ಒಟ್ಟು 1542 ಕಡೆಗಳಲ್ಲಿ , 109 ದಾಸರು , 1259 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣದೇವನ ನಮಿಪೆ ನಮೋ ಪ್ರಾಣಕಧೀಶನೆ ಶರಣು ನಮೋ ಕಾಣಿಸು ಹರಿಯಂಘ್ರಿಯನು ನಮೋ ಪ್ರಾಣ ಪಂಚÀರೂಪಾತ್ಮ ನಮೋ ಪ. ಅಂಜನೆ ಆತ್ಮಜ ಕುವರ ನಮೋ ಸಂಜೀವನ ಗಿರಿ ತಂದೆ ನಮೋ ನಂಜುಂಡನ ಪ್ರಿಯ ಜನಕ ನಮೋ ಕಂಜಾಕ್ಷನ ದಾಸಾರ್ಯ ನಮೊ1 ಆಪ್ತವರ್ಗ ನಿರ್ಧೂತ ನಮೋ ಶಕ್ತ ಜರಾದಿ ಹಂತ ನಮೋ ತಪ್ತಕಾಂಚನ ಸುದೀಪ್ತ ನಮೊ 2 ಏಕವಿಂಶತಿ ಮತಧ್ವಂಸ ನಮೋ ಶ್ರೀಕಳತ್ರಪ್ರಿಯ ಪಾತ್ರ ನಮೋ ಏಕ ಚತುರ ನವಗ್ರಂಥ ನಮೋ ಜೋಕೆಯಿಂದ ನಿರ್ಮಿಸಿದೆ ನಮೋ 3 ಮುಕ್ತ ಜೀವರ ಸ್ತುತ್ಯ ನಮೋ ಯುಕ್ತಿವಂತ ಜಗದ್ವ್ಯಾಪ್ತ ನಮೋ ಶಕ್ತಿವಂತ ಶುದ್ಧಾತ್ಮ ನಮೋ ಭಕ್ತಭರಿತ ಹರಿಪ್ರೀತ ನಮೋ 4 ನಮೋ ನಮೋ ಶ್ರೀಗೋಪಾಲ ಕೃಷ್ಣವಿಠ್ಠಲನಿಗೆ ಪ್ರಿಯಬಾಲ ನಮೋ ನಮೋ ಶ್ರೀ ಭಾರತಿಲೋಲ ನಮಿಸುವೆ ಚಳ್ಳಕೆರೆಯ ಪಾಲ 5
--------------
ಅಂಬಾಬಾಯಿ
ಪ್ರಾಣದೇವರ ಸ್ತೋತ್ರ ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ಪ || ನೋಡಿದ್ಯಾ ಹನುಮನಾರ್ಭಟವ - ಹಾಳುಮಾಡಿದ ಕ್ಷಣದಲಿ ವನವಾ ||ಆಹಾ|| ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಂಗಳ ಕೊಂ-ಡಾಡುವ ನಿನ್ನಯ ಕೋಡಗನ್ಹರುಷವಾ || ಅ.ಪ. || ಮಾತೆ ನಿನ್ನಾಜ್ಞೆಯ ಕೊಂಡು - ಆರಭೀತಿಯಿಲ್ಲದೆ ಫಲ ಉಂಡು -ದೈತ್ಯದೂತ ಬರಲು ಭಾರಿ ಹಿಂಡೂ||ಆಹಾ||ವಾತ ಜಾತ ಬಂದ ಪಾತಕಿಗಳನೆಲ್ಲತಾ ವಕದಿ ಕೊಂದು ಭೂತಳಕ್ಹಾಕಿದಾ 1 ಸೊಕ್ಕಿ ರಾವಣನೆಂಬ ಗಂಡ - ಮಹ ಲಕುಮಿಯನೆ ಕರಕೊಂಡ - ರಾಮ ರಕ್ಕಸಾಂತಕ ಆಕೆ ಗಂಡ - ಕಪಿ-ಗಿಕ್ಕಿರೆಂದ ಯಮದಂಡ ||ಆಹಾ||ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿಸಿಕ್ಕರೆ ಬಿಡನೆಂದು ದಿಕ್ಕು ಪಾಲಾದ 2 ಎಷ್ಟೇಳ್ಹಲವನ ಪ್ರತಾಪ - ನೋಡುಸುಟ್ಟನೆಂಬ ಲಂಕಾ ದ್ವೀಪ - ಎಂಥಗಟ್ಟಿಗ ನೋಡೆ ನಮ್ಮಪ್ಪ ||ಆಹಾ||ಸೃಷ್ಟೀಶ ಕೇಶವ ವಿಠ್ಠಲರಾಯನ ಮುಟ್ಟಿ ಭಜಿಸಲಜ ಪಟ್ಟಾಳೆನೆಂದ್ಹೋದಾ
