ಒಟ್ಟು 13948 ಕಡೆಗಳಲ್ಲಿ , 132 ದಾಸರು , 6945 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಖದಕ್ಕಿತೇ | ಸುಖದಕ್ಕಿತು ಗುರುದಯ ಲೆಕ್ಕಾ ಪ ಕಂಡವರ ಮಾತಿಗೆ ಮನವಿಟ್ಟು ಜಗದೊಳು | ಹಿಂಡದೈವಕ ಬಾಯಿದೆರುತ್ತಿದ್ದೆನೆ | ಮಂಡಿಯ ಮ್ಯಾಲೆನ್ನಾ ಕರವಿಟ್ಟು ಹೊಳೆವಾ ಪಿಂಡಾಂಡದಿ ಗಂಡನ ತೋರಿದನಕ್ಕ 1 ಇಲ್ಲೆಂಬ ಸಂಶಯ ಹೋಯಿತು ಒಳಹೊರ | ಗೆಲ್ಲೆಲ್ಲಿ ನೋಡಲು ತಾನಾದನೇ | ಫುಲ್ಲನಾಭನ ಕೂಡಿ ತನುಭಾವ ಮರದು | ಕೈವಲ್ಯ ಮಂದಿರ ಸಾರಿದೆನಕ್ಕಾ 2 ಏನ ಹೇಳಲಿ ಆಡು ತಾಡುತಾ ಯಡಹಿನಿ | ಧಾನವ ಕಂಡಂತಾಯಿತೇ | ಮಾನುಭಾವರಸಾದ ತಂದೆ ಮಹಿಪತಿ | ತಾನೊಲಿದೆನ್ನನುದ್ಧರಿಸಿದನಕ್ಕಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಖದಿ ಜೀವಿಸು ಬಾಲೆ ಸುಗುಣ ಶೀಲೆ ಸುಖದಿ ಜೀವಿಸು ಬಾಲೆ ಪ ಸುಖದಿ ಜೀವಿಸು ಬಾಲೆ | ಸುಕುಮಾರಿ ಗುಣಲೀಲೆ ರುಕುಮಿಣೀಶನ ಭಕುತಳೆನಿಸಿದ ಸಖುದೇವಿಯಂತೆ ಸಕಲ ಭಾಗ್ಯದಿ ಅ.ಪ ಭೂಸುರೋತ್ಮರಿಂದಲಿ | ಗುರುಮಂತ್ರೋಪ ದೇಶವಗೊಳ್ಳುತಲಿ | ಪ್ರತಿದಿವಸ ತಪ್ಪದೆ ಬ್ಯಾಸರಿಯದೆ ಹರುಷದಲಿ | ಸದ್ಭಕ್ತಿ ಪೂರ್ವಕ ದಾಸರ ಪದ ನಿತ್ಯದಲಿ | ನೀ ಪಾಡುತಲಿ ಸುಜನ ವೃಂದಕೆ ದೂಷಿತ ಬಹು ದೋಷಕಂಜುತ ವಾಸುದೇವನ ವಾಸರದಿ ಉಪ ವಾಸವನು ಲೇಸಾಗಿ ಮಾಡುತ 1 ಭಾವ ಭಕುತಿಲಿರುವ | ಗೋ ತುಳಸಿ ವೃಂದಾವನ ಪೂಜಿಸುತ | ವಿನಯದಿ ಅತ್ತಿ ಪತಿ ಪರ ದೇವನು ಎಂದೆನುತ | ಸಲೆ ಸೇವಿಸುತ್ತ ಕಾಲ ಕಪಟ ಮತಿಗಳ ಠಾವಿಗ್ಹೋಗದೆ ಪರರ ಒಡವೆಯ ಬೇವಿನಂದದಿ ಭಾವಿಸುತ ಸಂ ಭಾವಿತಳು ನೀನಾಗಿ ಜಗದೊಳು 2 ಮಂದ ಮತಿಯರ ಕೂಡದೆ | ಎಂದೆಂದಿಗು ಪರ ನಿಂದೆ ಮಾತುಗಳಾಡದೆ ಅವರೊಲುಮೆಯಿಒಂದಲಿ ಪಡಿ ಪ್ರೇಮದಿ | ಸಂದೇಹ ಪಡದೆ ತಂದೆ ತಾಯಿಗೆ ಕುಂದು ತಾರದೆ ನಂದ ಕಂದ ಮುಕುಂದ ಶಾಮ ಸುಂದರನ ಶುಭನಾಮ ಬಿಡದಲೆ ಒಂದೆ ಮನದಲಿ ಧ್ಯಾನಿಸುತ ಚಿರ 3
