕನಾದಿಕೇಶವ ನೀನಹುದಯ್ಯ 3
--------------
ಕನಕದಾಸ
ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ 1 ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ ದುಡಿಯ ಬೇಕಮ್ಮ ಮಗಳೆ ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ 2 ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ 3 ಕ್ಲೇಶ ಕೇಳಮ್ಮ ಮಗಳೆ ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ 4 ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ 5 ಸೊಲ್ಲು ಕೇಳಮ್ಮ ಮಗಳೆ ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ 6 ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ 7 ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ 8 ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ 9 ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ ಕೇಳಮ್ಮಾ ಮಗಳೆ ನಿತ್ಯ ಸುಖಿಸಮ್ಮ 10 ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ ಮೊರೆಯ ಹೋಗಮ್ಮ 11
--------------
ಕೃಷ್ಣವಿಠಲದಾಸರು
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ ಅಡಿಯ ಮರೆಯೆನೊ ಪ ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ ನಾಥ ಪ್ರೀತ ಮುಕ್ತಿದಾಯಕ ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1 ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ ರಮಾ ಸತ್ಯಭಾಮಾ ಮನೋಹರ ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2 ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ ವಿಧದಿ ಬೇಡ್ವೆ ಸುದಯವಂತನೆ ಸುದತಿ ಮಾಡಿದಂಥ ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3
--------------
ರಾಮದಾಸರು
ಭಾವಿ ಅಜನಂಘ್ರಿಯುಗವ ಭಜಿಸಬಾರದೆ ಪ ಭಜಕ ಮಾನವರ ವೃಜಿನಘನಸಮೀರ ಕುಜನವನಕುಠಾರ ಸುಜನರಿಗೆ ಮಂದಾರನೆಂದು ಭಜಿಸಬಾರದೆಅ.ಪ ಭೂತಳದಿ ಶ್ರೀರಾಮ ದೂತನೆನಿಸಿ ಭಕುತ ವ್ರಾತಕೆ ಸಕಲೇಷ್ಟದಾತನೆಂದು ಪ್ರೀತಿಯಿಂದ 1 ಪುಂಡ ಕೌರವರ ಹಿಂಡುಗೆಲಿದು ರಮೆಯ ಗಂಡನೊಲಿಸಿದ ಮಧ್ಯ ಪಾಂಡವನ ಪದ ಪಂಡರೀಕ 2 ಶ್ರೀನರಸಿಂಹನೆ ಜಗನಿರ್ಮಾಣ ಕಾರಣನೆಂದು ಜ್ಞಾನದಾಯಕ ಮಧ್ವ ಮೌನಿಯೆನಿಸಿದ ಪ್ರಾಣಪತಿಯ 3
--------------
ಕಾರ್ಪರ ನರಹರಿದಾಸರು
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ ಖಗಕುಲರನ್ನ ಮನೋರಮಣ ಮನೋರಮಣ ಕಾಂತ ಶ್ರೀರಾಮನ ಅಗಲದಿರು ಕಾಣೆ ಮರಿಯಾನೆ ಶೋಭಾನೆ 1 ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ- ಕೃತ್ಯಕೆಲ್ಲಕ್ಕನುಸರಿಸಿ ಅನುಸರಿಸಿ ನಡೆ ನೀ ಮಗಳೆ ಹಿತವಾಗಿ ಬಾಳು ಪತಿಯೊಳು ಶೋಭಾನೆ 2 ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ ಗಂಡನುಣ್ಣದ ಮೊದಲು ನೀ ಮೊದಲು ನೀನುಣ್ಣದಿರು ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3 ಮುಗುಳು ನಗೆಯ ಬೀರು ಜಗಳವ ಮಾಡದಿರು ಜಗದೊಳು ಕೀರ್ತಿಯುತಳಾಗು ಯುತಳಾಗು ಬಂಧುಗಳಲಿ ನೀ ಹಗೆಯ ಮಾಡದಿರು ಕೃಪೆದೋರು ಶೋಭಾನೆ 4 ಪಾದ ಹೊದ್ದಿ ಸೇವೆಯ ಮಾಡು ಸುದ್ಧ ಭಾವದೊಳು ನಡೆ ಮಗಳೆ ನಡೆ ಮಗಳೆ ನಿತ್ಯಸುಮಂಗಲೆ ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5 ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು ನಿಲದಿರು ನೀರಜಗಂಧಿ ಸತ್ಯ ವಚನವನೆ ಸವಿಮಾಡು ಶೋಭಾನೆ 6 ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು ಸಾಧುಭಾವದದಲಿ ನಡೆ ಮಗಳೆ ನಡೆ ಮಗಳೆ ಪಂಕ್ತಿಯಲಿ ಭೇದ ಮಾಡದಿರು ಕೃಪೆದೋರು ಶೋಭಾನೆ 7 ಕಂಡರೆ ಶಿಷ್ಟರ ದಂಡ ನಮಸ್ಕರಿಸು ಹಿಂಡು ದಾಸಿಯರ ದಣಿಸದಿರು ದಣಿಸದಿರು ಉತ್ತಮಳೆಂದು ಭೂ- ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ8 ಚಂಡಿತನವ ನಿನ್ನ ಗಂಡನೊಳ್ಮಾಡದಿರು ಗಂಡಸರ ಮುಂದೆ ಸುಳಿಯದಿರು ಸುಳಿಯದಿರು ಸಂತತ ಸೌಖ್ಯ- ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9 ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ ಸಮಯದಿ ವೇಶ್ಯಾ ತರುಣಿಯಳ ತರುಣಿಯಳ ತೆರದಿ ರಾಮನ ಸತಿಯಂ- ತೆ ಮಾಡವ್ವ ಸುಖಂ ಜೀವಾ ಶೋಭಾನೆ 10 ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು ಕುಕ್ಷಿ ಈರೇಳು ಜಗವನ್ನು ಜಗವನ್ನು ನಮ್ಮನ್ನು ಸರ್ವರ ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ತುಪಾಕಿ ವೆಂಕಟರಮಣಾಚಾರ್ಯ