--------------
ಕೇಶವವಿಠ್ಠಲರು
ಪ್ರಾಣನಾಥ ಪ್ರಾಣನಾಥ ತ್ರಿಭುವನಚೇಷ್ಟ ಪ್ರದಾತಾ ಪ ಅಖಿಲನೇತಾ ಸುಗುಣಜಾತಾ ಶೂರ ಸೀತಾರಾಘವದೂತ ಅ.ಪ ನೂರು ಯೋಜನ ಶರಧಿಯ ಹಾರಿ ಲಂಕಾಪುರವ ಸೇರಿ ಹರುಷದಿ ಜನಕಕುಮಾರಿಗುಂಗುರವಿತ್ತ 1 ದುಷ್ಟ ದಶಕಂಧರನನು ಮುಷ್ಟಿತಾಡನದಿಂದ ಚೇಷ್ಟರಹಿತನ ಮಾಡಿ ದಿಟ್ಟತನದಲಿ ಮೆರೆದ 2 ಗಂಧಮಾದನ ಗಿರಿಯನು ಒಂದು ಕರದಲಿ ಸುಖದಿ ಪಾದ ದ್ವಂದ್ವಕೆರಗಿದ ಮುಖ್ಯ 3 ಕ್ರೂರನಿಶೇಚರಪತಿ ಪರಿವಾರವನು ಸದೆ ಬಡಿದು ಮೂರು ಜಗಂಗಳ ಮೀರಿದ ಕೀರುತಿಯ ಪೊಂದಿದ 4 ಇನ್ನು ಎರಡವತಾರಗಳನ್ನು ಧರಿಸುತ ಜಗದಿ ಪ್ರ ಸನ್ನ ಮಾಧವವ್ಯಾಸರನ್ನು ಸೇವೆಯ ಮಾಡಿದ 5
--------------
ವಿದ್ಯಾಪ್ರಸನ್ನತೀರ್ಥರು
ಪ್ರಾಣಪತಿ ಶ್ರೀನಿವಾಸ ವಿಠಲ ಪೊರೆ ಇವಳ ಪ ಆನತೇಷ್ಟ ಪ್ರದನು | ನೀನೆಂದು ಬಿನ್ನವಿಪೆಜ್ಞಾನ ಗಮ್ಯನೆ ದೇವ | ನೀನಾಗಿ ಪೊರೆಯೋ ಅ.ಪ. ಮಾನ್ಯ ಮಾನದ ಹರಿಯೆ | ಕನ್ಯೆಗಭಯದನಾಗಿಪುಣ್ಯ ಜೀವಿಯ ಸಲಹೆ | ಬಿನ್ನೈಪೆ ನಿನಗೇ |ನಿನ್ಹೊರತು ಜಗದೊಳಗೆ | ಅನ್ಯರನು ಕಾಣೆ ಕಾರುಣ್ಯ ನಿಧಿ ದಾನವಾ | ರಣ್ಯ ದಾವನಲಾ 1 ಭಾವಿಭಾರತಿ ಪತಿಯ | ಸೇವೆಯನೆ ಕೊಂಬಹಯಗ್ರೀವನೆ ನಿನ್ನ ಪದ | ತಾವರೆಯ ದಾಸ್ಯಾ |ಓದಿ ಬೇಡುತ್ತಿಹಳ | ತೀವರದಿ ಕೈ ಪಿಡಿಯೆದೇವ ನಿನ್ನಡಿಗಾನು | ಧಾವಿಸುತ ಬೇಡ್ವೇ 2 ಮಾರುತಾಂತರ್ಗತನೆ | ತಾರತಮ್ಯ ಜ್ಞಾನಮೂರೆರಡು ಭೇದಗಳ | ದಾರಿಯನೆ ತೋರೀ |ಸಾರತಮ ನೀನು ನಿ | ಸ್ಸಾರ ಜಗವೆಂತೆಂಬ ಚಾರುಮತಿಯನೆ ಇತ್ತು | ಪಾರು ಮಾಡಿವಳಾ 3 ವಿಷಯಗಳ ಅನುಭವದಿ | ಎಸೆವ ನಿನ್ನಯ ಸ್ಮರಣೆಹಸನಾಗಿ ನೀನಿತ್ತು | ಕೆಸರ ಕಳೆಯೋ |ಕುಶಲ ಕ್ಲೇಶಾದಿ ನಿ | ನ್ನೊಶವೆಂಬ ಧೃಡವಿರಲಿಬಿಸಜಾಕ್ಷ ಶ್ರೀರಾಮ | ಪ್ರಸರಿಸೋ ಜ್ಞಾನ 4 ದೇವ ದೇವೇಶ ಗುರು | ಸಾರ್ವಬೌಮರ ಪಾಲಶ್ರೀವರನೆ ಸರ್ವಜ್ಞ | ದುರ್ವಿಬಾವ್ಯಾ |ನೀವೊಲಿಯುತಿವಳಿನ್ನು | ಸಾರ್ವ ಕಾಲದಿ ಪೊರೆಯೊಗೋವಳರ ಪಾಲ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಪ್ರಾಣಾ ನೀ ಕಲ್ಯಾಣಗುಣ ಗೀರ್ವಾಣಾದ್ಯರ ಮಣಿ ಜೀವಗಣ ಗುಣಕಾರ್ಯತ್ರಾಣ ಅಗಣಿತಮಹಿಮ ಪ ಇನ್ನೆಣೆಯುಂಟೆ ತ್ರಿಭುವನ ತ್ರಾಣ ನಿನ್ನ ಆಣತಿಯಂತೆ ಪಂಚಪ್ರಾಣ ಅಣುಘನತೃಣ ಮೊದಲು ಪಣೆಗಣ್ಣ ಸುರ ಗಣಾದ್ಯಮರರೊಳಗನವರತ ನೀ ಘನ್ನ ಫಣಿರಾಜಗುರು ನಿನಗೆಣೆಯುಂಟೆ ನೀರಜಭ ಮುಖ್ಯಪ್ರಾಣ ಬಾದರಾ ಯಣನನುಗ ಆನಂದಗುಣಭರಿತ ಕೃತಿರ- ಮಣನ ಸುತೆ ರಮಣ ನೀ ಕ- ರುಣಿಸಿದರುಂಟು ಶ್ರೀಹರಿಯ ಕರುಣಾಅ.ಪ ಮರುತಾ ಶ್ರೀ ಹರಿಯಿಂದಲನವರತ ಪ್ರೇರಿತನಾಗಿ ನಿರುತಾ ಜಗಕಾರ್ಯದೊಳು ಸತತ ನೀ ಬಿಡದಿರೆಡರಿಲ್ಲ ಮರುತಾ ಜಗಚೇಷ್ಟಪ್ರದ ನೀನಹುದೊ ಶಕ್ತಾ ವರ ಮಂತ್ರಿಯಾಗಿ ನೀ ಹರಿಗೆ ಭಕ್ತಾಗ್ರಣಿಯೆ ಯಂತ್ರೋ- ದ್ಧ್ದಾರ ಶ್ರೀ ಹನುಮಂತಾ ಬಲಭೀಮ ಗುರುಮಧ್ವಶಾಂತಾ ತ್ರಿಕೋ ಟಿರೂಪಧರ ಖ್ಯಾತ ಸುರಾಸುರನರೋರಗಗಳನವರತ ಸರ್ವವ್ಯಾಪಾರ ನೀ ನಡೆಸಿ ಪೊರೆವ ಸದ್ಗುರುವರ ಸುಸಮೀರಾ ನೀರಜಾಂಡವ ಕೂರ್ಮರೂಪದೊಳು ನಿಂತು ನೀ ಭಾರವಹಿಸಿ ಮೆರೆದೆ ಶ್ರೀ ವಾಯುಕುವರಾ1 ಸೃಷ್ಟಿಗೊಡೆಯನಿಗೆ ನೀನಿಷ್ಟಪುತ್ರ ನಿನ್ನಷ್ಟುಜ್ಞಾನ ಪರಮೇಷ್ಠಿಗಲ್ಲದೆ ಎಷ್ಟು ನೋಡಿದರು ಇತರರಲಿ ಎಳ್ಳಷ್ಟಿರೆಣೆಯಿಲ್ಲ ತುಷ್ಠಿಪಡಿಸುವೆ ಹರಿಯ ಜೇಷ್ಟದಾಯರ ಶ್ರೇಷ್ಟ ಮೂರುತಿ ಕವಿಶ್ರೇಷ್ಟ ನೀನೆನಿಸಿ ಲಂಕಾ ಶ್ರೇಷ್ಟನೆನಿಸಿದ ದುಷ್ಟದೈತ್ಯನಾ ಮರವನ್ನ ಹುಟ್ಟನಡಗಿಸಿ ಸುಟ್ಟಿ ಲಂಕಪಟ್ಟಣವನ್ನು ಪುಟ್ಟಿದಾಗಲೆ ಬೆಟ್ಟ ಹಿಟ್ಟನು ಮಾಡಿ ಆ ದುಷ್ಟಭಾಷ್ಯಗಳ ಕಷ್ಟ ಪರಿಹರಿಸಿ ನಿ- ರ್ದುಷ್ಟತತ್ವವ ತೋರ್ದೆ ಎಷ್ಟು ಶಕ್ತನು ಜೀವ- ಶ್ರೇಷ್ಠಮೂರುತಿ ಸರ್ವ ಕಷ್ಟ ಹರಿಸಿ ನಿನ್ನ ಇಷ್ಟಭಕುತರ ಸೇವೆ ಕೊಟ್ಟು ಶ್ರೀ ಹರಿಯ ಶ್ರೇಷ್ಠಮೂರುತಿ ತೋರೋ ಇಷ್ಟದಾಯಕ ಗುರು ಶ್ರೇಷ್ಠ ಮಾರುತಿಯೆ2 ಈಶ ಪ್ರೇರಣೆಯಿಂದ ಈ ನಶ್ವರದೇಹದೊಳು ಆ ಸಮಯದಲಿ ಅಪಾನನಿಂದೊಡಗೂಡಿ ಪ್ರಾಣೇಶ ನಿನ್ನಿಂದ ಎಲ್ಲ ಚೇತನವಿಹುದೋ ವಾಸವಾಗಿರುವನಕ ಈ ಶರೀರ ಕಾರ್ಯ ಶಾಶ್ವತ ನಡೆವುದೋ ಕಲ್ಪಾವಸಾನ ಮೋಕ್ಷಪರಿಯಂತ ಲೇಶ ಬಿಡದಲೆ ಬಪ್ಪ ಜಡದೇಹದೊಳು ನೀ ವಾಸವಾಗಿಹೆ ದೇವ ಶಾಶ್ವತನಾಗಿ ಆಯಾಸವಿಲ್ಲದಲೆ ಊಧ್ರ್ವಗಮನದಿ ಪ್ರಾಣ ಅಪಾನನಿಂದಗಲಲೀದೇಹ ಭೂಶಯನ ವಾಸ ಜಡವೆಂದೆನಿಸಿ ಆ ಶರೀರವು ಭೂತಪಂಚಕದಿ ಸೇರುವುದು ಪ್ರಾಣೇಶ ನೀನಾಗ ಹರಿಯನ್ನು ಸೇರುವೆ ಏಸು ಚರಿತೆಯೊ ಅನಿಲ ಶಾಶ್ವತನು ನೀನು ಅಶಾಶ್ವತ ದೇಹಗಳ ಮಾಳ್ಪ ನಿನ್ನಯ ಕಾರ್ಯ ಏಸುಕಾಲಕು ದೇಹದಿಂ ಮೃತರೈಯ್ಯ ಜೀವರು ಶ್ರೀಶನಾತ್ಮಜ ನೀನಮೃತನೆನಿಸೀ ಮೆರೆವೆ ಈಶ ಪ್ರೇರಣೆ ನಿನಗೆ- ನಿನ್ನ ಪ್ರೇರಣೆ ಎಮಗೆ ಅಸುಪತಿಯೆ ನಿನಗಿದು ಹೊಸ ಪರಿಯಲ್ಲವೊ ಮೀಸಲಾಗಿರಿಸು ಶ್ರೀ ವೇಂಕಟೇಶನ ಪಾದ ದಾಸನೆನಿಸೊ ಪವನೇಶ ಉರಗಾದ್ರಿವಾಸ ವಿಠಲನ ದಾಸ ಎನ್ನ ಮನದಾಸೆ ನೀ ಸಲಿಸಿ ನಿಜ ದಾಸಜನ ಸಹವಾಸವಿತ್ತು ಅನಿಶ ಭವ ಪಾಶ ಸಡಿಲಿಸಿ ಸುಖವಾಸವೀಯೊ ಗುರು ಮಾತರಿಶ್ವ 3
--------------
ಉರಗಾದ್ರಿವಾಸವಿಠಲದಾಸರು
ಪ್ರಾರ್ಥಿಸುವೆ ರಘುನಾಥತೀರ್ಥರ ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ ಸಾರ್ಥಕವಾಗಲು ಪಾರ್ಥಿವ ದೇಹವು ಜಗದಲಿ ಕೀರ್ತಿಗಳಿಸಿದವರ ಅ.ಪ ನೇದೃಶಂ ಸ್ಥಲಿಮಲಂ ಶಮಲಘ್ನಂ ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ ನಾಸ್ತಿ ವಿಷ್ಣುಂ ಸದೃಶಂ ನನುದೈವಂ ಸತ್ಯ ವಚನಗಳಿವೆಂದು ಸೂಚಿಸುತ ಆಸ್ತಿಕ ಜನಮನ ರಂಜಕ ತ್ರಿಮಕುಟ ಕ್ಷೇತ್ರನಿವಾಸ ಪವಿತ್ರತಮ ಚರಿತರ 1 ವ್ಯಾಸರಾಜ ಗುರುವರ್ಯ ರಚಿತ ತಾ ತ್ಪರ್ಯ ಚಂದ್ರಿಕಾ ಗ್ರಂಥವನು ವಾಸುದೇವ ನರಹರ್ಯನುಗ್ರಹದಿ ಉರ್ವರಿತವ ವಿರಚಿಸಿ ಮೆರೆದ ಶೇಷಚಂದ್ರಿಕಾಚಾರ್ಯರೆಂಬೊ ಗುರು ವ್ಯಾಸರಾಜರ ಪರಾವತಾರರ 2 ರಾಗ ದ್ವೇಷಗಳ ತೊರೆಯುತ ತ ನ್ನನು ರಾಗದಿಂದ ಭಜಿಸುವ ಜನಕೆ ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ ಸಾಧು ಭೋಗಗಳೀವ ಯೋಗಿಜನ ಮನೋನಯನ ಪ್ರಸನ್ನ ಶ್ರೀ ರಾಘವೇಂದ್ರರಪರಾವತಾರರ 3
--------------
ವಿದ್ಯಾಪ್ರಸನ್ನತೀರ್ಥರು
ಬಂಗ್ಲೆ ನಾರಾಯಣ ಕಾಮತರ ರಚನೆಗಳು ಪಾಲಿಸೈ ತ್ರಿಶೂಲಿಯೆ ಮುದದಿಂ | ಕಲಿಕಾಲ ರುದ್ರನೆ ಪಾಲಿಸೈ ತ್ರಿಶೂಲಿಯೆ ಮುದದಿಂ ಪ ಸಿಂಧು ಎನ್ನಯ ಬಂಧು ಬಿಡಿಸೈಯ |ಅಂದು ಪಾಲ ಮುದ ಚಂದ ನಿಂತ ಧರೀ ಆಪ -ದ್ಧಂಧುವೆ ನೀ ಬೇಗ ಬಂದೀಗಲೆನ್ನನು 1 ಧಾಮ ಮುನಿಜನ ಸ್ತೋಮವಂದ್ಯ ಬಿಲ್ಲ ಪ್ರೇಮಿಯೆ ರಿಪು ಕುಲ ಭೀಮ ವಿರೂಪಾಕ್ಷ ಕಾಮಾರಿ ನಂಬಿದೆ 2 ಪನ್ನಗ ಶೇಷಶಾಯಿ ವೆಂಕಟೇಶವಿಠಲ ಪ್ರಿಯರೀ ದಾಸರ ಕಾಯ್ವೆ ಕೈಲಾಸ ನಿವಾಸನೆ 3
--------------
ಅನ್ಯದಾಸರು
ಬಂಟ ಬುದ್ಧಿವುಳ್ಳ ಹನುಮಂತಹದ್ದಾಗಿ ಹಾರಿದÀನೆ ಆಕಾಶಕೆನಿದ್ರೆಗೈವ ಸಮಯದಲಿ ಎದ್ದು ಬಾರೆಂದರೆ ಅಲಿದ್ದÀ ರಕ್ಕಸರನೆಲ್ಲ ಗೆಲಿದಾತನೆ 1 ಬಂಟ ಹನುಮಂತನ ನೋಡಿ-ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿಮರನೇರಿಕೊಂಡಾತನೆ2 ಬಂಟ ಹನುಮಂತನೆಸೀತಾದೇವಮ್ಮನಿಗೆ ಪ್ರೀತಿಯ ಬಂಟನಾದಮುಖ್ಯ ಪ್ರಾಣ ಹಯವದನನ ದೂತನೆ 3
--------------
ವಾದಿರಾಜ
ಬಡಿವಾರ ನಿಮ್ಮ ಕೀರ್ತಿಅರಿಯೆವೊಪಾರ್ಥ ಸಾಕೊ ನಿನಗೆಬಡಿವಾರ ಪ. ಬೀಗನಾಡಿದ ಬಲು ಬಿಂಕದ ಮಾತು ಕೇಳಿ ಸಾಗರಶಯನ ಮುರಿದೆದ್ದಸಾಗರಶಯನ ಮುರಿದೆದ್ದ ಅರ್ಜುನ ಹ್ಯಾಂಗಂದ್ಯೊ ನಿನ್ನ ಮನದಾಗ1 ಏನಲೊ ಅರ್ಜುನ ಈ ನುಡಿ ನಿನಗ್ಯಾಕೊನೀನು ನಿಮ್ಮವಳು ತಿರು ತಿರುಗಿನೀನು ನಿಮ್ಮವಳು ತಿರು ತಿರುಗಿ ಮಾರಿದರೆಕಾಣಿಯ ಬೆಲೆಯ ಹೋಲಲಾರೆ2 