ಒಟ್ಟು 721 ಕಡೆಗಳಲ್ಲಿ , 91 ದಾಸರು , 619 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುತ ದೇವರ ಹೊಂದಿರೋ ಮೂಜಗದ |ಗುರುಮರುತ ದೇವರ ಹೊಂದಿರೋ ಪಮರುತ ದೇವರ ಹೊಂದಿದವರ ಪಾಪವು ಪೋಗಿ |ಹರಿಮಂದಿರವನೈದುವದಕೆ ಸಂದೇಹವಿಲ್ಲ ||ಅ. ಪ||ದಶರಥ ಸುತನಂಗನೆಯ ಕದ್ದೊಯ್ದಿರಲಾಗಿ |ದಶಕವಾನರಸ್ತೋಮರವಿಜನಾಜ್ಞಾ ||ದೇಶದಿಂದೆಲ್ಲರಾಶೆ ಭಯದಲಡಗಿ ರಕ್ಷಿಸೋ |ಶ್ವಸನಾ ಯೆನಲು ಪೋಗಿ ಶೀಘ ್ರವಾರ್ತೆಯ 1ಕುರುಜನುಪಟಳಕೆ ಪಾರ್ಥಾರಳಲಿವನ|ಚರಿಸಲುತವಕಬೀಳದೆ ಪ್ರಾಂತಕ್ಕೆ ||ದುರುಳರ ಸದೆದು ಭೂಭಾರವ ಕಳೆದು ಸಹೋದ- |ರರ ಪ್ರೀತಿಪಡಿಸಿ ಕೃಷ್ಣನ ದಯೆ ಪಡೆದ 2ಗುಣಪೂರ್ಣಅನಘಶ್ರೀ ಪ್ರಾಣೇಶ ವಿಠಲನ ನಿ- |ರ್ಗುಣನೆಂದು ಅಸುರರು ದುರ್ಮತ ಸ್ಥಾಪಿಸೆ ||ಘನಶಾಸ್ತ್ರ ವಿರಚಿಸಿ ಐಕ್ಯವ ಬಿಡಿಸಿ ಸ |ಜ್ಜನರ ಪೊರೆವ ಶ್ರೀ ಆನಂದ ಮುನಿಪರೆಂಬ 3
--------------
ಪ್ರಾಣೇಶದಾಸರು
ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು
ಮಹಾಪುರುಷನೆತ್ತ ತಾನೆತ್ತಮಹಾಪುರುಷರ ಶ್ರೇಷ್ಠವೇನೆಂದು ಅರಿಯನುಪಕುದುರೆ ತಾನಹೆನೆಂದು ಕತ್ತೆ ಬೀದಿಯೊಳು ನಿಂತುಕುದುರೆ ಕುಣಿತವನು ಕುಣಿದ ತೆರದಿವಿಧವಿಧದ ಓದುವೋದಿ ಮಹಾಪುರುಷನಹೆನೆಂದರೆಸದಮಲಾನಂದರ ಸರಿತಾನು ಬಹನೇ1ಹುಲಿಯು ತಾನಹೆನೆಂದು ಹುರುಡಿರಿಗೆ ನರಿ ಮೈಯ್ಯಬಲವಂತದಿ ಸುಟ್ಟುಕೊಂಡ ತೆರದಿಹಲವು ಶಾಸ್ತ್ರವನೋದಿ ಮಹಾಪುರುಷನಹೆನೆಂದರೆಬಲು ಮಹಾತ್ಮರ ಸರಿತಾನು ಬಹನೇ2ಮಹಾಪುರುಷನೆಂಬಾತ ಮಹಾಸಮಾಧಿಯಲಿ ಮುಳುಗಿಮಹಾ ಚಿದಾನಂದಗುರುತಾನಾಗಿ ಇಹನುಮಹಾಪುರುಷತಾನೆಂದು ಕಾಪುರುಷ ಪೇಳಿದಡೆಮಹಾಪುರುಷ ಸರಿತಾನು ಬಹನೇ3
--------------
ಚಿದಾನಂದ ಅವಧೂತರು
ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಲೆಮುಟ್ಟಲಿ ಬಂತೆ ಬಿಕನಾಶಿಪಮುಟ್ಟೋ ನೀನೇ ಮಡಿಯೂ ನೀನೇಕೆಟ್ಟಿತು ನಿನಮಡಿ ಮೊದಲೇ ಜಲದಲಿ ನೀ ಮುಳುಗೆಕಡೆಯಲಿ ಆ ಉದಕವನೇ ತರುವೆದೇವರಿಗಿಂದಭಿಷೇಕವ ಮಾಡುತಅಹಂನ ಬಿಡು ನಿನ ಬಿಕನಾಶಿ1ಎಲುಬು ಚರ್ಮದಿ ಮಲಮೂತ್ರದ ಗೂಡಲಿನಲಿಯುತಲಿದ್ದೆ ಬಿಕನಾಶಿನೆಲೆಗೊಂಡಾ ನವ ದ್ವಾರದ ಜಲದೊಳುತೊಳಲುತ ಬಿಕನಾಶಿ2ಹುಟ್ಟುತಸೂತಕಹೊಂದುತಸೂತಕನಟ್ಟ ನಡುವೆ ಬಿಕನಾಶಿಪಟ್ಟಣದಾ ಕಾವೇರಿ ಮುಳುಗಲುಮುಟ್ಟು ತೇಲಿಯಿತೆ ಬಿಕನಾಶಿ3ಉತ್ತಮ ಹತ್ತಿ ಬತ್ತಿರಲಾಂಜನವೃಕ್ಷದಿ ಬೆಳೆವುದೆ ಬಿಕನಾಶಿಉತ್ತಮ ರೋಧನ ಭಾರವ ಕೆಡಿಸಲುಕೆಟ್ಟಿತು ನಿನ ಮಡಿ ಬಿಕನಾಶಿ4ನಾನಾ ಶಾಸ್ತ್ರವನೋದಿ ನಾ ನಿನ್ನ ಮರೆವೆನುಹೀನವ ಬಿಡು ನಿನ್ನ ಬಿಕನಾಶಿನಾನಾ ಶಾಖದಲಿ ಇರಲಾದರೂರ್ವಿಅದುರುಚಿತಿಳಿವುದೆ ಬಿಕನಾಶಿ5ಚರ್ಮವು ತೊಳೆದರೆ ಕರ್ಮವು ಹೋಯಿತೆಕರ್ಮವು ಬಿಡದು ನಿನ್ನ ಬಿಕನಾಶಿಒಮ್ಮೆ ಚಿದಾನಂದ ಪಾದವ ಸ್ಮರಿಸಲುನಿರ್ಮಲವಾದೆಯ ಬಿಕನಾಶಿ6
--------------
ಚಿದಾನಂದ ಅವಧೂತರು
ಮುತ್ತೈದೆಯಾಗಿರಬೇಕು ಮುದದಿಂದಲಿ |ಹತ್ತುನೂರು ನಾಮದೊಡೆಯಹರಿನಮ್ಮ ಪತಿಯೆಂದುಪ.ಗುರುಮಧ್ವಶಾಸ್ತ್ರವನು ಓದುವುದೆ ಮಾಂಗಲ್ಯ |ವರವೈರಾಗ್ಯವೆಂಬ ಒಪ್ಪುವ ಮೂಗುತಿ ||ತಾರತಮ್ಯದರಿಮೆ ತಾಯಿತಿ ಮುತ್ತುಸರ |ಕರುಣರಸಗಳೆಉಳ್ಳಕಟ್ಟಾಣಿಕಟ್ಟಿಕೊಂಡು1ಹರಿಕಥೆಯ ಕೇಳುವುದೆ ಕಿವಿಗೆ ಮುತ್ತಿನ ಓಲೆ |ನಿರುತ ಸತ್ಕರ್ಮವೇ ನಿಜಕಾಂತಿಯು ||ಪರಮ ಭಕ್ತರ ಪಾದರಜ ಹರಳು ಬಂಗಾರ |ಗುರುಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ 2ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು |ಕೊಡುವ ಧರ್ಮವೆಂಬ ಕುಪ್ಪಸವ ತೊಟ್ಟು ||ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ |ಧೃಡ ಭಕ್ತಿಯೆಂಬಂಥ ಕಡಗ - ಬಳೆ ಇಟ್ಟುಕೊಂಡು 3
--------------
ಪುರಂದರದಾಸರು
ಯಮದೂತರು ನರನನು ಎಳೆದೊಯ್ದುದನುಎಲ್ಲರಿಗೆ ಹೇಳುವೆನುಕುಮತಿಯಲಿ ಸದ್ಗುರು ಚರಣವ ಹೊಂದದಕೇಡಿಗಾಗುವ ಫಲಗಳನುಪಮುರಿದ ಮೀಸೆಯಲಿ ಮಸಿದೇಹದಲಿಉರಿಹೊಗೆ ಹೊರಡುವ ಉಸುರಿನಲಿಕರುಳು ಮಾಲೆಯಲಿ ಕೋರೆದಾಡೆಯಲಿಜರೆಮೈ ಹಸಿದೊಗಲುಡುಗೆಯಲಿ1ಝಡಿವ ಖಡುಗದಲಿ ಹೂಂಕಾರದಲಿಕಡಿದವಡೆಯಲಿ ಹುರಿಮೀಸೆಯಲಿಬಿಡಿಗೂದಲಲಿ ಕರದ ಪಾಶದಲಿಸಿಡಿಲ ತೆರೆದ ಬಿಡುಗಣ್ಣಿನಲಿ2ಮಿಡುಕುತ ಸತಿಸುತರನು ಆಪ್ತರನುಹಿಡಿದೊಪ್ಪಿಸುತಿಹ ವೇಳೆಯಲಿಕಡಿಯಿರಿ ಹೊಡಿಯಿರಿ ತಿನ್ನಿರಿ ಎನುತಲಿ ಧುಮುಕಲುಬಿಡುವನು ಪ್ರಾಣವ ಕಾಣುತಲಿ3ಯಾತನೆ ದೇಹವ ನಿರ್ಮಿಸಿ ಅದರೊಳುಪಾತಕಮನುಜನ ಹೊಗಿಸುತಲಿಘಾತಿಸುವ ನಾನಾಬಗೆ ಕೊಲೆಯಲಿಘನನುಚ್ಚು ಕಲ್ಲೊಳಗೆ ಎಳೆಯುತಲಿ4ಈ ತೆರವೈ ಈ ಧರ್ಮ ಶಾಸ್ತ್ರವನೀತಿಯ ತೆರದಲಿ ಮಾಡುತಲಿಪಾತಕವನು ಬಹುಪರಿ ಶಿಕ್ಷಿಪರುದಾತಚಿದಾನಂದನಾಜೆÕಯಲಿ5
--------------
ಚಿದಾನಂದ ಅವಧೂತರು