--------------
ಶಾಮಸುಂದರ ವಿಠಲ
ಸುಖದಿಂದ ಬಾಳೆ ಬಾಲೆ | ಸುಮಂಗಲೇ | ಪ ಸುಖದಿ ಬಾಳೆ ಸಾವಿತ್ರಿಯಂತೆ ಸುತರ ಪಡೆದಿಳೆಯೊಳ್ ನಿರಂತರ ಪತಿಯ ವಾಕ್ಯದಿ ನಿರತಳಾಗಿ ಅ.ಪ ಅತಿಶಯದಿ ನಿರುತ ಪತಿಯ ಸೇವಿಸುತ್ತ ಆತನೇ ಪರದೈವವೆಂದೆನುತ ಹಿತವಚನ ವಾಡುತ ಅತ್ತಿಮಾವನ ಸ್ಮರಿಸುತ್ತ ರತಿಪತಿ ಪಿತನಂಘ್ರಿ ಭಜಿಸುತ ಪೃಥ್ವಿಯೋಳ್ ಅನುಸೂಯಳಂತೆ 1 ಸುಂದರಾಂಗಿಯೆ ಸತತ ಗೃಹ ಕಾರ್ಯ ಮಾಡುತ ಇಂದಿರೇಶನ ಪಾಡುತ್ತ | ಬಂದಂಥ ವಿಪ್ರರ ದ್ವಂದ್ವ ಪಾದಕೆರಗುತ | ಹಿಂಗಿರುವದುಚಿತ ಮಂದ ಮತಿಗಳ ಮಾತು ಕೇಳದೆ ತಂದೆ ತಾಯಿಗೆ ಕುಂದು ತಾರದೆ ಇಂದು ಮುಖಿ ನೀ ಹಿಂಗಿದ್ದರನುದಿನ ಬಂದು ಕಾಯ್ವ ಶ್ರೀರಾಮಚಂದಿರ 2 ನಡಿದಾವರೆ ಪೂಜಿಸು ಸರ್ವದಾ ಬಿಡಿ ನುಡಿಗಳಾಡದೆ ಕಡು ಕರುಣದಿ ದ್ರೌಪದಾ ಮೋದ | ಪಡಿಸುಪುತ್ರರ ಪರ ರೊಡನೆ ಕಾಲ್ಕೆದರಿ ಕಲಹವ ತೆಗೆಯದಿರು ಸಖಿ ಒಡೆಯ ಶ್ರೀ ಶಾಮಸುಂದರನು ತಡೆಯದೆ ಸಂಪದವ ನೀಯುವ 3
--------------
ಶಾಮಸುಂದರ ವಿಠಲ
ಸುಖಪರವಯ್ಯಾ ಶ್ರೀಹರಿಲೀಲೆ ವೈಜಯಂತಿ ಕೌಸ್ತುಭ ವನಮಾಲಾ ಶ್ರೀವತ್ಸಾಂಕನ ದಾವನಕೊರಳೊಳು ಕೇವಲ ಗುಂಜಾಮಾಲಾ ತ್ರಿಜಗಜ್ಜನ್ಮಾದಿಗಳಿಗೆ ಮೂಲಾ ಜನಾರಿಗೆನಿಸುವ ಕಾಲಾ ಭಜಿಪರ ಭಾಗ್ಯೋದಯಕಾನಂದ ವ್ರಜದೊಳೀಗೋಪಿಯ ಕಂದಾ ಶ್ರೀದವಿಠಲ ಕೇಳು ಸುರತಸುಶೀಲಾ ರಾಧಾಮನೋನುಕೂಲಾ ಸಾಧಿಸಿ ವೃಂದಾವನದಲ್ಲಿ ಪೊಂಗೊಳಲೂದುವ ಗಾನವಿಲೋಲ
--------------
ಶ್ರೀದವಿಠಲರು
ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ. ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ 1 ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ 2 ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ3 ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ 4 ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ 5
