ಒಟ್ಟು 1626 ಕಡೆಗಳಲ್ಲಿ , 110 ದಾಸರು , 1282 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಅವಾಂತರೇಶಾ ಪಾವನ ಕೋಶಾ ಪಾಲಾಬ್ದಿ ಶಯನನ ದಾಸಾ ಕಾಲ ಜನಕ ವಿಶಾಲಮಹಿಮಾರೈಯಿ ಲೋಲಾ ಜೀವೋತ್ತಮ ಕಾಲಕಾಲಕೆ ಎನ್ನ ಪ ಪುಣ್ಯಗಾತುರ ಮಾರುತಾ ಪುಂಜಿತ ಜೀವಾ ಗಣ್ಯರಹಿತ ಗುಣಜಾತಾ ಮನ್ಯುದಾನವ ಕುಲಘಾತಾ ಮಹಾತತ್ವ ದಾತಾ ಸನ್ನ್ಯಾಯಮಣಿ ಶ್ರುತಿಗೀತಾ ಧನ್ಯನ ಮಾಡೊ ಅನ್ಯನೇನೊ ನಾನು ಕಾ ರುಣ್ಯದಿ ದುರಿತಾರಣ್ಯ ಮನ್ಮಥ ಲಾ ಗುಣ್ಯ ಮನದಾ ಕಾರ್ಪಣ್ಯವ ಓಡಿಸಿ 1 ದ್ವಿತೀಯ ನಿರ್ಜರವರೇಣ್ಯ ದೀನನುಗಣ್ಯ ದಿತಿಜಾವಳಿಗೆ ಕಾಠಿಣ್ಯ ಸತತ ಅಪ್ರತಿರಾಜ್ಯನ್ಯಾಸ ಚರಾಚರಮಾನ್ಯಾ ತುತಿಸುವೆ ಕೇಳು ದೈನ್ಯ ಗತಿ ನೀನೆ ಕ್ಷಿತಿಯೊಳಗಿತರರ ಕಾಣೆನೊ ಸತಿಪತಿ ಮಿಗಿಲಾದ ತುತುವೇಶ ತತಿಗಳ ಜಿತ ಸದ್ಗುರು ಭಾರಿತ ಪ್ರತಿಪಾದ್ಯ ಮಾರುತಿ ಮತಿಯಲಿ ನಿನ್ನ ಮತದಲಿ ಪೊಂದಿಸಿ 2 ವಿಕಸಿತ ಸದನಾ ಜ್ಞಾನ ವಿಶೇಷ ಧ್ಯಾನಾ ಅಖಿಳ ವಿಚಾರ ನಿದಾನಾ ಅಕಳಂಕವಾದ ಬಹುಮಾನಾ ಅಮೃತಪ್ರಾಣಾ ಸಕಲಕ್ಕು ನೀನೇ ಪವಮಾನಾ ಸುಖಸಾಗರ ಸುರನಿಕರವಿನುತ ಮಹಾ ಭಕುತ ಭವಾಬ್ಧಿತಾರಕ ವಿಷಭಂಜನ ಲಕುಮಿವಲ್ಲಭ ನಮ್ಮ ವಿಜಯವಿಠ್ಠಲನ್ನ ನಖ ಕೊನೆ ಪೊಗಳುವ ಉಕುತಿ ನೀಡಿಂದು 3
--------------
ವಿಜಯದಾಸ
ಪಾಲಿಸು ಗುರುವರ್ಯ ಜಯಾರ್ಯ ಪ ಶ್ರಿಮದಾನಂದತೀರ್ಥರ ಕಂದ ಶ್ರೀಮದಕ್ಷೋಭ್ಯರ ಕಂದ ಯತೀಂದ್ರ 1 ಪೂರ್ಣಬೋಧ ತೀರ್ಥಾರ್ಣ ವಿಹಾರಿ ಸ್ವರ್ಣ ಪಾತ್ರ ಸುಧಾಕಾರಿ ಉದಾರಿ2 ಶ್ರೀ ನರಹರಿ ಧ್ಯಾನವಿಚಾರಿ ಮೌನಿ ಗುಣಗಣಧಾರಿ ಉದ್ಧಾರಿ3
--------------
ಪ್ರದ್ಯುಮ್ನತೀರ್ಥರು