ದಶರಥರಾಯನ ಭಾಗ್ಯ ವರ್ಣಿಸಲು ವಶವಲ್ಲಹೊಸದಾಗಿ ಇವಳು ಹೋಗಲಿಕ್ಕೆಹೊಸದಾಗಿ ಇವಳು ಹೋಗಲಿಕ್ಕೆ ಎನಗೆ ಈ ದೆಶೆಗೇಡಿ ಬಂದು ದಣಿಸಲಿಲ್ಲ 3 ಹಿಂದೆ ಇವಳಿಂದಲೆ ನೊಂದೆನೋ ಅನ್ನಕ್ಕೆ ಸಂದೇಹವಾಗಿ ಅಡವಿಯಸಂದೇಹವಾಗಿ ಅಡವಿಯ ತಿರುಗಿಸಿದವಳಿಗೆ ಅಂದಣ ಆನೆ ಬರಲುಂಟೆ 4 ಕಾಲ ಲಕ್ಷಣವೆಲ್ಲಿ ಅಡಗಿತ್ತೆ 5 ಅಕ್ಷ ಮ್ಯಾಲಂತರದಿ ವೃಕ್ಷದಲ್ಲಿದ್ದಾಗ ಲಕ್ಷ ಕಷ್ಟಗಳ ಬಡುವಾಗಲಕ್ಷ ಕಷ್ಟಗಳ ಬಡುವಾಗ ಇವಳ ಕೈಯ ಲಕ್ಷಣವೆಲ್ಲಿ ಅಡಗಿತ್ತೆ 6 ಬಡಿವಾರ ಬಮ್ಮ ವರ್ಣಿಸಲಾರ ಹೆಮ್ಮಿ ನೋಡಿದರೆ ವಿಪರೀತಹೆಮ್ಮಿ ನೋಡಿದರೆ ವಿಪರೀತ ಎಲೊ ಪಾರ್ಥಸುಮ್ಮನೆ ಯಾಕೆ ಮುನಿಸಾಗಿ 7 ಕೇಳಿ ನಿಮ್ಮವರ ಕೀರ್ತಿ ಭಾಳೆ ವಿಸ್ತಾರವಾಗಿ ಹೇಳಲು ಲಜ್ಜೆ ಬರತದೆ ಹೇಳಲು ಲಜ್ಜೆ ಬರ ತದೆ ನಮ್ಮ ಅಮ್ಮನ ತಾಳುವಿಕೆಯಿಂದ ಉಳಿದಾರೊ 8 ನಾರು ವಸ್ತ್ರವನುಟ್ಟು ನಾರಿ ಸಂಚರಿಸುವಾಗವೀರ ರಾಮೇಶ ಜರಿದಾಗ ವೀರ ರಾಮೇಶ ಜರಿದ ಕಾಲಕ್ಕೆ ಇವಳ ಮೋರೆ ಲಕ್ಷಣವು ಅಡಗಿತು9
--------------
ಗಲಗಲಿಅವ್ವನವರು
ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ. ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ1 ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ 2 ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವÀ ದುಷ್ಟಮೃಗವಘಾತಿಸಿ ಬಿಡುವ ಕಿರಾತÀ ಸ್ವರೂಪನ್ನ 3 ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ 4 ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು 5 ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ6 ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವÀನ್ನ7
--------------
ವಾದಿರಾಜ
