ಒಟ್ಟು 36191 ಕಡೆಗಳಲ್ಲಿ , 138 ದಾಸರು , 9678 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊರೆ ಕೇಳು ನೀನೆನ್ನ ಕರುಣದಿ ತವಪಾದ ಪರಮಭಕ್ತಗಗೊಲಿಸದಿರು ದೇವ ಚರಣದಾಸರ ಕಾವ ಸಿರಿಯ ಸಖಜೀವ ಪ ಕ್ಷಿತಿಯೊಳು ಸತಿಸುತರತಿ ಮೋಹರತಿಯೊಳು ಮತಿಶೂನ್ಯನೆನಿಸಧೋಗತಿಗೆಳೆಸದೆ ಪತಿತಪಾವನ ನಿಮ್ಮ ಶ್ರುತಿಭೋದ್ವ್ಯಾಕ್ಯದಭಿ ರತಿಯನೆನ್ನೊಡಲೊಳು ನೆಲೆಸೀಶಾ ಹತಕಂಸ ಸುರತೋಷಾದ್ವಿತಿ ಪಂಚಶಿರ ನಾಶ 1 ವಿಷಯ ವಾಸನದೇಳಸ್ವಿಷಮ ಸಂಸಾರವೆಂಬ ಮುಸುಕಿದ ಮಡುವಿನೊಳ್ಮುಳುಗಿಸಿದೆ ವಸುಧೆಯೊಳಸೆವ ಆ ಅಸಮಹಿಮನ ಪಾದ ದಾಸರ ಸಂಗ ನೀಡ್ವಿಮಲಾಂಗ ಭಂಗ ಕುಸುಮಾಕ್ಷ ಕೃಪಾಂಗ 2 ಮದನಕದನದಿ ಮುದಸುಖವಿಧಿಸಗ ಲ್ಹೋದ ಸುದತಿಯಳ ನೆನೆವಂತೆ ಪಾದ ಸದುಭಕ್ತಿ ಹಂಬಲ ಅಗ ಲದಿರಿಸು ರಘುಕುಲಸೋಮ ಸದುಭಕ್ತರ ಪ್ರೇಮ ಸುದಯನೆ ಶ್ರೀರಾಮ3
--------------
ರಾಮದಾಸರು
ಮೊರೆ ಕೇಳು ಭಕುತಬಂಧು ಮರೀಬೇಡ ಕರುಣಾಸಿಂಧು ಪ ಮರೆಯಬಿದ್ದು ಸೆರಗನೊಡ್ಡಿ ನಿರುತ ನಿಮ್ಮ ಚರಣ ಭಜಿಪೆ ಶರಣಾಗತರ ವರಪ್ರದಾತ ನಿರುತ ಪರಿಪಾಲಿಸಭವ 1 ಶುದ್ಧ ನಿಮ್ಮ ಭಕ್ತನೆನಿಸೊ ಬದ್ಧನೆನಿಸಿಬೇಡ ದೇವ ಬಿದ್ದು ಬೇಡ್ವೆ ನಿಮ್ಮ ಪದಕೆ ತಿದ್ದಿಕಾಯೋ ಎನ್ನ ತಪ್ಪ 2 ತರಳನ್ಹೊರೆದಿ ಭರದಿ ಬಂದು ನರನ ಕಾಯ್ದಿ ಧುರದಿ ನಿಂದು ಪರಮಸಿದ್ಧಿ ನೀಡು ಈಗ ಚರಣದಾಸಗೆ ವರ ಶ್ರೀರಾಮ 3
--------------
ರಾಮದಾಸರು
ಮೊರೆಯ ಲಾಲಿಸಬೇಕು ಮರುಗಿ ದಮ್ಮಯ್ಯಾವರದ ಸದ್ಗುರುರಾಯ ವಾಸುದೇವಾರ್ಯ ಪ *ಜನನೀಯ ಜಠರಾದಿ ಜಪಿಸಿದ ಸ್ಥಿತಿಯಾನೆನೆಯಾದೆ ಮರೆತಂಥ ನೀಚಾ ನಾನಯ್ಯಾಸನಿಹವನ ಸೇರಾದೆ ಸುಜ್ಞಾನರಡಿಯಾಕಣುಗೆಟ್ಟು ದಾರಿಯಕಾಣೆ ಗುರುರಾಯಾ 1ಕಾಮಾದಿ ರಿಪುಗಾಳ ಕೂಟದಿ ನಿಂದುಪ್ರೇಮಪಾಶದ ಕಟ್ಟು ಬಿಗಿಯಾಗಿ ಬಂದುಭೀಮಸಂಸಾರದಿ ಬಿದ್ದನಿವನೆಂದುನೀ ಮನಕೆಚ್ಚರ'ತ್ತು ಸೆಳಕೊಂಡು 2ಕೊಳಚೆಯೊಳಿಪ್ಪಾ ಸೂಕರ ವಾಸನೆಯುತೊಲಗಿ ಪೋಗಲಿಯೆಂದು ತೋರ್ಪುದೆ ಮತಿಯುಹೊಲೆದೇಹ ನಾನೆಂಬ ಹಳೆಯ ಸಂಗತಿಯುಬಲಿತಿದೆ ನೀನಿದ ಬಿಡಿಸಿ ಸನ್ಮತಿಯ 3ಸಾಲವ ತಂದು ಸ' ಸ'ಯಾಗಿ ತಿಂದೂಬಾಳುತಿರೇ ಕೊಟ್ಟವ ಬಡ್ಡಿ ಬೇಕೆಂದುಕೇಳಿ ಬಾಧಿಸಲೇತಕೆ ಕಡಗೈದೆನೆಂದುಆಲೋಚಿಪಂತೆಚ್ಚರಾುತೆನಗಿಂದು 4ಬರುವುದು ಸುಖವೆಂದು ಬಲುಯತ್ನಗೈದುಸೊರಗಿದೆನಲ್ಲದೆ ಸುಖಗಾಣೆ ನೊಂದುಕರಣಕೆಚ್ಚರವೊ ಕರುಣಿಸಲ್ಪ'ದುಕರಪಿಡಿದುಳುಹೆಂದು ಕೂಗಿದೆನಿಂದು 5ುೀ ದಯಾರಸಕೆ ನಾನೀವೆನೇನುವನುಪಾದಪದ್ಮವ ನಂಬಿ ಪಾಲಿಸೆಂಬುವನುಆದರಿಸುತ ಭಕ್ತಿಯಾನಂದವನ್ನುವೇದವೇದ್ಯನೆ ಕೊಟ್ಟು ಸಲಹು ನೀನಿನ್ನು 6ಪುಟ್ಟಿದಂದಿನಿಂದಾ ಮಡಿ ಮಡಿಯಾಗಿ ದುಡಿದುಘಟ್ಟಿಗತನವನು ಗಳಿಸಬೇಕೆಂದುಹೊಟ್ಟೆ ಹೊರಕರೊಳಾಡಿ ಹುಸಿಯನೆ ನುಡಿದುಕೆಟ್ಟು ಸುಖಗಾಣದೆ ಕೂಗಿದೆನಿಂದು 7ಸಾಕಾುತಯ್ಯಾ ಸಂಸಾರ ಕೋಟಲೆಯುನಾ ಕಾಣೆ ಸುಖವನು ನಿ'ುಷವಾದರೆಯುನೀಕರಿಸುವರಿಂದ ನಿರ್ವೇದ ಗತಿಯುಸೋಕಲು ನಿನ್ನೊಳು ಸಿಕ್ಕಿತು ಮತಿಯು 8ಧರೆಯೊಳಜ್ಞರ ನೋಡಿ ದಯದಿಂದ ಮುದದಿನರದೇಹದಾಳಿ ಚಿಕನಾಗಪುರವರದಿಒರೆದು ವೇದಾಂತರ್ಥವನು 'ಸ್ತರದಿ 1ಉದ್ಧರಿಸಿದೆ1 ವಾಸುದೇವಾರ್ಯ ಸುಖ ಪಥದಿ 9(ಈ) ಸಾಮಾಜಿಕ ಕೃತಿಗಳು
--------------
ವೆಂಕಟದಾಸರು
ಮೊರೆಯ ಹೊಕ್ಕೆನು ನಿನ್ನಾ | ಚರಣ ಕಮಲಕ ಸಿರಿಪತಿ ಭವರೋಗ ವೈದ್ಯ ನೆಂಬದು ಕೇಳಿ ಪ ಅನ್ಯವಾರ್ತೆಯ ಕೇಳಿ ಕಿವಿಬಧಿರಾಗದೆ ನಿನ್ನ ಕಥಾಶ್ರವಣದ ರಸದೀ ಇನ್ನು ಕೇಳುವ ಪರಿಮಾಡೋ ಅವಿದ್ಯದಾ ಕಣ್ಣಿನ ಪರಿಗೆ ಜ್ಞಾನಾಂಜನವಿಡೋದೇವಾ 1 ವಿಷಯನಂಜಲಿ ತಾಪವೆಡಗೋಂಡದೇಹಕೆ ಅಸಮಸತ್ಸಂಗ ಕಷಾಯಕೊಟ್ಟು ಹುಸಿ ನುಡಿ ಪರನಿಂದೆಯಾಡಿದ ರೋಗದಿ ಹಸಗೆಟ್ಟ ನಾಲಿಗೆ ನಾಮಾಮೃತವ ನೀಡೋ 2 ನಾಸಿಕ ಕೊರಡಾಯಿತಿಭೋಗ ದ್ರವ್ಯದಿ ವಾಸನೆ ಕೊಡು ತುಳಸಿಯಾರ್ಪಿತವಾ ಧ್ಯಾಸತೈಲದಿ ಮನಸಿನ ಕರ್ಮವಾತವಾ ದೋಷಬಿಡಿಸಿ ಕಾಯೋ ಗುರು ಮಹಿಪತಿ ಸ್ವಾಮಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನುಮರೆಯದೆ ಸಲಹೆನ್ನ ವರದಾ ಪಕರಿ ಧ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆಪರಂದೇವಿ ವಲ್ಲಭನೆ ವರದಾ ಅ ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳುಹಂಬಲಿಸಿ ನಾ ಬಂದೆ ವರದಾಅಂಬುಜೋದ್ಭವನ ಬರೆಹವ ಮೀರಲಾರದೆ ನರಬೊಂಬೆ ಗರ್ಭದೊಳಿದ್ದೆ ವರದಾ 1 ತುಂಬಿದ್ದ ಕೀವು ಮಲಮೂತ್ರ ರಕ್ತದಿಂ ಹೊರಳುವಸಂಭ್ರಮದೊಳಿದ್ದೆ ನಾ ವರದಾಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈಕುಂಭಿನಿಗೆ ನಾ ಬಂದೆ ವರದಾ 2 ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ ಕುಶಲದಾಟವ ಕಲಿತೆ ವರದಾಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮತೃಷೆಗೆ ನಾನೊಳಗಾದೆ ವರದಾ 3 ನುಸುಳಿಸುವ ಚಾಂಡಾಲ ಗುಣವನೆಣಿಸದೆ ಕಾಮವಶನಾಗಿ ನಾನಿದ್ದೆ ವರದಾಉಸುರಲೆನ್ನಳವಲ್ಲ ಬೆಸನಿತ್ತು ಸಲಹೆನ್ನಬಿಸರುಹಾಕ್ಷನೆ ಕಂಚಿ ವರದಾ 4 ಗುರು ಹಿರಿಯರ ಕಂಡು ಸರಿಸಮಾನದಿ ನಾನುಬೆರೆದುಕೊಂಡಿದ್ದೆನೋ ವರದಾನರರ ಕೊಂಡಾಡಿ ನಾಲಗೆಯೊಣಗಿ ಅತಿಯಾಗಿನರನರಳಿ ಬೆಂಡಾದೆ ವರದಾ 5 ಕಾಸಿಗಾಸೆಯ ಪಟ್ಟು ಸಹಸ್ರ ಲಕ್ಷದ ಪುಸಿಯಬೇಸರಿಸದೆ ಬೊಗಳಿದೆ ವರದಾವಿಶೇಷ ನಿಮ್ಮಂಘ್ರಿಯ ನಂಬಲಾರದೆ ಕೆಟ್ಟದೋಷಕನು ನಾನಾದೆ ವರದಾ 6 ಪಂಚೇಂದ್ರಿಯಗಳೊಳಗೆ ಸಂಚರಿಸುವೀ ಮನವುಕೊಂಚ ಗುಣಕೆಳೆಯುತಿದೆ ವರದಾಪಂಚತ್ರಿಂಶತ್ಕೋಟಿ ಭೂಮಂಡಲದೊಳೆನ್ನಂಥಪಂಚಪಾತಕನುಂಟೆ ವರದಾ 7 ಮುಂಚೆ ಶ್ರೀ ಹರಿಯೆ ನಿಮ್ಮ ವರಧ್ಯಾನ ಮಾಡುವರಪಂಚೆಯಲ್ಲಿರಿಸೆನ್ನ ವರದಾಪಂಚಬಾಣನ ಪಡೆದ ನೆಲೆಯಾದಿ ಕೇಶವ ಈ ಪ್ರಪಂಚವನು ಬಿಡಿಸೆನ್ನ ವರದಾ 8
