ಒಟ್ಟು 1215 ಕಡೆಗಳಲ್ಲಿ , 94 ದಾಸರು , 965 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಧ್ರುವ ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1 ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2 ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3 ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4 ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾಸ್ಕರ ಗುರು ನಮ್ಮ ಪಕ್ಷ ಭಾಸುತಿಹ ಪ್ರತ್ಯಕ್ಷ ಧ್ರುವ ಪೂರಿಸಿ ಮನದಾಪೇಕ್ಷ ಬೀರಿದ ಕರುಣಾಕಟಾಕ್ಷ ತೋರಿದ ನಿಜಲಯ ಲಕ್ಷ ಅರುಹಿದ ಅನುಭವ ಸಾಕ್ಷ 1 ಮಾಡಿಙÁ್ಞನ ಸುದೀಕ್ಷ ನೀಡಿದ ನಿಜ ಸುಭಿಕ್ಷ ದÀೃಢಭಕ್ತರ ಕಲ್ಪವೃಕ್ಷ ಒಡೆಯನಹುದು ಸಂರಕ್ಷ 2 ಮೂಢ ಮಹಿಪತಿಪಕ್ಷ ಬಿಡದೆ ಮಾಡುವ ಸಂರಕ್ಷ ಪುಂಡರೀಕಾಕ್ಷ ಕುಡುವ ಸದ್ಗತಿ ಸುಮೋಕ್ಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ
ಭೀಮಸೇನ ಭಾಮಿನಿಯಾದನು ಪ. ಭೀಮಸೇನ ಭಾಮಿನಿಯಾಗಲುಪ್ರೇಮದ ಸತಿಯ ಕಾಮಿಸಿದವನಝಾಮರಾತ್ರಿಗೆ ಸೀಳುವೆನೆನ್ನುತಸಾಮಜವರದನ ಪಾಡುತಲಿ ಅ.ಪ. ರಾಜಾಧಿರಾಜನು ಗಜಪುರದಲ್ಲಿಜೂಜಾಡಿ ತಮ್ಮ ರಾಜ್ಯವನು ಸೋತುವಿಜಯಮುಖ್ಯ ಅನುಜರೊಡಗೂಡಿಭುಜಂಗಶಾಯಿಯ ಭಜಿಸುತ್ತಸೂಜಿಮೊನೆಯಷ್ಟು ಗೋಜಿಲ್ಲದೆ ಬೇರೆವ್ಯಾಜದಿಂದ ರೂಪಮಾಜಿಕೊಂಡು ಪೋಗೆರಾಜ ಮತ್ಸ್ಯನೊಳು ಭೋಜನ ಮಾಡುತ್ತಪೂಜಿಸಿಕೊಂಬೋ ಸೋಜಿಗವೇನಿದು1 ಮಾನಿನಿ ದ್ರೌಪದಿ ಶ್ರೇಣಿಯೊಳು ಬರುತ ತ್ರಾಣಿ ವಿರಾಟನ ರಾಣಿಯು ಕಾಣುತಧ್ಯಾನಿಸಿ ಯಾರೆಂದು ಮನ್ನಿಸಿ ಕೇಳಲುಮುನ್ನಿನ ಸಂಗತಿ ಪೇಳಿದಳುಆಣಿಮುತ್ತಿನಂಥಾ ವಾಣಿಯ ಕೇಳಲುಕ್ಷೋಣಿಲಿ ನಿನ್ನಂಥ ಜಾಣೆಯ ಕಾಣೆನುಪ್ರಾಣ ನೀನೆನಗೆ ವೇಣಿ ಹಾಕೆನುತಪಾಣಿ ಪಿಡಿದು ಕರೆತಂದಳಾಗ2 ಈಶ ಕೇಳೊ ಪರದೇಶದಿಂದೊಬ್ಬಳುಕೇಶಕಟ್ಟುವಂಥ ವೇಷದಿ ಬಂದಳುಸಾಸಿರಮುಖದ ಶೇಷನೀರೂಪವಲೇಶವು ತಾ ವರ್ಣಿಸಲರಿಯನುವಾಸಮಾಡುವೆನು ಮಾಸಯೀರಾರುಗ್ರಾಸವ ಕೊಟ್ಟೆನ್ನ ಪೋಷಿಸೆಂದಾ ನುಡಿದೋಸನು ಪೇಳಲು ಮೀಸೆಯ ತಿರುವುತಮೀಸಲೆನಗೆಂದು ತೋಷಿಸಿದ 3 ನಾರಿ ಅಕ್ಕನಲ್ಲಿ ಸೇರಿಕೊಂಡಿಹಳುಮೋರೆಯ ನೋಡಲು ಭಾರಿ ಗುಣವಂತೆತೋರುತಲಿದೆ ಎನ್ನ ಸೇರಿದ ಮೇಲನು-ಚಾರಿ ಎನಿಸುವೆ ಮೀರಿದ್ದಕ್ಕೆವಾರೆಗಣ್ಣಿಲೊಂದು ಸಾರಿ ನೋಡ್ಯಾಳೆಂದುಬಾರಿ ಬಾರಿಯಾಕೆ ಮೋರೆ ನೋಡುತಿರೆನೀರೆ ಆ ಕ್ರೂರನ್ನ ಘೋರರೂಪಕಂಜಿಮೋರೆ ತೋರದೆ ಗಂಭೀರದಿಂದಿರೆ 4 ಅಕ್ಕನಿಗೆ ಬಾಚಿ ಹಿಕ್ಕುವ ಸೇವೆಗೆಪುಕ್ಕಟೆ ಅನ್ನಕೆ ಸಿಕ್ಕುವರೆ ನೀನುಚಿಕ್ಕಪ್ರಾಯಕೆನ್ನ ಪಕ್ಕಕ್ಕೆ ಬಂದರೆಸಕ್ಕರೆದುಟಿಸವಿ ದಕ್ಕಿಸುವೆರಕ್ಕಸ ನಿನಗೆ ದಕ್ಕುವಳೆ ನಾನುಮುಕ್ಕಣ್ಣನಾದರು ಲೆಕ್ಕಿಸದಾ ಪತಿಗಕ್ಕನೆ ಬಂದರೆ ತಿಕ್ಕಿ ನಿನ್ನ ಕಾಯದಿಕ್ಕು ದಿಕ್ಕಿಗೆ ಬಲಿಯಿಕ್ಕುವರೊ 5 ಭಂಡಕೀಚಕನುದ್ದಂಡತನ ಕೇಳುಮಂಡೆ ಹಿಕ್ಕುವಳೆಂದು ಕಂಡಕಂಡ ಬಳಿಪುಂಡು ಮಾಡುವನು ಗಂಡಕಂಡರೆ ತಲೆಚಂಡನಾಡುವನು ಖಂಡಿತದಿಮಂಡಲಾಧಿಪನ ಹೆಂಡತಿ ನೀನಮ್ಮಉಂಡಮನೆಗೆ ಹಗೆಗೊಂಡಳೆನ್ನದಿರುಲಂಡನಿಗೆ ಬುದ್ಧಿ ದಂಡಿಸಿ ಪೇಳದೆಹಿಂಡಿಕೊಳ್ಳದಿರು ದುಂಡುಮುಖ 6 ತರಳ ನಿನ್ನಯ ದುರುಳತನದಬೆರಳ ಸನ್ನೆಯು ಗರಳವಾಯಿತೆಸರಳ ಗುರಿಗೆ ಕೊರಳ ಕೊಡದೆಪುರದೊಳಿರದೆ ತೆರಳೊ ನೀಅರಳಮೊಗ್ಗೆಯ ಹೆರಳಿಗ್ಹಾ ಕುತಕುರುಳು ತಿದ್ದುವ ತರಳೆಯ ಕಂಡುಇರಳು ಹಗಲು ಬಾರಳು ಎನ್ನುತಮರುಳುಗೊಂಡರೆ ಬರುವಳೆ 7 ನಿಷ್ಠೆ ಸೈರಂಧ್ರಿಯ ದೃಷ್ಟಿಸಿ ನೋಡಲುನಷ್ಟವಾಗುವುದು ಅಷ್ಟೈಶ್ವರ್ಯವುಭ್ರಷ್ಟ ನಿನಗೆ ನಾನೆಷ್ಟು ಪೇಳಲಿನ್ನುಕಟ್ಟಕಡೆಗೆ ನೀನು ಕೆಟ್ಟಿಕಂಡ್ಯಾಸೃಷ್ಟಿಲಿ ನನ್ನಂಥ ಗಟ್ಟಿಗನ್ಯಾರಕ್ಕದುಷ್ಟರ ಎದೆಯ ಮೆಟ್ಟಿ ಸೀಳುವೆನುಗುಟ್ಟಿಂದ ನಾರಿಯ ಕೊಟ್ಟುಕಳುಹಲುಪಟ್ಟದ ರಾಣಿಯೊಳಿಟ್ಟುಕೊಂಬೆ 8 ಕರವ ಬಾಚಿದನುಬಾಚಿ ಹಿಕ್ಕುವಂಥ ಪ್ರಾಚೀನವೇನಿದುವಾಚನಾಡು ಮೀನಲೋಚನೆ ಎನ್ನಲುಆಚರಿಸಿ ಮುಂದುತೋಚದೆ ಖಳನವಿಚಾರಿಸಿಕೊ ಶ್ರೀಚಕ್ರಪಾಣಿ 9 ಪೊಡವಿಪತಿಗಳ ಮಡದಿ ನಾನಾಗಿಬಡತನವು ಬಂದೊಡಲಿಗಿಲ್ಲದೆನಾಡದೊರೆಗಳ ಬೇಡುವುದಾಯಿತುಮಾಡುವುದೇನೆಂದು ನುಡಿದಳುಕೇಡಿಗ ಕೀಚಕ ಮಾಡಿದ ಚೇಷ್ಟೆಗೆಕಡಲಶಾಯಿ ಕಾಪಾಡಿದ ಎನ್ನನುಆಡಲಂಜಿಕೇನು ಷಡುರಸಾನ್ನದಅಡುಗೆ ರುಚಿಯ ನೋಡುವರೇ 10 ನಡುಗುವೊ ಧ್ವನಿ ಬಿಡುತ ಕಣ್ಣೀರಿಂ-ದಾಡುವ ಮಾತನು ಬಾಡಿದ ಮುಖವನೋಡಿದನಾಕ್ಷಣ ತೊಡೆದು ನೇತ್ರವಬಿಡುಬಿಡು ದುಃಖ ಮಾಡದಿರುಪುಡುಕಿ ನಿನ್ನನು ಹಿಡಿದವನನ್ನು ಬಡಿದು ಯಮಗೆ ಕೊಡುವೆ ನೋಡೀಗತಡವ ಮಾಡದೆ ಗಾಢದಿ ಪೋಗು ನೀಮಾಡಿದ ಚಿಂತೆ ಕೈಗೊಡಿತೆಂದು 11 ಶಶಿಮುಖಿ ಕೇಸರಿ ಗÀಂಧವದಾಸಿಯರಿಂದ ಪೂಸಿಕೊಂಡುಹಾಸುಮಂಚದಲ್ಲಿ ಬೀಸಿ ಕೊಳುತಲಿಗಾಸಿ ಪಡುತಿರೆ ಆ ಸಮಯದಲಿಲೇಸಾಗಿ ನಿನ್ನಭಿಲಾಷೆ ಸಲ್ಲಿಸುವೆಈಸು ಸಂಶಯ ಬೇಡ ಭಾಷೆ ಕೊಟ್ಟೆ 12 ನಳಿನಮುಖಿಯು ಪೇಳಿದ ಮಾತನುಕೇಳಿ ಹರುಷವ ತಾಳಿದನಾಕ್ಷಣಖಳನು ಹೊನ್ನಿನ ಜಾಳಿಗೆಯ[ತೊಟ್ಟಿನ್ನುಳಿಯದಲೆ] ರತಿಕೇಳಿಗಿನ್ನುಕಾಳಗದ ಮನೆಯೊಳಗೆ ಬಾರೆಂದುಪೇಳಿದ ಸುಳುವು ಪೇಳಲು ಭೀಮಗೆಖಳನ ಕಾಯವ ಸೀಳುವವೇಳೆ ಬಂತೆನ್ನುತ ತೋಳ ಹೊಯಿದ 13 ನಾರಿಯಿನ್ಯಾವಾಗ ಬರುವಳೋಯೆಂದುದಾರಿಯ ನೋಡುವ ಚೋರ ಕೀಚಕನುತೋರಿದ ಠಾವಿಲಿ ಸೇರುವ ಬೇಗನೆಊರೊಳಗಾರು ಅರಿಯದಂತೆಕ್ರೂರನು ಮೋಹಿಪತೆರದಿ ಎನಗೆನಾರಿಯ ರೂಪ ಶೃಂಗರಿಸು ನೀನೆಂದುವಾರಿಜಮುಖಿಯ ಮೋರೆಯ ನೋಡಲುನೀರೆ ದ್ರೌಪದಿ ತಾ ನಾಚಿದಳು14 ಬಟ್ಟ ಮುಖಕೆ ತಾನಿಟ್ಟಳು ಸಾದಿನಬಟ್ಟು ಫಣೆಯಲಿ ಇಟ್ಟು ಕಣ್ಣಕಪ್ಪಪಟ್ಟ್ಟೆಪೀತಾಂಬರ ಉಟ್ಟುಕೋ ನೀನೆಂದುಪುಟ್ಟಾಣಿ ಕುಪ್ಪಸ ಕೊಟ್ಟಳಾಗಕಟ್ಟಾಣಿ ಮುತ್ತು ತಾಕಟ್ಟಿ ಕೊರಳಿಗೆಗಟ್ಟ್ಯಾಗಿ ಚಿನ್ನದಪಟ್ಟಿಯುಡುದಾರದಿಟ್ಟನ ಬೆರಳಿಗಿಟ್ಟಳು ಉಂಗುರವಿಟಪುರುಷರ ದೃಷ್ಟಿತಾಕುವಂತೆ15 ಮುತ್ತಿನ ಮೂಗುತಿ ಕೆತ್ತಿದ ವಾಲೆಯುಇತ್ತೆರÀ ಬುಗುಡಿಯು ನೆತ್ತೀಗರಳೆಲೆಚಿತ್ರದ ರಾಕಟೆ ಉತ್ತಮಕ್ಯಾದಿಗೆಒತ್ತೀಲಿ ಶ್ಯಾಮಂತಿಗ್ಹ್ಹೂವು ಗೊಂಡ್ಯಾಹಸ್ತದ ಕಡಗವು ಮತ್ತೆ ಚೂಡ್ಯ ವಂಕಿಮುತ್ತಿನ ಹಾರವು ರತ್ನದ ಪದಕವುಅರ್ತಿಲಿ ನಾರಿಯು ಕುತ್ತಿಗ್ಗ್ಯೆಹಾಕಲುಹಸ್ತಿನಿಯೋ ಈಕೆ ಚಿತ್ತಿನಿಯೊ16 ಮುಡಿಗೆ ಮಲ್ಲಿಗೆ ಮುಡಿಸಿ ಸುಗಂಧತೊಡೆದು ತಾಂಬೂಲ ಮಡಿಸಿಕೊಡುತಪ್ರೌಢನ ಸ್ತ್ರೀರೂಪ ನೋಡಲು ಖಳನುಕೊಡದೆ ಪ್ರಾಣವ ಬಿಡನೆಂದಳುಮಾಡಿದ್ಯೋಚನೆ ಕೈಗೂಡಿತು ಇಂದಿಗೆನೋಡು ಆ ಕೃಷ್ಣನು ಹೂಡಿದ ಆಟವಮಡದಿ ನೀನೆನ್ನ ಒಡನೆ ಬಾರೆಂದುನಡೆದ ಖಳನ ಬಿಡಾರಕೆ 17 ಇಂದುಮುಖಿ ಅರವಿಂದನಯನದ ಮಂದಗಮನೆಯು ಬಂದಳು ಎನ್ನುತನಂದನತನಯನ ಕಂದನ ಬಾಧೆಗೆಕಂದಿ ಕುಂದಿ ಬಹು ನೊಂದೆನೆಂದಹಿಂದಿನ ಸುಕೃತದಿಂದಲಿ ನಿನ್ನೊಳಾ-ನಂದವಾಗಿಹುದು ಇಂದಿಗೆ ಕೂಡಿತುಕುಂದದಾಭರಣ ತಂದೆ ನಾ ನಿನಗೆಚಂದದಿಂದಿಟ್ಟು ನೀನಂದವಾಗೆ18 ಗುಲ್ಲುಮಾಡದಿರೊ ಮೆಲ್ಲಗೆ ಮಾತಾಡೊವಲಭರ್ತಾಕಂಡರೆ ಹಲ್ಲು ಮುರಿವರೊಬಲ್ಲವ ನಿನಗೆ ಸಲ್ಲದು ಈ ಕಾರ್ಯಗೆಲ್ಲಲರಿಯೆ ನೀ ಕೊಲ್ಲಿಸಿಕೊಂಬೆಚೆಲ್ವೆ ಕೇಳು ನಿನ್ನ ಹುಲ್ಲೆಗಣ್ಣ ನೋಟಕೊಲ್ವಬಗೆ ಗೆಲ್ಲಲಾರೆನೆಂದುಗಲ್ಲವ ಮುದ್ದಿಟ್ಟು ಮೈಯೆಲ್ಲ ಹುಡುಕಲುಕಲ್ಲೆದೆಯಲ್ಲ್ಲಿರೆ ಖೂಳ ನೊಂದ 19 ನಾರಿಯೊ ನೀನೇನು ಮಾರಿಯೊ ಇನ್ನೊಂದುಬಾರಿ ನೀ ಎನಗೆ ಮೋರೆ ತೋರಿಸೆಂದಧೀರನ ಸಮೀಪಬಾರದೆ ಓಡುವದಾರಿಯ ನೋಡುತಿರಲಾಗಬಾರದಂಥಾ ಪರದಾರರ ಮೋಹಿಪಕ್ರೂರಗೆ ಈ ರೂಪ ಘೋರವಾಗಿಹುದುಸಾರದ ಮಾತಿದು ಯಾರಾದರೇನೀಗಮಾರನ ತಾಪವ ಪರಿಹರಿಸುವೆ 20 ಸಮೀರಜ ಗುದ್ದಲು ಕೀಚಕಬಿದ್ದನು ಭೂಮಿಲಿ ಗೆದ್ದೆನೆನುತ ಅನಿ-ರುದ್ಧನ ಸ್ಮರಿಸುತಲೆದ್ದ ಭೀಮ 21 ಕೆಟ್ಟ ಕೀಚಕ ತಾ ತೊಟ್ಟ ಛಲದಿಂದಬೆಟ್ಟದಂಥ ದೇಹ ಬಿಟ್ಟಿನ್ನವನಪಟ್ಟಾಗಿ ತೋರುವೆ ದೃಷ್ಟಿಸು ಎನ್ನಲುಭ್ರಷ್ಟನ ನೋಡುವುದೇನೆಂದಳುಕೊಟ್ಟ ಭಾಷೆಯು ಈಗ ಮುಟ್ಟಿತು ನಿನಗೆಕೃಷ್ಣನ ದಯದಿ ಕಷ್ಟವು ಹಿಂಗಿತುಪಟ್ಟಣಕೀಸುದ್ದಿ ಮುಟ್ಟದ ಮುಂಚೆಗುಟ್ಟಲಿ ಪೋಗುವ ಥಟ್ಟನೆಂದ 22 ಅರಸಿ ನಿನ್ನೊಳು ಸರಸ ಬೇಕೆಂದಪುರುಷನ ಜೀವ ಒರೆಸಿ ಕೊಂದೆನುಹರುಷದೀ ಪುರದರಸು ನಮ್ಮನುಇರಿಸಿಕೊಂಡೊಂದೊರುಷವಾಯಿತುಬೆರೆಸಿದ ಸ್ನೇಹಕ್ಕೆ ವಿರಸ ಬಂತೆಂದುಸರಸಿಜಾಕ್ಷಿಯು ಕರೆಸಿ ನಿನ್ನೊಳಗಿರಿಸದಿದ್ದರೆ ಹಯವದನನಸ್ಮರಿಸಿ ಗದೆಯನು ಧರಿಸುವೆ23
--------------
ವಾದಿರಾಜ
ಭೀಮಾ ಹೋ ಭಲಾರೆ ನಿಸ್ಸೀಮ ಹೋ ಭಾಪುರೆ ಹನುಮ ಹೋ ಪ. ನಿಜಜಿತಕಾಮ ಹೋ ಕಾರುಣ್ಯಧಾಮ ಹೋ ರಾಮಚಂದ್ರನ ಚರಣಕಮಲಸರಾಮ ಕಾರ್ಯಧುರಂಧರನೆ ಅ.ಪ. ಆಂಜನೇಯ ಸುಕುಮಾರ ಅದ್ಭುತಮಹಿಮ ರಾಮ[ನ] ದೂತನೆ ಅಂಜದುದಧಿಯ ದಾಟಿ ಅಸುರನ[ವ] ನವ ಕಿತ್ತನೆ ಕಂಜಮುಖಿ ಜಾನಕಿಗೆ ಮುದ್ರೆಯನಿತ್ತ ಬಲುಪ್ರಖ್ಯಾತನೆ ಮಾಡಿಸಿದೆ ಕಲಿ 1 ಅವನಿತನುಜೆಯ ಚೂಡಾರತ್ನವ ಅಂಬುಜಾಕ್ಷನಿಗಿತ್ತನೆ ಸಮರಕನುಕೂಲವೆಂದು ರಾಮಗೆ ಸುಗ್ರೀವನ ಕಾಣಿಸಿದನೆ ಕಮಲನಾಭನ ಆಜ್ಞೆಯಿಂದಲಿ ಕಪಿಬಲವ ಕೂಡಿಸಿದನೆ ಬಹುಪರಾಕ್ರಮಿಯಹುದಹುದೊ ಕಲಿ 2 ಅಗಳುಸಾಗರ ಮಧ್ಯದಲ್ಲಿಹ ನಗರವನು ಬಂದು ಮುತ್ತಿದೆ ಬಗೆದು ಕಲ್ಮರಗುಂಡಿನಿಂದಲಿ ವಿಗಡದೈತ್ಯರ ಮಡುಹಿದೆ ಬಗೆಬಗೆ ಮಯಾಜಾಲವನು ಗೆದ್ದು ಭರದೊಳದ್ರಿಯ ತುಡುಕಿದೆ ಜಗತ್ಪತಿಯ ಮೂರ್ಬಲವನೆಲ್ಲವ ಸಂಜೀವನವ ತಂದುಳುಹಿದೆ 3 ಪೃಥ್ವಿಯೊಳಗುದ್ದಂಡ ದೈತ್ಯರ ಸುತ ಸಹೋದರರ ಮಡುಹಿದೆ ಹತವ ಮಾಡಿ ಶ್ರೀರಾಮ ಬಾಣದಿ ಹತ್ತು ತಲೆಗಳ ಕೆಡಹಿದೆ ಪ್ರತಿಶತೇಶ್ವರ ಶ್ರೀರಮಣಿಯನ್ನು ತಂದು ರಾಘವಗೆ ಒಡಗೂಡಿಸಿದೆ ಮಾಡಿಸಿದೆ ಕಲಿ 4 ಕುಂಡಲ ಚಾರು ಯಜÉ್ಞೂೀಪವೀತನೆ ಸೂರ್ಯಚಂದ್ರಮರುಳ್ಳನಖ ವಜ್ರಕಾಯದಲಿ ನಿರ್ಭೀತನೆ ವೀರಕದನಕಠೋರ ರಾಣಿಬೆನ್ನೂರ ಬಯಲಾಂಜನೇಯನೆನೀರಜಾಕ್ಷನ ಹೆಳವನಕಟ್ಟೆರಂಗನ ಪ್ರಿಯದಾಸನೆ ಕಲಿ 5
--------------
ಹೆಳವನಕಟ್ಟೆ ಗಿರಿಯಮ್ಮ
ಭೀಮಾತಟ ಹರಿ ವಿಠಲ | ಪೊರೆಯ ಬೇಕಿವಳಾ ಪ ಸಾಮಸನ್ನುತ ಹರಿಯೆ | ನಿಸ್ಸೀಮ ಮಹಿಮಾ ಅ.