ಒಟ್ಟು 794 ಕಡೆಗಳಲ್ಲಿ , 91 ದಾಸರು , 684 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಹರಿಶಯ್ಯ - ಹರಿಶಯ್ಯ ಪ ಪೂರ್ವ ತ್ರಿಯಂಬಕ | ಜೀವರ ಮಾನಿಯೆ ಅ.ಪ. ಪತಿ ಚಾರು ಭವ ವಾರಿಧಿ ದಾಟಿಸು 1 ದಾತನೆ ಪ್ರಾರ್ಥಿಪೆ | ವಾತೋದ್ಭವ ಎನಪ್ರೀತಿಲಿ ಕರಪಿಡಿ | ವಾತಾಶನ ಗುರು2 ನಿಕರ ಸಿರಿ | ಕೇಶವನಲಿ ಬಿಡು 3 ಭವ 4 ಪಕ್ಷಿಯ ವಹ ಹರಿ | ಪಕ್ಷಸಾಧಕ ಗುರುಚಕ್ಷುಶ್ರ್ಯವ ಎನ | ಈಕ್ಷಿಸು ಕರುಣದಿ 5 ಸ್ವಪ್ನದಿ ಇತ್ತಿಹ | ಆಜ್ಞೆಯಂತೆ ಗುರುಸ್ವಪ್ನಾಖ್ಯಾನದಿ | ಪ್ರಜ್ಞೆಯ ನಿರಿಸೋ 6 ಸಾವಿರ ಮುಖದಲಿ | ಭುವಿಧರಭಿಧ ಗುರುಗೋವಿಂದ ವಿಠಲನ | ಸೇವಿಪೆ ಭಕುತಿಲಿ 7
--------------
ಗುರುಗೋವಿಂದವಿಠಲರು
ಹರಿಹರಿಯಂದು ಸ್ಮರಿಸಿ ಉರಗೇಂದ್ರ ವರಮಂಚ ಮಿಗಿಲೇರಿಸಿ ಚರಣದೊಳದೃಷ್ಟಿಯಿರಿಸಿ ಪ. ಅಕ್ಷಯಗುಣ ಪೌರುಷ ಅನವರತ ರಕ್ಷಿಸುವುದೆನ್ನಾಶ್ರಿತ ರಾಕ್ಷಸಾಂಬುಧಿವಿಶೋಷ ಭಕ್ತಜನ ರಕ್ಷಾವಿನೋದ ಭೂಪ 1 ಏನೆಂಬೆನದ್ಭುತವನು ಬಹು ಸೂಕ್ಷ್ಮ ದಾನಯಜ್ಞಾದಿಗಳನು ಧ್ಯಾನಿಸುತ ತ್ವತ್ಪದವನೀ ಚರಿಸಲನ್ಯೂನವಹ ವಿಸ್ಮಯವನು 2 ವರ ಶ್ರುತಿಸ್ಮøತಿಗಳರಿತು ವಿಧಿಯೋಳಾಚರಿಸಿದರು ಫಲವ ಕುರಿತು ಸಿರಿವರನೆ ನಿನ್ನ ಮರೆತು ಇರಲದಿಹ ಪರಕಲ್ಲವಾದಸರಿತು 3 ಬಾಗಿ ಪೊರೆವ ದೊರೆಯೆ ಕಂಭದಲಿ ತೋರ್ದ ಸಿರಿಯೆ 4 ಮೂರ್ತಿ ಅವಗುಣಗಳೇನೊಂದನೆಣಿಸದರ್ಥಿ ಶ್ರೀನಿಧಿಯೆ ಮಾಡು ಪೂರ್ತಿ ಶೇಷಾದ್ರಿ ಮಾನಿಮರುದೀಡ್ಯ ಕೀರ್ತಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹಸೆಗೆ ಬಾರೆ ಶುಭಾಂಗಿವಿಭಾವ ಪ ಸಿರಿ ಅ.ಪ ಜೀವರ ಸ್ವಭಾವಗಳಂತೆಯೆ ಮಾನಿನಿ ಜನನಿಯೆ ಬೇಗದಿ 1 ಭಾಸುರಾಂಗಿಯೇ ಬಾರೇ ರಮಾ ನೀ ಸಲಹಬೇಕು ನಮ್ಮಮ್ಮ ವಂದಿಸುವೆನೂ 2 ಗುರುರಾಮ ವಿಠಲನ ಪ್ರಿಯೆ ಕರುಣಾಬ್ಧಿಯೆ ಕಾಯೆ ಮಾಯೆ ವರಗಳ ನೀ ಕೊಡು ತಾಯೆ ಮಹಾಲಕ್ಷ್ಮಿಯೇ 3
--------------
ಗುರುರಾಮವಿಠಲ
ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ ಪ ಮರುಗ ಮಲ್ಲಿಗೆ ಜಾಜಿಸಂಪಿಗೆ ಸುರಗಿಬಕುಳ ಪಾದರಿ ಪರಿಪರಿಯಿಂದ ಹಾರ ಕಟ್ಟಿ ಹರಿನಾ ನಿನ್ನ ಕೊರಳಿಗೆ 1 ಕಮಲ ಪುಷ್ಪದ ಹಾರವನ್ನು ವಿಮಲ ಮನದಿ ತಂÀದಿಹೆ ಸುಮಶರಪಿತ ಕೊರಳ ಕೊಟ್ಟರೆ ನಮಿಸಿ ನಿಮಗೆ ಹರುಷದಿ 2 ಮಾನಿನಿಯರ ಮೊರೆಯಕೇಳಿ ಪ್ರಾಣನಾಥವಿಠ್ಠಲ ತಾನೆ ಕರವನೀಡಿ ಹಾರವ ಗಾನಲೋಲ ಧರಿಸಿದ 3
--------------
ಬಾಗೇಪಲ್ಲಿ ಶೇಷದಾಸರು
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ ನಿತ್ಯ ಹಾಡಿ ಪ ಮನುಜನ್ನ ಭೋಕ್ತರಿಕಾಯೈದಿ ಧನದಾತ ಸವಸನ ಭೂಷಣ ವಿದ್ಯಾ ಕನಕ ವಿನಯದಿಂದಲಿ ಇಲ್ಲಿ ತನಕ ಬಂದು ಘನವಾಗಿ ಬೇಡುವರು ಮುಕ್ತಿ ಅಹಿಕಾ 1 ಪಾದ ಕರ್ಮ ಭೂ ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು ಪಾವಮಾನಿ ಮತ ಪೊಕ್ಕು ಸುಳಿದು 2 ಒಂದೊಂದು ಪರಿಯಲ್ಲಿ ಸಾಗಿ ಸಾರಿ ನಿಂದಿರದೆ ಇಪ್ಪದು ಕಾವ ಲೇಸಾಗಿ ಅಂದದಿಂದಲಿ ಮೌಳಿ ತೂಗಿ ವೇಗ ಕುಂದನಿಷ್ಟವಾಯಿತು ತಾನೆ ಪೋಗಿ3 ಬೇಕಾದರ್ಥವ ಕೊಡುವದು ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ 4 ಸತ್ಯಾಗಿ ಸತ್ಯಬೋಧಯತಿ ಕೈಯ ಗುರು ಸತ್ಯಪ್ರೀಯ ಸ್ತೌತ್ಯರಾಮನ್ನ ಹಾವಿಗೆಯ ನಂಬೆ ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ5
--------------
ವಿಜಯದಾಸ
ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ ಪ ಕುಮಾರ ಶಕ್ರಾದಿ ಸಮಸ್ತ ಸುರಗಣ ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ. ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ ಹೃದ್ಧ್ಯೋಮದಲಿ ಪೊಳೆದು ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ 1 ಘೋರ ಭವಾಬ್ಧಿಯ ತಾರಿಪ ಸುಲಭದ ದಾರಿಯ ತೋರೆನುತ ಮುರಾರಿಯನು ಬೇಡಿ ಶ್ರೀ ರಾಮ ನಾಮದ ರುಚಿ ಬೀರಿದೆ ಜಗದೊಳು 2 ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ ಧಕ್ಷನ ವರ ಜನನಿ ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ 3
--------------
ಲಕ್ಷ್ಮೀನಾರಯಣರಾಯರು
ಹೀಂಗಾಯಿತ್ಹೀಂಗಾಯಿತೆ ಎನ್ನಯ ಬಾಳು ಪ ಗಂಗಾಜನಕ ಪಾಂಡುರಂಗ ಮೂರುತಿಯನು ಹಿಂಗದೆ ಭಜಿಸದೆ ಅಂಗಜನ್ವಶನಾದೆ 1 ಕಂತು ಜನಕ ಲಕ್ಷ್ಮೀಕಾಂತ ಮೂರುತಿಯನ್ನು ಚಿಂತಿಸದೆ ವಿಷಯ ಚಿಂತನೆಯಲ್ಲಿರುವೆ 2 ಹಿಂಡು ಜನರ ಮುಂದೆ ಸಂಭಾವಿತನಂದದಿ ಶುಂಭ ನಾ ಮೆರೆದೆನೊ 3 ಅಂಗನೆಯರ ಅಂಗಸಂಗ ಬಯಸಿ ಅಂತ ರಂಗದಿ ಕುಳಿತು ಬಹು ಸಂಗತಿ ಕಲ್ಪಿಸಿದೆ 4 ನಾನು ಪೇಳುವುದೇ ಸನ್ಮಾನ್ಯವೆಂದುಸುರಿ ನಾ ಮಾನಿನಿಯರ ಕೂಡಿ ಶ್ವಾನನಂದದಿ ಬಾಳ್ವೆ 5 ಬಿಡಿಸೋ ಬಿಡಿಸೋ ಹರಿ ಕೇಡು ಬುದ್ಧಿಗಳನ್ನು ಈಡು ನಿನಗಿಲ್ಲೆಂಬೊ ದೃಢಮನಸನೆ ಕೊಡೊ 6 ಘನತೆ ನಿನಗಲ್ಲವೊ ದೀನರ ಬಳಲಿಪುದು ಮಾನದಿಂದಲಿ ಕಾಯೊ ಶ್ರೀ ನರಹರಿಯೇ7
--------------
ಪ್ರದ್ಯುಮ್ನತೀರ್ಥರು
ಹೆತ್ತವರಿಗೆರವಾಗಿ ಹೆರವರಿಗೆ ಮಗನಾಗಿ ಚಿತ್ತದೊಳು ನಲಿವವನೆ ಮತ್ತನಿವನೆ ತುಂಟತನದೊಳಗೆ ಸರಿಯುಂಟೆ ಈತಗೆ ಜಗದಿ ನಂಟರನು ಗೋಳಿಡುವ ತುಂಟನಿವನೆ ವಂಚಕರಿಗೆಲ್ಲರಿಗೆ ಸಂಚಕಾರವ ಕೊಡುವ ಚಂಚಲಾಕ್ಷಿಯರನ್ನೆ ವಂಚಿಸಿರುವ ಮಾನವರೊಳಿಂತಪ್ಪ ಮಾನಿಯಂ ನಾನರಿಯೆ ಮೀನಾಂಕ ಸಮರದೊಳ್ ಜಾಣನಿವನೆ ಜಾರರೋಳ್ ಕಡುಶೂರ ಮಾಯಕಾರ ಚೋರತನದೊಳು ವೀರ ಭಯವಿದೂರ ದಾರಿಕಾಯಲು ಧೀರ ಧೈರ್ಯಸಾರ ಮಾರಪಿತ ಶೇಷಗಿರಿವರನೆ ನೀರ