--------------
ಕನಕದಾಸ
ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ | ಕಿಸರು ಹೊರಲಿ ಬೇಡ ಕೆಲಕೆ ಸಾರೋ ಪ ಪಶುಗಾವಿ ನೀ ಎನ್ನ ಹೆಸರುಗೊಳಲಿಬೇಡ | ಹಸನಾದ ಮುತ್ತಿನ ಸರಗಳು ಹರಿದಾವೊ || ನಿಶೆಯ ವೇಳೆಯು ಅಲ್ಲಾ ನಿನಗೆ ಬುದ್ಧಿಯು ಸಲ್ಲಾ | ವಶಕರವಾಗುವಳೆ ಒಲವು ಇಲ್ಲದೆ 1 ಎದೆಯ ಮುಟ್ಟಲಿ ಬೇಡ ಎಳೆನಗೆ ನಗಲಿಬೇಡ | ಬದಿಬಗಲು ಪಿಡಿದು ನೋಡುವರೆ ಹೀಗೆ || ಕಾಕು ಎಬ್ಬಿಸುವರೆ | ಸದನಕ್ಕೆ ಹೋಗಬೇಕು ಸರಸವೇಕೊ2 ಹಿಂದೆ ಬಂದವರು ಏನೆಂದು ಒಲಿದರೊ ಕಾಣೆ | ಒಂದಿಷ್ಟು ಚೆಂದವಿಲ್ಲ ಚೆಲುವಿಕೆಯಿಲ್ಲಾ || ಕಂದರ್ಪಕೋಟಿ ತೇಜ ವಿಜಯವಿಠ್ಠಲ ಎನ್ನ |ಮಂದಿರಕೆ ಬಾರೊ ನಿನ್ನ ಮನಸು ದಣಿಸುವೆ 3
--------------
ವಿಜಯದಾಸ
ಮೊಸರ್ಬೇಕ್ ಮೊಸರು ಧೇಂಡಿಯ ಮೊಸರು ಪ ಕರಣೆಯೆಂದ್ಹೆಸರು ಕೇಳ್ಬೇಡಿ ಕೊಸರು ಅ.ಪ ಗೋಕುಲದಲಿ ಶ್ರೀಕೃಷ್ಣನು ತಾನೆ ಆಕಳಮಂದೆಯ ಹೊಂದಿರುತಾನೆ ಆ ಕರುಣಾನಿಧಿ ಕಳಿಸಿರುತಾನೆ ಬೇಕಾದರೆ ಬನ್ನಿ ನಾ ಇಕ್ಕುತ್ತೇನೆ 1 ಎಳಗಂದಿಯಲ್ಲವು ತಿಳಿಗಟ್ಟುವುದಿಲ್ಲ ಕೊಳೆಯಿಲ್ಲವು ಈ ಬಿಳಿಮೊಸರಿನಲಿ ತಿಳಿಯ ವೈರಾಗ್ಯ ಭಕ್ತಿಗಳುಳ್ಳ ಜನಕೆ ಗೆಳೆಯ ಶ್ರೀ ಕೃಷ್ಣನು ಕಳಸಿದನಮ್ಮ 2 ಬಿಂದು ಮಾತ್ರದಿ ನಿಜಾನಂದವ ಕೊಡುವುದು ಬಿಂದಿಗೆ ತಂಬಿಗೆ ತರಬೇಡಿರಮ್ಮ ಮಂದ ಜನರು ತಾವರಿಯರು ಇದನು ತಂದೆ ಪ್ರಸನ್ನನ ಪರಮ ಪ್ರಸಾದವ 3
--------------
ವಿದ್ಯಾಪ್ರಸನ್ನತೀರ್ಥರು
ಮೋಕ್ಷ ಪುಣ್ಯ ಫಲಾ ಮದನ ಗೋವಿಂದನ ಕರುಣವು ಪ ಆಕಾರಾಮೊದಲಾ ದಕ್ಷರದಲಿ ನೇಕಾ ಪರಿಯಲಿ ಕರೆದು ಸುವರ್ತಡದನಿಂದಾದಾ ಆದಿಮುನಿ ಗಣಸಹಿತಾ ಶ್ರೀ ಕರದಿಂದಾಲಾಶ್ರಿತ ಜನ ಪೋಷಕನ ನೀ ಕಾಮನಾದಿ ಪೂಜಿಸಿ ನಿಜಭಕುತಿ ಆಕಾಲದಲ್ಲಿ ಮಾಡಿದವರಿಗೆ ಎಲ್ಲಾ ಮುಕುತಿ ಲೋಕನಾಯಕನನುಗ್ರಹದಿಂದಲೇ 1 ನಾಯಕ ಪೂಜಿತನಾ ಸಾಸಿರನಾಮದ ಸರ್ವೇಶನ ದಾಸೋತ್ತುಮರಾದ ವರಿಗೆಲ್ಲಾ ವಾಸುದೇವಾನು ತನ್ನವರು ಎಂದು ಪಾಲಿಸಿ ಈಸು ಜನರಿಗಿತ್ತಾ ಇಹಪರವು 2 ಅಂದು ಚಂದ್ರಗೆ ಬಂದ ಶಾಪವು ಕಳೆದಾ ಅಜಮಿಳನಂತ್ಯ ಕಾಲಕೆ ಕಾಯ್ದ ಕಂದಾ ಕೂಗಲು ನೇರ ಕಂಭದೊಳಗೆ ಬಂದಾ ಮುಂದಾ ದನುಜನ ಸೀಳಿ ಮಗನಕಾಯ್ದ ಸಿಂಧುಶಯನ ತನ್ನ ಹೊಂದಿದವರನೆಲ್ಲಾ ಬಂಧು ಬಳಗ ಆಗಿಪೊರೆವಂಥಾ ಸ್ಮರಿಸುವ ಶರಣರಿಗೆ 3
--------------
ಹೆನ್ನೆರಂಗದಾಸರು
ಮೋಜು ಮಾಡಿದಿರ ರುಕ್ಮಿಣಿ ಭಾಮೆಮೋಜು ಮಾಡಿದಿರರಾಜಪುತ್ರರ ವಾಜಿಗಾಣುತಸೋಜಿಗಾಗೇದರಾಜ ರಾಜರ ಪ. ಚದುರೆ ದ್ರೌಪದಿದೇವಿ ಮುದದಿ ಮುಯ್ಯವ ತಾರೆಇದುರಿಗೆ ಬಾರದೆ ಕದವನಿಕ್ಕಿ ಬಹಳೆ1 ಚಿಕ್ಕ ಸುಭದ್ರಾತಾ ಅಕ್ಕರದಿ ಬರುವಾಗಹೊಕ್ಕು ಒಳಗೆ ಕದವ ನಿಕ್ಕಿಕೊಂಡು ಬಹಳೆ2 ವಸುಧೆರಾಯರು ನಿಮ್ಮ ಕುಶಲಕ್ಕೆ ಬೆರಗಾಗಿಮುಸು ಮುಸು ನಗುತಾರೆ ಮುಸುಕಿನೊಳಗೆ ಬಹಳೆ3 ಕತ್ತಲೆಗಂಜುತ ಮಿತ್ರೆಯರು ನಿಂತೆವುಪೃಥ್ವಿರಾಯರು ನಿಮ್ಮ ಅರ್ಥಿಗೆ ನಗುತಾರೆ ಬಹಳೆ 4 ಕೃಷ್ಣ ರಾಮೇಶನ ಪಟ್ಟದರಾಣಿಯರುಎಷ್ಟು ಶಾಣೇರೆಂದು ಅಷ್ಟ್ಟೂರು ನಗುತಾರೆ ಬಹಳೆ5
--------------
ಗಲಗಲಿಅವ್ವನವರು
ಮೋಡಿಯ ಅಸಗೊಳದೈ ಪ ಮೋಡಿಯ ಅಸಗೊಳದೈ | ಕುಳಿತರು ಕೈದೆಗೆದೈ 1 ಸಿಹಿಮಾಡಲು ಬಹುದೈ | ಸೆಣಸುತ ಗೆಲಬಹುದೈ 2 ಮದದಾನೆಯ ಭೇದಿಸಬಹುದೈ | ಸಿರಸಿನ ಹೂವಿನ ಯಸಳದಿ ವಜ್ರವನೆರೆ ಛೇದಿಬಹುದೈ 3 ಮುನ್ನ ಸುತ್ತಿರಬಹುದೈ | ಹೋದರು ಜನವಹುದೈ 4 ಕರಿಕಂಬಳಿ ಬಿಳಿದಾಗುವದೆಂಬುದ ಮರಳವನಲ್ಲೈ | ನುಡಿ ಸಿದ್ದಾಂತಹುದೈ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೋತಂಪಲ್ಲಿ ಪ್ರಾಣದೇವರ ಸ್ತೋತ್ರ ಏನು ಕರುಣವೊ ನಿನಗೆ ಮೋತಪಲ್ಲಿಶಾ ||ದೀನ ದ್ವಿಜಗೊಲಿದು ಬಂದಿಲ್ಲಿ ನಿಂತೇ ಪ ವಿಪ್ರವರ ತಪಗೈಯ್ಯೆ | ನೀನೊಲಿದು ಅವನಿಗೆಕ್ಷಿಪ್ರದಿಂ ಕಿಂಪುರುಷ | ಖಂಡದಿಂಧ್ಹೊರಟೂ |ಅಪ್ರತಕ್ರ್ಯೊರು ಸ | ದ್ಗುಣ ಪೂರ್ಣ ಹರಿದೂತಸುಪ್ರಸನ್ನನು ಆಗಿ ಬಂದಿಲ್ಲಿ ನಿಂತೇ 1 ಸುಜನ ಜನರಂದೂ 2 ಪಾದ | ಪದ್ಮಯುಗವಾ ||ದ್ವಿಜಗುರೂ ಪ್ರಾಣಪತಿ | ತೈಜಸನು ತಾನಾಗಿ |ಭಜಕರಿಗೆ ಪೇಳಿದನು | ಸ್ವಪ್ನ ಸೂಚಿಸುತಾ 3 ಭಿನ್ನವಾಗಿದ್ದಂಥ | ಅಂಗಗಳ ಜೋಡಿಸುತನನ್ನೆಯಿಂ ತೈಲವನು | ಪೂಸೆನ್ನುತಾ |ತನ್ನ ಸದನದ ಕದವ | ನಾಲ್ವತ್ತು ಮತ್ತೊಂದುದಿನ್ನ ತೆಗೆಯದೆ ಲವಣ | ವ್ರತ ಮಾಳ್ಪುದೆಂದಾ 4 ಸದನ | ಕದ ತೆಗೆಯುತಿರಲೂ |ನೇಮ ಮೀರಿದ ಫಲವು | ತೋರುವನೊ ಎಂಬಂತೆಕೀಮು ರಕ್ತವ ಸ್ರವಿಸೆ | ವಕ್ಷದಲಿ ಕಂಗಳಲೀ 5 ತಪ್ಪು ತಪ್ಪೆಂದವನು | ದವಡೆಯನೆ ತಟ್ಟುತ್ತಅರ್ಪಿಸಲು ತನುಮನವ | ಭಕುತಿಯಿಂದಾ |ವಪ್ಪಿಕೊಳ್ಳುತ ಹನುಮ | ಸ್ವಪ್ನದಲಿ ಪೇಳಿದನುಅರ್ಪಿಸುವುದಲ್ಲಿಲಿ | ಶಾಲಿಗ್ರಾಮಗಳಾ6 ಹರಿಮಹಿಮೆ ಕೊಂಡಾಡಿ | ಬರದಂತೆ ತಾವ್ ಮಾಡಿನರಸಿಂಹ ವಸುದೇವ | ಸುತ ಶಾಲಿಗ್ರಾಮಗಳಾ |ಸ್ಥಿರಪಡಿಸಲಲ್ಲಿಲಿ | ಕರುಣದಿಂದಲಿ ದಿವ್ಯವರ ರೂಪದಿಂ ನಿಂತೆ | ಗುರು ಮಾರುತೀಶಾ 7 ಮಾಸ | ಎಂಟೈದನೇ ದಿನದಿನೆಂಟರೆಲ್ಲರು ಸೇರಿ | ಬಹು ಉತ್ಸವಗಳಾ |ಭಂಟರಾಮರ ನಿನಗೆ ಉಂಟು ಮಾಡಲು ಭಕ್ತಕಂಟಂಕಗಳ ನೀಗಿ | ವಾಂಛಿತವ ನೀನೇ 8 ಗುರುಗೋವಿಂದ ವಿಠಲ | ಪರಮ ಸೇವಕ ಹನುಮಪರಿ ಪರೀಯಲಿ ನಿನ್ನ | ಚರಣ ಯುಗ್ಮಗಳಾ |ಪರಮ ಭಕ್ತಿಲಿ ಸೇವೆ | ನೆರೆ ಮಾಳ್ಪ ಸುಖವಿತ್ತುಪರಮ ಪುರುಷನ ಕಾಂಬ | ವರ ಮಾರ್ಗ ತೋರೋ 9
--------------
ಗುರುಗೋವಿಂದವಿಠಲರು