ಪ. ಗುರು ಕರುಣ ಇವಳಿಗಿದೆ | ಮರಳಿ ಹರಿ ಗುರುಭಕ್ತಿನೆರೆ ವೃದ್ಧಿ ಗೈಸುತಲಿ | ಪೊರೆಯೊ ಇವಳಾ |ಕರುಣನಿಧಿ ನೀನೆಂದು | ಆರು ಮೊರೆಯ ನಿಡುವೆನಾಪರಿ ಪರಿಯಲಿಂದಿವಳ | ಕೈ ಪಿಡಿಯೆ ಹರಿಯೇ 1 ಸಜ್ಜನರ ಸಂಗ ಕೊಡು | ದುರ್ಜನರ ದೂರಿರಿಸುಅರ್ಜುನನ ಸಾರಥಿಯೆ | ಮೂರ್ಜಗಕೆ ಒಡೆಯಾ |ಬೊಜ್ಜೆಯಲಿ ಬ್ರಹ್ಮಾಂಡ | ಸಜ್ಜು ಗೊಳಿಸಿಹ ಹರಿಯೆ |ಅರ್ಜುನಾಗ್ರಜ ವಂದ್ಯ | ಸಜ್ಜನರ ಪಾಲಾ 2 ತರತಮದ ಸುಜ್ಞಾನ | ಹರಿಯ ಸರ್ವೋತ್ತಮತೆಕರುಣಿಸೋ ಇವಳೀಗೆ | ಪರಮ ಪಾವನ್ನಾ |ಗರುಡ ಗಮನನೆ ಗುರೂ | ಗೋವಿಂದ ವಿಠ್ಠಲನೆಮೊರೆಯ ಲಾಲಿಸಿ ಇವಳ | ಪೊರೆಯೊ ಶ್ರೀ ಹರಿಯೇ 3
--------------
ಗುರುಗೋವಿಂದವಿಠಲರು
ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ ಸಾರ ವೇದಗಳ ವಿಧಿಗಿತ್ತ ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ- ತಾರಗಾರತಿಯ ಬೆಳಗಿರೆ 1 ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ ತೋರಿ ಬೆನ್ನಾಂತ ಸುರನುತ ತೋರಿ ಬೆನ್ನಾಂತ ಸುರನುತ ಕೂರ್ಮಾವ- ತಾರಗಾರತಿಯ ಬೆಳಗಿರೆ 2 ಧಾತ್ರಿಯ ಕದ್ದೊಯ್ದ ದೈತ್ಯನÀ ಮಡುಹಿದ ಎತ್ತಿ ದಾಡೆಯಲಿ ನೆಗಹಿದ ಎತ್ತಿ ದಾಡೆಯಲಿ ನೆಗಹಿದ ವರಾಹ- ಮೂರ್ತಿಗಾರತಿಯ ಬೆಳಗಿರೆ 3 ಕಡು ಬಾಲನ ನುಡಿಗೆ ಒಡೆದು ಕಂಬದೊಳುದಿಸಿ ಒಡಲ ಸೀಳಿದ ಹಿರಣ್ಯಕನ ಒಡಲ ಸೀಳಿದ ಹಿರಣ್ಯಕನ ನರಸಿಂಹ ಒಡೆಯಗಾರತಿಯ ಬೆಳಗಿರೆ 4 ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ ಈ ಮೂರು ಜಗವ ಈರಡಿಯ ಈ ಮೂರು ಜಗವ ಈರಡಿ ಮಾಡಿ ಅಳೆದ ವಾಮನಗಾರತಿಯ ಬೆಳಗಿರೆ 5 ಅಂಬರಕೇಶನ್ನ ನಂಬಿದ ಕತ್ರಿಯರ ಸಂಭ್ರಮ ಕುಲವ ಸವರಿದ ಸಂಭ್ರಮ ಕುಲವ ಸವರಿದ ಪರಶುರಾ- ಮೆಂಬಗಾರತಿಯ ಬೆಳಗಿರೆ 6 ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ ತಂದ ರಾವಣನ ತಲೆಹೊಯ್ದ ತಂದ ರಾವಣನ ತಲೆಹೊಯ್ದ ರಘುರಾಮ- ಚಂದ್ರಗಾರತಿಯ ಬೆಳಗಿರೆ 7 ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ ದುಷ್ಟ ಕಂಸನ್ನ ಕೆಡಹಿದ ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ ಕೃಷ್ಣಗಾರತಿಯ ಬೆಳಗಿರೆ 8 ರುದ್ರನ್ನ ತ್ರಿಪುರದೊಳಿದ್ದ ಸತಿಯರ ಬುದ್ಧಿ ಭೇದಮಾಡಿ ಕೆಡಿಸಿದ ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ ಬೌದ್ಧಗಾರತಿಯ ಬೆಳಗಿರೆ 9 ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು ತಾ ಪಿಡಿದು ಖಡ್ಗ ತುರಗವ ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ- ರೂಪಗಾರತಿಯ ಬೆಳಗಿರೆ 10 ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ ಹತ್ತವತಾರಿ ಹಯವದನ ಹತ್ತವತಾರಿ ಹಯವದನನ ಪಾಡುತ ಚಿತ್ರದಾರತಿಯ ಬೆಳಗಿರೆ 11
--------------
ವಾದಿರಾಜ
ಭೋಕ್ತಸದ್ಗೈಸೋ ಅವಧೂತ ಧ್ರುವ ಅನುಭವ ಬೀರೋ ನಿಧಾನ ಅನುದಿನ ಕಾಯೋ ಕರುಣ 1 ಅತಿಹರುಷದಲಿಡೋ ತಂದೆ ಸುಖದಾಯಕ ನೀನೆಂದೆ 2 ಅರುಹು ಕುರುಹು ಆಗುವ ಮನೆಮೂರ್ತಿದೋರೋ ಶ್ರೀಗುರುವರಮೂರ್ತಿ ನಿಮ್ಮ ಕೀರ್ತಿ 3 ಹಿಡಿಯಲವನಿವನೆಂದು ಸುಗುಣ ನೋಡದಿರೆನ್ನವಗುಣ ಮಾಡಲಿಕ್ಕೆನ್ನ ಪುನೀತನ ಒಡಯನಹುದೋ ನೀ ಪೂರ್ಣ 4 ಬಾಲಕ ನಿಜ ನಿಮ್ಮಿಂದ ಮಹಿಪತಿಯ ಪಾಲಿಸಬೇಕು ಸುದಯಾ ಸಲಹೊ ಸದ್ಗುರು ನಮ್ಮಯ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೋರನೆ ನಿಜಪರಿವಾರವೆಲ್ಲವೂ ಸೇರಿ ಪ. ಮಕರಕುಂಡಲಧರ ವಿಕಸಿತ ಮುಖಪದ್ಮ ಕೌಸ್ತುಭ ಶುಭ ವನಮಾಲಿ ಭಕುತ ವತ್ಸಲನೆಂಬ ಬಿರುದು ತೋರುತ ನಮ್ಮ ಶಕುತಿಗೆ ಸರಿಯಾದ ಸೇವೆ ಕೊಳ್ಳುವೆನೆಂದು 1 ಒಡೆಯನೀ ಗತಿಯೆಂಬ ಬಡವ ಭಕ್ತರನೆಲ್ಲು ಬಿಡನೆಂದು ಭವಸಿಂಧು ಪೊತ್ತನಿಂದು ತಡವ ಮಾಡದಲೆ ಸಂಗಡ ಬಂದೀ ನಿಲಯದಿ ನಡು ಮನೆಯಲಿ ನಿಂದು ಕೊಡುವೆ ಸೌಖ್ಯವನೆಂದು 2 ತುಳಸಿಧಾಮ ಸುಶೋಭಿತ ನಮಗೆ ಬೆಂ- ಬಲವಾಗಿರುವ ಸರ್ವ ಸ್ಥಳಗಳಲಿ ಅಲಸನಾಗದೆ ಶೇಷಾಚಲವಾಸನು ಶ್ರೀಭೂ- ಲಲನೆಯರೊಡಗೂಡಿ ನಲಿವ ಸಂಭ್ರಮದಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ ಅಸಮಸಾಹಸ ದೈತ್ಯರನು ಗೆಲಿದಿ ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ ಹೊಸಪರಿಯ ದೈತ್ಯರನು ಸಂಹರಿಸಿ ಎಸೆವ ಮಿಥಿಲಾ ಪುರದಿ ಜಾನಕಿ ಬಿಸಜನೇತ್ರೆಯ ಕೈಪಿಡಿದು ರನ್ನ ಹೊಸ ಪರಿಯ ರಥದೊಳಗೆ ಪೊರಟು ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1 ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು ದಶದಿಕ್ಕಿಗೆ ಪತ್ರವನು ಕಳುಹಿಸಲು ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು ಅಸದಳದವರ ಬೇಡಿ ಕಾಡಿಸಲು ವಸುಧೆಗೀಶನ ವನಕೆ ಕಳುಹಲು ಕುಶಲವಿಲ್ಲದೆ ಮರುಗೆ ದಶರಥ ಮಿಸುಣಿಮಣಿ ಸಿಂಹಾಸನ ತ್ಯಜಿ- ಸುತಲಿ ಪಿತೃ ವಾಕ್ಯವ ನಡೆಸಿದಗೆ 2 ಮಡದಿ ಸೀತಾ ಲಕ್ಷ್ಮಣರ ಕೂಡಿ ಬಿಡದೆ ದೈತ್ಯರನೆಲ್ಲ ಕಡಿದಾಡಿ ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು ಕಡುಜವದಿ ಸಾಗರದಿ ಸೇತುವೆಯ ಮಾಡಿ ತಡೆಯದಲೆ ರಾವಣನ ಮೂಲವ ಕಡಿದು ಕಮಲನಾಭ ವಿಠ್ಠಲನು ಮಡದಿಸಹಿತಾಯೋಧ್ಯೆ ಪುರದಲಿ ಸಡಗರದಿ ಸಾಮ್ರಾಜ್ಯವಾಳ್ದಗೆ3
--------------
ನಿಡಗುರುಕಿ ಜೀವೂಬಾಯಿ
ಮಂಗಳ ಮುಖ್ಯಪ್ರಾಣೇಶಗೆ ಜಯ ಮಂಗಳ ಮೂಜಗವಂದಿತಗೆ ಪ. ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ ಕಂಜನಾಭನ ಕಾರ್ಯದನುಕೂಲಗೆ ರಂಜಿಪ ಹನುಮಗೆ ಮಂಗಳ 1 ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ ಧಮಧುಮ ಮಾಡಿ ವನವ ಕಿತ್ತು ರಾಮ ಮುದ್ರಿಕೆ ಜಾನಕಿಗೆ ತಂದಿತ್ತÀ ಹೇಮಾದ್ರಿ ಹನುಮಗೆ ಮಂಗಳ 2 ಸುತ್ತ ಸಾಗರ ಮಧÀ್ಯದಲ್ಲಿ ಲಂಕೆಯ ಮುತ್ತಿ ವನಜಾಕ್ಷಿಯ ಮುಂದೆ ಬಂದು ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ ಖ್ಯಾತ ಹನುಮಗೆ ಮಂಗಳ 3 ಜಾತಿ ಬಂಧುಗಳ ಒಡಗೊಂಡು ಸಮುದ್ರದ ಸೇತುವ ಕಟ್ಟಿ ಸಾಹಸದಿಂದಲಿ ಸೀತಾಪತಿಯ ಬಲವ ನಡೆಸಿದ ಪ್ರ ಖ್ಯಾತ ಹನುಮಗೆ ಮಂಗಳ 4 ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು ಬೇಡವೆಂದು ಸೀತೆಯ ಭಯಬಿಡಿಸಿ ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ ಕೊಂಡಾಡಿಸಿಕೊಂಬಗೆ ಮಂಗಳ 5 ಬಲ್ಲಿದ ರಾವಣೇಶ್ವರನ ಮಾರ್ಬಲವನು ಕಲ್ಲು ಮರದೊಳಿಟ್ಟು ಕೆಡಹಿದಗೆ ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ ಧಲ್ಲ ಹನುಮಗೆ ಮಂಗಳ 6 ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ ಸ್ಥಿರವಾಗಿ ನಿಂದು ಭಕ್ತರ ಹೊರೆವ ಹೆಳವನಕಟ್ಟೆ ವೆಂಕಟೇಶನ ದೂತ ಚಲದಂಗ ಹನುಮಗೆ ಮಂಗಳ 7
--------------
ಹೆಳವನಕಟ್ಟೆ ಗಿರಿಯಮ್ಮ
ಮಂಗಳ ಮುದ್ದು ಕೃಷ್ಣನಿಗೆ ಜಯ ಮದನ ಜನಕ ಬಾಲ ಹರಿಗೆ ಪ. ಕಡಗೋಲ ನೇಣು ಪಿಡಿದಗೆ ಪಾಲ್ ಗಡಿಗೆ ಒಡೆದು ಇಲ್ಲಿ ಓಡಿ ಬಂದವಗೆ ಕಡಲ ತಡಿಯಲಿ ನಿಂತವಗೆ ಅಷ್ಟ ಮಡದಿಯರರಸನೆಂತೆಂಬ ಪುರುಷಗೆ 1 ಯತಿವರರಿಂದರ್ಚಿತಗೆ ಬಹು ಜತನದಿ ಭಕ್ತವರ್ಗಗಳ ಕಾಯ್ವನಿಗೆ ಯತಿ ಮಧ್ವರಾಯಗೊಲಿದಗೆ ನಿತ್ಯ ಚ್ಯುತ ದೂರವಾದ ಸರ್ವೇಶನೆಂಬುವಗೆ 2 ಗರುಡನ್ನ ಎಡದಿ ನಿಲಿಸಿದಗೆ ಬಲದಿ ಮರುತನ್ನ ನಿಲಿಸಿ ಕೊಂಡ್ಹರುಷಪಡುವನಿಗೆ ಕಿರಿದ್ವಾರದಿ ಮಧ್ವ ಉಳ್ಳವಗೆ ನಮ್ಮ ಸಿರಿಪತಿ ಗೋಪಾಲಕೃಷ್ಣವಿಠ್ಠಲಗೆ 3
--------------
ಅಂಬಾಬಾಯಿ
ಮಂಗಳ ಮೂರ್ಜಗದೊಡೆಯನಿಗೇ | ಶುಭಮಂಗಳ ಸ್ಪ್ಟಷ್ಟ್ಯಾದಿ ಕರ್ತನಿಗೇ ಪ ಮಂಗಳ ರವಿಕುಲ ತಿಲಕನಿಗೇ | ಶುಭಮಂಗಳ ಹನುಮನ ಒಡೆಯನಿಗೇ ||ಮಂಗಳ ಭೀಮನ ಸಲಹಿದಗೇ | ಶುಭಮಂಗಳ ಮಧ್ವ ಹೃದಾಂಬುಜ ರವಿಗೇ 1 ಮಂಗಳ ದಶಗ್ರೀವ ಛೇದಕಗೇ | ಶುಭಮಂಗಳ ಕೌರವ ಹಂತಕಗೇಮಂಗಳ ವ್ಯಾಸರ ಸೇವಕನೆನೆ | ನಮ್ಮಮಂಗಳ ದಶಮತಿ ಪೋಷಕಗೇ 2 ಮಂಗಳ ಸೀತೆಯ ತೋಷಕಗೇ | ಶುಭಮಂಗಳ ರುಕ್ಮಿಣಿ ಅರಸನಿಗೇಮಂಗಳ ಮಧ್ವರ ಪೊರೆದವಗೇ | ಶುಭಮಂಗಳ ಗುರು ಗೋವಿಂದ ವಿಠಲಗೇ 3
--------------
ಗುರುಗೋವಿಂದವಿಠಲರು
ಮಂಗಳಂ ಶ್ರೀರಂಗಗ ಮಂಗಳಂ ಇಂಗಿತ ಭಕ್ತರ ಅಂಗಸಂಗಾದವಗ ಪ ಸಿರಿತಳಕ ಮಂಗಳ ಕಾಲಿಯ ವರದನಾ ವರನಖಮಂಗಳ ಗಂಗೆ ಪಡಿದನಾ ಚರಣ ಕಮಂಗಳ ಅಹಿಲ್ಯ ಉದ್ಧಾರಗ ನೆರೆಜಂಘಗೆ ಮಂಗಳೆ ಶೊದಾನಂದನಾ 1 ತೊಡೆಗಳಿಗೆ ಮಂಗಳ ಗರುಡ ವಾಹನನಾ ನಡುವಿಗೆ ಮಂಗಳ ಧೃವ ಗೊಲಿದನ ಒಡಲ ಕಮಂಗಳ ಜಗವಳ ಕೊಂಬನಾ ಧೃಡ ನಾಭಿಗೆ ಮಂಗಳ ಬ್ರಹ್ಮ ಪಿತನಾ 2 ಉರ ಸಕ ಮಂಗಳ ಉಪಮನ್ಯು ಪ್ರೀಯನಾ ಸಿರಿವಕ್ಷಕ ಮಂಗಳ ಭೃಗು ರಕ್ಷನಾ ಕರಗಳಿಗೆ ಮಂಗಳ ಕರಿರಾಜ ವರದನಾ ಕೊರಳಿಗೆ ಮಂಗಳ ತುಳಸಿ ಧರನಾ 3 ಇದು ಶೃತಿಗೆ ಮಂಗಳ ಹನುಮನೇ ಕಾಂತನಾ ವದನಕ ಮಂಗಳ ವಿದುರ ಗೊಲಿದನಾ ಅದೇ ಫ್ರಾಣಕೆ ಮಂಗಳ ಪ್ರಲ್ಹಾದ ವತ್ಸಲನಾ ಮದನ ಮೋಹನನಾ 4 ಸಿರಸಕ ಮಂಗಳ ಫಣಿರಾಜಶಯನನಾ ದೊರೆತನಕ ಮಂಗಳ ಶ್ರೀ ಭೂರಮಣನಾ ಗುರುತನಕ ಮಂಗಳ ಉದ್ಬವತಾರಕನಾ ಕರುಣಿಗೆ ಮಂಗಳಾರ್ಜುನ ಬೋಧನಾ 5 ಪ್ರಭುಗೆ ಮಂಗಳ ಬಲಿ ವಿಭೀಷಣರ ಸ್ಥಾಪನಾ ಅಭಯಕ ಮಂಗಳಾಜಮೀಳ ಪಾಲನಾ ಅಭಿಮಾನಿಗೆ ಮಂಗಳಾ ಪಾಂಚಾಲಿಕಾಯಿದನಾ ಪ್ರಭೆಗೆ ಮಂಗಳಾ ರವಿ ಸೋಮಾತ್ಮಕನಾ 6 ಸಿರಿನಾಮಕ ಮಂಗಳ ನಾರದ ಪ್ರೀಯನಾ ಕ ಮಂಗಲ ಶಿವ ವಂದ್ಯನಾ ಗುರುವರ ಮಹಿಪತಿ ನಂದನಸಾರಥಿ ಬಿರದಿಗೆ ಮಂಗಳಾಂಬರೀಷ ನೊಡಿಯನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಡಿಲು ತುಂಬಿದರಮ್ಮ ಮುತ್ತೈದೆಯರೆಲ್ಲ ಕಡಲಕುಮಾರಿಗೆ ಸಡಗರದಿಂದ ಪ ಅರಿಶಿನ ಕುಂಕುಮ ಸುಗಂಧಸೇವಂತಿಗೆ ಪರಿಮಳ ಪಾದರಿ ಮಲ್ಲಿಗೆ ಮುಡಿಸಿ 1 ರಸಬಾಳೆ ಖರ್ಜೂರ ಖರ್ಬೂಜ ದಾಳಿಂಬೆಯ ಕಸಿಮಾವು ಸೇವು ಅಂಜೂರ ದ್ರಾಕ್ಷಿ 2 ಕೊಡಗಿನ ಕಿತ್ತಳೆ ದೃಢತರ ಸಿಹಿನಿಂಬೆ ಕಡುಸವಿ ಗಂಗಪಾಣಿ ಕಪಿತ್ಥಗಳನು 3 ಅಡಿಕೆ ಬೆಳ್ಳೆಲೆ ದ್ರಾಕ್ಷಿ ಗೋಡಂಬಿ ಸಕ್ಕರೆ ಒಡನೆ ಕೊಬರಿ ನಾರಿಕೇಳ ಬೆಲ್ಲದಚ್ಚು 4 ಮುತ್ತುರತ್ನ ಮಾಣಿಕ್ಯ ಅಪರಂಜಿಯ ಸ್ವರ್ಣ ವಿತ್ತ ಮುದ್ರೆಯ ಹಣ ಬಾದಾಮಿಬೆರಸಿ 5 ಬೆಳ್ಳಿ ತಟ್ಟೇಲಿ ಪಂಚವಾಳ ಪನ್ನೀರುದಾನಿ ಒಳ್ಳೆ ಗಂಧವು ಮಂಗಳ ದ್ರವ್ಯವಿಟ್ಟು6 ಜರತಾರಿ ಸೀರೆ ಕಾಪುಕುಪ್ಪಸ ಕೊಟ್ಟು ಹರುಷದಿ ಹರಸುತ್ತ ಅಕ್ಷತೆ ಸೂಸಿ 7 ಜಾಜಿಕೇಶವ ಸಹ ಮೂಜಗವಾಳೆ ರಾಜಿಪ ಮಕ್ಕಳೊಡೆ ನಿತ್ಯಸುಖಿಯಾಗು 8
--------------
ಶಾಮಶರ್ಮರು