ಒಟ್ಟು 2835 ಕಡೆಗಳಲ್ಲಿ , 118 ದಾಸರು , 1997 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಕ್ಷು ಶ್ರ್ಯವನೆ ಶೇಷಾ - ಪಾಲಯ ಪ ಕ | ಟಾಕ್ಷದಿ ನಾಗನೆಅ.ಪ. ಅಕ್ಷಾರಿಪದಪಾಂಸು ಧರನೇ | ವಾಯುಪುಚ್ಛಾಶ್ರಯಿಸಿ ಜಗಧಾರನೇ ||ಪಕ್ಷಿ ವಾಹಗೆ ಶಯ್ಯ | ಪಕ್ಷೀಯ ಸಮ ಪೂರ್ವತ್ರ್ಯಕ್ಷನೆ ಸೋಮರ್ಕ | ಅಕ್ಷಿ ಅನಲ ಕಾಯೊ 1 ತಾಮಸ್ಸಾಹಂ ತತ್ವ ಮಾನಿಯೇ || ಕಾಯೊಭೂಮಿ ಧರನೆ ಬಹು ಮಾನಿಯೇ |ಆಮಹ ಪಂಚರಾ | ತ್ರಗಮಗಳ್ ಮಾನಿಕಾಮಿತ ಪಾಲಿಸೊ | ಸ್ವಾಮಿ ನಿಮಗೆ ನಮೊ 2 ವಾಸವ ವಂದಿತ ವಾತಾಶನಾ | ನಿನ್ನಆಸನ ಮಾಡಿಹ ರಮೇಶನಾ ||ಹಾಸಿಗೆ ಎನಿಸುತ್ತ | ಲೇಸು ಸೇವಿಸಿ ಹರಿಸಾಸಿರ ನಾಮನ | ದಾಸನೆಂದೆನಿಸಿದೆ 3 ಮುಕ್ತಿಗೆ ಯೋಗ್ಯರ ಮಾರ್ಗದಾ | ಹರಿಭಕ್ತಿಯ ಪಾಲಿಸೊ ದೀರ್ಘದಾ ||ಸಕ್ತಿಯಾಗಲಿ ಮನ | ಸೂಕ್ತಮೇಯನಲ್ಲಿಉಕ್ತಿ ಇದೊಂದನ | ಇತ್ತು ಪಾಲಿಸು ಶೇಷ 4 ಕಾಳೀಯ ಮಡುವಿಗೆ ಹಾರ್ದನ | ಮತ್ತೆಕಾಳೀಯ ನೆಡೆಯಲಿ ಕುಣಿದನಾ ||ಕಾಳಿರಮಣ ಗುರು | ಗೋವಿಂದ ವಿಠಲನಭಾಳ ತುತಿಪ ಮನ | ಪಾಲಿಸೊ ಶೇಷ ಗುರು 5
--------------
ಗುರುಗೋವಿಂದವಿಠಲರು
ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ. ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು 1 ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ 2 ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ 3 ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ 4 ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು 5
--------------
ತಂದೆವರದಗೋಪಾಲವಿಠಲರು
ಚಂದ್ರನ ನೋಡಿರೈ ಸುಶೀಲೇಂದ್ರ ಪಾಡಿರೈ ಸುಜನ ಮಂದಾರ | ಮಾಘ ವಿರೋಧಿ ಸುಮ ತಪಯೋಗಿ ಪ ಯತಿ ಕುಲವರ್ಯ ಸುವೃತೀಂದ್ರ ಕರಾಂಬುಜ | ಜಾತ ಜಿತ ಮನೋಜಾತ || ಪೃಥ್ವಿ ಸುರಾರ್ಚಿತ ಪತಿತ ಮತಾರಣ್ಯಜಾತ ವೇದಸನೀತ ನಳಿನ ಷಟ್ಚರಣ ಅತಿಶಯ ವಿಭವದಿ ಜಗದಿ ಮೆರೆದರವಿತೇಜ ಕುಜನ ಸರೋಜ1 ವರದುಕೂಲದಿ ಪರಿಶೋಭಿಪರಿತ್ತಿಗ್ರಾಮ ಕೃತ ನಿಜಧಾಮ ಪೂರ್ಣಸುಪ್ರೇಮ ಪಡೆದಸನ್ಮಹಿಮ || ಪರಿಮಳ ಸುಧಾನ್ಯಾಯಾಮೃತ ತತ್ವದಸಾರವರೀತ ಗಂಭೀರ ಧರಣಿ ಸುರಾಗ್ರಣಿ ಸುವೃತೀಂದ್ರ ಹೃಕುಮದ ಸುಮನ ಶರತದ 2 ಅಕ್ಷಯ ವತ್ಸರಾಷಾಢ ಸುನೀತ ತಿಥಿ ತ್ರಯದಲಿ | ಲಕ್ಷ್ಯವಿಟ್ಟು ಲಯ ಚಿಂತನೆ ಗೈದ್ಹರುಷದಲಿ ಸುಸ್ವಾಂತದಲಿ || ತ್ರ್ಯಕ್ಷವಿನುತ ಶಾಮಸುಂದರನಂಘ್ರಿ ಧ್ಯಾನಿಸುತಕ್ಷೋಣಿತ್ಯಜಿಸುತ ಚಕೋರ 3
--------------
ಶಾಮಸುಂದರ ವಿಠಲ
ಚನ್ನಕೇಶವ ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ. ಚನ್ನಕೇಶವನಿವನನ್ನು ಹೃದಯದೊಳ್ ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ 1 ಭುವಿಜಾತೆಯೆನ್ನ ಮಾತೆ - ಭುವಿನಾಥನೆನ್ನ ತಾತ ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ 2 ಅಂಡಜವಾಹನಾಖಂಡಲಾರ್ಚಿತನ ಪುಂಡರೀಕಾಕ್ಷನ ಕಂಡು ಕೊಂಡಾಡಿದೆ 3 ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ ವರದ ಶ್ರೀನರಹರಿ ವರದನೆನ್ನೊಳಿರೆ 4
--------------
ನಂಜನಗೂಡು ತಿರುಮಲಾಂಬಾ
ಚರಣಕಮಲಯುಗಕೆ ನಮಿಪೆ ನಿರುತವನುದಿನ | ಶ್ರೀ ರಾಘವೇಂದ್ರ ಪ ಕರುಣಾಸಾಂದ್ರ ಯತಿಕುಲೇಂದ್ರ ಅ.ಪ ವೇನಮತವಿದಾರ ಸುಂದರ ಜ್ಞಾನದಾತ ಗುರುವರ | ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1 ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ | ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2 ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು | ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3 ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ | ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4 ಶ್ರೀಶಕೇಶವಾಂಘ್ರಿದೂತ ದಾಸಜನನುತ | ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
--------------
ಶ್ರೀಶ ಕೇಶವದಾಸರು
ಚಲಿಸದಂದದಿ ಮಾಡು ಎನ್ನನು ಶೈಲೇಂದ್ರವರ್ಯಾ ಪ ನಿನ್ನಾಣೆ ನಿನ್ನಾಣೆ ಸಹಿಸಲಾರದೆ ನಿನ್ನ ಶರಣು ಬಂದೆನೊರಾಯಾ ಅ.ಪ. ಪರಿ ನಗುತಿಪ್ಪುದು ಥರವೇ 1 ಸೂತ್ರ ಏನು ಸರಿಯಾದ ಕಾಲದಲಿ ಹರಿಯಲು ಸರಿದೋರುವುದೇ ರಸಿಕರಿಗೆ2 ಭಾರ ತಾಳೆನೊಬೇಗ ಬರುವಂತೆ ಮಾಡಿ ಪಾಂಡುರಂಗ ಪ್ರಾಯ ಗುರುಕೃಷ್ಣತಂದೆವರದಗೋಪಾಲವಿಠ್ಠಲನಾಣೆ ಪೊರೆಯದಿರೆ 3
--------------
ತಂದೆವರದಗೋಪಾಲವಿಠಲರು
ಚಾರು ನವರತುನ ಮಣಿ ಮಂಟಪಕೆ ಪ ನೀರಜಾಕ್ಷ ಆ ರುಕುಮಣಿ ಭಾ ಮೆಯರೊಡಗೂಡಿ ಅ.ಪ ಹೇಮದ ತಂಬಿಗೆ ಬಿಂದಿಗೆಗಳಲಿ ನೇಮದಿ ಉದಕವ ತುಂಬಿಹರೊ ಕೋಮಲ ತುಳಸೀ ಮಲ್ಲಿಗೆ ಸಂಪಿಗೆ ಪೂಮಳೆಗರೆಯಲು ತಂದಿಹರೊ ಸ್ವಾಮಿ ನಿನಗೆ ಪರಿಮಳ ದ್ರವ್ಯಗಳನು ಪ್ರೇಮದಿಂದಲರ್ಪಿಸಲಿಹರೊ ಚಾಮರ ಸೇವೆಯ ಅರ್ಪಿಸುವರು ಹರಿ ನಾಮ ಹಾಡಿ ಸ್ವಾಗತ ಬಯಸುವರೊ 1 ಮೇಳದ ಮಂಗಳವಾದನ ಒಂದೆಡೆ ಕಹಳೆ ಶಂಖ ದುಂದುಬಿ ಧ್ವನಿಯು ತಾಳ ತಂಬೂರಿ ಮೃದಂಗದ ಶೃತಿಗಳ ಮೇಳನದಲಿ ದಾಸರ ಗಾನ ಶೀಲರಿವರು ಸುಸ್ಸರದಲಿ ವೇದವ ಪೇಳಲು ಕಾಲಕೆ ಕಾದಿಹರೊ ಬಾಲರು ಸಂಭ್ರಮದಲಿ ಝಾಂಗಟೆ ಕೈ ತಾಳಗಳನು ಕರದಲಿ ಪಿಡಿದಿಹರೊ 2 ಲಾಡು ಜಿಲೇಬಿಯ ರಾಶಿಗಳನು ಹೊಸ ಗೂಡೆಗಳಲಿ ತುಂಬಿಟ್ಟಿಹರೊ ನೋಡಲೆ ದಣಿಸುವ ತೆರದಲಿ ಚತುರರು ಮಾಡಿದರೋ ಪಕ್ವಾನ್ನಗಳ ಜೋಡಿಸಿ ಕರಗಳ ಕಾದಿರುವರೋ ಬಲು ನಾಡುನಾಡುಗಳ ಮಂದಿಗಳು ಈಡೇರಿಸುವದು ಭಕುತ ಮನೋರಥ ರೂಢಿಯು ನಿನ್ನದು ಶರಣ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಚಾರು ಹಸ್ತಾಯ 