ಬಂದ ಜನ್ಮ ಬರಲಂಜಲ್ಯಾತ ಕಗೋ ವಿಂದ ನಿನ್ನೆಚ್ಚೆರ ವೆನಗಿದ್ದರ ಸಾಕು ಗೋವಿಂದ ಗೋವಿಂದ ಪ ಒಂದೆರಡಲ್ಲಾ ಶತ ಸಹಸ್ರವಾಗಲಿ ಛಂದದಿನಿನ್ನ ನಾಮಾ ಜಿವ್ಹೆಯ ಲಿರಲಿ1 ಹರಿಪರಂದೈವೆಂದು ಅರುಹಿನಾ ಮನೆಲಿದ್ದು ಹರಿಯದಿರಲಿ ಮನ ವಿಷಯಕ ಬಿದ್ದು 2 ಮುಕುತಿಗಿ ಕುತಿಯಂಬಾ ಹಂಗಿನ ನೆಲೆಯಾಕ ಭಕುತಿ-ಯನಿ ಪನಿಜ ಸುಖವಿರಲಿಕ್ಕೆ 3 ಗುರುಮಹಿಪತಿ ಸ್ವಾಮಿ ನಿನ್ನ ಶರಣರಾ ಮೃಗ ಪಶುವಾ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದನು ಸರದಾರ ಸರದಾರ ಅಂಧಕರಿಪು ಸುಕುಮಾರಪ. ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರ ಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ1 ವಲ್ಲೀದೇವಿಮನೋಹಾರ ಒಲ್ಲದಜನಕತಿದೂರ ಸಾರ ಖುಲ್ಲದನುಜ ಸಂಹಾರ2 ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರ ಲಕ್ಷ್ಮೀನಾರಾಯಣನ ಕಿಂಕರ ರಕ್ಷಿಸು ನಮಿತಕುಬೇರ3
--------------
ತುಪಾಕಿ ವೆಂಕಟರಮಣಾಚಾರ್ಯ
ಬಂದರು ನಾರದರ್ಹರುಷದಲಿ ನಿಂದು ಯಜ್ಞ ನೋಡುತ ಮುದದಿ ಇಂದು ಯಾರಿಗರ್ಪಣೆ ಮಾಡುವಿರೆನೆ ಬಂದಿತು ಸಂಶಯ ಋಷಿಗಳಿಗೆ ಮಂಗಳಂ ಜಯ ಮಂಗಳಂ ಪ ತ್ವರದಿಭೃಗು ಮುನಿಗಳು ಹೊರಡುತಲಿ ಹರಬ್ರಹ್ಮರು ಸರಿಯಲ್ಲೆನುತ ಹರಿವೈಕುಂಠದಿ ಮಲಗಿರೆ ನೋಡುತ ಭರದಿಂದೊದೆಯೆ ವಕ್ಷಸ್ಥಳಕೆ ಮಂಗಳಂ ಜಯ ಮಂಗಳಂ 1 ನೊಂದಿತು ಪಾದವೆಂದುಪಚರಿಸೆ ಇಂದಿರಾದೇವಿ ಕೋಪಿಸಿ ತೆರಳೆ ಬಂದು ಋಷಿಗಳಿಗರುಹಿದರು ಶ್ರೀಗೋ- ವಿಂದಗೆ ಸಮರಿಲ್ಲೆಂದೆನುತಾ ಮಂಗಳಂ ಜಯ ಮಂಗಳಂ 2 ಮಡದಿ ಇಲ್ಲದೆ ಬೇಸರ ಪಡುತಾ ಪೊಡವಿಗಿಳಿದು ಹುತ್ತದೊಳಗಿರಲು ಕೊಡಲಿಯ ಗಾಯಕೌಷಧ ಹುಡುಕುತ ಹರಿ ಅಡವಿಗಳಲಿ ಸಂಚರಿಸಿದಗೆ ಮಂಗಳಂ ಜಯ ಮಂಗಳಂ3 ಭೂಮಿಗೊಡೆಯ ವರಹನನು ನೋಡಿ ಕಾಮಿನಿ ಬಕುಳೆ ಸೇವೆಗೆ ಮಾಡಿ ಕಾಮಜನಕ ಬೇಟೆಗೆ ಹೊರಟನು ಬಹು