--------------
ರಂಗೇಶವಿಠಲದಾಸರು
ಸುಖಿಯಾದೆನು ಶ್ರೀ ಪಾದಾ ಹೊಂದಿ ಗುರುವಿನಾ ಪ ಸರಿತ ಮಹಾನದಿಯೊಳು ಬೆರೆತಂತೆ | ನೆರೆ ಕೀಟಕ ಭೃಂಗಿ ಬೆರೆಸಿದಂತೆ 1 ಬಡವಗ ನಿಧಾನವ ದೊರೆತಂತೆ | ಪೊಡವಿ ಬೆಳೆಗೆ ಘನ ಮಳೆಗರೆದಂತೇ ಜಡ ಮತಿಗೇ ಶಾರದೆ ಒಲಿದಂತೆ 2 ತಂದೆ ಮಹೀಪತಿ ಕಂದಗ ವಲಿದು | ಛಂದದಿ ಭಕುತಿಯ ದಾರಿಗೆ ತಂದು | ಬಂದದ ಸಾರ್ಥಕ ಮಾಡಿದೆ ನಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಗ್ಗಿ ಮಾಡುವ ಬನ್ನಿ ಸುಜ್ಞಾನದ ಧ್ರುವ ಬೆಳೆದ ಘನಸುಖ ಬೇಕಾದ್ಹಾಂಗೆ ತಿಳಿದವರುಂಡುಟ್ಟು ದೇಗುವ್ಹಾಂಗೆ 1 ಬಯಸುವ ಬಯಕಿಗೆ ಉಂಟಾಗ್ಯದೆ ಶ್ರೇಯಸುಖ ರಾಶಿರಾಶಿಯು ಒಟ್ಟೈದೆ 2 ಸಾರುತ ಶ್ರುತಿ ಸವಿಪೊಗಳುತಲ್ಯದೆ ಬೀರುತ ಜನಮಯ ಸಾರಿ ಚೆಲ್ಯದೆ 4 ದೀನ ಮಹಿಪತಿಗಾನಂದವ್ಯಾಗದೆಮನದಿರಗಿ ಉನ್ಮನವಾಗ್ಯನೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಡು ಸುಡು ಯಾತರ ಬುದ್ಧಿ ಹರಡುವ ಸಲ್ಲಾ ಪ ಸಾಧುರ ಮಹುಮೆಯ ಕಂಡವರಂತೆ | ವಾದಿಸಿ ತಿರುಗುವದಲ್ಲಾ 1 ಕಾಗೆಯು ಕರ್ರಗೆ ರೂಪದಲ್ಲಿದ್ದರೆ | ಕೋಗಿಲೆವಾಗುವದಲ್ಲಾ 2 ಬಕ ಹಂಸನ ಪರಿಯಾದರ ಕ್ಷೀರೋ | ದಕ ಬೇರಾಗುವದಿಲ್ಲಾ 3 ನೌಲ ಕಂಡು ಹಕ್ಕಿಯು ಕುಣಿವಂತೆ | ಹೋಲಿಕಿ ಗುಣ ಬಿಡುಯಲ್ಲಾ 4 ಮಹಿಪತಿ ನಂದನು ಸಾರಿದ ನೆಚ್ಚರ | ಸ್ವಹಿತವ ಪಡೆಯಚ್ಚರಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುತೀರ್ಥರು ಸಾರಲೆನ್ನಳವಲ್ಲ ಗುಣಶಾಲಿ ಸುರಪ ಸುತೀರ್ಥ ಯತಿವರ ಪ ತವ ಸಂಚಾರ ಚರಣ ಸಮೀರಯುತ ವಿಸ್ತಾರ ಮಹಿಮೆಯ ಅ.ಪ. ಇಂದು ದಾರಿಯಲಿಂದ ಬರುತಿರೆ ಸುಂದರಂದಣವೇರಿ ಯದರಿಗೆ ಬಂದು ಶರಣರ ಸೇವೆಗೊಂಡು ಶೃಂಗಾರ ಕವಚವನಿತ್ತು ನವಸುಖ ಮಾರಮರ್ಮನ ಬಯಸಿ ದ್ಯುತಿವರನಂಘ್ರಿಕಮಲವ 1 ಧನ್ಯನಾದೆನೊ ನಿನ್ನ ನೋಡಿ ಮಾನ್ಯನಾಗುವೆ ಮೌನಿ ಜನರೊಳು ಗಾನ ಮಾಡುವೆ ಜ್ಞಾನಗಯ್ಯನ ಧ್ಯಾನ ಮಾಡಭಿಮಾನ ತೊರೆಯುತ ನಂಬಿ ನಿನ್ನಯ 2 ಸಂಗಮಾಡಿಸು ಡಿಂಗಿಯರ ಕಡೆ ಕಂಗಳಿಂಗದಲಿ ಶೋಭಿಪಡುವ ಸುಶಾಮಗೊರಳನ ಪೊಡದ ತಂದೆವರದಗೋಪಾಲವಿಠಲನ ಪ್ರೇಮಗುರುಮಣ 3
--------------
ತಂದೆವರದಗೋಪಾಲವಿಠಲರು
ಸುತ್ತಬೇಕು ಜನ್ಮವೆತ್ತಬೇಕು ಪ ಕತ್ತಲೆ ಸಂಸಾರದೊಳು ಹೊತ್ತು ಹೊರೆಯ ನಿತ್ಯ ಅ.ಪ ಭರತಖಂಡದೊಳು ಪುಟ್ಟಿ ಮರುತ ಮತವ ಪೊಂದಿಕೊಂಡು ಗುರುಕೃಪೆಯನು ಪಡೆದು ಹರಿ ಸರ್ವೋತ್ತಮನೆಂದರಿಯೋ ತನಕ 1 ಅರಿಷಡ್ವರ್ಗವನ್ನೆ ತ್ಯಜಿಸಿ ದುರುಳರ ಸಂಗ ಕತ್ತರಿಸಿ ಪರಿ ಕಾರ್ಯ ಕರ್ಮದೊಳು ಹರಿಯು ತೋರುವ ತನಕ 2 ಬಿಂಬ ವಿಜಯ ರಾಮಚಂದ್ರ - ವಿಠಲರಾಯನು ಹೃದಯ ಅಂಬರದೊಳಗೆ ಪೊಳೆದು ಅಂಬವಿರಜೆಯಲಿ ಮುಳುಗೊ ತನಕ 3
--------------
ವಿಜಯ ರಾಮಚಂದ್ರವಿಠಲ
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು
ಸುಂದರ ಕೃಷ್ಣನು ಕರೆಯುವ ಬನ್ನಿರೆ ಇಂದುಮುಖಿಯರೆಲ್ಲ ಪ ಚಂದದಿ ವಿಹರಿಸುವ ಬನ್ನಿರಿ ಇಂದುಮುಖಿಯರೆಲ್ಲ ಅ.ಪ ಭಾಸುರಾಂಗನ ಕೂಡಿ ನಾವು ರಾಸಕ್ರೀಡೆಯಲಿ ಈ ಸಂಸಾರದ ಕ್ಲೇಶಗಳನು ಪರಿ ಹಾಸ ಮಾಡುವ ಬನ್ನಿ 1 ಪರಿಮಳ ಕುಸುಮಗಳ ಸೊಗಸಿನ ತರುಲತೆ ಬುಡದಲ್ಲಿ ಮುರಹರ ಕೃಷ್ಣನ ಮುರಳಿಯನೂದುವ ತರಳೆಯ ಅಂಬನ್ನಿ 2 ನಂದಕುಮಾರನಿಗೆ ನಾವು ಮಂದಹಾಸದಲ್ಲಿ ಗಂಧ ತಾಂಬೂಲಗಳಂದದಿ ನೀಡುತಾ ನಂದಪಡುವ ಬನ್ನಿ 3 ಯಮುನಾ ತೀರದಲಿ ನಾವು ಸುಮಬÁಣನ ಸೊಲ್ಲನು ಮುರಿಯುವ ಬನ್ನಿ ಕಮಲಾಕ್ಷಿಯರೆಲ್ಲಾ 4 ಪನ್ನಗವೇಣಿಯರೇ ಈಗ ಪ್ರ ಸನ್ನವದನ ಕೃಷ್ಣ ತನ್ನ ಇಂಗಿತವನರುಹಲು ಎಮ್ಮನು ಸನ್ನೆಯ ಮಾಡುತಿಹ 5
--------------
ವಿದ್ಯಾಪ್ರಸನ್ನತೀರ್ಥರು
ಸುಂದರ ಮೂರುತಿ ಹರಿಯೆ ಬಾ- ರೆಂದು ಕಶ್ಯಪ ಋಷಿ ಅದಿತಿಯರು ಮಂದಹಾಸದಿ ನಮ್ಮ ಮಂದಿರಕೀಗ ಗೋ- ವಿಂದ ಬಾ ಶ್ರೀಮುಕುಂದ ಬಾ ಯಾದವ ವೃಂದ ಬಾ ಬಲುಮುದದಿಂದ ಬಾ ಬಾ- ರೆಂದು ಕರದಾರು ಶೋಭಾನೆ 1 ಅಚ್ಚುತಾನಂತ ಶ್ರೀಹರಿ ನೀನು ಸಚ್ಚಿದಾನಂತಾತ್ಮನೆ ನೀನು ಮಿತ್ರೆ ಲಕುಮಿ ಒಡಗೂಡುತ ಬಾರೆಂದು ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು ಕೀರ್ತಿಪರು ಅನಸೂಯಾತ್ರಿಯರು ಬಾರೆಂದು ಕರೆದಾರು ಶೋಭಾನೆ 2 ಭಾಗವತರ ಪ್ರಿಯ ಬಾರೆಂದು ಭಾರದ್ವಾಜರು ಭಕ್ತಿಯಲಿ ಸತಿ ಸುಶೀಲೆ- ಯರು ಸುಂದರ ನಾರಿಯರು ಕರೆವರು ಕಂಸಾರಿ ಬಾರೆಂದು ಕರದಾರು ಶೋಭಾನೆ 3 ಹಸ್ತಿವರದ ಹರಿ ಬಾರೆಂದು ವಿಶ್ವಾಮಿತ್ರರು ಹರುಷದಲಿ ಸತಿ ಸಹಿತದಿ ಕರೆವರು ಭಕ್ತಿಯಲಿ ಪರಮಾಸಕ್ತಿಯಲಿ ಹರಿಯನು ಸ್ತೋತ್ರದಲಿ ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4 ಕೌಶಿಕ ಯಜ್ಞಪಾಲನೆ ಬಾ ಕಂಸನ ಸಭೆಯಲಿ ಸೆಳೆದನೆ ಬಾ ಹಂಸವಾಹನಪಿತ ಬಾರೆಂದು ಕರೆವರು ಗೌತಮರು ಪತ್ನಿ ಅಹಲ್ಯೆಯರು ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ ಬಾರೆಂದು ಕರದಾರು ಶೋಭಾನೆ 5 ಜಗದುದರನೆ ಶ್ರೀ ಹರಿಯೆ ಬಾ ನಿಗಮತಂದು ಸುತಗಿತ್ತನೆ ಬಾ ಝಗಿಝಗಿಸುವ ಆಭರಣಗಳ್ಹೊಳೆಯುತ ಬಾರೆಂದು ಜಯ ಜಯವೆನ್ನುವರು ಋಷಿ ಜಗದಗ್ನಿಯರು ರೇಣುಕ ಸಹಿತ ಶ್ರೀಶನ ಕರದಾರು ಶೋಭಾನೆ 6 ಮದನ ಗೋಪಾಲನಿಗೆ ಮಂಗಳ ಯದುಕುಲ ತಿಲಕನಿಗೆ ಮಂಗಳ ಕಮಲಾನಾಭ ವಿಠ್ಠಲನಿಗೆ ಸತಿ ಅ- ರುಂಧತಿಯರು ಜಯ ಜಯ ಮಂಗಳವೆಂದು ಕರದಾರು ಶೋಭಾನೆ7 ಶೋಭನವೆನ್ನಿರೆ ಶ್ರೀಹರಿಗೆ ಶೋಭನವೆನ್ನಿರೆ ಮಾಧವಗೆ ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ ಸಿರಿಯರಸಗೆ ದಿವ್ಯ ಶೋಭಾನೆ ಪರಮಪುರುಷನಿಗೆ ಶೋಭಾನೆ ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8
--------------
ನಿಡಗುರುಕಿ ಜೀವೂಬಾಯಿ
ಸುಂದರಾಂಗ ವಿಠಲ | ತಂದೆ ಪೊರೆ ಇವಳಾ ಪ ಭವ ಸಿಂಧು ಉತ್ತರಿಸೀ ಅ.ಪ. ಭವ | ವಾರಿಧಿಗೆ ನವ ಪೋತಚಾರುತವನಾಮ ಸ್ಮøತಿ | ಆರೈಸುವಂತೇಮೂರೆರೆಡು ಭೇದಗಳು | ತಾರತಮ್ಯದ ಬಗೆಯತೋರಿಪೊರೆ ಕನ್ಯೆಯನು | ಮಾ ರಮಣ ದೇವಾ 1 ಆವ ಸ್ವಪ್ನದಿ ವೃದ್ಧ | ಭಾವದ್ಯತಿಗಳ ಕಂಡುಭಾವಿ ಮರುತರು ಎಂಬ ಭಾವದಲಿ ನಮಿಸೀಭಾವ ಭಕುತಿಲಿ ಭೀತಿ | ಭಾವವನೆ ತೋರುತ್ತತೀವರದಿ ಸಂಸ್ತಬ್ಧ | ಭಾವದಿರುತಿಹಳಾ 2 ಪತಿತ ಪಾವನ ರಂಗ | ಕೃತ ಪೂರ್ವ ಪುಣ್ಯದಿಂಮತಿಮಾಡಿ ಹರಿದಾಸ್ಯ | ಹಿತದಿಕಾಂಕ್ಷಿಪಳೋ |ಪತಿಸೇವೆ ದೊರಕಿಸುತ | ಕೃತಕಾರ್ಯಳೆಂದೆನಿಸೊಕ್ಷಿತಿಯೊಳಿವಳನು ಮೆರೆಸೊ | ಪ್ರತಿರಹಿತ ದೇವಾ 3 ಕರ್ಮಪ್ರಾಚೀನಗಳ | ನಿರ್ಮಲಿನ ಮಾಡುತ್ತಧರ್ಮ ಸಾಧನ ಮಾರ್ಗ | ಪೇರ್ಮೆಯಿಂಕೆಡಿಸೋ |ಭರ್ಮಗರ್ಭನನಯ್ಯ | ಹಮ್ಮು ಕಳೆದಿವಳ ತವಸೊಮ್ಮು ನಾಮಾಮೃತದ | ಉಮ್ಮು ನೀ ಕೊಡಿಸೋ 4 ಗಾಮಲ್ಲಗಣಿಗೊಲಿದು | ಧೀವರಗೆ ದೂರಸ್ಥಆವಸಂಗದ ವಿವರ | ಕಾಣ್ವ ಬಲವಿತ್ತಾಮಾವಾರಿಯಾದ ಗುರು | ಗೋವಿಂದ ವಿಠ್ಠಲನೆನೀವೊಲಿಯ ದಿನ್ನಾರ | ಕಾವರನಕಾಣೇ 5
--------------
ಗುರುಗೋವಿಂದವಿಠಲರು
ಸುಧಾಮ ಪ್ರಿಯ ವಿಠಲ | ಬದಿಗ ಪೊರೆ ಇವಳಾ ಪ ವಿಧಿ ಭವಾದ್ಯರ ಜನಕ | ಮುದ ಪ್ರದನೆ ದೇವಾ ಅ.ಪ. ಧೀನ ಜನ ಬಂಧೋ |ಹೀನಾಯ ಕಳೆದು ಮುನಿ | ಮಾನಿನಿಯ ಸಲಹಿದೆಯೋ ಜ್ಞಾನಿಜನ ನಿನ್ನ ಕಾ | ರುಣ್ಯ ಸ್ಮರಿಸುವರೋ 1 ಪಥ | ನೀನೆ ತೋರಿರುವೆ 2 ಸಾಧುಜನ ಸಂಗವನು | ನೀದಯದಿ ಕೊಟ್ಟಿವಳಆದಿ ವಿರಹಿತ ಭವದ | ಬಾಧೆ ಪರಿಹರಿಸೋಮೋದ ತೀರ್ಥರ ಮತದಿ | ಉದಿಸಿಹಸುಕಾರಣದಿಭೇದ ಪಂಚಕ ತಿಳಿಸಿ | ಸಾಧನವಗೈಸೋ3 ಕೃತಿ ರಮಣ ದೇವಾ 4 ಆರ್ತಳಾಗಿಹ ಸ | ತ್ಪಾರ್ಥನೆಯ ಕೈಕೊಂಡುಪೂರ್ತಿಗೈ ಆಭೀಷ್ಟ | ಪಾರ್ಥಸಖ ದೇವಾ |ಗೋಪ್ತ ಗುರು ಗೋವಿಂದ | ವಿಠಲ ಮದ್ಬಿನ್ನಪನಸಾರ್ಥಕವ ಮಾಡೆಂದು | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು