ಒಟ್ಟು 1890 ಕಡೆಗಳಲ್ಲಿ , 106 ದಾಸರು , 1489 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ನಿನ್ನ್ಹೊರತು ನಾನಿನ್ನು ಅನ್ಯದೇವರರಿಯೆ ಪನ್ನಂಗಶಾಯಿಯೇ ಪರಿಪಾಲಿಸಭವ ಪ ನಿನ್ನಿಂದಜನಿಸಿ ನಾ ನಿನ್ನಿಂದ ಬೆಳೆದಿರುವೆ ನಿನ್ನಿಂದ ಮಲಗಿ ನಾ ನಿನ್ನಿಂದ ಏಳ್ವೆ ನಿನ್ನಿಂದ ನಡೆಯುವೆ ನಿನ್ನಿಂದ ಕೂಡುವೆನು ನಿನ್ನಿಂದ ಸುಖಬಡುವ ನಿನ್ನಣುಗ ನಾನು1 ನಿನ್ನದೇ ಉಣ್ಣುವೆನು ನಿನ್ನದೇ ತಿನ್ನುವೆನು ನಿನ್ನದೇ ಉಟ್ಟು ನಾ ನಿನ್ನದೇ ತೊಡುವೆ ನಿನ್ನದೇ ಹಾಸಿ ನಾ ನಿನ್ನದೇ ಹೊದೆಯುವೆ ನಿನ್ನ ಸೂತ್ರದಿ ಕುಣಿವ ನಿನ್ನ ಶಿಶು ನಾನು 2 ಎನ್ನ ಮಾತೆಯು ನೀನೆ ಎನ್ನ ತಾತನು ನೀನೆ ಎನ್ನ ಅರಸನು ನೀನೆ ನಿನ್ನ ಪ್ರಜೆ ನಾನು ಎನ್ನ ಬಂಧುವು ನೀನೆ ಎನ್ನ ಬಳಗವು ನೀನೆ ಎನ್ನೊಡೆಯ ಶ್ರೀರಾಮ ನಿನ್ನ ದಾಸ ನಾನು 3
--------------
ರಾಮದಾಸರು
ನಿರಂಜನ ನಿತ್ಯ ನಿರಂಜನ ಪ ಸುಗುಣ ಸಂತೃಪ್ತ ನಿಗಮಾದಿವಿನುತ ಅಗಜೇಶ ಜಗಪಾಲಯ 1 ಗಜಚರ್ಮಾಂಬರ ರಜತಾದ್ರಿ ಮಂದಿರ ಭಜಿಪರ ಭಯವಿದೂರ 2 ನಂಬಿದ ಭಕುತರ ಇಂಬುಗೊಟ್ಟು ವರ ಗುಂಭದಿ ಕೊಡುವ ದೇವ 3 ಮಹಿಮ ನೀ ಉದಯಾಗಿ ಮಹಿಯೊಳು ಮುಂಡರಗಿ ಮಹಸ್ಥಲವೆನಿಸಿದಿಯೋ4 ದೋಷವಿನಾಶನ ಶ್ರೀಶ ಶ್ರೀರಾಮನ ದಾಸರ ದಯಸಂಪೂರ್ಣ 5
--------------
ರಾಮದಾಸರು
ನಿಲಯ ಐಕೂರು ಗ್ರಾಮಾಲಯ | ಸ್ತಂಭೋಧ್ವವ ದೇವ ನಾಮಧೇಯ ಧ್ವಯಭಾರ್ಯ ಸುಮನಸಪ್ರಿಯ ಸದ್ಭಕ್ತಾರ್ತಿವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ | ಅಸ್ಮದ್ ಸದ್ಗುರುವರ್ಯ ನಿತ್ಯ ಸನ್ಮಂಗಳ 1 ಸಾರೋದ್ಧಾರ ಸಂಗೀತ ಭಾರತಿಯುತ ವೇದಾರ್ಥ ಸಂಪೂರಿತ | ಸಹ್ಲಾವಂಶಜ ದಾಸವರ್ಯ ವಿರಚಿತ ಶ್ರೀಶೌರಿ ಸುಕಥಾಮೃತ ಸಾರಜ್ಞಂ ಸುಶೀಲೇಂದ್ರತಿರ್ಥರ ಮಮತ ಸಂಪೂರ್ಣ ಸಂಪಾದಿತ ಅಸ್ಮದಗ ಸದ್ಗುರುವರ್ಯ ನಿತ್ಯ ಸನ್ಮಂಗಳ 2 ಅಷ್ಟಪದಲೋಷ್ಟ ಭಾವಸಮತ | ಕರತಧೀರ ಸನ್ಮಾನಿತ ಅಷ್ಟ್ಯೆಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ | ಸೃಷ್ಟ್ಯಂತರ್ಗತ ಮೂರ್ತಿ ಸತತ | ಸಂದರ್ಶನಾನಂದಿತ ನಿತ್ಯ ಸನ್ಮಂಗಳ 3 ಶೃಂಗಾರಾಂಗ ಸುನಾಮದ್ವಾದಶಧೃತ ಮುದ್ರಾಕ್ಷತಾಲಾಂಕೃತ ಕಮಲ ಜಪಿತ ಪದ್ಮಾಕ್ಷಮಾಲಾಂದ್ರಿತೆ ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಂಗನಾಲಿಂಗಿತ ನಿತ್ಯ ಸನ್ಮಂಗಳ4 ತಾಪತ್ರಯದೂರ ಪಾಪರಹಿತ | ಕೋಪಾದಿಗುಣವರ್ಜಿತ | ಶಾಪಾನುಗ್ರಹಶಕ್ತ ಸುಜನಪ್ರೀತ ಸಂಸಾರ‌ಘನ ಮಾರುತ ಗೂಡಾರ್ಥ ಸಂಬೋಧಿತ ಅಸ್ಮದ್ ಸದ್ಗುರುವರ್ಯ ಈಯೋ ನೀ ನಿತ್ಯಸನ್ಮಂಗಳ 5 ಆಧ್ಯಾತ್ಮ ಸುವಿಚಾರ ಸತತ ಶೃತ್ಯರ್ಥಬಹು ಗರ್ಭಿತ | ಸತ್ಯವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ | ನಾಡ್ಯಾಂತರ್ಗತ ಸರ್ವತೀರ್ಥ ಸ್ನಾತ | ತನ್ಮೂರ್ತಿ ಪ್ರತ್ಯಕ್ಷತ ನಿತ್ಯ ಸನ್ಮಂಗಳ 6 ಧರ್ಮಾಚಾರ ವಿಚಾರಶೀಲ ನಿರತ | ಷಟ್ಕರ್ಮ ಸಂಭೂಷಿತ | ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮಕುಲರಾಜಿತ | ಧಮೋದರವಾತಜಾತ ಪೋತ ಜಾತಾರಿಖತಿವರ್ಜಿತ | ಅಸ್ಮಾದ್ ಸದ್ಗುರುವರ್ಯ ಈಯೋ ನಮಗೆ ಸತತ ನೀ ಸನ್ಮಂಗಳ 7
--------------
ಶಾಮಸುಂದರ ವಿಠಲ
ನೀ ತಂದೆ ನಾಕಂದನಯ್ಯ ರಂಗಯ್ಯ ಪ ಪಾತಕಿಯು ನಾನೆಂದೆ ಘಾತಕನು ನಾನೆಂದೆ ನೀತಿಗಳ ಕಲಿಸೆಂದೆನೈ ತಂದೆ ನಿನ್ನ ಹಿಂದೆ ಅ.ಪ ತಂದೆ ನೀ ಕರೆತಂದೆ ಎಂದು ನಂಬುತೆ ಬಂದೆ ತಂದೆ ನೀ ಕೈಬಿಟ್ಟು ಹಿಂದೆ ನಿಂದೆ ನಿಂದೆಯಲಿ ನಾನೊಂದೆ ಬಂದೆ ಭವದಲ್ಲಿ ಮಂದರೋದ್ಧಾರ ಗೋಪಾಲ ತಾಪವತಂದೆ 1 ಹಿಂದೆ ಜನ್ಮಂಗಳಲಿ ಬೆಂದು ಬಳಲಿದೆನಯ್ಯ ಇಂದು ನರಜನ್ಮದಲಿ ಬಂದೆನಯ್ಯ ಬಂಧು ಬಳಗವಕಾಣೆ ಕಂದು ಕುಂದಿದೆನಯ್ಯ ಇಂದೀವರಾಕ್ಷ ಸಾನಂದ ಭೈರವೀಪ್ರಿಯಾ2 ಮುಂದಿನಾ ಪಥವಾವುದೆಂದರಿಯೆ ಮದನಾಂಗ ಮಂದಮತಿಯನು ನೀಗಿಸೆಂದೆನುವೆ ರಂಗ ಬಂದ ಸುಖದು:ಖಗಳನೊಂದೆಣಿಸು ನೀಲಾಂಗ ಕರವ ಪಿಡಿ ಮೋಹನಾಂಗ 3 ಎಂದು ತವಪಾದಾರವಿಂದವನು ಸೇರಿಸುವೆ ಅಂದು ಜನ್ಮವು ಸಫಲವೆಂದು ನಂಬಿರುವೆ ಮುಂದೆ ಜನ್ಮಗಳಿಲ್ಲ ಎಂದು ನಾನಂಬಿರುವೆ ಸಂದೇಹವೇತಕೆ ನಿನ್ನ ಸೂತ್ರದೋಲ್ ಮೆರೆದೆ 4 ಮಂದಾಕಿನೀಜನಕ ನಂದಗೋಪನ ಕಂದ ಇಂದೀವರಾಕ್ಷ ಮುಚುಕುಂದವರದಾ ಎಂದೆಂದು ವಂದನೆಯ ಮಾಳ್ಪುದೆನಗಾನಂದ ಇಂದದನು ಕರುಣಿಸೈ ಮಾಂಗಿರಿಯ ಗೋವಿಂದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಬಾರದಿರೆ ಬಾರನು ಶ್ರೀ ನರಹರಿ ಪ ನೀ ಬಾರದಿರೆ ಬಾರ ನೀರಜಾಕ್ಷನು ಹರಿನಾನು ನಂಬಿದೆ ನಿಮ್ಮ ನೀವು ಪಾಲಿಸಬೇಕು ಅ.ಪ. ನೀನು ಆತನ ಕಾಯ್ದಿ ತಾನು ಆತನ ಕಾಯ್ದನೀನು ಬಿಡಲು ಬಿಟ್ಟ ಭಾನುಸುತನ ಕೃಷ್ಣ 1 ನಿಮ್ಮ ಮಾತುಗಳನ್ನು ಒಮ್ಮೆ ಮೀರನು ಹರಿನಮ್ಮ ಬಿಡುವುದ್ಯಾಕೊ ಬ್ರಹ್ಮ ಪದಾರ್ಹನೆ 2 ಇಂದು ನಾಳೆನ್ನದೆ ಆನಂದತೀರ್ಥರೆ ನಮ-ಗಿಂದು ತೋರಿಸು ಹರಿಯ ಇಂದಿರೇಶನ ಪ್ರೀಯ 3
--------------
ಇಂದಿರೇಶರು
ನೀದಯಮಾಡಿ ಸಲಹೊ ಎನ್ನ ಪರಮಾತ್ಮ ಭವ ತೊಡರು ಬಿಡಿಸೊ ಪರಮಾತ್ಮ ಪ -----ಸಂಖ್ಯಾನೂರು ಬಳಲುತಿರೆ ಪರಮಾತ್ಮ ಇವರ ಸಂಚಿತವು ಏನೋ ಕಾಣೆನು ಪರಮಾತ್ಮ ಕೋಟಿ ಉದ್ಯೋಗದವರು ---- ಪರಮಾತ್ಮ ಪ್ರಪಂಚಕ್ಕೆ ಸರಿ ಕಾಣಲಿಲ್ಲ ಪರಮಾತ್ಮ 1 ನಾನಾ ಪರಿಯಿಂದ ನಡೆದೆ ಕಷ್ಟದಿಂದ ಪರಮಾತ್ಮ ನಿಮ್ಮ ಧ್ಯಾನವು ಎನ್ನ ಮನಕೆ ನಿಲಕದು ಪರಮಾತ್ಮ ------- ಜೀವಕೆ ಇನ್ನು ಪರಮಾತ್ಮ ಸುಜ್ಞಾನಿಗಳಿಗೆ ಜೀವನ ನೀನು ಪರಮಾತ್ಮ 2 ಸಾರಜಗವ ರಕ್ಷಿಸುವಂಥ ಪರಮಾತ್ಮ ನಿ- ಸ್ಸಾರ ಮಾಡುವರೆ ಎನ್ನ ಪರಮಾತ್ಮ ವೀರ ' ಹೊನ್ನ ವಿಠ್ಠಲಾ’ ಶ್ರೀ ಪರಮಾತ್ಮ ಗುಣ ಗಂಭೀರ ಪುಣ್ಯಪರುಷ ಕೇಳೊ ಪರಮಾತ್ಮ 3
--------------
ಹೆನ್ನೆರಂಗದಾಸರು
ನೀನೆ ನಿರ್ದಯನಾಗಲಿನ್ನೇನು ಗತಿಯೋ ದೀನಜನಮಂದಾರ ಜಾನಕೀ ಮನೋಹರ ಪ ಪಿತ ಮಾತೆಯರ ಸುತರ ಹಿತದಿಂದ ನೋಡದಿರೆ ಕ್ಷಿತಿಯೊಳಗಿತರರು ಹಿತದಿಂ ನೋಡುವರೊ ಪಿತ ನೀನೆ ಮೂಜಗಕೆ ನುತಿಸುವ ಭಕ್ತರ ಸ್ಥಿತಿ ವಿಚಾರಿಸದಿರೆ ಗತಿಯೇನು ಮುಂದೆ 1 ಲೋಕ ಎರಡೇಳು ನೀ ಕರುಣದೊಡಲೊಳಿಟ್ಟು ಜೋಕೆ ಮಾಡುವಿ ನಿನ್ನೊಳ್ಯಾಕೆ ದಯವಿಲ್ಲ ಬೇಕೆಂದು ನಿನ್ನಪಾದ ಏಕಭಕ್ತಿಲಿ ನುತಿಪೆ ಮೂಕನಾಗಲು ಬೇಡ ಶ್ರೀಕರನೆ ದಯಮಾಡೊ 2 ನರಜನ್ಮವಿತ್ತೆನಗೀಪರಿ ಬವಣೆ ಬರಲಿಕ್ಕೆ ಕರುಣವನಿತು ನಿನಗೆ ಬರಲಿಲ್ಲವೇನೋ ಹರಿಯೆನ್ನ ಬರೆಹ ಹೀಗೆ ಬರೆದದ್ದೇ ತಪ್ಪು ನೀ ಮರೆಯಾದರೆ ಬಿಡದಯ್ಯಾ ತ್ವರೆಬಾರೋ ಶ್ರೀರಾಮ 3
--------------
ರಾಮದಾಸರು
ನೀನೇ ಕಾಪಾಡಬೇಕು ನಿರುತವು ಬಿಡದೆಯ- ಜ್ಞಾನಾಬ್ಧಿಯ ದಾಟಿಸು ಸೀ- ಕಮಲ ಭೃಂಗ ಶುಭಾಂಗ 1 ಸುಗ್ರೀವನ ಮಂತ್ರಿವರ ದ- ಶಗ್ರೀವನ ಗುದ್ದಿದವನೆ ಶತ್ರುನಿಕರವಂ ಶೀಘ್ರದಿ ಗೆಲುವಂದದಲಿಯ- ನುಗ್ರಹವ ಮಾಡುತಲೆಮ್ಮ ಕೈಪಿಡಿ ಹನುಮ 2 ತ್ವರಿತವತಿ ನಿಧಾನವಲಸಿಕೆಗಳನು ಬಿಡಿಸಿ ಪಿರಿಯರು ಪೇಳಿದ ಪರಿಯಲಿ ನೆರೆನಡೆವಂದದಲಿ ಸುಮತಿಯನು ಕೊಡು ಹನುಮ3 ಹೊರಗಿನ ಶತ್ರುಗಳಂ ವಾ- ಕ್ಪೌರುಷದಿ ವೋಡಿಸಲುಬಹುದು ಒಳಗಿನ ಕಾಮ್ಯಾ ದ್ಯರ ಗೆಲುವುದಕೆ ಶಾಂತಿಯೆ ಕ್ಷುರವಹುದು ದಯಮಾಡಿ ನೀನೆ ಕರುಣಿಸು ಹನುಮ4 ಕತ್ತಿಯಲಿ ಕಡಿದೆರೆರಡಾ- ಗುತ್ತಿರುವುದು ಜಡವು ವಾಕ್‍ಕತ್ತಿಯ ದೆಸೆಯಲಿ ನೆತ್ತಿಮೊದಲು ಪಾದವರಿಗು ಕತ್ತರಿಸಿದರೀತಿಯಹುದು ಕಾಯೈ ಹನುಮ 5 ಪರಧನ ಪರಾಕಾಮಿನಿಯರಿ ಕೊರಳೊಳರಿವೆಂಬ ರಜ್ಜುವಿಂದಲಿ ವಿರಾಗ ದೊಣ್ಣೆಯನು ಕಟ್ಟಿ ಕೈಪಿಡಿ ಹನುಮ 6 ಸಂಗವು ನಿತ್ಯಾಹ್ನೀಕಕೆ ಭಂಗವು ಬರುತಿಹುದು ಸದ್ವಿಷಯವಾದರದೆ ಬಂಗಾರವು ರತ್ನವು ತಾ ಹಿಂಗದೆ ಸೇರಿಸಿದ ರೀತಿ ಹಿತವೈ ಹನುಮ 7 ನವವಿಧ ಭಕ್ತಿಯ ಕೊಡು ರಾ- ಘವನಂಘ್ರಿಪರಾಗದಲಿ ಕಡು ವಿರತಿಯನು ನೀಂ ತವಕದಲಿ ಪಾಲಿಸುತಲಿ ನಿ- ನ್ನವರಂ ಕೈಪಿಡಿವುದೆಂದಿಗೂ ಬಿಡದೆ ಹನುಮ 8 ತಾನನುದಿನದಿ ಬರುವ ಕಷ್ಟಗಳನು ಪರಿಹರಿಸುತ್ತ ಹಿಂದೆ ತಿರುಗುತಲಿರುವಂ9
--------------
ಗುರುರಾಮವಿಠಲ
ನೀನೊಲಿಯಬೇಕು ನೀನೊಲಿಯಬೇಕು 'ಜ್ಞಾನ'ೀನನಿಗೆ ನಿತ್ಯಾನಂದ ಮೂರುತಿಯೆ ವಾಸುದೇವಾರ್ಯ ಪನರಳಿ ಬಹುಭವದಿ ನಾನಾ ಯೋನಿಮುಖಗಳಿಂದುರುಳಿ ಕೋಟಲೆಗೊಂಡು ಪುಳು ಪಕ್ಷಿ ಪಶು ಜಲಜತರು ಶಿಲೆಗಳೆನಿಪ ಹಲವಲಿ ನವೆಸವೆದು ಸ್ತ್ರೀಪುರುಷತ್ವ ಭೇದವಹ ನರಜನುಮ ಬಹರೆ 1ಪುರುಷನೆನಿಸಿದರು ಪಾದೋರು ಬಾಹುಜ ಭೇದವರಿತು 'ಪ್ರತ್ವ 'ದ್ಯಾ ನಯ 'ಜ್ಞಾನಶರಧಿಯೆನಿಸುವ ಭಾಗ್ಯ ಬರುವ ಸಾಧನಗಳನುಕರುಣಿಸುವ ಪರಮೇಶನೊಲಿವಂತೆನಗೆ 2'ವೃತ ಫಲವಹ ಸಶಾಸ್ತ್ರ ನಿಗಮಾಧೀತಿಯೊಪ್ಪದಿತದುಕ್ತ ಕರ್ಮಾಚರಣೆಗೈಯುತ ಸಮರ್ಪಿಸುತ್ತೀಶ್ವರಗೆ ತತ್ಫಲವ ಬಯಸದೆತೆಪ್ಪಗಿರುವಧಿಕಾರಿಯಪ್ಪ ಸತ್ಪಥಕೆ3ಶೃತಿಯುಕ್ತಿ ಸ್ವಾನುಭವಗಳ ಬಲದಿ ಮನನಗೈಯುತಲಿ ನಿತ್ಯಾನಿತ್ಯ ವಸ್ತುಗಳ ತಿಳಿದನರ್ಥತೆಯರ್ಥಗಳೊಳು ವೈರಾಗ್ಯ ಭಾಗ್ಯವನೀವಮತಿ ಬಂದು ಭಕತಿ ಜ್ಞಾನಗಳಳವಡುವರೆ 4ಬಂದ ವೈರಾಗ್ಯ ನೆಲೆಗೊಂಡು ಬಳಸಿದ ಕ್ರಿಯಾದಂದುಗವು ಸಡಿಲಿ ಬ'ರಂಗ ವ್ಯಾಪಿಸಿ ಕನಸೆಂದು ಕಾಣುತಲೂಡಲುಣುತಲುಡಿಸಿದರುಡುತತಿಂದು ತೇಗುವ ಕರ್ಮ ಬೆಂದು ಸುಖಿಯಹರೆ 5ಹೊರಗೊಳಗುಗಾಣದಾಗಸದಂತೆ ಬಯಲಾಗಿಕರಣಗಳ ಕಾಲಾಟವುಡುಗಿ ಸ್ವ ವ್ಯತಿರಿಕ್ತವರಸಿದರು ಸಂತೃಪ್ತಿ ತೋರದೆ ಸ್ವಾನುಭವಬರಿಯರಿವೆ ನೆಲೆಯಾಗಿ ತಾನೆ ತಾನಹರೆ 6ನಿಂತವೇದಾಂತ ಪದ್ಧತಿಯ ನಿಲಿಸುವರೆ ಮೊದಲಂತೆ ಕೃಷ್ಣಾವತಾರದಿ ಪಾರ್ಥಗೊರೆದ ಕೃಪೆವಂತ ನೀ ಮರಳಿ ಚಿಕನಾಗಪುರದಲಿ ಹೊಳೆದನಂತಮ'ಮನಾಗಿರುವೆ ವಾಸುದೇವಾರ್ಯ 7
--------------
ತಿಮ್ಮಪ್ಪದಾಸರು
ನೀರಜ ನೇತ್ರ ನಿನ್ನ ಪಾದಂಗಳ ನಂಬಿದೆ ಕೊನೆಗೆ ಪ ಶ್ರುತಿಹಿತ ಧರ್ಮವಿಶ್ರುತ ನಾನಲ್ಲ ಸತತವು ಜ್ಞಾನಿಯ ಜೊತೆ ಸೇರಲಿಲ್ಲ 1 ಭಕ್ತಿಪಥದಿ ಮನವರ್ತಿಸಲಿಲ್ಲ ಯುಕ್ತಿಯಿಂ ವಿಷಯ ವಿರಕ್ತನಾನಲ್ಲ 2 ಗುರುಕುಲವಾಸದ ಗುರುತೆನಗಿಲ್ಲ ಪರಮ ಭಾಗವತರ ಪರಿಚರ್ಯವಿಲ್ಲ 3 ಮಂತ್ರಾರ್ಥದ ಬೋಧೆ ಮನದೊಳಗಿಲ್ಲ ತಂತ್ರದೊಳಗೆ ಜಾಣ್ಮೆ ಎನಗಿನಿತಿಲ್ಲ 4 ಸಜ್ಜನ ಸಹವಾಸದುಜ್ಜುಗವಿಲ್ಲ ದುರ್ಜನರ ಸಂಗತಿ ವರ್ಜಿಸಲಿಲ್ಲ 5 ಹರಿಕಥೆ ಮಾಡುವ ಪ್ರಜ್ಞೆ ನನಗಿಲ್ಲ ದುರುಳ ಕಾಮುಕಸಂಗ ಕಿರಿದಾಗಿಲ್ಲ 6 ಪರಿಪರಿ ಕಷ್ಟವ ಪರಿಹರಿಸುವನೆ ಪರಮಶ್ರೀಪುಲಿಗಿರಿ ವರದವಿಠಲನೆ 7
--------------
ವೆಂಕಟವರದಾರ್ಯರು
ನೀರಜ ಯುಗ ಮನೋ - ವಾರಿಜದಲಿ ನಾ ಭಜಿಸುವೆನು ಪ ಸಾರಿದ ಜನರ‌ಘದೂರದಿ ಓಡಿಸಿ ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ ಅವರ ಪದಜಲ ಈ ಭುವನತ್ರಯ ಪಾವನ ತರವೆಂದೆನಿಸುವದೋ ಅವರ ಪದಯುಗ ಕೋವಿದಜನರು ಭಾವದಿ ದಿನದಿನ ಸೇವಿಪರೋ ಅವರ ಹೃದಯದಿ ನಾರಾಯಣ ಚ - ಕ್ರಾವತಾರವ ಧರಿಸಿಹನೊ ಶ್ರೀವರ ಹರಿ ಕರುಣಾವಲೋಕನದಿ ದೇವಸ್ವಭಾವವ ನೈದಿಹರೋ 1 ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ ಕೋವಿದ ಜನರೆಲ್ಲರು ಆವನ ದೇವೋತ್ತುಮನೆಂದೆನಿಸುವನು ಪಾವನಿ ಮುಖ ದೇವೋತ್ತುಮರೆಲ್ಲರು ಈ ವಿಧ ಮಹಿಮೆಯ ತೀವ್ರದಿ ತೋರುವ 2 ಅವರು ಅವನೀ ದೇವತೆಗಳಿಗೆ ಜೀವನವಿತ್ತು ಪೊರೆದಿಹರೋ ಪಾವಕಘಾಕಿದ ಹಾರವ ಮತ್ತೆ ಭೂವರನಿಗೆ ತಂದಿತ್ತಿಹರೋ ಮಾವಿನ ರಸದಲಿ ಬಿದ್ದಿಹ ಶಿಶುವಿಗೆ ಜೀವನವಿತ್ತು ಕಾಯ್ದಿಹರೋ ಶೈವನ ನಿಜಶೈವವ ಬಿಡಿಸೀ ತಮ್ಮ ಸೇವೆಯನಿತ್ತು ಕಾಯ್ದಿಹರೋ 3 ಸಲಿಲವ ತಂದಿರುತಿಹ ನರನಿಗೆ ಸುಲಲಿತ ಮುಕ್ತಿಯನಿತ್ತಿಹರೋ ಚಲುವ ತನಯನಾ ಪುಲಿನದಿ ಪಡೆದಿಹ ಲಲನೆಯ ಚೈಲದಿ ಕಾದಿಹರೋ ಸಲಿಲವು ಇಲ್ಲದೆ ಬಳಲಿದ ಜನಕೆ ಸಲಿಲವನಿತ್ತು ಸಲಹಿದರೋ ಇಳೆಯೊಳು ಯತಿಕುಲತಿಲಕರೆಂದೆನಿಸಿ ಸಲಿದಂಥದು ತಾವು ಸಲಿಸಿಹರೋ 4 ಅನುದಿನದಲಿ ತಮ್ಮ ಪದಕಮಲವನು ಮನದಲಿ ಬಿಡದೆ ಭಜಿಸುವರಾ ಜನರಿಗೆ ನಿಜಘನಸುಖವನು ಕೊಟ್ಟವ - ರನುಸರಿಸೀ ಇರುತಿಹರಾ ಮನೋ ವಾಕ್ಕಾಯದಿ ನಂಬಿದ ಜನಕೆ ಜನುಮವನ್ನುನೀಡರು ಇವರ ಘನಗುಣ ನಿಧಿ ಗುರುಜಗನ್ನಾಥ ವಿಠಲ - ನಣುಗಾಗ್ರೇಸರೆರೆನಿಸಿಹರಾ 5
--------------
ಗುರುಜಗನ್ನಾಥದಾಸರು
ನೀರಜ ಭೃಂಗ | ಪೊರೆ ರಾಜಾಧೀರಾಜಾ ಪ ಪರ ಬೊಮ್ಮ ಸೇವಕರೆಂಬ | ಮರ್ಮವೆನಿಪ ತಾರ |ತಮ್ಯವ ನೊರೆದಂಥ | ಬ್ರಹ್ಮಣ್ಯ ಮುನಿಪೋ | ತ್ತುಮ್ಮರ ಕುವರ 1 ಪತಿ ಸೇ | ವಕ ನೆನಿಸುತ ವಿ | ರಕುತನಾಗಿ ಮೆರೆದ 2 ಬೊಮ್ಮ ಭವ | ನೋವು ಕಳೆವುದಯ್ಯನೀವೊಲಿಯದೆ ಗುರು | ಗೋವಿಂದ ವಿಠ್ಠಲ | ತಾವೊಲಿಯನು ಖರೆಯ 3
--------------
ಗುರುಗೋವಿಂದವಿಠಲರು
ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ | ನೀರಜ ಶರಪತಿ ಕಾಣಮ್ಮಾ ಪ ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ- ಪುರ ನೂಪುರದ ಲೊಪ್ಪುವನವದಾರಮ್ಮಾ | ಸರಸಿಯೊಳಗಪೊಕ್ಕು ತಮನಸುವ ಬಗೆದು | ವರಶೃತಿ ತಂದವ ಕಾಣಮ್ಮಾ 1 ಕಲಿ ದಶನಂದದಿ ಜಂಘೆ ಪೊಂಬಾಳೆಯ | ಪರಿಯ ತೊಡೆಯುಳ್ಳುವ ದಾರಮ್ಮಾ | ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು | ಭರದಿ ಬೆನ್ನೆವಿತ್ತವ ಕಾಣಮ್ಮ2 ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ ಮಿಂಚಿನ ಘಂಟೆಯ ದಾರಮ್ಮಾ | ಕ್ಷಿತಿ ವಯ್ದದನುಜನ ಶೀಳಿ ವಿ | ರಂಚಿ ಗುಳಹಿದವ ಕಾಣಮ್ಮಾ3 ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ | ಉರಸಿನ ವತ್ಸನವ ದಾರಮ್ಮಾ | ನರಹರಿ ರೂಪದಿ ಹಿರಣ್ಯಕನನು ಕೊಂದು | ಶರಣನ ಕಾಯ್ದವ ಕಾಣಮ್ಮಾ4 ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ | ಹಸ್ತ ಕಡಗದವ ನಾರಮ್ಮಾ | ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ | ಸ್ವಸ್ತಿ ಮಾಡಿವನು ಕಾಣಮ್ಮಾ5 ಕ | ಪೋಲ ಹೊಳಹಿನವ ದಾರಮ್ಮಾ | ಏಳು ಮೂರು ಬಾರಿ ಕ್ಷತ್ರಿಯ ರಾಯರ ಸೋಲಿಸಿ ಬಂದವ ಕಾಣಮ್ಮಾ6 ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ | ತೋರ್ಪ ನಾಶಿಕದವ ದಾರಮ್ಮಾ | ದರ್ಪ ಮುರಿದು ರಾವಣನ ತಲಿಯ ಧರೆ | ಗೊಟ್ಟಿಸಿದವ ನಿವ ಕಾಣಮ್ಮಾ7 ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು | ಪೊಡವಿಯೊಳಗ ನಂಬಿದ್ದ ಪಾಂಡವರನು | ಬಿಡದೆ ಸ್ಪಾಪಿಸಿದವ ಕಾಣಮ್ಮಾ8 ಕುರುಳು ಗೂದಲು ತಳಕದ ಮಾಲ್ಯ ಮೌಲಿಕ | ಧರಸಿದ ಮುಕುಟವ ದಾರಮ್ಮಾ | ತರಳನಾಗಿ ಮುಪ್ಪುರ ನಾರಿಯರ ವೃತ | ತ್ವರಿತದಿ ಅಳಿದವ ಕಾಣಮ್ಮಾ9 ನೋಡಲು ಮನಸಿಗೆ ಮೋಹನೆ ಮಾಡುವ | ಪ್ರೌಡದಿ ಮನವವ ದಾರಮ್ಮಾ | ರೂಢಿಲಿ ಕುದುರೆಯ ಏರಿ ಕಲಿಮಲವ | ಝಾಡಿಸಿದವನಿವ ಕಾಣಮ್ಮ10 ಸಹಜದಿ ಸವಿಸವಿ ಮಾತಲಿ ಸೋಲಿಸು | ತಿಹ ಸರ್ವರಿಗಿವ ದಾರಮ್ಮಾ | ಮಹಿಪತಿ ಸುತನ ಹೃದಯದಲಿ ನಿಂತು ತನ್ನ| ಮಹಿಮೆ ಬೀರಿಸುವವ ಕಾಣಮ್ಮಾ11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರಜದಳ ನೇತ್ರ ರಂಗಾ ಪುನ್ನಾಗೋತ್ತುಂಗ ಪ ಕ್ಷೀರವಾರಿಧಿ ನಿಲಯ ಶುಭಾಂಗ ಶ್ರೀರಮಾಲಿಂಗ ಅ.ಪ ವಿನುತ ಕರುಣಾ | ಪಾರ ಭಕ್ತ ವಿಹಾರ ಕಂಕಣ 1 ಸಂಸಾರಾಂಬುಧಿ ತರಣ ಶೌರೀ | ಹಂಸಗಮನನುತ ಮುರಾರಿ ಕಂಸವೈರಿ ಚಕ್ರಧಾರಿ | ಹಿಂಸೆ ಬಿಡಿಸೊ ಸೂತ್ರಧಾರಿ2 ಕರಿರಾಜವರದಾ ಸುಧಾಂಗ ತರಳ ವಾಮನಾಂಗ ಶುಭಾಂಗ ಕರುಣಾಪಾಂಗ ಮಾಂಗಿರಿರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್