ಒಟ್ಟು 12958 ಕಡೆಗಳಲ್ಲಿ , 134 ದಾಸರು , 6175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಗಿ ಎದ್ದನು ರಂಗ, ಮಕ್ಕಳ ಮಾಣಿಕ ಕೃಷ್ಣ |ಛಲ ಹಿಡಿದನು ನೋಡೆ ಮೊಲೆಕೊಡೆ ಕೃಷ್ಣಗೆ ಪಜಲದೊಳು ತಮನ ಮರ್ದಿಸಿ ಅಂದು ಮತ್ಸ್ಯನಾಗಿ |ಬಲುಗಿರಿಯ ನೆಗಹಿ ಮರೆಮಾಡಿ ಕೂರ್ಮನಾಗಿ ||ನೆಲನ ಒಯ್ದವನ ಕೊಲುವೆನೆಂದು ವರಹನಾಗಿ |ಬಲುಭಕ್ತಿಗಾಗಿ ಕಂಬದಿ ನಾರಸಿಂಹನಾಗಿ 1ಚಿಕ್ಕ ರೂಪದಿಂದ ಬಲಿಯ ದಾನವ ಬೇಡಿ |ಉಕ್ಕಿನ ಕೊಡಲಿಯ ಪಿಡಿದ ಪರಶುರಾಮ ||ಮಿಕ್ಕಿದ ತಲೆಯ ಚೆಂಡಾಡಿದ ಶ್ರೀರಾಮ |ಸೊಕ್ಕಿದ ಕಂಸನ ಕೊಲುವೆನೆಂದ ಕೃಷ್ಣ 2ಬಲು ಪತಿವ್ರತೆಯರ ವ್ರತವನಳಿದಬುದ್ಧ|ಕಲಿಯಾಗಿ ಖಡಗುವ ಪಿಡಿದು ಕುದುರೆ ಏರಿ ||ಒಲಿದು ಭಕ್ತರನೆಲ್ಲ ಸಲಹುವೆನೆಂತೆಂದು |ಚೆಲುವ ಪುರಂದರವಿಠಲ ತೊಟ್ಟಿಲೊಳು 3
--------------
ಪುರಂದರದಾಸರು
ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
--------------
ಪುರಂದರದಾಸರು
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |ಗಹನವಿಕ್ರಮಭೀಮ ಮಹೀಧರಪ ಜಾಧವ ಪಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |ನಿಟಿಲಲೋಚನ ಸುರಪಕ್ಷ ಹೇ || ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷವಹ್ನಿ|ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||ಕಠಿಣ ಸಂಸಾರದಿತ್ರುಟಿಮಾತ್ರ ಸುಖ ಕಾಣೆ |ವಟುರೂಪಿ ಭಕುತರ ಕಟಕದೊಳಿರಿಸೆನ್ನ1ಇಳಿರಥ ನಗಶರಸೋಮಮೌಳಿ|ನಳನಂದಿನಿಪ ಸುತ ರಾಮ ನಾಮಾ |ನಲಿದು ಪಾಡುವ ಗುಣಧಾಮ ರೌಪ್ಯಾ |ಬಲಾವಾಸಾನಂಗ ವಿರಾಮಾ ||ಆಹಾ||ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ 2ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |ಮಂಚ ನೀನಾಹೆ ಖಳರನಾ ||ಆಹಾ||ಹಿಂಚಾಗಿ ಅಳಿವಂಥ ಹಂಚಿಕೆಯಲಿವರ|ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ 3ಅಹಂಕಾರಾಧೀಶ ನಭೇಶತಾತ|ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |ದಿನಪತೇಕ್ಷಣನೆ ಅಶೇಷಾಮೋದ|ಬಹುಮೋದಸಕ್ತಾಯನ್ನಾಶಾ ||ಆಹಾ||ದಹಿಸೊಜಠರಪೋಷ ವಹಿಸಿ ಬೆಂಡಾದೆನೊ |ಅಹಿಮಲಾಂಧಕಾಸುರ ಗುಹಹ ಅಶ್ವತ್ಥಾಮ 4ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |ನಕ್ರಾಹನಂಘ್ರಿಯನಿಶದಲ್ಲಿ |ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |ವಿಕ್ರಮಕರವ್ಯೋಮಕೇಶ||ಆಹಾ||ಶುಕ್ರಪೂಜಿತಪಾದಅಕ್ರೂರಯನ್ನೊಳಿ |ದ್ದ ಕ್ರಮವೆಣಿಸದೆ ಸುಕೃತವೊದಗಿಸೊ5
--------------
ಪ್ರಾಣೇಶದಾಸರು
ಮಹಾಪುರುಷನೆತ್ತ ತಾನೆತ್ತಮಹಾಪುರುಷರ ಶ್ರೇಷ್ಠವೇನೆಂದು ಅರಿಯನುಪಕುದುರೆ ತಾನಹೆನೆಂದು ಕತ್ತೆ ಬೀದಿಯೊಳು ನಿಂತುಕುದುರೆ ಕುಣಿತವನು ಕುಣಿದ ತೆರದಿವಿಧವಿಧದ ಓದುವೋದಿ ಮಹಾಪುರುಷನಹೆನೆಂದರೆಸದಮಲಾನಂದರ ಸರಿತಾನು ಬಹನೇ1ಹುಲಿಯು ತಾನಹೆನೆಂದು ಹುರುಡಿರಿಗೆ ನರಿ ಮೈಯ್ಯಬಲವಂತದಿ ಸುಟ್ಟುಕೊಂಡ ತೆರದಿಹಲವು ಶಾಸ್ತ್ರವನೋದಿ ಮಹಾಪುರುಷನಹೆನೆಂದರೆಬಲು ಮಹಾತ್ಮರ ಸರಿತಾನು ಬಹನೇ2ಮಹಾಪುರುಷನೆಂಬಾತ ಮಹಾಸಮಾಧಿಯಲಿ ಮುಳುಗಿಮಹಾ ಚಿದಾನಂದಗುರುತಾನಾಗಿ ಇಹನುಮಹಾಪುರುಷತಾನೆಂದು ಕಾಪುರುಷ ಪೇಳಿದಡೆಮಹಾಪುರುಷ ಸರಿತಾನು ಬಹನೇ3
--------------
ಚಿದಾನಂದ ಅವಧೂತರು
ಮಹಾಲಕ್ಷುಮಿಗೆನಿತ್ಯಮಂಗಳಶುಭಮಂಗಳಮಹಾವಿಷ್ಣುವಿನ ರಾಣಿಗೆ ಮಹಾ ಮಂಗಳ ಪ.ಪೂರ್ಣಚಂದ್ರಾರ್ಣವ ಪೂರ್ಣಗುಣಾರ್ಣವಪೂರ್ಣಮನೋರಥದಾಯಕಿಗೆ ಸುಪರ್ಣೇಂದ್ರವಾಹನನರ್ಧಾಂಗಿ ದೇವಿಗೆ ವಿಶ್ವ ನಾಯಕಳಾದ ಜಗನ್ಮಾತೆಗೆ 1ಕರವೀರಪುರದಲ್ಲಿ ನೆರಹಿದ ಭಕ್ತರಕರಕರದಭೀಷ್ಠೆಯ ಕೊಡುವಂದಿಗೆಕರಕಮಲಗಳಲ್ಲಿ ಅಕ್ಷಯಾಮೃತಕುಂಭಧರಿಸಿದ ಜಾಣೆ ಕಲ್ಯಾಣಿಗೆ ನೀಲವೇಣಿಗೆ 2ಶ್ರೀಮದನಂತಾಸನ ವೈಕುಂಠಶ್ರೀ ಮತ್ಯ್ವೇತದ್ವೀಪನಿವಾಸಿನಿಸ್ವಾಮಿ ಪ್ರಸನ್ನವೆಂಕಟನ ಪಟ್ಟದರಾಣಿಕಾಮಿತಾರ್ಥದಾಯಿ ಕಲ್ಯಾಣಿಗೆ 3
--------------
ಪ್ರಸನ್ನವೆಂಕಟದಾಸರು
ಮಾಡಿದನೆನ್ನ ಫಕೀರನಾಗಿ ಸದ್ಗುರುಮಾಡಿದನೆನ್ನ ಫಕೀರನ ನೋಡಲಿಕ್ಕಾಶ್ಚರ್ಯಪ್ರಪಂಚ ಕಳೆದೆ ನಾಮರೂಪಕೆ ದೂರಪಅನುಭವಕಪ್ಪರ ಹೃದಯದ ಜೋಳಿಗೆಎನ್ನುವ ಕಂಕುಳೊಳಿಟ್ಟುಅನಿಮಿಷದೃಷ್ಟಿ ಅರುಹಿನಕಪನಿಅಮೃತ ಕಮಂಡಲು ಕೊಟ್ಟು1ನಾದದ ಕಿನ್ನರಿ ಕೈಯೊಳಗಿಟ್ಟುಟೊಪ್ಪಿಗೆ ಪೆಟ್ಟಿಗೆಯಿಟ್ಟಬೋಧದ ಅಂಗಿಯು ನಿರ್ಗುಣಲುಂಗಿಯ ಸೈರಣೆಲುಟಿಕೆಯ ಕೊಟ್ಟ2ಈಪರಿಮಾಡಿಯೆ ಬಯಲನುಹಿಡಿ ಎಂದು ಕರವನು ನೆತ್ತಿಯಲಿಟ್ಟಭೂಪ ಚಿದಾನಂದ ಫಕೀರನಾಗಿಯೆತಿರುಗೆಂದಪ್ಪಣೆ ಕೊಟ್ಟ3
--------------
ಚಿದಾನಂದ ಅವಧೂತರು
ಮಾಡುದಾನಧರ್ಮಪರಉಪಕಾರವ ಮರೆಯದಿರೆಚ್ಚರಿಕೆಪ.ಕೇಡ ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ||ಅ||ಬಾಳು ಬದುಕುಸಿರಿ ಇರುವಾಗ ಬಂಧು ಬಳಗಗಳೆಚ್ಚರಿಕೆ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹಾಲು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ 1ಮೂಢರ ಒಡನಾಡಿ ಮುಂದೆ ಕೆಡಲು ಬೇಡಮೋಸ ನೋಡೆಚ್ಚರಿಕೆನಾಡೊಳು ಸುಜನರ ನೋಡಿ ನಡೆಕಂಡ್ಯ ನಟನೆ ಬೇಡೆಚ್ಚರಿಕೆ 2ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆ |ನಿನ್ನಾಯು ಮುಗಿದಿರಲು ಯಮದೂತರುಬಂದು ಎಳೆಯುವರೆಚ್ಚರಿಕೆ 3ಒಬ್ಬರಂತೆಲ್ಲರ ನೋಡಿ ಸತ್ಕರ್ಮದಿ ಉಬ್ಬಬೇಡೆಚ್ಚರಿಕೆ |ಕಬ್ಬು ಬಿಲ್ಲನ ಪಿತನ ಏಕಾಂತ ಭಾವದಿಂನೆರೆನಂಬು ಎಚ್ಚರಿಕೆ 4ಹೆಣ್ಣು ಹೊನ್ನು ಮಣ್ಣು ನಿನ್ನನಗಲಿಸಿ ಹೋಗುವರೆಚ್ಚರಿಕೆ |ಮುನ್ನಮಾಡಿದ ಪುಣ್ಯ ಬೆನ್ಹತ್ತಿ ಬರುವುದುಮುಂದೆ ನೋಡೆಚ್ಚರಿಕೆ 5ತಿಂದೋಡಿ ಬಂಧುಬಳಗ ತಪ್ಪಿಸಿ ಕೊಂಬರೆಂದು ನೋಡೆಚ್ಚರಿಕೆ |ಎಂದೆಂದು ಅಗಲದ ಬಂಧು ಶ್ರೀಹರಿನಮಗೆಂದು ನೋಡೆಚ್ಚರಿಕೆ 6ಕಾಲನ ದೂತರು ಯಾವಾಗ ಎಳೆವರೋ ಕಾಣದು ಎಚ್ಚರಿಕೆ |ಬೇಲೂರು ಪುರವಾಸ ಪುರಂದರವಿಠಲನ ಆಳಾಗು ಎಚ್ಚರಿಕೆ 7
--------------
ಪುರಂದರದಾಸರು
ಮಾಡುವ ಬನ್ನಿ ನಾವು ನೀವು ಎಲ್ಲರು ಏಕಾರತಿಯಗೂಢ ಚಿದಾನಂದನೊಳು ಕೂಡಿಕೊಂಬರ್ಥಿಯಪನೀರು ಲವಣ ಕೂಡಿ ಒಂದೇ ನೀರು ನಿಜವೆ ಆದಂತೆಕಾರಣಾತ್ಮಕನೆಲ್ಲ ಕರಗಿಹೋಗುವ ಏಕಾರತಿ1ಉರಿಯುವ ಕರ್ಪೂರವ ತಗುಲಿ ಉರಿಯು ತಾನಾಗಿ ಬೆಳಗಿದಂತೆನರನು ತಾನೇ ಸಾಕ್ಷಾತ್ ಹರನಾದುದೇ ಏಕಾರತಿ2ಕೀಟಭೃಂಗ ಧ್ಯಾನದಿಂದ ಕೀಟ ಭೃಂಗವಾದ ತೆರದಿಪಾಡಿ ಚಿದಾನಂದ ತಾನೇ ತಾನಾದುದೇ ಏಕಾರತಿ3
--------------
ಚಿದಾನಂದ ಅವಧೂತರು
ಮಾಡುಸಂಸಾರ ಅಂಟದಂದದಿ ಮನುಜಮಾಡಿದರೆ ಸತ್ಪುರುಷರೊಳಗೆ ನೀ ಕುಲಜಪಜಾರೆ ಹೆಂಡತಿಯಾಗೆ ಮನಸಿಗೆ ತರಬೇಡಆರಾದರಭಿಮಾನ ಹಚ್ಚಿಕೊಳಬೇಡಶರೀರ ನಿನ್ನದು ಈಗ ಎಂದು ಎನಬೇಡನೂರು ದೂಷಣವಾಡೆ ನೋಯಬೇಡ1ಎನ್ನ ಮನೆ ಪಶು ಬಂಧು ಇಂದೀಗ ಬೇಡಅನ್ಯರನು ಬೇರೆಯವರೆಂದು ನುಡಿಬೇಡಭಿನ್ನ ಪರಮಾತ್ಮನೆಂದು ಜಗವ ಕಾಣಲು ಬೇಡನೀ ಬ್ರಹ್ಮೆಂಬುದನು ಮರೆಯಬೇಡ2ಮಾಡಬೇಕೆನಿಸಿದರೆ ಸಂಸಾರವನುಮಾಡುಕೂಡಿದರೆ ಹತ್ತುವುದು ನಿನಗೆ ಭವಕೇಡುಪೀಡೆಯಿದು ಮಮತೆಯ ಬಿಟ್ಟು ಬೆರದಾಡುಗೂಢ ಚಿದಾನಂದ ನೀನಹುದಲ್ಲವೇನೋಡು3
--------------
ಚಿದಾನಂದ ಅವಧೂತರು
ಮಾಡೋ ಸುವಿಚಾರ ಸಾಧನಾ |ಹವಣಿಕಿಯಲಿ ನಿನ್ನ ಮಾಡೊಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಮಾಡಿ ನಿನ್ನ ಕಡಿ ಮೋಹ ಬೇಡಿ ಘನಗೂಡಿನಲ್ಲಿಒಡಗೂಡಿಸರ್ಕನೆ| ಮಾಡೊಅ. ಪ.ಶ್ರುತಿತತಿಯ ಪೇಳಿಹ ವಚನ ಸತತ ಮಾಡೊನೀ ಮಥನದನಾ | ಇತರ ಭಾವನತಿಗಳೆದು |ಶಾಂತಿನಿಜ ಸ್ಥಿತಿಯ ತಾಳಿ ಸದ್ಗತಿಪಡೆಯೊ ನೀ ಮಾಡೊ1ಪರಿಪರಿಯ ಜನ್ಮಂಗಳನು | ಧರಿಸಿ ಬಟ್ಟಿಬಹುಕ್ಲೇಶವನು ಪರಿಹರಿಸಿಗುರುವರನ ಕರುಣದಿಂದರಿತುಕೊಳ್ಳೊನಿನ್ನರಿವು ನೋಡಿ ನೀ ಮಾಡೊ2ಸ್ಥೂಲ ಸೂಕ್ಷ್ಮ ಕಾರಣದುದಯಾ |ಮೂಲಉನ್ಮನಿಕೀಲ ಸಾಕ್ಷಿಯನುಕೂಲಶಂಕರನ ಲೀಲೆ ನೋಡಿ ನೀ ಮಾಡೊ3
