ಒಟ್ಟು 24320 ಕಡೆಗಳಲ್ಲಿ , 137 ದಾಸರು , 9123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನಗೇಕೆ ಇಂಥ ದುಡುಕು ಪಾಕಶಾಸನಮಧ್ಯ ಪೋಕತನಗಳನ್ನುಸಾಕುಸಾಕಯ್ಯ ಕೃಷ್ಣ ಪ ಗೊಲ್ಲ ಬಾಲಕರು ನೀವೆಲ್ಲರು ಕೂಡಿಕೊಂಡುಗುಲ್ಲ ಮಾಡದೆ ಮೊಸರೆಲ್ಲ ಸವಿದೆಯಂತೆ ಕೃಷ್ಣ 1 ಪೂತನಿ ಮೊಲೆಯನ್ನು ಭೀತಿಯಿಲ್ಲದೆ ಉಂಡುಘಾತವ ಮಾಡಿದೆ ಮಾತನಾಡಯ್ಯ ಕೃಷ್ಣ2 ದುಷ್ಟ ಕಂಸನ ನೀನು ಕಷ್ಟವಿಲ್ಲದೆ ಮಡುಹಿಮುಷ್ಟಿಕನ ಕೊಂದೆ ದೃಷ್ಟಿ ತಾಕೀತಂದು 3 ಸಾರಥಿ 4 ಅಂಗಿಟೊಪ್ಪಿಗೆ ಉಂಗುರ ಉಡಿದಾರಶೃಂಗರಿಸಿಕೊಂಡು ರಂಗವಿಠಲ ಬಾರೋ 5
--------------
ಶ್ರೀಪಾದರಾಜರು
ಯಾಕೆ ಈ ದಾಸನನು ಸಲಹಲೊಲ್ಲೆ ಶ್ರೀಕಾಂತ ಭಕ್ತನನು ಕಾಯಲೊಲ್ಲೆ ಪ ತರಳತನದಲಿ ನಾನು ಪಾಪಗಳ ಮಾಡಿದರೆ ಪರಮಾತ್ಮ ಸದ್ಗುರುವೆ ತಿಳಿದು ಮಾಡಿದನೇ ನಿರುತ ಯೌವನದಲ್ಲಿ ಪಾಪಗಳ ಮಾಡಿದರೆ ಅರಿತು ಮಾಡಿದೆನೆಂದು ಬಗೆದೆಯಾ ಹರಿಯೇ 1 ಈಗ ವಾರ್ಧಿಕ್ಯದಲಿ ಪಾಪಮಾಡಿದೆನೆಂದು ನಾಗೇಶಶಯನನೇ ಮುನಿದೆಯಾ ಹರಿಯೇ ಜಾಗುಮಾಡದೆ ನೀನು ಅಜಮಿಳಗೆ ವಲಿದಂತೆ ಬೇಗನೇ ಸಲಹಯ್ಯ ನಾಮಸ್ಮರಿಸುವೆನೊ2 ಹರಿಸೇವೆಯನ್ನು ನಾ ಭಕ್ತಿಯಲಿ ಗೈವೇ ಹರುಷದಿಂ ಹರಿಯೆಂನ ಪಾಪಗಳ ಕ್ಷಮಿಸುತ್ತ ಸಿರಿ ಚನ್ನಕೇಶವನೆ ಮುನಿಯದಿರು ತಂದೆ 3
--------------
ಕರ್ಕಿ ಕೇಶವದಾಸ
ಯಾಕೆ ಕರುಣ ಬಾರದ್ಹರಿಯೆ ಲೋಕನಾಯಕ ನಿನಗೆ ಸರಿಯೆ ಪ ವ್ಯಾಕುಲದಲಿ ಮುಳುಗಿ ಬಹಳ ಶೋಕಪಡುವ ಜನರ ಕಂಡು ಅ.ಪ ತಂದೆ ತಾಯಿ ಬಂಧು ಬಳಗ ಇಂದು ಮುಂದು ಗತಿ ನೀನೆಂದು ಪೊಂದಿ ನಿನ್ನ ಭಜಿಸದಿರುವ ಮಂದ ಮತಿಗಳನ್ನೆ ಕಂಡು 1 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಿ ಮುಳುಗಿ ಮುಳುಗಿ ಕಾಮಜನಕ ನಿನ್ನ ಮರೆತ ತಾಮಸ ಜನರುಗಳ ಕಂಡು 2 ಜ್ಞಾನಿಗಳನೆ ಕಂಡು ಪರಮ ಸಾನುರಾಗದಿಂದ ಪೊರೆವೆ ಜ್ಞಾನ ಶೂನ್ಯರಾದ ಪರಮ ಅ- ಜ್ಞಾನಿ ಜನರುಗಳನೆ ಕಂಡು 3 ಪರಮಪುರಷ ನಿನ್ನ ಮಹಿಮೆ ನಿರುತ ಧ್ಯಾನಿಸುವವರ ಸಂಗ ಕರುಣದಿಂದ ಪಾಲಿಸಯ್ಯ ಪರಮ ಕರುಣಾನಿಧಿಯೆ ದೇವ4 ನೊಂದೆ ಭವದ ಬಂಧನದೊಳು ತಂದೆ ಕಮಲನಾಭ ವಿಠ್ಠಲ ಬಂಧನಗಳ ಬಿಡಿಸಿ ಸಲಹೊ ಮುಂದೆ ಶ್ರಮವ ಹರಿಸೊ ಬೇಗ5
--------------
ನಿಡಗುರುಕಿ ಜೀವೂಬಾಯಿ
ಯಾಕೆ ಕಷ್ಟ ಪಡುವೆ ನೀನು ಮಾಯಾ ಸಲಹು ನಮ್ಮಪ ಹಿರಿಯ ಮಗನು ಸರ್ವ ಜನರೊಳಿರುತ ಕಾಮಿಸುವನು ಜಗವ 1 ಮೊಮ್ಮಗನು ನಿನ್ನದಾಸಿಯಾ-ಜಗವ ಮೋಹಿಸುತ್ತಲಿರುವಳು 2 ನೀರೊಳಿರುತ ಮೋರೆ ಮುಚ್ಚಿಕೊರೆ ಮಸೆದು ಕಂಬದಿಂದ ಹಾರಿಯೆಳೆದು ಧಾರಿಣಿಯ ಧೀರ ನೃಪರನೆಲ್ಲಕೊಂದು 3 ಊರುಬಿಟ್ಟು ಸಾರಿ ವನವ ಜಾರನಾಗಿ ಭಂಗಪಡಿಸಿ ನಾರಿಯರನು ದಾರತೇಜಯೇರಿಮೆರೆದು ಬಾರಿ ಬಾರಿ 4 ಪರಮಪದವನಗಲಿ ಚಂಡ ಕಿರಣರಥವ ನುಳಿದು ಕ್ಷೀರ ಶರಧಿಯನ್ನು ಬಿಟ್ಟು ವ್ಯಾಘ್ರಗಿರಿಯೊಳಿರುವ ವರದ ವಿಠಲ 5
--------------
ಸರಗೂರು ವೆಂಕಟವರದಾರ್ಯರು
ಯಾಕೆ ಕಷ್ಟ ಪಡುವೆ ಲೋಕನಾಯಕ ಮಾಯಾ ಜೋಕೆಯಿಂದ ಸಲಹು ನಮ್ಮ ಪ ಸಿರಿಯೆ ಪಟ್ಟದರಸಿ ನಿನಗೆ ಕಿರಿಯ ಮಡದಿ ಧರಣಿಯಾಗೆ ಹಿರಿಯ ಮಗನು ಸರ್ವಜನರೊಳಿರುತ ಕಾಮಿಸುವನು ಜಗವ 1 ಮಗನು ಜಗವ ನಿರ್ಮಿಸುವನು ಮಗುಳೆಲಯವಗೈವ ಮೊ- ಮ್ಮಗನು ನಿನ್ನ ದಾಸಿ ಈ ಜಗವ ಮೋಹಿಸುತ್ತಲಿರವಳು 2 ನೀರೊಳಿರುತ ಮೋರೆ ಮುಚ್ಚಿ ಕೋರೆ ಮಸೆದು ಕಂಬದಿಂದ ಹಾರಿಯೆಳೆದು ಧಾರಿಣಿಯ ಧೀರ ನೃಪರನ್ನೆಲ್ಲ ಕೊಂದು 3 ಊರುಬಿಟ್ಟು ಹಾರಿ ವನವ ಜಾರನಾಗಿ ಭಂಗಪಡಿಸಿ ನಾರಿಯರನು ದಾರ ತೇಜಿಯೇರಿ ಮೆರೆದು ಬಾರಿ ಬಾರಿ4 ಪರಮಪದವನಗಲಿ ಚಂಡ ಕರಣರಥವ ನುಳಿದು ಕ್ಷೀರ ಶರಧಿಯನ್ನು ಬಿಟ್ಟು ವ್ಯಾಘ್ರಗಿರಿಯೊಳಿರುವ ವರದವಿಠಲ5
--------------
ವೆಂಕಟವರದಾರ್ಯರು
ಯಾಕೆ ಕಳವಳವೋ-ಮಾನಸ ನಿನಗ್ಯಾಕೆ ಕಳವಳವೋ ಪ ಶ್ರೀಕಳತ್ರನು ಜಗದೇಕ ನಾಯಕ ನಿರಲ್ಯಾಕೆ ಅ.ಪ. ಹೊಟ್ಟೆಯೊಳಿರಲನ್ನ ವಿಟ್ಟು ಕಾಪಾಡಿದ ಸೃಷ್ಠಿಪಾಲಕ ಪರಮೇಷ್ಠಿಜನಕ ನಿರೆ 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೇ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪವರದ ವಿಠ್ಠಲಾ ಪದ್ರಕ್ಷಕ ನಿರಲ್ಯಾಕೆ ಕಳವಳವೋ 3
--------------
ಸರಗೂರು ವೆಂಕಟವರದಾರ್ಯರು
ಯಾಕೆ ಕಳವಳವೋ-ಮಾನಸ ನಿನಗ್ಯಾಕೋ ಕಳವಳವೋ ಪ ತ್ರೀಕಲತ್ರನು ಜಗದೇಕನಾಯಕನಿರಲ್ಯಾಕೆ ಅ.ಪ ಹೊಟ್ಟೆಯೊಳಿರನ್ನವಿಟ್ಟು ಕಾಪಾಡಿದ ಸೃಷ್ಟಿ ಪಾಲಕ ಪರಮಷ್ಠಿ ಜನಕನಿರಲು 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೆ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪÀ ವರದವಿಠಲಾಪದ್ರಕ್ಷಕನಿರಲು 3
--------------
ವೆಂಕಟವರದಾರ್ಯರು
ಯಾಕೆ ಕೃಪೆ ಬಾರದೋ ನಿನಗ್ಯಾಕೆ ದಯಬಾರದೊ ಪ ಲೋಕರಕ್ಷಕ ದುಷ್ಟಕಾಲಶಿಕ್ಷಕ ನಿನಗ್ಯಾಕೆ ಅ.ಪ ಪಕ್ಷಿವಾಹನನೆನಿಸಿ ಲಕ್ಷಿಸದಿರಲು ಲೋಕದಿ ಲಕ್ಷಣವೆಲ್ಲವು ಶುಭಲಕ್ಷಣ ಮೂರುತಿ ನಿನಗ್ಯಾಕೇ 1 ಕುಕ್ಷಿಯೊಳೀ ಜಗವನಿಟ್ಟು ರಕ್ಷಿಸುವ ಲಕ್ಷ್ಮೀಪತಿ ದಕ್ಷಿಣ ಶೇಷಾದ್ರಿವಾಸ ರಕ್ಷಿಸು ನಿನಗ್ಯಾಕೇ ಕೃಪೆ 2 ವಾಸವಸನ್ನುತ ಶ್ರೀನಿವಾಸ ನಿನ್ನದಾಸನೊಳು ದೋಷವನೆಣಿಸದೆ ಕಾಯೊ ದೋಷರಹಿತನೆ ನಿನಗ್ಯಾಕೆ 3 ಶುಭ ದೃಷ್ಟಿಯಿಂದ ನೋಡಿ ಎನ್ನ ಕಷ್ಟವ ಬಿಡಿಸಿ ಮನದಿಷ್ಟವ ಪಾಲಿಸು 4 ವಾರಣವರದಭವ ತಾರಣ ಚರಣ ಗುಣ ಪು ರಾಣ ವರದವಿಠಲ ಕಾರುಣಿಕರರಸ ನಿನಗ್ಯಾಕೇ 5
--------------
ವೆಂಕಟವರದಾರ್ಯರು