ಪಾಲಿಸು ಪರಮಪಾವನ ಪದ್ಮಾವತೀರಮಣ ಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ. ಪಾಹಿಪಾರ್ಥಸಾರಥಿಅ.ಪ. ಮದನಜನಕ ಮಹಿಮಾಂಬುಧಿ ನಿನ್ನ ಪದಕಮಲವ ನಾ ಸ್ಮರಿಸದೆ ಎನ್ನ ಮದಮುಖತನವನು ಒದರುವದೆನ್ನ ಪದುಮನಾಭ ರಕ್ಷಿಸು ನೀ ಮುನ್ನ ಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧ ಉದುಭವಿಸುವುದು ನಿಜವೇ ಭಕ್ತವಾತ್ಸಲ್ಯ ಇದಕೆ ನೀ ಊನ ತರುವೆ ಸಾಕು ಈ ಮರವೆ ಒದಗಿಸು ಸರ್ವಮನಸಿನೊಳ್ ಪುದು- ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ- ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತ ಮಧುಸೂದನ ಮಂದರಗಿರಿಧರ ನೀ- ರದ ನಿಭ ನಿರ್ಮಲ ನಿಜರೂಪ ಗುಣ ಸದನಾಚ್ಯುತ ರವಿಕುಲದೀಪ ನಿರ- ವಧಿ ಆನಂದ ರಸಾಲಾಪ ಬುಧಜನೋಪಲಾಲಿತ ಲೀಲಾಯತ ಉದಧಿಶಾಯಿ ಮಾನದ ಮಧುಸೂದನ1 ನಾಮಸ್ಮರಣೆಯೆ ನರಕೋದ್ಧಾರ ನೇಮವಿಲ್ಲೆಂಬುದು ನಿನ್ನ ವಿಚಾರ ಸಾಮಾರ್ಥದ ಗುಣಕೆಲ್ಲನುಸಾರ ಪಾಮರ ಮನಕಿದು ಈ ಗುಣಭಾರ ಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿ ಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬ ಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊ ಸಾಮಗಾನಲೋಲ ಸುಜನ ಸ್ತೋಮ ಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬ ತಾಮಸ ಪರಿಹರಿಸಿ ಜ್ಞಾನೋದಯದ ಸದಾನಂದ ಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆ ನೀ ಮಾಡುವುದೆಲ್ಲವು ಸಹಜ ಗುಣ ಧಾಮಾಶ್ರಿತ ನಿರ್ಜರಭೂಜ ಸುಜನ ಸ್ತೋಮಾರ್ಕಾಮಿತ ವಿಭ್ರಾಜ ಶ್ರೀಮಚ್ಛೇಷಾಚಲ ಮಂದಿರ ಸು- ತ್ರಾಮಾರ್ಚಿತ ಸದ್ರಾಮ ಶ್ರೀರಾಮ2 ಉಡುವ ಸೀರೆಯ ಸೆಳೆಯಲು ದ್ರುಪಜೆಯ ಕೊಡಲಿಲ್ಲವೆ ಬಹುವಸನ ಸಂತತಿಯ ಹಿಡಿಯವಲಕ್ಕಿಗೆ ದ್ವಾರಕ ಪತಿಯ ಕಡು ಸರಾಗವಾಯ್ತಿಂದಿನ ಪರಿಯ ಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನ ಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟ ಕೊಡು ದಯವಿಟ್ಟು ಮುದದಿ ಕರುಣಾವುದಧಿ ಕಡುಲೋಭಿತನ ಬಿಡು