ಒಟ್ಟು 2526 ಕಡೆಗಳಲ್ಲಿ , 119 ದಾಸರು , 1558 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧೀಂಧೀಂಧೀಂಧಿಂ ಧೀರು | ಮಜರೆ ಸಂಭ್ರಮದ | ಅಂದು ಶ್ರೀಕೃಷ್ಣ ರುಕ್ಮಿಣಿಯ ಪಾಣಿ | ಗ್ರಹಣ | ದಿಂದ ದ್ವಾರಕೆಯ ಹುಗುವ ಸಮಯದಲಿ ಪ ಚಪಳ ವಾಜಿಗಳು | ಬೆರೆಬೆರೆದು ಕುಣಿವಾಟಾದಿಂದಾ ಇಡಿಯೇ | ತೆರೆಹಿಲ್ಲ | ಸಿಂಧು ಗುರಿ ಪತಾಕೆಗಳ ಹೊಳೆವ | ರೂಪಿಯೇ | ಮೆರೆವ ತಮ್ಮಟ ಭೇರಿನಾದ ಕಹಳೆಗಳಿಂದ | ಹರಿಪದದಿ ಪ್ರತಿ ಶಬ್ದವು ನುಡಿಯೇ 1 ಭಟ್ಟರು ಗಾಯಕವಂದಿ ಬಿರುದು ಕೊಂಡಾಡು ತಲಿಹ | ನಟನೆ ದಿವ್ಯಾಂಗ-ನೆಯರಾ ಮುಂದ | ಘಟನೇ ಪುಟುವೆರಸೀ ಸ್ವಸ್ತಿ ವಚನಾದಿಂದ ನಟನುಗ್ರಶೇನ ತಾಯಿ | ತಂದಿ ದಂಪತಿಗಳ ಕುಟಿಲೀರ್ವ ಸಾಂಬ ಕೃತ ವವರ್ಮನಾ | ರ್ಭಟೆಯ ಬಲರಾಮ ನೋಡನೀ ವೃಂದ 2 ಹೃದಯ ಮಧ್ಯದ ಪದಕದಂತೆ ಬರಿತಿಹ ನಡುವೆ ವಧು ಇದಿರು ಗೊಂಬುವ ಸಂಭ್ರಮದ ಪಟ್ಟಣದಲಾರು ತುದಿ ಮೊದಲ ಬಣ್ಣಿಸುವಾ ಸಿರಿಯಾ | ವದಗಿ ಮುಂದಕ ಹೋಗಿ ಮಂಗಳಾರುತಿಗಳನು ಸುದತಿಯರು ತಂದೆ ತ್ತಲು ತ್ವರಿಯು | ಮುದದಿಂದ ಗೃಹ ಪ್ರವೇಶವ ಮಾಡಿದನು ಸರ್ವಾ | ವಿದಿತ ಮಹಿಪತಿ ನಂದನಾ ಧೂರೆಯು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧ್ರುವತಾಳ ಹಿಂದಿನ ಜನ್ಮಜನ್ಮಾಂತರದಿ ಮಾಡಿದಘವ ನಿವಾರಿಸುವರು ನಿನ್ನ ದಾಸರು ದುರಿತ ದುರ್ಜಯ ದುಃಖವ ದೂರ ಮಾಡುವರು ನಿನ್ನ ದಾಸರು ಮುಂದಣ ಅಪಾರ ಆನಂದ ಸುಖವ ಅನವರತ ಈವರು ನಿನ್ನ ದಾಸರು ಯೆಂದು ಇಲ್ಲದಿರೆ ಬ್ಯಾರೆಗತಿಯುಂಟೆ ನಿನ್ನನರಿವ ಬಗೆ ಮತ್ತುಂಟೆ ಎಲೆದೇವ ನಂದನಂದನ ನಿನ್ನವರೆ ಜೀವನ ಅಚಲಾನಂದವಿಠಲರೇಯ ಬ್ಯಾರೆಗತಿ ಮತ್ತುಂಟೆ 1 ಮಠ್ಯತಾಳ ಭೂತದಯಾಪರ ನರನಾಥ ದೇವತೆಯೆಂಬರು ಭೂತವಿರೋಧ ಮಾಡಿ ಕೈಯ್ಯಾತು ಬೇಡುವ ದೈವವ ಸಾತ್ವಿಕವೆಂದು ಬಗೆವರು ಜನರು ಈ ರೀತಿಯೇನೆಂಬೆ ಅಜಾತ ಸಕಲದೇವರ ದಾತನೆ ಅಚಲಾನಂದವಿಠಲ ನೀನಿರೆ ಸಾತ್ವಿಕವೆಂದು ಅನ್ಯದೈವವ ಈ ಭೂತಳದ ಜನರು ಬಗೆವರು ಪ್ರತಿದಿನ 2 ತ್ರಿಪುಟತಾಳ ಮಾನವನೆ ಕೇಳು ಕಬ್ಬಿಣ ಸೋಸಿ ಕಾಸಿ ಬಡಿಯಲು ತಾನು ಪರುಷ ಸೋಕದೆ ಸುವರ್ಣ ಅಪ್ಪುದೇ ಅನಾದಿ ಅವಿದ್ಯ ತಾಪದಿಂದ ಬೆಂದು ತಾನು ನೀರೊಳು ಮಿಂದರೇ ಹೋಹುದೇನೊ ಅನಾದಿದೈವ ಅಚಲಾನಂದವಿಠಲನ ಧ್ಯಾನಮಾಳ್ಪರ ಪಾದಪರುಷ ಸೋಕದನಕ 3 ಅಟ್ಟತಾಳ ಎನ್ನ ಹಳಿಯಲಿ ಉಗುಳಲಿ ಬಂಧುಗಳೆನ್ನ ಮನ ರಂಗ ನಿನ್ನನೆ ನೆಚ್ಚಿಹ್ಯದೆನ್ನಮನ ಕೃಷ್ಣ ನಿನ್ನನೆ ನಂಬಿಹ್ಯದೆನ್ನ ಮನ ಅಚಲಾನಂದವಿಠಲರೇಯ ನಿನ್ನವರೊಲುಮೆಯ ಸಾರಿತೆನ್ನ ಮನ 4 ಆದಿತಾಳ ಹಲವು ಮಾತೇನು ಹಲಧರನನುಜನ ಚೆಲುವಿಕೆಯನೆ ಕಂಡು ಮನಸೋತೆನವ್ವ ಕೆಲಬಲದಾ ಕುಲದವರೆನ್ನ ಹಳಿಯಲಿ ಚಲಿಸದು ಚಿತ್ತ ಚಂಚಲವಾಗದೆನ್ನ ಮನ ಕೆಲಚಿತಿ ವೆಂಣೆಲ್ಲ (?) ತಾನೊಲಿವಂತೆ ಮಾಡಿದ ನಿಲುಕುವನಚಲಾನಂದವಿಠಲರೇಯ ಕ್ಯಲಬಲದ ಕುಲದವರೆನ್ನ ಹಳಿಯಲಿ 5 ಜತೆ ಬೆಂದ ಸಂಸಾರದಿ ಬಂದು ಬಂದು ಹೋದೆನೊ
--------------
ಅಚಲಾನಂದದಾಸ
ನಕಯಾರಿಗುಸುರಿದರೆನ್ನ ದೂರ ಕೇಳ್ಪರ ಕಾಣೆ ಮಾರಮಣ ಮಾರಜ ಸಲಹೊ ಕೃಪಾ ವಾರಿನಿಧಿ ಕರುಣದಲಿ ಪ. ವಿದೂರ ಪಾಲಿತಾಖಿಳ ಸಜ್ಜನ ಜ್ವಾಲಾ ಕರಾಳನಖರಾಳಿ ವಿದಳಿತ ದೈತ್ಯ ಪಾಲದಾನವ ಮರ್ದನ ಖೂಳರನು ಸದೆದು ದಯ ಬಾಲಿಕಾ ಪಾಲಿತ 1 ವ್ರಜಸುಂದರೀವೃಂದ ವಂದ್ಯ ವೃಂದಾರಕಾದಿ ವಂದ್ಯ ಕುಂದ ನೀನೆಣಿಸಿದರೆ ಇಂದು ಪೊರೆವರ ಕಾಣೆ ಚಂದ್ರಶೇಖರ ಸಖನೆ 2 ದೋಷಗಣದೂರ ನಿಶ್ಯೇಷ ಸದ್ಗುಣಭರಿತ ವಾಸವಾರ್ಚಿತ ಪದಾಬ್ಜ ಶ್ರೀಶ, ವಾಗೀಶ ಗೌರೀಶ ಫಣಿವೀಶಮುಖದಾಸಜನ ಪರಿಪಾಲಕ ದೋಷರಾಶಿಯ ಕಳೆದು ಪೋಷಿಸುವ ದೊರೆಯೆ ನಿ- ನ್ನಾಶ್ರಯವೆ ನಂಬಿದೆನು ಶೇಷಭೂಧರ ರಮಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಡತೆ ನನ್ನದು ಕೇಳಿರಯ್ಯ ಪ ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ. ಒಡವೆ ತರದಿಹನೆಂದು ಕೋಪ ಮಡದಿನಟಿಸುತ ಹೆದರೀ ಒಡನೆ ಸ್ನಾನವ ಮಾಡಿತಂದು ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು ಭೂರಿ ನೋಡುವೆನೆಂತೆಂಬೆ 1 ಒರಿಸೆ ಸಾಲಿಗ್ರಾಮ ಗೃಹದಿ ಅರಿವೆ ಹರಕು ಸಹ ಇಲ್ಲವೆನ್ನೇ ತರುವೆನೆನುತ ತಿಂಗಳಾರು ಕಾಲ ಬರಿದೇ ಆಹಾ ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ 2 ಹರಿಗೆ ದೀಪವ ಹಚ್ಚೆ ತೈಲ ಇರದು ತಾರೆನೆ ಹಡೆದ ತಾಯಿ ಬರಲಿ ಸಂಬಳ ತರುವೆ ಕೊಡುವಿ ಉರಿವ ಕಾಟವನೆಂದು ನುಡಿವೆ ಆಹಾ ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ ಹರಕು ಜಿಹ್ವೆಂiÀi ಚಪಲ ಪೂರ್ಣಮಾಡುವೆ ನಿರುತ 3 ವೃತ್ತಪತ್ರಿಕೆಯಲ್ಲಿ ಹೆಸರು ಎತ್ತಿಹಾಕುವರೆನೆ ಒಡನೆ ವಿತ್ತದಾನವಗೈವೆ ಬರಿ ಉ- ನ್ಮತ್ತಕಾರ್ಯಕಾದರು ಸರಿಯೇ ಆಹಾ ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ4 ಕಂಡು ಕರೆಯುತ ಭಾರಿ ಊಟ ತೊಂಡನಂದದಿ ನೀಡಿ ಮನದಿ ಉಂಡು ಹರುಷವ ನೆನೆವೆ ಧನ್ಯ\ ಆಹಾ ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ5 ದಾನಗೈದರು ಒಮ್ಮಿಂದೊಮ್ಮೆ ಮಾನಪಡೆಯಲು ಊರ ಒಳಗೆ ನಾನೆಂಬ ಹಂಕಾರ ಬಿಡದೆ ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ ಸ್ವಾನುಭವ ಕಾಣದೆಲೆ ಜ್ಞಾನ ಭಾಸ್ಕರನಂತೆ ಪು- ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ6 ನೂರಿತ್ತು ಸಂಬಳ ಹಿಂದೆ ಮನದಿ ಊರಿತ್ತು ಹರಿಭಕ್ತಿ ಎಲ್ಲಿ ಈಗ ನೂರ್ಹತ್ತು ಕೊಟ್ಟರು ದೇವ ಬೆ- ನ್ಹತ್ತಿದೆ ತಾಪತ್ರಯ ಬಹಳ ಆಹಾ ಸಿರಿ ಕೃಷ್ಣವಿಠಲನೆ ದೃಷ್ಟಿ ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ7
--------------
ಕೃಷ್ಣವಿಠಲದಾಸರು