--------------
ಜಕ್ಕಪ್ಪಯ್ಯನವರು
ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು
ಮಾನಭಂಗವಮಾರಿ ಮೇಲುಪಚಾರವ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಏನ ಮಾಡಿದರಿಲ್ಲಿ ಇರಬಾರದಯ್ಯ ಪ.ಕುಂದುಗಳನಾಡಿ ಕುಚೋದ್ಯಗಳನೆ ಮಾಡಿಕಂದ ಬಾಯೆಂದು ಬಣ್ಣಿಸಿ ಕರೆಯಲುಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದುಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ 1ನಗಗೇಡಿ ಮಾಡಿ ನಾಲುವರೊಳಗೆ ಕೈಯಮುಗಿವೆ ಬಾಯೆಂದು ಬಣ್ಣಿಸಿ ಕರೆಯಲುಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲುತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ 2ಆರ್ಥ ಹೋದರು ಪ್ರಾಣ ಹೋದರೂಮಾನವ್ಯರ್ಥವಾಗದ ಹಾಗೆ ಕಾಯಬೇಕುಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ 3
--------------
ಪುರಂದರದಾಸರು
ಮಾನಹೀನರಿಗೆ ಅಭಿಮಾನವೇಕೆ - ಪ್ರಧಾನಿಯಿಲ್ಲದ ಅರಸುತನವೇಕೆ ಕೃಷ್ಣಾ ? ಪ.ಕಾಡಿನೊಳು ತಿರುಗುವಗೆಕನಕ ಭೂಷಣವೇಕೆ ?ಓಡಿನಲಿ ಉಂಬುವಗೆ ಹರಿವಾಣವೇಕೆ ?ಬೇಡಿದರೆ ಕೊಡದ ಲೋಭಿಗೆ ಬಿಂಕವೇಕೆ ?ಪಾಡಲರಿಯದೆ ಪ್ರೌಡತನವೇಕೆ ಕೃಷ್ಣಾ ? 1ಪತಿ ಮೀರಿ ನಡೆವಳ ವ್ರತ ನೇಮತನವೇಕೆ ?ಸತಿಗಳುಕಿ ನಡೆವವಗೆ ಸ್ವಾತಂತ್ತ್ಯವೇಕೆ ?ಮತಿಗೆಟ್ಟು ತಿರುಗುವಗೆ ಮಂತ್ರ - ತಂತ್ರಗಳೇಕೆ ?ಅತಿಯಾಸೆ ಬಿಡದ ಸಂನ್ಯಾಸಿ ತಾನೇಕೆ 2ಕಾಮವಿಲ್ಲದವರಿಗೆ ಕಾಂತಿಯರ ಗೊಡವೇಕೆ ?ಪ್ರೇಮವಿಲ್ಲದ ಬಂಧು - ಬಳಗವೇಕೆ ?ಸ್ವಾಮಿ - ಶ್ರೀ ಪುರಂದರವಿಠಲ ನೆನೆಯದತಾಮಸದ ಜನರಿಂಗೆ ಕೈವಲ್ಯವೇಕೆ ? 3