ಮಹರಾಯ ಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತ ಕರ್ಮ ವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯ ಒಡೆಯ ಶ್ರೀ ಲಕ್ಷ್ಮೀನಾರಾಯಣ ನಡುನೀರೊಳು ಕೈಬಿಡುವೆಯ ನೀ ತೊಡಕೊಂಡ ಬಿರುದೇನಯ್ಯ ಈ ಕಡು ಕೃಪಣತನ ಸಾಕಯ್ಯ ಪೊಡವಿಯೊಳಗೆ ಪಡುತಿರುಪತಿಯೆಂಬ ದೃಢಕಾರ್ಕಳದೊಡೆಯ ಶ್ರೀನಿವಾಸನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸೆನ್ನನು ಪದ್ಮಪತ್ರ ವಿಶಾಲಲೋಚನೆ ಜಾಹ್ನವಿಶೈಲಜಾತಾಭಗಿನಿಮಂಗಳೆ ಮೂಲಮಂತ್ರ ಸ್ವರೂಪಿಣಿ ಪ ಹರನ ಜಡೆಯಿಂದಿಳಿದು ಬ್ರಹ್ಮನ ಕರದ ಪಾತ್ರೆಯೊಳ್ನೆಲೆಸಿದೆಸುರರ ಸಂರಕ್ಷಿಸಲು ಭರದಿಂ ಸ್ವರ್ಗಲೋಕವ ಸಾರಿದೆಧರೆಯ ಭಾರವ ತೊಳೆಯಲಲ್ಲಿಂ ಭರದಿ ಸುರಗಿರಿಗೈದಿದೆಹರುಷದಲಿ ಹಿಮಗಿರಿಯ ಶೃಂಗದಿ ಪರಿದು ಪಾವನ ಮಾಡಿದೆ1 ವರ ಭಗೀರಥ ತರಲು ಕಾಶಿಯ ಪುರವರದಿ ನೀ ನೆಲಸಿದೆಥರಥರದ ಪ್ರಾಕಾರ ಮಣಿಗೋಪುರದ ಸಾಲೊಳಗೊಪ್ಪಿದೆನರರು ಮಾಡಿದ ಪಾಪರಾಶಿಯ ತೊಳೆದು ಪಿತೃಗಳ ಸಲಹಿದೆಹರಿಗೊಲಿದು ಮಣಿಕರ್ಣಿಕಾಖ್ಯೆಯ ಧರಿಸಿ ಜಗದೊಳು ತೋರಿದೆ 2 ಜಾಹ್ನವಿ ನಮ್ಮನುಅರ್ತಿಯಿಂ ಸಲಹೆಂಬ ಸ್ತ್ರೀಯರ ಮೊತ್ತವನು ನಾ ಕಂಡೆನು 3 ಚಾರುಮಣಿ ಕೋಟೀರಕುಂಡಲಿ ಹಾರಮಣಿಮಯ ನೂಪುರೆವೀರಮುದ್ರಿಕೆ ಕಡಗ ಕಂಕಣದಿಂದಲೊಪ್ಪುವ ಶ್ರೀಕರೆಹಾರ ಪದಕ ಸಮೂಹ ಕಾಂಚೀದಾಮ ವೈಭವ ಭಾಸುರೆಭೂರಿ ಮರಕತ ರತ್ನಮಾಲ್ಯ ಕೇಯೂರ ಭೂಷಣ ಭಾಸ್ವರೆ 4 ಆಣಿ ಮುತ್ತಿನ ಮೂಗುತಿಯು ಕಟ್ಟಾಣಿ ಗುಂಡಿನ ಸರಗಳುಮಾಣಿಕವು ಬಿಗಿದಿರ್ದ ರಾಗಟೆ ಚೌರಿ ಪೊಸ ಬಾವಲಿಗಳುಕ್ಷೋಣಿ ಗತಿಶಯವಾದ ಮುತ್ತಿನ ಮಲಕು ಮೋಹನ ಸರಗಳು ಕಲ್ಯಾಣಿ ಗಂಗಾದೇವಿಗೆಸೆದವು ಪರಿಪರಿಯ ಭೂಷಣಗಳು 5 ಕಾಲಸರಪಣಿ ಉಂಗುರವು ಅಣಿವೆಟ್ಟು ಪಿಲ್ಲಿಯ ಸಾಲ್ಗಳುಮೇಲೆನಿಪ ವೊಡ್ಯಾಣ ಕಿಂಕಿಣಿ ಗೆಜ್ಜೆಮೊಗ್ಗೆಯ ಸರಗಳುತೋಳಬಳೆ ಭುಜಕೀರ್ತಿ ಹಿಂಬಳೆ ಚಳಕೆಮಣಿದೋರೆಗಳು (?)ಮೇಲೆ ರಂಜಿಪ ನಿಮ್ಮ ನೋಡಿ ಕೃತಾರ್ಥವಾಯ್ತೀಕಂಗಳು 6 ಜಾಹ್ನವಿ ನಿರ್ಮಲೆರಂಗದುದ್ಘತರಂಗ ಶ್ರೀಕರ ಪಾವನೀಕೃತ ಭೂತಲೆಭಂಗಿತಾಮಯಸಂಘೆ ಮಂಗಲಸೂತ್ರಯುತ ಕಂಠೋಜ್ವಲೆಮಂಗಲಾತ್ಮಿಕೆ ಮಹಿತೆ ಕರುಣಾಪಾಂಗೆ ಶರದಿಂದೂಜ್ವಲೆ 7
