ಒಟ್ಟು 8772 ಕಡೆಗಳಲ್ಲಿ , 133 ದಾಸರು , 4875 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊ. ದೇವತಾಸ್ತುತಿ ಬ್ರಹ್ಮದೇವರು ಕರುಣಿಸೊ ಕೋಮಲಾಂಗನೆನಾರಾಯಣಸುತನೆ ಕರುಣಿಸೊ ಪ ಕರುಣಿಸು ಎನ್ನನು ಸುರಸೇವಿತ ಪಾದಪರಮೇಷ್ಠಿಯ ನಿನ್ನ ಶರಣು ಬಂದಿಹೆನು ಅ.ಪ. ವಾಣಿರಮಣ ನಿನ್ನ ಗಾನ ಮಾಡುವೆ ಸಿರಿಮಾನಿನಿ ಅರಸನ ಧ್ಯಾನದೊಳಿರಿಸೊ 1 ಶಿವಜನಕನೆ ನಿನ್ನ ಕವನ ಮಾಡುವ ಹೃದ್-ಭವನದೊಳಗೆ ಮಾಧವನ ತೋರಿಸೊ2 ಇಂದಿರೇಶನ ಮನವಿಂದು ಬೋಧಿಸಿ ಭವಬಂಧನ ಬಿಡಿಸಿ ಶರ ವೃಂದಾಸನ ಗುರು 3
--------------
ಇಂದಿರೇಶರು
ಊಟ ಮಾಡಿದೆನು ಬ್ರಹ್ಮಾನಂದದ ಊಟವಆರು ಅರಿಯದ ಯೋಗ್ಯರು ಎಂಬ ಊಟ ಪ ಸದ್ಗುರು ಎಂದೆಂಬ ಅನ್ನಪೂರ್ಣ ತಾನುಶುದ್ಧ ಹೃದಯವೆಂಬ ಹರಿವಾಣದೊಳಗೆಸಿದ್ಧನೆಂಬ ನಾನಾ ಭಕ್ಷ್ಯ ಭೋಜ್ಯ ಪಾಯಸವಸಿದ್ಧ ಗುರುವೇ ತಂದು ಎನ್ನ ಮುಂದಿಡಲು1 ಆತ್ಮ ಎಂಬ ಅನ್ನಕ್ಕೆ ಅಷ್ಟಾಂಗ ತೊವ್ವೆಯನು ಹಾಕಿಸ್ವಾತ್ಮ ಸುಖವೆಂದೆಂಬ ತುಪ್ಪವನೆ ಹೊಯ್ದುಆತ್ಮ ನಾನೆರಡಲ್ಲವೆಂಬ ಸಮರಸವ ಕಲಸಿಎತ್ತಿ ಸವಿದೆನು ನಾನು ಅನುಭವದ ತುತ್ತ 2 ಸಾರಾಮೃತವೆಂಬ ಸಾರನೇ ಸುರಿಯುತತೋರುತಿಹ ಚಿದ್ಬಿಂದು ಹಿಂಡಿಯನೆ ನಂಜಿಮೀರಿದಾನಂದಗುಳ್ಹೂರಿಗೆಯ ಮಂಡಿಗೆಯತೋರುವೆಚ್ಚರು ಮರೆತು ಹಾಯೆನುತಲುಂಡು 3 ಹೇಳಬಾರದ ಪರಮಾತ್ಮ ಪರಮಾನ್ನ ಸುರಿದುಮೇಲೆ ಗುರುದಯದ ಉದಕವನೆ ಕುಡಿದುಮೂಲನಾದವ ಘೋಷ ಸುತ್ತೆಲ್ಲ ಪಸರಿಸಲುಗೋಲ ನಾನಾ ತೇಜ ದೀಪ ಬೆಳಕಿನಲ್ಲಿ 4 ಇಂತೂಟವನೆ ಉಂಡು ನಿಜ ತೃಪ್ತಿಯದಾಗೆಅಂತು ಕಳೆದೆನು ಅವಿದ್ಯದ ಕಡು ಹಸಿವನುಚಿಂತಯಕ ಚಿದಾನಂದ ಅನ್ನ ಪೂರ್ಣನು ಎಣಿಸೆಎಂತು ಹೇಳಲಿ ಮರೆತೆ ಸರ್ವವನು ತೃಪ್ತಿಯಲಿ5
--------------
ಚಿದಾನಂದ ಅವಧೂತರು
ಊರ ದೇವರ ಮಾಡಿ ಊರ ಶಾಂತಿಯಾಗಲಿಊರದೇವತೆ ಗುರು ಚಿದಾನಂದ ತಾನೆನುತ ಪ ಶುದ್ಧ ಸುನಾದವೆನಿಸುವ ಡಂಗುರವ ಸಾರಿಸಾಧು ಶಮೆ ದಮೆ ಎಂಬ ಮೊಳಕೆ ಹೊಯ್ದುವೇದಾಂತವೆಂದೆಂಬ ಹಂದರವನೆ ಹಾಕಿವಾದಾತೀತಾತ್ಮದೇವಿಯ ಎದುರುಗೊಂಡು 1 ಹಲವು ನಾದಗಳೆಂಬ ವಾದ್ಯಗಳನೇ ನುಡಿಸಿಬೆಳಗುತಿಹ ತೇಜಃಪುಂಜಗಳ ಮುಟ್ಟಿಸಿಯೆಹೊಳೆಯುತಿಹ ನಾನಾ ಕಳೆ ಬರಿಸು ಬತ್ತಿಯ ಹಚ್ಚಿಬಳಿಕ ಚಿತ್ಕಳೆ ಎಂಬ ದೇವಿಯನು ಮೆರೆಸುತ್ತ 2 ಅಡ್ಡಾಡುವ ಮನವ ಹಿಡಿ ತಂದು ಕಟ್ಟಿದೊಡ್ಡ ಅಹಂಕಾರದ ಕೋಣವನು ಕಡಿಸಿಹೆಡ್ಡ ಕಾಮವದೆಂಬ ಕುರಿಯ ತಲೆ ಕಡಿಸಿಗೊಡ್ಡು ಗುಣಗಳು ಎಂಬ ಚೆರುಗ ಚೆಲ್ಲಿಸುತ್ತ3 ಸಿದ್ಧ ತಾನೆಂದೆಂಬ ಅಡುಗೆಯದು ಆಗಲುಸಿದ್ಧ ಪುರುಷರು ಎಲ್ಲ ಉಣಲು ಕುಳ್ಳಿರೆಶುದ್ಧ ತೃಪ್ತಿಯು ಎಂಬ ಔತಣವು ಮುಗಿಯಲುಅದ್ದಿಸಿರಿ ಆನಂದದಲಿ ಊರ ಜನರ 4 ಊರೆಂಬುದು ನಿಮ್ಮ ದೇಹವೇ ತಿಳಿಯಿರೋಊರ ದೇವತೆ ನೀನು ನಿಜವನರಿಯೋಊರ ದೇವರ ಮಾಡಿ ಆನಂದಪಡೆಯೋಇದಕೆ ತಾ ಸಾಕ್ಷಿ ಚಿದಾನಂದನರಿಯೋ 5
--------------
ಚಿದಾನಂದ ಅವಧೂತರು
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಋಗ್ವೇದ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ಋಗ್ವಿನುತ ನೀನಾಗಿ | ಈಕೆಯನು ಪೊರೆಯೋ ಅ.ಪ. ವೇದಾಧಿಕಾರವನು | ನೀ ದಯದಿ ತ್ಯಜಿಸದೆಮೋದದಿಂ ತೋರಿ | ಋಗ್ವೇದ ವಾಚಿಸಿದೇ |ಮೋದ ಮುನಿ ಮತದಲ್ಲಿ | ಸಾಧಿಸಿವಳಲಿ ದೀಕ್ಷೆಭೇದ ಪಂಚಕ ತಿಳಿಸಿ | ಉದ್ಧರಿಸೊ ಇವಳಾ 1 ಹರಿದಾಸ್ಯ ಕಷ್ಟವೆನೆ | ಹಿರಿಯರ ಮತವಿಹುದುತರಳೆ ಆದ ಕಾಂಕ್ಷಿಪಳು | ಪೂರ್ವ ಪುಣ್ಯದಲೀಮುರವೈರಿ ನೀನಾಗಿ ಕರುಣಿಸುತ ತವದಾಸ್ಯಪರಿಹರಿಸು ಭವನೋವ | ಕಾರುಣ್ಯಮೂರ್ತೇ 2 ಭವ | ಮೋಚನವ ಗೈಯ್ಯೋ 3 ಲೌಕಿಕವು ವೈದಿಕವು | ಸಕಲವರ್ಣಾತ್ಮಕನೆವಾಕು ಸಕಲವು ತವ ಆ | ಲೌಕಿಕದ ಮಹಿಮಾವಾಕಾಗಿ ವರ್ತಿಸುತ | ಬೇಕಾದ ವರ ನೀಡಿನೋಕ ನೀಯನೆ ಕಾಯೊ | ಈಕೆಯನು ಹರಿಯೇ 4 ಭಾವಿ ಮರುತರ ಪ್ರೀಯ | ಆವಾವ ಕಾಲಕ್ಕುದೇವ ತವ ಸ್ಮøತಿಯಿತ್ತು | ಕಾವುದೀಕೆಯನೂನೋವು ಸುಖಗಳ ಸಮತೆ | ಭಾವದಲಿ ಅನುಭವಿಪಭಾವ ಕೊಡುವುದು ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಋಣವ ಮಾಡಿದ ಪಾಪ ರುಜುವಾಗಲೀಸದುಹಣ ಹೊನ್ನಕೊಡೆ ಪುಣ್ಯಹೃದಯರು ಒಲಿದು ಪನಿತ್ಯ ಕರ್ಮವು ತಾನೆ ನಿಂತಿತು ಸೂತಕಸುತ್ತಿಕೊಂಡಿರೆ ಮನಸಿಗೆ ತೀರುವನಕಾ 1ರಾಮಾಯಣ ಪಾರಾಯಣ ನಿಂತಿತೂುೀ ಮಹಾಚಿಂತೆ ತಾನಿದಿರಿಡೆ ಬಲಿತೂ 2ಧನವ ಸಂಗ್ರ'ಸಲು ತಿರಿದುಕೊಂಬವನಲ್ಲಕಣುಗೆಡಿಸಲು ಬಂದ ಕಪಟ'ದಲ್ಲ 3ಪರಲೋಕ ಹಾನಿಯ ಭಯದಿಂದ ಬಂದೆನುಕರ'ಡಿದೆನ್ನನು ಕಾಯಬೇಕಿನ್ನೂ 4ನಿಷ್ಕøತಿುಲ್ಲದ ನೀಚ ಪಾತಕ'ದು'ಷ ಸಹಸ್ರದಿಂ ನಾಶವಾಗುವದು 5ುೀ ದುಃಖವಭಿಮಾನದಿಂ ಬಂದುದಿದನೀಗಬೀದಿಯೊಳರಸುವೆ ಬಿಡುವಂತೆ ಬೇಗ 6ದುಡ್ಡು ದುಗ್ಗಾಣಿಯಾದರು ಸಾಕು ಬೇಗದಿಅಡ್ಡಿಯ ಮಾಡದಪ್ಪಣೆಗೊಡಿ ದಯದಿ 7ಬೇಳುವೆಯನು ಮಾಡಿ ಬೆದರಿಸುವವನಲ್ಲಶ್ರೀಲಕ್ಷ್ಮೀಪತಿ ಬಲ್ಲ ಸದ್ಗುರು ಬಲ್ಲ8ಕಾಶಿಗೆ ಹೋಗಬೇಕಾಗಿದೆ ುೀ ಕೊಳೆನಾಶವಾಗದೆ ಗಂಗೆ ನನಗೆ ತೋರುವಳೆ 9ನೀಕರಿಸುವರಿಂದ ನಿರ್ವೇದ ದೊರಕಿತು ಹಾಳಾದುದುುೀ ಕಲುಷವದೆಂದಿಗಳಿವದೊ ತೊಳದು 10ಚಿಕ್ಕನಾಗಪುರದಿ ವಾಸುದೇವಾರ್ಯಗುರುಪಕ್ಕನಪ್ಪಣೆಯ ಕೊಟ್ಟ ಕಾರಣ ಬಂದೆ 11
--------------
ತಿಮ್ಮಪ್ಪದಾಸರು
ಋಣವ ಮಾಡ್ದಧಮಗುಸುರಲೆುಲ್ಲ ನೀತಿಯಮನು ಮುಖ್ಯಸ್ಮøತಿಕರ್ತರೂ ಪಕಣುಗೆಟ್ಟಿನೀ ದೋಷ ಕಡಲೊಳಗೆ ಮುಳುಗಿ ಮುಂದಣ ಗತಿಯದೇನೆನಗೆ ಕರುಣಿಸೈ ಗುರುವೆ ಅ.ಪಹೇಮಾದ್ರಿ ಮಾಧ'ೀಯಾದಿ ಪ್ರಾಯಶ್ಚಿತ್ತ ನೇಮ 'ಧಿ ಕಾಂಡಗೆಗಳೊಳೂಕಾಮದಿಂದಲಿ ಮಹಾಪಾತಕಗಳನು ಮಾಡಿದೀ ಮಹಾ ತಂಡಗಳೊಳೂಭೂ'ು ಗೋ ದ್ವಿಜರಾಜ ಸ್ತ್ರೀ ದ್ರೋ'ಗಳೊಳು ಪರಭಾ'ುನೀಗಾ'ುಗಳೊಳೂತಾಮಸಾಧಮರೊಳಧರ್ಮನೆನಿಸಿಹೆನೆಂದೇ ಮರಳಿ ಮರಳಿ ಪೇಳಿಹುದಲ್ಲವೆ ಗುರುವೆ 1ಹದಿನೆಂಟು ಬಗೆ ಮಹಾ ಪೌರಾಣ ಕಥೆಗಳೊಳಗಧಮನೀ ಋಣವಂತನೆವದರುತಿವೆಯುಪಪುರಾಣಂಗಳಷ್ಟಾದಶಗಳಧಮನೀ ಋಣವಂತನೆಒದಗಿದೀ ಸಂಖ್ಯೆಯುಪಸ್ಮøತಿಗಳೊಳಗೂ ಪೇಳ್ವುದಧಮನೀ ಋಣವಂತನೆಸದಯತನ ಪುಟ್ಟದಾುತೀ ಪತಿತ 'ಷಯದಲಿಹದನೆನಂಮುಂದೆ ಮುಳುಗಿದೆನೆಲ್ಲೊ ಗುರುವೆ 2ಮೂರು ಮತ್ತೈದಾ ಭೇದ ಋಣ 'ದ್ದರೆಯು ತೀರುವರೆ ಮಾರ್ಗಗಳಿವೆತೀರದಿದ್ದರು ಜನುಮಗೊಡುವವಲ್ಲದೆ ವೃದ್ಧಿಸಿರಿ ಬೆಳೆಯದೆ ನಿಂತಿವೆಆರು ಬಗೆುಂ ಬಡ್ಡಿ ನುಡಿಯದಿದ್ದರು ದಿನವು'ುೀರಲಿದಕೊದಗುತಲಿವೆದಾರಿಯ ನನಗೀಪರಿಯ ಧನ ಋಣವ ದೈವಹೇರಿ ತಳವಳಿದೆನೈರಕ್ಷಿಸೈ ಗುರುವೆ 3ಕಾಶಿಗೈದುವರಾಗದಡ'ಯೊಳಿರುವರಾಗದೀಶ ಭಜನೆಯ ಗಣಿಸದೂುೀಷಣೆಗಳನು ಬಿಟ್ಟು ಸನ್ಯಾಸವನು ಮಾಡಲೀಸದೆ ತನವನರಸದೂದೇಶದೇಶವ ತಿರುಗೆ ತೀರ್ಥಗಳೊಳ್ಮಿಂದರೂಲೇಶ ಮಾತ್ರವು ಸವೆಯದೂಈ ಶರೀರವು ಬೀಳೆ ಕ್ರಮವಾಗಿ ತೊತ್ತು ಸತಿದಾಸಸುತ ಕತ್ತೆಭವಗೊಡುವದೈ ಗುರುವೆ 4ಋಣವು ಮಾಡಿದ ಪತಿತನುಂಬ ಪಂಕ್ತಿಯೊಳು ಜನರುಣಲಾಗದುಂಡರವನೂತನಯ ಪೌತ್ರರು ಸ'ತ ಪತಿತನಪ್ಪನು ನಿಮಂತ್ರಣಗೈಸೆ ಧನ ಋಣಿಯನೂಎಣಿಸಲಾ ಕಲ್ಪನರಕವು ಪಿತೃಗಳಿಗೆ ಕರ್ತನನುಭ'ಪ ನರಕಗಳನೂಎನುತ ಭೀಷ್ಮಾಚಾರ್ಯರುಸುರಿದರು ಧರ್ಮನಂದನಗೆ ಭಾರತ ಶಾಂತಿಪರ್ವದೊಳು ಗುರುವೆ 5ತಲೆಯೋಡ ಪಿಡಿದು ಚಂಡಾಲಗೇರಿಯಲಾದರಳುತ ಕೊಟ್ಟ ಪರಧನವಸಲಿಸದೆ ಕೆಟ್ಟು ಬಂದೆನು ಭಿಕ್ಷಗೊಡಿಯೆಂದುಹಲವು ನಿಂದ್ಯದ್ರವ್ಯವಾಅಳುಕದೆ ತಂದು ಜೀವನಗೈಯ್ದುದರಿಂದುಸಲೆಗೈದು ತಂದ ಋಣವಾಕಳಿವ ನವನರಕಗಳೆಂದು ಹರಿಶ್ಚಂದ್ರ 'ಭುತಿಳು'ದರು ದುರ್ಮನ ಬಿಡದಲ್ಲೊ ಗುರುವೆ 6ಸುತನ ಮಾರಿದ ದೋಷ ಸತಿಯ ಮಾರಿದ ದೋಷಪಿತೃ ಮಾತೃಹತ್ಯ ದೋಷಾಪತಿತನಾಗುವ ದೋಷ ಪತ್ರವನು ಬರದು ತನುಪತನವಾಗುವ 'ಶೇಷಯತನದಿಂದ ಮಾಡ್ದ ಪುಣ್ಯವು ಪೋಪದೋಷ ಪರಸುತ ಭೃತ್ಯನಪ್ಪ ದೋಷಜೊತೆಗೂಡಿ ಗಣಿಸದೆ ಸಾಲವನು ಮಾಡಿದೀಪತಿತನನು ನರಕಕಿಳುಹುವದೆಲ್ಲೊ ಗುರುವೆ 7ನಿತ್ಯಕರ್ಮವ ಮಾಡುವಧಿಕಾರ ಮೊದಲಿಲ್ಲಸತ್ತ ಸೂತಕಕಧಿಕವೂಹೆತ್ತ ತಾು ತಂದೆಗಳ ಮೃತ ದಿನದಿ ಪಿಂಡಗಳನಿತ್ತರವರನುಸಿರವೂಸತ್ತರೂ ಬಿಡದೆ ಬೆಂಬತ್ತಿ ಪೈಶಾಚದಂತೊತ್ತುವದೇಳೇಳು ಭವವೂಇತ್ತಲ್ಲದೆ ಬಡ್ಡಿಸಹ ಮೌಲ್ಯವನು ಪೋಗದೆತ್ತ ಹೋಗಲಿ ಯೇನಮಾಡಲೈ ಗುರುವೇ 8ವರುಷ ಸಾ'ರವಾದರೆಯು ಋಣದ ಮ'ಮೆಯನುಬರೆಯುವದಸಾಧ್ಯ ಗುರುವೆಪರಮ ಋಣಿಗಳು ಸ್ಮøತಿ ಪುರಾಣೇತಿಹಾಸಗಳೊಳರುಪುತಿಹರಿಂತು ಗುರುವೆಹರತು ಋಣಗತ್ತಲೆಯು ನಿನ್ನ ಪದಗಾಬಂತೆಕರುಣಿಸೈ ಬೇಗ ಗುರುವೆಮರೆಯೊಕ್ಕೆ ನಾನು ತಿಮ್ಮದಾಸ ಚಿಕ್ಕನಾಗಪುರವರನಿಲಯ ವಾಸುದೇವಾರ್ಯ ಸದ್ಗುರುವೆ 9
--------------
ತಿಮ್ಮಪ್ಪದಾಸರು
ಋಣವೆಂಬ ಪೈಶಾಚ ಋಜುವಾಗಲೀಸದುನೆನ'ಗೆ 'ಘ್ನವ ನಿಲಿಸುವದು ಪಮನದೊಳು ನೆಲೆಗೊಂಡು ಮಂಕುಮರುಳ ಮಾಡಿಕಣ್ಣು ಗೆಡಿಪುದ ನೋಡಿ ಕರುಣಬಾರದೆ ರಾಮಾ ಅ.ಪಪತಿತ ಪಾವನನೆಂಬ ಬಿರುದುಳ್ಳ ನಿನ್ನಂಘ್ರಿಸತಿಯಹಲ್ಯೆಯ ಸೋಕಿ ಸಲ'ದುದೂಸತತ ಸ್ಮರಿಸಲು ಮಾರೀಚನಂ ಭಯದಿಂದಗತಿಗೊಟ್ಟು ಸಲಹಲೈದಿದವು ನಿನ್ನಡಿಗಳೂ 1ಮನು ಮುನಿಗಳು ಸ್ಮøತಿ ಮಾರ್ಗದಿ ನಿಷ್ಕøತಿಯನು ಪೇಳಲಿಲ್ಲ'ೀ ಋಣ ದೋಷಕೆಪುನಹ ವೃದ್ಧಿಯು ಸಹ ಪೂರೈಸಿಕೊಳಲದನುಭವ ಬಿಡದಾವ ಜನ್ಮಕ್ಕೆಂಬುದ ಕೇಳಿ2ಸಾಕು ಸಾಕಾುತು ಸಂಸಾರ ಕೋಟಲೆಬೇಕಾುತು ನಿನ್ನ ಭಜಿಸುವದೂಈ ಕಷ್ಟವನು ಬಿಡಿಸೈ ಕರುಣಾಬ್ಧಿಯೆನೀಕರಿಸುವರಿಂದ ಆನಂದ ದೊರಕಿತು 3ಸಂತುಷ್ಟ ಚಿತ್ತನಾಗಿರಬೇಕು 'ಪ್ರನುಚಿಂತಿಸಬಾರದೆಂಬೀ ಪಥವಾಎಂತಾದರು ಹೊಂದಲೀಸದಲೆವ ಋಣಕಂತವಾಗುವ ಹಾಗೆ ಧನವ ಪಾಲಿಸಬೇಕು 4ಕೊಟ್ಟವರೊಡವೆಯ ಕೊಡುವಂತೆ ದ್ರವ್ಯವುಪುಟ್ಟುವಂದದಿ ಕೃಪೆಮಾಡೆನಗೆಪಟ್ಟಾಭಿರಾಮ ನಿನ್ನವನೆಂದ ಬಳಿಕಿನ್ನುಕೆಟ್ಟನೆಂಬೀ ಮಾತ ಕೇಳದಂದದಿ ಮಾಡಿ 5ಗುರು ವಾಸುದೇವಾರ್ಯನಾಗಿ ಚಿಕನಾಗಪುರದಿ ನೆಲಸಿ ತಿಮ್ಮದಾಸನನೂಪೊರೆದನೆಂಬೀ ಮಾತು ಹರಿದಿದೆ ಜಗದೀ ತಪ್ಪಿರಲಿ ನೆಪ್ಪಿರಲಿ ನೀ ಸಲಹು ವೆಂಕಟರಾಯಾ 6
--------------
ತಿಮ್ಮಪ್ಪದಾಸರು
ಎಚ್ಚತ್ತಿರಬೇಕು ಮಾ ಧ್ರುವ ಎಚ್ಚತ್ತಿರಬೇಕು ನೆಚ್ಚಿ ನಿಜಘನ 1 ರಚ್ಚಿಗೆ ಬಾರದೆ ಬಚ್ಚಿಟ್ಟು ನಿಜಘನ 2 ಕಚ್ಚಿ ಕೈ ಬಾಯಿಲೆ ಹುಚ್ಚಿಟ್ಟು ಹೋಗದೆ 3 ಕಚ್ಚಿಕಿಡದೆ ನೀನು ಕಾಂಚನದಾಶೆಗೆ 4 ನೆಚ್ಚಿಕೊಂಡಿರಬ್ಯಾಡಿ ವ್ಯಚ್ಚಾಗು ಬದುಕಿಗೆ 5 ತುಚ್ಛರ ಮಾತಿಗೆ ನೆಚ್ಚಿ ನಡಿಯದೆ 6 ಮತ್ಸರಕೆ ನೀವು ಹುಚ್ಚಾಗಿ ಹೋಗದೆ 7 ಅಚ್ಯುತ ಭಕ್ತಿಗೆ 8 ಸಚ್ಚಿದಾನಂದನ ನಿಶ್ಚಲರಿಯಲಿಕ್ಕೆ 9 ಎಚ್ಚರಿಸಿದ ಗುರುಪಾದ ನಿಶ್ಚೈಸಲು 10 ಸೂಚಿಸಿ ಹೇಳಿದ ಗುರುದಾಸಮಹಿಪತಿ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಚ್ಚರ ಹೇಳುವೆ ನಾನೀಗ ನಿನಗೆ ಎಚ್ಚರಿಕೆಚ್ಚರಿಕೆಸಚ್ಚಿದಾನಂದನೆ ನೀನೆಂದು ತಿಳಿ ನಿನ್ನ ಎಚ್ಚರಿಕೆಚ್ಚರಿಕೆ ಪ ಈಷಣವೆಂದೆಂಬ ಕಾಡಿನೊಳಗೆ ಹೊಕ್ಕಿ ಎಚ್ಚರಿಕೆಚ್ಚರಿಕೆದೋಷಕಾರಿಗಳು ಇಂದ್ರಿಯನಾಯ್ಗಳು ಎಳೆದಾವು ಎಚ್ಚರಿಕೆಚ್ಚರಿಕೆ 1 ಅಷ್ಟಮದವೆಂಬ ಆನೆ ಕೈಗೆ ಸಿಕ್ಕಿ ಎಚ್ಚರಿಕೆಚ್ಚರಿಕೆದುಷ್ಟ ಪಂಚಕ್ಲೇಶದ ಪೊದೆಗೆ ಸಿಲುಕೀಯೆ ಎಚ್ಚರಿಕೆಚ್ಚರಿಕೆ2 ವ್ಯಸನಗಳೆಂಬ ಕುದುರೆಯ ಕಾಲೊಳಾದೀಯೆ ಎಚ್ಚರಿಕೆಚ್ಚರಿಕೆದುಶ್ಮನರಾರ್ವರ ಕಣ್ಣಿಗೆ ಬಿದ್ದೀಯೆ ಎಚ್ಚರಿಕೆಚ್ಚರಿಕೆ 3 ತಾಪತ್ರಯದ ಹಳ್ಳದಿ ಹರಿದುಹೋದೀಯೆ ಎಚ್ಚರಿಕೆಚ್ಚರಿಕೆಪಾಪವೆಂಟು ಪಾಶವೆಂಬ ಉರುಲಿಗೆ ತಗುಲೀಯೆ ಎಚ್ಚರಿಕೆಚ್ಚರಿಕೆ 4 ಸಂಸಾರ ನಂಬಲು ಕೆಟ್ಟುಹೋಗುವೆ ಎಚ್ಚರಿಕೆಚ್ಚರಿಕೆಹಂಸ ಚಿದಾನಂದ ಗುರುಹೊಂದೆ ಕಡೆಹಾಯುವೆ ಎಚ್ಚರಿಕೆಚ್ಚರಿಕೆ5
--------------
ಚಿದಾನಂದ ಅವಧೂತರು
