ಒಟ್ಟು 761 ಕಡೆಗಳಲ್ಲಿ , 90 ದಾಸರು , 679 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸ್ವತಿ ದೇವಿ ಸರಸ್ವತೀ ಲೋಕಮಾತೆ ದೇವಿ ಪ ಪರಮಕಲ್ಯಾಣಿ ಪಾವನೆವಾಣಿ ಸುರುಚಿರ ಪುಸ್ತುಕಪಾಣಿ ದೇವಿ ಅ.ಪ ಬುದ್ಯಾಭಿಮಾನಿ ಬ್ರಹ್ಮನರಾಣಿ ತಿದ್ದು ಮನದ ಸಂಶಯಗಳನು ದೇವಿ 1 ಮಾತುಮಾತಿಗೆ ನಿನ್ನ ಬೇಡುವೆ ದೇವಿ 2 ಶರಣಜನರ ಸುರಧೇನು ದೇವಿ 3
--------------
ಗುರುರಾಮವಿಠಲ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ- ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ - ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸರಸ್ವತಿ ಸ್ತುತಿ ವಾಣಿ ಪಲ್ಲವ ಪಾಣಿ ನಾಗ- ವೇಣಿ ಹಂಸಗಾಮಿನೀ ಪ ವೇಣಿ ಹಂಸಗಾಮಿನೀ ಸು- ವೀಣಾ ಪುಸ್ತಕ ಧಾರಿಣಿ ಅ.ಪ ಶಾರದೆ ಶ್ರುತಿ ಸಾರನಿಧೇ ವಾರಿಜಾಕ್ಷಿ ಭಾರತೀ ಮಮ- ಕಾರ ಮೋಹಗಳಜಿತೀ 1 ನಾಕಾಧೀಶ ಪೂಜಿತೇ ವಿ- ವೇಕ ಜ್ಞಾನ ಸಂಧೃತೇ 2 ದಾಸರಿಷ್ಟವೀವ ಪಾವಂ ತೋಷವೀಯೇ ಸನ್ಮತಿ ವಾಣಿ3
--------------
ಬೆಳ್ಳೆ ದಾಸಪ್ಪಯ್ಯ
ಸರ್ವಮಂಗಳಸಾರ ಜಯ ಜಯ ಭವ್ಯ ಸಚ್ಚಿದಾನಂದ ಜಯ ಜಯ ಶ್ರೀರಾಮ 1 ಬೋಧನೈಕ ಸುಖ ಜಯ ಜಯ ವಾದ ದೂರವರ ಜಯ ಜಯ ಶ್ರೀರಾಮ 2 ನಿತ್ಯ ನಿರಂಜನ ಜಯ ಜಯ ತತ್ತ್ವ ತಾರಕ ಮಂತ್ರ ಜಯ ಜಯ ಶ್ರೀರಾಮ 3 ವಿಶ್ವರೂಪ ಜಯ ಜಯ ವಾಸುದೇವ ಜಯ ಜಯ ಶ್ರೀರಾಮ 4 ಚಂಡಕೋದಂಡಧರ ಜಯ ಜಯ ಚಂಡಕಿರಣ ಕುಲತಿಲಕ ಜಯ ಜಯ ಶ್ರೀರಾಮ 5 ಮುಕ್ತಿದಾಯಕ ರಾಮ ಜಯ ಜಯ ಪಾಲನ ಲೋಲ ಜಯ ಜಯ ಶ್ರೀರಾಮ 6 ಕಾಮಿತ ಫಲದಾತ ಜಯ ಜಯ ಸೋಮವಂಶಜ ದೇವ ಜಯ ಜಯ ಶ್ರೀರಾಮ 7 ಕೂರ್ಮ ವರಾಹ ಮತ್ರ್ಯಸಿಂಹ ವಾಮನ ಜಯ ಜಯ ಶಕ್ತ ಭಾರ್ಗವ ಕಲ್ಕಿ ಜಯ ಜಯ ಶ್ರೀರಾಮ 8 ಮೌನಿಮಂಡಲ ಮಧ್ಯಗ ಜಯ ಜಯ ಧೇನುಪುರಾವನಶೀಲ ಜಯ ಜಯ ಶ್ರೀರಾಮ 9
--------------
ಬೇಟೆರಾಯ ದೀಕ್ಷಿತರು
ಸಲಹೊ ಶ್ರೀನಿವಾಸ-ಸುದ್ಗುಣ-ನಿಲಯವೆಂಕಟೇಶ ಜಲಜಾಂಬಕ ನೀನಲಸದೆ ಯೆನ್ನನು ಪ ವಾತವುಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಹೆಚ್ಚಿದ ಹೇತುವನೋಡಿ1 ಶ್ವಾಸನಿರೋಧದಲಿ ಸೇರಿದ-ಕಾಸಗಳುದರದಲಿ ಹೆಚ್ಚಿ ಬಲು ಘಾಸಿಪಡಿಸುತಿದೆ 2 ಕಾಯದ ಬಲವೆಲ್ಲಾ-ಕದಲುತ-ಮಾಯವಾದವಲ್ಲ ದಾಯತಪ್ಪಿ ದುರ್ವಾಯುವಿಂದ ತಲೆನೋಯುತ ದೇಹದೊಳಾಯಸ ಹೆಚ್ಚಿತು 3 ನಿದ್ರೆ ಬಾರದಯ್ಯಾ-ನಿಶಿಯೊಳ-ಗೆದ್ದಿರಬೇಕಯ್ಯಾ ಬಿದ್ದಾದ್ದಾಡಿಸುತಿದೆ 4 ಅನ್ನವರೊಚಕವು ಆಪ್ತರೊಳನ್ಯತೆಗೊಚರವು ಮುನ್ನವೈದ್ಯರುಗಳನ್ನು ಕಾಣೆ ನೀ ಕಣ್ಣತೆರದುನೊಡೆನ್ನ ಕಟಾಕ್ಷದಿ5 ರೋಗವುಘನವಯ್ಯಾ-ರೋದನೆ-ಯಾಗಿಹುದೆನಗಯ್ಯಾ ನೀನೇ ಗತಿಯೆಂದಿಗು 6 ಪರಮ ಪುರುಷ ನಿನ್ನ-ಚರಣವ ಮರಹೊಕ್ಕಿಹೆಮುನ್ನ ವರದ ವಿಠಲ ದೊರೆ ವರದಯಾನಿಧೇ 7
--------------
ಸರಗೂರು ವೆಂಕಟವರದಾರ್ಯರು
ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ ಪ. ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು ಬಾಧಿಪ ಖಳನುದರ ಸೀಳ್ದಗೆ ಸರಿದೋರು ಪಾದನಖದಿ ಬೊಮ್ಮಾಂಡವನೊಡೆದನ ಸಾರು ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು 1 ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು ಖ್ಯಾತ ದಿಗಂಬರದೇವನ ಕುಶಲವ ನೋಡು ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು 2 ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ ಕನಸಿನೊಳಾದರು ಪೋಗದಿರಧಮರ ಬಳಿಗೆ ಗು- ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ 3
--------------
ವಾದಿರಾಜ
ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ಧ್ರುವ ವಿದ್ಯಾ ವ್ಯುತ್ಪತ್ತಿ ಬೀರಿದರೇನು ರಿದ್ಧಿಸಿದ್ಧಿಯುದೋರಿದರೇನು 1 ಜಪತಪ ಮೌನಾಶ್ರಯಿಸಿದರೇನು ಉಪವಾಸದಿ ಗೊಪೆ ಸೇರಿದರೇನು 2 ದೇಶದ್ವೀಪಾಂತರ ತಿರುಗಿದರೇನು ವೇಷ ವೈರಾಗ್ಯವ ತೋರಿದರೇನು 3 ಭಾನುಕೋಟಿತೇಜ ಒಲಿಯದೆ ತಾನು ಅನೇಕ ಸಾಧನಲ್ಯಾಗುವದೇನು 4 ದೀನ ಮಹಿಪತಿಸ್ವಾಮಿಯಾಶ್ರಯಧೇನು ಮನವರ್ತದೆ ಕೈಯಗೊಡುವ ತಾನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಿಂಧುಶಯನನೆ ಸರ್ವಬಂಧುಬಳಗ ನೀನೆ ತಂದೆ ನೀ ಬಿಟ್ಟರೆ ಬಂಧುಗಳ್ಯಾರಿಲ್ಲ ಪ ಒಂದು ವೃಕ್ಷದಿ ಬಂದು ಪಕ್ಷಿಗ ಳ್ವøಂದ ಗೂಡಗಲ್ಹೋಗುವಂದದಿ ಒಂದಕೊಂದು ಸಂಬಂಧವಿಲ್ಲದ ಬಂಧುವೆಂಬುವರೆಲ್ಲ ಪುಸಿಯು ಅ.ಪ ಕೊಳದಿ ಮಕರಿಗೆ ಸಿಲ್ಕಿ ಬಳಲುತಿರುವ ಕÀರಿಯ ಬಲವಾಗುಳಿಸಿದರಾರು ಬಳಗ ಹಿಂಡುಗಳಿರ್ದು ನಳಿನಲೋಚನ ನೀನೆ ಗತಿಯೆನೆ ಒಲದು ಆ ಕ್ಷಣ ಕರಿಯನುಳುಹಿದಿ ತಿಳಿದು ಭಜಿಸುವ ದಾಸಜನಕತಿ ಸುಲಭನೆಲೊ ನೀ ಜಲಜನಾಭ 1 ಕುರುಪತಿಸಭೆಯೊಳು ಇರುತಿರೈವರು ಪರಿ ದುರುಳ ಕೊಳ್ಳುತಲಿರೆ ನೆರೆದ ಪತಿಗಳು ಸುಮ್ಮನಿರುತಿರೆ ಹರಿಯೆ ಗತಿಯೆಂದು ತರುಣಿ ಮೊರೆಯಿಡೆ ಮಾನವ ಕಾಯ್ದಿ ಚರಣಭಕ್ತರ ನಿರುತರಸುರಧೇನು 2 ದೃಢದಿ ಶ್ರೀಹರಿಯೆಂದು ನುಡಿಯುವ ಬಾಲಗೆ ಹಿರಣ್ಯ ಕಡುವೈರಿಯಾಗಿ ಗಡನೆ ತೋರ್ಹರಿ ಮೂಢ ಎಲ್ಲೆನೆ ಒಡನೆ ಕಂಬದಿ ಮೂಡಿ ದುರುಳನ ಒಡಲ ಬಗಿದು ಪಿಡಿದು ಭಕ್ತನ ಬಿಡದೆ ಸಲಹಿದಿ ಕಡುದಯಾನಿಧೆ 3 ಇಳೆಪತಿ ಪಿತನಿದಿರೊಳ್ ಮಲತಾಯಿಕೃತಿಯಿಂದ ಬಲುನೊಂದು ಧ್ರುವರಾಜ ಕಳವಳಗೊಂಡು ಜಲಜನಾಭನ ಮೊರೆಯನಿಟ್ಟು ಚಲಿಸದೆ ಮನಮುಟ್ಟಿ ತಪಿಸಲು ಒಲಿದು ಧ್ರುವಪದವಿತ್ತಿ ಭಕ್ತರ ಕಲ್ಪಿತವನೀವ ಕಲ್ಪತರು ನೀನು 4 ಪ್ರಾಣೇಶ ಶ್ರೀರಾಮ ಧ್ಯಾನಿಪರಿಗೆ ಸತ್ಯ ನಾನಾದೈವದ ಬಲವು ನೀನೆಯಾಗಿರುವಿ ಕಾನನದಿ ಕಲ್ಲನ್ನು ತುಳಿದು ದಾನ ಕೊಟ್ಟೆಯ ಜೀವ ಸುದತಿಗೆ ಜ್ಞಾನವಿಲ್ಲದಧಮ ಎನಗೇನು ಶಕ್ಯ ನಿನ್ನ ಮಹಿಮೆ ಪೊಗಳಲು 5
--------------
ರಾಮದಾಸರು
