ಒಟ್ಟು 771 ಕಡೆಗಳಲ್ಲಿ , 88 ದಾಸರು , 668 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತಪರಿಹರಿಸು ರಂಗಾಪರಮಪಾತಕರು ಬಂದರು ನೆರೆದು ರಂಗಾಪ.ಪ್ರತ್ಯಕ್ಷ ಜೀವನ ಶವಕೆ ಯಮನ ಚಾರಕರುಮುತ್ತಿ ಕೊಲುವಂತೆ ಕಾಣಿಸುತದೆ ದಯಾಳುಕರ್ತನೀನಲ್ಲದಿನ್ನೊಬ್ಬ್ಬೊಡೆಯಕಾಲಮೃತ್ಯು ವಿನಯದೆಶೂಲನರಪಂಚವದನ1ನೀನರಸನೆನಗಾಗಿ ಇನ್ನೊಬ್ಬ ನೀಚರಿಗೆದೀನನಾಗುವುದುಚಿತೆ ಕರುಣಗುಣ ಖಣಿಯೆಮಾನನಿನ್ನದು ಅವಮಾನ ನಿನ್ನದು ಪಾಂಡವಮಾನಿನಿಯ ಸಮಯಕೊದಗಿದ ಭಕ್ತ ಬಂಧು 2ಮರೆಹೊಕ್ಕೆ ದಾಸವತ್ಸಲನೆಂಬ ಬಿರುದು ಕೇಳಿರುವೆ ತಪ್ಪಿಸಿಕೊಳಲುಬೇಡ ಭುವನೇಶಉರಗಗಿರಿವಾಸ ಪ್ರಸನ್ವೆಂಕಟೇಶ ಸಂಹರಿಸು ಅಪಕಾರಿಗಳ ಸಲಹು ಸಜ್ಜನರ 3
--------------
ಪ್ರಸನ್ನವೆಂಕಟದಾಸರು
ನಗಲುಬಹುದು ನಗಲುಬಹುದುನಗು ನಗು ರಂಗಯ್ಯಜಗದ ಮಾತು ಅ‌ಘದ ಧಾತುಬಗೆಯನರಿತು ಮುಗಳುನಗೆಯ ಪ.ಒರೆದು ಒರೆದು ಭಾರತದರ್ಥಅರಿದುಅರಿದುವರಭಾಗವತಪರಿಯ ಪರಿಯ ಪುರಾಣಶ್ರ್ರುತಿಯಪಾರಾಯಣ ಮಾಡಿ ಕುರುಡಬಧಿರನರರ ತೆರದಿಅರಹುಮರಹುಬೆರೆತು ಬೆರೆತು ತರತಮಿಲ್ಲದೆಹರಿಹರಜರು ಬೇರೆಬೇರಿಲ್ಲೆಂಬಪರಮಪಾತಕರಿರವ ನೋಡಿ 1ಮಕ್ಕಳ ಮಡದೇರಕ್ಕರ ಬಡಿಸಿರೊಕ್ಕದ ಮದದಿ ಸೊಕ್ಕಿ ಸಜ್ಜನರಲೆಕ್ಕಿಸದವಗೆ ರಕ್ಕಸರಂತೆನಿಕ್ಕರ ನುಡಿದು ಕಕ್ಕಸದಿಂದಪುಕ್ಕಟೆ ಪುಣ್ಯದ ಲೆಕ್ಕವ ಕಳೆದುಘಕ್ಕನೆ ಜವನೋರಿಕ್ಕಿದ ಬಲೆಗೆಸಿಕ್ಕಿ ಬಳಲುತ ನರ್ಕವನುಂಬಮೂರ್ಖರ ತಾಮಸಮುಖ್ಯರ ನೋಡಿ 2ಸುಂದೋಪಸುಂದ ಜಲಂಧರ ಕೀಚಕಕಂದರದಶಕ ಸೈಂಧವ ಜಟಾದ್ಯರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿಗುಂದಿ ಲಯವಾದರೆಂದುಕೇಳಿಇಂದುಮುಖಿಯರ ಚಂದಕೆ ಹುಚ್ಚಿಟ್ಟುಕಂದರ್ಪವಿಶಿಖವೃಂದ ವಶಾಗಿ ನೂರೊಂದುಕುಲ ಯಮಮಂದಿರ ಹೊಂದಿಪಮಂದರಮದೋನ್ಮತ್ತಾಂಧರ ನೋಡಿ3ಸುರರ ಸಂಪದ ಪರಮಪದಕೆಕಾರಣವಾಗಿರೆ ಸುರೇತರರೆಲ್ಲಇರುಳೆ ಹಗಲೆ ಸೈರಿಸಲಾರದೆಒರಗಿಹೋದ ವಿವರಕೇಳಿದುರುಳಕೌರವರ್ವರ ಪಾಂಡವರಸಿರಿತಮ್ಮದೆಂದ್ಹುರಿದು ಹೋಗಿರೆಪರರ ದ್ರವ್ಯಕ್ಕೆ ಮರುಗಿ ಬಯಸಿನರರು ಕೆಡುವ ಪರಿಯ ನೋಡಿ 4ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವಮತ ಮಹಿಮೆಯನತಿಕ್ರಮಿಸಿ ಕುತ್ಸಿತವೆನಿಸುವ ಪಥದಲಿಪತಿತರಾಗಿ ಸದ್ಗತಿಯ ಕಾಣದಚತುರ ಪರಿಯ ಅಮಿತ ಭಕ್ಷಕರಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟಪತಿಯೆ ನೀ ಮಂದಸ್ಮಿತದಲಿ 5
--------------
ಪ್ರಸನ್ನವೆಂಕಟದಾಸರು
ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ ಪಸುಮಶರಜನನೀಸೋಮಸಹೋದರಿಕಮಲವಾಸಿನೀ ಸುಂದರೀ ಲಕ್ಷ್ಮೀ ಅ.ಪವಿಮಲಾ ವಿಶ್ವಕುಟುಂಬಿನೀ ವೆಂಕಟಶೈಲ ನಿವಾಸಿನೀಅಮರೇಂದ್ರಾರ್ಚಿತಪಾದಸರಸಿಜಅಘವಿನಾಶಿನಿ ಅಖಿಲಾಪದಹರ 1ಅಮೋಘ ಸಂಪತ್ಪ್ರದಾಯನೀ ಆರ್ತರಕ್ಷ ದೀಕ್ಷಾಮಣೀಪ್ರಮೋದಯಾ ಶ್ರೀರಮಾಭಾರ್ಗವೀಮಮಾಪಚಾರ ಕ್ಷಮಸ್ವಶಾರ್ಚಿಣೀ 2ಹೇಮಕುಧರ ಧಾಮೇಶ್ವರಿತುಲಸಿರಾಮದಾಸನುತ ರಾಜೀವಾಕ್ಷಾಹಿಮಾಂಶು ಮುಖ ಹರಿಹಿತಪ್ರಿಯನಿಸ್ಸೀಮಾನದಾನಿನಿ ಸಜ್ಜನ ಪೋಷಿಣಿ 3
--------------
ತುಳಸೀರಾಮದಾಸರು
ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ ಪಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ ತಾಯಿ ನಡುಗಿ ಬಿಸುಟೀ ||ತನುವು ನಿನ್ನದು ಸೋಂಕೆ ನಗವೊಡೆದು ಶತಶೃಂಗ- |ವೆನಿಸಿಕೊಂಡಿತೋ ದ್ವಾಪರದಿ ಬಲವಂತ 1ಲೋಕದೊಳು ಮನುಜರಾ ಶಿಶುಗಳಂದದಿ ಬೆಳೆದು |ಪಾಕಶಾಸನಿ ಯಮಜ ಯಮಳರ ಜನನೀ |ಯಾ ಕೂಡಿಕೊಂಡು ಇಭಪುರಿಗೈದಿ ಮೋದದಲಿ |ಸಾಕಿಕೊಂಡೆಯಂಬಿಕೆಯ ಮಗನಿಂದಾ 2ಚಿಕ್ಕವರೊಡನೆ ಚಂಡು ಬುಗುರಿ ಈಸಿರೆ ಓಟ |ತೆಕ್ಕೆ ಮುಷ್ಟಿ ಮರಗಳನೇರುವಲ್ಲಿ ||ಸೊಕ್ಕಿದವನಿವನೆಂದು ಆವಾಗಲೆಲ್ಲರಿಗೆ |ಬಿಕ್ಕಿ ಬಾಯ್ದೆರೆವಂತೆ ಮಾಡಿ ತೋರಿಸಿದೆ 3ಅಹಿತರಾದವರು ನೀರೊಳಗೆ ಕೆಡಹಲು ಎದ್ದೆ |ಅಹಿಗಳಿಂ ಕಟ್ಟಿಸಲು ನೋಯದಿದ್ದೆ ||ಸಹಿಸದಲೇ ವಿಷಹಾಕಿ ಬದುಕಲ್ಕೆ ಹೊರಘಾಕೆ |ಮಹಮೋಸ ಮಾಡೆ ಗೆದ್ದು ಧರಿಯೊಳು ಮೆರೆದೆ 4ಸೋಕಿಯಸುರಿಯ ಮಗನ ಪಡೆದು ಖಲನನು ತರಿದು |ಏಕಚಕ್ರ ನಗರದಲ್ಲಿದ್ದು |ಬೇಕೆಂದು ನೀನಾಗಿ ಪೋಗಿ ಬಕನನು ಕೊಂದೆ |ಈ ಕುಂಭಿಣೀಯೊಳು ನಿನಗಿದಿರಾರು ದೇವಾ 5ಪಾಂಚಾಲಿಯನು ಗಳಿಸೆ ಕೋಪದಿಂ ಬಂದಹರಿ|ವಂಚಕರ ದರ್ಪವ ಭಂಗಿಸಿ ಲೀಲೆಯಿಂ |ಮಿಂಚುವಾ ಗದೆಲಿಹ ನಿಶ್ಚಿಂತ ಬಲವಂತ |ಮುಂಚಿನಜ ಪ್ರಣತ ಸುರಭೂಜ ರವಿತೇಜ 6ಈ ಪರಿಯಿಂದ ಕೆಲಕಾಲವಲ್ಲೆಲ್ಲ |ಕಾಪಾಡಿ ವಜ್ರಿಪ್ರಸ್ಥಕೈ ತಂದು ||ಪಾಪಿ ಜರಿಜನ ಕೊಂದು ರಾಜಸೂಯವ ಮಾಡಿ |ನೀಂ ಪಾಲಿಸಿದೆಯವನಿ ಸದ್ಧರ್ಮದಿಂದ 7ದ್ಯೂತವಾಡಿದ ಸಮಯದಲ್ಲಿ ದ್ರೌಪದಿಯಳನು |ಪಾತಕಿವಸವೆಳೆಯೆ ಕೋಪದಿಂದ ||ಘಾತಿಸುವೆನೆಂದಬ್ಬರಿಸಿ ಪಲ್ಗಡಿದು ಲಕ್ಷ್ಮೀ |ನಾಥನಿಚ್ಛೆಂಗೆ ಈಗೇಂದು ಕೈಮರೆದೇ 8ತಮೋ ಯೋಗ್ಯನಾ ಪಾಪಪೂರ್ಣದಾಹದಕೆ ಬ- |ಹು ಮಿತಿಯಿಂದ ವನವಾಸ ಪತ್ಕರಿಸಿದೆ ||ಸಮರಾಂಗಣದೊಳಿವರ ಹೀಗೆ ಸವರುವೆನೆಂದು |ಸುಮನಸಾರಾಧ್ಯ ಬಾಹುಗಳೆತ್ತಿ ನಡೆದೆ 9ಕಾನನದಿ ಕಿರ್ಮೀರನಂ ಕೊಂದು ಋಷಿಯಿಂದ |ಮಾನವಂ ಕೈಕೊಂಡು ಮತ್ತೆ ಮುಂದೆ ||ಆ ನಗದಿ ಬಹುಕಾಲ ಸೇರಿಕೊಂಡಿದ್ದಂಥ |ದಾನವರ ಮಡುಹಿ ಸೌಗಂಧಿಕವ ತಂದೆ 10ನಿನ್ನೊಳಗೆ ನೀಂ ಲೀಲೆ ಮಾಡಿದ್ಯಾ ಸಮಯದಲಿ |ಚಿನ್ನದೋಪಮ ಪುಷ್ಪವೊಂದು ಬೀಳೆ ||ನಿನ್ನರಸಿಯಿದು ಎನಗೆ ಇಷ್ಟವೆನಲವಳ ನುಡಿ |ಮನ್ನಿಸುತೆ ಪೋಗಿ ಮಣಿಮಂತನೊಂಚಿಸಿದೆ 11ದ್ವೈತ ವನದೊಳು ಬಂದುಮೃಗಬೇಟೆಯಾಡೆ ಪುರು |ಹೂತ ಪದವಾಳ್ದವನು ಮೆಯ್ಯ ಸುತ್ತಲ್ ||ನೀತವಕಬೀಳದೆ ಅವನ ಪುನೀತನ ಮಾಡಿ |ಖ್ಯಾತಿ ತಂದಿತ್ತೆಯಂತಕನ ಸುತಗಂದು 12ಮತ್ಸ್ಯ ದೇಶಾಧಿಪನ ಮನೆಯಲ್ಲಿ ಇದ್ದಾಗ |ಹೆಚ್ಚಿನಾ ಬಲದ ಮಲ್ಲನ ಕೆಡಹಿದೆ ||ಅಚ್ಚ ಪಾಪಾತ್ಮ ಕೀಚಕನನ್ವಯ ತಂದೆ |ಅಚ್ಯುತನ ನಿಜದಾಸ ಭಕ್ತರಘನಾಶ 13ಎಂಟೈದು ವರುಷ ಈ ರೀತಿಯಲಿ ಕಳೆದು ವೈ- |ಕುಂಠಪತಿ ದಯದಿಂದ ಉಪಪ್ಲಾವ್ಯದಿ ||ಗಂಟು ಹಾಕಿದಿ ದುರಾತ್ಮನ ಕೂಡ ಸಂಗರಕೆ |ಕಂಠೀರವರವದಿಂ ತಲೆದೂಗಿ ನಡೆದೆ 14ಮುತ್ತೆ ಭೀಷ್ಮಗೆ ವಂದು ಸ್ವಲ್ಪಮಾತ್ರಕೆಮಾನ|ವಿತ್ತಂತೆ ತೋರಿ ಎಲ್ಲರ ರಥವನೂ |ಕತ್ತರಿಸಿ ಹಿಂದಕ್ಕೋಡಿಸಿದೆ ನಿನ್ನಾರ್ಭಟಕೆ |ಹತ್ತು ದಿಕ್ಕಿನೊಳೊಬ್ಬರಿದಿರಾಗಲಿಲ್ಲ 15ಪ್ರಹ್ಲಾದನವತಾರ ಬಾಹ್ಲೀಕನನು ಗೆದ್ದು |ಮಹೀಜಸುತನಾನಿಮಸ್ತಕಶೀಳಿದೆ ||ಬಹುಖೋಡಿಧಾರ್ತರಾಷ್ಟ್ರರ ಕೊಂದು ಹರೆಬಿಟ್ಟ |ಅಹಿಯಂತೆ ರಣರಂಗದಲ್ಲಿ ಸಂಚರಿಸಿದೆ 16ಕಡು ಕೋಪದಿಂದ ಹೂಂಕರಿಸಿಯುರಿಯುಗುಳುತಲಿ |ಪೊಡವಿ ನಡುಗಿಸಿನಭಬೇಯಿಸುತ್ತಲಿ ||ಪಿಡಿದು ದುಶ್ಶಾಸನನ ತೊಡೆಯಲ್ಲಿ ನೆರೆಗೆಡಹಿ |ಒಡಲ ಛೇದಿಸಿ ರಕ್ತಮಜ್ಜನವಗೈದೆ 17ಕರುಳ ದಂಡೆಯ ಮಾಡಿ ಅರಸಿ ಮಂಡೆಗೆ ಮುಡಿಸಿ |ಖರೆಯ ಮಾಡಿದೆ ಉಭಯತರ ಶಪಥವ ||ಕರೆದೆ ಕುರು ಪಾಂಡವರ ಬಿಡಿಸ ಬನ್ನೀರೆಂದು |ಮರುಳಗೊಂಡರೆಲ್ಲ ನಿನ್ನರೂಪನೋಡುತಲಿ 18ಸ್ವಾಮಿ ಪ್ರಾಣೇಶ ವಿಠಲನ ಆಜೆÕಯ ವಹಿಸಿ |ಭೂಮಿ ಭಾರಿಳುಹುದಕೆ ಅವತರಿಸಿದೆ ||ನಾ ಮಾಡುವೆನೆ ಪೂರ್ತಿ ನಿನ್ನ ಮಹಿಮೆಯ ಸಮರ |ಭೀಮಕರಪಿಡಿದು ಸಲಹುವದೋ ಪ್ರತಿದಿನದಿ 19
--------------
ಪ್ರಾಣೇಶದಾಸರು
ನರನಾದ ಮೇಲೆ |ಹರಿನಾಮ ಜಿಹ್ವೆಯೊಳಿರಬೇಕು ಪ.ಭೂತದಯಾಪರನಾಗಿರಬೇಕು |ಪಾತಕವೆಲ್ಲವ ಕಳೆಯಲು ಬೇಕು |ಮಾತು - ಮಾತಿಗೂಹರಿಎನಬೇಕು1ವೇದ - ಶಾಸ್ತ್ರಗಳನೋದಲು ಬೇಕು |ಭೇದಾಭೇದವ ತಿಳಿಯಲು ಬೇಕು |ಸಾಧು - ಸಜ್ಜನರ ಸಂಗದೊಳಿರಬೇಕು 2ತಂದೆ - ತಾಯಿಗಳ ಸೇವೆಯು ಬೇಕು |ಬಂದುದನುಂಡು ಸುಖಿಸಲು ಬೇಕು |ತಂದೆ ಪುರಂದರವಿಠಲನ ದಯೆಬೇಕು 3
--------------
ಪುರಂದರದಾಸರು
ನಿಜವಿರಬೇಕು ಸಜ್ಜನರಿಗೆ ಒಂದು ಪಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ಅ.ಪಉದಯಾಸ್ತಮಾನ ಮಾಡುವ ವ್ಯಾಪಾರವುಪದುಮಾಕ್ಷ ಕೃಷ್ಣನ ಸೇವೆಯೆಂದುಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿಮಧುವೈರಿಚರಿತೆಯ ಮುದದಿ ಕೇಳುವಂಥ1ಮಡದಿ ಮಕ್ಕಳು ತನ್ನ ಒಡಹುಟ್ಟಿದವರೆಲ್ಲಒಡೆಯನ ಅಡಿಗೆ ಸೇವಕರು ಎಂದುದೃಢದಿ ತಿಳಿದು ಮೃಡನೊಡೆಯನ ಪಾದವಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ 2ಮಾತಾಪಿತರು ಸುತ ಭ್ರಾತರಿಷ್ಟಾಬಂಧುವ್ರಾತರೆಲ್ಲರು ಹರಿಗೆ ದೂತರೆಂದುಮಾತುಳಾಂತಕತಂದೆಮುದ್ದುಮೋಹನವಿಠಲಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ 3
--------------
ತಂದೆ ಮುದ್ದುಮೋಹನ ವಿಠಲರು
ನೀನೋಡುವುದುಚಿತಲ್ಲೊ ಕೃಷ್ಣಯ್ಯನಾನಾ ದುಃಖವನುಂಡು ದಣಿದೆ ನಮ್ಮಯ್ಯ ಪ.ಮಜ್ಜ ಮಾಂಸರುಧಿರಮಲಮೂತ್ರಮಜ್ಜನಮಾಡುತ ಬಸಿರೊಳಗೆಜರ್ಜರಿತನಾದೆ ಲೆಕ್ಕವಿಲ್ಲದಕೆ ಪಾದಾಬ್ಜವನೆಂದು ತೋರಿಸುವಿಯೊ ರಂಗ 1ಎರವುತಂದಿರುವ ಸಂಸಾರದ ಸುಖದೊಳುಉರಿ ಮೂರು ಬೆರಸಾಡಿ ದಹಿಸುತಿದೆತರಳಯೌವನ ಮುಪ್ಪಿಲ್ಯಾರೊಮ್ಮೆ ಚಿತ್ತವುಸ್ಥಿರವಾಗದಿನ್ನೇನುಗತಿಚಿಂತಿಸೈದೆ2ಯಮಭಂಟರುಪಟಳ ನಿನ್ನವರಾದರೆಕ್ರಮವಲ್ಲ ಆನತ ಜನರ ದಾತಾರಭ್ರಮಿಸಲಾರೆನು ಕರುಣಿಸು ಕರುಣಾಂಬುಧಿರಮೆಯ ರಮಣ ಪ್ರಸನ್ವೆಂಕಟ ಧೀರ 3
--------------
ಪ್ರಸನ್ನವೆಂಕಟದಾಸರು
ಪಂಚಭೇದತಿಳಿವದು ಪ್ರತಿದಿನದಲೀ |ಮುಂಚಿನಜ ಮಧ್ವಮುನಿ ಮತವನುಸರಿಸಿದವರೂ ಪಜೀವೇಶರಿಗೆ ಭೇದ ಜೀವ ಜೀವಕೆ ಭೇದ |ದೇವರಿಗು ಜಡಕು, ಜಡಕೆ ಜಡ ಭೇದಾ ||ಆವಾಗಜೀವರಿಗೆ ಜಡಗಳಿಗೆ ಭೇದುಂಟು |ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ 1ಈಶನಿತ್ಯಅನಾದಿಸ್ವರತಸರ್ವಗ ಸ್ವಪ್ರ- |ಕಾಶ ಸರ್ವಜÕವಿಶ್ವವಿಲಕ್ಷಣಾ ||ಮೇಶ ಅಪರಿಚ್ಛಿನ್ನಮೂರ್ತಿಪ್ರಾಣಿಗಳಿಂದ |ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ 2ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||ಆಮಯವಿದೂರ ಜ್ಞಾನಾನಂದ ಬಲ ಪೂರ್ಣ |ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ 3ಸುಖ ದುಃಖಭೋಗಿಜೀವನು ಅಸ್ವತಂತ್ರ ಬಹು |ಕಕುಲಾತಿಉಳ್ಳವನು ದುರ್ವಿಷಯದೀ ||ಲಕುಮೀಶನಲ್ಲಿ ಭಕ್ತಿ ವಿವರ್ಜಿತನುಪ್ರತಿಕ್ಷ- |ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು 4ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |ಮಾಧವನ ಬಂಧಕ ಶಕುತಿಯೊಳಗಿಹ್ಯಾ ||ತಾ ಧರಿಸಿಹನುಪ್ರಾಕೃತಪ್ರಾಕೃತಾವರಣ |ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ 5ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |ಯಂದು ಭೇದಗಳುಂಟವರ ಲಕ್ಷಣಾ ||ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು 6ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ 7ವಿಧಿಮೊದಲು ತೃಣ ಜೀವಪರಿಯಂತಸಾತ್ವಿಕರು |ಇದರೊಳಗೆ ದೇವ, ಋಷಿ, ಪಿತೃಪ, ನರರೂ ||ಸುಧಿಗೆ ಯೋಗ್ಯ ರಜಾದಿಗೀರ್ವಾಣಗಂಧರ್ವ |ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ 8ಇವರಿಂದ ಭಿನ್ನ ರಾಜಸರು ಗೋ ಭೂ ನರಕ |ತ್ರಿವಿಧಗತಿಉಳ್ಳವರು ಪಂಚಭೇದಾ ||ವಿವರ ತರತಮ ದೇವರ ಮಹತ್ಮಿಯನು ಅರಿಯ |ದವರು ಲಿಂಗಕಳಿಯರುಧಾಮತ್ರಯಪೊಗದವರೂ 9ಸಂಸಾರಿಗಳಿಗೆ ಭಿನ್ನರು ತಮೋಗುಣದವರು |ಕಂಸಾರಿಯಲಿ ದ್ವೇಷವರ ಸ್ವಭಾವಾ ||ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |ಕ್ಷಸರು, ಪಿಶಾಚರವರನುಗರು, ನರಾಧಮರು 10ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||ಜ್ಞಾನಿಭೇದವನರಿಯ ಪಂಚ ಮಹಾಪಾತಕಿ ಪು- |ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ 11ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |ಕುಜನರಿಗನೇಕ ಬಗೆ ಸಹಯವಹನೂ ||ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |ವೃಜನವನ ವಪು ತಾಯಿ ತಂಗಿಯಂಬರನರಿಯ 12ಬವರಬಂಗಾರ ದ್ಯೂತಾ ಪೇಯಅನೃತನಟ |ಯುವತಿಯೀಯಾರು ಸ್ಥಳ ನಿಲಯವವರಿಗೆ ||ನವವಿಧ ದ್ವೇಷಿಗಳಿಗಾಕಾರನೆನಿಸುವನು |ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ 13ಆ ನೀಚನ ಮಲಮೂತ್ರ ವಿಸರ್ಜನದಿಘೋರ|ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||ಕ್ಷೋಣಿಯೊಳವನ ನಿಂದೆ ನಿರುತದಲಿ ಮಾಡುವದೆ |ಶ್ರೀನಾಥನರ್ಚನೆ ಮಹಾಯಜÕವೆನಿಸುವದು 14ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||ಮೂವರಿಗೆ ಪಾಪಮಿಶ್ರಿತಕರ್ಮಪುಣ್ಯ ಬಹು |ನೋವು ಸ್ವರ್ಗ ನರಕ ಸುಮೋಕ್ಷಾದಿಗತಿಉಂಟು 15ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |ನೈಜವಾಯಿತು ಭೇದ ಜೀವ ಜಡಕೇ ||ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ,ನಿತ್ಯ|ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ 16ಪ್ರಾಕೃತವಿಕೃತ ವೈಕೃತತ್ರಯ ಅಸ್ಥಿರ ಜಡವು |ಪ್ರಾಕೃತವಜಾಂಡ ಧೊರ ಆವರಣವೂ ||ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು 17ಸರಸಿಜಭವಾಂಡದೊಳಿಹ ನೆಲಜಲಧಿಗಿರಿಗಳು |ಎರಡೇಳುಭುವನವೈಕೃತ ಜಡವಿದೂ ||ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ 18ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |ಜಾಲಕಾರಣತ ಸುಸ್ಥಿರವೆನಿಪವೂ ||ಮ್ಯಾಲೆ ಅದರಿಂದಾದ ತತ್ವಗಳನಿತ್ಯಮಹ |ಕಾಲವೆಂದಿಗ್ಯುನಿತ್ಯಅಣುಕಾಲಗಳ ನಿತ್ಯಾ19ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |ರಾಗಿರಲು ಜಡ ಜಡಕೆ ಭೇದ ಸಿದ್ಧಾ ||ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ20ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |ದೂ ಕೆಡದೆ ಸುಖಕಾಂತಿ ಯುಕ್ತವಾದಾ ||ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |ಶೋಕಪೂರಿತವಾದನಿತ್ಯನರಕಗಳಿಹವು 21ಈಪಂಚಭೇದಜ್ಞಾನಿಲ್ಲದವ ಶ್ರೀ ಮುದ್ರಿ |ಗೋಪಿಚಂದನ ಧರಿಸಿದರು ಫಲವೇನೂ ||ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ 22ಹರಿಗುರುಗಳ ದಯ ಪಡೆವರಿಗೆರುಚಿತೋರ್ವದಿತ |ರರಿಗೆ ಈ ಕೃತಿಯುಕರ್ಣಕಠೋರವೂ ||ತರಣಿಬರೆ ಸರ್ವರಿಗೆ ಘೂಕಗಾದಂತೆ ಇದು |ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು 23ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |ಸಾನುರಾಗದಲಿಹರಿಸರ್ವೋತ್ತುಮಾ ||ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |ಕಾಣರು ಕು ಸಂಸಾರ ಧಾಮತ್ರ ವೈದುವರು 24ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |ಒಪ್ಪುತಿಹ ಈ ಪಂಚಭೇದವನ್ನೂ ||ತಪ್ಪದಲೆನಿತ್ಯಪಠಿಸುವರ ಪೊರವವನು ಬೊಮ್ಮ- |ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ 25