--------------
ನಂಜನಗೂಡು ತಿರುಮಲಾಂಬಾ
ಹೇಳುವುದು ಬೇಡ | ಜನರ ನುಡಿ ಕೇಳದಿರಲೋ ಮೂಢ ಪ ಶ್ರೀಲೋಲನ ಕಿಂಕರರ ಬಾಗಿಲಲಿ ಬೀಳುನಾಯಿಯಂದದಲಿ ಕೆಲಕಾಲ ಅ.ಪ ದ್ರವ್ಯದಾಸೆಗಾಗಿ | ನಾರಕೀ ಭವಿತವ್ಯರಲ್ಲಿಗೆ ಹೋಗಿ ಕಾವ್ಯನಾಟಕ ಸ್ತುತಿ ಪದ್ಯಗಳನು 1 ನಾನು ಯೋಗ್ಯನೆನ್ನುತ | ತೋರಿಸಿ ಮಾನವಾಗಿದಿರದಲ್ಲಿ ನಿನಗೆ ದುರಭಿ- ಮಾನಿಯಾಗಿ ನೀ ಕೆಡುವೆಯೊ ನಿಜ ನಿಜ 2 ಕೊಂಚ ಬೇಡಬೇಕು ವಂಚನೆಯಿಲ್ಲದೆ ಭಜಿಸು ರಹಸ್ಯವ 3
--------------
ಗುರುರಾಮವಿಠಲ
ಹ್ಯಾಂಗೆ ಉದ್ದರಿಸುವಿ ಎನ್ನ ಕೃಷ್ಣ ಕರುಣ ಸಂಪನ್ನ ಪ ಹೋಗಿ ಹೊಗಿ ವಿಷಯ ಕೂಪದಲ್ಬೀಳ್ವವನಾಅ.ಪ. ದಾಸನು ಎಂದೆನಿಸಿ ಮೆರೆವೆ ಮನದೀ ಲೇಶಾ ಭಕುತಿಯನಾನೊಂದರಿಯೇ ವೇಷಹಾಕಿದೆ ಧನಕೆ ಬರಿದೇ ಆಶೆ ಇಟ್ಟು ಭವದಿ ವಂಚಕನೆನಿಸಿದವನಾ1 ಮಂದಿ ಜನರ ಮುಂದೆ ವೈರಾಗ್ಯನಟನೆ ಮಂದಿರದೊಳು ಬಹು ಕಾಮದ ಭಜನೆ ಬಂಧು ಬಳಗ ಕೂಡೆ ಬಹಳ ಭಕ್ತಿ ಇಂದಿರೇಶನ ಧ್ಯಾನ ದೋಳ್ವಿರಕ್ತಿ2 ಗುರುಹಿರಿಯರ ಜರಿವೊದೆ ಜಪವು ದುರುಳರ ಸಂಗ ದೋಳ್ಮೆರೆವೋದೆ ವ್ರತವು ಪರಿಸರನ ಶಾಸ್ತ್ರದೋಳ್ಮೌನ ನರನಾರಿ ಸ್ತವ ದೋಳ್ಧ್ಯಾನ 3 ವೇದ ಓದಿದೆ ನಾನು ಆದರೇನು ಮೋದತೀರ್ಥರ ಮರ್ಮ ಸಿಗಲಿಲ್ಲವು ಇನ್ನು ವಾದಕ್ಕನುಕೂಲ ವಾಯ್ತದು ಅಷ್ಟೆ ಖೇದ ತೊಲಗದೆ ಮನದಿ ಬಹುಕಷ್ಟಪಟ್ಟೇ 4 ಭುಕ್ತಿ ಪಡೆಯೆ ಕಾಲಕಳೆದೆನಲ್ಲಾ ಯುಕ್ತಿಯಿಂದಲಿ ನೀನು ಒಲಿವೋನು ಅಲ್ಲಾ ಭಕ್ತ ಜನರ ಸಂಗ ನಾ ಪಿಡಿಯಲಿಲ್ಲ ಮುಕ್ತಿಗಾಗುವ ಭಾಗ್ಯ ಎನ್ನಲಿಲ್ಲವಲ್ಲಾ 5 ಸ್ವೋತ್ತುಮರ ನೋಡೆ ಮಾತ್ಯರ್ಯ ಎನಗೇ ವಾತ್ಯಲ್ಯ ತೋರೆನು ಸ್ಧಾವರ ಜನಕೇ ಕುತ್ಸಿತ ಪಾವಡ ಬೀರುವೆ ಜಗಕೆ ತಾತ್ಸಾರ ತೋರುವೆ ಭಕ್ತರ ಗುಣದೀ6 ಈಷಣ ತ್ರಯಗಳ ಬಿಡಲಿಲ್ಲ ಲೇಶಾ ಭಾಷಣದಿ ತೋರ್ಪೆಜ್ಞಾನ ಪ್ರಕಾಶ ಈಶ ನೀನೊಬ್ಬನೆ ಸರಿಯೆಂಬೆ ಹರಿಯೆ ದಾಸನಾಗಿ ಬಾಳ್ವೆ ಬಹು ನೀಚ ಜನಕೆ 7 ನಾನು ನಾನೆಂಬುದು ತುಂಬಿದೆ ಮನದಿ ನೀನು ನಿನ್ನಾಧೀನ ವೆಂತ್ಹೇಳಿ ದೃಢದಿ ಜ್ಞಾನವಿದ್ದರು ಇಲ್ಲ ಎನಚರ್ಯೆ ನೋಡೆ ಮಾನಿನಿಯರ ಬೊಂಬೆ ಗುಣಗಣನೆ ಮಾಡೆ 8 ಮೂರೊಂದು ಹರಿತ್ಯಾಗ ತೊರೆಯಲಿಲ್ಲ ವೈರಿ ಆರರ ಬೇರು ನಾಕೀಳಲಿಲ್ಲ ವೀರ ವೈಷ್ಣವನಾಗಿ ಬಾಳಲಿಲ್ಲಾವಲ್ಲ ಗಾರು ಮನ್ನಿಸದಿರೆ ಗತಿಯೊಬ್ಬರಿಲ್ಲಾ 9 ವ್ರತನೇಮ ಉಪವಾಸ ಸಾಧನೆಯಿಲ್ಲ ರತಿಯಿಂದ ಸಲಹೆಂದು ನಾಕೂಗಲಿಲ್ಲ ಮತಿ ಮತದಿ ಪುಟ್ಟಿದರು ಫಲವಾಗಲಿಲ್ಲ ಗತಿ ನೀನೆ ಕೈ ಪಿಡಿಯೊ ಕೇಳುತ ಸೊಲ್ಲ 10 ಡಂಭಕ ತನದಿಂದ ಬಹುಕಾಲ ಕಳೆದೇ ತುಂಬಿ ಭಕ್ತಿಯ ಬೇಗ ನೀ ಕಾಯೋಮುಂದೆ ಜಂಭಾರಿ ಜಯತೀರ್ಥ ವಾಯ್ವಾಂತರ್ಗತನಾದ ಕಂಬುಕಂಧರಧಾರಿ “ಶ್ರೀ ಕೃಷ್ಣವಿಠಲ” 11
--------------
ಕೃಷ್ಣವಿಠಲದಾಸರು
ಹ್ಯಾಗೆ ಉದ್ಧಾರ ಮಾಡುವನೋ ಹರಿ ಹೀಗೆ ದಿನಗಳ ಕಳೆಯುವರ ಪ. ಆದಿಮೂರುತಿ ಶ್ರೀ ದೇವ ಪದುಮನಾಭ ವೇದ ಉದ್ಧಾರನೆಂದನಲಿಲ್ಲ ಸಾದರದಲಿ ಹರಿ ಸಕಲರಿಗೊಡೆಯನೆಂ ದಾದರದಲಿ ನಾ ಪಾಡಲಿಲ್ಲ 1 ಮೃಚ್ಛಕೂರ್ಮಹರಿ ಸ್ವಚ್ಛÀವರಹನೆಂದು ಉಚ್ಚಧ್ವನಿಯಿಂದ ಕೂಗಲಿಲ್ಲ ತುಚ್ಛಕನ ಕೊಂದು ಅಚ್ಚ ಭಾಗವತಗೆ ಮೆಚ್ಚಿ ರಕ್ಷಿಸಿದನೆಂದೆನಲಿಲ್ಲ 2 ಚಲುವ ವಾಮನನಾಗಿ ಬಲಿಯ ದಾನವ ಬೇಡಿ ಮಲವನಳಿವ ಗಂಗೆ ಪಡೆದನೆಂದು ಕುಲವಳಿದು ಭೂಲಲನೆಯ ವಿಪ್ರರಿ ಗೊಲಿದು ಇತ್ತನೆಂದು ನೆನೆಯಲಿಲ್ಲ 3 ಸೀತೆಗಾಗಿ ಪಡೆಸವರುತ ಹರುಷದಿ ವಾತತನಯಗಜಪದವಿತ್ತನ ಈತನೆ ಪರದೈವನಾಥನು ಪರಕೆಂದು ಪ್ರೀತಿ ಭಕ್ತಿಯಲಿ ಮೈಮರೆಯಲಿಲ್ಲ 4 ಗೋಪಿಯರ ಕೂಡಿ ಗೋಪನ ಮನೆಯಲಿ ಶ್ರೀಪತಿ ಲೀಲೆಯ ತೋರ್ದನೆಂದು ಪಾಪದ ಕಾಷ್ಠಕೆ ಪಾವಕನಾಗಿಹ ತಾಪಹರನ ನಾ ನೆನೆಯಲಿಲ್ಲ 5 ಲಲನೇರ ವ್ರತವಳಿದು ಚಲುವ ಕುದುರೆ ಏರಿ ಕಲಿಮುಖರನು ಸದೆಬಡಿದನೆಂದು ಚಲುವ ಗೋಪಾಲನೆ ನೀನೇ ಗತಿ ಎಂದು ಹಲವು ಬಗೆಯಿಂದ ಪೊಗಳಲಿಲ್ಲ 6 ಗುರುಗಳು ಪೇಳಿದ ಪರಮ ರಹಸ್ಯವು ಅರಿವಾದರೂ ಅನುಭವ ಇಲ್ಲ ಪರಿಪರಿ ಮಹಿಮೆಯ ಉದಯಸ್ತ ಪರಿಯಂತ ಅರಿವು ಮನಕೆ ಎನಗಾಗಲಿಲ್ಲ 7 ದೇಹಸ್ತ ಹರಿ ಎಂದು ದೇಹವ್ಯಾಪ್ತನು ಎಂದು ದೇಹ ಗೇಹ ಜೀವ ಭಿನ್ನವೆಂದು ಶ್ರೀ ಹರಿ ಜೀವಾಂತರ್ಯಾಮಿಯಾಗಿಹನೆಂದು ಮೋಹವಳಿದು ಜ್ಞಾನ ಪುಟ್ಟಲಿಲ್ಲ 8 ತತ್ವಾಧಿಪತಿ ಹರಿ ತತ್ವಾಭಿಮಾನಿಗಳು ನಿತ್ಯ ಹರಿಮಾರ್ಗ ತೋರ್ವರೆಂದು ಸತ್ಯವಚನವನು ವಾಯು ಮತದಿ ನಂಬಿ ಭೃತ್ಯ ಭಾವವ ನಾ ವಹಿಸಲಿಲ್ಲ 9 ಎಷ್ಟು ಹೇಳಲಿ ಎನ್ನ ಅವಗುಣಗಳನೆಲ್ಲ ದೃಷ್ಟಿಯಿಂದಲಿ ನೋಡಿ ನೀನೆ ಸಲಹೋ ಬೆಟ್ಟದೊಡೆಯನಾಗಿ ಎಲ್ಲರ ಸಲಹುವ ಅಷ್ಟಭುಜ ಗೋಪಾಲಕೃಷ್ಣವಿಠಲ10
--------------
ಅಂಬಾಬಾಯಿ
ಹ್ಯಾಂಗೆ ನೀ ದಾಸನಾದೆ ಪ್ರಾಣಿ ಪ ಭವ ಭಂಗವ ಪಡುವವನು ಅ ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು 1 ತನುವು ತನ್ನದು ಎಂದು ತನಯ ಮಾನಿನಿಯರೆತನಗೆ ಗತಿಯೆಂದು ನಂಬಿರುವ ಮೂಢನೆ 2 ಕಾಲನ ದೂತರು ಕರುಣಸಂಪನ್ನರೆಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ3 ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿಗೆಲುವಿನಿಂದಲಿ ಮೂಲ ಮಲವನಳಿಯದೆ4 ಉದರಪೋಷಣೆಗಾಗಿ ಅಧಮರ ಯಾಚಿಸುತಮದಗರ್ವವೆಂಬುವುದ ಬದಿಯಲ್ಲಿ ಇಟುಗೊಂಡು 5 ಹಿರಿಯರ ನಿಂದಿಸಿ ಹರಿದಾಸನೆನಿಸಿದೆಗುರುಮಂತ್ರವರಿಯದ ಮರುಳು ಪಾಮರ ಪ್ರಾಣಿ6 ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ತಟ್ಟಿಶ್ರೀಲೋಲನ ಗುಣ ಪೊಗಳಿ ನಟಿಸದಲೆ 7 ಕುಣಿಕುಣಿದು ಮನದಣಿದು ಮಣಿದು ಸಜ್ಜನ ಪದಕೆಅಣಿಮಾದಿ ಅಷ್ಟಸಿದ್ಧಿಯನು ಕೈಗೊಳ್ಳದಲೆ 8 ಭಾಗವತ ಕೇಳದೆ 9 ಕಟ್ಟಿ ಕೈ ಪರರಲಿ ಹೊಟ್ಟೆಗೋಸುಗವೆ ಕಂ-ಗೆಟ್ಟು ಯಾಚಿಸುವ ಭ್ರಷ್ಟಪ್ರಾಣಿಯೆ ನೀನು 10 ನೇಮದಿ ಉಪವಾಸ ಆ ಮಹಾ ಏಕಾದಶಿಕಾಮಜನಕನನು ಪ್ರೇಮದಿ ಸ್ಮರಿಸಿದೆ11 ಏಸುದಿನ ಬದುಕಿದರು ಸೂಸುವ ಪಾಪವಈಸಿ ದಾಟದೆ ಕಾಸುವೀಸಕೆ ಬಾಳಿದವ 12 ಮೂರ್ತಿ ಪಾದಂಗಳ ಮನದಲಿ ಹಿಂಗದೆ ಭಜಿಸದೆ 13 ಬತ್ತಿ ಹೋಯಿತು ನದಿ ಬಿತ್ತದೆ ಬೆಳೆಯದೆಅತ್ತರೆ ಬಹುದೇನೊ ಉತ್ತಮ ಫಲ ಸೂಸಿ14 ಆಡುವ ಮಕ್ಕಳ ಕೈಗೆ ನೀಡದೆ ಕಡಲೆಯಬೇಡಿದರೆ ಕೊಟ್ಟು ಕೂಡಿ ಆಡದವನು ನೀ 15 ಶೃಂಗಾರ ಬಯಸುತ ಬಂಗಾರದೊಡವೆಯಹಿಂಗದೆ ಶ್ರೀ ತುಲಸಿಯ ರಂಗಗರ್ಪಿಸದೆ 16 ಸುತ್ತ ಕತ್ತಲೆ ಚಿಂತೆ ಮತ್ತೆ ಭಯದ ಭ್ರಾಂತಿಚಿತ್ತಜನಯ್ಯನು ದೊರೆವ ಬಗೆ ಕಾಣದೆ 17 ಡಂಬವ ಮಾಡಿಕೊಂಡು ತುಂಬ ಪಾಪ ಒಳಗೆಹಂಬಲಿಸಿದರಿನ್ನು ಬೆಂಬಲಕಾರುಂಟು 18 ದುಂಡು ನಾಮವ ಬಳಿದು ಭಂಡತನದಲಿ ಜಗದಿದಂಡಿಗೆ ಬೆತ್ತ ಪಿಡಿದು ಹೆಂಡಿರ ಕಾಯ್ವನೆ 19 ಹಕ್ಕಿವಾಹನನ ಗುಣ ಲೆಕ್ಕಿಸಿ ಪೊಗಳದೆಬೆಕ್ಕಸ ಬೆರಗಾಗಿ ಅಕ್ಕಿಗೆ ತಿರುಗುವವ 20 ಪಾದ ರಾಗದಿ ಭಜಿಸದೆಕಾಗಿನೆಲೆಯಾದಿಕೇಶವರಾಯನೆನದೆ21
--------------
ಕನಕದಾಸ
(ಆ) ಇತರ ಹಾಡುಗಳು446ಕೃಪಣದಿ ಧನ್ಯರು ಎಂದಿಗೆ ಸುಖಿಕೃಪಣರವರುಪಕಾರಿಗಳೊ ನಿನ್ನ ವಾರಣರು ಕೃಷ್ಣಯ್ಯ ಪ.ಸಂಚಿತದ ಹೊನ್ನು ಬಂಡವಲ ಹೋಗಾಡಿಕಂಚು ಕಾಂಚನವಾಗೆ ನಿನ್ನವರುಕಿಂಚಿತ್ತು ವ್ರಯವಿಲ್ಲ ನಿಕ್ಷೇಪಾಕ್ಷಯಸಂಚಕಾರವ ಕೊಟ್ಟರೆಲ್ಲ ಮಂದಿರಕೆ 1ಅಂಗನೆತನೂಭವರಂಗದೆ ಮುಂಗೂಡೆಹಿಂಗಿ ನಿರ್ವಾಣದಿ ನಿನ್ನವರುಜಂಗುಳಿ ಧನಧಾನ್ಯ ಮಣಿಯಂತೆ ಬಚ್ಚಿಟ್ಟುಸಂಗಾತಿಯವರು ಸಂಸಾರ ಕಟ್ಟಿದರು 2ಮನ್ನಣೆನೀಗಿ ಪಾತ್ರೆ ಹುಟ್ಟು ಮಾರುತಸಣ್ಣರ ಕುಲ ಬಿಟ್ಟರು ನಿನ್ನವರುಬಣ್ಣ ಬಣ್ಣಗೆ ಉಟ್ಟು ಬಳಗ ಸಹಿತಭವವುಣ್ಣುತ ನಿನ್ನ ಮಗನ ಉದ್ಯಮದವರು 3ಹಿಂದೆ ಮುಂದಿಲ್ಲದೆ ಭಿನ್ನ ಭಿನ್ನಾತ್ಮರುನಿಂದ್ಯಾಸ್ತ್ತ್ರಕಳುಕುವ ನಿನ್ನವರುಬಂಧು ಬಲ್ಲಿದರು ಭಾಗ್ಯಾನ್ವಿತ ಚಪಲರುಎಂದೆಂದಂಜರು ಮದಮತ್ತ ಮಾನಿಸರು 4ಚೆನ್ನಿಗರಲ್ಲ ಚೆಲುವರಲ್ಲ ಜಗವ ಪಾವನ್ನ ಮಾಡುವರು ನಿನ್ನವರು ಪ್ರಸನ್ನ ವೆಂಕಟಪತಿ ನಿನ್ನ ಮದ್ದಾನೆಗಳುಕುನ್ನಿಗೂಗೆಗೆ ಕಡೆಗಾಹವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
(ಇ) ವಾತ್ಸಲ್ಯಭಾವÀ33ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನಸುಮ್ಮನೆ ದೂರುತಿದ್ದಾರೆ ಬುದ್ಧಿ ಹೇಳೆ ಇವರಿಗೆ ಪ.ನಾನೊಲ್ಲೆನೆಂದರು ಗೋಪ ಮಾನಿನಿರೆತ್ತಿಕೊಂಬರುಆನೆಯಾಡಬಾರೊ ರಂಗ ಎಂದೆನ್ನನೊಯಿದುತಾನಾಗಿ ಗೋರಸವನು ಕೊಟ್ಟರುಣ್ಣದೆ ಚೆಲ್ಲುವೆನೀನಣ್ಣನ ಕರೆದು ಕೇಳೆ ಗೋವಳೇರ ಠಕ್ಕ ಡೌಲು 1ಸಾಸಿರ ಬಿಸಳಿಗೆ ಬೆಣ್ಣೆ ಕೂಸುಗಳು ಮೆಲ್ಲೋದುಂಟೆಹೇಸಿಕೆಬರುತಿದೆಅವರಮೊಸರು ಕಂಡುಮೀಸಲ ಮುರಿದರೆಅವರಜೆಟ್ಟಿಗ ನನ್ನ ಕಚ್ಚನೆಹಾಸ್ಯದೊಳು ಮಾತನಾಡಿ ಮೋಸ ಮಾಡುತಿಹರಮ್ಮ 2ತಮ್ಮ ಮಕ್ಕಳುಪಟಳ ನಮ್ಮ ಮೇಲಿಕ್ಕುತಿಹರುತಮ್ಮ ನಲ್ಲರ ಕಾಟವು ನಮ್ಮದೆಂಬರುನಿಮ್ಮ ಮಕ್ಕಳ ಗುಣವ ನೀ ಬಲ್ಲೆ ನಂದನರಾಣಿಗುಮ್ಮನಂಜಿಕೆಗೆ ಮನೆಯೊಳಿಹೆನೆ ಪ್ರಸನ್ವೆಂಕಟ 3
--------------
ಪ್ರಸನ್ನವೆಂಕಟದಾಸರು