--------------
ಕೆಳದಿ ವೆಂಕಣ್ಣ ಕವಿ
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತ ಕಾಲಭೈರವ ನುತಿಪೆ ನಾ ಸತತ ಕಾಲಕಲ್ಪಿತ ಲೀಲೆಯರಿತು ಸು- ಶೀಲತನವನು ಮೆರೆಯಲೋಸುಗ ಸ್ಥೂಲಸೂಕ್ಷ್ಮಾಕೃತಿಯ ಧರಿಸಿದ ಮೂಲಿಕಾ ಶ್ರೀನಿವಾಸ ಭೈರವ 1 ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ- ವೀರ ಶ್ರೀರಾಮನ ಸೇತು ನೋಡುತ್ತ ಧರೆಯ ಸಂಚರಿಸುತ್ತ ಬರುತಿರೆ ಮಿರುಪ ಶೇಷಾಚಲ ನಿರೀಕ್ಷಿಸಿ ಭರದಿ ಗಿರಿಮೇಲಡರಿ ಶ್ರೀಶನ ಚರಣಕಾನತನಾಗಿ ಸ್ತುತಿಸಿದೆ 2 ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿ ಇರಿಸಿ ಮೆರೆಸಿದೆ ಕೀರ್ತಿಕರವಲ್ಲಿ ತ್ವರಿತದಿಂ ನೀನೆಲ್ಲ ದೇಶದ ಪರಿಪರಿಯ ಕಾಣಿಕೆಯ ತರಿಸುತ ಹರಿಯ ದರುಶನಗೈವ ಮೊದಲೆ ಹರುಷದಿಂದಲಿ ಪೂಜೆಗೊಂಬುವೆ 3 ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿ ಧರಿಸಿ ಮೃದುತರವಾದ ವಾಕ್ಯದಲಿ ಕರೆಸಿ ಒಬ್ಬೊಬ್ಬರ ವಿಚಾರಿಸಿ ಸರಸದಿಂದಲಿ ಪೊಗಳಿಕೊಳ್ಳುತ ನರರ್ಗೆ ಸೋಂಕಿದೆ ಭೂತಪ್ರೇತದ ಭಯಗಳನು ಪರಿಹರಿಸಿ ಪಾಲಿಪೆ 4 ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪ ಖ್ಯಾತ ವೆಂಕಟಪತಿಗೆ ಸಖಿಯಷ್ಪ ಖ್ಯಾತಿಯಿಂ ದೊರೆಯಿದಿರಿನಲಿ ಸಂ- ನಿಧಿಸನ್ನುತನಾಗಿ ಮೆರೆದಿಹೆ ಓತು ಕರುಣದೊಳೊಲಿದು ಪಾಲಿಪ ದಾತ ಲಕ್ಷ್ಮೀನಾರಾಯಣಾಪ್ತನೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸೋ | ಪಾವ9ತಿಯ ಪ್ರಾಣೇಶ | ಪಾಲಿಸೋ ಪ ಪಾಲಿಸೆಮ್ಮನು ಪಶುಪತಿಯೆ | ನಿಜ | ಬಾಲಾಕ9 ಕೋಟಿದೀಧಿತಿಯೆ | (ನಮ್ಮ) | ಏಳಿಗೆಗೊಳಿಪ ಸದ್ಗತಿಯೆ ಎಂಬು || ಮೂಲ ಮೂರುತಿ ಸರ್ವಕಾಲಕಾಲನೆ ತ್ರೀ || ಶೂಲವ ಪಿಡಿದೆನ್ನ ಆಲಸ್ಯ ತ್ಯಜಿಸಿನ್ನು 1 ಪ್ರಮಥ ಪ್ರಜಾಪ್ರಭೂದಾರ | ಧರ್ಮ | ದ್ರುಮ ಸುಮನಸರಿಗಾಧಾರ |ಜಗ | ತ್ಕ್ರಮಜಳಿಂತೆನುವ ವಿಚಾರ | ಸ್ವಾಮಿ | ನಮಿಸಿ ಕೇಳುವೆ ಸವ9ಸಾರ | ಆಹಾ || ಗಾತ್ರ | ದ್ಯುಮಣಿಸನ್ನುತ ನಮೋ | ನಮೋಯೆಂಬೆ ಜಯ ಶಂಭೋ 2 ಶರಣವತ್ಸಲ ಮೃತ್ಯುಂಜಯನೆ | ನಿನ್ನ | ಮರೆಯ ಹೊಕ್ಕೆನು ಕಾಲಾಂತಕನೆ | ಎನ್ನ | ಕರುಣದಿ ಸಲಹೊ ಶಂಕರನೆ | ಶಿರ- ವೆರಗಿ ಬೇಡುವೆ ದಯಾಪರನೆ | ದೇವ || ಕರುಣಾಸಾಗರ ನಿನ್ನ | ತರಳನಾಗಿದೆ9ನ್ನ | ಪರ ಗುರುರಾಯನೆ 3
--------------
ಸದಾನಂದರು
ಪಾಲಿಸೋ ಪರಿಪಾಲಿಸೋ ಪ ಪಾಲಿಸೋ ನೀ ಕಾಲನಾಮಕ-ಶ್ರೀಲೋಲ ಕಾಲಕರ್ಮದಲೆನ್ನಕರುಣಿಸಿ ನೀನೀಗ ಅ.ಪ ದುಷ್ಟಜನರ ಸಂಹಾರಕ-ಸರ್ವ ಶಿಷ್ಟಜನರ ಪರಿಪಾಲಕ-ದೇವ ಸೃಷ್ಟ್ಯಾದ್ಯಷ್ಟಕರ್ತುಕ-ತ್ವದ್ಭಕ್ತರಾ- ಭೀಷ್ಟದಾಯಕಾ 1 ಜಗದ್ಭರಿತ ಜಗದಂತರ್ಯಾಮಿ-ಸರ್ವ ಜಗದಾದ್ಯಂತ ಭಿನ್ನನೇಮಿ-ನೀನೆ ಸ್ವಗತಭೇದಶೂನ್ಯಮಹಿಮಾ ಇನ್ನು ಜಗದ್ಭುಕು ಮಮಕುಲಸ್ವಾಮಿ 2 ಪರಮೇಷ್ಟಿಭವಇಂದ್ರವಂದಿತ-ಕ್ಷರಾ- ಕ್ಷರ ಪುರುಷ ಪೂಜಿತ-ಪಾದ ನಿರವಧಿಕಗುಣಗಣಾನ್ವಿತ ನೀನೆ ಜರಾಮರಣನಾಶ ವರ್ಜಿತ 3 ಮುಕ್ತಾಮುಕ್ತಾಶ್ರಯದೇವನೆ-ಸರ್ವ ಭಕ್ತಮುಕ್ತಿಪ್ರದಾತನೆ-ವ್ಯಕ್ತಾ ವ್ಯಕ್ತಪುರುಷದೇವನೆ ಪುರುಷ- ಸೂಕ್ತಸುಮೇಯ ಅಪ್ರಮೇಯನೆ 4 ಸ್ವರವರ್ಣ ಶಬ್ದವಾಚ್ಯನೆ-ದೇವ ಸುರಾಸುರಾರ್ಚಿತ ಪಾದನೆ ಓಂ- ಕಾರ ಪ್ರಣವ ಪ್ರತಿಪಾದ್ಯನೆ ನಿತ್ಯ ನಿಖಿಳಾಗಮದೊಳು ಸಂಚಾರನೆ5 ಅಚಿಂತ್ಯಾನಂತರೂಪಾತ್ಮಕ-ನಿನ್ನ ಭಜಕರ ಭವಬಂಧ ಮೋಚಕ-ಸರ್ವ ಅಬುಜಾಂಡ ಕೋಟಿನಾಯಕ ನೀನೆ ಜಗದಾದ್ಯಂತ ವ್ಯಾಪಕ6 ವೇದ ವೇದಾಂತ ವೇದ್ಯನೆ-ನೀನೆ ಆದಿಮಧ್ಯಾಂತದೊಳ್ ಖ್ಯಾತನೆ ಗುರು ಮೋದತೀರ್ಥರ ಹೃತ್ಕಾಂತನೆ ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲನೆ 7