--------------
ಪ್ರಾಣೇಶದಾಸರು
ಪಾಲಿಸು ಗಣನಾಥ ನೀ ಎನ್ನ ಮೇಲೆ ಕೃಪೆಯ ನಿರತ ಪಸ್ಥೂಲ ಶರೀರ ವಿಶಾಲ ಲೋಚನ ಸುರಜಾಲ ವಂದಿತಜಾಲವಂದಿತ ಗುಣಶೀಲ ಸಜ್ಜನಪಾಲ ಅ.ಪಮೂಷಿಕವಾಹನನೆ ವಿಘ್ನೇಶ್ವರ ಪಾಶಾಂಕುಶಧರನೆಈಶ ನಂದನ ನಿನ್ನ ದಾಸನೆನಿಸೊ ಎನ್ನಆಸೆಯ ಸಲಿಸು ವಿಘ್ನೇಶ ವಿನಾಯಕ 1ಕಾಮಿತಫಲಪ್ರದನೇ ವಿನಾಯಕ ಸ್ವಾಮಿ ಶನೇಶ್ವರನೆಸಾಮಜವದನನೇ ಶ್ಯಾಮಲವರ್ಣನೇಕಾಮವರ್ಜಿತ ಗುಣಸ್ತೋಮ ವಂದಿತನೇ 2ಗಿರಿಜೆಯ ವರಸುತನೇ ಲಂಬೋದರ ಉರಗನ ಸುತ್ತಿಹನೇಕರದಿ ಮೋದಕಹಸ್ತವರಏಕದಂತನೆಶರಣು ನಿನಗೆ ಗೋವಿಂದನ ಸಖನೆ 3
--------------
ಗೋವಿಂದದಾಸ
ಪಾಹಿಮಾಂ ಪರಮೇಶಪುರಹರಪಾಹಿಪನ್ನಗಭೂಷಣಾ |ಪಾಹಿಮಾಂ ಗಿರಿಜೇಶ ಸುರವರಪಾಹಿಕ್ಷನ್ನಘನಾಶನಾ 1ಪಾಲಯಂಫಾಲಾಕ್ಷ ಸಜ್ಜನಪಾಲ ಶಂಭು ಮಹೇಶ್ವರಾ |ಪಾಲಯಂ ಪಂಚಾಸ್ಯ ದುರ್ಜನಕಾಲ ಅಂಬಮನೋಹರಾ 2ಮಾಯಮಂ ಬೆರಸೀರ್ಪುದೆನ್ನಯ ಕಾಯದೊಳ್ ಶಶಿಶೇಖರಾ |ಪಾಯಮಂ ಇದಕರಿಯೆ ನಿನ್ನಯ ಸಹಾಯ ಕೊಡುವಿಷಕಂಧರಾ 3ನಂದಿಯನೇರುತ್ತ ಭುವನಾನಂದದಲಿ ಸಂಚರಿಪನೇ |ಬಂಧಮಂ ಬಿಡಿಸೆಂಬೆ ಶಿವ ಗೋವಿಂದದಾಸನಪೊರೆವೆನೆ ||ಪಾಹಿಮಾಂ| |4
--------------
ಗೋವಿಂದದಾಸ
ಪಾಹಿಮಾಂ ರಾಮಚಂದ್ರ ಅಚಲಾಂ ಭಕ್ತಿಂದೇಹಿ ಕಲ್ಯಾಣಸಾಂದ್ರ ಪ.ಶ್ರೀಹರಿ ನಾಗಾರಿವಾಹನ ಶ್ಯಾಮಲ-ದೇಹ ರಾಕ್ಷಸ ಸಮೂಹವಿದಾರಕಅ.ಪ.ಸಜ್ಜನ ಕಲ್ಪವೃಕ್ಷ ಪಾಪಾಂಕುರ-ಭರ್ಜನ ವಿಬುಧಪಕ್ಷಧೂರ್ಜಟಿಸಖ ದೂಷಣಾರಿ ದ್ಯುಮಣಿಕೋಟಿ-ಪ್ರಜ್ವಲಿಪಪರಮಜಗಜ್ಜೀವನಧಾಮನಿರ್ಜರೇಂದ್ರ ಪ್ರಮುಖ ಸುರಗಣ ಪೂಜ್ಯಪೂರ್ಣಬ್ರಹ್ಮ ರಘುವಂ-ಶೋರ್ಜಿತಾತ್ಮ ಮಹಾಮಹಿಮ ರಿಪುದುರ್ಜಯಜಯಾಕಾಂತ ಪ್ರಭುವೆ 1ವೇದೋದ್ಧಾರಣ ಕೂರುಮವರಾಹಪ್ರ-ಹ್ಲಾದವರದ ಗುಣಧಾಮಸಾಧುವಟುವೇಷವಿನೋದಭಾರ್ಗವಬಹುಕ್ರೋಧಿ ಕ್ಷತ್ರಿಯಕುಲ ಭೇದಿ ರಾವಣಾಂತಕಯಾದವಕುಲಾಂಬೋಧಿಚಂದ್ರಕುವಾದಿಜನದುರ್ಬೋಧಬದ್ಧವಿ-ರೋಧ ಕಲಿಮಲಸೂದನಾಚ್ಯುತಶ್ರೀಧರ ರಮಾಮೋದಮಾನಸ 2ಕಾಶಿಮಠಸ್ಥ ಯತಿ ಪರಂಪರ್ಯ-ಭೂಷಣ ಶುದ್ಧಮತಿಶ್ರೀ ಸುಕೃತೇಂದ್ರ ಸನ್ಯಾಸಿ ಪೂಜಿತಪಾದವಾಸುದೇವತವ ದಾಸ್ಯವ ಪಾಲಿಸುಶೇಷಶಯನ ವಿಲಾಸ ಪರಮದಯಾಸಮುದ್ರಸುಭದ್ರ ಶ್ರವಣ ಪ-ರೇಶಭವರುಗ್ಭೇಷಜನೆ ನರಕೇಸರಿಯೆ ಶ್ರೀ ವ್ಯಾಸ ರಘುಪತಿ 3ಪಾರಗಾಣರು ನಿನ್ನಯ ಬ್ರಹ್ಮಾದ್ಯರುಭೂರಿಗುಣದ ಮಹಿಮೆಯಸೂರಿಜನಪ್ರೀತ ಸೀತಾನಯನ ಚ-ಕೋರಚಂದ್ರನು ಮಹೋದಾರ ಶಾಙ್ರ್ಗಧರಮೀರಣಾತ್ಮಜವರದ ನತಮಂದಾರ ಕೈರವಶ್ಯಾಮ ರಾಮನ 4ಪ್ರಣವರೂಪ ನಿರ್ಲೇಪ ನಿತ್ಯಾತ್ಮದು-ರ್ಜನವನೋದ್ದಹನೋದ್ದೀಪಮನುಕುಲಮಣಿ ಮುನಿಗಣ ಸಮಾಹಿತ ಜನಾ-ರ್ದನ ಬ್ರಹ್ಮಾದ್ಯಖಿಳ ಚೇತನರು ನಿನ್ನಾಧೀನಜನುಮ ಜನುಮಕೆ ಲಕ್ಷುಮಿನಾರಾಯಣಚಿದಾನಂದೈಕ ದೇಹನೆಮನ ವಚನ ಕಾಯದಲಿ ಧ್ಯಾನಿಪಘನಭಕುತಿ ಭಾಗ್ಯವನು ಪಾಲಿಸು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪ್ರಥಮ ಕೀರ್ತನೆಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪಅಖಿಳಗುಣಆಧಾರ ನಿರ್ದೋಷ ಶ್ರೀರಮಣಜಗದಾದಿ ಮೂಲಗುರು ಅಗುರು ಶ್ರೀ ಹಂಸವಾಗೀಶಸನಕಾದಿ ದೂರ್ವಾಸಾದಿಗಳಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1ಪುರುಷೋತ್ತಮತೀರ್ಥಅಚ್ಯುತಪ್ರೇಕ್ಷರಿಗೆಪುರುಷೋತ್ತ ಮಾರ್ಯರಕರಕಮಲಜಾತವರವಾತಅವತಾರ ಆನಂದತೀರ್ಥರಚರಣಪದ್ಮದಲಿ ನಾ ಶರಣಾದೆ ಸತತ2ಶ್ರೀ ಮಧ್ವ ಆನಂದತೀರ್ಥಕರಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆನಮಿಪೆಶ್ರೀ ಮನೋಹರ ಪ್ರಿಯರು ಸಂತೈಪರೆಮ್ಮ 3ತ್ರೇತೆಯಲ್ಲಿ ಶ್ರೀ ರಾಮಚಂದ್ರನ್ನ ಸೇವಿಸಲುಸೀತಾ ಪ್ರತಿಕೃತಿಯಲ್ಲಿ ತಾಪೊಕ್ಕವಾತನ್ನೊಲಿಸಿಕೊಳ್ಳ ದವರ್ಗೆಹರಿಒಲಿಯಎಂದು ಜಗಕೆ ತೋರ್ದ ವಾಲಿಯೇ ಇಂದ್ರ 4ವಾತಾವತಾರ ಹನುಮಂತನೇ ದ್ವಾಪರದಿಕೌಂತೇಯ ಭೀಮನು ಅವನಿಗೆಅನುಜಇಂದ್ರ ಅರ್ಜುನನಾಗಿ ಸೇವಿಸಿ ಹನುಮಧ್ವಜಪಾದಮೂಲದಿ ಕುಳಿತ ಕೃಷ್ಣನು ಒಲಿದ5ಅಖಂಡೈಕ ಸಾರಾತ್ಮ ಅನಂತರೂಪಾಭಿನ್ನಶ್ರೀಕೃಷ್ಣ ರಾಮನೇ ಋಷಿವಂಶದಲ್ಲಿಈ ಕುವಲಯದಲ್ಲಿ ಪ್ರಾದುರ್ಭವಿಸಿದ ವ್ಯಾಸಅಕಳಂಕ ಸುಖಜಿತ್ವಪುಷಶ್ರೀಪತಿಯು6ಆಮ್ನಾಯತತಿಪುರಾಣಗಳು ಪೇಳ್ವಂತೆರಮೆಯರಸ ವ್ಯಾಸನ್ನ ಸೇವಿಸಲು ಇಳೆಯೋಳ್ಭೀಮನೇ ಯತಿ ರೂಪದಲ್ಲಿ ಬಂದಿಹನೆಂದುಸುಮನಸರಾಜ ಪುಟ್ಟಿದನು ಪುನಃ7ಹದಿನೆಂಟು ವರುಷಗಳು ಎತ್ತಾಗಿ ತಾನಿದ್ದುಹೊತ್ತು ಮಧ್ವಾಚಾರ್ಯರ ಪುಸ್ತಕಗಳಭಕ್ತಿಯಲಿ ಸೇವಿಸಿ ಮಧ್ವರಾಯರು ಪಾಠಬೋಧಿಸುವದು ಕೇಳ್ದ ವೃಷಭರಾಟ್ ಇಂದ್ರ 8ಆನಂದಪ್ರದ ತತ್ವಬೋಧಕ ಭಾಷ್ಯಾದಿಗಳಆನಂದ ಮುನಿಮಧ್ವ ಬೋಧಿಸಲು ಗ್ರಹಿಸಿವಿನಯದಿ ಕೇಳ್ದರು ಶಿಷ್ಯರು ಟೀಕೆಗಳಗ್ರಂಥಗಳಿಗೆ ಯಾರು ಮಾಡುವುದು ಎಂದು 9ಈ ಗೋರಾಜನೇ ಟೀಕೆಗಳ ಸಂರಚಿಸಿಜಗತ್ತಲ್ಲಿ ಸತ್ತತ್ವ ಶಾಸ್ತ್ರ ಪ್ರಕಟಿಸುವಹೀಗೆಂದು ಶ್ರೀ ಮಧ್ವಾಚಾರ್ಯರಾಜ್ಞಾಪಿಸಲುಮಿಗೆ ಹರುಷದಲಿ ಗೋರಾಟ್ ಶಿರವ ಬಾಗಿದನು 10ಯುಕ್ತ ಕಾಲದಿ ಈ ಗೋರಾಜ ನೇವೆರಘುನಾಥ ದೇಶಪಾಂಡೆ ರುಕ್ಮಾಬಾಯಿಗೆಮಗನಾಗಿ ಜನಿಸಿದನು ಮಂಗಳವೇಢೆಯಲಿಈ ಗ್ರಾಮ ಪಂಢರಪುರದ ಸಮೀಪ 11ಧೋಂಡುರಾಯನು ಎಂಬ ನಾಮದಲಿ ಬೆಳೆದಗಂಡಿಗೆ ಉಪನಯನ ಮದುವೆಯೂ ಆಯ್ತುಹೆಂಡತಿ ಭೀಮಾಬಾಯಿ ಸುಗುಣೆ ಸೌಂದರ್ಯವತಿಚಂಡ ಶ್ರೀಮಂತರ ಮನೆತನದವಳು 12ಒಂದುದಿನ ಧೋಂಡುರಾಯನು ನದೀ ದಡಕೆಬಂದನು ಕುದುರೆಯ ಮೇಲೇರಿಕೊಂಡುಅಂದು ಅಕ್ಷೋಭ್ಯ ಮಠ ಸಂಚಾರ ಕ್ರಮದಲ್ಲಿನಿಂತಿತ್ತು ಮೊಕ್ಕಾಮಾಗಿ ಆಚೆಕಟ್ಟೆಯಲಿ 13ನದೀತೀರ ಕುಳಿತಿದ್ದ ಅಕ್ಷೋಭ್ಯ ತೀರ್ಥರುಎದುರಾಗಿ ನದಿಯಲ್ಲಿ ಆಚೆದಡದಿಂದಕುದುರೆ ಸವಾರನು ವರ್ಚಸ್ವಿ ಯುವಕನುಬೆದರದೆ ಪ್ರವಾಹದಲಿ ಬರುವದು ನೋಡಿದರು 14ಕುದುರೆ ಮೇಲ್ ಅಸೀನನಾಗಿದ್ದ ಯುವಕನುಕ್ಷುತ್ತೃಷೆಶಮನಕ್ಕೆ ಯತ್ನ ಮಾಡುತ್ತಾಉದಕವ ಕೈಯಿಂದ ತುಂಬಿಕೊಳ್ಳದಲೇಎತ್ತಗಳು ಕುಡಿವಂತೆ ಬಾಯಿ ಹಚ್ಚಿದನು 15ಮಾಧವಮಧ್ವರು ಮೊದಲೇ ಸೂಚಿಸಿದಂತೆಇಂದುಆ ಕುರುಹ ಅರಿತು ಅಕ್ಷೋಭ್ಯರುಇದು ಏನು `ಪಶು' ವಂತೆ ಎಂದು ಧ್ವನಿಕೊಟ್ಟರುಹಿಂದಿನ ಜನ್ಮ ಧೊಂಡೋಗೆ ನೆನಪಾಯ್ತು 16ಪ್ರವಾಹದ ನಗಾರಿಯ ಸಮಬಲಿ ಧೋಂಡುವೇಗ ಲೆಕ್ಕಿಸದಲೇ ದಡಕೆ ತಾ ಬಂದುಮುಗಿದಕರಬಾಗಿ ಶಿರ ನಮಿಸಿ ಅಕ್ಷೋಭ್ಯರಆಗಲೇ ಸಂನ್ಯಾಸಕೊಡಲು ಬೇಡಿದನು 17ಗಾಧಿ ಅರ್ಜುನ ಸಮ ಬಲ ರೂಪದಲಿ ತೋರ್ಪಈತ ರಾಯರ ಸುತನಾದರೂ ವೈರಾಗ್ಯಯುತ ಭಕ್ತಿಮಾನ್ ಸುಶುಭ ಲಕ್ಷಣನೆಂದುಹರಿಮಧ್ವ ನಿಯಮಿತ ಅವಗೆ ಕೊಟ್ಟರು ಸಂನ್ಯಾಸ 18ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವಜಯ ಶೀಲ ಹೊಸಯತಿಗೆ ಇತ್ತು ಅಭಿಷೇಕಅಕ್ಷೋಭ್ಯಗುರು ಮಾಡೆ ಗಗನದಿ ಪೂವರ್ಷಜಯ ಷೋಷ ಹರಡಿತು ಪರಿಮಳ ಸುಗಂಧ 19ತಂದೆ ರಘುನಾಥರಾಯನು ಸುದ್ದಿಕೇಳಿಬಂದು ಅಕ್ಷೋಭ್ಯರ ಕಂಡು ಬಲುಕೋಪದಿಂದ ಯಾಕೆ ಸಂನ್ಯಾಸ ಯುವಕಗೆ ಕೊಟ್ಟಿರಿಎಂದು ವಾದಿಸಿದನು ಪುತ್ರ ಮೋಹದಲಿ 20ಪೂರ್ವಧೋಂಡುರಾಯ ಈಗ ಜಯತೀರ್ಥರುತಾವೇ ಸ್ವೇಚ್ಛೆಯಿಂದ ಕೊಂಡರು ಸಂನ್ಯಾಸಈ ವಿಷಯ ತಿಳಕೊಂಡರೂ ಸಹ ರಘುನಾಥಸೇವಕರ ಸಹ ಮಗನ ಕರಕೊಂಡು ಹೋದ 21ರಾಯನು ಮಗನನ್ನ ಗೃಹಸ್ಥ ಚರ್ಯದಲಿರಿಸೆಶಯನಗೃಹದೊಳು ಪತ್ನಿ ಸಹಿತ ಕಳುಹಿದನುಶಯನ ತಲ್ಪದಿ ದೊಡ್ಡ ಸರ್ಪಕಂಡಳು ಯುವತಿಭಯದಿಂದ ಹೊರಬಂದು ಹೇಳಿದಳು ವಿಷಯ 22ತನ್ನಪತಿಧೊಂಡರಾಯನ್ನ ತಲ್ಪದಲಿಕಾಣದೆ ಅವರಿದ್ದ ಸ್ಥಾನದಲಿ ಸರ್ಪಘನಧೀರ್ಘಗಾತ್ರವಿಸ್ತಾರ ಹೆಡೆಯಿಂದಮಿನುಗುತ್ತ ಕುಳಿತಿದ್ದ ವಿವರ ಪೇಳಿದಳು 23ರಘುನಾಥರಾಯನು ಹರಿಚಿತ್ತ ಇದು ಎಂದುಮಗನ ಪ್ರಭಾವವ ಅರಿತು ತ್ವರಿತದಲಿಅಕ್ಷೋಭ್ಯರಲಿ ಹೋಗಿ ಶಿಷ್ಯನ್ನ ಒಪ್ಪಿಸಿಬಾಗಿ ಶಿರ ಸನ್ನಮಿಸಿ ಕ್ಷಮೆಯ ಬೇಡಿದನು 24ವಂಶ ವೃಧ್ಧಿಗೆ ಮತ್ತೂ ಪುತ್ರಪುಟ್ಟವನೆಂದುದೇಶಪಾಂಡೆಯ ಅನುಗ್ರಹಿಸಿ ಕಳುಹಿಸಿದಶಪ್ರಮತಿ ಪೀಳಿಗೆಯೊಳು ಅಕ್ಷೋಭ್ಯಮುನಿಗ¼ Àುಶಿಷ್ಯ ಜಯತೀರ್ಥರಿಗೆ ಸ್ಥಾನ ನೇಮಿಸಿದರು 25ಶ್ರೀ ಮದ್ವಾಚಾರ್ಯರು ಬೋಧಿಸಿ ತೋರಿಸಿದಶ್ರೀ ರಮಾಪತಿ ಪೂಜಾ ಸತ್ತತ್ವವಾದದುರ್ಮತ ಖಂಡನದ ರೀತಿಯ ಜಯಾರ್ಯರಿಗೆಸಮ್ಮುದದಿ ಅರುಹಿದರು ಅಕ್ಷೋಭ್ಯ ಗುರುವು 26ಶಕ ವರುಷ ಹನ್ನೊಂದು ನೂರು ಅರವತ್ತೇಳುಮಾರ್ಗಶಿರ ಕೃಷ್ಣ ಪಂಚಮಿ ವಿಶ್ವಾವಸುವಲ್ಲಿಅಕ್ಷೋಭ್ಯ ತೀರ್ಥರ ಪೀಠ ಆರೋಹಿಸಿಶ್ರೀಕರಗೆ ಪ್ರೀತಿಕರ ಪಟ್ಟವಾಳಿದರು 27ದೇವತಾರ್ಚನೆ ಶಿಷ್ಯ ಉಪದೇಶ ಮಾಡುತ್ತದಿಗ್ವಿಜಯದಲಿ ದುರ್ವಾದಿಗಳ ಗೆದ್ದುಮಧ್ವಗ್ರಂಥಗಳಿಗೆ ಟೀಕೆಗಳ ರಚಿಸಿಪ್ರಖ್ಯಾತರಾದರು ಜಯತೀರ್ಥ ಆರ್ಯ 28ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನ ಕರುಣಿಜಯತೀರ್ಥಗುರುನಮೋಪಾಹಿ29|| ಪ್ರಥಮ ಕೀರ್ತನೆ ಸಮಾಪ್ತ ||ದ್ವಿತೀಯಕೀರ್ತನೆಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪನರಹರಿಯ ಮಹಾದುರ್ಗೆಯ ಕುರಿತು ತಪಸ್ ಆಚರಿಸಿವರವ ಪಡೆದಿಹರು ಈ ಜಯತೀರ್ಥ ಆರ್ಯಬರೆವುದಕೆ ಲೇಖನವು ಅಡಿಕೆಯುಅರದೂರದುರ್ಗೆಯು ಕೊಟ್ಟಿಹಳು ಇವರ್ಗೆ1ಎರಗೋಳದಲ್ಲಿದ್ದು ಶ್ರೀ ಮದಾಚಾರ್ಯರಪರಸುಖಪ್ರಮೂಲಗ್ರಂಥಗಳ ಟೀಕಾಬರೆದಿಹರು ಅನುಪಮ ಉತ್ತಮ ರೀತಿಯಲಿಭರದಿ ಓದುವವರೇ ಬಲ್ಲರು ಮಹಿಮೆ 2ಶ್ರೀ ಮಧ್ವಕೃತವು ಶ್ರೀ ಬ್ರಹ್ಮಸೂತ್ರಭಾಷ್ಯವುಆ ಮೂಲಗ್ರಂಥವು ಎರಡು ಸಾವಿರವುಆ ಮಹಾಭಾಷ್ಯಕ್ಕೆ ಟೀಕೆ ಅಷ್ಟ ಸಹಸ್ರವುಅಮ್ಮಮ್ಮ ಏನೆಂಬೆ ಈ ಮಹಾ ಕಾರ್ಯ 3ಅನುವ್ಯಾಖ್ಯಾನದ ನಾಲಕ್ಕು ಸಾವಿರಘನತರ ಗ್ರಂಥಕ್ಕೆ ಜಯತೀರ್ಥರಜ್ಞಾನಪ್ರದ ಅಜ್ಞಾನಗಿರಿವಜ್ರಟೀಕೆಯಗ್ರಂಥ ಇಪ್ಪತ್ತೆಂಟು ಸಾವಿರ ಸಂಖ್ಯಾ 4ಈ ನುಡಿ ಬರೆವಾಗ ಬಿಂದುಮಾಧವ ಪೇಳ್ದಘನ್ನ ಶುಭತರ ಮಧ್ವ ವಿಜಯದಲ್ಲಿಅನುವ್ಯಾಖ್ಯಾನದ ಟೀಕಾ ಸುಧಾ ಎಂದುಶ್ರೀ ನಾರಾಯಣಾಚಾರ್ಯ ಸೂಚಿಸಿಹರೆಂದು 5ತತ್ವ ಸಂಖ್ಯಾನಕ್ಕೂ ಕಥಾ ಲಕ್ಷಣಕ್ಕೂತತ್ವ ವಿವೇಕಕ್ಕೂ ಋಗ್ಬಾಷ್ಯಕ್ಕೂತತ್ವ ನಿರ್ಣಯಕ್ಕೂ ಪ್ರಮಾಣ ಲಕ್ಷಣಕ್ಕೂತತ್ವೋದ್ಯೋತಕ್ಕೂಕರ್ಮನಿರ್ಣಯಕ್ಕೂ6ಮಾಯಾವಾದಉಪಾಧಿಖಂಡನಗಳಿಗೂಮಿಥ್ಯಾತ್ವಾನುಮಾನ ಖಂಡನಕ್ಕೂನ್ಯಾಯ ವಿವರಣಕ್ಕೂ ಗೀತಾ ಭಾಷ್ಯಕ್ಕೂನ್ಯಾಯ ತೇಜೋಜ್ವಲ ಗೀತಾ ತಾತ್ವರ್ಯಕ್ಕೂ 7ಪಟ್ಟ್ರಶ್ನ ಈಶಾವಾಸ್ಯ ಭಾಷ್ಯಗಳಿಗೂಅಷ್ಟಾದಶ ಈ ಗ್ರಂಥಗಳಿಗೆಪಟು ಪಟೀಯಸವಾಗಿ ಟೀಕೆಯಾ ಬರೆದಿಹರುಇಷ್ಟೇ ಅಲ್ಲದೇ ಇನ್ನೂ ನಾಲ್ಕು ರಚಿಸಿಹರು 8ಪ್ರತ್ಯಕ್ಷ ಅನುಮಾನಆಗಮಪ್ರಮಾಣಗಳರೀತಿ ಲಕ್ಷಣ ಪೇಳ್ವ ಪ್ರಮಾಣ ಪದ್ಧತಿಯುಮಾಧವನ ಸರ್ವೋತ್ತಮ ಜಗತ್ ಸತ್ಯತ್ವಇಂಥಾದ್ದು ಸಾಧಿಸುವ ವಾದಾವಳಿಯು 9ತಂತ್ರಸಾರಪಾಂಚರಾತ್ರಾಗಮಾನುಸರಿಸಿಪದ್ಯಮಾಲಾನಾಮ ಗ್ರಂಥದಲ್ಲಿಶ್ರೀಧರ ಸರ್ವೋತ್ತಮಾರ್ಚನೆ ಬಗೆ ಪೇಳಿದರುಶತಾಪರಾಧ ಸ್ತೋತ್ರವು ಮಾಡಿಹರು 10ದಿಗ್ವಿಜಯ ಮಾಡಿ ಸಜ್ಜನರ ಉದ್ಧರಿಸುತ್ತಾದುರ್ವಿದ್ಯಾ ದುರ್ಮತಗಳನ್ನ ಛೇದಿಸುತಸುವೈದಿಕ ಮಧ್ವಸಿದ್ಧಾಂತ ಸ್ಥಾಪಿಸುತಭುವಿಯಲಿ ಪ್ರಖ್ಯಾತರಾದರು ಜಯಾರ್ಯ 11ಒಂದು ಸಮಯದಿ ವಿದ್ಯಾರಣ್ಯರು ಶ್ರೀಮಧ್ವಗ್ರಂಥ ಓದಿ ನೋಡಿ ಅರ್ಥವಾಗದಲೆಗ್ರಂಥಕ್ಕೆ ಜಯರಾಯರು ಬರೆದ ಟೀಕೆಯಓದಲು ಅರ್ಥವು ವಿಶದವಾಯ್ತು 12ಪೂರ್ವಾಪರ ಸಂಗತಿ ಮತ್ತು ವಾಕ್ಯಾರ್ಥಸರ್ವ ಪ್ರಕಾರದಲೂ ಉತ್ತಮವಾಗಿಹುದುಸರ್ವಜÕ ಮುನಿಗಳ ಗ್ರಂಥದ ಸರಿಯಾದಭಾವವ ವಿವರಿಸುವುದೆಂದು ಹೇಳಿದರು 13ಈ ರೀತಿ ವಿದ್ಯಾರಣ್ಯರು ಕೊಂಡಾಡಿಪುರಿ ರಾಜಬೀದಿಯಲಿ ಆನೆ ಅಂಬಾರಿಮೆರವಣಿಗೆ ಮಾಡಿಸಿ ಜಯಘೋಷ ಮಾಡುತ್ತಾಮರ್ಯಾದೆ ಮಾಡಿದರು ವಿಜಯನಗರದಲಿ 14ಮಧ್ವಗಂಥಗಳನ್ನು ಜಯಾರ್ಯ ಬರೆದಿರುವಉತ್ತಮ ಟೀಕೆಗಳ ಬಲು ಶ್ಲಾಘಿಸುತ್ತವಿದ್ಯಾರಣ್ಯರು ನಮಸ್ಕಾರ ಮಾಡಿದರುಎಂದು ಇತಿಹಾಸವ ಸುಜನರು ಪೇಳುವರು 15ಸ್ವಮತ ಪರಮತ ವಿದ್ವಜ್ಜನರಿಂದಈ ಮಹಾಮಹಿಮ ಟೀಕಾಚಾರ್ಯ ಆರ್ಯಈ ಮಹಿಯಲ್ಲಿ ಪ್ರಖ್ಯಾತ ಪೂಜಿತರಾಗಿತಮ್ಮ ಗುರುಕ್ಷೇತ್ರ ಮಳಖೇಡ ಸೇರಿದರು 16ಮಳಖೇಡ ಕ್ಷೇತ್ರದಲ್ಲಿ ಕಾಗಿನೀ ನದಿತೀರಮಾಲೋಲ ಪ್ರಿಯ ಅಕ್ಷೋಭ್ಯರ ವೃಂದಾವನಶೀಲತಮ ಜಯರಾಯ ಅಲ್ಲಿಯೇ ನಿಂತರುಅಳವೇ ವರ್ಣಿಸಲು ಈ ಮಹಾತ್ಮರ ಮಹಿಮೆ 17ಹನ್ನೊಂದು ತೊಂಭತ್ತು ಶಕವಿಭವಆಷಾಢಕೃಷ್ಣ ಪಂಚಮಿ ಪುಣ್ಯದಿನದಲ್ಲಿ ಇವರುತನ್ನ ಸೇವಾ ವಿಷ್ಣು ಮಧ್ವರಿಗೆ ಪೂರೈಸಿಶ್ರೀ ನಾರಾಯಣನಪಾದಸೇರಿದರು18ಮತ್ತೊಂದು ಅಂಶದಲ್ಲಿ ವೃಂದಾವನದಲ್ಲಿಇದ್ದು ಸೇವಿಸುವವರ್ಗೆ ವಾಂಛಿತವೀಯುತ್ತಮಧ್ವಸ್ಥ ಶ್ರೀ ಹರಿಯ ಧ್ಯಾನಿಸುತ ತಮ್ಮಗುರುಬದಿಯಲ್ಲಿ ಕುಳಿತಿಹರು ಸ್ಮರಿಸೆ ಪಾಲಿಪರು 19ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನಕರುಣಿ ಜಯತೀರ್ಥಗುರುನಮೋಪಾಹಿ20||ಇತಿ ಶ್ರೀ ಜಯತೀರ್ಥವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಥಮ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಹಂಸನಾಮಕ ವಿಷ್ಣು ವನರುಹಾಸನಸನಕದೂರ್ವಾಸಮೊದಲಾದಗುರುವಂಶಜಾತದಶಪ್ರಮತಿಸರಸಿಜನಾಭನರಹರಿತೀರ್ಥಬಿಸಜಚರಣಂಗಳಲಿ ಸತತ ನಾ ಶರಣು |1ಮಾಧವಅಕ್ಷೋಭ್ಯ ಜಯವಿದ್ಯಾಧಿರಾಜ ರಾ-ಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯತತ್ವಜÕ ರಘೂತ್ತಮಾರ್ಯರಿಗೆವೇದವ್ಯಾಸ ಯತಿಗಳಿಗೆ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯ ಸತ್ಯಬೋಧರಿಗೆಭೃತ್ಯನಾ ಎನ್ನ ವಂದನೆಗಳರ್ಪಿಸುವೆ4ಸತ್ಯಬೋಧರ ಮಹಿಮೆ ಬಹು ಬಹು ಬಹುಳವುವೇದ್ಯ ಎನಗೆ ಅತಿ ಸ್ವಲ್ಪ ಮಾತ್ರಆದರಲ್ಲೂ ಬಿಟ್ಟದ್ದು ಬಹು ಇಲ್ಲಿ ಪೇಳಿಹುದುಅತಿ ಕಿಂಚಿತ್ ಅಣುಮಾತ್ರ ಸುಜನರು ಲಾಲಿಪುದು 5ರಾಮಾಚಾರ್ಯರು ಸಣ್ಣ ವಯಸ್ಸಿನವರುನೇಮದಿಂದಾಶ್ರಮೋಚಿತ ಕರ್ಮಪರರುರಾಮ ಹಯಶೀರ್ಷ ನರಸಿಂಹನ ಗುಣರೂಪಸಮ್ಮುದದಿ ಜ್ಞಾನಭಕ್ತಿಯಲಿ ಧ್ಯಾನಿಪರು 6ಈ ರಾಯಚೂರು ರಾಮಾಚಾರ್ಯರೇ ಸತ್ಯಪ್ರಿಯಗುರುಗಳ ಸಂಸ್ಥಾನ ಪೀಠಕ್ಕೆ ಬಂದುಸೂರಿವರ್ಯರು ಸತ್ಯಬೋಧ ತೀರ್ಥರು ಎಂದುಧರೆಯಲ್ಲಿ ಪ್ರಖ್ಯಾತರಾಗಿಹರು ಕರುಣಿ 7ಬಾದರಾಯಣಮಾಧ್ವ ಸಚ್ಛಾಸ್ತ್ರ ಬೋಧಿಸಿಅಧಿಕಾರಿಗಳ ಉದ್ಧರಿಸಿ ಅಲ್ಲಲ್ಲಿವೇದ ವಿರುದ್ದ ದುರ್ವಾದಗಳ ಕತ್ತರಿಸಿಮೇದಿನಿಸಜ್ಜನರ ಪೊರೆದಂಥ ಧೀರ 8ಪೀಠ ಆರೋಹಿಸಿದ ಪೂರ್ವಗುರುಗಳ ಪೋಲುಮಠಕ್ಕೆ ಮಾನ್ಯಗಳ ಅಭರಣಗಳನ್ನಪಟ್ಟಣ ಪ್ರಮುಖರು ಧನಿಕರು ಭೂಪಾಲರುಕೊಟ್ಟದ್ದು ಅಲ್ಲಲ್ಲಿ ಸ್ವೀಕರಿಸಿದರು 9ಸತ್ಯಪ್ರಿಯರಾರಾಧನೆಗಾಗಿ ಬಂದಿದ್ದಸತ್ಯಬೋಧರ ಮಹಿಮೆಯನ್ನು ಲೆಕ್ಕಿಸದೆಬಂಧಿಸಿದ ಶ್ರೀಮಠವ ರಾಮೇಶ್ವರ ರಾಜಬಂತು ಸೈನ್ಯವು ತಿರುಚಿನಾಪಳ್ಳಿಯಿಂದ 10ತಿರುಚಿನಾಪಳ್ಳಿಯಿಂದ ಜಾನೋಜಿರಾವ್ ನಿಂಬಳ್ಕಾರನು ಸೈನ್ಯವನು ಕಳುಹಿಸಿದನುವಿರೋಧ ಬಿಡುಗಡೆ ಮಾಡಿ ಆ ರಾಜನ್ನ ಶಿಕ್ಷಿಸಿಗುರುಗಳ ಕರೆತಂದ ತಿರುಚಿನಾಪಳ್ಳಿಗೆ 11ತಿರುಚಿನಾಪಳ್ಳಿಯ ಮ್ಲೇಛ್ಬರಾಜನು ಈಗುರುಗಳ ಪ್ರಭಾವವ ಅರಿಯದೆ ಮೌಢ್ಯದಲಿವರಧನಾಪಹಾರಿಯು ಎಂದು ಆಪಾದಿಸಿನಿರೋಧಿಸಿದ ಶೋಧನೆ ಮಾಡುವ ನೆವದಿ 12ಪರಿಶೋಧನೆಯಲ್ಲಿ ಮೈಲಿಗೆ ಆಗದಿರೆಗುರುಗಳು ರಾಮದೇವರ ಪೆಟ್ಟಿಗೆಯತಿರುಕಾಟ್ಟು ಪಳ್ಳೀಗೆ ಕಳುಹಿಸಿ ಉಪೋಷಣದಿಹರಿಯ ಮಾನಸ ಪೂಜೆ ಮಾಡುತ ಕುಳಿತರು 13ಜಾನೋಜಿರಾಯನು ವಾದಿಸೆ ಸುಲ್ತಾನತನ್ನ ಸರ್ಕಾರ ಶೋಧಕರ ಕಳುಹಿಸಿದತನ್ನ ಹಿರಿಯರ ಮತ್ತು ಇತರ ರಾಜರುಗಳಚಿಹ್ನೆ ಮುದ್ರಿತ ಒಡವೆ ಮಾತ್ರವೆ ಕಂಡ 14ವಿರೋಧ ನೀಗಿಸಿ ನಿಂಬಳ್ಕರನ ಕೈಯಿಂದಹರಿಪೂಜೆಗುರುಪೂಜೆ ಮಾಡಿಸಿ ಕಾಣಿಕೆಯುಗುರುತರದಿ ಅರ್ಪಿಸಿದ ಆ ಮ್ಲೇಛ್ಭರಾಜನುಗುರುಸತ್ಯಬೋಧರ ಕೀರ್ತಿವರ್ಧಿಸಿತು15ತಿರುಕಾಟ್ಟುಪಳ್ಳಿಯಿಂದಲಿ ಪೂಜೆ ಪೆಟ್ಟಿಗೆಯತರಿಸಿ ಹರಿಪೂಜೆಯ ಮಾಡಿ ಮುದದಿಂದಮರ್ಯಾದೆ ಕಾಣಿಕೆಗಳಕೊಂಡು ದಿಗ್ವಿಜಯಚರಿಸಿದರು ಹರಿಗುರು ತೀರ್ಥಸ್ಥಳಗಳಿಗೆ 16ಮಾರ್ಗದಲಿ ತಂಜಾವೂರಿನ ರಾಜನುಶ್ರೀ ಗುರುಗಳಿಗೆ ಸೇವೆಸÀಲ್ಲಿಸಿದನಗರದಲಿ ಪ್ರಮುಖಪಂಡಿತಗೋಸಾಯಿಯನಿಗಮಾಂತ ವಾದದಲಿ ಸೋಲಿಸಿದರು 17ಕುಂಭಕೋಣದಿ ಬ್ರಾಹ್ಮಣರ ಬೀದಿಯಲ್ಲಿಗಂಭೀರತರ ದೊಡ್ಡ ಮಂಟಪಕಟ್ಟಿಸಂಭ್ರಮದಿ ಹರಿಪೂಜೆಗೈದು ವಿದ್ವಜ್ಜನಸಭೆಯಕೂಡಿ ವಾಕ್ಯಾರ್ಥ ನಡೆಸಿದರು 18ಶ್ರೀರಂಗ ಕ್ಷೇತ್ರ ತಂಜಾವೂರು ತರುವಾಯಸಾರಂಗಪಾಣಿ ಕುಂಭೇಶ್ವರ ಕ್ಷೇತ್ರಪರಿಕಲ್ಲು ತಿರುಕೋಯಿಲೂರು ಮಾರ್ಗದಿ ಬಂದುಸೇರಿದರು ತಿರುಪತಿ ವೇಂಕಟಾಚಲಕ್ಕೆ 19ಶ್ರೀರಂಗನಾಥನಿಗೆ ಶ್ರೀರಂಗನಾಯಕಿಗೆಕ್ಷೀರಾಬ್ಧಿಯಲಿತೋರ್ದ ಧನ್ವಂತರಿಗೆನೀರುಮಧ್ಯದಿ ಇರುವ ಜಂಬುಕೇಶ್ವರನಿಗೆಭಾರಿ ಪುಣ್ಯದೆ ಕಾವೇರಿಗೆ ನಮಿಪೆ 20ಶಾಙ್ರ್ಗಧರಚಕ್ರಧರಕುಂಭೇಶ್ವರಅಂಬಮಂಗಳನಾಯಕಿ ವಿಜಯೀಂದ್ರರಿಗೆನಾಗೇಶ್ವರನಿಗೆ ವಿದ್ಯುಪುರಿ ಶ್ರೀಶನಿಗೆಭೃಗುಸುತಪತಿ ಶ್ರೀನಿವಾಸನಿಗೆ ನಮಿಪೆ 21ಪರಿಕಲ್ಲು ಎಂಬುವ ಗ್ರಾಮದಲಿ ನರಸಿಂಹಶ್ರೀರಮಾಪತಿ ಇಹನು ಸರ್ವೇಷ್ಟದಾತಪರಿಪರಿ ಭಕ್ತರ ಪೀಡೆಗಳ ಪರಿಹರಿಪಶರಣಾದೆ ಶ್ರೀ ಲಕ್ಷ್ಮಿ ನರಸಿಂಹನಲ್ಲಿ 22ತಿರುಕೋಯಿಲೂರಲ್ಲಿ ಮೂರ್ಲೋಕ ಅಳೆದವನಭಾರಿಆಲಯಉಂಟು ಶಿವಕುಮಾರರಿಗೂಪಾತ್ರ ವಿಶಾಲವು ದಕ್ಷಿಣ ಪಿನಾಕಿನಿಯತೀರದಲಿ ಶ್ರೀರಘೂತ್ತಮರು ಕುಳಿತಿಹರು 23ಪಿನಾಕಜಾ ಈ ಪಿನಾಕಿಯಲ್ಲಿಹನುಅನಿಮಿತ್ತ ಬಂಧುಶ್ರೀಕೇಶವ ಸರ್ವೇಶಸ್ನಾನ ಜಪದಾನಗಳು ಪಣ್ಯಪ್ರದತತ್ತೀರವನದಲ್ಲಿ ಶ್ರೀ ರಘೂತ್ತಮರ ವೃಂದಾವನ 24ಶ್ರೀಯುತ ತ್ರಿವಿಕ್ರಮ ವಿಶ್ವರೂಪಗೆ ನಮೋಕಾತ್ಯಾಯನಿ ಶಿವಗೂ ಸ್ಕಂಧವಲ್ಲಿಗೂಕಾಯವಾಕ್ಕು ಮನದಿ ಟೀಕಾಭಾವಬೋಧರಿಗೂಕಾಯಮನ ಶುದ್ಧಿಕರ ಪಿನಾಕಿನಿಗೂ ನಮಿಪೆ 25ತಿರುಕೋಯಿಲೂರಿಗೆ ಕ್ರೋಶತ್ರಯದೊಳಗೇವೆವೀರ ಚೋಳಪುರದಲ್ಲಿ ಶ್ರೀ ಸತ್ಯನಾಥತೀರ್ಥರು ಅಭಿನವ ಚಂದ್ರಿಕಾಕಾರರುಇರುತಿಹರು ವೃಂದಾವನದಲ್ಲಿ ವಂದೇ 26ತಿರುಕೋಯಿಲೂರಿಂದ ತಿರುವಣ್ಣಾಮಲೆಯೆಂಬಅರುಣಾಚಲಕೆ ಪೋಗಿ ಅಲ್ಲಿ ರಾಜಿಸುವಕರುಣಾಬ್ಧಿ ಗಿರಿಜಾರಮಣನ್ನ ವಂದಿಸಿತಿರುಪತಿಗೆ ಹೊರಟರು ಗುರುಸರ್ವಭೌಮ 27ಹೇಮಗರ್ಭನತಾತಶ್ರಿಪತಿ ಜಗನ್ನಾಥಆಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 28 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ಕೃಷ್ಣಾಮೃತಸಾರ27ಬಾರೋ ಎನ್ನ ಮನಕೆ ಗೋಪಾಲಕೃಷ್ಣಬಾರೋ ಎನ್ನ ಮನಕ್ಕೆ ಪಬಾರೋ ಎನ್ನ ಮನಕೆ ಭಾಮೆ ರುಕ್ಮಿಣೀ ಸಹಸರಸೀರುಹಾಸನ ಶಿವಾದ್ಯಮರ ವಂದ್ಯ ಅ.ಪ.ಮೋದಚಿನ್ಮಯ ಜಗಚೇಷ್ಟಕ ಬಲರೂಪಯದುಪತೇ ಕೃಷ್ಣ ನೀನು ದೇವಕೀ ಸುತನೆನಿಸಿಮೇದಿನಿಯಲಿ ಅವತಾರ ಮಾಡಿದಅಜಸಾಧು ಸದ್ಭಕ್ತರ ಸದ್ಧರ್ಮ ರಕ್ಷಿಸಲು 1ಪೂತನಿ ಶಕಟತೃಣಾವರ್ತವತ್ಸಬಕಅಘಧೇನು ಕೇಶಿ ಚಾಣೂರ ಮುಷ್ಟಿಕದೈತ್ಯಕುವಲಯಪೀಡಾ ಕಂಸಾದಿ ದುಷ್ಟರನ್ನಸದೆದು ಭೂಬಾರವ ಇಳಿಸಿದಿಶೌರಿ2ಸುಂದರ ವದನದಲ್ಲಿ ಜಗವೆಲ್ಲಾ ತೋರಿಸಿದಿಉದ್ಧರಿಸಿ ಮಣಿಗ್ರೀವ ನಳಕೂಪರನ್ನಮುಖಾದಿಂದ್ರಶ್ಚಾಗ್ನಿ ದಾವಾಗ್ನಿಯನು ನುಂಗಿನಂದನ್ನ ವರ್ಣಾಲಯದಿಂದ ಬಿಡಿಸಿ ತಂದಿ 3ನಾಗಪತ್ನಿಯರಿಗೂ ಕಾಳಿಂಗನಿಗೂ ಒಲಿದುನಗವನ್ನ ಎತ್ತಿ ಗೋ ಗೋಪಾ ಜನರ ಕಾಯ್ದಿಉಕ್ಕುವ ಪ್ರೇಮದಿಂ ಸೇವಿಸಿದ ಗೋಪಿಯರಭಕುತೀಗೆ ಮೆಚ್ಚಿ ಯೋಗ್ಯ ಸಾಧನ ಫಲವಿತ್ತಿ 4ಸುದರ್ಶನಾಭಿದ ವಿದ್ಯಾಧರನ್ನ ಶಾಪದಿಂದಪಾದಸ್ಪರ್ಶವನಿತ್ತು ಮೋಚನೆ ಮಾಡಿಉದ್ಧರಾಕ್ರೂರ ಸ್ತ್ರೀ ವಾಯುಕ ಮಾಲಾಕಾರಮೊದಲಾದವರ್ಗೂವಿಪ್ರಸ್ತ್ರೀಯರಿಗೂ ಒಲಿದಿ5ಬಲಭದ್ರ ಸುಭದ್ರ ಸಹ ಕೃಷ್ಣ ಜಗನ್ನಾಥಮಾಲೋಲ ನಿನ್ನಯ ಬಾಲಲೀಲೆಗಳುಬಲು ಶುಭತಮ ಪಾಲ್‍ಬೆಣ್ಣೆಯ ಪ್ರಿಯ ಈಶಪಾಲಾಬ್ಧಿಶಾಯಿ ಅಚ್ಚುತಾನಂದ ಗೋವಿಂದ 6ಈರಾರುಯೋಜನ ದ್ವಾರಕಾ ದುರ್ಗವುಸುರದ್ರುಮ ಲತೋದ್ಯಾನ ವಿಚಿತ್ರೋಪ ವನಗಳ್ಪುರುಟ ಶೃಂಗೋನ್ನತ ಸ್ಫಟಿಕ ಅಟ್ಟಾಳಗೋಪುರಗಳು ನವರತ್ನ ಸ್ವರ್ಣಗೃಹಗಳ್ 7ಆಶ್ಚರ್ಯ ಕಡಲ್‍ಮಧ್ಯ ದ್ವಾರಕಾ ನಿರ್ಮಿಸಿಅಚ್ಛನ್ನ ಭಕ್ತ ಸೇವಕರೊಡೆ ಇದ್ದಿಮುಚುಕುಂದನಿಗೆ ಒಲಿದು ಕಾಲನ್ನ ಕೊಲ್ಲಿಸಿದಿರಚಿಸಿದಿ ಮದುವೆಯ ಅಣ್ಣ ಬಲರಾಮಗೆ 8ಸಿಂಧುಜಾ ಇಂದಿರಾಜನಕಜಾಸೀತೆಯೇಪ್ರಾದುರ್ಭವಿಸಿಹಳು ರುಕ್ಮಿಣೀ ಭೈಷ್ಮಿಸಿಂಧುಜನಕಾ ತೆರದಿ ಅಲ್ಲದೇ ಭೀಷ್ಮಕಪುತ್ರ ದುಷ್ಟಗೆ ಸೋತು ಚೈದ್ಯನಿಗೆ ಕೊಡಲಿದ್ದ 9ಅನಾದಿನಿತ್ಯನಿನ್ನಸತಿರಮಾ ರುಕ್ಮಿಣಿಜ್ಞಾನ ತೇಜಃ - ಪುಂಜ ಭಕ್ತಿಪ್ರವಾಹ ಓಲೆನಿನಗೆ ಕಳುಹಿಸಿದಳು ದ್ವಿಜವರ ಶ್ರೇಷ್ಠಬ್ರಾಹ್ಮಣ ಅಚ್ಛಿನ್ನ ಭಕ್ತನ ಕೈಯಲ್ಲಿ 10ಉನ್ನಾಮ ಉದ್ದಾಮ ಅಚ್ಚುತ ನೀನಿತ್ಯಆನಂದ ಚಿತ್ತನು ಯದುಪತಿ ಕೃಷ್ಣನೀನೇ ತನ್ನಪತಿಸಿರಿತಾನು ಎಂದುಅನಘಲಕ್ಷ್ಮೀಭೈಷ್ಮಿ ಪತ್ರದಿ ಹೇಳಿಹಳು11ಸುಧಾಕಲಶ ವಿಪ ಕಿತ್ತಿ ತಂದ ತೆರದಿಚೈದ್ಯಮಾಗಧಸಾಲ್ವಾದಿ ಕಡೆಯಿಂದಎತ್ತಿತಂದಿಯೋ ಸ್ವಯಂವರದಿಂದ ಶ್ರೀಭೈಷ್ಮಿಯವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 12ಜಯ ಕೃಷ್ಣ ನೀ ರುಕ್ಮಿಣೀ ಸಮೇತದಿ ಬಾರೆಜಯಭೇರಿ ತಾಡಿಸಿ ದ್ವಾರಕಾವಾಸಿಗಳುಗಾಯಕರು ನರ್ತಕರು ವಿಪ್ರಮುತ್ತೈದೆಯರುಜಯ ಜಯತು ಎನ್ನುತಾನಂದ ತೋರಿಸಿದರು 13ಯದುಪುರಿಯಲಿ ಮನೆ ಮನೆಯಲಿ ಮಹೋತ್ಸವಮುದದಿ ಅಲಂಕೃತವಾಗಿ ಸ್ತ್ರೀ ಪುರುಷರುಜ್ಯೋತಿ ಉಜ್ವಲ ದೀಪಾವಳಿ ಪೂರ್ಣಕುಂಭಗಳುಛಂದಗೊಂಚಲ ಪುಷ್ಪರತ್ನ ತೋರಣಗಳ್14ಸಂಜಯ ಕುರು ಕೇಕಯಾದಿ ರಾಜರುಗಳುರಾಜಕನ್ಯೆಯರು ಗಜಗಳ್ ಓಡ್ಯಾಟಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದಸುಚರಿತ್ರೆ ಪೊಗಳಿದರು ನರನಾರಿರೆಲ್ಲರು 15ಚತುರ್ಮುಖ ವಾಯು ಶಿವ ವೈನತೇಯನುಶೇಷಶತಮುಖಸ್ಮರಅಹಂಕಾರಿಕ ಪ್ರಾಣಮೊದಲಾದಅಮರರುಮುನೀಂದ್ರರು ವೇದಮಂತ್ರ ಘೋಷಿಸೆ ಮದುವೆ ವೈಭವ ಏನೆಂಬೆ 16ಪೂರ್ಣಜ್ಞÕನಾತ್ಮನೆ ಪೂರ್ಣ ಐಶ್ವರ್ಯಾತ್ಮಪೂರ್ಣಪ್ರಭಾನಂದತೇಜಶಕ್ತ್ಯಾತ್ಮಆನಮಿಪೆ ಅಚ್ಚುತಾನಂತ ಗೋವಿಂದಕೃಷ್ಣ ರುಕ್ಮಿಣಿನಾಥ ಜಗದೇಕ ವಂದ್ಯ 17ಆದರದಿಸುರರಾಜವಿಪ್ರರ ವೃಂದಯಾದವರುಗಳು ಶ್ರೀ ರುಕ್ಮಿಣಿಕೃಷ್ಣನಿತ್ಯಸತಿಪತಿ ಮದುವೆ ನೋಡಿ ಹಿಗ್ಗಿದರುಶ್ರೀದ ನೀ ಕೊಡುವಿಯೊ ಸೌಭಾಗ್ಯ ಇದು ಪಠಿಸೆ 18ಯೋಗೇಶ್ವರ ದೇವ ದೇವ ಶ್ರೀಯಃಪತೇಅಗಣಿತಗುಣಪೂರ್ಣಅಪ್ರಮೇಯಾತ್ಮನ್ಶ್ರೀಕೃಷ್ಣ ವಿಷ್ಣೋ ಶ್ರೀರಮಾರುಕ್ಮಿಣಿಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 19ರುಕ್ಮಿಣಿ ಪತ್ರಧರ ದ್ವಿಜವರ ಶ್ರೇಷ್ಠರುಧರ್ಮ ಭೀಮಾರ್ಜುನ ಸಹದೇವ ನಕುಲಅಮಲ ಭಕ್ತಾಗ್ರಣಿ ವಿದುರನು ಇಂಥಸುಮಹಾ ಭಕ್ತವಿನುತವಂದ್ಯನೇ ನಮೋ ನಮೋ20ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತು ಜಗಜ್ಜನಾದಿಕರ್ತ ನಮೋ ನಮೋಜಯತು ವಿಧಿತಾತ ಶ್ರೀ ಪ್ರಸನ್ನ ಶ್ರೀನಿವಾಸಜಯತು ಜಯತು ದಶಪ್ರಮತಿ ಹೃತ್‍ಪದ್ಮಸ್ಥ 21-ಇತಿ ಕೃಷ್ಣಾಮೃತಸಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ರುಕ್ಮಿಣೀಶ ಕಲ್ಯಾಣ24ಪ್ರಥಮ ಅಧ್ಯಾಯಪ್ರಾದುರ್ಭಾವಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಆಲದೆಲೆ ಮೇಲ್ ಮಲಗಿ ಅದ್ವಿತೀಯನೇ ನೀನುಲೀಲೆಯಿಂ ನಿನ್ನೋಳ್ ನಿನ್‍ಅನಂತ ರೂಪಗಳನಿಲ್ಲಿರಿಸಿ ಉದರದೊಳ್ ಜಗವನ್ನೆಲ್ಲವ ಧರಿಸಿನೀ ಲಯಾಬ್ಧಿ ಸುಖವ ರಮೆಗಿತ್ತಿಸ್ವರತ1ಗುಣಕಾಲ ದೇಶ ಅಪರಿಚ್ಛಿನ್ನ ನಿನ್ನನ್ನುಗುಣತ್ರಯಮಾನಿಮಾಅನಘಸಂಸ್ತುತಿಸಿಆನಂದಮಯನೀನು ಆನಂದ ಲೀಲೆಯಿಂಸ್ವರ್ಣಾಂಡ ಪಡೆದು ಅದರೊಳ್ ಪೊಕ್ಕಿ 2ಪದುಮನಾಭನೇ ನಿನ್ನ ನಾಭಿ ಕಮಲೋದ್ಭೂತವಿಧಿಯಪ್ರತಿದಿನದಲ್ಲಿ ಅವತಾರ ಮಾಡಿಸಾಧು ಸಾತ್ವಿಕರಿಗೆಅಭಯಸದ್ಗತಿ ಇತ್ತುಅಧಮ ಅಸುರರ ಸದೆದು ಭೂಭಾರ ಕಳೆದಿ 3ಮೂಲಾವತಾರಂತರ್ಯಾಮಿ ವ್ಯಾಪ್ತಾಂಗಗಳುಎಲ್ಲವೂ ಪೂರ್ಣವು ನಿತ್ಯವು ಅಭಿನ್ನಳಾಳುಕನೇ ನಿನ್ನಮಲ ರೂಪವಿಶೇಷವಲೀಲೆಯಿಂದಲಿ ಪ್ರಕಟಮಾಡುವಿ ಆಗಾಗ 4ವೇದ ಉದ್ಧಾರನೇ ಮತ್ಸ್ಯರೂಪನೇ ನಮೋಮಧುಕೈಟಭಹಾರಿ ಹಯಗ್ರೀವ ಶರಣುಮಂಡಲಾದ್ರಿಯ ಪೊತ್ತಕೂರ್ಮಧನ್ವಂತರಿಸುಧೆಸುರರಿಗುಣಸಿದ ಸ್ತ್ರೀರೂಪಪಾಹಿ5ಸುರಪಕ್ಷಅಜಅಜಿತ ಸಿಂಧುಜಾಪತಿ ಧರೋ-ದ್ಧಾರವರಾಹನಮೋ ಪುರುಟಾಕ್ಷಹಾರಿಶರಣು ತ್ರಯತ್ರಿಂಶದಕ್ಷರ ಮನುಗ ಶ್ರೀದವರಚಕ್ರಧರಾಅಭಯಭೂಧರಶಾಮ6ಪ್ರೋದ್ಯಾರ್ಕ ನಿಭ ವರ್ತುಲ ನೇತ್ರತ್ರಯವುಹಸ್ತದ್ವಯ ಅಜಾನುದರಾರಿಧರ ಕೋಟಿಆದಿತ್ಯಾಮಿತತೇಜಮಾಲಕ್ಷ್ಮೀಯುತ ವೀರಉತ್ಕøಷ್ಟಬಲ ವಿಷ್ಣೋ ನರಸಿಂಹ ಶರಣು 7ದ್ವಾತ್ರಿಂಶದಕ್ಷರ ಸುಮಂತ್ರ ಪ್ರತಿಪಾದ್ಯನೇಹಿರಣ್ಯಕಶಿಪುವ ಸೀಳ್ದಿ ಪ್ರಹ್ಲಾದಪಾಲಮೂರಡಿಯ ಕೇಳ್ದ ವಾಮನಬಲಿಬಂಧಕಶರಣು ಶ್ರೀತ್ರಿವಿಕ್ರಮನೇ ಧೂರ್ಜನಕಪಾಹಿ8ದುಷ್ಟ ನೃಪರನ್ನಳಿದು ಭೂಭಾರ ಇಳಿಸಿದಿಕೋಟಿ ಸೂರ್ಯಮಿತೋಜ್ವಲ ಪರಶುರಾಮಸಾಟಿ ಇಲ್ಲದ ಹನುಮತ್ಸೇವ್ಯಸೀತಾರಮಣಪಟ್ಟಾಭಿರಾಮನಮೋ ರಾವಣ ಧ್ವಂಸೀ 9ಭಜಿಸುವೆ ನರಸೇವ್ಯ ನಾರಾಯಣ ವ್ಯಾಸಸ್ವಜನತೇಷ್ಟಪ್ರದನೇ ಪಾಹಿಮಾಂ ಶ್ರೀಶಕುಜನಮೋಹಕ ನಮೋ ಸುರ ಸುಬೋಧಕಬುದ್ಧದುರ್ಜನ ಸಂಹಾರಿ ನಮೋ ಶಿಷ್ಟೇಷ್ಟ ಕಲ್ಕಿ 10ಕ್ರೂರ ದೈತ್ಯರ ಭಾರಿಭಾರಧರಿಯಿಂದಿಳಿಸಿದೆವಾರಿಜಾಸನ ಶಿವಾದ್ಯಮರರ ಮೊರೆಕೇಳಿಕ್ಷೀರಸಾಗರಶಯ್ಯ ಪುರುಷಸೂಕ್ತದಿ ಸ್ತುತ್ಯಪರಮಪೂರುಷ ಶ್ರೀಶ ಪ್ರಾದುರ್ಭವಿಸಿದೆಯೋ11ವಸುದೇವ ದೇವಕೀಸುತನೆಂದು ತೋರಿದವಾಸುದೇವನೇ ನಿನ್ನ ಸುಚರಿತ್ರೆ ಕೇಳೆಶ್ರೀಶ ನಿನ್ನಯ ದಯದಿಕಲುಷಪರಿಹಾರವುಸುಶುಭ ಪಾವನಕರವು ಸರ್ವಭಕ್ತರಿಗೂ 12ಕಲಿಕಲಿಪರಿವಾರ ದೈತ್ಯ ದುರ್ಜನರುಖಳರು ಇಳೆಯಲ್ಲಿ ನಾನಾ ರೂಪದಲಿ ಜನಿಸಿಶೀಲ ಹರಿಭಕ್ತರ ಕಂಡು ಸಹಿಸದೇ ಬಹುಬಲಕಾರ್ಯ ವಂಚನೆಯಿಂದ ಪೀಡಿಸಿದರು 13ಎಂಟನೇ ಮಗು ತನ್ನ ಮೃತ್ಯುವಾಗುವುದೆಂದುದುಷ್ಟ ಕಂಸನು ತಂಗಿ ಸಪತಿ ದೇವಕಿಯಇಟ್ಟ ಸೆರೆಮನೆಯಲ್ಲಿ ಆರು ಮಕ್ಕಳ ಕೊಂದಎಂಟ ನಿರೀಕ್ಷಿಸಿದ ಭಯ ದ್ವೇಷದಿಂದ 14ಏಳನೇ ಗರ್ಭವು ವ್ಯಾಳದೇವನ ಅಂಶಸ್ವಲ್ಪ ಕಾಲದಲೇ ಆ ಕ್ಷೇತ್ರದಿಂ ಹೊರಟುಚೆಲ್ವ ಗೋಕುಲದಲ್ಲಿ ರೋಹಿಣಿ ಉದರದಿಂ-ದಲ್ಲಿ ಪುಟ್ಟಿದನು ನಿನ್ನ ನಿಯಮನದಿಂದ 15ಸಾರಾತ್ಮಾ ನಿನ್ನಲ್ಲಿ ಪ್ರೇಮಾತಿಶಯದಿಂದಸುರರುಸೇವಿಸುವುದಕೆ ನಿನ್ನಿಚ್ಛೆ ದಯದಿಧರೆಯಲ್ಲಿ ನೃಪಮುನಿಗೋಪ ಗೋಪಿಯರಾಗಿಪರಿಪರಿವಿಧದಲ್ಲಿ ಕೃತ ಕೃತ್ಯರಾದರು16ದೇವಿ ಮಾಯಾದುರ್ಗೆ ನಿನ್ನಯ ಪ್ರಶಾಸನದಿಅವತಾರಕ್ಕನುಸರಿಸಿ ಬಂದು ತೆರಳಿದಳುದೇವ ನಿನ್ನ ಕಲಾ ಸಂಯುಕ್ತ ಶೇಷನುಭವಿಸಿದನು ನಿನ್ನಣ್ಣ ಬಲರಾಮನೆಂದು 17ನಿರ್ದೋಷನೀ ಸರ್ವ ಜಗನ್ನಿವಾಸನು ದೇವ-ಕೀ ದೇವಿಯೋಳ್ ನಿವಸಿಸಿ ಪೊಳೆಯುವಾಗವಿಧಿಭವಾದಿಗಳೆಲ್ಲ ಬಂದು ಸಂಸ್ತುತಿಸಿದರುಸತ್ಯಜ್ಞÕನಾನಂತಗುಣಪೂರ್ಣನಿನ್ನ18ಯಾವನು ಸರ್ವದಾ ಸರ್ವ ಬಹಿರಂತಸ್ಥಯಾವನು ಸರ್ವ ಹೃತ್ ಯೋಮದೊಳು ಇರುವಯಾವನಲ್ಲಿ ಸರ್ವವೂ ಸಮಾಹಿತವೋಅವನೇವೇ ನೀಹರಿವಿಷ್ಣು ಕೃಷ್ಣ ಅವತಾರ19ಪ್ರಾಕೃತಶರೀರ ವಿಕಾರಗಳು ನಿನಗಿಲ್ಲಪ್ರಾಕೃತಕಲಾವಿಲ್ಲ ಭಿನ್ನಾಂಶನಲ್ಲಏಕಪ್ರಕಾರಅಕ್ಷರಪೂರ್ಣಅಜನಿನ್ನಅಜ್ಞಾನದಲಿ ನರರು ಜನಿಸಿದಿ ಎಂಬುವರು 20ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣರತ್ನಕಿರೀಟಕುಂಡಲಪೊಳೆವಕೌಸ್ತುಭಮಣಿಉರದಿ ಶ್ರೀವತ್ಸ ಚತುರ್ಭುಜವು ಪಾಂಚಜನ್ಯಕೌಮೋದಕೀ ಸುದರ್ಶನ ಸರೋಜ 21ಉದ್ದಾಮ ಕಾಂಚಂಗದ ಕಂಕಣಾದಿಗಳಪೀತಾಂಬರ ಪಾದನೂಪುರ ಪೂರ್ಣೇಂದುಮುದ್ದು ಮುಖ ಮುಗುಳುನಗೆ ಸುಳಿಗೊರಳು ಶುಭನೋಟಮೋದಚಿನ್ಮಯ ಹೀಗೆ ಪ್ರಾದುರ್ಭವಿಸಿದಿಯೋ22ಈರೂಪವಾಸುದೇವನೋಡಿ ಸ್ತುತಿಸಿದನು ನಿನ್ನಅರಿಯೇ ನಾ ವರ್ಣಿಸಲು ನಿನ್ನ ಗುಣರೂಪಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ 23ನಿನ್ನ ಮಹಾ ಪುರುಷ ಲಕ್ಷಣವ ದೇವಕಿಯುಕಾಣುತ್ತಾ ನರಲೋಕ ವಿಡಂಬನಕ್ಕಾಗಿತನ್ನ ಗರ್ಭಗನಾದಿ ಎಂದರಿತು ಭಕ್ತಿಯಿಂಸನ್ನತಿಯ ಮಾಡಿದಳು ಆ ಪೂರ್ವಪೃಷ್ಣಿ 24ದೇವಕಿಯ ಸ್ತುತಿಕೇಳಿಯುಕ್ತ ಮಾತುಗಳಾಡಿದೇವ ನಿನ್ನೀಚ್ಛಾ ಶಕ್ತಿಯಿಂದಲೇವೇಪವಡಿಸೆ ನರಶಿಶುಪೋಲ್ ಪಿತ ನಿನ್ನ ಎತ್ತಿಕೊಂಡುತೀವ್ರ ಹೊರಟನು ವೈಜಕೆ ನೀ ಪೇಳಿದಂತೆ 25ಶೇಷದೇವನು ಹೆಡೆಯ ಕೊಡೆಯಂತೆ ಪಿಡಿಯಲುಆಶ್ಚರ್ಯವಲ್ಲ ನದಿಮಾರ್ಗಬಿಟ್ಟಿದ್ದುಯಶೋದೆ ಸುಪ್ತಿಯಲಿರೆ ಮಗ್ಗುಲಲಿ ಮಲಗಿಸಿವಸುದೇವ ಎತ್ತಿಪೋದನು ಅವಳ ಮಗಳ 26ಯಶೋದೆಯ ಹೆಣ್ಣುಮಗು ಶಿಶುರೂಪ ದುರ್ಗೆಯವಸುದೇವ ತಂದು ದೇವಕಿ ಬದಿ ಇಡಲುಪ್ರಸವ ಸುದ್ದಿಯಕೇಳಿಕಂಸ ಆರ್ಭಟದಿಂದಶಿಶುವು ಹೆಣ್ಣಾದರೂ ಎತ್ತಿ ಶಿಲೆಯ ಹೊಡೆದ 27ಅಂಬರದಿ ದಿವ್ಯ ರತ್ನಾಭರಣ ಭೂಷಿತೆಕಂಬುಚಕ್ರಾದಿಧರೆ ಅಷ್ಟ ಮಹಾಭುಜೆಯುಅಂಬಾ ಮಹಾದುರ್ಗಾ ಭಗವತೀ ಮಯಾದೇವಿಅಂಭ್ರಣೀ ನಿಂತಳು ದೇವಗಾಯಕರು ಸುತ್ತಿಸೇ 28ಕಂಸನ್ನ ಎಚ್ಚರಿಸಿ ಭಗವತಿ ತೆರಳಲುಕಂಸನುಪರಮವಿಸ್ಮಿತನಾಗಿ ಬೇಗವಸುದೇವ ದೇವಕಿಯ ನಿಗೂಢ ಬಂಧನ ಬಿಡಿಸಿಅಸುರ ಮಂತ್ರಿಗಳೊಡೆ ಆಲೋಚಿಸಿದನು 29ನಂದ ಯಶೋದೆಯು ತಮ್ಮ ಶಿಶು ನೀನೆಂದುನಂದ ಆನಂದದಿವಿಪ್ರವೈದಿಕರ ಕರೆದುಅಂದದಿ ಪಿತೃ ದೇವತಾರ್ಚನೆಗಳ ಮಾಡಿಸಿಚೆಂದದಿ ಅಲಂಕೃತ ಧೇನುಗಳ ಕೊಟ್ಟ 30ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 31-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯಬಾಲಲೀಲಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಸಣ್ಣ ಶಿಶುರೂಪ ನೀ ಪೂತನೀ ಶಕಟತೃಣಾವರ್ತರ ಕೊಂದಿ ನಮೋ ಅಮಿತಶೌರಿನಿನ್ನ ಸುಂದರ ಮುಖದಿ ಪ್ರಪಂಚ ಗಗನಾದಿಗಳಕಾಣಿಸಿದಿ ಮಾತೆಗೆ ನಮೋವಿಶ್ವವಿಷ್ಣೋ1ಗರ್ಗಾದಿ ವಿಬುಧರು ಯೋಗ್ಯ ಸಜ್ಜನರೆಲ್ಲಅಗಣಿತಮಹಿಮ ಶ್ರೀ ವಿಷ್ಣು ನೀ ಎಂದುಭಕುತಿಯಿಂದಲಿ ನಿನ್ನ ಬಾಲಲೀಲೆ ನೋಡೆಕಾಕುದುರ್ಮತಿಗಳು ದ್ವೇಷ ಬೆಳೆಸಿದರು2ಕಂಸ ಜರಾಸಂಧ ಕಾಲಯವನ ಕಲಿಯಅಸುರ ಭೃತ್ಯರು ಬಂದು ನಿನ್ನ ನಿನ್ನವರನ್ನಹಿಂಸಿಸಬೇಕೆಂದು ಆಗಾಗ ಯತ್ನಿಸಲುದ್ವಂಸ ಮಾಡಿದಿ ಅವರನ್ನ ಸಜ್ಜನ ಪೊರೆದಿ 3ವತ್ಸಬಕಅಘಧೇನುಕ ಪ್ರಲಂಬಾರಿಷ್ಟಕೇಶಿ ಕಮಲಯ ಪೀಡಾ ಮುಷ್ಟಿಕ ಚಾಣೂರಕಂಸಾದಿ ಅಸುರರ ಸದೆದು ಮುದ್ದೆಯ ಮಾಡಿವಸುಮತಿಯ ಸಾಧುಗಳ ಭಯ ನಿವಾರಿಸಿದಿ 4ಬಲವಂತ ರಾಮ ಸಹ ಅಮಿತ ಪೌರುಷ ನೀನುಬಲಿಷ್ಠ ಅಸುರರ ಅಳಿದು ಭೂಭಾರ ಇಳಿಸಿಶೀಲ ಭಕ್ತರಿಹಪರಸುಖ ಒದಗಿಸಿದಿಬಲರಾಮ ಕೃಷ್ಣ ನಮೋ ಫಣಿಪ ವಿಷ್ಣೋ 5ಯಮಳಾರ್ಜುನೋದ್ಧಾರ ದಾವಾಗ್ನಿಯಿಂದ ನೀಸಂರಕ್ಷಿಸಿದಿ ವೃಜಗೋಪ ಜನರನಿನ್ನ ಮಹಿಮೆ ಏನೆಂಬೆ ವರುಣನಾಲಯದಿಂದಸಮ್ಮುದದಿ ನಂದನ್ನ ಕರತಂದಿ ಅಜಿತ 6ನಾಗಪತ್ನೀಯರು ಬಂದು ನಮಸ್ತುಭ್ಯಂಭಗವತೇ ಪೂರುಷಾಯ ಮಹಾತ್ಮನೇ ಎಂದುಅಗುಣ ಅವಿಕಾರ ನಿನ್ನನ್ನು ಭಕ್ತಿಯಿಂ ಸ್ತುತಿಸೆನಾಗನೂ ಸಹ ಸ್ತುತಿಸೆ ಅನುಗ್ರಹ ಮಾಡಿದಿಯೋ 7ಶ್ರೀಧರನೇ ನಿನ್ನಯ ವೇಣುನಾದದ ಸುಧೆಯಮಾಧುರ್ಯ ರಸವನ್ನು ವರ್ಣಿಸಲಶಕ್ಯಶ್ರೀದೇವಿ ಕೊಳಲÉೂಳು ಪ್ರವೇಶಿಸಿ ನಿನ್ನ ಅರ-ವಿಂದ ಮುಖದ ಆನಂದ ಸವಿದು ಸುಖಿಸುವಳು 8ಪಾಲು ಬೆಣ್ಣೆ ಪ್ರಿಯ ಕಳ್ಳ ಮುದ್ದು ಕೃಷ್ಣಗೊಲ್ಲತಿಯರ ಸಹ ಸಲ್ಲಾಪಿಸುವ ಎಂಬಸೊಲ್ಲಿನ ತತ್ವವ ಬಲ್ಲವರೇ ಬಲ್ಲರುಫಲಿ ನಮೋ ಪಾಲ್ಬೆಣ್ಣೆ ಗೋಪಿಜನ ಪ್ರಿಯ 9ಅತ್ಯಲ್ಪ ಅಸುರ ಆವೇಶ ಸುರರಿಗೆ ಎಂದುಮುಖ್ಯ ವಾಯು ಅಖನರ್ಮ ಸಮಗಿಲ್ಲಹೊಯ್ಯಿಸೆ ಮಳೆಶಕ್ರನೀ ಲೀಲೆಯಂ ಗೌರಿ ಎತ್ತಿಕಾಯ್ದಿ ಗೋಜನಗಳ ಅನ್ನದ ಅನ್ನಾದ 10ಭಕ್ತಿ ಉಕ್ಕಿ ನಿನ್ನಲ್ಲಿ ಕೂಡಿ ಕ್ರೀಡಿಸುವಸದ್ಧರ್ಮವರ್ತಿಗಳ ಸ್ವಸ್ವಯೋಗ್ಯತೆಯಿಂರಾಧಾದಿ ಗೋಪಿಗಳ ಅನಂದ ಉಕ್ಕಿಸಿಸ್ವರತಇಂದಿರಾಪತಿ ಗೋವಿಂದ ಗೋ ಕಾಯ್ದ 11ಅಧಿಕಾರಿ ತ್ರಿವಿಧರಲಿ ತಾರತಮ್ಯ ಉಂಟುಅದರಂತೆ ಭಕ್ತಿಯಲಿ ಅವರೋಚ್ಯ ಉಂಟುಭಕ್ತಿ ಸಾಧನದಂತೆ ಯೋಗ್ಯ ಸುಖ ಓದಗಿಸಿದಿಮಂದಗಮನೆಯರಿಗೆ ರಾಸಕ್ರೀಡೆಯಲಿ 12ನಂದವ್ರಜಗೋಕುಲ ಮಥುರೆ ಬೃಂದಾವನಚಂದ್ರ ಯಮುನೆವನಲತೆ ಪುಷ್ಪ ವೃಕ್ಷಸಿಂಧುದ್ವಾರಕೆ ವಂಶಯಷ್ಠಿ ಗೋ ಸರ್ವರಿಗೂವಂದಿಸುವೆ ಕೃಷ್ಣ ಸಂಬಂಧಿಗಳು ಎಂದು 13ವಿದ್ಯಾಧರ ಸುದರ್ಶನನು ಶಾಪದಿ ಅಹಿಯುನಂದನ್ನ ಕಾಯ್ದಿ ಆ ಅಹಿಯ ಬಾಯಿಂದಪಾದಸ್ಪರ್ಶವ ಕೊಟ್ಟು ಶಾಪ ವಿಮೋಚನೆ ಮಾಡಿಸ್ತುತಿಸಿ ಕೊಂಡಿಯೋ ಮಹಾಪೂರುಷ ಸತ್ಪತಿಯೇ 14ಅಕ್ರೂರ ಕುಬ್ಜ ಉದ್ಧವಗೆ ಅನುಗ್ರಹಿಸಿದುರುಳವ್ರಜನ ಶಿರವ ಕತ್ತರಿಸಿ ಬಿಸುಟುವಿಪ್ರನಾರಿಯರ ಅನ್ನ ಉಂಡು ಒಲಿದಂತೆಕ್ಷಿಪ್ರವಾಯಕ ಗೊಲಿದಿ ಮಾಲಾಕಾರನಿಗೂ15ಬಲಿಷ್ಠ ಮಲ್ಲಾದಿಗಳ ಕುಟ್ಟಿ ಹೊಡೆದು ಕೊಂದುಖಳದುಷ್ಟ ಕಂಸನ್ನ ದ್ವಂಸ ಮಾಡಿದಿಯೋಒಳ್ಳೇ ಮಾತಿಂದ ಮಾತಾಪಿತರ ಆಶ್ವಾಸಿದಿಬಲರಾಮ ಕೃಷ್ಣ ನಮೋಪಾಹಿಸಜ್ಜನರ16ಉಗ್ರಸೇನಗೆ ರಾಜ್ಯವನು ಒಪ್ಪಿಸಿ ನೀನುಗುರುವಿನ ಮೃತ ಪುತ್ರನ್ನ ಕರೆತಂದಿಜರಾಸುತನ ಸಹ ಯುದ್ಧ ಮಾಡಿ ಬೇಗನೇ ನೀನುನಿರ್ಮಾಣಿಸಿದಿ ದ್ವಾರಕೆಯ ಕಡಲ ಮಧ್ಯ 17ಈರಾರುಯೋಜನವು ದ್ವಾರಕಾ ದುರ್ಗವುಸ್ಫುರಧೃಮ ಲತೋದ್ಯಾನ ವಿಚಿತ್ರೋಪ ವನಗಳ್ಪುರಟ ಶೃಂಗೋನ್ನತ ಸ್ಫಟಿಕಾ ಅಟ್ಟಾಳಗಳ್ ಗೋ -ಪುರಗಳು ನವರತ್ನ ಸ್ವರ್ಣಮಯ ಗೃಹಗಳು 18ಮುಚುಕುಂದ ಶಯನಿಸಿದ ಗುಹೆಯೋಳ್ ನೀ ಪೋಗೆನೀಚ ದುರ್ಮತಿ ಕಾಲಯವನ ಹಿಂಬಾಲಿಸಿಮುಚುಕುಂದನ್ನ ನೋಡಿ ನೀನೇವೇ ಎಂದು ಹೊಡಿಯೇಭಸ್ಮವಾದನು ಅಲ್ಲೇ ರಾಜ ಕಣ್ತೆರೆದು 19ನೃಪನು ನಿನ್ನ ಸ್ತುತಿಸಿ ಅನುಗ್ರಹ ಪಡೆದುಸುಪವಿತ್ರ ನರನಾರಾಯಣ ಕ್ಷೇತ್ರಯೈದೇಉಪಾಯದಿಂದಲಿ ಮಾಗಧನ ಸಮ್ಮೋಹಿಸಿನೀ ಬಲರಾಮ ಸಹ ಸ್ವಪುರ ಸೇರಿದಿಯೋ 20ವನಜಸಂಭವಪ್ರೇರಿಸಲು ರೇವತರಾಜಅನರ್ತ ದೇಶಾಧಿಪತಿಯು ಶ್ರೀಮಂತತನ್ನ ಸುತೆ ರೇವತಿಯು ನಮ್ಮ ಬಲರಾಮನಿಗೆಧನ್ಯ ಮನದಲಿ ಕೊಟ್ಟು ಮದುವೆ ಮಾಡಿದನು 21ಸುಧಾ ಕಲಶವ ಗರುಡ ಕಿತ್ತಿ ತಂದಂತೆಚೈದ್ಯಮಾಗಧಶಾಲ್ವಾದಿ ಕಡೆಯಿಂದಎತ್ತಿ ತಂದಿ ಸ್ವಯಂವರದಿಂ ಭೈಷ್ಮಿಯವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 22ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 23-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಅಧ್ಯಾಯಕಲ್ಯಾಣ ಸುಧಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪವಿಧರ್ಭ ದೇಶಾಧಿಪತಿ ಭೀಷ್ಮಕರಾಜನುಸದ್ಧರ್ಮನಿಷ್ಟ ಕುಂಡಿನಿಪುರವಾಸಿಐದು ಮಂದಿ ಗಂಡು ಮಕ್ಕಳು ಅವನಿಗೆಮೊದಲನೆಯವನಿಗೆ ರುಗ್ಮಿ ಎಂದು ಹೆಸರು 1ರುಗ್ನಿ ಬಹು ದುಷ್ಟನು ಕೃಷ್ಣ ದ್ವೇಷಿ ಖಳರುಮಾಗಧಾದಿಗಳಲ್ಲಿ ಬಹು ಸ್ನೇಹರುಗ್ಮಿಗೆ ರುಕ್ಮರಥ, ರುಕ್ಮಬಾಹು ಮತ್ತುರುಕ್ಮಕೇಶಿ, ರುಕ್ಮಮಾಲಿ ಅನುಜರು2ಈ ಪುಣ್ಯವಂತ ರಾಜನಿಗೊಂದು ಮಗಳುಂಟುಈ ಪುತ್ರಿ ರುಕ್ಮಿಣಿ ಸ್ಫುರದ್ವಾರಾನನೆಯುಹೇ ಪುರುಷೋತ್ತಮನೇ ನಿನ್ನ ನಿಜಸತಿ ಲಕ್ಷ್ಮೀಅಪ್ರಮೇಯನೇ ನಿನ್ನ ಬಿಟ್ಟಗಲದವಳು 3ಉರುಗುಣಾರ್ಣವ ನಿನ್ನ ಅವತಾರಕನುಸರಿಸಿಶ್ರೀ ರಮಾದೇವಿಯೇ ಪ್ರಾದುರ್ಭವಿಸಿದಳುನರರ ನೋಟಕೆ ರಾಜಪುತ್ರಿಯಂತೆ ಇಹಳುಪುರಟಗರ್ಭನ ತಾಯಿ ಸರ್ವಜಗನ್ಮಾತೆ 4ಈ ಷÉೂೀಡಶ ಕಲಾಯುಕ್ ನಮ್ಮ ತನುವೋಲ್ ಅಲ್ಲಕ್ಲೇಶಸಂತಾಪಾದಿ ವಿಕಾರಗಳು ಇಲ್ಲದೋಷ ದೊರೆ ದುಃಖ ಅಸ್ಪøಷ್ಟೆ ಎಂದೆಂದೂಕೃಷ್ಣ ವಿಷ್ಣೋ ನಿನ್ನಾಧೀನೆ ಎಂದೆಂದೂ 5ಉತ್ತಮ ಮಹಾಪೂರುಷ ಶ್ರೀಕರನೇ ನಿನ್ನಉತ್ತಮ ಕ್ರಿಯಾರೂಪ ಗುಣವಿಶೇಷಗಳನ್ನಸಂತತ ಅಲೋಚಿಸಿ, ಹೊಸ ಹೊಸ ಅತಿಶಯವಸತತ ಕಾಣುತ ತಾ ಸನ್ನುತಿಸಿ ಸುಖಿಸುವಳು 6ವಿಮಲಆನಂದಮಯನಿನ್ನ ಸಹಲಕ್ಷ್ಮೀಬ್ರಹ್ಮರುದ್ರಾದಿ ಸುರರಿಂದ ಸನ್ನುತಳುಅಮಿತೋಚ್ಛ ಭಕ್ತಿಯಿಂ ಸದಾ ನಿನ್ನಸೇವಿಪಳುರಮಾ ಸಿಂಧುಜಾ ಜಾನಕೀಯೇವೇ ಭೈಷ್ಮಿ 7ಸಿರಿದೇವಿ ತಿಳಿದಷ್ಟುಹರಿನಿನ್ನ ತಿಳಿದವರುನರರಲ್ಲಿ ಸುರರಲ್ಲಿ ಯಾರೂನೂ ಇಲ್ಲನರಲೋಕದಲ್ಲಿ ನರರಂತೆ ನಟಿಸುವ ಸಿರಿಯುಅರಿಯಬೇಕೇ ಇತರರಿಂದ ಹೊಸದಾಗಿ 8ಅರಮನೆಗೆ ಬರುವವರು ನಾರದಾದಿಗಳಿಂದಹರಿಮುಕುಂದನೆ ನಿನ್ನರೂಪಗುಣಮಹಿಮೆಹರುಷದಿಂದಲಿ ಚೆನ್ನಾಗಿಕೇಳಿಮನದಲ್ಲಿವರಿಸಿದಳು ಸದಾ ನಿನ್ನ ಪ್ರೇಮದಿ ಭೈಷ್ಮಿ 9ಕೃಷ್ಣನಿಗೆಸಮ ಸದೃಶ ಪುರುಷ ಯಾರೂ ಇಲ್ಲರುಕ್ಮಿಣಿಗೆ ಸಮ ಸದೃಶ ಸ್ತ್ರೀ ಯಾರೂ ಇಲ್ಲಗುರುರೂಪ ಔದಾರ್ಯ ಬುದ್ದಿ ಲಕ್ಷಣಾಶ್ರಯಳುನಿನ್ನ ನಿಜಪತ್ನಿ ರುಕ್ಮಿಣಿ ಎಂದು ನೀ ಅರಿವಿ 10ಮದುವೆ ಮಾಡಲು ರುಕ್ಮಿಣಿಗೆ ಯೋಚಿಸಿನೃಪಬಂಧುಗಳು ಕೃಷ್ಣಗೆ ಕೊಡಲು ಇಚ್ಛೈಸೆಧೂರ್ತರುಗ್ಮಿ ಕೃಷ್ಣ ದ್ವೇಷಿ ತಡೆ ಮಾಡಿದನುಚೈದ್ಯ ಶಿಶುಪಾಲನಿಗೆ ಕೊಡಲು ನೆನೆದು 11ಸುತಗೆ ಕೃಷ್ಣನು ಮಾತ್ರ ವರನೆಂದು ತಿಳಿದರೂಪುತ್ರ ಸ್ನೇಹದಿ ರುಕ್ಮಿಗೆ ಒಡಂಬಟ್ಟ ರಾಜಚೈದ್ಯನಿಗೆ ಕೊಡಲು ಏರ್ಪಾಡು ಮಾಡಲುಆಪ್ತ ದ್ವಿಜವರ್ಯನ ಕರೆದಳು ಭೈಷ್ಮೀ 12ವಿಪ್ರನ ದ್ವಾರ ಸಂದೇಶ ಕಳುಹಿಸಿದಳುಪತ್ರ ಬರೆದಳು ನಿನಗೆ ಸತ್ತತ್ವ ನಿಮಿಡಆ ಬ್ರಾಹ್ಮಣ ಶ್ರೇಷ್ಟ ದ್ವಾರಕಾ ಪುರಿಯೈದುಪರಮಪೂರುಷ ನಿನ್ನ ನೋಡಿದನÀು ಮುದದಿ13ಕಾಂಚನಾಸನದಲ್ಲಿ ಕುಳಿತಿದ್ದ ನೀನುದ್ವಿಜವರ ಶ್ರೇಷ್ಠ ಬರುವುದು ಕಂಡಾಕ್ಷಣದಿತ್ಯಜಿಸಿಆಸನಪೋಗಿ ಎದುರ್ಗೊಂಡು ಕರೆತಂದುಪೂಜಿಸಿದೆಯೋ ಸ್ವಾಮಿ ಬ್ರಹ್ಮಾಂಡದೊಡೆಯ 14ಅಖಂಡೈಕ ಸಾರಾತ್ಮಾ ಸರ್ವರೂಪಾಟಿಭಿನ್ನಅಕಳಂಕ ಉರು ಸರ್ವ ಸಚ್ಛÀಕ್ತಿಪೂರ್ಣಏಕಾತ್ಮ ನೀ ಪೂಜ್ಯ ಪೂಜಕ ನೀಚೋಚ್ಛಗಳಕಾಕುಜನಮೋಹಕ್ಕೆ ಅಲ್ಲಲ್ಲಿ ತೋರ್ವಿ15ಸಜ್ಜನರ ಗತಿಪ್ರದನು ಅವ್ಯಯನು ನೀನುಭೋಜನಾದಿ ಬಹು ಉಪಚಾರ ಮಾಡಿದ್ವಿಜವರ್ಯನ ಹೊಗಳಿ ಸಾಧುಸನ್ಮತಿನೀತಿನಿಜ ಸುಖಪ್ರದಮಾರ್ಗಬೋಧಕ ಮಾತಾಡಿದಿ16ಭೂತ ಸಹೃತ್ತಮ ಸದಾ ಸಂತುಷ್ಟ ಮನಸ್ಸುಳ್ಳಸಾಧು ಆ ಬ್ರಾಹ್ಮಣನು ನಿನಗೆ ಸನ್ನಮಿಸಿಬಂದ ವಿಷಯವ ಪೇಳಿ ಪತ್ರವ ಸಮರ್ಪಿಸಿದವಂದೇ ಆ ಅಕುಟಿಲಗೆ ಭೈಷ್ಮೀ ಕೃಷ್ಣರಿಗೆ 17ಪತ್ರಸಾರಭುವನಸುಂದರ ನಿನ್ನ ಕಲ್ಯಾಣ ಗುಣಗಳಶ್ರವಣ ಮನನವಪರಮಆದರದಿ ಮಾಳ್ಪಜೀವರುಗಳ ಕಾಯಜಾದಿ ತಾಪಂಗಳುದ್ರಾವಿತವು