ಪ್ರೇಮದಿಂದಲಂಕರಿಸಿದ ಹರಿಗೆ ಮಂಗಳಂ ಜಯ ಮಂಗಳಂ4 ವನವನ ಚರಿಸಿ ಸ್ತ್ರೀಯರ ನೋಡಿ ವನಜಾಕ್ಷೇರು ನಡುಗುತ ಭಯದಿ ಘನಮಹಿಮಗೆ ಕಲ್ಲು ಕಲ್ಲೆಸೆಯೆ ಹಯ ವನದಿ ಮೃತಿಸೆ ಗಿರಿ ಏರಿದಗೆÉ ಮಂಗಳಂ ಜಯ ಮಂಗಳಂ 5 ಕಾಮಿನಿ ಬಕುಳೆಗೆಲ್ಲವ ಪೇಳಿ ಕೋಮಲೆ ಕೊರವಿ ರೂಪವ ತಾಳಿ ವ್ಯೋಮರಾಜನ ಪುರದಲಿ ಧರಣಿಗೆ ಸಾಮುದ್ರಿಕೆ ಪೇಳಿದ ಹರಿಗೆ ಮಂಗಳಂ ಜಯ ಮಂಗಳಂ 6 ವಶಿಷ್ಟ ಕಶ್ಯಪರು ಶುಕರುಗಳು ವಿಶಿಷ್ಟ ಬಂಧುಗಳ ಕರೆಸುತಲಿ ಪಟ್ಟದರಸಿ ಲಕುಮಿಯು ಬರೆಹರುಷದಲಿ ಕಟ್ಟಿ ಮಾಂಗಲ್ಯ ಹರಿ ಪದ್ಮಿನಿಗೆ ಮಂಗಳಂ ಜಯ ಮಂಗಳಂ 7 ಜಯ ಜಯ ವೆಂಕಟ ಪದ್ಮಿನಿಗೆ ಜಯ ಜಯ ಪದ್ಮಾವತಿಪ್ರಿಯಗೆ ಜಯ ಜಯ ಕಮಲನಾಭ ವಿಠ್ಠಲಗೆ ಜಯ ಜಯ ಶ್ರೀ ಶ್ರೀನಿವಾಸನಿಗೆಮಂಗಳಂ ಜಯ ಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ
ಬಂದಾನು ಬಂದಾನು ಪ ಬಂದನಾಗ ಗೋವಿಂದ ಯದುಕುಲಾ ನಂದ ಮುಕುಂದನು ಮಂದಹಾಸದಲಿ ಅ.ಪ. ಬೀದಿ ಬೀದಿಯೊಳು ಬಲು ಶೃಂಗಾರ ಬಗೆ ಬಗೆ ತೋರಣದಿಂದಲಂಕಾರ ಕಾದುನಿಂತಿಹ ಜನ ಪರಿವಾರ ಮೋದದಿ ಮಾಡುವ ಜಯ ಜಯಕಾರ ಮೇದಿನಿ ಸುರರಾಮ ಮಂತ್ರದ ಉಚ್ಚಾರ ಸೌಧಗಳಲ್ಲಿಹ ಸ್ತ್ರೀಯರಪಾರ ಸಾಧರದಿಂದೀಕ್ಷಿಸೆ ಜನನಿ ಕರವು ಮೋದವೆ ಬೀರುತ ಯಾದವ ಕುಲಮಣಿ 1 ಸುಂದರಿಯರು ನಲವಿಂದ ನಿಂದಿಹರು ಗಂಧ ಪರಿಮಳದ ಜಲವೆರಚಿಹರು ಅಂದದರಳ ಪುಷÀ್ಪಗಳ ವರ್ಷಿಪರು ಕುಂದಣದಾರತಿಗಳ ಪಿಡಿದಿಹರು ವಂದಿಮಾಗಧರು ಪೊಗಳುತಿಹರು ಚಂದದಿ ಮಣಿಮಯ ಸ್ಯಂದನದಲಿ ಅರ ವಿಂದ ನಯನ ಬಲು ಸುಂದರಾಗನು 2 ಬಂಗಾರದ ರಥವೇರಿ ಬರುತಿಹನು ಕಂಗಳಿಗುತ್ಸವ ತಾ ತರುತಿಹನು ಮಂಗಳಕರ ತಿಲಕವನಿಟ್ಟಿಹನು ಬಂಗಾರದ ಮಕುಟ ಧರಿಸಿಹನು ಶೃಂಗಾರದ ಶಿಸ್ತಲಿ ಶೋಭಿಪನು ಅಂಗಜಕೋಟಿ ನಿಭಾಂಗನಾಗಿಹನು ಮಂಗಳಾಂಗ ಶ್ರೀರಂಗ ಕರಿಗಿರಿ ನೃಸಿಂಗನು ಕರುಣಾಪಾಂಗವ ಬೀರುತ 3
--------------
ವರಾವಾಣಿರಾಮರಾಯದಾಸರು