1ಹೃದಯಶೋಭಿತ ಮಹಾ ಕೌಸ್ತುಭಾಭರಣಾಯವಿಧಿಜನಕ ನಾಭಿಪಂಕಜ ಭಾಸುರಾಯಸದಮಲಾಯತ ಕಾಂಚಿದಾಮಯುತ ವಸನಾಯಬುಧಜನಮನೋವೇದ್ಯ ಪಾದಪದ್ಮಾಯ 2ಲಕ್ಷ್ಮೀಕಳತ್ರಾಯ ಸೂಕ್ಷ್ಮಸ್ವರೂಪಾಯಕುಕ್ಷಿಗತಭುವನ ಪರಿಪಾಲಕಾಯಪಕ್ಷೀಂದ್ರಕಂಧರಾರೂಢಾಯ ದುಷ್ಟಜನಶಿಕ್ಷಾಸಮರ್ಥಾಯ ಸಾಕ್ಷಿ ಚೈತನ್ಯಾಯ 3ವಿಶ್ವಸ್ವರೂಪಾಯ ವಿಶ್ವತರು ಮೂಲಾಯವಿಶ್ವಗುಣ ಸಂಹಾರಕಾರಣಾಯವಿಶ್ವನಾಟಕಸೂತ್ರಧಾರಾಯ ನಿತ್ಯಾಯವಿಶ್ವಕೃತ ಸುಕೃತದುಷ್ಕøತ ಲೇಪರಹಿತಾಯ 4ಧರಣಿಕಮಲಾಲಯಾಶ್ರಿತ ದಿವ್ಯ ಪಾಶ್ರ್ವಾಯಸುರಮುನಿ ಸ್ತುತಿ ಘೋಷಪೂರಿತಾಯಪರಮಪಾವನಪುಣ್ಯ ಶೇಷಾದ್ರಿನಿಲಯಾಯಸ್ಮರಜನಕ ಸುರಶಿಖಾಮಣಿ ವೆಂಕಟೇಶಾಯ 5ಓಂ ಅನಘಾಯ ನಮಃಕಂ||ಗಣಪತಿ ನಿನ್ನಾಗ್ನೇಯದಲಿನ ತಾ ನೈರುತ್ಯದೆಶೆಯೊಳಂಬಿಕೆಮರುತನೊಳನುಪಮ ಶಂಕರನೀಶಾನ್ಯನೋಳರ್ಚಿತರಾರೈಯ್ಯ ತಿರುಪತಿಯೊಡೆಯಾನೀನೇ ಗಣಪತಿ ಸೂರ್ಯನುನೀನೇ ಶಿವ ನಿನ್ನ ಶಕ್ತಿ ದೇವಿಯು ನಾನೂನೀನಾಗಿ ನಿನ್ನ ಭಜಿಸಿದೆನೀ ನಿರ್ಣಯ ನಿನ್ನ ವಚನ ವೆಂಕಟರಮಣಾ
--------------
ತಿಮ್ಮಪ್ಪದಾಸರು
ಚಿಕ್ಕ ತಿರುಪತಿವಾಸ - ಶ್ರೀ ವೆಂಕಟೇಶ ಪ ಅಕ್ಕರದಿ ನೀನೆನ್ನ - ತಕ್ಕೈಸಬೇಕೋ ಅ.ಪ. ಚಕ್ರಧರ ದೇವಾಚೊಕ್ಕ ಮೂರುತಿ ಅಜನ | ಪೊಕ್ಕಳಾದಲಿ ಪಡೆದುಲಕ್ಕುಮಿಗೆ ಮೀರ್ದ ಪೊಂ | ಬಕ್ಕಿ ಧೇರನ ಕಾಯೋ 1 ಸಪ್ತ ಪ್ರಕಾರದಲಿ | ಆಪ್ತ ನೀ ನೆಲಿಸಿದ್ದುಗುಪ್ತ ಮಹಿಮನೆ ಜಗಕೆ | ವ್ಯಕ್ತನಾಗದಲೇ |ಕ್ಲುಪ್ತಿಯಿಂದದಿ ಹವಿ | ಭೋಕ್ತø ಯಜ್ಞನಿವೊಲಿದುವ್ಯಕ್ತನಾದೆಯೊ ಜಡದಿ | ಅವ್ಯಕ್ತ ಮೂರ್ತೇ 2 ಮೂರ್ತಿ | ಪ್ರತಿರಹಿತ ದೇವಾ 3 ವರಾಹ | ಸ್ವಾಮಿ ಪುಷ್ಕರಿಣ್ಯಾದಿಆ ಮಹಾ ತೀರ್ಥಗಳ | ವಿಮಾನ ಸ್ಥಿತನಾ |ಈ ಮನೋರೂಪದಲಿ | ನೇಮಾನು ಸಂಧಾನಕಾಮಿಸುವೆ ಶ್ರೀರಮಣ | ಭೂಮಿಗ್ವಲ್ಲಭನೇ 4 ಸರ್ವಜಗ ಸೃಜಿಸುವನೆ | ಸರ್ವವನು ಲಯಿಸುವನೆಸರ್ವಕುತ್ತಮನೆನಿಪೆ | ಶರ್ವವಂದ್ಯಾಸರ್ವ ಪ್ರೇರಕ ನೀನೆ | ಸರ್ವ ಚೇಷ್ಟಕ ನೀನೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಚಿಕ್ಕವನೇನೆ ಮಿಕ್ಕಾದಂಥ | ಮಕ್ಕಳಿಲ್ಲೇನೆ, ನಿಮ್ಮವರೊಳು ||ದಿಕ್ಕಿಲ್ಲವೇನೆ, ಇವಗೆ ತಕ್ಕ |ಬುದ್ಧಿಯ ಕಲಿಸುವವರಿನ್ನು ಪ ತಂಡ ತಂಡದಿ ಬರುತಿಹ ನಮ್ಮನ |ಕಂಡು ಆಡುವ ಆಟಕಿಯ ಬಿಟ್ಟು ||ಚೆಂಡು ಪುಟಿದು ಬಂತು ಬಚ್ಚಿಟ್ಟಿರ್ಯಾಕೆಂದು |ದುಂಡ ತೋಳಗಳೆತ್ತಿ ಭಂಡು ಮಾಡುವನಿವ 1 ಶಿಶುವೆಂದು ಎತ್ತಪ್ಪಿಕೊಂಡು ಮುದ್ದಿಡಲು |ದಶನಗಳಿಂದಧರ ನೋಯಿಸಲು ||ಆಶೆಯಲಸುವ ಪೀರಿದವನಿವನೆಂದಂಜಿ |ಸೊಸಿಯನ್ನಬ್ಬರಿಸಿ ಬೀದಿಯೊಳಂದು 2 ಆರಿಲ್ಲದಾಗೊಬ್ಬವನನ್ನು ಬಾಲಕನೆಂದು |ದ್ವಾರವಿಕ್ಕಿ ನೀರೆ ಮೇಲಿರಿಸಿ ||ಬಾರಯ್ಯ ಮುದ್ದು ಕೊಡಯ್ಯ ಎನೆ ಹದಿ- |ನಾರು ವರುಷದವನಾದ ರುಕ್ಮಭೂಷಾ 3
--------------
ರುಕ್ಮಾಂಗದರು
ಚಿಂತಯಾಮಿ | ರಘುರಾಮಂ | ಸುತ ಕೌಸಲ್ಯೋದರಜಂ |ಸಂತತ ಶರಣರ ಕೃಪಾ | ಪಾಂಗವೀಕ್ಷಾ ಹಸಿತಂ ಪ ಸರಿ ಗ ಸರೀ | ಮಪ ಧಪ ಧಾ | ರಿಸ ನಿಧ ನಿಧ | ಪಮ ಗರಿ ಸದದ್ರುತ - ಸರಿಮಾ ಗರಿ | ಮಪ ದಾಪಮ | ಪಧಸಾ ನಿಧ | ನಿಧ ಪದಪಧ ||ಗರಿ ಸಧ | ``ರಿ ಸ ಧಾ ಸ | ಧಾ ಗ ರಿ ನಿಧಮ | ಗರಿಸಧ | ರವಿ ಕುಲಾನ್ವಯತಿಲಕಂ | ಋಷಿ ವಿಶ್ವಾಮಿತ್ರ ಕೃತಹವನ ಹೋಮ, ಬಾಧಾಗ್ರಸ್ತ | ವಿಮೋಚನ, ಶೀಲಂಅವನಿಜೆ ವೈವಾ, ಹಕ್ಕಾನೀತಂ | ಲಕ್ಷ್ಮಣ ಸಹ, ವಿಧಿಲಾಗ5ನಂ |ಶಿವಧನುವಂ, ಮುರಿದು ರಾಜ | ರುಗಳ ಗರ್ವಹರ | ಶ್ರೀರಾಮಂ 1 ಮಗ ಸಾ ನಿóದ | ನಿóಸಾ ರಿಗಮ | ನಿಧ ಮಾಗರಿ | ಗಮ ಪಗರಿಸದ್ರುತ - ನಿಧನಿಸ ರಿಗಮ ಧನಿಪಧ | ನಿಸ ನಿಧ ನಿಸರಿಗ ಮಗಸನಿ ||ಗರಿಸಧ, ರಿಸ ಧಾ, ಸ ಧಾಆ, ಗರಿ || ನಿದಮ | ಗರಿಸಧ || ರಾಗ - ಧನ್ಯಾಸಿ : ಅನುಜ ಸತಿಸಹ | ವನವಾಸಂ |ನಿಶಿಚರ ಹನನ | ಶೂರ್ಪನಖಿ | ನಾಸಛೇದಂ | ಚರಿತಂ 2 ರಾಗ :ಧಾನಿಸಿ :ನಿಸ ಗಾಮ ಪ | ಗಮ ಪಾನಿಸ | ರಿಸ ರಿನಿ ಸಪ | ಧಪಗಾರಿಸನೀ ಸ ಗ ಮಪ ಗಾ ಮಪನಿಸ | ಪಾ ನಿಸ ಗರಿ ಸನಿಧಪ ನಿಸಗರಿಸಧಾ, ಆರಿಸ ಧಾಸ, ಧಾ, ಗರಿ ನಿಧಮ ಗರಿಸದ || ರಾಗ - ಪರ | ಮಾನುಗ್ರಹ ಶೀಲಂ ರಾಮಂ 3 ಗಾ ಪ ಗರಿ, ಗರಿ ಸಧಸರಿ | ಗಾಪ ದಸದಪ ಗರಿ ಸರಿಗಪಗಗ, ರಿಸ | ರಿಗ, ರಿರಿಸ ಧ | ಸರಿಗರಿ ನಪಗಪ ಧಪಧಸ |ಗರಿಸಧಾ, ಆರಿಸ ಧಾ, ಸದಾ, ಗರಿನಿಧಮ, ಗರಿಸದ || ರಾಗ ಪೂರ್ವಕಲ್ಯಾಣಿ : ಲೇಸು ಕಪಿಗಳ ನಿಚಯ | ಸೀತಾಕೃತಿ ಹುಡುಕುತ |ಆ ಸಮೀರನು | ವಾರಿಧಿಯನು | ಹಾರಿ ಲಂಕೆಯ ಪುರದಲ್ಲಿಅಣುರೂಪದಿ ಹುಡುಕುತ | ಸೀತಾಕೃತಿಯ | ಕಂಡನುದೇಶ ಪುಚ್ಛಾಗ್ನಿಯಲಿ | ದಹಿಸಿ ಸೀತೆ | ವಾರ್ತೆ ಪೇಳಿದನು 4 ಗಾಮಗರಿಸ | ಧ ಸರಿ ಗಮ | ಪಾ ಧಪಸ | ನಿಧಪ ಮಗರಿ |ಗಮಪ ಮಾಪಗಾ | ಮರೀಗ | ಸಾರಿಗಆಮ ಪಧ ಪಸಾ ನಿ |ಗರಿಸಧಾ, ಆಸಧಾ ಸಧಾ ಗರಿ ನಿಧ ಮ ಗರಿಸಧ || ರಾಗ :ಮುಖಾರಿ : ಸತಿ ಪರಿವಾರ ಪುಷ್ಪಕವಿ | ಸ್ವಪುರ ಖೊರಟ 5 ಪಾ ಮಗರಿ | ಸಾ ನಿಧ ಸರಿ | ಮಾಗರಿಸ | ರಿಮ ಪದ ನಿಧ ಸಾ ಸನಿ ಧಪ ಪಾ | ಮಗರಿಸ | ನಿಧಸರಿ ಮಪನಿಧ ಮಪಧಸ ||ಗರಿಸಧಾ ಆರಿಸ ಧಾಅಸ | ಧಾಅ ಗರಿ ನಿಧಮ ಗರಿಸಧ || ರಾಗ ಮಧ್ಯಮಾವತಿ : ಸುರರು ಭಾರ ಕಳೆದ5ುರು ಗೋವಿಂದ ವಿಠಲ 6 ರೀ ಮರಿ ಮಪ | ನೀ ಪಮ ಪನಿ ಸಾ ರಿಸನಿ | ಪಪ ಮಮರಿ ಸ || ರೀಪಮ ರಿಸನಿಪ ರಿಮಪಾ || ರಾಗ :ಪೂರ್ವಕಲ್ಯಾಣಿ || ಧಪ ಸಾ ನಿಧಪಮ | ಮಪಗರಿರಾಗ :ಮೋಹನ || ಸರಿಮಾ ಗರಿ ಸರಿಗಾ | ಪಗರಿ ಸರಿ ಪದಸ ರಾಗ :ಮುಖಾರಿ | ರೀ ಸದಾ ಪದಪ ಗಾರಿ ಸರಾಗ :ನಾಟಿಕುರಂಜಿ || ನಿಸ ಮಗ ಧನಿ ಪಧನಿಸ ರಾಗ : ಸಾವೇರಿ || ಗರಿ ಸದಾ ರಿಸ ಧಾ ಸ | ಧಾ ಗ ರಿ ನಿದಮ ಗರಿಸದ
--------------
ಗುರುಗೋವಿಂದವಿಠಲರು
ಚಿಂತಾಮಣಿಗಮಿತ ಚಿಂತಾಮಣಿ ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ ಪ ಕಂತುಪಿತ ಕೊಟ್ಟರುವ ಸಾಮಥ್ರ್ಯದಿಂದಲೇ ಐಹಿಕ ವಸ್ತುವೀವುದು ಅನಂತ ಶ್ರೀಪತಿ ಚಿಂತಲವಾಡಿ ಕರುಣಿ ಸ್ವ - ತಂತ್ರನು ಇಹಪರದಿ ಐಶ್ವರ್ಯವ 1 ಕಾಕುಮನ ವಾಕ್ಕಾಯ ಶುದ್ಧ ಮಾಡುವ ದೇವಿ ಶ್ರೀ ಕಾವೇರಿ ತೀರದಲಿ ಕುಳಿತು ಸರ್ವ ಭಕುತರಿಗೆ ವರವೀವ ಶ್ರೀಕಾಂತ ನರಸಿಂಹ ಸುಖಜ್ಞಾನಮಯ ದೋಷದೂರ ಗುಣನಿಧಿಯು 2 ಮಮಕಾರ ಅಹಂಕಾರ ಡಂಭತನವನು ಬಿಟ್ಟು ಮಮಸ್ವಾಮಿ ಸರ್ವರಿಗೂ ಪರಮೈಕಸ್ವಾಮಿಯು ಸುಮನಸಾರ್ಚಿತ ಕುಸುಮಸಂಭವನ ತಾತನು ರಮಾಪತಿ ಪ್ರಸನ್ನ ಶ್ರೀನಿವಾಸ ನಮೋ ಎನ್ನಿ 3
--------------
ಪ್ರಸನ್ನ ಶ್ರೀನಿವಾಸದಾಸರು
ಚಿಂತೆಯ ಮಾಡದಿರು ಚದುರೆ ನಿನಗೆ ನಾನು ಕಂತುಪಿತನನು ತೋರುವೆ ಪ ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು ನಿಂತು ಬಾಗಿಲೊಳು ನೋಡೆ ಪಾಡೆ.ಅ.ಪ ಕುಸುಮ ಹಾರವನು ಸುಖನಿಧಿಗೆಕಂದರದಿ ನೀಡಿ ನೋಡೆಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿಎಂದೆಂದಿಗಗಲದಿರೆನ್ನ ರನ್ನ 1 ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ-ಯೂಟಗಳನುಣ್ಣಿಸಿಲೇಸಾಗಿ ತಾಂಬೂಲ ತವಕದಲಿ ತಂದಿಟ್ಟುವಾಸನೆಗಳನೆ ತೊಟ್ಟು ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕುಶ್ರೀಶನ್ನ ಮರೆಯ ಹೊಕ್ಕುಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿವಾಸವಾಗು ಬಿಡದೆ ಎನ್ನ ರನ್ನ 2 ಇಂತು ಈ ಪರಿಯಲ್ಲಿ ಶ್ರೀಕಾಂತನನು ಕೂಡಿ ಏ-ಕಾಂತದಲಿ ರತಿಯ ಮಾಡಿಸಂತೋಷವನು ಪಡಿಸಿ ಸಕಲ ಭೋಗವ ತಿಳಿಸಿಸಂತತ ಸ್ನೇಹ ಬೆಳೆಸಿಅಂತರಂಗಕ್ಕೆ ಹಚ್ಚಿ ಅವನಾಗಿ ತಾ ಮೆಚ್ಚಿಪ್ರೀತಿಯಿಂದಧರ ಕಚ್ಚಿಕಂತು ಕೇಳಿಯೊಳು ಕಡುಚೆಲ್ವ ರಂಗವಿಠಲಇಂತು ನಿನ್ನಗಲ ಕಾಣೆ-ಜಾಣೆ.3
--------------
ಶ್ರೀಪಾದರಾಜರು
ಚಿಂತೆಯನು ಪರಿಹರಿಸು ಚಂದ್ರವದನೇ ಪ ಚಂದ್ರಶೇಖರನಾಣೆ ಬಹುವಿಧದಿ ನೊಂದು ಭ್ರಾಂತನಾದೆತಾಯಿ ಅ.ಪ. ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ ಮಣ್ಣುಪಾಲಾದೆನೇಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿಕಣ್ಣುಕಾಣದೆ ಕೂಪದೊಳು ಬಿದ್ದೆಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ ಶರಣನ ಪಾಲಿಸು ತಾಯಿ 1 ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ ಮನ್ಮಥನ ಬಯಸಿದೆ ಮಾನಹಾನಿಯಾಗಿ ಹೀನನಾದೆನು ನಾನು ಮನ್ಮಥನ ತಾಯೆಪ್ರಾಣ ಪೋಗೋದು ಲೇಸು ಪ್ರಾಣಿಗಳ ಮಧ್ಯದಿಮನೋಮಾನಿನೀ2 ಮತ್ಸ್ಯ ಮೂರುತಿ ತಂದೆವರದಗೋಪಾಲವಿಠ್ಠಲನ ಅಚ್ಚಸುಖ ಶರಧಿಯೊಳಿಪ್ಪ ಮೀನಾಕ್ಷಿಯೇ 3
--------------
ತಂದೆವರದಗೋಪಾಲವಿಠಲರು
ಚಿಂತೆಯಾತಕೆ ಮನವೆ ಗುರುಗಳ ಪಾದ ಚಿಂತನೆಯನು ಮಾಡದೆಪ ಸಂತತ ಬಿಡದಲೆ ಚಿಂತನೆ ಮಾಳ್ಪರ ಅಂತರಂಗವ ತಿಳಿವರು ಗುರುವರರು ಅ.ಪ ಉದಯ ಕಾಲದಲಿವರ ಧ್ಯಾನವ ಮಾಡೆ ಮದಗರ್ವ ಪರಿಹರವು ಮುದದಿಂದ ಮೂರು ವೇಳೆಗಳಲ್ಲಿ ಸ್ಮರಿಸಲು ಹೃದಯ ತಾಪವ ಕಳೆವರು ಗುರುವರರು1 ದೇಶದೇಶವ ತಿರುಗಿ ತನುಮನಗಳ ಬೇಸರಗೊಳಿಸಲೇಕೆ ಪೋಷಿಪ ಗುರುಗಳಪಾದ ನಂಬಿದ ಮೇಲೆ ವಾಸುದೇವನೆ ನಲಿವ ಮುಂದೊಲಿವ 2 ವೇದವಾದಿಗಳೆಲ್ಲರೂ ವಾದವ ಮಾಡಿ ಮಾಧವನನು ಕಾಣಿರೊ ಮೋದತೀರ್ಥರ ಮತಬೋಧನೆ ಮಾಡುವ ಸಾಧು ಗುರುಗಳನೆ ಕೂಡು ಸಂಶಯಬಿಡು3 ಚಿತ್ತದಿ ಸ್ಮರಿಸುವರು ಹರಿ ಮಹಿಮೆಯ ಭಕ್ತಿಲಿ ನಲಿಯುವರು ಚಿತ್ರಗಾಯನ ನೃತ್ಯಗಾನಗಳಿಂ ಪುರು- ಷೋತ್ತಮನನೊಲಿಸುವರು ಹರುಷಿತರು4 ಕತ್ತಲೆ ಮನೆಗಳಲ್ಲಿ ಅಡಗಿಹ ವಸ್ತು ಲಕ್ಷಪರಿಮಿತಿ ಇದ್ದರು ಹಸ್ತದಿ ಜ್ಯೋತಿಯನೆತ್ತಿ ತೋರುವ ಪರಿ ಭಕ್ತರ ಸಲಹುವರು ಗುರುವರರು 5 ಸರಸೀಜಾಕ್ಷನ ನಾಮವು ಹಗಲಿರುಳು ಬಿಡದೆ ಧ್ಯಾನಿಸುತಿರ್ಪರು ಸಿರಿನಾರಾಯಣನನ್ನು ಸ್ಮರಿಸುತ್ತ ಮನದೊಳು ಪರಮಸಂಭ್ರಮ ಪಡುವರು ಗುರುವರರು 6 ಕರುಣದಿ ಸಲಹುವರು ಶಿಷ್ಯರ ಮನ ವರಿತು ವರಗಳನೀವರು ವರ ಕಮಲನಾಭವಿಠ್ಠಲನ ಧ್ಯಾನಿಪಉರಗಾದ್ರಿವಾಸ ವಿಠ್ಠಲದಾಸರನೆ ನಂಬು7
--------------
ನಿಡಗುರುಕಿ ಜೀವೂಬಾಯಿ