ಒಟ್ಟು 2736 ಕಡೆಗಳಲ್ಲಿ , 100 ದಾಸರು , 1962 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರಳಿದರೋ ತಂದೆ ಮುದ್ದು ಮೋಹನರೂಮರಳಿ ಬಾರವ ಪುರಿ ನರಹರಿ ಪೂರಕೇ ಪ ತರಳತನಾರಭ್ಯ ದ್ವಾದಶ ವತ್ಸರಪರಿಸರಾಗಮ ಪಠಿಸಿ ನಿಪುಣನೆನಿಸೀ |ಇರಲು ಬಂದರು ಮುದ್ದು ಮೋಹನ್ನದಾಸರುಕರಿಗಿರಿ ನರಹರಿ ರಥವ ಉತ್ಸವಕೇ 1 ಕರಿಗಿರಿ ಸನಿಯದ ನರಸಿಪುರದೊಳಿದ್ದವರಸುಬ್ಬರಾಯಾಖ್ಯ ಭರದಿಂದ ಬರುತಾ |ಗುರು ಮುದ್ದು ಮೋಹನರ ಪದಪಾಂಸು ಶಿರದಲ್ಲಿಧರಿಸಿ ಬಿನ್ನವಿಸಿದರುಪದೇಶ ಕೊಂಡಿರೆಂದೂ 2 ಪರಿಕಿಸಲೋಸುಗ ಅರುಣ ಉದಯ ಮುನ್ನಕರಿಗಿರಿ ಪುರಬಿಟ್ಟು ತೆರಳಲು ಅವರೂ |ಭರದಿ ಅಡ್ಡೈಸುತ ಗುರುಪಾದದಲಿ ಬಿದ್ದುವರ ಉಪದೇಶವ ಕೈಗೊಂಡ ಧೀರಾ 3 ಶುಭ ಅಂಕಿತವಾ |ತಂದೆ ಮುದ್ದು ಮೋಹನ್ನ ವಿಠ್ಠಲನೆಂದುಛಂದೋಗಮ್ಯನೆ ದಿವ್ಯ ನಾಮವನಿತ್ತರು 4 ದಾಸ ದೀಕ್ಷೆಯ ಪೊತ್ತು ದಾಸ ಕೂಟವ ನೆರಸಿಶೇಷಗಿರೀಶನೆ ಸರ್ವೇಶನೆನುತಾಎಸೆವ ಅಂಕಿತ ಮಂತ್ರ ಉಪದೇಶಗೈಯ್ಯುತ್ತದಾಸರ ಕ್ಲೇಶವ ಹರಿಸೀದ ಗುರುವೇ 5 ವರಚೈತ್ರ ಪಂಚಮಿ ವರುಷವು ವಿಕ್ರಮಶರಣರ ಪೊರೆಯಲು ಕರಿಗಿರಿಯಲ್ಲೀ |ಗುರು ಮುಖ್ಯ ಪ್ರಾಣ ಪ್ರತೀಕವ ನಿಲಿಸುತಆರು ಮೂರನೆ ದಿನ ಹರಿಯ ಸೇರುವೆ ನೆನುತಾ 6 ನರಲೀಲೆ ಕೊನೆಗೈದು ಪರಮ ಪುರುಷಹರಿಶಿರಿಯರಸಗೆ ಪ್ರೀತೆ ಪಾತ್ರನೆನಿಪಾನೂ |ವರ ಗುರು ಗೋವಿಂದ ವಿಠಲನ ಚರಣವಸ್ಮರಿಸಿ ಹಿಗ್ಗುತ ಪೊರಟ ನೀರಿಕ್ಷಿಸುತಾ7
--------------
ಗುರುಗೋವಿಂದವಿಠಲರು
ತೊಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ ಪ ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ ತೂಗಿರೆ ಗುರುರಾಘವೇಂದ್ರರ ಅ.ಪ ಕುಂದಣಮಯವಾದ ಛಂದ ತೊಟ್ಟಿಲೊಳು ನಂದದಿ ಮಲಿಗ್ಯಾರ ತೂಗಿರೆ ನಂದನಂದನ ಗೋವಿಂದ ಮುಕುಂದನÀ ನಂದದಿ ಭಜಿಪರ ತೂಗಿರೆ 1 ಯೋಗನಿದ್ರೆಯನ್ನು ಬೇಗನೆಮಾಡುವ ಯೋಗೀಶ ವಂದ್ಯರ ತೂಗಿರೆ ಭೋಗಿಶಯನನಪಾದ ಯೋಗದಿ ಭಜಿಪರ ಭಾಗವತರನ ತೂಗಿರೆ 2 ನೇಮದಿ ತಮ್ಮನು ಕಾಮಿಪಜನರಿಗೆ ಕಾಮಿತ ಕೊಡುವರ ತೂಗಿರೆ ಪ್ರೇಮದಿ ನಿಜಜನರ ಆಮಯವನಕುಲ - ಧೂಮಕೇತೆನಿಪರ ತೂಗಿರೆ 3 ಅದ್ವೈತಮತದ ವಿಧ್ವಂಸನ ನಿಜ ಗುರು ಶುದ್ಧ ಸಂಕಲ್ಪದಿ ಬದ್ಧ ನಿಜಭಕ್ತರ ಉದ್ಧಾರಮಾಳ್ಪರ ತೂಗಿರೆ 4 ಭವ ತ್ಯಜನೆ ಮಾಡಿಸಿ ಅವರ ನಿಜಗತಿ ಇಪ್ಪರ ತೂಗಿರೆ ನಿಜಗುರು ಜಗನ್ನಾಥವಿಠಲನ್ನ ಪದಕಂಜ ಭಜನೆಯ ಮಾಳ್ಪರ ತೂಗಿರೆ 5
--------------
ಗುರುಜಗನ್ನಾಥದಾಸರು
ತೊರವಿ ನರಸಿಂಹನ ಸ್ತೋತ್ರ ನರಹರೀ | ಪಾಲಿಸೊ ಎನ್ನ | ನರಹರೀ ಪ ನರಹರೀ | ನಮಿಸೂವೆ ನಿನ್ನ | ಚಾರುಚರಣ ಕಮಲಕ್ಕೆ ಮುನ್ನ | ಅಹತೊರವಿ ಕ್ಷೇತ್ರದಲ್ಲಿ | ಪರಿಪರಿ ಭಕುತರಮೊರೆಯ ಕೇಳ್ಕರುಣದಿ | ವರವ ನೀಡುತಲಿಹ ಅ.ಪ. ಪೂರ್ವ ಸಾಲಿಗ್ರಾಮ ರೂಪ | ದಲ್ಲಿದೂರ್ವಾಸ ಪೂಜಿತ | ರೂಪ | ಇದ್ದುಓರ್ವ ಭಕ್ತನಿಗೆ ಸಲ್ಲಾಪ | ತೇಜಗೈವದ ಕೇಳ್ವದು ಅಪರೂಪ | ಅಹಊರ್ವಿಯೊಳ್ ಚಿಮ್ಮಲಗಿ | ಸರ್ವಾಧಿಕವು ಕ್ಷೇತ್ರಇರ್ವೆ ನಾನಲ್ಲೀಗ | ತರ್ವೋದು ತೊರವೀಗೆ 1 ಸೊಲ್ಲ ಲಾಲಿಸಿ ಗಾಢ ಭಕ್ತ | ಎದ್ದುಚೆಲ್ಲೀದ ವಾರ್ತೆ ಸರ್ವತ್ರ | ಜನರಲ್ಲಸ ಗೊಳದೆ ಮುಂದತ್ತ | ಹಸಿಹುಲ್ಲನು ತೆಂಕದಿಶಿಯಿತ್ತ | ಅಹಚೆಲ್ಲುತ ಪೋಗುತಿರೆ | ಜ್ವಲೀಸಿತದುಚಿಮ್ಮಲ್ಲಿಗಿ ಊರ್ಬಳಿ | ಒಳ್ಳೆ ಕೃಷ್ಣಾತೀರ 2 ಸ್ವಪ್ನ ಸೂಚಿತ ತಾಣ ಬಗೆದು | ನೋಡೆಅಪ್ಪ ನೃಹರಿ ಕಂಡನಂದು | ಭಕ್ತರಪ್ಪಿ ಆನಂದಾಶ್ರು ಬಿಂಧು | ಕೈಚಪ್ಪಾಳೆ ಬಡಿದುಘೇಯೆಂದು | ಆಹಅಪ್ಪಾರ ಮಹಿಮನ | ಗೊಪ್ಪಾದ ಘನಮೂರ್ತಿಉಪ್ಪರಿ ತಂದಿಡುತ | ದರ್ಪದಿ ನಿಂತರು 3 ಶಿರಿ ಹಾಗೂ ಪ್ರಹ್ಲಾದರಾಯ | ಯುಕ್ತಹಿರಣ್ಯಕನ ತನ್ನ ತೊಡೆಯ | ಮೇಲೆಇರಿಸಿ ಉದರ ಸೀಳ್ದ ಬಗೆಯ | ಕೇಳಿಕರುಳನು ಮಾಲೆಯ ಪರಿಯ | ಆಹಧರಿಸುತ್ತ ತೋರ್ದನು | ಹಿರಣ್ಯಕಶಿಪೂಜತರಳ ಭಕ್ತನ ತೆರ | ತರಳನರಿದಿಷ್ಟೆಂದು 4 ಶಿಷ್ಟ ಮತ್ಸ್ಯಾವತಾರ | ಯುಕ್ತಶ್ರೇಷ್ಠ ಪ್ರಭಾವಳಿಹಾರ | ಸುವಿಶಿಷ್ಟದಿ ನರ ಮೃಗಾಕಾರ | ನಾಗಿಅಷ್ಟವು ಭುಜಯುಕ್ತಾಕಾರ | ಆಹಶಿಷ್ಟ ಭಕ್ತರಿಂದ ಕಷ್ಟವಿಲ್ಲದೆ ತೆರಳಿಶ್ರೇಷ್ಠ ತೊರವಿಯಲ್ಲಿ ಇಷ್ಟನಾಗಿ ನಿಂದ 5 ಮುನ್ನಿದ್ದ ನೃಹರಿಯ ಶಿಲೆಯ | ಕೊಂಡುಚೆನ್ನ ತೀರ್ಥದಿ ನರಹರಿಯ | ಇಡಲುಕೃಷ್ಣೆಗೆ ಪೋಗುವ ಪರಿಯ | ಪೇಳೆಘನ್ನ ಮೂರ್ತಿಯ ಒಯ್ದ ಬಗೆಯ | ಆಹ ಇನ್ನು ಮುನ್ನು ಪೇಳ್ವ | ನನ್ನೆಯ ಜನರಿಹರು ಮನ್ನಿಸುತೀವಾರ್ತೆ ಚಿನ್ಮಯನ ಕೊಂಡಾಡಿ 6 ಗುಪ್ತಾವು ಗಂಗಾ ಸನ್ನಿಹಿತ | ತೀರ್ಥಉತ್ತಮ ದಿಂದಭಿಷೇಚಿತ | ನಾಗಿನಿತ್ಯವು ಪವಮಾನ ಸೂಕ್ತ | ಪಂಚಯುಕ್ತವು ಪೂಜಾದಿ ಕೃತ | ಆಹಭಕ್ತಿ ಪೂರ್ವಕವಾದ | ಉತ್ತಮ ಸೇವೆಯನಿತ್ಯ ಕೈಗೊಳ್ಳುತ | ಭಕ್ತರಭೀಷ್ಟದ 7 ಮಾಸ | ಎರಡುಉತ್ಸವ ವೈಭವ ಘೋಷ | ಕೇಳಿ ಕುತ್ಸಿತ ಜನರೊಲ್ಲ ಈಶ | ಅಂತೆ ಸಚ್ಛಾಸ್ತ್ರ ಪ್ರವಚನ ಪೋಷ | ಆಹವತ್ಸಾರಿ ದುರುಳನ | ಕುತ್ಸಿತ ಉದರವವಿಸ್ತ್ರುತ ನಖದಿಂದ | ಕುತ್ತಿದ ಚಿಂತಿಸು 8 ನರಹರಿ ನಾಮಕ ಕವಿಯು | ಇಲ್ಲಿತೊರವಿಯ ನರಹರಿ ಸನಿಯ | ಚೆಲ್ವವರರಾಮ ಕಥೆಯನ್ನು ಬರೆಯು | ಅವ - ಕುವರ ವಾಲ್ಮೀಕಿಯೆ ಮೆರೆಯು | ಆಹತೊರವೆ ರಾಮಾಯಣ | ವಿರಚಿತ ವಾಯ್ತಿಲ್ಲಿಹರಿಯನುಗ್ರಹ ಜಾತ | ವರ ಕವಿತೆ ಉಲ್ಲಾಸ 9 ಹೃದಯ ಗುಹೆಯಲ್ಲಿ ವಾಸ | ಉಪನಿಷದು ಪೇಳ್ವದು ಅಂತೆಲೇಸ | ಬಲುಮುದದಿಂದ ಮಾಳ್ಪದ ವಾಸ | ಅಂಥಬುಧಜನಕಹುದು ಸಂತೋಷ | ಆಹವಿಧವು ಈ ಪರಿಯೆಂದು | ವಿಧಿಸಲು ಜಗತೀಗೆಹದುಳದಿ ತೊರವಿ ಸ | ನ್ನಿಧಿ ಗುಹೆಯೊಳುವಾಸ 10 ವಿಭವ | ದಿಂದಲೀವನು ಮುಕ್ತಿಯ ಸುಖವ | ಈತಕೈವಲ್ಯಾಕಧಿಪತಿ ಇರುವ | ಆಹತಾವಕನಾಗಿ ಗುರು | ಗೋವಿಂದ ವಿಠಲನಭಾವದಿ ನೆನೆವಂಗೆ | ತೀವರ ವರವೀವ11
--------------
ಗುರುಗೋವಿಂದವಿಠಲರು
ತೊರವಿ ನರಹರಿ ಸ್ತೋತ್ರ ಹರಿಯು ನಿಂದಿಹ ನೋಡೀ | ಭೂತಳದಿ ತೊರವಿಲಿಹರಿಯು ಇಂದಿರೆಗೂಡಿ | ಒಡವೆರೆಸಿ ಸರ್ವದಶರಣ ಜನರೊಡನಾಡೀ | ಸುಖವೀವ ನೋಡೀ ಪ ಹರಿಯೆ ಪರನೆಂಧ್ಹೇಳ್ಪ ಬಾಲಕೆದುರುಳ ಕಾಶ್ಯಪು ಪರಿಪರೀಯಲಿಕರ ಕೆರೆಯ ಗೊಡಲಾಗ ನರಹರಿತರುಳನುದ್ಧರ ಗೈದ ಶ್ರೀಹರಿ ಅ.ಪ. ಉದರ ಪೋಷಕ ಬೋಧಾ ಗುರುಶಂಡಮರ್ಕರು ಮುದದಿ ತಿಳುಹಲ ಗಾಧ | ಸರಿಸುತ್ತ ದೂರದಿಹದನ ಪೇಳಿದ ವೇದ | ಪ್ರತಿಪಾದ್ಯ ಶ್ರೀಹರಿವಿಧ ವಿಧವು ಕಾರ್ಯಗಾಧ | ಸೃಷ್ಠಿ ಲಯ ಮೊದಲಾದಅದುಭೂತವು ಎನೆ ಕಾರ್ಯ ಬಹಳವಗೈದು ಲೀಲೆಯ ತೋರಿ ಜಗದೊಳುಮುದವ ಬೀರುತ ಸಾಧು ಸಜ್ಜನಮೋದ ಬಡಿಸುವೆ ನೆಂದು ಪೇಳಿದ 1 ಕರಿಯಪದತಳ ತುಳಸೀ | ಪ್ರಹ್ಲಾದ ಬಾಲನಹಿರಿದು ಶರಧಿಯೊಳಿರಿಸೀ | ಮತ್ತವನು ಉಳಿದಿರೆಧರೆಯ ಗುಹೆಯೊಳಗಿರಿಸೀ | ಮೇಲ್ಕಿಲೆಯ ಮುಚ್ಚಲುಮರಳಿ ಬಂದನು ಜೀವಿಸೀ | ಹರಿಯ ವಿಶ್ವಾಸೀ ತರಳನಿಗೆ ಅಹಿಯಿಂದ ಕಚ್ಚಿಸಿಕರುಣಿ ಮಾತೆಯು ವಿಷವನೂಡಿಸೆಗರಸಹೋದರಿ ಪೊರೆಯಲವನನುತರಳನಿಂಧ್ಹರಿವರನುಯೆಂದ 2 ಬಂದ ಚಿಮ್ಮಲಿಗಿಂದ | ಭಕುತಂಗೆ ಪೇಳುತನಂದ ಹುಲ್ಲೆಸೆಯಂದ | ಅದು ಹತ್ತಿ ಉಳಿಯಲುನಿಂದಿಹೆ ತಾ ನಲ್ಲೆಂದ | ಅದರಂತೆ ಗೈಯಲುನಿಂದ ತೋರವಿಲಿ ಛಂದ | ಹರಿಯು ಬಹು ಆನಂದನಂದ ನಂದನನಾದ ಗುರು ಗೋ-ವಿಂದ ವಿಠಲನ್ನಕೇಸರಿಯುಚಂದದಿಂ ದೂವ್ರ್ಯಾಸ ಪೂಜಿತನಂದ ಕಂದ ಮುಕುಂದ ಶ್ರೀಹರಿ 3
--------------
ಗುರುಗೋವಿಂದವಿಠಲರು
ತೊಳೆಯಲಿ ಬೇಕಿದನು ಮನುಜಪ ಭವಕೂಪದಿ ಬಿದ್ದು ತೊಳಲಿ ಬಳಲಿ ಬಳಲಿ ಮಲಿನವಾಗಿಹ ಮನ ಹರಿಧ್ಯಾನ ಜಲದಲಿ ಅ.ಪ ಕಾಮಕ್ರೋಧದಿಂದ ಜನಿಸಿದ ಲೋಭಮೋಹ ಲೋಭದಿಂದ ಮದಮತ್ಸರ ಷಡ್ವಿಧ ತಾಪಗಳಿಂದ ಹದಗೆಟ್ಟಿರೆ ಮನ ಮುದದಿ ಹರಿಧ್ಯಾನದಿ 1 ದುರ್ಜನ ಸಂಗದೊಳು ಸೇರುತ ಮನ ವರ್ಜಿಸಿ ಹರಿ ಚರಿತ ಅರ್ಜುನ ಸಖ ಸರ್ವೇಶನ ನಾಮವು ಲಜ್ಜೆಯಿಲ್ಲದೆ ಸ್ಮರಿಸುತ ನಲಿಯಲು ಮನ 2 ಜನನ ಮರಣ ಕ್ಲೇಶದಿ ದು:ಖದಿ ಮನ ಮರಳಿ ಮರಳಿ ಪಾಪದಿ ಎಣಿಕೆ ಇಲ್ಲದ ದೋಷದೊಳಗೆ ಮುಸುಕಿದ ಮನ ನಿತ್ಯ 3 ಇಂದಿರೇಶನ ಧ್ಯಾನವ ಮಾಡಲು ಮನ ವೃಂದವ ಕೂಡಿ ಮಂದೋರದ್ಧರ ಗೋ_ ವಿಂದನೆನ್ನಲು ಮನ 4 ನಿಚ್ಚ ಭಕುತಿಯಿಂದ ಶ್ರೀ ಹರಿಪಾದ ಅರ್ಜಿಸಿಮುದದಿಂದ ರುಕ್ಮಿಣಿಯರಸನ ಸತ್ಯಸಂಕಲ್ಪನ ಮೆಚ್ಚಿಸಿ ಮುಕುತಿಯ ನೈದಲು ಈಮನ 5 ಮಧ್ವಮತದಿ ಜನಿಸಿ ನಿರಂತರ ಮಧ್ವರಾಯರ ಭಜಿಸಿ ಸದ್ವೈಷ್ಣವರ ಸಂಗದೊಳಾಡುತ ಲಜ್ಜೆತೊರೆದು ಕಾಲಗೆಜ್ಜೆ ಕಟ್ಟಲುಮನ6 ಕಂಬು ಚಕ್ರಧಾರಿ ಶ್ರೀ ಶೌರಿ ನಂಬುವರಾಧಾರಿ ಶಂಬರಾರಿಪಿತ ನಂಬಿದೆ ನಿನ ಪಾದ ಶಂಭುವಂದಿತ ಪಾಲಿಸಿಂದು ಸ್ಮರಿಸಲು ಮನ 7 ತೊಳೆದು ತೊಳೆದು ವಿಷಯ ವಾಸನೆಯನ್ನು ಹಲವು ವಿಧದಿ ತೊಳೆದು ಕಲುಷದೂರನ ನಾಮ ಸ್ಮರಣೆಯ ಮಾಡಲು ಮರುತ ಮತದ ಸಂಗ ದೊರೆವುದು ತವಕದಿ8 ಕಳವಳಿಸದೆ ಮನವು ನಿಶ್ಚಲದಲಿ ಥಳ ಥಳ ಥಳ ಹೊಳೆಯೆ ಕಮಲನಾಭ ವಿಠ್ಠಲವಲಿದು ಪಾಲಿಸುವನುಹಲವು ಬಗೆಯಲಿ ಹಂಬಲಿಸದೆ ಮನ 9
--------------
ನಿಡಗುರುಕಿ ಜೀವೂಬಾಯಿ
ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ ಶ್ರೀ ರಮೇಶನೆ ನಾನಾ ಗುಣನಾಮ ಮಾಲೆ ಪ. ವಾರಿಜಾಂಬಕನೆ ಶ್ರೀ ಗುರುಗಳ ರಚಿಸುತಲಿ ಹಾರಹಾಕಿಹರೊ ನಿನಗೆ ಹರಿಯೆ ಅ.ಪ. ಮೋಹನವಿಠ್ಠಲನೆಂಬಾ ಒದ್ದು ತಾಪತ್ರಯವನು ತಿದ್ದಿ ತಿಳಿಸುತಲಿ ಜ್ಞಾನ ಕರ್ಮ ತಿದ್ದಿ ತಿಳಿಸಿದ ಗುರುಗಳು ಇವರು 1 ಇಂದಿರಾಪತಿ ರಂಗನಾಥ ರಘುರಾಮ ಇಂದಿರೇಶ ದಯಾಪೂರ್ಣ ಸೀತಾಪತೇ ವೇದೇಶ ಯಾದವೇಂದ್ರ ಸ್ವಾಮಿ 2 ಇಂದಿರಾರಮಣ ಜಯ ಗೋಪಾಲನೆ ವರದೇಶ ಪ್ರಾಣನಾಥಾ ಪದ್ಮನಾಭ ಶ್ರೀನಾಥ ಜಗದೀಶನೆ ವರದ ಮೋಹನದೇವಾ 3 ಶ್ರೀಕಾಂತ ಪುರುಷೋತ್ತಮ ಪರಮಾನಂದ ಶ್ರೀ ಸುರೇಂದ್ರ ಕರುಣಾಕರ ವೆಂಕಟ ದಯಾಮಯನೆ ಭವತಾರಕ ಹರಿಯೆ 4 ವಸುದೇವ ಪಾರ್ಥಸಾರಥಿಯೆ ಪ್ರಾಣಪ್ರಿಯ ಪರಿಪೂರ್ಣ ಮಧ್ವವಲ್ಲಭಮುಕ್ತಿ ದಾಯಕ ಸತ್ಯೇಶನೆ ಪರಮಪಾವನ ರಮೇಶ ಕರುಣಾನಿಧೆ ಪುಂಡರೀಕಾಕ್ಷ ಸ್ವಾಮಿ 5 ಕಲ್ಯಾಣಗುಣಪೂರ್ಣ ಚಂದ್ರಹಾಸವರದ ಮಾಯಾಪತಿ ಉಪೇಂದ್ರ ಚಕ್ರಪಾಣಿ ಮುಕ್ತೇಶ ಬದರಿನಾಥಾ ಜಯಪ್ರದ ನಿರ್ಜರೇಶ ಜಾನಕೀಪತಿ ವಿಶ್ವನಾಥಾ ಸ್ವಾಮಿ 6 ಭುವನೇಶ ಗಜರಾಜವರದ ಜನಾರ್ಧನ ಮಧ್ವನಾಥ ಆನಂದ ಅರವಿಂದಾಕ್ಷ ಪುಂಡರೀಕವರದ ಶ್ರೀ ಕೃಷ್ಣಸ್ವಾಮಿ 7 ಮಾಧವ ಕಮಲಾನಾಥ ಕಮಲನಾಭ ಸದಮಲಾನಂದ ವೈಕುಂಠವಾಸ ಪದ್ಮೇಶ ಗುರು ಮಧ್ವೇಶ ಇಂದಿರಾಪತಿ ರಮೇಶ ಶ್ರೀಶÀ 8 ನಿಗಮ ಸಿರಿರಮಣ ಕಮಲಾಕಾಂತನೆ ಸರವ ಪೋಣಿಸಿ ಹಾಕುತ ಪರಮ ಪ್ರಿಯ ಶ್ರೀ ಗುರುಗಳು ಉಳಿದ ನಾಮಾ ಪೊರೆಯೋ 9
--------------
ಅಂಬಾಬಾಯಿ
ತೋರೊ ನಿನ್ನಯ ಮೂರ್ತಿಯ ಮೂರ್ತಿ ಬೀರೊ ಹೃದಯವೆಂಬೊ ನೀರಜಹಾದೊಳಗೆ ಸಾರೋ ಸಾರಿ ಸಾರಿಗೆ ಸೇರೊ ಬಾರೊ ಬಾರೊ ಪರಿವಾರದೊಡನೆ ಮನಸೂರೆಗೊಡುವೆ ಕಂ ಸಾರಿ ಮುರಾರಿ ಪ ತುಂಬೆ ವಿಶ್ವಮಾಯಾದ ಬೊಂಬೆ ನಾಮ ಪೀಯೂಷ ಉಂಬೆ ಸೇವೆಯ ಕೈಕೊಂಬೆ ಅನ್ಯರ ನಂಬೆ ಕಾಂಬೆ ನಮಿಸಿ ಪಾಲಿಸೆಂಬೆ ಕಾಲಿಗೆ ಮನ ದುಂಬೆ ದಂತೆ ಎರಗಿ ಅಂಬೆ ಪಿಡಿವಾಕೊಂಬೆ ಅಂಬುಜಾಕ್ಷ ನೀ ನೆಂಬದು ಸುರನಿಕರಂಬ ಹಂಬಲಿಸಲು ದಿಂಬಾಗಿ ಕರ್ಣಾವಲಂಬನವಾಯಿತು ಇಂಬಿಡು ಪ್ರಾಙ್ಞನೆಂದೆಂಬ ಮೂರುತಿಯಾ1 ಸ್ನಾನ ಪ್ರಣಮ ವಾಚಾ ಮಾನದಿಂದಲಿ ಬಲು ಮೌನವಾಗಿದ್ದು ಮಾಳ್ಪ ಧ್ಯಾನವು ಇತ್ತು ಮಾಜ್ಞಾನಾ ನಾನಾ ಪ್ರಕಾರದಿಂದ ದಾನಧರ್ಮಂಗಳ ನಿ ದಾನ ಕೊಂಡಡಲಾಮೇಲೆ ನೆನೆವೆನನುದಿನ ಮಾನವನ ಹೀನವ ನಾಡದೆ ನೀನೆನಿಸದೆ ಸುಮ್ಮನದಿಂದಲಿ ನೋಡೊ ದಾನವನ ವಡಲನು ಬಗದು ಕರುಳನು ವನಮಾಲೆ ಹಾಕಿದ ಶ್ರೀನಿಕೇತನ 2 ಇಂದು ಮಾಡುವದೇನು ಚಂದ ಭಕ್ತರಿಗತಿ ಬಂಧವನೆ ಯಾಕೆಂದಾ ಅಂದ ರಕ್ಕಸನಾಗಿ ಕೊಂದಾವರದ ಮುಕ್ಕುಂದಾ ವಂದಿತ ಮರ ವೃಂದಾ ಕರುಣದಿಂದಾ ಎಂದಿಗೆಂದಿಗೆ ಎನ್ನಿಂದಗಲದೆ ಗೋ ವಿಂದ ಇಂದಿರಾಪತಿ ಸುಂದರ ವಿಗ್ರಹ ಮಂದಿರದೊಳು ಸುಮದಾಸನದಲ್ಲಿ ಬಂದು ವಿಜಯವಿಠ್ಠಲೆಂದು ನೀನಿಂದು3
--------------
ವಿಜಯದಾಸ
ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ 1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ 2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ 3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ 4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ 5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು 6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು7
--------------
ತುಪಾಕಿ ವೆಂಕಟರಮಣಾಚಾರ್ಯ
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಬಾಹ್ಯಾಂತ್ರ ಪರಿಪೂರ್ಣ ನೀನೆ ಸದೋದಿತ ಸಹಕಾರ ನಿಜವಸ್ತು ನೀನೆ ಅಖಂಡಿತ ಗುಹ್ಯ ತಿಳಿಯದೊ ನಿನ್ನ ಸದ್ಗುರು ಸಮರ್ಥ 1 ಸೆರಗ ಸಿಲುಕದೆಂದು ತಿರುಗಿತು ವೇದ ಸರಸ್ವತಿ ಸ್ತುತಿಗೆ ತಾ ತೀರಲಿಲ್ಲ ಬೋಧ ವರಣಿಸಲಿಕ್ಕೆ ಶೇಷ ತಲೆಯು ಬಾಗಿದ ಮೊರೆ ಇಡುತಿಹುದೆಲ್ಲ ನಿನಗೆ ಗೋವಿಂದ 2 ಋಷಿಮುನಿಗಳಿಗೆ ತಾ ಪೆಸರೊಡೆಯದು ತುಸು ಕೊರತೆಲ್ಲ ತಾ ಪಸರಿಸಿಹ್ಯದು ಮಸಿ ಮಣ್ಣಾಯಿತು ಲೋಕ ಹೆಸರಿಗೆ ಬಂದು ದೆಸೆಗೆಟ್ಟಾಯಿತು ಬಹಳ ಉಸುರೊಡಿಯೆಂದು 3 ಮಾಡದ ಮಾಡಿತು ಲೋಕ ನೋಡೊ ನಿನಗಾಗಿ ಬಡದ ಭವಣೆಬಟ್ಟು ಹಿಡಿಯಲಿಕ್ಕೆ ಹೋಗಿ ಕೊಡಲಿಲ್ಲ ನಿಜಗುಟ್ಟು ಇವ್ಹನೀ ಅಡಗಿ ಯೋಗಿ 4 ಇದೆ ಮುಂದಣುವಾದ ನನ್ನದೇನು ಪಾಡು ಸಾಧಿಸಿ ಸದ್ಗುರು ಕೃಪೆ ನೀನೆ ದಂiÀiಮಾಡು ಒದಗಿ ಮಹಿಪತಿ ನೀ ದಯದಿಂದ ನೋಡು ಸದಮಲ ಸುಖವಾದ ಸುಧಾರಸವ ಕೊಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಿವಿಕ್ರಮರಾಯನ ನಂಬಿರೊಭುವನದೊಳ್ ಭಾಗ್ಯವ ತುಂಬಿರೊಸವೆಯದ ಸುಖವ ಮೇಲುಂಬಿರೊ ವಾ-ಸವನ ಮನ್ನಣೆಯ ಕೈಕೊಂಬಿರೊ ಪ. ವಾದಿರಾಜಗೊಲಿದುಬಂದನ ಚೆಲ್ವಸೋದೆಯ ಪುರದಲ್ಲಿ ನಿಂದನಸಾಧಿಸಿ ಖಳರನು ಕೊಂದನ ತನ್ನಸೇರ್ದಜನರ ಬಾಳ್ ಬಾಳೆಂದನ 1 ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-ಶೀಲೆ ಗಂಗೆಯನು ಪಡೆದನಪಾಲಸಾಗರವನ್ನು ಕಡೆದನ ಶ್ರುತಿ-ಜಾಲ ಗದೆಯಿಂದ ಹೊಡೆದನ 2 ಇಂದಿರಾದೇವಿಯ ಗಂಡನ ಸುರಸಂದೋಹದೊಳು ಪ್ರಚಂಡನಇಂದ್ರಾದಿ ಗಿರಿವಜ್ರದಂಡನ ಮುನಿವೃಂದಾರವಿಂದಮಾರ್ತಾಂಡನ3 ಕಂಬುಕಂಧರ ಮಂಜುಳಗಾತ್ರನವೃಂದಾರಕರಿಗೆ ನೇತ್ರನ ಜಗಕಿಂದೇ ಸುಪವಿತ್ರನ 4 ವನಿತೆಯರರ್ಥಿಯ ಸಲಿಸದೆ ಮನೆಮನೆವಾರ್ತೆಯ ಹಂಬಲಿಸದೆದಿನ ದಿನ ಪಾಪವ ಗಳಿಸದೆ ಅಂತ-ಕನ ಭಟರಿಂದೆಮ್ಮ ಕೊಲಿಸದೆ 5 ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊಹರಿಯರ್ಚನೆಯನು ಮಾಡಿರೊ ಶ್ರೀ-ಹರಿಯ ಮೂರುತಿಯ ನೋಡಿರೊ 6 ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನ ಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7 ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - - - - - - - - - - -8 ಜಯಿಸಿ ಕಂಸನೆಂಬ ಮಾವನ ಭಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ 9
--------------
ವಾದಿರಾಜ
ತ್ರ್ಯಕ್ಷಾಂಶ ಸಂಭೂತ | ಅಕ್ಷೋಭ್ಯ ಕರಜಾತಕುಕ್ಷಿಯೊಳಗೆ ಖ್ಯಾತ | ಟೀಕಾರ್ಯರೆಂಬಾತ ಪ ಮರುತ ಮತಾಬ್ಧಿ ಸೋಮ | ಹರಿಗುಣ ಗಣಸ್ತೋಮಬರೆದು ವಿಬುಧಸ್ತೋಮ | ಪೊರೆದ ನಿಸ್ಸೀಮಾ ಅ.ಪ. ಎರಗೋಳ ಗುಹೆಯಲ್ಲಿ | ಮರುತ ಮತ ಗ್ರಂಥದಲಿನಿರುತ ಬಹು ಆಸಕ್ತ | ಟೀಕೆಗಳ ಕರ್ತಾ 1 ವೃಷಭದಾಕೃತಿ ಧರಿಸಿ | ಅಸುಪತಿಯ ಸೇವಿಸೀಎಸೆವ ಗ್ರಂಥಗಳ್ಹೊತ್ತು | ಜನ್ಮ ಸ್ಮøತಿ ಪೊತ್ತೂ 2 ಭೋಗಿ ಆವೇಶಿತನೆಯೋಗಿ ಕುಲ ಕಮಲಾಪ್ತ | ಮಾಯಿ ಮತ ಹರ್ತಾ 3 ವೇನ ಮತ ದುಧ್ರ್ವಾಂತ | ಕಳೆಯಲ್ಕೆ ಸುಧೆ ಗ್ರಂಥಜ್ಞಾನ ಸೂರ್ಯನೆ ಇತ್ತೂ | ಕಳೆದೆ ಆಪತ್ತೂ4 ಗೋವುಗಳ ಪಾಲ ಗುರು | ಗೋವಿಂದ ವಿಠಲದೇವ ಗುಣಗಳ ಜಾತ | ಬರೆದ ವಿಖ್ಯಾತಾ 5
--------------
ಗುರುಗೋವಿಂದವಿಠಲರು
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ
ದಧಿವಾಮನ ವಿಠಲ ಉದ್ಧರಿಸೊ ಇವನ ಪ ಅಧಿ ಭೂತ ಅಧ್ಯಾತ್ಮ ಅಧಿದೈವಗತ ದೇವವಿಧಿ ಜನಕ ವಿಶ್ವಾತ್ಮ ಮಧು ಮಥನ ಹರಿಯೆ ಅ.ಪ. ವಿದ್ಯಾಯುಗಳನಿತ್ತು ಮಧ್ವಮತ ದೀಕ್ಷೆಯಲಿಶ್ರದ್ಧೆ ಬುದ್ಧಿಯ ನೀಯೊ ಮಧ್ವಾಂತರಾತ್ಮಾ |ಕೃದ್ಧಖಳರ್ಹಾವಳಿಯ ಒದ್ದು ಪೋಷಿಸುತಿಪನಶುದ್ಧಗೈವುದು ಮನವ ಸಿದ್ಧಜನ ವಂದ್ಯಾ 1 ತಾರತಮ್ಯ ಜ್ಞಾನ ಮೂರೆರಡು ಭೇದಗಳವಾರ ವಾರಕೆ ತಿಳಿಸಿ ಪೊರೆಯಬೇಕೋ |ಸಾರತಮ ನಿನ್ಹೊರತು ಆರು ಕಾಯುವರಯ್ಯಪೋರಗಿಹ ದುರಿತಾಳಿ ಪಾರುಮಾಡೈದೇವ 2 ಕಾರಣಿಕ ಕರುಣಾಬ್ಧಿ ತಾರೇಶ ಶ್ರೀ ಹರಿಯೆನೀರ ಜಾಸನವಂದ್ಯ ನೀರಜಾಕ್ಷಾ |ತಾರಕನು ಕುಭವ ಕೂಪಾರ ದಾಟಿಸಲುಧೀರ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ದಯ ಬಾರದೇಕೋ ಹರೀ | ಹೇ ಮುರಾರೀ ಪ ದಯಾ ಪೂರ್ಣನೆಂದೂ | ತ್ರಯ ಪೇಳ್ವುದಯ್ಯ ಅ.ಪ. ವೈರಿ ಪ್ರೀತ ||ಯಾಮ ಯಾಮಕೆ ತವ | ನಾಮ ಸ್ಮøತಿಯನಿತ್ತುಕಾಮ ಜನಕ ಸಾರ್ವ | ಭೌಮನೆ ಕಾಯೋ1 ವಸ್ತುವೆಂದರೆ ನೀನೆ ಸರಿ | ನೀನೆ ದೈತ್ಯಾರಿಸ್ವಸ್ತಿವಾಚಕ ಶ್ರೀ ಹರೀ | ಹೇ ಶೌರೀ ||ವಾಸ್ತು ದೇವರೊಳು | ಶಿಸ್ತಿಗೆ ಬಿಂಬಿಸೆವಾಸ್ತು ನಿರ್ಮಾಣಕೆ | ಅಸ್ತು ಎಂದೆನಿಸೋ2 ಧಾನ್ಯದನಾಗೀಹ | ಧಾರುಣಿ ಎನಿಸೀಹಮಣ್ಣಿಗೆ ಪರ್ಯಾಯ | ಹೊನ್ನನಿತ್ತಿಹೆ ಜೀಯನಿನ್ನರ್ಚನೆಯ ಗೃಹ | ವನ್ನೂ ನಿರ್ಮಿಸಿ ಪೊರೆಮಾನ್ಯ ಮಾನದ ಗುರು | ಗೋವಿಂದ ವಿಠಲನೆ 3
--------------
ಗುರುಗೋವಿಂದವಿಠಲರು