ಮೋದದಲಿರಬೇಕಮ್ಮ | ಸುಮ್ಮನೆ ನೀನು ಮೋದದಲಿರಬೇಕಮ್ಮ ಪ. ಮೋದ ಶ್ರೀ ಗುರುಗಳ ಚರಣ ಕಮಲವನ್ನು ಮೋದದಿಂದಾಶ್ರಯಿಸಿ ಸುಖದಲಿರಲಿಬೇಕು ಲೋಕದ ಜನಗಳ ನುಡಿಗಳ ಲೆಕ್ಕಿಸದೆ ಲೋಕವಂದ್ಯನ ಚರಣ ಕಮಲವ ಸ್ಮರಿಸುತ ಅ.ಪ. ಪರಮಾತ್ಮನ ಕೃಪೆಗೆ ಕಾರಣವಿದು ಗುರುಕರುಣದ ಬಲವು ಅರಿಯದ ಮನುಜರ ಬಿರುನುಡಿಗೆ ಮನ ಕೊರಗಿಸದಂದದಿ ಹರುಷಪಡಲಿಬೇಕು 1 ಎಚ್ಚತ್ತು ನಡಿಯಬೇಕು | ಶ್ರೀ ಗುರುಸೇವೆ ಇಚ್ಛೆಯಿಂ ಮಾಡಬೇಕು ತುಚ್ಛ ಮಾತುಗಳಿಗೆ ಮನಕೊಡದೆ ಹರಿ ಮೆಚ್ಚುವಂದದಿ ಗುರು ಇಚ್ಛೆಯನರಿತು ನಡೆದು 2 ವಂದನೆ ನಿಂದ್ಯಗಳ | ಮೋಕ್ಷಾರ್ಥಿಯು ಒಂದಾಗಿ ಭಾವಿಸುತ ಮಂದರೋದ್ಧರನ ಮಾಯಕೆ ಮನದಿ ಮೋದಿಸುತ ಮಂದರಂದದಿ ಮನುಜರಿಗೆ ತೋರುತಲಿದ್ದು 3 ಮಾನವ ಜನ್ಮ ಸಾಧನ ಜನ್ಮವಮ್ಮ ಸಾಧಾರಣವಲ್ಲ ಸಾಧು ಸಜ್ಜನಸಂಗ ಸಾಧಿಸಿ ದುಷ್ಕರ್ಮ ಛೇದಿಸಬೇಕಮ್ಮ 4 ಚಿಂತೆಯನಳಿಯಬೇಕು | ಶ್ರೀ ಗುರು ಕರುಣ ಅಂತರ ತಿಳಿಯಬೇಕು ಸಂತತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ಭಜಿಸಿ ಮುಕ್ತಿ ಸಾಧಿಸಬೇಕು 5
--------------
ಅಂಬಾಬಾಯಿ
ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ. ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು ಸುಸ್ವಭಾವದ ಸರಳ ಹೃದಯಾನ್ವಿತಳು ನೀನು ಕಪಟ ಕಿರಾತನವನು 1 ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು ಕಪಟ ವೇಷದೊಳು ಬಂದ ವಿಷಕಂಠನವನು ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು 2 ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು ಮೂಜಗವು ಮೋಹಿಸುವ ಕೋಮಲಾಂಗಿಯು ನೀನು ಈ ಜಗವರಿಯೆ ಸರ್ವದ ಭಸ್ಮಾಂಗನವನು 3 ಕನಕ ಮಣಿಮಯದಂತಃಪುರವಾಸಿಯು ನೀನು ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು 4 ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು ಕೋರಿ ಗಜಚರ್ಮಧರಿಸುವ ಭಿಕಾರಿಯವನು ಭೂರಿ ಸುಖಭೋಗಂಗಳನನುಭವಿಸುವೆ ನೀನು ನಾರಸಿಂಹ ಮಂತ್ರ ಜಪಿಪ ವಿರಾಗಿಯವನು5 ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು ಕರುಣವಿಲ್ಲದೆ ಮೂಜಗವನುರುಹುವನವನು ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು ನರನಾದ ಭಕ್ತನೊಳು ಹೋರಾಡಿದವನು 6 ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ ಗಂಗಾಜನಕನ ಪ್ರಿಯತಮ ಸೋದರಿಯು ನೀನು ರಂಗೇಶವಿಠಲನ ಚರಣ ಸೇವಕನವನು 7
--------------
ರಂಗೇಶವಿಠಲದಾಸರು
ಮೋಸ ಹೋದೆನಯ್ಯ ಕೃಷ್ಣ ಮೋಸ ಹೋದೆನಯ್ಯಾ ಪ ಈಸು ಸುಲಭನೆಂದು ಪೇಳಿ ದೂರ ಸರಿವೆಯೇಕಯ್ಯ ಇಷ್ಟವಿಲ್ಲವೇ ನಾನು ನಿನಗೆ ಬೇಡವಾದೆನೇ ಅ.ಪ ಉಡಲು ನಿನ್ನವೆಲ್ಲಾವೆಂದು ಸುಳ್ಳು ಹೇಳಿತೇ ವೇದ ಕಡಲು ದಾಟಲು ಬೇರೆ ದಾರಿಯಿಲ್ಲವಯ್ಯ ಒಡಲು ನನ್ನದಾಗಿ ನೊಂದ ನನ್ನ ಕೂಡಯ್ಯ ಒಡೆಯಶೆಲ್ವರಾಯ ಕೂಡಿಕೊಳ್ಳೊ ಅಯ್ಯ1
--------------
ಸಂಪತ್ತಯ್ಯಂಗಾರ್
ಮೋಸಗೊಳ್ಳದಂತೆ ಕಾಯೊ ಶ್ರೀಶ ಕರುಣಾಳೊ ಆಶಾಮಗ್ನಮನವ ಹೃಷೀಕೇಶ ನಿನ್ನ ಪದದಲ್ಲಿರಿಸು ಪ. ಹಾದಿ ಬೀದಿಯಲ್ಲಿ ತಿರುಗಿ ಬಾಧೆಗೊಂಡು ಬಳಲಿ ಕಡೆಗೆ ಬೂದಿಯ ಮೇಲೊರಗಿ ಶಾಂತವಾದ ಶ್ವಾನವದು ಕಾದುಕೊಂಡು ಬಾಗಿಲಲ್ಲಿ ಕಾದಲುದರ ತುಂಬುವುದಕೆ ಸಾದರ ಕೊಂಡನ್ಯದಿ ರಸಾಸ್ವಾದನ ಗೈವಂತಾಗಿಹುದು 1 ಕರ್ಣಧಾರರಹಿತ ನಾವೆ ಅರ್ಣವದಿ ಭ್ರಮಿಸುವಂತೆ ದುರ್ನಿವಾರ ಮನಸಿನಿಂದ ಶೀರ್ಣನಾದೆನು ಸ್ವರ್ಣಗರ್ಭಪಾಲಕನು ಪರ್ಣವರವಾಹನ ಹೃದಯಾ- ಕರ್ಣಿಕಾದರಲ್ಲಿ ನಿಂತು ನಿರ್ಣಯವ ತಿಳಿಸು ಬೇಗ 2 ಆಸೆಗೊಂಡು ದುರ್ವಿಷಯದಿ ಬೇಸರದೆ ಭ್ರಾಂತಿಯಿಂದ ದೋಷ ದುರಿತಂಗಳಿಗವಕಾಶನಾದೆನು ದಾಸನೆಂಬ ದೃಷ್ಟಿಯಿಂದ ಕ್ಲೇಶವೆಲ್ಲ ಓಡಿಸಯ್ಯ ಶೇಷಗಿರಿವರ ಶಿಖರಾವಾಸ ನೀನೆ ಶರಣ ಜೀಯಾ 3
--------------
ತುಪಾಕಿ ವೆಂಕಟರಮಣಾಚಾರ್ಯ