ರಂಗ ಒಲಿದ ದಾಸರಾಯರ - ಪಾದಯುಗ್ಮಕಂಗಳಿಂದ ನೋಡಿದಾವರÀ - ಪಾಪಂಗಳೆಲ್ಲಹಿಂಗಿಪೋಪವಲ್ಲೊ ಸತ್ವರ - ಏನು ಪೇಳಲೀವರಾ ಪತುಂಗಮಹಿಮೆ ತೋರಿ ಜನಕೆಮಂಗಳಾವ ಕೊಡುವರಿಂಥಾ ಅ.ಪಬ್ಯಾಗವಾಟನಾಮ ಗ್ರಾಮದಿ - ನಾರಸಿಂಹಭಾಗವತಆದಿ ಶಾಸ್ತ್ರಭೋಗಿಶಯನ ಕರುಣದಿಂದಆಗ ಈಗ ಎನದೆ ಸದಾನುರಾಗ ತೋರುವಂಥ 1ಮುದದಿ ದಾಸ್ಯಭಾವದಿಂದಲಿ - ಜಗದಿ ಜನರಹೃದಯಭಾವಪೂರ್ತಿಯಿಂದಲಿ- ಪ್ರೀತಿಗೈದುಪದುಮನಾಭನ ಪ್ರೀತಿಯಿಂದಲಿ - ಗುಣಗಳನ್ನುಭುಧರಮ್ಯಾಳಸಂಗದಿಂದಮುದದಿ ಮನವ ಧರಿಸಿನಿತ್ಯಪದುಮನಾಭನ ಭಜನಿಗೈಯುತ - ತತ್ವಸಾರವದನದಿಂದುಚ್ಭಾರ ಗೈಯುತ - ತೀರ್ಥಯಾತ್ರೆಮುದದಿಕಾಯಧರಿಸಿ ಹರಿಯ ಭಜನೆಗೈದು ಸುಖಿಸಿದಂಥ2ಖ್ಯಾತ ಶುಕ್ಲ ಬಾದ್ರಪದದಿ ನವಮಿ ಜಗ -ನ್ನಾಥ ವಿಠಲಪಾದಪದುಮದಿ ಮನವೆ ಮೊದಲುಭೂತಕಾಶಮಾರ್ಗ ಸಂಗದಿ - ಹೃದಯ ಮಂಡಲಧಾತನಿಂದ ಕೂಡಿ ವಿ -ಧಾತನಾಂಡ ಭೇಧಿಸಿ ಗುರುಜಗ -ನ್ನಾಥ ವಿಠಲಪಾದಪೊಂದಿದಾ - ಈತನಂಥಆತುರಾದಿ ಕೊಡುವ ನಂದನ - ಏನು ಮಹಿಮೆವಾತದೇವನ ನಿಜಾವೇಶದಿಂದ ಯುಕ್ತರಾದ 3
--------------
ಗುರುಜಗನ್ನಾಥದಾಸರು
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
--------------
ಪುರಂದರದಾಸರು
ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು
ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ಪಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾಸಿಂಧುಯತೀಂದ್ರರ ಅ.ಪ.ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ - ಸದ್ಗಣಸಾಂದ್ರ|ಗುರುಗಳಕರಕಮಲದಿ ಜನಿಸಿದ ಸುಕುಮಾರಾ - ಕುಜನ ಕುಠಾರಾ ||ನೆರೆನಂಬಿದ ಭಕುತರನನುದಿನದಲಿ ಪೊರೆವಾ - ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ - ವರಗಳ ಬೇಡಿ1ಕರಿಹಿಂಡೊಳುಹರಿಹೊಕ್ಕ ತೆರದಿ ವಾದಿಗಳ - ಕೀಳು ಮತಗಳ |ವರಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ - ಜಗದೊಳು ಮೆರೆದ ||ಶರಭಂಗವರದಚರಣಸರಸೀರುಹಭೃಂಗ- ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ - ಮುಟ್ಟದಲಿಹವೂ 2ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ - ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ - ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ - ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ - ಅಘಗಳ ಕಡಿವ 3ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ - ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ - ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ -ವರಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ - ಸೌಖ್ಯವ ಸುರಿವಾ 4ಆನೆ ಹಂಡೆ ವಸನಗಳು ದ್ರವ್ಯವು ನಾನಾ - ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ - ಪೂಜಿಪ ಚಂದ ||ಸೂನುಪಡೆದು ಸುಖ ಪಡುವರು ಸರ್ವರುನಿತ್ಯ- ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ 5
--------------
ಪ್ರಾಣೇಶದಾಸರು
ವಾದಿರಾಜ ಮುನಿಪ ಹಯಮುಖನೀ ದಯದಲಿ ತವ ಪಾದಧ್ಯಾನವನುಮೂಷಕಬಿಲದಿಂದ ಉದರ ಪೋಷಕ ಬರಲಂದುಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆತುರಗವದನಪಾದಭುಜ(ದಲಿ)ಗಳಲಿಆ ಮಹಾ ಗೋಪಾಲವಿಠಲ ತಾಮರಸದಳಗಳ
--------------
ಗೋಪಾಲದಾಸರು
ವಾಸುದೇವನ ಗುಣೋಪಾಸನೆತಾರಕxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಹೇಸಿಕೆಸಂಸಾರ ಮಾರಕವೋ ಪಕ್ಲೇಶದ ಭವದೊಳಾಯಾಸಿ ಬಡದೆಹರಿದಾಸರ ದಾಸ ನೀನಾಗೋ ಭವನೀಗೋ ಅ.ಪಥಳಥಳ ದೇಹವ ತೊಳೆದು ನಾಮವಹಚ್ಚಿಛಳಿಗಂಜದೆ ನಿತ್ಯಜಲದಿ ಮುಳುಗಿಕರ್ಮಒಳಗೆ ಹೊರಗೆ ಎಲ್ಲಾ ಹೊಳೆವ ಹರಿಯಮೂರ್ತಿತಿಳಿಯದೆ ಯಮನಿಗೆ ಸಿಲುಕುವೆಯಲ್ಲೋ 1ಡೊಂಬನಂದದಿ ಡಾಂಬಿಕ ಕರ್ಮದ ಆ -ಅಂಬರಹಾಸಿಟ್ಟು ಕುಂಭದಿ ನೀರೆರೆದುಬಿಂಬನುಂಡನು ತೆಗಿ ಎಂಬುವಿಯಲ್ಲೋ 2ಕರ್ತಶಾಸ್ತ್ರಾರ್ಥತ್ವದ ಅರ್ಥ ತಿಳಿಯದೆ ಜೀವ -ಅತ್ತಣದ್ವಾರ್ತೆಯ ಮರೆತಿರುವೀ 3ಒಡೆಯನೆನುತನಿತ್ಯಪೊಡವಿತಳದಿ ಬಹುಧೃಢಮನದಲಿ ನೇಮಹಿಡಿದು ಮಾಡಿದಕರ್ಮಜಡಜನಾಭನಪಾದದೃಢ ಮಾಡಲೊಲ್ಲೆ4ಪ್ರೀತಿಯಾಗುವಕರ್ಮವ್ರಾತಮಾಡದೆನೀಗಿ5
--------------
ಗುರುಜಗನ್ನಾಥದಾಸರು