--------------
ಉರಗಾದ್ರಿವಾಸವಿಠಲದಾಸರು
ಪಾಲಿಸೋ ಸುಬ್ರಹ್ಮಣ್ಯ ಪಾಲಿಸೋ ಪ ಷಡ್ಶಿರ ಪಾಲಿಸೋ ಅ.ಪ ಕಂಬುಕಂಧರ ಮೂರುತಿ ಸ್ಕಂದ ಷಡ್ಶಿರ 1 ಚಾರು ಮಾರ ಮಯೂರವಾಹನ ಧೀರ ಷಡ್ಶಿರ 2 ಈಶ ಪಾವಂಜೆವಾಸ ಷಡ್ಶಿರ 3
--------------
ಬೆಳ್ಳೆ ದಾಸಪ್ಪಯ್ಯ
ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ ಪ ಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ ಅ.ಪ. ಚಾರು ಚರಣ ಸರೋರುಹ ಕೆರಗುವೆ | ಚಾರುಮತಿಯ ಕೊಡೆ 1 ಮೂರು ಗುಣಾಭಿಮಾನೀ | ಮಾಳ್ಪುದುಮೂರು ಗುಣಗಳ್ಹಾನೀ ||ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ ನೆಂದು | ಬಾರಿ ಬಾರಿಗೆ ಪೇಳ್ವ 2 ಗುರು ಗೋವಿಂದ ವಿಠಲಾ | ನಿನ್ನೊಡವೆರಸಿ ಸೃಜಿಪ ಜಗಂಗಳಾ ||ಎರಡೆರಡು ವ್ಯೂಹಕಾಗಿ | ಎರಡೆರಡು ರೂಪ ತಾಳೆಎರಡೆರಡು ನೀನು ಆಗಿ | ಹರಿ ಕಾರ್ಯಕನುವಾದೆ 3
--------------
ಗುರುಗೋವಿಂದವಿಠಲರು
ಪಾವನೀ ಆವಹಿ ಮಾಂ ಪ ಪಾವನಿ ಪಾತಕಾರಣ್ಯ ಮಹಾ ಪಾವಕÀ ನೀನಾದ್ಯೊ ಘನ್ನ ಆಹಾ ಆವಕಾಲದಲ್ಲಿ ಭಾವಜಜನಕನ ಸೇವೆಯೊಳಿರುವಂಥ ಭಾವ ಪಾಲಿಸೊ ದೇವ ಅ.ಪ ಪ್ರಾಣಾದಿ ಪಂಚರೂಪಕನೆ ಸುರ ಗಣ ಕರಾರ್ಚಿತ ಪಾದಯುಗನೆ ಗುಣ ಗಣನಿಧಿ ಬಾರತೀಧವನೇ ಜಗ ತ್ರಾಣ ಕಾರಣನೆ ಮಾರುತನೇ ಆಹಾ ಚಾರು ಚ ರಣ ವಂದಿಪೆ ಜಗತ್ಕಾರಣಕರ್ತನೇ 1 ಖದ್ಯೋತ ಶತ ನಿಭ ಚರಣಾ ಅನಾದ್ಯ ಹರಣ ಸದ್ಯ ವಿದ್ಯೋತ ವೇದಾಂತಾಭರಣಾ ಅನ ವಧ್ಯ ಸ್ವಭಕ್ತಾಂತಃ ಕರಣಾ ಆಹಾ ವಿದ್ಯಾರಮಣ ನೀನೆ ಸದ್ಯೋಜಾತಗೆ ಸು ವಿದ್ಯಾ ಪೇಳಿದ್ಯೋ ಪ್ರದ್ಯುಮ್ನನ ತೋರಿಸೋ 2 ಶ್ರೀನಾಥನಿಗೆ ಪ್ರತೀಕಾ ಬಾಲ ಭಾನುಕೋಟಿ ಪ್ರಕಾಶಾ ಏನು ಕರುಣಾಳೊ ಭಕ್ತಾಭಿsಲಾಷಾ ಅನು ಸಾರದಿ ಪೂರ್ತಿಪ ಈಶಾ ಆಹಾ ಹನುಮದಾದಿರೂಪ ಘನವಾಗಿ ಧರಿಸಿ ನೀ ವನಧಿ ಲಂಘಿಸಿ ಹರಿ ವನಿತೆಯ ತಂದಿತೆÀ್ತ 3 ಸೂತ್ರನಾಮಕ ಶುಭಗಾತ್ರಾ ಚಿತ್ರ ಚಂiÀರ್i ಪಿತಾಮಹಪುತ್ರಾ ಗೋತ್ರ ಧರಮುಖ ದ್ಯು ಸ್ವಕÀಲತ್ರಾ ಮಿತ್ರ ತಾಡನ ಹರ್ತ ಅರ್ಥಗಾತ್ರಾ ಆಹಾ ಸುತ್ರಾಮ ಮುಖ ತ್ರಿನೇತ್ರಾಂತ ಸುರಕೃತ ಸ್ತೋತ್ರ ಪದಾಂಬುಜ ಮದಂತ್ರದಿ ನಿಲಿಸಯ್ಯಾ 4 ಘೋಟ ಖೇಟ ಕಂಠೀರವ ವದನಾ ಭವ ಕಾಟ ತಪ್ಪಿಸಿ ಪೊರಿ ಎನ್ನಾ ಕಿಟ ಮ ರ್ಕಟ ರೂಪನೆ ನಿನ್ನಾ ಭಕ್ತ ಕೋಟಿಯೊಳಗೆ ಸೇರಿಸೆನ್ನಾ ಆಹಾ ದಿಟ್ಟ ಮಹಿಮ ಗುರು ಜಗನ್ನಾಥ ವಿಠಲನ್ನ ಮುಟ್ಟ ಭಜಿಪ ದಿವ್ಯ ದÀೃಷ್ಟಿಯ ಪಾಲಿಸೋ 5
--------------
ಗುರುಜಗನ್ನಾಥದಾಸರು
ಪಾಹಿ ಶ್ರೀ ಗುರುರಾಘವೇಂದ್ರ ಅಮಿತಗುಣ ಸಾಂದ್ರ ಯತೀಂದ್ರ ಪ ಶ್ರೀದ ಮೋದತೀರ್ಥ ಮತವಾರಿಧಿ ವಿಧು ವಸುಧಾ ಸುವಿಬುಧಾ 1 ಅಮಿತ ಮಹಿಮಾಲಂಕೃತಾಂಗ ಕುಮತ ಗಜಸಿಂಗ ಶುಭಾಂಗ 2 ಶರಣು ಜನ ಮಂದಾರ ಕರುಣಾ ದುರಿತ ಘನ ಸುಪವನಾ3 ತ್ರಾಲಯಾ ನಿಲಯಾ ಸುಕೃಪಯಾ 4 ಚಾರು ಪದಕಮಲ ಸುಲೋಲ 5
--------------
ಕಾರ್ಪರ ನರಹರಿದಾಸರು
ಪಿಡಿ ಎನ್ನ ಕೈಯ್ಯ ರಂಗಯ್ಯ ಪ ಪಿಡಿ ಎನ್ನ ಕೈಯ ಪಾಲ್ಗಡಲ ಶಯನ ಮೋಹ ಮಡುವಿನೋಳ್ ಬಿದ್ದು ಬಾಯ್ಬಿಡುವೆ ಬೇಗದಿ ಅ ನೀರಜನಾಭಾ ನಂಬಿದೆ ನಿನ್ನ ನೀರಪ್ರದಾಭಾ ಕಾರುÀಣ್ಯ ನಿಧಿ ಲಕ್ಷ್ಮೀನಾರಸಿಂಹನ ಪರಿ ವಾರಸಹಿತ ಈ ಶರೀರದೊಳಡಗಿರ್ದು ಘೋರತರ ಸಂಸಾರ ಪಂಕದಿ ಚಾರು ವರಿವನ ದೂರ ನೋಡುವ ರೇ ರಮಾಪತೆ ಗಾರುಮಾಡದೆ ಚಾರುವಿಮಲ ಕರಾರವಿಂದದಿ 1 ಅನಿಮಿತ್ತ ಬಂಧೋ ನೀನೇ ಗತಿ ಗುಣ ಗಣಸಿಂಧೋ ವಿಧಿ ಭವಸಂಕ್ರಂ ದನ ಮುಖ್ಯ ವೇದ ಸನ್ಮುನಿ ಗಣಾರ್ಚಿತ ಪಾದಾ ಅನುಜ ತನುಜಾಪ್ತಾನುಗ ಜನನೀ ಸದನ ಸಂ ಹನÀನ ಮೊದಲಾದಿನಿತು ಸಾಕುವ ಘನತೆ ನಿನ್ನದು ಜನುಮ ಜನುಮದಿ 2 ಶ್ರೀ ಜಗನ್ನಾಥವಿಠ್ಠಲ ದ್ವಿಜರಾಜ ವರೂಥ ಓಜಕಾಮಿಕ ಕಲ್ಪ ಭೂಜ ಭಾಸ್ಕರ ಕೋಟಿ ತೇಜ ಮನ್ಮನದಿ ವಿರಾಜಿಸು ಪ್ರತಿದಿನ ಈ ಜಗತ್ರಯ ಭಂಜನನೆ ಬಹು ಸೋಜಿಗವಲಾ ನೈಜ ನಿಜನಿ ವ್ರ್ಯಾಜದಿಂದಲಿ ನೀ ಜಯಪ್ರದ ನೈಜ ಜನರಿಗೆ ಹೇ ಜಗತ್ಪತೇ 3
--------------