ಆಗುವೆವು ಎಂದು ಕೇಳಿಹೆನು 18ಗುಣಕ್ರಿಯಾರೂಪಸುಶ್ರವಣ ಮನನವ ಮಾಡಿಧ್ಯಾನಿಪರಿಗೆ ನಿನ್ನರೂಪದರ್ಶನವುನಿನ್ನ ಅರಿತ ಭಕ್ತರಿಗೆ ಅವತಾರಾದಿ ದರ್ಶನವುಕಾಣುವವರಿಗೆ ಅಖಿಲಾರ್ಥ ಲಭಿಸುವವು 19ಇವು ಇಂತಹ ನಿನ್ನ ಉನ್ನತ ಮಹಿಮೆಗಳಶ್ರವಣ ಮಾಡಿ ಅಂತರಂಗದಿ ತನ್ನ ಮನಸ್ಧಾವಿಸುತ್ತೇ ನಿನ್ನಲ್ಲೇಅಚ್ಯುತಮುಕುಂದದೇವಿ ರುಕ್ಮಿಣಿ ಹೀಗೆ ಬರೆದಿಹಳು ವಿಭುವೇ 20ಸುಖರೂಪ ಲಕ್ಷ್ಮೀಶವಿಧಿಪಿತಜಗಜನ್ಮಾದಿಕರ್ತಶುಕ್ರ ನಿಷ್ಕಲಅಪ್ರಾಕೃತಅವ್ಯಕ್ತಅಖಂಡೈಕ ಸಾರಾತ್ಮ ಅನಂತೋರು ಸೌಂದರ್ಯನಿಗಮಗ್ಯ ಗಾಯತ್ರಿ ಅಮಾತ್ರ ತ್ರಿಮಾತ್ರ 21ಬೃಹತೀಸಹಸ್ರ ಸ್ವರವ್ಯಂಜನಾಕ್ಷರ ವಾಚ್ಯಅಹರ್ನೇತ್ರು ಭೂಮನ್ನಿತ್ಯನೀ ಸ್ವತಂತ್ರಮಹೈಶ್ವರ್ಯ ಪೂರ್ಣೇಂದ್ರ ಅಶೇಷ ಗುಣಾಧಾರಮಹಾಶಕ್ತಿ ದಿವಃಪರ ಪರಮೇಶ್ವರ - ಸ್ವ 22ನಿನ್ನ ಈ ಕುಲಶೀಲ ವಿದ್ಯಾದಿ ಗುಣರೂಪಅನುಪಮೈಶ್ವರ್ಯದಿ ನಿನಗೆ ನೀನೇತುಲ್ಯನಿನ್ನ ಗುಣಗಳು ಸರ್ವಾಕರ್ಷಕವಾಗಿರುವವುತನ್ನಾತ್ಮ ನಿವೇದನ ಮಾಡಿಯೇ ಎಂದಳು 23ಉನ್ನಾಮ ಉದ್ಧಾಮ ಅಚ್ಯುತನು ನೀನಿತ್ಯಆನಂದಚಿತ್ ತನು ಯದುಪತೇ ಕೃಷ್ಣನೀನೇವೇ ತನ್ನಪತಿಸಿರಿತಾನು ಎಂದುಅನಘಲಕ್ಷ್ಮೀ ಭೈಷ್ಮಿ ಸೂಚಿಸಿಹಳು24ರಾಜಪುತ್ರ ಎಂಬ ವಿಡಂಬನಾ ರೀತಿಯಲಿದುರ್ಜನರ ಭಯ ತನಗೆ ಇರುವಂತೆ ಬರೆದುಸೂಚಿಸಿದಳು ತನ್ನ ಅಂಬಿಕಾ ಗುಡಿಯಿಂದಅಚ್ಯುತನೇ ನೀ ಕರಕೊಂಡು ಹೋಗೆಂದು 25ರುಕ್ಮಿಣಿಯಲಿ ನಿನ್ನ ಪ್ರೇಮ ಪ್ರಕಟಿಸುತಬೇಗಸಾರಥಿದಾರುಕನ್ನ ನೀ ಕರೆದುಮೇಘಪುಷ್ಪ, ಶೈಭ್ಯ, ಬಲಾಹಕ ಸುಗ್ರೀವನಾಲ್ಕಶ್ವ ರಥದಲ್ಲಿ ದ್ವಿಜವರ ಸಹ ಕುಳಿತಿ 26ಖಗವೇಗದಿ ರಥದಿ ಏಕ ರಾತ್ರಿಯಲ್ಲೇಪೋಗಿ ಸೇರಿದಿ ಆ ಕುಂಡಿನಾಪುರವಸೊಗಸಾದ ಅಲಂಕಾರ ಪಚ್ಚೆ ತೋರಣಗಳುಪೂಗಿ ಮಾವು ಮೊದಲಾದ ಗೊಂಚಲುಗಳು 27ಎಲ್ಲಿ ನೋಡಿದರಲ್ಲಿ ಕಾಂಚನಾಭರಣದಿಪೊಳೆವ ಪೀತಾಂಬರ ಪಟ್ಟೆ ಉಟ್ಟಿದ್ದಲೋಲಾಯಿತಾಕ್ಷಿಯರು ವಿಪ್ರಜನ ಗುಂಪುಕೋಲಾಹಲವಾಗಿ ಕಂಡಿ ಕುಂಡಿನವ 28ಕಾರಣವು ತಿಳಿದಿದ್ದೆ ಭೀಷ್ಮಕರಾಜನುಪುತ್ರಸ್ನೇಹದಿ ಚೈದ್ಯಶಿಶುಪಾಲನಿಗೆಪುತ್ರಿಯ ಕೊಡಲಿಕ್ಕೆ ಕಾರ್ಯೋನ್ಮುಖನಾಗಿಪಿತೃ ದೇವಾರ್ಚನೆ ವಿಪ್ರಪೂಜೆಯಗೈದ 29ಚೇದಿಪತಿ ದಮಘೋಷ ಪುತ್ರ ಶಿಶುಪಾಲಗೆಮದುವೆಪೂರ್ವದ ಕಾರ್ಯ ತಾನೂ ಮಾಡಿಸಿದಮದುವೆ ಸಂಭ್ರಮಕ್ಕಾಗಿ ಸೈನ್ಯ ಸಹ ಬಂದರುವೈದರ್ಭ ಪೂಜಿಸಿದ ಉಪಚಾರದಿಂದ 30ಮಾಧವನೇ ನಿನ್ನಲ್ಲಿ ಭಯ ದ್ವೇಷ ಕಾರಣದಿಚೈದ್ಯ ಪಕ್ಷೀಯರು ಜರಾಸಂಧ ಸಾಲ್ವದಂತ ವಕ್ರಾದಿಗಳು ಸಹಸ್ರಾರು ಮಂದೀರುಬಂದುತುಂಬಿಎಚ್ಚರಿಕೆಯಲಿ ಇದ್ದರು31ಆ ಪರಿಸ್ಥಿತಿಯಲ್ಲಿ ಕುಂಡಿನಾಪುರಕೆ ನೀಒಬ್ಬನೇ ಪೋದದ್ದುಕೇಳಿಬಲರಾಮಕ್ಷಿಪ್ರದಿ ರಥಾದಿ ಯಾದವಸೈನ್ಯ ಸಹಿತತಾ ಬಂದ ಅಚ್ಯುತನೇ ನಿನ್ನ ಬದಿಗೆ 32ಸರೋರುಹಾಸನನಿಗೂ ಕೋಟಿಗುಣ ಉತ್ತಮಳುಸಿರಿದೇವಿ ರುಕ್ಮಿಣಿ ಭೀಷ್ಮ ಕನ್ಯಾಹರಿಯೇ ನಿನ್ನಾಗಮನ ಆಕಾಂಕ್ಷಿಯಾಗಿ ತಾನಿರೀಕ್ಷಿಸಿದಳು ನಿನ್ನ ಹಾಗೂ ಆ ದ್ವಿಜವರನ್ನ 33ಮೇದಿನಿಸ್ತ್ರೀಯರಿಗೆ ಎಡಗಣ್ಣು ತೊಡೆ ಭುಜಅದುರುವುದುಶುಭಸೂಚಕವೆಂದು ಪೇಳುವರುಸದಾನಿತ್ಯಸುಶುಭ ಮಂಗಳರೂಪಿ ದೇವಿಗೆಅದರಿದವು ಎಂಬುವುದು ಲೌಕಿಕ ದೃಷ್ಟಿ 34ಮುಖದಲ್ಲಿ ಸಂತೋಷ ಪ್ರಕಟಿಸುತ ವಿಪ್ರನುರುಕ್ಮಿಣಿ ಬಳಿ ಬಂದು ಸಮಸ್ತವೂ ಪೇಳೆಶ್ರೀ ಕೃಷ್ಣ ನಿನ್ನನ್ನು ಸಂಸ್ಮರಿಸುತ ಭೈಷ್ಮಿಲೋಕ ರೀತಿಯಲಿ ಆದ್ವಿಜಶ್ರೇಷ್ಠನ್ನ ಪೂಜಿಸಿದಳು35ಕೃಷ್ಣ ಬಲರಾಮರಿಗೆ ಬಿಡಾರವ ಕೊಟ್ಟುಭೀಷ್ಮಕನು ಪೂಜಿಸಿದ ಪುರದ ಸಜ್ಜನರುಕೃಷ್ಣನಿಗೆ ರುಕ್ಮಿಣಿಯೇ ರುಕ್ಮಿಣಿಗೆ ಕೃಷ್ಣನೇಘೋಷಿಸಿದ ರೀತಿ ಸಂತೋಷದಿಂದ 36ಸಂಪ್ರದಾಯವನುಸರಿಸಿ ಭೀಷ್ಮಕನುತನ್ನ ಪುತ್ರಿಯ ಕಾಲುನಡೆಯಲ್ಲಿ ಕರೆಕೊಂಡುಅಂಬಿಕಾಪೂಜೆಯ ಮಾಡಲು ಪೋಗಲುಸಂಭ್ರಮವ ಬಂದಿದ್ದ ರಾಜರು ನೋಡಿದರು 37ಮುಕುಂದ ನಿನ್ನಯ ಪಾದಪಂಕಜವ ಧ್ಯಾನಿಸುತರುಕ್ಮಿಣಿ ಅಂಬಿಕಾಆಲಯವ ಸೇರಿಬಾಗಿನಾದಿಗಳ ಕೊಟ್ಟು ನಿನ್ನ ಸಂಸ್ಮರಿಸುತ್ತರಾಕೇಂದುಮುಖಿ ನಿನ್ನಾಕಾಂಕ್ಷೆಯಿಂ ತಿರುಗಿದಳು38ರಥಗಜತುರಗಪದಾದಿಸೈನ್ಯಗಳುಪ್ರತಿರಹಿತರು ತಾವೆಂಬ ಡಾಂಭಿಕರಾಜರುಅತಿಗೂಢಚಾರ ರಾಜಭೃತ್ಯರು ಅಲ್ಲಲ್ಲಿಇತ್ತ ಅತ್ತ ಎಲ್ಲೂ ಪುರಜನ ಗುಂಪು 39ಮಂದಗಜಗಮನೆಯು ಸ್ವಚ್ಛ ಹಂಸದವೋಲುಚಂದಪಾದವ ಮೆಲ್ಲ ಮೆಲ್ಲನೆ ಇಡುತಸ್ವಯಂವರದಿ ಸಯಂದನದಿ ನೀ ಇರೆ ವಾರೆನೋಟ ನೋಡಿಬಂದಳು ಉದಯಾರ್ಕ ಪದುಮಮುಖ ಮುದದಿ 40ಮಂದಜಭವಾಂಡದಲ್ಲಿ ಎಲ್ಲೆಲ್ಲೂ ಇಲ್ಲದರೂಪಸೌಂದರ್ಯವತಿಯ ಮೋಹದಲ್ಲಿ ನೋಡಿಮಂಧಧೀ ರಾಜರು ಕಾಯದಿ ಮೈಮರೆಯೇಮಂದಜಕರದಿಂದ ನೀ ಎತ್ತಿಕೊಂಡಿ ಭೈಷ್ಮಿಯ41ಗರುಡಧ್ವಜದಿಂದ ಶೋಭಿಸುವ ರಥದಲ್ಲಿಸಿರಿರುಕ್ಮಿಣಿ ಸಹ ಕುಳಿತು ನೀನುಹೊರಟಿ ಸಸೈನ್ಯ ಬಲರಾಮ ಸಹ ಅದುರುಳರ ಕಣ್ಣು ಮುಂದೆಯೇ ಶ್ರೀಧರಾಚ್ಯುತನೇ 42ಹಾಹಾಕಾರದಲಿ ಕೂಗಿ ಆರ್ಭಟಮಾಡಿಮಹಾಸೈನ್ಯ ಸಹ ಜರಾಸಂಧಾದಿ ರಾಜರುಬಹುವಿಧ ಧನುರ್‍ಸ್ತ್ರಯುತ ಹಿಂಬಾಲಿಸಿಕುಹಕರು ಅತಿಘೋರ ಯುದ್ದ ಮಾಡಿದರು 43ಲೀಲೆಯಿಂದಲಿ ನೀನು ಬಲರಾಮ ಯಾದವರುಖಳಜರಾಸಂಧಾದಿಗಳ ಸೈನ್ಯದವರತಲೆ ಕಾಲು ಕತ್ತರಿಸಿ ಛಿನ್ನ ಭಿನ್ನ ಮಾಡೇಪೇಳದೆ ಓಡಿದನು ಜರಾಸುತನು ಸೋತ 44ಧಾಮಘೋಷನಲಿ ಪೋಗಿ ಅವನ್ನ ಆಶ್ವಾಸಿಸಿತಾಮರಳಿ ಪೋದನು ತನ್ನ ಪಟ್ಟಣಕ್ಕೆತಮ್ಮ ತಮ್ಮ ಪುರಿಗಳಿಗೆ ಇತರ ರಾಜರೂ ಪೋಗೇವರ್ಮದಿ ಯುದ್ಧವ ಮುಂದುವರೆಸಿದ ರುಗ್ಮಿ 45ಶಪಥ ಮಾತುಗಳಾಡಿ ಯುದ್ಧ ಮಾಡಿದ ರುಗ್ಮಿಚಾಪಶರಸಾರಥಿಅಶ್ವಗಳ ಕಳಕೊಂಡುಕೋಪೋಚ್ಛದಿ ಖಡ್ಗದಿ ಎತ್ತಿಕೊಂಡು ಬರಲುಶ್ರೀಪ ನೀ ಆ ಖಳನ್ನ ಕಟ್ಟಿಹಾಕಿದೆಯೋ 46ಜಲಜಾಕ್ಷಿ ಭೈಷ್ಮೀ ಪ್ರಾರ್ಥಿಸಲು ನೀ ರುಗ್ಮಿಯಕೊಲ್ಲದೇ ವಿರೂಪ ಮಾತ್ರವ ಮಾಡೇ ಆಗಬಲರಾಮ ವಾದಿಸಿ ಬಿಡುಗಡೆ ಆಗಿ ಆಖಳಓಡಿ ಪೋದನು ಭೋಜಘಟಕ್ಕೆ47ಜಯ ಕೃಷ್ಣ ಶ್ರೀರುಕ್ಮಿಣಿ ಸಮೇತದಿ ಬಾರೆಜಯಭೇರಿ ತಾಡಿಸಿ ದ್ವಾರಕಾವಾಸಿಗಳುಗಾಯಕರು ನರ್ತಕರುವಿಪ್ರಮುತ್ತೈದೆಯರುಜಯ ಜಯ ಎನ್ನುತ್ತ ಆನಂದದಿ ಮುಳುಗಿದರು 48ಯದುಪುರಿಯಲ್ಲಿ ಮನೆಮನೆಯಲ್ಲಿ ಮಹೋತ್ಸವವುಮುದದಿ ಅಲಂಕೃತರಾಗಿ ಸ್ತ್ರೀ ಪುರುಷರುಜ್ಯೋತಿ ಉಜ್ಜಲ ದೀಪಾವಳಿ ಪೂರ್ಣ ಕುಂಭಗಳುಚೆಂದ ಗೊಂಚಲು ಪುಷ್ಪ ರತ್ನ ತೋರಣಗಳು 49ಸಂಜಯ ಕುರುಕೇಕಯಾದಿ ರಾಜರುಗಳುರಾಜಕನ್ಯೇಯರ ಗಜಗಳ ಒಡ್ಯಾಟಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದಸುಚರಿತ್ರೆಯ ಪೊಗಳಿದರು ನರನಾರಿಯರೆಲ್ಲಾ 50ಚತುರ್ಮುಖ ಸುವೀರೆ ವೈನತೇಯನುಶೇಷಶತಮುಖಸ್ಮರಅಹಂಕಾರಿಕ ಪ್ರಾಣಮೊದಲಾದ ಸುರರ ಮುನೀಂದ್ರರ ವೇದಮಂತ್ರಗಳಮದುವೆ ಮಹೋತ್ಸವದ ವೈಭವಏನೆಂಬೆ ಜಯ ಜಯ ಜಯತು 51ಪೂರ್ಣ ಜ್ಞÕನಾತ್ಮನೇ ಪೂರ್ಣ ಐಶ್ವರ್ಯಾತ್ಮಪೂರ್ಣ ಪ್ರಭಾನಂದ ತೇಜಸ್ ಶಕ್ತ್ಯಾತ್ಮಆ ನಮಿಪೆ ಅಚ್ಯುತಾನಂದ ಗೋವಿಂದ ವಿಭೋಕೃಷ್ಣ ರುಕ್ಮಿಣೀನಾಥ ಜಗದೇಕವಂದ್ಯ 52ಆದರದಿ ಸುರವೃಂದ ರಾಜರೂ ವಿಪ್ರರೂಯಾದವರುಗಳು ಶ್ರೀ ಕೃಷ್ಣ ರುಕ್ಮಿಣೀನಿತ್ಯಸತಿಪತಿ ಮದುವೆ ನೋಡಿ ಮಹಾನಂದಹೊಂದಿದರು ಸೌಭಾಗ್ಯಪ್ರದ ಇದು ಪಠಿಸೆ 53ಯೋಗೇಶ್ವರ ದೇವ ದೇವ ಶ್ರೀಯಃಪತಿಅನಘಅಗಣಿತಗುಣಪೂರ್ಣಅಪ್ರಮೇಯಾತ್ಮನ್ಶ್ರೀಕೃಷ್ಣ ವಿಷ್ಣೋ ಶ್ರೀ ರಮಾರುಕ್ಮಿಣೀಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 54ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 55-ಇತಿ ಶ್ರೀ ರುಕ್ಮಿಣೀಶ ಕಲ್ಯಾಣ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು