ಒಟ್ಟು 49258 ಕಡೆಗಳಲ್ಲಿ , 138 ದಾಸರು , 11863 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ. ಮೂರ್ತಿ ನೋಡುವ ಕಂಗಳು ಅಂಗನೆಯರ ರೂಪ ನೋಡಲೆಳಸಿದವು 1 ಶ್ರೀ ರಮಣನ ಕಥೆ ಕೇಳುವ ಕರ್ಣಗಳು ವಾರನಾರಿಯರ ವಾರ್ತೆಗೆ ಸೋತವು 2 ಮಂಧರಧರನ ನಿರ್ಮಾಲ್ಯವನೊಲ್ಲದೆ ಸುಂದರಿಯರ ಮೈ ಗಂಧ ಬಯಸಿತು ಘ್ರಾಣ 3 ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು ಪರಮ ನಿಷಿದ್ಧ ಪಾನ ಭೋಜನ ಬಯಸಿತು 4 ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ ಅಂಗನೆಯ ದೇಹಾಲಿಂಗನ ಬಯಸಿತು 5 ಶ್ರೀನಿಕೇತನ ನಾಮ ನುಡಿಯುವ ನಾಲಿಗೆ ದೀನ ಕಾಮಾತುರ ನುಡಿಯಲಿ ನಲಿಯಿತು 6 ಪಾದ ಸ್ಮರಣೆಯ ಬಿಟ್ಟಾ ಮನ ತರುಣಿಯರು ಸದಾ ನೆನೆಸಿತು ಅಕಟಾ 7
--------------
ವರಾವಾಣಿರಾಮರಾಯದಾಸರು
ಪೇಳಾರು ತಾಯಿಯು ಪ ಕೋಟಿರೂಪಯುತನು ಸಾಟಿಯಿಲ್ಲದವನು ಲೋಕಪಾಲಕನು 1 ನೇಕ ಮಹಿಮೆಯ ತೋರುವ ಪರಶಿವನು | ಪರಾತ್ಪರನು ನಿಗಮ ಮಂದಿರನು 2 ಜಲಧಿ | ವಿ ಮಾರುತಿ ಸುಯಿಲುದಲಾ ಸಕಲ ಮೂಲಮಾಂಗಿರೀಶನಲಾ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪೇಳಿದರೆ ತಿಳಿಯುವುದೆ ಮಾಯಮೋಹಿಗಳಿಗೆ ನೀಲಶ್ಯಾಮನ ದಿವ್ಯಗೂಢದಿಹಮಹಿಮೆ ಪ ಬಂಜೆಗ್ಹೊಳೆವುದೆ ಪ್ರಸೂತಿವೇದನೆ ಸುದ್ದಿ ಸಂಜೀವನ ಮಹಿಮೆ ತಿಪ್ಪೆ ತೃಣಕೆ ತಿಳಿಯುವುದೆ ಅಂಜುಬುರುಕಗ್ವೀರತ್ವ ಸಾರಸವಿದೋರುವುದೆ ವಂಜಗೊಳುಪಾಗುವುದೆ ಹರಿಭಕ್ತಿಸಾರ 1 ನಾಗನ್ಹೆಡೆಯೆತ್ತಾಡಲಮೇಧ್ಯಜಂತರಿಯುವುದೆ ಕೋಗಿಲೆಯು ಕೂಗಲು ಕಾಗೆ ತಿಳಿಯುವುದೆ ಗೂಗೆಗ್ಹೇಳಲು ಅರುಣಪ್ರಭೆ ನೋಡಬಲ್ಲುದೆ ಭಾಗವತರ ನಡೆ ಭವರೋಗಿಗ್ಹೊಳಪಹ್ಯದೆ 2 ರಾಜ್ಯದಾಡಳಿತವನು ಚಾಂಡಾಳ ತಿಳಿಯುವನೆ ತೇಜಿಯ ಮಹಯೋಗ ಪಾಜಿಗ್ಹುಟ್ವುದೆ ಭೋಜನದ ಸವಿಸಾರ ರೋಗಿಗ್ಹೇಳಲು ಫಲವೆ ರಾಜಿಪ ಪರಲೋಕ ಕುಜನರರಿಯುವರೆ 3 ಹೀನನಿಗತಿ ತಿಳಿಯುವುದೆ ಜ್ಞಾನಬೋಧಾಮೃತ ಶ್ವಾನನಿಗೆ ಸೇರುವುದೆ ರಾಗ ಸುಖಸ್ವಾದ ಕೋಣಗ್ಹೊಳೆವುದೆ ವೇಣು ಮೃದಂಗ ಸುಖವಾದ್ಯ ಧ್ಯಾನಮಹಿಮೆಯ ಫಲವು ಭವಿಗೆ ತಿಳಿಬಲ್ಲುದೆ 4 ನೇಮದೊರುಷವು ಸುರಿಯೆ ಕಲ್ಲು ನೀರು ಕುಡಿಯುವುದೆ ಕಾಮಿಗಳಗನುಭವದ ಹಾದಿ ತಿಳಿ ಬಲ್ಲುದೆ ಪಾಮರಧಮರಿಗಿಲ್ಲ ದೀನಜನನಾಥ ಶ್ರೀ ರಾಮನಡಿ ನಿಜಭಕ್ತಿ ಸಾಧ್ಯವಾಗುವುದೆ 5
--------------
ರಾಮದಾಸರು
ಪೇಳುವೆ ಮನವೆ ನಿನಗೊಂದು ಕುಳಿತು ಲಾಲಿಪುದು ಮುಕ್ತಿಗೆ ಹಾದಿ ಎಂದು ಪ ಹರಿಯ ಚರಣಾಬ್ಜ್ಬಕೆ ಎರಗು ಬಡ ವರನ ಕಂಡರೆ ಅಕಟಾ ಎಂದು ಮರಗು ಹರಿ ಭಕುತಿಗೆ ನೀನೆ ಕರಗು ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು 1 ಅಹಂಕಾರ ಮಮಕಾರ ಬಿಟ್ಟು ಅಂಬು ರುಹಲೋಚನನ ಸುಮತವನ್ನೆ ತೊಟ್ಟು ಕುಹಕ ಮತಿಗಳನ್ನು ಬಿಟ್ಟು ಗುರು ದ್ರೋಹಿಗಳಾದವರ ಹೃದಯವÀ ಮೆಟ್ಟು 2 ಅಲ್ಪ ಬುದ್ಧಿಗಳನ್ನು ಮಾಣು ಒಂದು ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು ಬಲ್ಪಂಥದಲಿ ಬಾಹದೇನು ಬಿಡು ಅಲ್ಪಗಳ ಸಂಗ ಎಂದು ಸಾರಿದೆನು 3 ಸ್ವಾಮಿಯ ಪಾದವ ನೋಡು ನಿನ್ನ ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು ನಾಮ ಕೀರ್ತನೆಗಳನ್ನು ಪಾಡು ತ್ರಿ ಧಾಮದೊಳಗೆ ಒಂದು ಇಂಬನೆ ಬೇಡು 4 ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ 5
--------------
ವಿಜಯದಾಸ
ಪೊಗಳಲಳವಾರಿಗೆ ಎಲೆ ದೇವ ನಿನ್ನ ನಿಗಮ ಆಗಮಾತೀತ ಗರುವರಹಿತನ ಪ ನೆಲೆಬುಡತುದಿ ಮೊದಲಿಲ್ಲದವನು ನೀ ಪ್ರಳಯ ಪ್ರಳಯಕ್ಕಾದಿ ಆದಿಯಾದವನು ನೀ ನಲಿಯುವಿ ನಲಿಯದೆ ಚಲಿಸುವಿ ಚಲಿಸದೆ ತಿಳಿಯದೆ ತಿಳಿಯುವಿ ವಿಲಸಿತ ಮಹಿಮ 1 ಆರಾರರಿಯದ ಮಹದಾದಿ ಅನಾದಿ ನೀನು ಸಾರ ಚರಾಚರಕ್ಕಾಧಾರರಾದವ ನೀ ಕೋರುವಿ ಕೋರದೆ ತೋರುವಿ ತೋರದೆ ಬಾರದೆ ಬರುವಿಯೊ ಮೀರಿದ ಮಹಿಮ 2 ಗುಣಿಸಿ ನೋಡಲು ತುಸುಗುಣ ತೊರೆದವ ನೀನು ಗಣಿತಕ್ಕೆ ನಿಲುಕದಕಲಂಕ ಮಹಿಮ ನೀ ಜನಿಸುವಿ ಜನಿಸಿದೆ ಕುಣಿಸದೆ ಕುಣಿಸುವಿ ಮಣಿಸುವಿ ಮಣಿಸದೆ ಅನುಪಮಮಹಿಮ 3 ತೊಡರೆಡರಿಗಡರದೆ ಕಡೆಯಲಾಡುವಿ ನೀನು ತೊಡರಿನೊಳಗೆ ಬಿಡದೆ ತೋರುವಿ ನೀ ನುಡಿಯಿಲ್ಲದೆ ನುಡಿಸುವಿ ನಡೆಯಿಲ್ಲದೆ ನಡೆಸುವಿ ಮಡಿಯಿಲ್ಲದೆ ಮಡಿಯೆನಿಪ ಕಡುಚಿತ್ರ ಮಹಿಮ 4 ಮೀಸಲು ಮಡಿರಹಿತಪಾವನ ನೀನು ಸಾಸಿರನಾಮದಿ ಕರೆಸಿಕೊಂಬುವಿ ನೀ ವಾಸಿಸದೆ ವಾಸಿಸುವಿ ಪೋಷಿಸದೆ ಪೋಷಿಸುವಿ ಶ್ರೀಶ ಶ್ರೀರಾಮ ದಾಸಜನರ ಸುಲಭ ನಿನ್ನ 5
--------------
ರಾಮದಾಸರು
ಪೊಡವಿ ಪತಿಯೇ ನಿನ್ನಾ ಅಡಿಗಳಿಗೆರಗುವೆ ತಡೆಯಲಾರೆನೋ ಈ ಕಡುತಾಪದಿಂದೆನ್ನ ಕಡೆಗ್ಹಾಯಿಸೆನ್ನ ಶ್ರೀ ರಾಘವಾ ಪ ಧರಣೀಶ ನಿನ್ನ ಚರಣವೇ ಗತಿ ಎಂದು ಸ್ಮರಿಸುತ್ತಲಿರುವೆನೋ ರಾಘವಾ ಸ್ಥಿರ ಭಕುತಿಯ ನಿನ್ನೊಳಿರಿಸಿ ಸತ್ವರದಿಂದ ಕರುಣಿಸಿ ಸಲಹೈಯಾ ರಾಘವಾ 1 ಪುಟ್ಟಿದುದಕೆ ನೀ ಹೊಟ್ಟೆಗೆ ಸಾಕಷ್ಟು ಕೊಟ್ಟು ಕಾಪಾಡೊ ಶ್ರೀ ರಾಘವಾ ಇಟ್ಟು ತವ ಸ್ಮರಣೆಯ ಕೊಟ್ಟೆನ್ನ ಪುಷ್ಟವ ಮಾಡೋ ಶ್ರೀ ರಾಘವಾ 2 ತನು ಧನ ನೀನೆ ಜನನಿ ಜನಕನು ನೀನೆ ವನಿತೆ ಸುತರು ನೀನೆ ರಾಘವಾ ಹನುಮೇಶ ವಿಠಲನೆ ದಿನಗಳೆಯದೇ ತ್ವರ ಮನದಘ ಬಿಡಿಸೋ ಶ್ರೀ ರಾಘವಾ 3
--------------
ಹನುಮೇಶವಿಠಲ
ಪೊಂದಿ ಪ್ರಾರ್ಥಪೆನಯ್ಯಾ ಪ. ಬಂಧನದೊಳು ನೊಂದೆನಯ್ಯ ಮುಂದೆ ಸನ್ಮಾರ್ಗತೋರಿಸು ಜೀಯಾ | ಎನ್ನ ಕುಂದುಗಳೆಣಿಸದಿರಯ್ಯಾ ಗುರು ಗಂಧವಾಹನ ವಜ್ರಕಾಯಾ ಅ.ಪ ನಾನು ನನ್ನದು ಎಂಬ ಮದ ಬಿಡಿಸೊ ಜ್ಞಾನ ಭಕ್ತಿ ವಿರಕ್ತಿ ಕೊಡಿಸೊ ಜಾನಕಿಪತಿ ಪದದಿ ಮನ ನಿಲಿಸೊ ಸಾನುರಾಗದಿ ಸತತ ಉದ್ಧರಿಸೊ 1 ನಿನ್ನ ದಯದಿಂ ರವಿಜ ಭಯ ಕಳೆದಾ ನಿನ್ನ ವಲಿಮೆಲಿ ಪಾರ್ಥ ಜಯ ಪಡೆದಾ ನಿನ್ನ ನಂಬದೆ ರಾವಣನು ತಾ ಮಡಿದಾ2 ಶ್ರೀಮದಾನಂದತೀರ್ಥ ಮಧ್ವೇಶಾ ಶಾಮಸುಂದರ ಸ್ವಾಮಿ ನಿಜದಾಸಾ ಕಾವಿತಾರ್ಥಗಳಿತ್ತು ಪೊರೆ ಅನಿ ಶಾ 3
--------------
ಶಾಮಸುಂದರ ವಿಠಲ
ಪೊಂದಿ ಭಜಿಸೊ ನಿರುತ ಮಾನವ ಮಹಿವೃಂದಾರಕವ್ರಾತ ಪ ವಂದಿತ ಶ್ರೀ ಸುಯಮೀಂದ್ರರ ಹೃದಯಾರ ವಿಂದ ಭಾಷ್ಕರ ಸುವೃತೀಂದ್ರ ಪದಮುಗ ಅ.ಪ ಧರೆಯೊಳು ದ್ವಿಜನಿಕರ ಉದ್ಧರಿಸಲು ಗುರುವರ ಸುಶೀಲೇಂದ್ರರ ಕರದಿ ತುರಿಯಾಶ್ರಮ ಧರಿಸುತ ಶ್ರೀಮೂಲ ತರಣಿ ಕುಲೇಂದ್ರನ ಚರಣವ ಪೂಜಿಸಿ ಮರುತ ಶಾಸ್ತ್ರವ ಭಕ್ತಿ ಪೂರ್ವಕ ನಿರುತ ಪ್ರವಚನ ಗೈದು ಶಿಷ್ಯರಿ ಗೊರೆದು ಕರುಣದಿ ಪೊರೆದ ಪಾವನ ಚರಿತರಡಿದಾವರೆಗಳ್ಹರುಷದಿ 1 ಸತಿಭಕ್ತಿ ಸುವಿರಕತಿ ಶಾಂತಾದಿ ಹಲವು ಸದ್ಗುಣ ಪ್ರತತಿ ಕಲಿಯಾಳಿಕೆಯೊಳು ಸ್ಥಳವಕಾಣದೆ ವಿಧಿ ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ ಇಳೆಯೊಳಗೆ ಸುವೃತೀಂದ್ರ ತೀರ್ಥರ ಚಲುವ ಹೃದಯ ಸ್ಥಾನ ತೋರಲು ಬಳಿಕ ಸುಗುಣಾವಳಿಗಳಿವರೊಳು ನೆಲಸಿದವು ಇಂಥ ಅಲಘು ಮಹಿಮರ 2 ಸಿರಿಯಾಸ್ಯ ಸಂವತ್ಸರದಿ ಸುವೈಶಾಖ ವರಮಾನ ಶಿತಪಕ್ಷದಿ ಹರಿದಿನದಲಿ ದಿವ್ಯ ಮೂರನೆಯಾಮದಿ ವರ ಮಂತ್ರ ಮಂದಿರ ಪರಮ ಸುಕ್ಷೆತ್ರದಿ ಸಿರಿಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ
ಪೊರಿಯ ಬೇಕೆಲಾ |ಮರಿ ನೀನು ಛಲಾ ಪ ಏಸು ಜನ್ಮದಿ ನಿನ್ನ ದಾಸನೆನಿಸಿದೆ | ಉ |ದಾಸ ಮಾಡದೆ ಮಹಿದಾಸ ಎನ್ನನು ನೀ 1 ನಿನ್ನನೆ ಮರೆವುದು ಎನ್ನ ಸ್ವಧರ್ಮವು |ನಿನ್ನ ಘನ್ನತಿಗಿದು ಸನ್ನು ಮತವೆ ಹರಿ 2 ಸರುವಜ್ಞ ನೀನೆಂದೂ ಒರೆದವು ಶೃತಿಗಳು |ಮರೆವುದುಚಿತವೇನೊ ಗುರು ಪ್ರಾಣೇಶ ವಿಠಲಾ 3
--------------
ಗುರುಪ್ರಾಣೇಶವಿಠಲರು
ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ ಪ. ಮಾರಜನಕ ನಿನ್ನ ಕೋರಿ ಬಂದೆನೊ ದೇವಕ್ರೂರ ಕರ್ಮಾಂತರ ಹರಗೈಸೊ ನೀ ದೇವ1 ಪಾದ ತೋರಿಸೊ ದೇವ 2 ಬಡವರ ಪಾಲಿಪ ಶಕ್ತಿ ನಿನ್ನದೊ ದೇವ ಅಡಿಗಳಿಗೆರಗುವ ಒಡೆಯ ಗೋಪಾಲವಿಠಲ 3
--------------
ಗೋಪಾಲದಾಸರು
ಪೊರೆ ಸುರೇಶ ಶ್ರೀಶ ಶ್ರೀನಿವಾಸ ದುರಿತವಿನಾಶ ಪರಮಪ್ರಕಾಶ ಪ ಅನುದಿನ ನಿಮ್ಮಯ ನೆನವಿನಘನಸುಖ ಕರುಣಿಸಿ ಎನ್ನ ಕನಿಕರದೊಡನೆ 1 ಚಿಂತೆನಿವಾರಣ ಚಿಂತೆನೀಗಿಸಿ ಎನ್ನ ಸಂತತದಿಂಪೊರೆ ಸಂತರ ಪ್ರಿಯಕರ 2 ಹರಣಹೋದರು ನಿಮ್ಮ ಚರಣಭಕ್ತಿಯನು ಮರೆಯದದಟ ಮಿಗೆ ಕರುಣಿ ಶ್ರೀರಾಮ 3
--------------
ರಾಮದಾಸರು
ಪೊರೆಯದಿರುವರೇ _ ಶ್ರೀ ರಮಣಾ ಪ ದುರಿತಗಜಕೆ ನೀ ಪಂಚಾನನಾ ಅ.ಪ. ಸಿರಿಯ ಮದದಿ ನಾನರಿಯದೆ ಪೋದರೆ ಗರುಡಗಮನ ನೀ ಮರೆತುಬಿಡುವರೇ ಕರುಣಶರಧಿ ಸರಿ ಬಿರುದು ಪೊಳ್ಳಾಗದೇ ಚರಣಪಿಡಿವೆ ಪೊರೆ ಮರುತನೊಡೆಯ ಹರಿ1 ಪಾತಕಿ ಎಂಬುವ ನೀತಿಯನುಡಿದೊಡೆ ಪೂತರಮಾಡುವ ಖ್ಯಾತಿಯ ಬಿಡುವೆಯ ನಾಥನೆ ನಂಬಿದೆ ಕಾತರ ಪಡುತಿಹೆ ಪ್ರೀತಿಲಿ ಕಾಣಿಸು ಆರ್ತಿವಿದೂರ 2 ನಡಿಯುವ ಚರಣವು ಎಡುವುದು ಸಹಜವೆ ಮೃಡ ಭೃಗು ಭೀಷ್ಮರು ದುಡುಕಲಿಲ್ಲೆ ದೊರೆ ಮಿಡಕಿ ನಡುಗುತಿಹೆ ನಡೆವುದು ಜಗಬಿಡೆ ಕಡಲಶಯನ ಪಿಡಿ ಬಿಡದೆ ಕೊಡುತ ರತಿ 3 ಸಿರಿವಿಧಿ ಶಿವನುತ ಸ್ವರತ ಸ್ವತಂತ್ರನೆ ಶರಣರ ಪೊರೆಯುವ ವರಗುಣ ಭೂಷಣ ಅರಿಯೆನುಪಾಯವ ಶರಣುಶರಣೈಯ ಪರಮಪುರುಷ ಭಗಸರಸದಿ ನಲಿನಲಿ 4 ಸಾಕುವ ಬಿಂಬನೆ ನೂಕಿದೆ ಯಾತಕೆ ಹಾಕುತ ಮಂಕನು ಏಕಾಯತನ ನಾಕರೊಡೆಯ ಭವನೂಕುತ ಬೇಗನೆ ಸ್ವೀಕರಿಸೆನ್ನನು ಶ್ರೀ ಕೃಷ್ಣವಿಠಲಾ 5
--------------
ಕೃಷ್ಣವಿಠಲದಾಸರು
ಪೊರೆಯಬೇಕೋ ಎನ್ನ ಶ್ರೀ ನರ ಹರಿಯೆ ಕೇಳೋ ಮುನ್ನಾ ಪ ನೀ ಪೊರೆಯದಿರಲು ಈ ಪೊಡವಿಯೊಳಗೆ ಕಾಪಾಡುವರನು ಕಾಣೆ ನಿನ್ನಾಣೆ ಮನ್ನಣೆಯಲಿ ಅ.ಪ ನೀರ ಪೊಕ್ಕರು ಬಿಡೆನೋ ಬೆನ್ನಲಿ ಭಾರ ಪೊತ್ತರು ಬಿಡೆನೋ ಕೋರೆಯ ಬೆಳೆಸಿ ನೀ ಘೋರ ರೂಪನಾಗಿ ತಿರುಕನೆಂದು ಪೇಳಲು ಬಿಡೆನೋ 1 ಕೊಡಲಿ ಪಿಡಿಯೆ ಬಿಡೆನೋ ನೀ ಘನ ಅಡವಿ ಸೇರಲು ಬಿಡೆನೋ ತುಡುಗನಂದದಿ ಪಾಲ್ಗಡಿಗೆ ಒಡೆದು ಸಲೆ ಉಡುಗಿ ಜರಿದು ತುರುಗೇರಲು ಬಿಡೆನೋ 2 ಪಾಪಿ ಎಂದು ಎನ್ನ ಜರಿಯದೆ ಕಾಪಾಡೆಲೊ ಘನ್ನ ಶ್ರೀ ನರಹರಿಯ ನಾಮಕೆ ಪೋಪದ ಪಾಪಗಳುಂಟೆ ಜಾಲವ ಮಾಡದೆ 3
--------------
ಪ್ರದ್ಯುಮ್ನತೀರ್ಥರು
ಪೊರೆಯಮ್ಮ ವಾಣಿ ತರುಣಿ ವಿಧಿರಾಣಿ ರಮಣಿ ಪ. ಸರಸ್ವತಿ ನಿನ್ನನೇ ನೆರೆ ಭಜಿಸುತ್ತಿಹ ಅರಿಯದೀ ತರಳರಂ ಕರುಣದೊಳೀಕ್ಷಿಸು 1 ದೇವಿ ನಿನ್ನಿಂದ ಲೇ ಜೀವಕೋಟಿಗಳಿಂತು ಜೀವಿಪುದಾರೆಯೆ ದೇವಿ ಸಂಜೀವಿನಿ 2 ಜ್ಞಾನಾಧಿದೇವತೆ ಆನಂದಪ್ರದಾತೆ ಮುನಿಜನ ಸಂಸ್ತುತೆ ವನಜಜದಯಿತೇ 3 ಸದಯ ನೀಂ ದಯೆಗೈಯೆ ಸದಸದ್ವಿಚಾರಮಂ ಹೃದಯ ಸಂಶುದ್ಧಿಯಂ ಪದುಳಮಂ ಧೈರ್ಯಮಂ4 ದೇಶಸೇವೆಗೆಂದು ಆಶಿಪರೊಳಿಂದು ಶೇಷಗಿರೀಶನ ದಾಸರೆನಿಸೆಂದು 5
--------------
ನಂಜನಗೂಡು ತಿರುಮಲಾಂಬಾ