ಒಟ್ಟು 1513 ಕಡೆಗಳಲ್ಲಿ , 109 ದಾಸರು , 1293 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪತಿತಪಾವನ ಪರಮದಯಾಳು ಶ್ರೀನಾಥ ಅತಿಶಯಾನಂದಾತ್ಮ ಸದ್ಗುರು ಭಕ್ತಹೃತ್ಕಮಲಾಂಕಿತ ಧ್ರುವ ನಿತ್ಯಾನಂದ ನಿಜಗುಣ ನಿರ್ಗುಣರೂಪ ಶ್ರೀದೇವ ಉತ್ತಮೋತ್ತಮ ಸತ್ಯಶಾಶ್ವತ ಭಕ್ತಜನ ಉದ್ಧಾರಕ ಯತಿಜನಾಶ್ರಯಾನಂತಮಹಿಮ ಕೃಪಾಲ ಅತೀತ ತ್ರಿಗುಣ ಸತತ ಸುಪಥದಾಯಕ 1 ಅಚ್ಯುತಾನಂತ ಮುಚುಕುಂದವರದ ಮುಕುಂದ ನಿಶ್ಚಯಾನಂದೈಕ್ಯ ನಿರ್ಗುಣ ನಿಶ್ಚಲಾತ್ಮ ಕನುಪಮ ಸಚ್ಚಿದಾನಂದ ಸದ್ಗುಣ ಸಾಂದ್ರ ಸರ್ವಾತ್ಮ ಮಚ್ಛ ಕೂರ್ಮಾನಂತರೂಪ ಭಕ್ತವತ್ಸಲ ಶ್ರೀಧರ 2 ಅಚ್ಯುತ ಪಕ್ಷಪಾಂಡವ ಪಕ್ಷಿವಾಹನ ರಕ್ಷರಕ್ಷ ಜನಾರ್ದನ ಮೋಕ್ಷದಾಯಕ ಕರಿರಾಜವರದ ಕೇಶವಾಲಕ್ಷ ನಿಜ ಸು- ಬಿಕ್ಷ ಮಹಿಪತಿಗಿತ್ತು ಕಾಯೋ ಲಕ್ಷ್ಮೀಪತೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪತಿವ್ರತೆ ಹ್ಯಾಂಗಿರಬೇಕು ನಿಜವಾಗಿ ಪ ರತಿಪತಿಪಿತನನ್ನು ಪತಿಯಲ್ಲಿ ನೆನೆಯುತ್ತ ಅ.ಪ. ಹೊತ್ತಾರೆ ಏಳಬೇಕು ಪತಿಗೆ ವಂದಿಸಬೇಕು ನಿತ್ಯತುಳಸಿಗೆರಗಿಕೃತ್ಯಮಾಡಲಿಬೇಕು ಅತ್ತೆಮೆಚ್ಚಿಸಬೇಕು ತೊತ್ತಿನಂತಿರಬೇಕು ರತಿಯ ನೀಡುತ ಪತಿಗೆ ಹಿತದಿಂದ ಬಾಳಬೇಕು 1 ಮಿತಮಾತು ಇರಬೇಕು ಸುತರ ಪಾಲಿಸಬೇಕು ಮತಿಮತದಿ ನಡಿಬೇಕು ಅತಿಥಿ ಪೂಜಿಸಬೇಕು ವ್ರತನೇಮ ವಿರಬೇಕು ಗತಿ ಹರಿಯೆ ತಿಳಿಬೇಕು ಮಾತ್ಸರ್ಯಬಿಡಬೇಕು ತೃಪ್ತಿಯಿರಲಿಬೇಕು 2 ನೆರೆಹೊರೆ ಗಂಜಬೇಕು ತಿರುಗೋದು ಬಿಡಬೇಕು ತಿರಿ ತಿಂಡಿ ಬಿಡಬೇಕು ಹರಟೆಗಳ ಬಿಡಬೇಕು ಹರಿಕಥೆ ಕೇಳಬೇಕು ಹರಿದಿನ ಮಾಡಬೇಕು ಹರಿಯ ಪಾಡಲಿಬೇಕು 3 ನೆಟ್ಟಕುಂಕುಮ ಬೇಕು ಕೆಟ್ಟವರ ಬಿಡಬೇಕು ಕಟ್ಟಿ ಆಶೆಯ ಬಿಟ್ಟು ತೃಪ್ತಿಯಿಂದಿರಬೇಕು ಕಷ್ಟಬಂದರು ಬಹು ಗುಟ್ಟಿನಿಂದಿರಬೇಕು ನೆಂಟರೊಡನೆ ಕಠಿಣ ನಿಷ್ಟೂರ ಬಿಡಬೇಕು 4 ಚುಚ್ಚಬಾರದು ಚಾಡಿ ಬಿಚ್ಚಬಾರದು ಗಾಡಿ ಹಚ್ಚಬಾರದು ವಿಷಯ ಕೊಚ್ಚಬಾರದು ಜಂಭ ಹುಚ್ಚಳಂತಿರದ್ಹಾಂಗೆ ಸ್ವಚ್ಚನಡತೆಯು ಬೇಕು 5 ಪಾಪವ ತೊರಿಬೇಕು ಲೇಪನವ ಬಿಡಬೇಕು ಕೋಪವ ಬಿಡಬೇಕು ಕಪಟತ್ವ ಬಿಡಬೇಕು ರೂಪ ಮದವ ಬಿಟ್ಟು ಚಪಲತ್ವ ತೊರಿಬೇಕು ವಿಪರಿತ ಮಡಿಬಿಟ್ಟು ಶ್ರೀ ಪತಿಯ ನೆನಿಬೇಕು 6 ಅಂಗ ಶುದ್ಧಿಯು ಬೇಕು ಶೃಂಗಾರ ರಸಬೇಕು ನಗೆಮೊಗವಿರಬೆಕು ಸವಿಮಾತು ಗುಣಬೇಕು ಭಂಗಾರ ವಿಡಬೇಕು ರಂಗಗೆನ್ನಲಿ ಬೇಕು ಮಂಗಳಾಂಗ ನಮ್ಮ “ಶ್ರಿ ಕೃಷ್ಣವಿಠಲ” ನ್ನ ಹಿಂಗದೆ ನೆನೆಬೇಕು ಅಂಗಿನೀಗಲಿ ಬೇಕು 7
--------------
ಕೃಷ್ಣವಿಠಲದಾಸರು
ಪದ್ಮನಾಭ ಮುದ್ದು ಪದ್ಮನಾಭ ಸಿರಿ ಪದ್ಮನಾಭಪ ನಾನಾಯೋನಿಗಳಲ್ಲಿ ಜನಿಸಿ ಪದ್ಮನಾಭ ನಾನಾಕ್ಲೇಶಗಳಿಂದ ಬಳಲಿ ಪದ್ಮನಾಭ ನಾ ನಿನ್ನನು ಸ್ಮರಿಸದ್ಹೋದೆ ಪದ್ಮನಾಭ ಪದ್ಮನಾಭ 1 ಪದ್ಮನಾಭ ನಿನ್ನ ನಂಬಿದ ಭಕ್ತರೊಳಿರಿಸಿ ಪದ್ಮನಾಭ ಪದ್ಮನಾಭ ಪೀ- ಪದ್ಮನಾಭ 2 ಪದ್ಮನಾಭ ಅ- ಪಾವಕ ಪದ್ಮನಾಭ ಶ್ರೀಕಾಂತನೀ ಸಲಹಬೇಕೊ ಪದ್ಮನಾಭ ಪದ್ಮನಾಭ 3 ಪದ್ಮನಾಭ ಗೋ- ವಿಂದ ರಕ್ಷಿಸೆಂದು ಸ್ಮರಿಸೆ ಪದ್ಮನಾಭ ಪದ್ಮನಾಭ ಮು- ಪದ್ಮನಾಭ 4 ಮಡುವಿನಲ್ಲಿ ಗಜವ ಕಾಯ್ದೆ ಪದ್ಮನಾಭ ದೃಢ ಪ್ರಹ್ಲಾದಗೆ ಅಭಯವಿತ್ತೆ ಪದ್ಮನಾಭ ಮಡದಿ ನುಡಿಯ ಕೇಳಿ ತ್ವರದಿ ಪದ್ಮನಾಭ ಅಡವಿಯಲ್ಲಿ ಅಭಿಮಾನವ ಕಾಯ್ದೆ ಪದ್ಮನಾಭ5 ವಂದಿಪೆ ಮುಚುಕುಂದ ವರದ ಪದ್ಮನಾಭ ವಂದಿಪೆ ಗಜರಾಜ ವರದ ಪದ್ಮನಾಭ ವಂದಿಪೆ ಉರಗಾದ್ರಿವಾಸ ಪದ್ಮನಾಭ ಪದ್ಮನಾಭ 6 ಪದ್ಮನಾಭ ಶ್ರಮ ಪರಿಹರಿಸು ನಮಿಪೆ ದೇವ ಪದ್ಮನಾಭ ಕಮಲ ಸಂಭವನನ್ನು ಪಡೆದ ಪದ್ಮನಾಭಕಮಲನಾಭ ವಿಠ್ಠಲ ಕಾಯೋ ಪದ್ಮನಾಭ7
--------------
ನಿಡಗುರುಕಿ ಜೀವೂಬಾಯಿ
ಪದ್ಯ ಅಥಃ ಪ್ರಥÀಮೋಧ್ಯಾಯ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ || ಸಾರ ಭಕ್ತಿಲಿ ಸ್ತುತಿಸಿ ಪೇಳುವೆ ಸತ್ಯ ಚಾರು ಕಥೆಯಾ ಪ ಸುರಮುಖಿವಂದಿತ ಸರಸಿಜ ಭವಪಿತ ಶರಧಿ ಕರಿವರದಾ | ಹರುಷದಿಂದಲಿ ನಿನ್ನ ಚರಿತೆ ಕೊಂಡಾಡಲು ವರವ ಪಾಲಿಸು ದಯದಿಂದ 1 ಶರನಿಧಿ ಸಂಭೂತೆ ಸುರಜೇಷ್ಟ ಸ್ಮರಮಾತೆ ಪುರಹರ ವಂದಿತೆ ಖ್ಯಾತೆ || ಸ್ಮರಿಸಿ ಬೇಡುವೆ ನಿನ್ನ ಧೊರಿಯ ವರ್ಣಿಸಲೀಗ ಗರಿಯೆ ವರವ ಸುಖದಾತೆ 2 ಹರಿಕುಲೋತ್ತುಮ ನಿನ್ನ ಸರಸಿಜ ಪದಯುಗ ನೆರೆನಂಬಿದೆನು ಮುದಿಂದ || ಹರಿಸುಚರಿತ್ರವು ಅರುಹಲು ಎನ್ನಗೆ ಸ್ಥಿರ ಬುದ್ಧಿಕೊಡು ವಾಯುಕಂದ 3 ಗಿರಿಜೇಶ ಶಚಿಪತಿ ಸುರತತಿಗೆರಗುವೆ ಪರಮ ಸುಭಕ್ತಿ ಪೂರ್ವಕದಿ || ಹರಿದಾಸ ವರ್ಗಕೆ ಶುಭನೀಡಲೆನಗೆಂದು ಶಿರಬಾಗಿ ಬೇಡುವೆ ಮನದಿ 4 ಘನತರ ನೈಮಿಷವನದೊಳು ವಾಸಿಪ ಮುನಿ ಸೂತನಲ್ಲಿಗೆ ಬಂದು | ವಿನಯದಲಿ ವಿಜ್ಞಾಪನ ಮಾಡಿಕೊಂಡರು ಶೌನಕಾದಿಗಳೆಲ್ಲ ನಿಂದು 5 ಕ್ಷಿತಿಯೊಳು ಮನದಾಸೆ ಹಿತದಿಂದ ನೀಡುವ | ವ್ರತದಾವದ್ಹೇಳಿರೆನುತ || ಅತಿ ಭಕ್ತಿಯಿಂದ ಕೇಳುವ ಮುನಿಗಳ ಕಂಡು ಕಥಿಸಿದನಾಗೆತಿ ಸೂತಾ 6 ಛಂದದಿ ಕೇಳಿರಿ ಒಂದೆ ಮನದಿ ಈಗಾ | ನಂದದಿ ನಾರದ ತಾನೂ || ಹಿಂದಕ್ಕೆ ಈತೆರ ನಂದನ ಗೋ ವಿಂದನ ಪ್ರಶ್ನೆ ಮಾಡಿದನೂ 7 ಕಾರುಣ್ಯದಿಂದಲಿ ಸಾರಸೋದ್ಭವಕು | ಮಾರ ನಾರದ ಮುನಿವರಗೆ || ಶೌರಿ ಪೇಳಿದ ಕಥೆ ಸಾಧುವೆ ಮೋದದಿ ನಿಮಗೆ 8 ವರಸುರ ಲೋಕಾದಿ ಚರಿಸುತ್ತನಾರದ | ಹರುಷದಿ ಭೂಮಿಗೆ ಬರಲು || ನರರತಿ ಕಷ್ಟದಿ ಮರುಗುವದಂ ನೋಡಿ | ಪೊರೆಟರು ಹರಿಗ್ಹೇಳಿ ಕೊಳಲು 9 ಪದುಮಜ ಸುತ ನಾರದ ಮುನಿ ವೇಗದಿ | ವಿದುಧರ ವಂದಿತನಾದ || ಯದುಪನಲ್ಲಿಗೆ ಬಂದು ಮುದಮನದಿಂದಲಿ | ವಿಧ ವಿಧದಲಿ ಸ್ತುತಿಗೈದಾ 10 ಅಗಣಿತ ಮಹಿಮನೆ ತ್ರಿಗೂಣ ವರ್ಜಿತ ತ್ರಿವಿಕ್ರಮನೆ || ಪೊಗಳುವ ತವ ಪದಯುಗಕೆರಗುತ ನಾನು ಜಗದುತ್ವತ್ತಿ ಕಾರಣನೆ 11 ಮಗಳಲ್ಲಿ ಪುಟ್ಟದಿ ಮಗನನ್ನು ಕುಟ್ಟದಿ | ಮಗನ ಮಗಳ ಮದುವ್ಯಾದಿ || ಮಗನ ಮಗನ ವರಪಡೆದಾತನ ಜೈಸಿ ಮಗನ ಮಗನ ನೀನು ತಂದಿ 12 ಸಿಂಧುಜರಿಪ್ರಸಖ ನಂದನ ಕೊಂದನ | ತಂದೆಯ ತಂದೆಯಾ ಸುತೆಯಾ || ನಂದಿನಿಯಳಿಗಾಗಿ ನೊಂದಿದಿ ನೀ ನರ ರಂದದಿ ಕವಿಗಣಗೇಯಾ 13 ಘನ್ನ ಮಹಿಮ ನಿನ್ನ ಅನಂತ ಚರಿಯವ ಬಣ್ಣಿಸ ಬಲ್ಲೆನೆ ದೇವಾ || ಪನ್ನಗರಾಜಗಾಗಣ್ಯವಾಗಿಪ್ಪುದು ಮನ್ನಿಸು ಎನ್ನ ಬಿನ್ನಪವಾ 14 ಬಾ ಮುದ್ದು ನಾರದನೆ ಬಾ ಮುನಿವರ್ಯನೆ ಬಾ ಮೂರು ಭುವನ ಸಂಚಾರಿ ನೇಮದಿಂದಲಿ ನಿನ್ನ ಕಾಮಿತ ಪೇಳೀಗ ಪ್ರೇಂದಿಂದಲಿ ವೀಣಾಧಾರಿ 15 ಮುರಹರ ನಿನ್ನಗೆ ಅರಿಯದ ವಾರ್ತೆಯು | ಧರಣಿ ತ್ರಯದಿ ಉಂಟೇನೋ || ನರರತಿ ಕಷ್ಟದಿ ಮರುಗುತಲಿಪ್ಪರು ಹರಿಪೇಳಿದಕುಪಾಯವನು 16 ಸತ್ಯಲೋಕೇಶನ ಪುತ್ರನೆ ನಿನ್ನಯ | ಉತ್ತಮ ಪ್ರಶ್ನೆಗೆ ನಾನು || ಚಿತ್ತೈಸು ಮುನಿವರ ನೀನು 17 ನಾರದ ಶ್ರೀ ಸತ್ಯನಾರಾಯಣ ವ್ರತ ಧಾರುಣಿಯೊಳಗಿನ ಜನರು ಆರು ತಮ್ಮ ಪರಿವಾರದಿಂದಲಿ ಗೈಯ್ಯೆ ಭೂರಿ ಸೌಖ್ಯದಿ ಮೆರೆವರೋ 18 ದೇವನೆ ಈ ನಿನ್ನ ಸೇವಕನಿಗೆ ಸತ್ಯ || ದೇವನೆ ವ್ರತದ ವಿಧಾನ || ಸಾವಧಾನದಿ ಪೇಳು ಭಾವ ಜಪಿತ ಏಕೋ ಭಾವದಿ ಕೇಳುವೆ ಮುನ್ನ 19 ಬುಧನುತ ನಾರದ ಘೃತಕ್ಷೀರ ಶರ್ಕರ | ಕದಳಿ ಗೋಧೂ ಮಾದಿಗಳನು || ಪದುಳದಿಂದಲಿ ಸುಪಾಕಗೈದು ಮೇಣ್ ವಿಧ ವಿಧ ಪಕ್ವಾದಿಗಳನು 20 ಪರಮ ಭಕ್ತಿಯಲಿಂದ ಪರಿವಾರ ಸಹಿತದಿ ಧರುಣಿಸುರನ ಪರಿಮುಖದಿ ತುರಧೂಳಿಕಾಲದಿ ಪರಿಪರಿ ಪೂಜಿಸಿ ಹರಿಗರ್ಪಿಸಲಿ ಬೇಕು ಮುದದಿ 21 ಈರೀತಿಗೈವರ ಕೋರಿಕೆಯನು ದಯ | ವಾರಿಧಿ ಶಾಮಸುಂದರನೂ || ನಿತ್ಯ ವಾರಿಜಸಹಿತದಿ ಸೇರಿ ತಾ ನಲಿದಾಡುತಿಹನೂ 22 ಇತಿ ಪ್ರಥಮೋಧ್ಯಾಯ ಸಂಪೂರ್ಣಂ ಅಥಃ ದ್ವಿತೀಯೋಧ್ಯಾಯಃ ಅತಿ ಮೋದದಿಂದಲಿ ಮತಿಯುತರೆ ಈಗ ಪೃಥವಿಯೊಳಗೆ | ಪೂರ್ವದಲಿ || ವ್ರತಗೈದ ಸುಗುಣರ ಇತಿಹಾಸ ನಿಮ್ಮಗೆ ಕಥಿಸುವೆ ಹಿತದಿಂದ ಕೇಳಿ 1 ಕಾಶಿಯೊಳಗೆ ಒಬ್ಬ ಭೂಸುರ ಬಡತನ ಕ್ಲೇಶದಿ ವಾಸಿಸುವದನು || ಶ್ರೀಶ ಅವನ ನೋಡಿ ಪೋಷಿಸಲು ವೃದ್ಧ ವೇಷದಿ ಮಾತನಾಡಿಸಿದನು 2 ಭೂತವಕದಿ ವಿಪ್ರನಾಥನೆ ತವ ಮುಖ ಪಾಥೋಜ ಬಾಡಿದ ಬಗೆಯಾ ಈ ತೆರ ದುಃಖದಿ ನೀ ತಿರಗುವಂಥ ಮಾತು ಪ್ರೀತಿಲಿ ಪೇಳಯ್ಯಾ 3 ಕಥಿಸುವೆ ಹೇವಿಪ್ರ ಹಿತದಿಂದ ನೀಯನ್ನ | ಸ್ಥಿತಿಯಾ ಲಾಲಿಸು ಮನದಿಂದಾ || ಗತಿಗೆಟ್ಟು ಚರಿಸುವೆ ಪೃಥಿವಿಯೊಳಗೆ ಈಗ ಅತಿ ಬಡತನ ದೆಶೆಯಿಂದಾ 4 ಶ್ರೇಷ್ಟನೆ ದಾರಿದ್ರ್ಯ ಕಷ್ಟ ತೊಲಗುವಂಥ | ಥಟ್ಟನೆ ನೀ ಪೇಳುಪಾಯಾ || ಘಟ್ಪ್ಯಾಗಿ ನಿನ್ನ ಉತ್ಕøಷ್ಟ ಪಾದಾಂಬುಜ ಮುಟ್ಟಿ ಸೇವಿಪೆ ಮಹರಾಯಾ 5 ಮಿಡುಕುತ್ತ ವಿಪ್ರನು ನುಡಿದ ಮಾತನುಕೇಳಿ | ಕಡಲಜಪತಿ ಕವಿಗೇಯಾ || ಕಡುದಯದಲಿ ಪೇಳ್ದ ಬಡತನ ಕಳೆಯುವ ಪೊಡೆವಿಯೊಳಿದ್ದ ಉಪಾಯಾ 6 ಸಾರುವೆ ಕೇಳಯ್ಯ ಮಾರಜನಕ ನಿಜ | ನಾರಾಯಣನ ಸು ವ್ರತವಾ ಆರು ಜಗದಿ ಭಕ್ತಿ ಪೂರ್ವಕ ಮಾಳ್ವರು ದಾರಿದ್ರ್ಯ ಹರಿ ದೂರಗೈವಾ 7 ಮುದುಕನ ನುಡಿಕೇಳಿ ಮುದಮನದಿಂದಲಿ ಸದನಕ್ಕೆ ದ್ವಿಜ ಬಂದು ತಾನೂ ಸುದತಿ ಸಹಿತನಾಗಿ ಸತ್ಯನಾಥಾನ ಪೂಜೆ ವಿಧ ವಿಧದಲಿ ಮಾಡಿದನೂ 8 ಹರುಷದಿ ಈ ರೀತಿ ಧರಣಿ ದೇವನು ಮಾಡೆ | ಶಿರಿಸತಿ ಸುತರಿಂದ ತಾನೂ || ಧರೆಯೊಳು ಸುಖಬಿಟ್ಟು ಪರಮ ದುರ್ಲಭವಾದ ಪಥ ಹಿಡಿದನೂ 9 ಸೂತರೆ ಅತ್ಯಂತ ಕೌತುಕವಾಗಿಹ ಧಾತ ಪಿತನ ಈ ವ್ರತವು ಭೂತಳದೊಳಗೆಂತು ಖ್ಯಾತಿಯ ಪೊಂದಿತು ಪ್ರೀತಿಲಿ ಪೇಳಿರಿ ನೀವು 10 ಸತಿಸುತ ಪರಿವಾರ ಸಹಿತಾ ಅತಿ ಹಿತದಲಿ ಮನೋರಥ ಪೂರೈಸುವ ಈ ವ್ರತ ಮಾಡುತಿರಲಾಗತ್ವರಿತಾ 11 ಚರಣನೋರ್ವನು ಶಿರದಿ ಕಾಷ್ಟಭಾರವ ಧರಿಸಿ ಮಾರಲು ಬೀದಿಗಳಲಿ ಬರುತಿರೆ ಮಾರ್ಗದಿ ಧರಣಿದೇವನೆ ಮಂ ದಿರ ಕಂಡ ಪರಮ ಮೋದದಲಿ 12 ಶ್ರೀನಿವಾಸನ ಘನಧ್ಯಾನದಿಂರ್ಚಿಪ ಕ್ಷೋಣಿ ಸುರನ ನೋಡಿ ಜವದಿ ಮಾನವ ಕೇಳಿದ ಏನಿದೆಂದೆನು ತಲಾಕ್ಷಣದಿ 13 ಶೂದ್ರನ ನುಡಿ ಕೇಳಿ ಆ ದ್ವಿಜ ಪೇಳ್ದನು ಶುದ್ಧ ಮನದಿ ಚರಣೋಧ್ಭವ ಗೈದನಿ ಶುದ್ಧನ ಪಾದಾರ್ಚನವಾ 14 ಹರುಷದಿಂದಲಿ ಸತ್ಯ ಹರಿ ಪೂಜಿಸಿದ ಶೂದ್ರ ಪರಮ ಸೌಜನ್ಯದಿ ಇದ್ದು ಕೊನೆಗೆ ಪರಿವಾರಯುತನಾಗಿ ತೆರಳಿದ ಸ್ಥಿರ ಉಳ್ಳ ಶಿರಿಶಾಮಸುಂದರನ ಪುರಿಗೆ 15 ಇತಿ ದ್ವಿತೀಯೋಧ್ಯಾಯ ಸಂಪೂರ್ಣಂ ಅಥಾಃತೃತೀಯೋಧ್ಯಾಯ ಋಷಿ ಜನಗಳೆ ಕೇಳಿ ವಸುಧಿ ತ್ರಯದಿ ಘನ ಪೆಸರಾದ ಇನ್ನೊಂದು ಕಥೆಯಾ ಉಸುರುವೆ ಕೇಳ್ವರ ವ್ಯಸನವು ಪರಿಹಾರ ಪುಸಿಯಲ್ಲಿ ಈ ನುಡಿ ಖರಿಯಾ 1 ವರ ಉಲ್ಕಮುಖನೆಂಬ ಧರಣೀಶನೋರ್ವನು ಹರುಚದಿಂದಲಿ ತನ್ನ ಹಿತದಾ ಶರಧಿ ತೀರದಿ ನಿಜ ಹರಿಯನ್ನು ಪೂಜಿಸುತಿರ್ದ 2 ಕ್ಷೋಣಿಪಾಲಕನಿದ್ದ ಆ ನದಿತೀರದಿ | ವಾಣಿಜ್ಯ ಮಧುನಾಯಕನೂ || ಸಾನುರಾಗದಿ ಬಂದು ಶ್ರೀನಿಧಿ ವ್ರತದ ವಿ ಧಾನವೇನೆಂದು ಕೇಳಿದ 3 ಭೂಮಿಪಾಲಕ ಮಧುನಾಮಕ ವೈಶ್ಯನ ಆ ಮೃದು ನುಡಿಕೇಳಿ ಜವದಿ ಕಾಮಿತದ ಸತ್ಯ ಸ್ವಾಮಿಯ ವ್ರತ್ತದಾ ನೇಮವ ಪೇಳ್ವ ಸಮ್ಮುದದಿ 4 ರಕ್ಕಸಾರಿಯ ಕಥಾ ಭಕ್ತಿಲಿ ಕೇಳುತ ಲಕ್ಕುಮಿಯುತ ಮುದದಿಂದ ಮಕ್ಕಳೆನಗಾಗಲು ಚಕ್ರಿಯ ಸುವೃತ ಅಕ್ಕರದಲಿ ಮಾಳ್ಪೆನೆಂದ 5 ಈ ರೀತಿ ಧೃಡ ಬ್ಯಾಪಾರಿಯು ತಾಗೈದು ಶೌರಿ ಪ್ರಸಾದ ಸ್ವೀಕರಿಸಿ || ಸಾರಿ ಪೇಳಿದ ತನ್ನಾಗಾರಕ್ಕೆ ಬಂದು ತಾ ನಾರಿಯ ಮುಂದೆ ವಿಸ್ತರಿಸಿ 6 ಸತಿ ಶಿರೋಮಣಿ ಲೀಲಾ ವತಿಯು