ಸಿರಿ ಮನುಜಕೇಸರಿ ಧರಣಿ ಸುಮನಸಗೇಯ | ಮೊರೆಹೊಕ್ಕೆ ನಿನ್ನನು ತರಣಿ ಸನ್ನಿಭಗಾತ್ರ | ಕೀರಾಬ್ಧಿಶಯ್ಯ ಪ ಸರಸಿಜಾನನ ನಜಕ ತವಪದ ಮರೆದ ಪಾಮರನಾಗಿ ನಾ ಭವ ಶರಧಿಯೊಳು ಬಿದ್ದು ಪರಿದು ಪೋಗುವೆ ಎರಗರಿಪುಧ್ವಜನಾಗಿ ನೀ ಬಂದು ಸೂನು | ಸರ್ವೇಶ ರಾಘವ ಭಜಕಜನ ಸುರಧೇನು | ಸ್ವರತ ಸುಖಮಯ ಸುಜನ ವಾರಿಜ ಭಾನು ಖಳವನ ಕೃಶಾನು ತ್ರಿಜಗ ಪೋಷಕ ಪರಮ ಸುಲಭ ನೀ ನಿಜದಯದಿ ಹರಿಮದವ ಖಂಡ್ರಿಸಿ ವೃಜದ ತುರುಗಳ ಕಾಯ್ದ ಸಜನುತ ದ್ವಿಜಪ ಸುತೆ ಪತಿಧ್ವಜನ ಸುತನೆ 1 ಪತಿತ ಪಾವನ ರಂಗ | ಸಂತತದಿ ನಿನ್ನನು ಸ್ತುತಿಪ ಸುಜನರ ಸಂಗ | ನೀನಿತ್ತು ಪಾಲಿಸು ದಿಜ ತತಿ ಮಾತಂಕ ಮರಿಗಳಿಗೆ ಸಿಂಗ ಸಿತ ತುರಂಗನ ರಥದಿ ಶೋಭಿಪ ಅತುಳ ಮಹಿಮನ ಜನನಿ ಅನುಜನಿಗೆ ಹಿತದಿ ಭ್ರಾತದಿ ಭೀತಿ ಬಿಡಿಸಿದ ಶೃತಿಗೆ ನಿಲುಲದ ಚ್ಯುತ ವಿದೂರನೆ 2 ಸಾಮಗಾನ ವಿಲೋಲ ಸುರರಾಜ ಪೂಜಿತ ಕಾಲ | ಕರಿದನುಜ ಹರನುತ ಸ್ವಾಮಿ ಶ್ರೀವನಮಾಲಧರ ಸುಗುಣಶೀಲ ಕಾಮಪಿತ ಹಿಮಧಾಮ ವದನ ಸು ಧಾಮಸಖ ಸುರಸ್ತೋಮ ವಂದಿತ ಯಾಮಿನೀ ಚರವೈರಿ ವಾಮನ ಶ್ರೀಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ
ಸಿರಿಕೃಷ್ಣ ವಿಠಲನೆ | ಪೊರೆಯ ಬೇಕಿವಳಾ ಪ ಮರುತಾಂತರಾತ್ಮಕನೆ | ಶರಣ ಸುರಧೇನೂ ಅ.ಪ. ಭವ | ಕರಿಗೆ ಕೇಸರಿಯೇ |ಮರುತ ಮತ ತತ್ವಗಳ | ಅರಿವು ಕೊಡುತಲಿ ಇವಳಕರುಣನೋಟದಿ ನೋಡೊ | ಸರ್ವದೇವೇಡ್ಯಾ 1 ಕಂಸಾರಿ ತವದಾಸ್ಯ | ಶಂಸನಾರ್ಹತೆಯರಿತುಸಂಶಯವುರಹಿತೆಪದ | ಪಾಂಸು ಬಯಸುವಳೋ |ಹಂಸವಹ ವಂದ್ಯ ವೀ | ಪಾಂಸಗನೆ ಸಿರಿಲೋಲವಂಶವೃದ್ಧಭಿಲಾಷೆ | ಹಂಸಪೂರೈಸೋ 2 ಕಾಯ ಬೇಕೋ 3 ಪವನ ವಂದಿತ ದೇವಾ | ಭವವನಧಿ ನವಪೋತತವನಾಮ ಸಂಸ್ಕøತಿಯ | ಪವನ ಮೂರರಲೀ |ಅವಶದಲಿ ಕೀರ್ತಿಸುವ | ದಿವ್ಯಭಕ್ತಿಯ ಜ್ಞಾನಹವಣಿಸುತ ಶ್ರೀಹರಿಯೆ | ತಾವಕಳ ಪೊರೆಯೇ 4 ಕರ | ಪುಟವ ಜೋಡಿಸಿ ಬೇಡ್ವೆಧಿಟಗುರೂ ಗೋವಿಂದ | ವಿಠಲ ಪೊರೆ ಇವಳಾ 5
--------------
ಗುರುಗೋವಿಂದವಿಠಲರು