ವಿಷಯದ ವಿಚಾರ ಬಿಡು ವಿಹಿತಕರ್ಮವಮಾಡು|ವೈರಾಗ್ಯ ಭಾಗ್ಯಬೇಡು ಪ.ವಿಷವೆಂದು ಕಾಮ - ಕ್ರೋಧಗಳೆಲ್ಲವೀಡಾಡು |ಮಸಣಮನವೇ ಮಾಧವನನು ಕೊಂಡಾಡು ಅಪಅನುದಿನದಿ ಹರಿಕಥೆಯಕೇಳಿ ಸಂತೋಷಪಡು |ದಿನದಿನವು ಸಜ್ಜನರ ಕೂಡು ||ಮನಮುಟ್ಟಿ ದುರಾಚಾರ ಮಾಳ್ಪರನು ನೀ ಕಾಡು |ಹಣ - ಹೊನ್ನು ಪರಹೆಣ್ಣು ಹೆಂಟೆಯಂತೆನೋಡು1ವೇದ ಶಾಸ್ತ್ರಾರ್ಥ ತತ್ವದ ವಿಚಾರವಮಾಡು |ಮಾಧವನ ಭಕ್ತಿ ಬೇಡು ||ಪಾದದಲಿ ಪುಣ್ಯತೀರ್ಥದ ಯಾತ್ರೆಮಾಡು ಮಧು - |ಸೂದನನ ಕೀರ್ತಿ ಸಂಕಿರ್ತನೆಯಮಾಡು2ಅಂಬುಗುಳ್ಳಗಳಂತೆ ಎಂದಿಗಿದ್ದರು ದೇಹ |ನಂಬಿ ನೀ ಕೆಡಲುಬೇಡ ||ಕೊಂಬುವರು ಬಂದರಾಕ್ಷಣಕೆ ಬೆಲೆಯಾಗುವುದು |ಅಂಬುಜಾಕ್ಷ ಪುರಂದರವಿಠಲನ ನೆನೆ ಮನವೆ 3
--------------
ಪುರಂದರದಾಸರು
ವೃಥಾ ಭವದಿ ಮೆರೆದೆರಥಚರಣಧರನ ಸ್ಮøತಿಯನೆ ಮರೆದೆ ಪ.ಸತಿಸುತರೆನ್ನವರತಿಶಯ ಗೃಹಧನಪತಿಯು ನಾನೆಂಬೊ ಮಮತೆವಿಡಿದುರತಿಪತಿಪಿತನಂಘ್ರಿರತಿ ಲೇಶವಿಲ್ಲದೆಸತತ ಯಮಪುರದ ಪಥವನೆ ಪಿಡಿದು 1ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆಪೂತಿ ಮಲಭಾಂಡ ಭರಿತನಾಗಿಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ 2ಮಿತಮನರಹಿತ ದುರ್ಮತಪಂಡಿತನಾಗಿಪ್ರತಿಬೊಮ್ಮರಕ್ಕಸೋನ್ನತನೆನಿಸಿಅತಿಪ್ರಾಜÕಶಾಸ್ತ್ರದೇವತೆ ಪ್ರಸನ್ವೆಂಕಟಪತಿಯನೆ ಬಿಟ್ಟಿನ್ನಿತರವ ಭಜಿಸಿ 3
--------------
ಪ್ರಸನ್ನವೆಂಕಟದಾಸರು
ಶಂಕರ ಶಿವಶಂಕರ ಶಿವಶಂಕರ ಶಿವಶಂಕರಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ.ವ್ಯೋಮಕೇಶಭವಾಬ್ಧಿತಾರಕ ರಾಮನಾಮೋಪಾಸಕಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ 1ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರಶೈಲರಾಜಸುತಾಧರಾಮೃತಲೋಲ ಲೋಕಧುರಂಧರಕಾಲಕಾಲ ಕಪಾಲಧರಕರುಣಾಲವಾಲಮಹೇಶ್ವರಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3ಕೃತ್ತಿವಾಸಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕಮೃತ್ಯುಹರ ಹರಮೃಡನಮೋಸ್ತುನಮೋ&bಜquo;ಸ್ತು ಸುಮನನಿಯಾಮಕ 4ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹಚಂಡಿಕಾಧವ ಶಿವ ದಯಾರ್ಣವಖಂಡಪರಶುಸುರಾರಿಹಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗಸದೋದಿತಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6ಭರ್ಗಭಾರ್ಗವಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