ತನ್ನ ಮಂದಿರದಿ || ಪತಿ ಕರುಣದಿ ಗರ್ಭ ವತಿ ತಾನಾದಳಾಕ್ಷಣದಿ 7 ಹತ್ತನೆ ಮಾಸದ ಉತ್ತಮ ಪುತ್ರಿಯ ಪೆತ್ತಳು ಆ ನಾರಿ ತಾನೂ || ಅತ್ಯಂತ ಸನ್ಮುದ ಚಿತ್ತನಾಗಿ ಸಾಧು ಮರ್ತನು ಹರಿವ್ರತವನ್ನು 8 ಸತಿ ಲೀಲಾವತಿ ತನ್ನ ಪತಿಗಭಿವಂದಿಸಿ ನಿಂದು || ಅತಿ ಭಕ್ತಿಯಿಂದಲಿ ಕಥಿಸಿಕೊಂಡಳಲ ಯದು ಪತಿ ವ್ರತ ಮಾಡಬೇಕೆಂದು 9 ಸುದತಿಯ ನುಡಿಕೇಳಿ ಮಧುನಾಮಕ ಸಾಧು ವಿಧಿಸಿದ ಸುತೆ ಕಲಾವತಿಯಾ || ಮದುವೆಯ ಕಾಲದಿ ಉದುಪನರ್ಚಿಪೆನೆಂದು ಮುದದಿಂದ ಪೇಳ್ದನುಪಾಯಾ 10 ಪರಿಪರಿ ಸೌಖ್ಯದಿಂದಿರುತಿರೆ ವೈಶನ ತರುಳೆಗೆ ಪೂರ್ಣಯೌವನವು | ಬರಲು ಮಾಡಿದ ತಕ್ಕವರ ತಂದು ಲಗ್ನವ ಮರೆತು ಬಿಟ್ಟನು ಹರಿವ್ರತವಾ 11 ಶ್ರೀಮಂತವೈಶ್ಯನು ಪ್ರೇಮದಿಂದಲಿ ತನ್ನ ಜಾಮಾತನೊಡನೆ ವ್ಯಾಪಾರಾ ನೇಮದಿ ಗೈಯಲು ಗ್ರಾಮ ತ್ಯಜಿಸಿ ಪೋದಾ ಆ ಮಹಾಪುರ ರತ್ನಸಾರಾ&ಟಿbs
--------------
ಶಾಮಸುಂದರ ವಿಠಲ
ಪಂಪತಟಗನ ಹೃದಯ | ಸಂಪುಟದಲಿಹ ಸದಯಶಂಫಲಿಯ ಪುರವಾಸಿ | ಭಕುತ ಜನ ತೋಷೀ ಪ ಬೋಧ ತೀರ್ಥರ ಸದನಮಾಧವನೆ ಹಯವದನ | ಸುಗುಣ ಗಣಪೂರ್ಣಾ ||ಹೇ ದಯಾಂಬುಧೆ ಚೆನ್ನ | ಯಾದವೇಶನೆ ಎನ್ನಕಾದು ಕೊಳ್ಳೆಲೊ ಘನ್ನ | ಶೀಲ ಸಂಪನ್ನಾ 1 ಕೃಷ್ಣ ಪದ ಸರಸಿಜವ | ನಿಷ್ಠೆಯಲಿ ಭಜಿಸಿದವಜಿಷ್ಣು ಸಖನಿಗೆ ಪ್ರೀತ | ಮಧ್ವಮುನಿ ಭ್ರಾತಾ ||ವಿಷ್ಣು ತೀರ್ಥರ ಹಸ್ತ | ಇಷ್ಟ ಪೂಜೆ ಸಮಸ್ತಅಷ್ಟ ವಿಭವದಿ ಗೊಂಡ | ಶ್ರೀಲಕುಮಿ ಗಂಡಾ2 ಕಾಲ ||ವಸುಮತಿಯ ಶ್ರೀಲೋಲ | ಕಿಸಲಯಾವಳಿ ಮಾಲವಸುದೇವ ಮುದ ಬಾಲ | ಪರಿಪಾಹಿ ಕೋಲಾ 3 ನಿಜಭೃತ್ಯ ಭಾಷಿತವ | ನಿಜವ ಮಾಡಲು ದೇವನಿಜ ವ್ಯಾಪ್ತಿ ಸ್ತಂಭದಲಿ | ನಿಜದಿ ತೋರುತಲಿಸುಜನ ಜನರುದ್ದರಣ | ಕುಜನರಸು ವಿಹರಣಅಜ ಜನಕ ವಿಶ್ವೇಶ | ಕರುಣಿಸೆಲೊ ಶ್ರೀಶಾ 4 ನಿಟಿಲ ನೇತ್ರನ ಬಿಂಬ | ಪಟವು ವಡವೆಗಳೆಂಬಕಟು ಸವಿಯನುಂಬುವನು | ಸಕಲ ಕ್ರಿಯಗಳನೂಧಿಟ್ಟ ಗುರು ಗೋವಿಂದ | ವಿಠಲ ನಿನ್ನಾನಂದದಿಟವೆಂಬ ವರ ಮತಿಯ | ಪಾಲಿಸೆಲೊ ಜೀಯ 5
--------------
ಗುರುಗೋವಿಂದವಿಠಲರು
ಪಂಪಾತೀರದ ಲಿಂಗಾ ಭವಭಸಿತಾಂಗಾ ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ಪ ನೀನೆ ಗತಿಯೆಂದು ನಿದಾನದಿಂದ ಧ್ಯಾನವ ಮಾಡಲು ದೈನ್ಯದಲಿಂದ ಮಾನಾಭಿಮಾನದೊಡಿಯನೆ ಆನಂದ 1 ಗಜಚರ್ಮಾಂಬರ ಗಂಗಾಧರ ಪುರವೈರಿ ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ ಕುಜನರೊಳಿಡದೆ ಉತ್ತಮವಾದ ದಾರಿ ನಿಜವಾಗಿ ತೋರಯ್ಯ ದೀನರುಪಕಾರಿ2 ಹೇಮಗಿರಿಯ ವಾಸಾ ಈಶನಿರೀಶಾ ಸೋಮಶೇಖರನೆ ಪಾರ್ವತಿಯ ವಿಲಾಸಾ ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ3
--------------