ಸುಖವಾದರುಬರಲಿಈ ಕ್ಷಣ ದುಃಖವಾದರು ಬರಲಿಅಕಲಂಕ ಚರಿತನು ಸಕಲರಕ್ಷಕನು ಮಕರಾಂಕರಿಪು ಶಿವಸುಖನಾಗಿರುತಿರೆ ಪ ಬಾಳಬಲ್ಲವನೆನಲಿಮೂರ್ಖನು ಖೂಳನು ಇವನೆನಲಿಕಾಲಕಾಲ ಕರುಣಾಲವಾಲನನೀಲಕಂಠನ ನಾಮ ನಾಲಗೆಯಲ್ಲಿರೆ1 ನಿಂದಿಸಿದವರುಗಳುಗುರುಗಳು ಬಂಧು ಬಾಂಧವರವರುಸಿಂಧುರ ಬಂಧುರ ಚರ್ಮಾಂಬರನ-ರ್ಧೇಂದುಮೌಳಿ ತಾ ಬಂದು ರಕ್ಷಿಸುತಿರೆ 2 ದೊರೆ ಮುನಿದರದೇನುಮತ್ರ್ಯು ಜರೆದು ನುಡಿದರೇನುಸುರರು ದಾನವರು ಮುನಿದರಂಜುವೆನೆವರ ಕೆಳದಿಯ ರಾಮೇಶ್ವರನು ರಕ್ಷಿಸುತಿಹರೆ 3
--------------
ಕೆಳದಿ ವೆಂಕಣ್ಣ ಕವಿ
ಸುಜನ ಬುಧಗೇಯ ಮೇದಿನೀ ಸುರವಂದ್ಯ ಶ್ರೀಪಾದರಾಯ ಪ ಸಕಲಶಾಸ್ತ್ರ ಕಲಾಪ ಸನ್ಯಾಸ ಕುಲದೀಪಸಕಲ ಸತ್ಯಸ್ಥಾಪ ಸುಜ್ಞಾನದೀಪಪ್ರಕಟ ಪಾವನರೂಪ ಅರಿಕುಜನ ಮತಲೋಪನಿಕಟ ವರ್ಜಿತ ಪಾಪ ಕೀರ್ತಿ ಪ್ರತಾಪ 1 ಭೃಂಗ ಶುಭ ಚರಿತಾಂಗ ಷಟ್ಫಾಸ್ತ್ರಸÀಂಗ 2 ಸಿರಿಕೃಷ್ಣ ದಿವ್ಯ ಪಾದಾಬ್ಜ ಚಿಂತಾಲೋಲವರ ಹೇಮವರ್ಣಮುನಿಪತಿಯ ಸುಕುಮಾರಗುರುತಿಲಕ ಶ್ರೀಪಾದರಾಯ ಅಮಿತೋದ್ಧಾರಶರಣ ಜನ ಸುರಧೇನು ಭಕ್ತಮಂದಾರ 3
--------------
ವ್ಯಾಸರಾಯರು
ಸುದಯನೆ ಮಲಗಿದ್ಯಾ ತಂದೆ ಗೋವಿಂದ ಇದು ಏನು ಮಾಡಿದ್ಯೋ ಭಕುತರಾನಂದ ಪ ಗಳಿಗೆಬಿಡದೆ ಹೊನ್ನು ಅಳೆದಳೆದು ಬೇಸತ್ತು ಮಲಗಿದಿ ಸುಮ್ಮನೆ ಕಲಿಜನರ ಗತಿಯೇನು 1 ಮಹಂತರ ಅಧಿಕಾರ ಭ್ರಾಂತರೊಶಕೆ ನೀಡಿ ಚಿಂತೆ ಪರಹಿತ ಮರೆದು ಸಂತಸದ್ಹಾವಿನ ಮೇಲೆ 2 ಪ್ರತಿ ವರುಷದುತ್ಸವಕೆ ಅತಿಭಕುತಲಿ ಬರುವ ಸುತರೊಳು ದಯತಪ್ಪಿ ಅತಿ ಆನಂದದಲಿ 3 ರೂಢಿಯ ಮೇಲೆ ಗಾಢನಿದ್ರೆಯೊಳು 4 ಕಾಮಿತಜನರ ಸುರಕಾಮಧೇನಲ್ಲವೆ ನೀನು ಭೂಮಿಪಾಲಿಸು ಏಳು ಸ್ವಾಮಿ ಶ್ರೀರಾಮಯ್ಯ 5
--------------
ರಾಮದಾಸರು
ಸುಂದರಿಯರು ಅಂದದಾರತಿ ಬೆಳಗಿ ಕುಂದರದನ ದಿವ್ಯ ಮಂದಸುಹಾಸೆಗೆ ಇಂದಿರಾಪತಿ ಹರಿಗೆ ಪ ಭಂಗ ನಿರ್ಮಲ ಗುಣ ಸಂಗರಹಿತ ಹರಿಗೆ 1 ಮಹಿಮ ನಾದ ವಿನೋದ ಹರಿಗೆ 2 ಪೀತಾಂಬರಾಚ್ಯುತ ಧಾತೃಕಾರಣ ನಿಜ ವಾತ್ಸಲ್ಯ ಭಕ್ತ ಹರಿಗೆ 3 ಜಂಭಾರಿ ಸೋದರ ಗಂಭೀರದಾಕಾರ ಸ್ತಂಭ ತನುಜ ಹರಿಗೆ 4 ಮಾನವಿವರ್ಜಿತ ಮಾನವಪೂಜಿತ ಧೇನುನಗರ ಹರಿಗೆ 5
--------------
ಬೇಟೆರಾಯ ದೀಕ್ಷಿತರು