ಎಚ್ಚರಿಕೆಚ್ಚರಿಕೆ ಮನವೆ ಇನ್ನು | ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಪ ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಅ.ಪ ಗಂಡ ಅತ್ತೆ ಮಾವ ಮೈದುನರ ಬೈವರ | ಖಂಡ ತುಂಡನೆ ಮಾಡಿ ಖಂಡವ ಕೊಯಿದು | ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ | ಮಂಡೆಯ ಒಡೆದು ಡಂಡದಿ ಶಿಕ್ಷಿಸಿ | ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ ಕುಂಡವ ಹೋಗಿಸುವರೊ-ಎದೆಯ ಮೇಲೆ | ಗುಂಡನೆ ಹೊರಿಸುವರೊ-ಬಾಯೊಳಗೆ | ಕೆಂಡವ ಸುರಿಸುವರೊ-ಕೋಟಿ ಜನ್ಮ ಚಂಡಾಲ ಯೋನಿಯಳಿಟ್ಟು ಬಾಧಿಸುವರೊ 1 ಉತ್ತಮ ಗುರು ಹಿರಿಯರುಗಳ ಬೈವರ | ತಿತ್ತಿಯ ಸುಲಿದು ಕತ್ತರಿಪ ಬಾಚೆಯ ತಂದು | ಕೆತ್ತಿ ಶರೀರಕ್ಕೆ ಹತ್ತೊ ನೀರನೆ ಚೆಲ್ಲಿ | ನೆತ್ತಿಯ ಕೊರೆದು ಖಾರವನೊತ್ತಿ ಹಾವಿನ ಹುತ್ತವ ಹೊಗಿಸಿ ವಿಷವನಿತ್ತು ಕೈ ಕಾಲು | ಕಿತ್ತು ಹೊಟ್ಟೆಯ ಕೊಯ್ವರೊ ಬೊಬ್ಬಿರಿ | ಯುತ್ತುರುಳು ಹಾಕುವರೊ ಬೆನ್ನೊಳಗೇ | ಎತ್ತಿ ಕರುಳ ತೆಗೆವರೊ ದೊಡ್ಡ ಬೆಟ್ಟ | ಹತ್ತಿಸಿ ತಲೆಕೆಳಗಾಗಿ ನೂಕಿಸುವರೊ 2 ಪರಧನ ಪರಸತಿ ಪರನಿಂದೆಗೆಳೆವರ | ಮರುಳುವ ಮರಳಿನೋಳ್ ಹೊರಳಿಸಿ ಅಸ್ಥಿಯ | ಮುರಿದು ಮುಟ್ಟಿಗೆ ಮಾಡಿ ಉರೆದ ಗುಂಡಿಗೆ ಸೀಳಿ | ಜಿಹ್ವೆ ಕೊರೆದು ತೈಲದೊಳಗೆ | ಅರಿವೆಯೆದ್ದಿ ಮೈಗೆ ಉರಿಯ ಸುತ್ತಲಿಕ್ಕೆ | ಉರವಣಿಸು ಕುಣಿಸುವರೊ-ಹೆರೆದಂಬಿಗೆ | ಗುರಿಮಾಡಿ ನಿಲಿಸುವರೊ ಉಕ್ಕಿನ ಕಂಭ | ಕ್ಕೊರಗಿಸಿ ನಿಲಿಸುವರೊ ಶೂಲಕೆ ಹಾಕಿ | ಎರಡು ಕಾಲೆಳೆದು ಕಾವಲಿ ಮೇಲೆ ನಿಲಿಸೀರೊ 3 ಹೆಣ್ಣುಮಾರಿ ಹೊನ್ನು ಕಟ್ಟಿದ ಮನುಜರ | ತುಂಬಿ | ಸುಣ್ಣದೊಳಗೆ ಹೂಳಿ ಜನ್ಮ ಕಳೆದು ಶಿರ | ವಣ್ಣಿಕಲ್ಲನೆ ಆಡಿ ಇನ್ನು ಉಕ್ಕಿನ ಕಾದ- | ಎಣ್ಣೆಯ ಸುರಿದು ನೀರನ್ನೆರದು ನರಮಾಂಸ- | ಉಣ್ಣೆಂದು ತಿನಿಸುವರೊ-ತಿತ್ತಿಯನಿಕ್ಕಿ | ಹಣ್ಣಣ್ಣು ಮಾಡುವರೊ-ಅಸೀಪತ್ರಾ- | ರಣ್ಯವ ಹೊಗಿಸುವರೊ-ಕ್ಷುಧೆಯೆನ್ನೆ | ತುಂಬಿ ಕುಟ್ಟಿ ಮೆಲ್ಲಿಸುವರೊ4 ವಾಸುದೇವನ ವಾಸರದಲ್ಲಿ ಉಂಬರ | ಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿ ಆ- | ಕಾಶಕ್ಕೊಗೆದು ಖಡ್ಗ ರಾಸಿಯೋಳ್ ಬೀಳಲು | ಕೇಶ ಪಿಡಿದು ಕೆಡಹಿ ಘಾಸಿಸಿ ಬಾಯೊಳು | ತುಂಬಿ | ನಾಸಿಕ ಕೊಯ್ಸುವರೋ-ಕೀಸಿಸಿ ಗೂಟ | ಹೇಸದೆ ಬಡಿಸುವರೊ ಹಂದಿಯಂತೆ | ಈ ಶರೀರ ಸುಡಿಸವರೊ-ತಮಸಿನೊಳು | ಏಸು ಜನ್ಮಕೆ ಗತಿಯಲ್ಲವೆನಿಸುವರೊ 5 ಎಲ್ಲ ಒಂದೇ ಎಂಬ ಪಂಚ ಮಹಾಪಾತಕಿಯ | ಹಲ್ಲನ್ನು ಮುರಿದು ಗಂಟಲ ಶೀಳಿ ಅಂಗುಳಿಗೆ | ಮುಳ್ಳನ್ನು ತಂದೂರಿ ತಪ್ತ ಲೋಹದ ಮೇಲೆ | ಕುಳ್ಳಿರಿಸಿ ಕೊಡಲಿಯೊಳ್ ಎಲ್ಲವನು ಕಡಿದು | ಕೊಲ್ಲ ಬಡಿದು ಅಂಬಿನಲಿ ಚುಚ್ಚಿ ರಕ್ತ- | ಚೆಲ್ಯಾಡಿ ಬಗೆಯುವರೊ-ಉರಿಯ ಕೊಂಡ- | ದಲ್ಲಿ ಮುಳುಗಿಸಿಬಿಡವರೊ-ಹೊತ್ತು ಒಯ್ದು | ಕಲ್ಲುಗಾಣಕೆ ಹಾಕುವರೋ-ಕುಂಭೀಪಾಕ | ದಲ್ಲಿ ಕುದಿಸಿ ಬೇಯ್ಸಿ ಬೆಂಡು ಮಾಡುವರೊ6 ಒಂದು ನೋಡಿದರೊಂದು ಅಧಿಕ ಪಾಪಗಳಿವೇ- ನೆಂದು ಪೇಳಲಿ ಎನಗೊಂದಾದರಳವಲ್ಲ | ಹಿಂದಿನ ದುರ್ವಾರ್ತೆ ಮರೆದು ಮುಂದಾದರು | ನಂದತೀರ್ಥರ ಪಾದಾನಂದದಿ ಭಜಿಸಿ ಪು | ರಂದರನನು ಸರಿಸಿ-ವಿಜಯವಿಠ್ಠಲ | ನ್ಹೊಂದಿ ಪತಿಕರಿಸಿ-ಮುಕ್ತಿ ಮಾರ್ಗ- | ವಿಂದು ಆಶ್ರಿಯಿಸೊ ಗೋವಿಂದನ ಸ್ತುತಿಸಿ | 7
--------------
ವಿಜಯದಾಸ
ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ ಧ್ರುವ ನುಡಿದವು ಪರಮಾರ್ಥ ನಡೆಯೊಳಗಿಲ್ಲದೆ ನುಡಿದರ್ಥ ಹಿಡಿದು ವಿಷಯದ ಸ್ವಾರ್ಥಬಡುವುದು ಶ್ರಮತಾನೆ ವ್ಯರ್ಥ 1 ಓದುದು ವೇದಾಂತ ಭೇದಿಸಿ ತಿಳಿಯದೆ ಅದರಂತ ವಾದ ಮಾಡುದು ಭ್ರಾಂತ ಸಾಧಿಸಿ ನೋಡದು ತನ್ನೊಳು ತಾ 2 ಜನಕೇಳುದು ಬುದ್ದಿ ತನಗ ಮಾಡಿಕೊಳ್ಳದು ಸಿದ್ಧಿ ಕಾಣದ್ಹೇಳುದು ಸುದ್ಧಿ ಜ್ಞಾನಕ ಬಾರದು ತಾ ತಿದ್ದಿ 3 ತೊಟ್ಟು ಉತ್ತಮ ವೇಷ ಮುಟ್ಟಿಗಾಣದೆ ಸ್ವಪ್ರಕಾಶ ತುಟ್ಟಿಲಿ ಜಗದೀಶ ಗುಟ್ಟಿಲಿ ಬಲಿವದು ಧನದಾಶೆ 4 ಎಚ್ಚರಿಸಿತು ಖೂನ ನಿಶ್ಚಲ ಮಹಿಪತಿಗೆ ಗುರುಜ್ಞಾನ ಹುಚ್ಚುಗೊಂಡಿತು ಮನ ನೆಚ್ಚಿ ನಿಜಾನಂದದ ಘನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂಟಚ್ಚಮ್ಮ ಎಂದಿಗು ಬರಬೇಡಮ್ಮ ಪ ತುಂಟ ಪಟಿಂಗರ ಬಳಿಗೆ ಹೋಗಮ್ಮ ಅ.ಪ ನಿನ್ನ ಗಂಡ ಪಾಂಡವರನ್ನು ಬಾಧಿಸಿ ತನ್ನ ಬಾಯೊಳು ಹುಡಿಮಣ್ಣು ಹಾಕಿಕೊಂಡ 1 ಹುರಿದು ತಿಂಬ ಕಲಿಪುರಷ ಅಯ್ಯಯ್ಯೋ 2 ಗುರುರಾಮವಿಠಲಗೆ ಪರಮದ್ವೇಷಿಯು ಹರಿ ಶರಣರ ಬಾಧಿಸಿ ದುರಿತಗಳಿಸುವನು 3