--------------
ಪುರಂದರದಾಸರು
ಮಾಮಝ ಭಾಪುರೆ ಭಳಿರೆ ಹನುಮಂತರಾಮಪದ ಸೇವಿಪ ವೀರ ಹನುಮಂತ ಪಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನಪಟ್ಟಕನುವಾದ ಸಿರಿವಂತ ಹನುಮಂತ 1ಅಂಬರಕೆ ಪುಟನೆಗೆದು ಅಂಬುಧಿಯನೆರೆದಾಟಿಕುಂಭಿನಿಯ ಮಗಳಿಗುಂಗುರವನಿತ್ತು |ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆಗಂಭೀರ ವೀರಾಧಿವೀರ ಹನುಮಂತ 2ಅತಿದುರಳ ರಕ್ಕಸನು ರಥದ ಮೇಲಿರಲು ರಘು-ಪತಿಯು ಪದಚರಿಯಾಗಿ ನಿಂತಿರಲು ನೋಡಿ ||ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆಅತಿ ಭಯಂಕರ ಸತ್ತ್ವವಂತ ಹನುಮಂತ 3ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದುದೃಢಭಕ್ತಿಯಿಂದ ಮೌನದಿ ಕುಳಿತು ||ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆಕೊಡುತ ಸವಿದುಂಡ ಗುಣವಂತ ಹನುಮಂತ 4ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮತೃತೀಯದಲಿಗುರುಮಧ್ವಮುನಿಯೆನಿಸೀ ||ಪ್ರತಿಯಿಲ್ಲದಲೆ ಮೆರೆದೆಪುರಂದರವಿಠಲನಸುತ್ತ ನಿನಗಾರು ಸರಿ -ವಿಜಯಹನುಮಂತ5
--------------
ಪುರಂದರದಾಸರು
ಮಾಯಾಮಯ ಜಗವೆಲ್ಲ ಇದ-ರಾಯತ ತಿಳಿದವರಿಲ್ಲ ಪ.ಕಾಯದಿಂ ಜೀವನಿಕಾಯವ ಬಂಧಿಸೆನೋಯಿಸುವಳು ಸುಳ್ಳಲ್ಲ ಅ.ಪ.ತಿಳಿದು ತಿಳಿಯದಂತೆ ಮಾಡಿ ಹೊರ-ಒಳಗಿರುವಳು ನಲಿದಾಡಿಹಲವು ಹಂಬಲವ ಮನದೊಳು ಪುಟ್ಟಿಸೆನೆಲೆಗೆಡಿಸುವಳೊಡಗೂಡಿ 1ಯೋಷಿದ್ರೂಪವೆ ಮುಖ್ಯ ಅ-ಲ್ಪಾಸೆಗೆ ಗೈವಳು ಸಖ್ಯದೋಷದಿ ಪುಣ್ಯದವಾಸನೆತೋರ್ಪಳುಜೈಸಲಾರಿಂದಶಕ್ಯ 2ಕರ್ತಲಕ್ಷ್ಮೀನಾರಾಯಣನಭೃತ್ಯರ ಕಂಡರೆ ದೂರಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ-ರಾರ್ಥಕೆ ಕೊಡಳು ವಿಚಾರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