ವಿಜಯದಾಸ
ಪರ ಬೊಮ್ಮ ಸುಜ್ಞಾನವನರಿಯದ ಮನುಜನ ಪ ಮುಖವ ತೊಳೆದು ನಾಮವನಿಟ್ಟೆನಲ್ಲದೆಸುಖತೀರ್ಥಶಾಸ್ತ್ರವನೋದಿದನೆಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆಭಕುತಿ ರಸದಲ್ಲಿ ಮುಳುಗಿದೆನೇನಯ್ಯ 1 ಊರು ಮಾತುಗಳಾಡಿ ದಣಿದೆನಲ್ಲದೆನಾರಾಯಣ ಕೃಷ್ಣ ಶರಣೆಂದೆನೆನಾರಿಯ ನುಡಿ ಕೇಳಿ ಮರುಳಾದೆನಲ್ಲದೆಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ2 ನರೋತ್ತಮರಿಗಧಿಕ ಗಂಧರ್ವರಿಗಧಿಕಸುರೇಂದ್ರಗಧಿಕ ಹರಗಧಿಕವಿರಿಂಚಿಗಧಿಕ ಸಿರಿಗಧಿಕಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ3 ಜಗತು ಸತ್ಯವೆಂದು ಪಂಚಭೇದವ ತಿಳಿದುಮಿಗೆ ರಾಗದ್ವೇಷಂಗಳನು ವರ್ಜಿಸಿಭಗವಂತನ ಲೀಲೆ ಶ್ರವಣ ಕಥೆಗಳಿಂದನಿಗಮಗೋಚರನೆಂದು ತಿಳಿದೆನೇನಯ್ಯ 4 ಗಂಗೆಯಲಿ ಮೈ ಬಣ್ಣ ತೊಳೆದೆನಲ್ಲದೆ ಭವಹಿಂಗುವ ಸ್ನಾನವ ಮಾಡಿದೆನೆರಂಗವಿಠಲನ ನಿಜವಾದ ದಾಸರಸಂಗ ಸುಖವೆಂದು ತಿಳಿದೆನೇನಯ್ಯ 5
--------------
ಶ್ರೀಪಾದರಾಜರು
ಪರಮ ಪುರಷಾ ರಾಘವ ಪಾಲಿಸೊ ಸುರಮುನಿವರ ಪೂಜಿತ ಪ ಸರಸಿಜಾಪ್ತವಂಶಾಬ್ಧಿ ಚಂದ್ರಮ ನಿನ್ನ ಹೊರತು ಪೊರೆವರನ್ಯರ ಕಾಣೆನೊ ಅ.ಪ ಆಂಜನೇಯ ಪ್ರಿಯ ಆದರಿಸೈ 1 ಮೃತ್ಯಪರಿಹರಿಸೆನುತ್ತ ಬೇಡಲು ನಿನ್ನ ಭಕ್ತಜನರಿಗಭಯ ಕೊಡುವನೆ 2 ಸಾಮಜವರದ ಮಹಾಮಹಿಮನೆ ನಮ್ಮ ಸ್ವಾಮಿ ನೀನೆ ಗುರುರಾಮ ವಿಠಲ 3
--------------
ಗುರುರಾಮವಿಠಲ
ಪರಮ ಪುರುಷ ನಿನಗೆ ನಮೋ ನಮೋಪರಮ ಪರಾತ್ಪರಗೆ ನಮೋ ನಮೋ ಪ ಆದಿ ಅನಾದಿಗೆ ನಮೋ ನಮೋ ಮಹದಾದಿ ತತ್ವಕೆ ನಮೋ ನಮೋವಾದರಹಿತನಿಗೆ ನಮೋ ನಮೋ ನಿಜವಾದ ವಸ್ತುವಿಗೆ ನಮೋ ನಮೋ 1 ಲೋಕ ಹಿತಾಖ್ಯಗೆ ನಮೋ ನಮೋ ಜಗದೇಕವಲ್ಲಭನಿಗೆ ನಮೋ ನಮೋನಾಕ ವಂದಿತಗೆ ನಮೋ ನಮೋ ನಿ-ರಾಕಾರ ನಿತ್ಯನಿಗೆ ನಮೋ ನಮೋ2 ಸಿಂಧು ಆನಂದಗೆ ನಮೋ ನಮೋನಾದ ಬಿಂದು ಕಳಾತ್ಮಗೆ ನಮೋ ನಮೋಸುಂದರ ತೇಜಗೆ ನಮೋ ನಮೋಚಿದಾನಂದ ವಿಗ್ರಹಗೆ ನಮೋ ನಮೋ 3
--------------
ಚಿದಾನಂದ ಅವಧೂತರು
ಪರಮಪರುಷನೆ ಕೃಷ್ಣ ಕಣ್ತೆರದು ನೋಡೊ ಪ ಶಿರಿ ಅರಸ ದಯಸಿಂಧು ಶ್ರಾವ್ಯಮಂಗಳ ಕೀರ್ತಿ ಅ.ಪ. ದ್ವಿಜಗಮನ ವೃಜಿನಹರ ಭುಜಗತಲ್ಪನೆ ದೇವ ಅಜತಾತ ಗಜವರದ ಕುಜ ನಿವಾರಣನೆ ಭಜನೆ ಪಾಲಿಸು ಎನ್ನ ವಿಮಲ ಮನದಲಿ ನಿಂತು ಋಜು ಪುಂಗವರ ದೈವ ನಿರ್ಜರರ ಬಾಂಧವನೆ 1 ಒದ್ದವಗೆ ಶಿಕ್ಷಿಸದೆ ಬೈದವಗೆ ಗತಿ ಇತ್ತೆ ನಿರ್ದೋಷ ಗುಣಪೂರ್ಣನೆಂದು ಶ್ರುತಿ ಸಾರುತಿದೆ ನಿದ್ದೆ ಮಾಡುವಗೊಲಿದಿ ಮುಕ್ತಿಯನಿತ್ತೆ ಯುದ್ಧದಲಿ ಶರದಿಂದ ಹೊಡೆದವಗೆ ನೀನೊಲಿದೆ 2 ಶುದ್ಧ ಆನಂದಾಬ್ಧಿ ಜಯೇಶವಿಠಲನೆ ಮಧ್ವ ಮುನಿದೈವ ಸಿದ್ಧರೊಡೆಯ ಉದ್ಧವನ ಗುರು ಸುಧಾಮ ಮಿತ್ರನೆ ಮನ ತಿದ್ದಯ್ಯ ಜ್ಞಾನ ನಿನ್ನಲ್ಲಿ ನಿಲುವಂತೆ 3
--------------
ಜಯೇಶವಿಠಲ
ಪರಮಶಿವಶಂಕರಿಯೆ ಪ ಕರುಣಿಸು ಮಂಗಳೆಯೆ ಅ.ಪ. ಪಂಕಜನಾಭಿಯೆ ಪಂಕಜಪಾಣಿಯೆ ಪಂಕಜಲೋಚನೆಯೆ ಪಂಕಜಗಂಧಿಯೆ ಪಂಕಜವದನೆಯೆ ಶಂಕರಸುಂದರಿಯೆ 1 ಗೌರಿಯೆ ಗಿರಿಜೆಯೆ ಕಾತ್ಯಾಯನಿಯೆ ಹೈಮವತೀಶ್ವರಿಯೆ ಪಾರ್ವತಿ ಶಿವೆ ಪರಮೇಶ್ವರಿ ಶಂಕರಿ ಕಾಳಿಯೆ ಶಾಂಭವಿಯೆ 2 ಮಾಧವ ಸೋದರಿಯೆ ಭೂಧರವಾಸೆಯೆ ಶ್ರೀ ಲಲಿತಾಂಬೆಯೆ ರಾಜರಾಜೇಶ್ವರಿಯೆ 3 ನಿತ್ಯ ಕಲ್ಯಾಣಿಯೆ ಭಕ್ತವತ್ಸಲೆ ವಿಜಯೆ ನಿತ್ಯ ಸುಮಂಗಳೆಯೆ 4 ದಾನವ ಭಂಜಿನಿ ಮೌನಿಸುರಂಜಿನಿ ಭಾನುಮಂಡಲ ರುಚಿರೆ ಮಾನಿನಿ ಪಾಲಯಮಾಂ 5
--------------
ಬೇಟೆರಾಯ ದೀಕ್ಷಿತರು
ಪರಮೌಷಧಿ ಸಿಕ್ಕಿತು ಪರಿಪರಿರೋಗ ಪರಿಹಾರಕಿದು ದಕ್ಕಿತು ಪ ಜ್ವರದ ಬೇಗೆಗೆ ದಾಹ ಕರುಳ ಕುಂದಿಸಿಯೆನ್ನ ನರಳಿಸಿದಾಗ ಮಾಂಗಿರಿರಂಗಾ ಎಂದೆಂಬ ಅ.ಪ ಸುರನರೋರಗ ಗರುಡ ಚರಣ ಗುರು ದಿವಾಕರ ಕಿನ್ನರಾಪ್ಸರ ಶರಣಜನ ಕರುಣಾಕರ ಶ್ರೀ ಧರ ಸುಖಂಕರ ಶೌರಿಯೆಂಬಾ1 ಪಿತ್ತವು ತಲೆಗೇರಿತು ಸುತ್ತಲು ಕಣ್ಗೆ ಕತ್ತಲೆ ಮುಸುಕಿದ್ದಿತು ಚಿತ್ತಪಲ್ಲಟಿವಾಗಿ ಮತ್ತನಾಗಿರಲಾಗ ನೆತ್ತಿಯೊಡೆದ ಎನ್ನ ಕುತ್ತಿಗೋಂಕಾರ 2 ಚಿತ್ತ ಮಸ್ತಕ ನೆತ್ತಿಗಳ ಬೆಂಬತ್ತಿ ಮತ್ತತೆಯಿತ್ತ ಪತ್ತದ ಕತ್ತಲೆಯನುತ್ತರಿಸಿದುತ್ತಮ ಚಿತ್ತಜನಪೆತ್ತಚ್ಯುತಾ ಯೆಂಬ 3 ಉಸಿರು ಉಗ್ಗಡಿಪಾಗ ವಸುದೇವ ಸುತಯೆಂಬ 4 ರಸರಸಂಗಳೊಳೆಸೆದು ವಾಸಿಸಿ ಉಸಿರು ಬಸಿರನು ವಸುವಿಲಾಸದೊಳೆಸೆದು ಪೊಸ ಪೊಸ ಎಸಕದಿಂ ಸುಖ ರಸವನೀಯುವ ರಾಮಯೆಂಬಾ 5 ಕರ ನೇತ್ರಗಳು ತಂಪಿಂಪಿನ ಸವಿ ಬಲೆಯೊಳು ಬಿದ್ದುವು ಜವ ನೇಣೆಸೆದಾಗ ಭವದೂರಹರಿ ಯೆಂಬ 6 ಶಿವ ಭವಾಮರಪವನಪಾವಕ ಜವ ಶಶಾಂಕವಾಕರಾನಕ ಶ್ರೀಧರ ಹರೇ ಭವದೂರನೆಂಬಾ 7 ಲಕ್ಷನಾಮಗಳೆಲ್ಲ ಲಕ್ಷಣವಾದ [ತು ರಕ್ಷೆಯೀಯುವಗುಳಿಗೆ] ಮಾತ್ರಾ ಮೋಕ್ಷಸುಖವನಿತ್ತು ರಕ್ಷಿಪುದೆಂಬುದ ದಕ್ಷಸುತೆಗೆ ಫಾಲಾಕ್ಷ ತಾಂ ಪೇಳಿದ 8 ಅಕ್ಷಯಾತ್ರವಿಪಕ್ಷ ರಾಕ್ಷಸ ಶಿಕ್ಷ ಸುಜನರಕ್ಷ ಪ್ರದವ ಅ ಧ್ಯಕ್ಷ ನುತಕಮಲಾಕ್ಷ ಶರಣಕಟಾಕ್ಷ ಲಕ್ಷ್ಮೀಪಕ್ಷ [ಮೂಂಗಿರಿರಂಗ] ಯೆಂಬಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಶಿವಾತ್ಮ ಲಿಂಗವೆನ್ನ ಕರತಳಾಮಳಕವಾಗಿ ಶರೀರದೊಳಗೆ ಬೆಳಗುವುದು ಶ್ರೀ ಗುರು ವಚನದಿ ಕಂಡೆನು ಪ ಏನು ಬೇಕು ಎನಗೆ ಇನ್ನು ಮಾನವತ್ವ ಅಳಿದು ಸರ್ವ ತಾನೆ ಅಂಗದಿರವೆಯಾಗಿ ಸ್ವಾನುಭವದ ಸುಖದೊಳು ಧ್ಯಾನಿಸುತ್ತ ಒಳಹೊರಗಿಹ ಭಾನುಕೋಟಿ ತೇಜವನ್ನು ತೋರಿದಾ ಪರಶಿವಾತ್ಮ 1 ವಿಂಗಡಿಸಿದ ಷಟ್‍ಸ್ಥಳಗಳ ಸಂಗವಿಡಿದು ಚರಿಸುತ್ತಿರಲು ಲಿಂಗವೇ ಸರ್ವಾಂಗವಾಗಿ ಇಂಗಿತವ ತಿಳಿದವನು ಮಂಗಲಾತ್ಮನಾದ ಶ್ರೀಗುರು ಪುಂಗನು ಎನಗೊಲಿದು ದಿವ್ಯ ಕಂಗೊಳಿತ್ತುಧರಣಿ ಗಗನ ಡಂಗದ ಘನಲಿಂಗವಾ ಪರಶಿವಾತ್ಮ 2 ಒಂದರಂಕೆಯನ್ನು ಬರೆದು ಹೊಂದಿದಷ್ಟು ಲೆಖ್ಖ ಬೆಳೆವ ಅಂದದಂತೆ ಉಳಿದು ಅಳಿದು ನಿಂದ ನಿಜದ ನಿಲುವಿಗೆ ಬಂಧು ವಿಮಲಾನಂದ ಶ್ರೀಗುರು ಬಂದು ಎನ್ನ ಹೃದಯದಿ ಪರಶಿವಾತ್ಮ 3
--------------
ಭಟಕಳ ಅಪ್ಪಯ್ಯ
ಪರಿಣಯ ಮಹೋತ್ಸವವು ಪ ಮಂಗಳ ಮಂಟಪವು ಚಪ್ಪರದಲ್ಲಿ .ಶೃಂಗಾರ ವರ ಪೀಠವು ಕಂಗೊಳಿಪ ರುಚಿರಾಂಬರಾಳಿಯು ಮಂಗಳ ಸುವಾದ್ಯಂಗಳಿಂದಲಿ 1 ಸುತ್ತ ದೀಪಾವಳಿಯು ಸುವರ್ಣದ ಮುತ್ತಿನ ತೋರಣವು ವಜ್ರ ಪದ್ಮವು ಸುತ್ತು ವೀಳೆಯ ಪುಷ್ಪ ನಿಚಯವು ಸುತ್ತೆ ಜವ್ವಾಜಿಗಳ ಪರಿಮಳ ಸುತ್ತಿ ಸುಳಿವ ಸುಗಂಧ ಲಹರಿಯು 2 ಬೀಗರು ಹಸೆಯೊಳಿರೆ ಆ ಮಧ್ಯದಿ ಬೀಗಿತ್ತಿಯರು ಕುಳ್ಳಿರೆ ಆಗ ನಿಶ್ಚಿತ ಲಗ್ನದಲ್ಲಿ ವಧೂವರರ ಪೂಜಿಯನು ಗೈಯಲು ತುಂಬಿರಲು ಸಭೆಯೊಳು 3 ದಾರಾ ಮಹೊತ್ಸವವು ಅಕ್ಷತೆಗಳ ಸೇರೆಯೊಳೆರೆಯುವುದು ನಾರಿಯರ ವರದೇವತಾಸ್ತುತಿ ಸಾರೆ ಭೂಸುರರಾಶಿಷಂಗಳು ಸೇರೆ ಸಂಗೀತಗಳ ವೈಖರಿ ಸಾರಿ ಸುರಗಣ ಜಯಜಯನ್ನಲು 4 ಮಾಡೆ ದಾನದಕ್ಷಿಣೆಯಾಗಲು ಬಾನುರಾಗದೆ ಸರ್ವರನ್ನು ವಿನೋದದಿಂದುಪಚರಿಸುತಿರಲು ಹರಸೆ ಸಂತೋಷದಿ 5
--------------
ಬೇಟೆರಾಯ ದೀಕ್ಷಿತರು
ಪರಿಭವ ತಾಪಹರಣ ಪ ದಯದಿ ಯುವತಿಯಕುಲ ಉದ್ಧಾರಣ ಜವದಿ ಕರಿಧ್ರುವಬಂಧಮೋಚನ ಯುವತಿಗಕ್ಷಯವಿತ್ತು ಒಲಿದು ಹಯವ ಪಿಡಿದು ರಥವ ನಡೆಸಿದ ಭುವನ ಬ್ರಹ್ಮಾಂಡ ಸೂತ್ರಧಾರಕ ಶಿವಸುರಾರ್ಚಿತ ಪೊರೆ ಸುಹೃದಯ ಅ.ಪ ಪತಿತಪಾವನ ಶ್ರೀಶಕೇಶವ ಸಹಸ್ರಾಕ್ಷಶಯನ ಮಾಧವ ಭೋಗ ಗರುಡಗಮನ ಪತಿತಪಾವನೆ ಇಂದಿರೆಂiÀi ಜೀವ ಜಗದಾದಿದೇವ ಯತಿತತಿನುತ ಪವಿತ್ರನಾಮ ಕ್ಷಿತಿಸುತೆಪತಿ ಪವಿತ್ರ ಮಹಿಮ ಸತಿಯರವ್ರತಹರ ಜಿತಮಹಮುಪ್ಪುರ ಕೃತ್ರಿಮ ಮುರಹರ ಮಥನಸಾಗರ ನುತಿಪರ್ಹಿತಕರ ಸುಪಥರಾಧಾರ ಹಿತದಿ ಪೊರೆಯೆನ್ನ ಕರುಣಾನಿಕರ 1 ನಿರುತ ಜನರ ಕಲ್ಪತರು ನೀನು ಭಯಭಕ್ತಿಯಿಂದ ಸ್ಮರಿಸಿ ಬೇಡ್ವರ ಪರಮಸುರಧೇನು ಸುರಗಂಗಾಜನಕ ಶರಣು ಸಜ್ಜನರಮಿತ ದಯಾ ಪರನು ವಿಶ್ವರಕ್ಷಕನು ಮರಣರಹಿತ ಮದನತಾತ ಶುಭ ಸಚ್ಚರಿತ ದುರುಳ ಸಂಹರ ಶರಣುಮಂದಾರ ಸುಗುಣರೋದ್ಧಾರ ಶರಣಭಜಕರ ವರಸುಖಕರ ಕರಣಿಸಭವನೆ ತ್ವರಿತ ಸುವರ 2 ಕುಸುಮನಯನ ಸ್ವತಂತ್ರ ಮಹಲೀಲ ದಿವಕೋಟಿ ಪ್ರಭಾಕರ ಕುಸುಮಗಾತ್ರ ಮಹತಂತ್ರ ಮಾಯಜಾಲ ಗೋವರ್ಧನೋದ್ಧಾರ ಕುಸುಮಧರ ಕುರುಕುಜನಕುಲಕಾಲ ಗೋಪಾಲಬಾಲ ಕುಸುಮನಾಭ ಕೌಸ್ತುಭಾಂಬರ ಅಸಮ ತುಲಸಿಮಾಲಾಲಂಕಾರ ಒಸೆದು ದಾಸನ ಪುಸಿಯೆಂದೆನಿಸದೆ ಹಸನುಮತಿಯಿತ್ತು ಪೋಷಿಸನುದಿನ ಎಸೆವ ತವಪಾದ ನಂಬಿ ಮರೆಬಿದ್ದ ಅಸಮದಯಾನಿಧಿ ಮಮ ಶ್ರೀರಾಮ 3
--------------
ರಾಮದಾಸರು