--------------
ಗುರುರಾಮವಿಠಲ
ಎಣಿಸಿಕೊ ನಿನ್ನೊಳಗಣ ದೋಷಗಣವಾಗಣಿಸು ಪರರೊಳಿಪ್ಪ ಶುಭಕರ ಗುಣವಾ ಪಪರರ ಬಾಗಿಲ ಕಾಯ್ದು ಪರಿಪರಿ ನುತಿಗೈದುಕರಗಿಸಿ ಮನವ ಬೋಧಿಸಿ ತತ್ವವಾಪಿರಿದಾಗಿಯವರ 'ತ್ತಾದಿಗಳೊಳು ಮನ'ರಿಸಿ 1ದೊರೆಯದಿರೆ ಪರಸತಿ ಪರಧನ ಪರರನ್ನಪರನಾಗಿ ಪರಿಪರಿಯುಪಚಾರಗೈದವರಪರ[ವಶ]ವ ಪಡೆದಿರುತವರೊಳು ದೋಷವೆರಸಿದ ಗುಣಗಳನರಸಿ ಕೆಡುವೆಯಾಕೆ 2ನಿನ್ನೊಳುದಿಸಿದ ಸದ್ಗುಣ ನಿನ್ನ ಭೂಸಿಯುನ್ನತನೆನಿಸಿಯೆ ರಕ್ಷಿಪುದೂನಿನ್ನೊಳಗಣ ದುರ್ಗುಣ ನಿನ್ನುವ ದೂಸಿಕಣ್ಣುಗೆಡಿಸಿ ಕೊಂದು ಕೂಗುವದದರಿಂದಾ3ಮೂಳ ಹೆಮ್ಮೆಯ ಬಿಡು ತಾಳುಖೂಳವಾದವ ಸುಡು ಹರುಷ ಬಿಡುಶೀಲತನವ ಹೂಡು ಬಾಳುವದನು ನೋಡುನಾಳೆ ತಾನಿರುವದೊ ಬೀಳುವದೋ ಗೂಡು 4ಪರರ ನಿಂದಿಸಿ ದೋಷ ಪಿರಿದಾಗಲಾಯಷ್ಯಕಿರಿದಾಗಿಯೂ ಕರ್ಮ ಸೂಕರ ಜನ್ಮಗೊಡದೆ ತೊಲಗಿ ಪೋಗುವುದರಿಂದಾ 5ವರಜನ್ಮಾಂತರದೆ ಸದ್ಗುಣ ಲೇಶ'ರಲದನೆ ಗಣಿಸುತ 'ಗ್ಗಲುಕರಗಿ ನಿನ್ನಯ ದೋಷ 'ರಿದುಮ್ಮಳವ ಪಡೆದಿರುವೆ ಸುಖ ಮತ್ತೆ ಪರಗತಿ ಪಡೆಯುವೆ 6ಗುರುವಾಸುದೇವಾರ್ಯ ಚರಣದೊಲವ ಪಡೆಯುವರೆಪರಗುಣಗಳ ಗಣಿಸು ಕಂಡ್ಯಾಕರುಣದಿಂ ಚಿಕನಾಗಪುರಪತಿ ವೆಂಕಟಗಿರಿವಾಸ ಸನ್ನಿಧಿ ದೊರೆಯುವದಿದರಿಂದಾ 7
--------------
ತಿಮ್ಮಪ್ಪದಾಸರು
ಎಣೆಯಾರೊ ನಿನಗೆ ಹನುಮಂತರಾಯ ಪ. ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ ಅ.ಪ. ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತನಡೆನಡೆದು ಮುದ್ರಿಕೆಯ ಪಡೆದು ಮುದದಿದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ1 ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲಚರಚರನೆ ಸೀಳಿ ಸಂಭ್ರಮದಿಂದಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನುಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ 2 ಫಳಫಳನೆ ಆರ್ಭಟದಿಂದ ರಾವಣನ ನಳನಳನೆ ಬೆಳೆದ ನಂದನವ ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ ಬಂದೆಭಳಿಭಳಿರೆ ಹಯವದನ ದಾಸ ನಿಸ್ಸೀಮ 3
--------------
ವಾದಿರಾಜ