ಯಾಕೆ ಕೃಪೆ ಬಾರದೋ-ಲೋಕರಕ್ಷಕ ನಿನಗ್ಯಾಕೇ ಪ ಲೋಕ ರಕ್ಷಕ ದುಷ್ಟಕಾಕ ಶಿಕ್ಷಕ ನಿನಗ್ಯಾಕೇ ಅ.ಪ. ಪಕ್ಷಿವಾಹನನೆಸಿ ಲಕ್ಷಿಸದಿರಲು ಲೋಕದಿ ಶುಭ ಲಕ್ಷಣ ಮೂರುತಿ ನಿನಗ್ಯಾಕೆ ಕೃಪೆ 1 ಕುಕ್ಷಿಯೊಳೀ ಜಗವನಿಟ್ಟು ರಕ್ಷಿಸುವ ಲಕ್ಷ್ಮೀಪತಿ ದಕ್ಷಿಣಶೇಷಾದ್ರಿವಾಸ ರಕ್ಷಿಸುವ ನಿನಗ್ಯಾಕೇಕೃಪೆ 2 ಸನ್ನುತ ಶ್ರೀನಿವಾಸ ನಿನ್ನ ದಾಸನೊಳು ದೋಷವೆಣಿಸದೆ ಕಾಯೊದೋಷರಹಿತನೆ ನಿನಗ್ಯಾಕೇ 3 ಶುಭ ದೃಷ್ಟಿಯಿಂದ ನೋಡಿಯನ್ನ ಕಷ್ಟವ ಬಿಡಿಸಿ ಮನದಿಷ್ಟವ ಪಾಲಿಸು 4 ಭವ ತಾರಣ ಚರಣಗುಣ ಪೂರಣ ವರದ ವಿಠಲ ಕಾರುಣಿಕರರಸನಿನಗೆ5
--------------
ಸರಗೂರು ವೆಂಕಟವರದಾರ್ಯರು
ಯಾಕೆ ಕೆಡುವೆ ಖೋಡಿ ಮನವೆ ಪ ಲೋಕದಿರವ ನೋಡಿ ನೂಕುನುಗ್ಗಾಗಿ ಕಾಕುಗುಣದಿ ಯಮಲೋಕ ಪಡೆವುದವಲೋಕನ ಮಾಡಿ ಅ.ಪ ಭ್ರಮಿಸಬಾರದ ಭ್ರಮಿಸಿ ಮನಸೆ ಕ್ರಮಗೆಟ್ಟಾಚರಿಸಿ ಶಮೆದಮೆ ಅರಿಯದೆ ಸುಮನರ ನೋಡದೆ ಸುಮ್ಮನಳಿವೆ ಈ ಸಮಯ ಸಿಗುವುದೇ1 ತಂತು ತಿಳಿಯದ್ಹೋದಿ ಜಗತ್ತಿನ ಚಿಂತನೆಗೊಳಗಾದಿ ಸಂತಸ ವಹಿಸದೆ ಸಂತರ ತಿಳಿಯದೆ ಅಂತರವರಿಯದೆ ಅಂತ್ಯಕೀಡಾದಿ2 ಪಾಮರ ನೀನಾದಿ ನಾಶನ ತಾಮಸ ಅಳಿದ್ಹೋದಿ ಸ್ವಾಮಿಯೊಳಾಡದೆ ಕ್ಷೇಮವ ಪಡೆಯದೆ ನಾಮಭಜಿಸಿ ಶ್ರೀರಾಮನ ಕೂಡದೆ 3
--------------
ರಾಮದಾಸರು
ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಪ ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1 ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ | ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2 ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ | ಕೆಟ್ಟು ಪೋಗುವಿ ಯಾತಕೋ ಜೀವನವೆ || ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ | ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
--------------
ವಿಜಯದಾಸ