ಜಗನ್ನಾಥದಾಸರು
ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಪ ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ ಅ ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕøಪೆ 1 ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವÀ ಗಳಿಸಿದೆ ಕರವ ನೀಡಿ ಯಾಚಿಸೆ 2 ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ ತರುಣಿ ಸಹಿತಾ ಹೊರಟನೆ 3 ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ 4 ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ ಭಜಿಪೆನೋ ಕೇಳ್ ಗುರುವರ 5
--------------
ವಿಜಯದಾಸ
ಪುರಂದರ ಗುರುರಾಯಾ ಸತ್ಪ್ಪುಣ್ಯ ಕಾಯಾ ಪ ನಿರುತ ನಿನ್ನ ಚರಣ ಸೇವೆ ಕರುಣ ಮಾಳ್ಪದೋ ಜೀಯಾಅ.ಪ. ಬಹು ಜನ್ಮಗಳಲ್ಲಿ ನಾನು ಮಹ ಪುಣ್ಯ ಮಾಡಿದವರ ಸಹವಾಸದಲಿದ್ದು ಗ್ರಹದ ಮುಂದೆ ಗ್ರಹದಿಂದೆನಗೆ ಮಹಿಸುರ ಜನ್ನವಿತ್ತೆ 1 ಶ್ವಾನ ಸೂಕರನೊ ನಾನದನು ಕಾಣೆನೊ ಮತ್ತಾವನೊ ನಾನಾ ಜೀವನೊ ಆನು ಒಂದು ತಿಳಿಯೆ ಗುರುವೆ ನೀನೆ ಬಲ್ಲಿ ಎನಗೆ ಬಂದ ಅನಾದಿ ಶರೀರವ ಅಜ್ಞಾನವನ್ನೇ ತೆಜಿಸುವುದು2 ಯಾಚನೆ ದೇಹದಲ್ಲಿ ಊಚು ಭಾಗ್ಯವ ಜಯಸದಿಪ್ಪ ಯೋಚನೆಯಿಂದಲಿ ಕಮಲಲೋಚನ ನಿನ್ನಂಘ್ರಿಯಾ ಕರವ ಬಾಚೆನೊ ಹೀನರಿಗೆ ನಿನ್ನ ಪಾಚಕರ ಮನೆಯ ಪರಿಚಾರ ಸಿದ್ಧÀ್ದವಾಗಲಿ 3 ಹಿಂದೆ ಏನು ಪ್ರೇರಿಸಿದಿಯೊ ನಂದವ ನಾನರಿಯೆನೊ ತಂದೆ ತಾಯಿ ನೀನೆ ಎಂದು ಪೊರದಿ ಸಂದೇಹವಿಲ್ಲ ಯೆಂದು ಪೊರೆದದ್ದು ನಿನ ಕರುಣವಲ್ಲವೆ ಮತ್ತೆ ಭಾರವು ನಿನದೆಂದು ನಾ ಪ್ರಾರ್ಥಿಸುವೆ 4 ತಿರುಗುವುದು ಕುಳ್ಳಿರುವುದು ಬರುವುದು ಮತ್ತೇಳುವದು ಮರಳೆ ಮಾತನಾಡುವುದು ವಾಸರದಲ್ಲಿ ಬಿಡದೆ ಸಿರಿ ವಿಜಯವಿಠ್ಠಲನ್ನ ಕರದೊಳಿಪ್ಪಂತೆ ಮಾಳ್ಪದೊ ಜೀಯಾ 5
--------------
ವಿಜಯದಾಸ