ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶ್ರೀನಿವಾಸ | ಪಾಲಿಸು |ಶರಣ ಜನರ ಪೋಷಾರಿಪಕರುಣದಿ ನಿನ್ನಯ ಚರಣವ ನಂಬಿದ |ಶರಣನಭವಭಯ ದುರಿತವ ಕಳೆಯುವಅ.ಪನಂಬಿದವರ ಪೊರೆವಾ | ಭಕ್ತ ಕು | ಟುಂಬಿ ವಾಸುದೇವಾ |ಕಂಬುಕಂಧರಕಮ | ಲಾಂಭಕ ಶ್ರೀವರಶಂಭು ಸಖನೆ | ಶುಕ್ಲಾಂಬರಧರಹರಿ||ಶರಣು||1ಪದ್ಮನಾಭಎನ್ನ | ಪಾಲಿಸು | ಪದ್ಮಾವತಿರಮಣಾ |ಪದ್ಮನಯನ ಮುಖ | ಪದ್ಮವ ತೋರಿಸುಪದ್ಮೋದ್ಭವನುತ | ಪದ್ಮಮಾಲಾಧರ ||ಶರಣು||2ತಿರುಪತಿ ಗಿರಿವಾಸಾ |ಕಾಣಿಕೆ| ಬರಲತಿ ಸಂತೋಷಾ |ಪರಿಪರಿ ವಿಧದಲಿ | ಹರಕೆಯ ತರಿಸುವ |ಉರಗಶಯನ ಗೋ | ವಿಂದನೆ ಶ್ರೀಹರಿ ||ಶರಣು||3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಶರಣು ಸಕಲ ಪ್ರಾಣನಾಥಸರಸಿಜಭವ ಪದವಿಭೋಕ್ತಮೂರವತಾರಿಮುಖ್ಯಪ್ರಾಣಹರಿಪರಾಯಣ ತೇ ನಮೊ ಪ.ತುತ್ತಿಸಿನನ ಬಿಸುಟು ಜಗದಕರ್ತರಘು ಪುಂಗವನ ಪದದಿಭಕ್ತಿ ಬಲಿದು ಇತರ ವಿಷಯಚಿತ್ತನಾಗದ ಸುಗುಣಧೀಹತ್ತು ಹೆಡಕಿನವನ ವನವಕಿತ್ತು ಸಭೆಯನುರುಹಿ ಭಯವಬಿತ್ತಿಜನನಿಕುಶಲ ಒಡೆಯಗಿತ್ತ ಹನುಮ ತೇ ನಮೊ 1ಮುಪ್ಪಿನವಳ ಮಗನನರಿದು ಕೃಷ್ಣಾರ್ಪಣವನೆ ಮಾಡಿನೃಪರಕಪ್ಪಹೊರಿಸಿ ತಂದು ಮಖಕೆಒಪ್ಪಿಸಿದ ಅಗ್ರಜಾತಗೆಭೂಪನಣ್ಣನ ಅಣುಗರನ್ನುಅಪ್ಪಳಿಸಿ ತಮಸಕೆ ಕಳುಹಿತಪ್ಪದೆಂದೂ ರಂಗ ಸೇವೆಯೊಳಿಪ್ಪ ಶ್ರೀಭೀಮ ತೇ ನಮೊ 2ವಿಷ್ಣುಭಟರ ಮತಿಗೆ ಕಲಿಯುವೇಷ್ಟಿಸಿರಲು ಬ್ರಹ್ಮಸೂತ್ರಸ್ಪಷ್ಟ ತಿಳುಹಿ ತಾತ್ವಿಕ ಜನಶ್ರೇಷ್ಠಿ ನೆರಹಿ ಮಿಥ್ಯರಭ್ರಷ್ಟವಚನ ನೀಕರಿಸಿ ನಿಜೇಷ್ಟಮತರ ಹೊರೆದೆ ಗುರುವರಿಷ್ಟ ಮಧ್ವಪ್ರಸನ್ನವೆಂಕಟಕೃಷ್ಣ ಮತ್ಯ ತೇ ನಮೊ 3
--------------
ಪ್ರಸನ್ನವೆಂಕಟದಾಸರು
ಶಾರದೆ ಜಗದ್ಭರಿತೆ ಸರಸ್ವತೆ ||ಸಾರಸದ್ಗುಣಚರಿತೆವಾರಿಜೋದ್ಭವನ ಪಾದಾರವಿಂದಾರ್ಚಿತೆ |ತೋರೆ ದಯವ | ಕೀರವಾಣಿ ಕಲ್ಯಾಣಿಯೆ ||ಶುಭಕರೆ ಶುಭವದನೇ ಸರ್ವೇಶ್ವರಿ |ಪ್ರಭಾಕರ ಪ್ರಭಾವದನೆ ಪಇಭರಾಜಗಮನೆ| ಸದ್ಬುದ್ಧಿಪ್ರದಾಯಿನಿ |ಅಭಯನೀಯುತಲೆನ್ನ | ಸಲಹು ಸ್ತ್ರೀಸಭಾಶೋಭೆ 1ತಾಯೆ ಮಯೂರ ವಾಹಿನೀ | ಜಯ ಜಯ ಜಗ -|ನ್ಮಾಯೆ ಮೋಹನ ರೂಪಿಣೀ ||ತೋಯಜಕುಸುಮದಳಾಯತ | ಲೋಚನೆ |ಕಾಯೇ ದಯದಿಭವಹೇಯವಿದಾರಿಣಿ 2ನೀತೆ ಪರಮಪುನೀತೆ | ಪಾಲಿಸು ಲೋಕ |ಮಾತೆ ಪಾವನ ಚರಿತೆ |ದಾತೆ ತ್ರಿಲೋಕ | ವಿಖ್ಯಾತೆ ಬ್ರಹ್ಮನ ಪ್ರೀತೆ ಆತ್ಮರಕ್ಷಿಣಿ |
--------------
ಗೋವಿಂದದಾಸ
ಶಿವ ಮಹಾಗುರು ಸಹಜಾನಂದಭವಹರಮೃಡಬ್ರಹ್ಮಾನಂದ|xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭವಮೃಡಸಾಂಬಶಿವಾನಂದ | ದಶಭುಜ ಪಂಚವದನನೇತ್ರ |ದಳಪಂಚಕ ಮಂಗಳಗಾತ್ರ| ಭಸಿತವಿಲೇಪಸುಜನಸ್ತೋತ್ರ |ಪಶುಪತಿಬಿಸಜಾಕ್ಷನಮಿತ್ರ1ಸುರನದಿಶಿರದಲಿಟ್ಟಿಹನು | ಸ್ಮರನ ಉರಿಗಣ್ಣಿಲಿಸುಟ್ಟಿಹನು |ಉರಗಭೂಷಣ ಕುಂಡಲದ್ವಯನ |ಪರಮಪುರಷ ಗೌರೀವರನ2ಅಮರೇಂದ್ರಾದಿ ಪದಾರ್ಚಿತನು ಡಮರುತ್ರೀಶೂಲ ಮೃಗಾಯುಧನು | ಶಮನ ಮಹಾ ಭಯಸಂಹರನು | ಸುಮನ ಸುಭಕ್ತರ ಪೊರೆವವನು3ಗಜಚರ್ಮಾಂಬರಧರ ಯತಿ | ರಜನೀಪತಿ ಶೇಖರಗೋಪತಿಭಜಕ ಜನಗಳಾಂತರ ಸ್ಫೂರ್ತಿ |ಅಜಸುರನುತ ಸಚ್ಚಿನ್ಮೂರ್ತಿ4ಸಿದ್ಧರ ಮಡುವಿನೊಳಗೆ ವಾಸಾ |ಬದ್ಧಜೀವಂಗಳುದ್ಧರಿಪ ಈಶಾ |ಶುದ್ಧ ಲಕ್ಷಕೆ ಉಪದೇಶ | ಅದ್ವಯಗುರುಶಂಕರ ವೇಷಾ5
--------------
ಜಕ್ಕಪ್ಪಯ್ಯನವರು
ಶಿವ ಸತ್ತ ಎಂಥ ಆಶ್ಚರ್ಯವು ಇದು ನೋಡಿ |ಕವಿಗಳು ಮನಕ ತಂದು ||ಭುವನತ್ರಯಗಳಲ್ಲಿ ಪ್ರಖ್ಯಾತವಾಗಿದೆ |ಅವಿವೇಕಿಗಳ ಮಾತಲ್ಲಾ ಪಅಧಮರು ಬಹು ಬಗೆಯಿಂದಲ್ಲಿ ಘಳಿಸೀದಾ |ಬದುಕು ವ್ಯರ್ಥವಾಹದು ||ಬುಧರ ಪದಾರ್ಥವು ಸಾರ್ಥಕವಾಹದೆಂಬು |ದಿದೆ ಸಾಕ್ಷಿ ಎನಬಹುದೂ 1ಭೂಭುಜರಿಗೆ ಭೂಷಣಾದವು ಆಯುಧ |ಈ ಭೂಮಿ ಪೊತ್ತ ವ್ಯಾಳಾ ||ಆ ಭಿಕ್ಷುಕನ ಕುಟುಂಬವ ರಕ್ಷಿಸುತಿಹ್ಯದು |ಶೋಭಿಸುತಿಹ್ಯ ಕಪಾಲಾ 2ಮಂದೀಯ ನಂಜಿಸುತಿಪ್ಪದು | ಆತನಹಿಂದೆ ಮುಂದಿರುವ ಗಣಾ ||ನಂದೀ ಪಿತೃಗಳಿಗೆ ಕೈವಲ್ಲ್ಯಾ ತೋರಿತು |ಸಂದೇಹವಿನಿತಿಲ್ಲವೂ 3ಸೋಮಕಂಣಾದ ಜಗತ್ತೆಕ್ಕ ದಿಕ್ಕಿಗೆ |ಸ್ವಾಮಿ ಎನಿಸಿದ ವನ್ಹೀ ||ಧೀಮಂತರಾತನ ಮಡದೀಯ ಪೂಜಿಸಿ |ಶ್ರೀಮಂತರಾಗೂವರೂ 4ಮೌನಿಗಳಿಗೆ ಚರ್ಮ ವೈಷ್ಣವರಿಗೆ ಭಸ್ಮ |ತಾನು ಪ್ರೀಯಕರಾದೀತು ||ಪ್ರಾಣೇಶ ವಿಠಲಾನೊಳರ್ಧಾಂಗ ವಾಗಭಿ |ಮಾನಿಯೊಳರ್ಧವಿಟ್ಟಾ 5
--------------
ಪ್ರಾಣೇಶದಾಸರು
ಶಿವನಾದ ಮೇಲೆ ಶಿವತಾನೆಂಬರಿವು ಇರಬೇಕುಪಕಂಗಳ ಮುಟ್ಟಿ ತೆರೆಯಲು ಬೇಕುಕಂಗಳೊಳು ಆನಂದವಿರಬೇಕುಸಂಗಹರನಾಗಿ ಇರಬೇಕು1ದೇಹವೆ ತೂಗುತಲಿರುತಿರಬೇಕುದೇಹವೇ ತಾನೆಂದರಿತಿರಬೇಕುದೇಹವ ಮರೆತಿರಬೇಕು2ಜಗವಿದು ಎನ್ನಲಿ ಜನನವೆನಬೇಕುಜಗವಿದು ಎನ್ನಲಿ ಲಯವೆನಬೇಕುಜಗಕೆ ತಾ ಸಾಕ್ಷಿಯಿರಬೇಕು3ನೀತಿಯ ಶಮೆದಮೆ ಶಾಂತಿಯು ಇರಬೇಕುಪಾತಕವೆಲ್ಲವ ಹರಿದಿರಬೇಕುಮಾತು ಮಾತಿಗೆ ಗುರುವೆನಬೇಕು4ಸುಧೆಶರದಿಯ ಸುಖ ತುಳುಕಲಿ ಬೇಕುವಿಧವಿಧ ಗುಣಗಳ ಬಿಟ್ಟಿರಬೇಕುಚಿದಾನಂದಗುರುತಾನೆನಬೇಕು5
--------------
ಚಿದಾನಂದ ಅವಧೂತರು
ಶಿವನೀ ಹ್ಯಾಗಲ್ಲ ಮನುಜಶಿವನೀಹ್ಯಾಗಲ್ಲಶಿವನೇ ಜೀವನು ಬ್ರಹ್ಮಾಂಡಪಿಂಡಾಂಡಪಶಿವಜೀವನು ತಿಳಿ ತಾನೊಬ್ಬಕಣ್ಣೇ ಸೂರ್ಯನು ಕಿವಿಯೇ ದಿಕ್ಕುಚೆನ್ನಾದ ಪ್ರಾಣವೆ ತಾವಶ್ವಿನಿ1ಜಿಹ್ವೆಯೇ ವರುಣತ್ವ ತ್ಪಕ್ಕುತಾವಾಯುವುಗುಹ್ಯವೇ ವಿಧಾತೃ ಉಪಸ್ಥವೇ ಮೃತ್ಯು2ವಾಕ್ಕುತಾನಗ್ನಿಪಾದಉಪೇಂದ್ರನುಚೊಕ್ಕೂಟದಿಂತಿಳಿ ಪಾಣಿಯೆ ಇಂದ್ರನು3ಮನವೆ ಚಂದ್ರನು ಬುದ್ಧಿಯೆ ಬ್ರಹ್ಮನುಘನಚಿತ್ತವು ತಾನದು ಕ್ಷೇತ್ರಜÕ4ಅಹಂಕಾರ ರುದ್ರನು ಜ್ಞಾತೃವೇ ಈಶ್ವರಶಂಕರ ಚಿದಾನಂದನೀ ಪರಮಾತ್ಮನು5
--------------
ಚಿದಾನಂದ ಅವಧೂತರು
ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ ||ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ಪಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |ಹಿಂಗಿಕೊ ಭವಜನ್ನ್ಯ ದುಃಖ ||ಸಂಗಾವಾಗಿ ರುದ್ರಾಕ್ಷಿಯಂಗಾಳರ್ಚಿಸೂತಾ | ನಿಃಸಂಗನಾಗೊ ದುರ್ವಿಷಯದೀ 1ಸುವಿವೇಕಿ ಮನಸಿಲಿಂದಾ ಶಿವಶಬ್ದವ ಶೋಧಿಸಿ |ಕವಿಗಳ ಮುಖದಿಂದ ತಿಳಿಯೋ ||ನವತ್ರಿಪತ್ರಯುಕ್ತ ಬಿಲ್ವಾ ಸಮರ್ಪಣೆ ಮಾಡೊ |ಸವೆಯಾದಂಥ ಪದವೈದೂವಿ2ಭಜಿಸೋ ವೀಭೂತಿಯನ್ನು ದ್ವಿಜಸ್ತೋಮಾಕೆರಗಾದೀರೊ |ಪ್ರಜಗಳಿಗೆ ತೋರದಿರು ಭಾವಾ ||ಅಜಪ್ರಾಣೇಶ ವಿಠ್ಠಲಾನು ಅಜಿನಾಂಬರ ಸಮನೆನಬ್ಯಾಡಾ |ವಿಜಯವಂತನಾಗುವೀ ಜಗದೀ 3
--------------
ಪ್ರಾಣೇಶದಾಸರು
ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ ಪಶೇಷಶಯನ ಭವದೋಷರಹಿತ ಭಕ್ತಪೋಷಣಕೌಸ್ತುಭಭೂಷಾ ಅಶೇಷಾತ್ಮ ಶೇಷಾ1ಅರಿದರಕರ ಕನಕಾಂಬರಧರ ಶ್ರೀ ಯಲಮೇಲ್‍ಮಂಗಾ ವಿಹಾರ ಉದಾರೀ ವಿಧೀರಾ 2ವಿಷಚರಯುಗಮೃಗವೇಷಾ ದ್ವಿನೃಷಚವೇಷಾಪುರಿ ಕುಲದೂಷಾಮಾವಿಷಯ ಸಂತೋಷಾ3ಕಾಮಜನಕ ತುಲಸೀರಾಮದಾಸ ಹಿತಕಾಮಿತಾರ್ಥವನೀವ ಓ ಶ್ರೀನಿವಾಸ 4
--------------
ತುಳಸೀರಾಮದಾಸರು
ಶೇಷಾಚಲನಾಯಕ ಸಲಹಯ್ಯಾಶೇಷದುರಿತ ದೂರಕ ಪ.ಮಕರಾಲಯಸದನಮಾಧವಮಕರಕುಂಡಲಕರಣಮಕರಕೇತನತಾತಮಾಕಾಂತವಿಲಸಿತಮಕುಟಕೌಸ್ತುಭಭೂಷಿತ ಮುಕುಂದ1ಸ್ವಾಮಿಪುಷ್ಕರಿಣೀವಾಸ ಮುಕುಂದಸಾಮಗಾಯನ ವಿಲಾಸಸೋಮದ್ಯುಮಣಿನಯನಾಬ್ಜಕೊದರ್ವದಳಶ್ಯಾಮಸಿರಿಭೂಲೋಲ ಮುಕುಂದ2ಸನ್ಮಾರ್ಗವ ತೋರಿಸೊ ಸಂತರಸನ್ನಿದಲ್ಲಿರಿಸೊಶೂನ್ಯಭಾಗ್ಯವ ನೋಡಿ ಸಲಹಯ್ಯ ತಂದೆ ಪ್ರಸನ್ನವೆಂಕಟನಾಯಕ ಮುಕುಂದ 3
--------------
ಪ್ರಸನ್ನವೆಂಕಟದಾಸರು
ಶೋಭನ ಶೋಭನವೆ ನಮ್ಮಶ್ರೀ ಭೂದೇವಿಯರ ಅರಸು ವೆಂಕಟಗೆ ಪ.ಅಂದು ಕ್ಷೀರಾಂಬುಧಿಯನ್ನು ಮಥಿಸಲಾಗಇಂದಿರೆ ಹರುಷದಿಂದುದಿಸಿ ಬಂದು ||ಮಂದಾರ ಮಾಲೆಯ ಹಾಕಿದ ದೇವಗೆಕಂದರ್ಪಕೋಟಿ ಲಾವಣ್ಯ ಮೂರುತಿಗೆ 1ಜನಕನ ಮನೆಯಲ್ಲಿ ರಾಜಾಧಿರಾಜರುಎಣಿಕೆಯಿಲ್ಲದೆ ಬಂದಿರಲಾಗಿ ||ಸನಕಾದಿವಂದ್ಯನ ಕಂಡು ಸಂತೋಷದಿಜನಕಜೆ ಮಾಲೆಯ ಹಾಕಿದ ರಾಮಗೆ 2ರುಕುಮನು ಶಿಶುಪಾಲಗೀವೆನೆಂಬ ಮಾತಿಗೆಸಕಲ ರಾಯರು ಬಂದಿರಲಾಗಿ ||ಭಕುತಿ ವತ್ಸಲನ ಕಂಡು ಸಂತೋಷದಿರುಕುಮಿಣಿ ಮಾಲೆಯ ಹಾಕಿದ ಕೃಷ್ಣೆಗೆ 3ಸತ್ಯಭಾಮೆ ನೀಳಾ ಭದ್ರಾ ಕಾಳಿಂದಿಯುಮಿತ್ರವಿಂದಾ ಲಕ್ಷಣಾ ಜಾಂಬವತಿ ||ಮತ್ತೆ ಸೋಳಾಸಾಸಿರ ಗೋಪಿಕೆಯರಪ್ರತ್ಯಕ್ಷವಾಳಿದ ಕಲ್ಯಾಣಗೆ 4ಪದ್ಮದೇಶದಲೊಬ್ಬ ದೇವಾಂಗನೆಯುಪದ್ಮಮುಖಿಯು ಶ್ರುತಕೀರ್ತಿಯಾಗಿ ||ಪದ್ಮನಾಭ ಶ್ರೀ ಪುರಂದರವಿಠಲಗೆಪದ್ಮಾವತೀ ಪ್ರಿಯ ಶ್ರೀನಿವಾಸಗೆ 5
--------------
ಪುರಂದರದಾಸರು
ಶೋಭನವೇ ಶೋಭನವೇಶೋಭನ ಗುರುವಿಗೆ ಬಗಳಾಂಬಳಿಗೆಪಉರಿಬಿಟ್ಟಗ್ನಿಯು ಇಲ್ಲದಂತೆಉರಿಯು ಅಗ್ನಿಯು ಒಂದೆಂಬಂತೆಗುರುವು ಬಗಳಾಂಬನು ತಾನು ಕೂಡಿಯೆತರಣಿಶತಕೋಟಿಯಲಿ ಹೊಳೆಯುತಿದೆ1ಬಂಗಾರದಿ ಮಾಡಿಹ ಒಡವೆಗಳಂತೆಬಂಗಾರ ಒಡವೆ ಒಂದೆ ಎಂಬಂತೆಮಂಗಳಗುರುಬಗಳಾಂಬನು ಕೂಡಿಯೆತಿಂಗಳ ಶತಕೋಟಿಯಲಿ ಹೊಳೆಯುತಿದೆ2ತೆರೆ ಬಿಟ್ಟ ಉದಕವು ಇಲ್ಲದಂತೆತೆರೆ ಉದಕವು ಒಂದೆಂಬಂತೆಗುರುಚಿದಾನಂದ ಶ್ರೀ ಬಗಳೆ ಕೂಡಿಯೆಶರಣರ ಹೃದಯದಿ ಥಳಥಳಿಸುತಿರೆ3
--------------
ಚಿದಾನಂದ ಅವಧೂತರು
ಶೋಭಾನ ಪಾಂಡುರಂಗಗೆ | ಶೋಭನ ಶ್ರೀನಿವಾಸಗೆ |ಶೋಭನಉಡುಪಿನಿಲಯಾಗೇ ಪಸುಮನಸರಾಳ್ದವನ ವರಜ ಬಾ |ಕಮಲೆಸದನಮುಖಕಂಜರವಿಬಾ |ವಿಮಲ ಗುಣಾರ್ಣವನೀಲಜಲದನಿಗಾತ್ರಾ ಬಾ ||ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ |ವಹನ ಪತತ್ರಾ ಬಾ ನತಜನ ಮಿತ್ರಾ ಬಾಹಸಿಯಾ ಜಗುಲೀಗೇ 1ಅಷ್ಟನಾಮ ಒಪ್ಪುವನೇ ಬಾ |ದುಷ್ಟ ದಿತಿ ಸುತ ಮದಹರಣಾ ಬಾ |ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ ||ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ |ಅಕ್ಷರಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ 2ಮಾತುಳರಿಪುವನಅನಳಬಾ |ಶ್ವೇತವಹನ ರಥಸಾರಥಿಬಾ |ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ ||ಗೋಕುಲ ತ್ರಾತಾ ಬಾ ಲೋಕೈಕದಾತಾಬಾ |ವಸುದೇವ ಜಾತಾ ಬಾ ಸುಪ್ರಖ್ಯಾತಾ ಬಾಹಸಿಯಾ ಜಗುಲೀಗೇ 3ವಾಮನ ಕೇಶವ ಹಯಮುಖ ಬಾ |ಭೀಮವಿನುತನಿಃಸೀಮಾ ಬಾ |ಕಾಮಿನಿಯರ ಚೈಲಹರಣ, ಋಷಿ, ರಣಭೀಮಾ ಬಾ ||ದಶರಥ ರಾಮಾ ಬಾ ಬಾಣವಿರಾಮಾ ಬಾ |ಅಜಮುಖ ನಾಮಾ ಬಾ ಕೃಷ್ಣಾ ಪ್ರೇಮಾ ಬಾಹಸಿಯಾ ಜಗುಲೀಗೇ 4ಕಂದರ್ಪಜನಕ ನರಹರಿ ಬಾ |ಅಂದಮೃತವ ತಂದವನೇ ಬಾ |ಮಂದೇತರಮುದಘಟಜ ಪ್ರಮುಖ ಮುನಿವಂದ್ಯಾ ಬಾ ||ಕಸ್ತುರಿ ಛಂದಾ ಬಾ ದೇವ ಮುಕುಂದಾ ಬಾ |ದೇವಕಿ ಕಂದಾ ಬಾ ಸದ್ಗುಣ ವೃಂದಾ ಬಾಹಸಿಯಾ ಜಗುಲೀಗೆ 5ಕ್ಷಿತಿಧರ ಜಿನಧರ ಸಖನೇ ಬಾ |ಅತುಳಮಹಿಮನೆ ಅಜಿತನೇ ಬಾ |ಸತಿಗಮರ ಸದನದಕುಸುಮತಂದಚ್ಯುತನೇ ಬಾ ||ಮೂರುತಿ ಸುತನೆ ಬಾ ಲೋಕ ವಿತತನೆ ಬಾ |ಪೂಜಿಗುಚಿತನೆ ಬಾ ರಕ್ಷಣರತನೇ ಬಾಹಸಿಯಾ ಜಗುಲೀಗೆ 6ಪ್ರಾಣೇಶ ವಿಠ್ಠಲರಾಯಾ ಬಾ |ವೀಣಾಪಾಣೀ ಜನಕನೆ ಬಾ |ಮಾಣದೆಭಕ್ತರ ಪೊರವುತಿಹನೆ ಸತ್ರಾಣಾ ಬಾ ||ಸತ್ಯಾ ಪ್ರಾಣಾ ಬಾ ಶ್ರೀ ಪಾಠೀಣಾ ಬಾ |ನಿಜ ವಿಜ್ಞಾನಾ ಬಾನಿತ್ಯಕಲ್ಯಾಣಾ ಬಾಹಸಿಯಾ ಜಗುಲೀಗೆ 7
--------------
ಪ್ರಾಣೇಶದಾಸರು
ಶೋಭಾನವೇ ಬಗಳಾಮುಖಿ ದೇವಿಗೆಶೋಭಾನವೇ ಸದ್ಗುರುನಾಥಗೆ ಶೋಭಾನವೆನ್ನಿ ಶುಭವೆನ್ನಿಪಸುತ್ತಿದ ಸರಿಗೆಯು ಒತ್ತಿದ ಚಿಂತಾಕೆತ್ತಿದ ರಾಗಟೆ ಹತ್ತಿದ ಚವುರಿಮತ್ತೆ ತುರುಬಿಗೆ ಪಂಚಕ ಮುಡಿದಿಹಮುಡಿದೀ ಬಗಳಾಮುಖಿಗೆ ರತ್ನದಾರತಿಯ ಬೆಳಗಿರೇ1ಶ್ರವಣ ಮನನ ನಿಧಿಧ್ಯಾಸನ ಸಾಧಿಸಿಭವಭವಗಳ ತರಿದೆಲ್ಲವ ಛೇದಿಸಿಶಿವಸಾಕ್ಷಾತ್ತಾಗಿ ಬೆಳಗುತ ಬೆಳಗುತ ಸದ್ಗುರುನಾಥಗೆಪವಳದಾರತಿಯೆ ಬೆಳಗಿರೆ2ವಾಲೆಬಳೆಗಳು ತಾಳಿಯು ಮೂಗುತಿಸಾಲಿನ ಅಡ್ಡಿಕೆ ತಾಯಿತ ಸರಪಳಿಮೇಲು ಪದಕವೆ ಮೆರೆದಿಹ ಮೆರೆದಿಹ ಬಗಳಾಮುಖಿಗೆಲೋಲದಾರತಿ ಬೆಳಗಿರೆ3ಬಾಲೋನ್ಮತ್ತ ಪಿಶಾಚಾಂಧರ ಬದಿರ ಲಕ್ಷಣಮೂಕಾವಸ್ಥೆಯ ತಾ ತಾಳಿ ಅರವಸ್ಥೆಯ ಧರಿಸಿಧರಿಸಿಹ ಸದ್ಗುರುನಾಥಗೆತೈಲದಾರತಿಯ ಬೆಳಗಿರೆ4ಹೊಸ ಮಿಂಟಿಕೆ ಪಿಲ್ಲೆ ಸವಂದಿಗೆಜಸವುಂಗರ ಮೀನೆಸೆದಿಹಮುದ್ರಿಕೆಮಿಸುನಿಯೊಡ್ಯಾಣವು ತೊಳಗುವ ತೊಳಗುವ ಬಗಳಾಮುಖಿಗೆಶೀಲದಾರತಿಯ ಬೆಳಗಿರೆ5ಧಗಧಗಿಸುವ ಪೀತಾಂಬರದುಡುಗೆಯಝಗ ಝಗಿಸುವ ಮಹಾಸ್ವರ್ಣದ ಕಂಚುಕಿನಿಗಮವೆಡಬಲದಲ್ಲಿ ಹೊಗಳುವ ಹೊಗಳುವ ಬಗಳಾಮುಖಿಗೆಸುಗಮದಾರತಿಯ ಬೆಳಗಿರೆ6ಝಗ ಝಗಿಸುವ ಪ್ರಭೆ ದೃಷ್ಟಿಸಿ ಶ್ರವಣದಿಮೊಗೆ ಮೊಗೆದು ದಶನಾದವ ಸೇವಿಸಿಬಗೆ ಬಗೆ ಆನಂದದಿ ಸುಖಿಸುವ ಸುಖಿಸುವ ಸದ್ಗುರುನಾಥಗೆಸುಗಮದಾರತಿಯ ಬೆಳಗಿರೆ7ಸಪ್ತಾವರಣ ಭಸ್ಮವ ಮಾಡಿಸಪ್ತಭೂಮಿಕೆ ಪಾವಟಿಗೆಯನೇರಿಗುಪ್ತ ಪ್ರಭಾತೀತವಾಗಿ ತೊಳಗುವ ತೊಳಗುವ ಸದ್ಗುರುನಾಥಗೆತೃಪ್ತದಾರತಿಯ ಬೆಳಗಿರೆ8ಕಂಕಣ ಹರಡಿಯ ಹಸ್ತದ ಕೈಯ್ಯಲಿಅಂಕುರಪಟ್ಟಿಯು ಪರಿಘವು ಶರಧನುಅಂಕೆಯಿಲ್ಲದಾಯುಧ ಪಿಡಿದಿಹ ಪಿಡಿದಿಹ ಬಗಳಾಮುಖಿಗೆಪಂಕಜದಾರತಿಯ ಬೆಳಗಿರೆ9ಸಾರಿಯೆ ತ್ವಂ ಪದ ತತ್ವಮಸಿ ಪದಮೀರಿಯೆ ಸಗುಣ ನಿರ್ಗುಣ ರೂಪವ ತೋರಿಚರಿಸುವಚರಿಸುವ ಸದ್ಗುರುನಾಥಗೆ ಸಾರದಾರತಿಯ ಬೆಳಿಗಿರೆ10ಪಿಡಿದೆಡಗೈಯಲಿ ವೈರಿಯ ಜಿಹ್ವೆಯ ಕೆಡುಹುತ ತುಳಿದೆಹೊಡೆಯುತ ಖಡುಗದಿ ಕೊಡುತ ಬೇಡಿದವರಿಗೆ ಅಭಯವಅಭಯವೀವ ಬಗಳಾಮುಖಿಗೆ ಸಡಗರದಾರತಿಯ ಬೆಳಗಿರೆ11ಸಾಧನ ನಾಲ್ಕನು ಸಾಧಿಪ ಸಚ್ಛಿಷ್ಯರಿಗೆಅಭಯವ ನೀಡುತ ಭಕ್ತಿರಿಗಾಧಾರವಾಗಿ ಕರುಣಿಪಕರುಣಿಪ ಸದ್ಗುರುನಾಥಗೆ ಸಾಧುಗಳಾರತಿ ಬೆಳಗಿರೆ12ಚಿದಾನಂದ ಪರಬ್ರಹ್ಮವು ತಾನೇಮದಮುಖನು ಸಂಹರಿಸಲೋಸುಗಸದನಬ್ರಹ್ಮ ರಂಧ್ರದಿ ಸ್ಥಾನವಾಯ್ತುಸ್ಥಾನವಾಯ್ತು ಬಗಳಾಮುಖಿಗೆ ಸುಧೆಯ ಆರತಿ ಬೆಳಗಿರೆ13ಸಿದ್ದ ಪರ್ವತವಾಗಿಹ ಪ್ರ-ಸಿದ್ಧ ಬಗಳಾಮುಖಿಯೆಂದೆಣಿಸುವಸಿದ್ಧ ಚಿದಾನಂದಾವಧೂತಅವಧೂತಸದ್ಗುರುನಾಥಗೆಸಿದ್ಧದಾರತಿಯ ಬೆಳಗಿರೆ14
--------------
ಚಿದಾನಂದ ಅವಧೂತರು
ಶ್ಯಾಮಸುಂದರ ಶ್ರೀಮಾಧವಕಾಮಿಸುವಳಾ ಕಾಮಿನಿಯು ಪ.ಭಾಮಾಮಣಿಯು ನಿನ್ನನೀಕ್ಷಿಸದೆಯಾಮಯಾಮಕೆ ತಾಮಸಗೊಂಬಳು ಅ.ಪ.ಚಂದನಾದಿ ಸೌಗಂಧಕುಸುಮ ವಿಷ-ದಂದವೆಣಿಸುವಳು ಚಂದ್ರಮುಖಿಮಂದಾನಿಲ ಮಕರಂದ ಪಾನರಸ-ವೊಂದನೊಲ್ಲಳ ಪ್ರಿಯಸಖಿನಂದನ ಕಂದನೆ ವಂದನೆ ವಲ್ಲಭಗೈವಳು 1ಹಾರ ಹೀರ ಬಂಗಾರ ಭೂಷಣವಭಾರವೆಂದು ಶೃಂಗರಿಸಳುಕೀರಕೀಕಿಪಿಕಚೀರುಸ್ವನ ಶರ-ಧಾರೆಯೆಂದು ತಾ ಸೈರಿಸಳುಕಾರುಣ್ಯವಾರಿಧೆ ಬಾರದೆ ಬಾಯಾರಿರುವಳು 2ಮೀನಧ್ವಜನುರುಬಾಣದುರುಬೆಗೆಕ್ಷೀಣವಾಗಿಹಳು ಮೀನಾಕ್ಷಿಭಾನುತೇಜ ಲಕ್ಷ್ಮೀನಾರಾಯಣಧ್ಯಾನಿಸುವಳು ನಿನ್ನ ಪ್ರಾಣಸಖಿಮಾನಾಭಿಮಾನಾಧೀನವನಿನ್ನೊಳಗಿಟ್ಟಿಹಳು3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