ಯಾಕೆ ಜೀವನೆ ಒಣ ಉಸಾಬರಿ ನಿನ ಗ್ಯಾಕೆ ಲೋಕದ ಸುಳ್ಳೆ ಕಿರಿ ಕಿರಿ ಪ ಪಾದ ಬಿದ್ದು ಮೊರಿ ಪರ ಲೋಕ ಪದವಿ ಸಂಪಾದಿಸಿ ಮೆರಿ ಅ.ಪ ಇಷ್ಟಬಂಧು ಸತಿಸುತರೆಲ್ಲ ನೀನು ಬಿಟ್ಟು ಹೋಗ್ವಾಗ್ಯಾರು ದಿಕ್ಕಿಲ್ಲ ಎಷ್ಟು ಸಂಪಾದಿಸಿದ ಗಳಿಕೆಲ್ಲ ನೀನು ಕಟ್ಟಿಕೊಂಡು ಸಂಗಡೊಯ್ಯೋಣಿಲ್ಲ ಕುಟ್ಟಿ ಯಮದೂತರು ಕಟ್ಟಿ ಎಳೆಯುವಾಗ ನೀ ಗಟ್ಟಿ ಮಾಡಿದ್ದು ಎಲ್ಲ ಬಟ್ಟಬೈಲೆ 1 ಯಾರು ಮೆಚ್ಚಿದರು ಫಲವಿಲ್ಲ ನಿನ ಗ್ಯಾರು ಮುನಿದರೇನು ಕೆಡುಕಿಲ್ಲ ನೀರಮೇಲಿನ ಲಿಪಿಯಂತೆಲ್ಲಜಗ ಸಾರ ಸುಳ್ಳು ಖರೆವೊಂದಿಲ್ಲ ತೋರುವ ಬಿಸಿಲಿನ ವಾರಿಯಂತೆ ಮಾಯಾ ಕಾರ ತಿಳಕೋ ತೋರುವುದೆಲ್ಲ 2 ಬಂದಿ ಇಲ್ಲಿಗೆ ಬಹಳ ಲಗುಮಾಡಿ ಮತ್ತೆ ಮುಂದೆ ಹೋಗುವುದೆಲ್ಲಿ ತಿಳಿ ಮಂದನಾಗದೆ ಚಾಚಿ ಜ್ಞಾನಕುಡಿ ಅಲ್ಲಿ ನಿಂದು ನೋಡು ನಿಜ ಹುಡುಕಾಡಿ ಇಂದಿನ ಸಮಯವು ಮುಂದೆ ಸಿಗುವುದೇನೋ ತಂದೆ ಶ್ರೀರಾಮಪಾದಕ್ಹೊಂದಿ ಮುಕ್ತಿಯ ಪಡಿ3
--------------
ರಾಮದಾಸರು
ಯಾಕೆ ದಯ ಬಾರದೋ | ಕೃಷ್ಣಾ | ಯಾಕೆ ದಯಾ ಬಾರದೋ || ಪ ಕಾಕು ಜನರ ಸಂಗ ಕಳೆದು | ವ್ಯಾಕುಲ ನೀಗುವುದಕ್ಕೆ ಅ.ಪ. ಮಾನ ಅಪಮಾನವೆಲ್ಲ | ಮಾನ ನಿಧಿಯಾಧೀನವೆಂದುಸಾನುರಾಗದಿ ಧೇನಿಸುವನ | ಧೀನನ ಪರಿಪಾಲಿಸಲೂ 1 ಭಾರ | ಸತತ ನಿನಗಲ್ಲದಲೇ2 ಪರರಿಗೆ ಶಿರವ ಬಾಗಿ | ಕರವನೊಡ್ದಿಸದಲೇಶರಣರ ಸಲಹೊ ಗುರು | ಗೋವಿಂದ ವಿಠಲನೆ 3
--------------
ಗುರುಗೋವಿಂದವಿಠಲರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ಯಾಕೆ ದಯವುಬಾರದು ಗೋಪಾಲಕೃಷ್ಣಾ ಪ ಕರುಣನಾದ ದೇವ ಅ.ಪ ಬಿಡದಾನಂದಾದಿ ಇನ್ನು ಇಂದಿರೆ ರಮಣ 1 ನಿನ್ನ ಧ್ಯಾನಾವೇಗತಿ ಎನ್ನುತ ನೀ ಎಂದೆಂದಿಗಾಪ್ತನು ಛಲದಾನಿ ಇರುವದು ನಿನಗೆ ಎನ್ನ ದಿವ್ಯದಾನಿಗಳರಸ 2 ತ್ರಿಜಗವಂದಿತಧೊರಿಯೆ ಸದ್ಗುಣಶೀಲ ಸುಜನರ ಭಾಗ್ಯನಿಧಿಯೆ ಜಲದೊಳು ಯಿ ----- ಸುರನುತ-----ತ ಪರಾಕ್ರಮ 3
--------------
ಹೆನ್ನೆರಂಗದಾಸರು