ನಡತೆಯನೆಣಿಸಿದರೆ ಗುಣವೇನು ತೃಣಕುಕಡೆಯಾಗುವಲ್ಲಿ ಸಂದೇಹವಿಲ್ಲ ಪನೀನು ಹಿಂದೆಗೆಯೆ ಕಣ್ಣು ಕಾಣದೆಂಬೆಯಲ್ಲೋ ುೀಗಕಾಣು ಕಿಮಿಂದ ರೂಪ ಜಾಣೆಯ ಮಗನೆ 1ಕೇಳು ಮೂಗಿನಿಂದಾ ನುಡಿಯ ತಾಳು ಗಂಧವ ಬಾುಂದಾಹೇಳು ಮಾತ ಕಣ್ಣಿನಿಂದಾ ಕೂಳುಗೊಂಬೆ 2ನಡೆಯೊ ಕೈುಂದ ಕಾಲಿಂ ಪಿಡಿಯೊಗುದದಲುಣ್ಣೋ ಪಡೆಯೊ ನೀನುಪಸ್ಥೆಯ ಬಿಟ್ಟಾನಂದವಾ 3ವಾಕಿನಿಂ ವಿಸರ್ಗವನ್ನು ಸೋಕಿಸೊ ಸ್ಪರ್ಶವ ನೀನುತಾಕದೊಲ್ ತ್ವಗಿಂದ್ರಿಯವ ಕಾಕಿ ಮನವೆ 4ಜೀವನು ಕುರುಡನೇನೊ ಪ್ರಾಣಗಳ್ [ಕೊ]ರಡುಗಳೇನೊಯಾವಗವು ನೀನೊರ್ವ ಬಾಳುವೆಯೇನೊ 5ಕಾದಿ ಮನೆಗೆ ಕೇಡು ತಾ ದರಿದ್ರತೆಗೆ ಬೀಡುಸಾಧುವಾಗಿ ನಮ್ಮೊಳಾಡು ಕೆಡಬೇಡ ನೋಡು 6ಹತ್ತು ದಾರಿಯೊಳಾಡುವೆ ಗೊತ್ತಿಗೆ ನೀನಿಲ್ಲದಿರೊಮತ್ತನಾಹೆ ಕೆಣಕಲು ಸತ್ತವನಂತೆ 7ನಿನ್ನ ಹತ್ತಿರೆ ದೈವವು ಬನ್ನ ಬಡಿಸಲೆಮ್ಮನುಕಣ್ಣುಗಾಣದೆ ಸೇರಿಸಿತು ಕಾಲಗತಿುಂದಾ 8ತಿರುಪತೀಶನೊಲವನು ಸರಸದಿಂ ಸಾಧಿಪ ನೀನುತೊರೆಯಲೆಮ್ಮ ತಿಳಿದುದು ಜಾಣುಮೆ ತಾನು 9ಕಂ||ಕರಣಗಳಾಡಿದ ಮಾತನು ಹರುಷದಿ ಕೇಳುತ್ತ ಜೀವ ತನು ಸಹ ಮನಮಂ ಪರಿಪರಿ ವಿಧದಲಿ ಬೋಧಿಪ ಪರಿುಂ ದೂಸಿದನಾಗ ನಾಚುವ ತೆರದಿಂ
--------------
ತಿಮ್ಮಪ್ಪದಾಸರು
ನಡೆದು ಬಾರೆ ಹರಿಯ ರಮಣಿ ನಡಮುಡೀಯ ಹಾಸುವೆ ನಡಮುಡೀಯ ಹಾಸಿ ನಿನಗೆ ಕರವ ಮುಗಿದು ಬೇಡುವೇ ಪ. ಚರಣಕೆ ಪಾದ್ಯವನಿತ್ತು ವರ ಕ್ಷೀರದಧಿ ಘೃತ ವರ ಮಧು ಶರ್ಕರಾದಿಂ ಹರುಷದುಡಿಗೆ ತೊಡಿಸುವೆ 1 ನಿನ್ನನರಿಶಿನ ಕುಂಕುಮ ಚನ್ನ ಗಂಧ ಪುಷ್ಪದಿಂದ ಸಂಪನ್ನೆ ನಿನ್ನ ಪೂಜಿಪೆ 2 ಘನ್ನ ನೈವೇದ್ಯವರ್ಪಿಸಿ ರನ್ನದಾರುತಿ ಬೆಳಗುವೆ ಇನ್ನು ಎನ್ನ ತಪ್ಪ ಮನ್ನಿಸೆ ನಿನ್ನ ರಮಣ ಶ್ರೀ ಶ್ರೀನಿವಾಸನರಸಿಯೇ ಇನ್ನು ತೋರಲು ಬೇಗದಿ 3
--------------
ಸರಸ್ವತಿ ಬಾಯಿ
ನಡೆಯೇ ತೀರ್ಥವು ನುಡಿ ಪ್ರಸಾದವುಕೊಡುವುದೇ ತಾನೀಗನುಗ್ರಹವುಹಿಡಿವುದೇ ತತ್ವವು ಬಿಡುವುದೇ ವೈರಾಗ್ಯದೃಢದಲಿ ತನ್ನ ತಿಳಿದಾ ಮಹಾತ್ಮನಾ ಪ ಮೆಟ್ಟಿದ್ದೆ ಕಾಶಿಯು ಮಲಗಿದ್ದೆ ಶ್ರೀ ಶೈಲದಿಟ್ಟಾಗಿ ಕುಳಿತುದೇ ಕುರುಕ್ಷೇತ್ರವುಘಟ್ಟಿಯಾಗಿಹುದೇ ಗಯವೀಗ ಗೋಕರ್ಣಮುಟ್ಟಿಯೇ ತನ್ನತಾ ತಿಳಿದ ಮಹಾತ್ಮನಾ 1 ಉಂಡದ್ದೆ ಕೇದಾರ ಉಟ್ಟಿದ್ದೆ ಶ್ರೀ ಬದರಿಕಂಡದ್ದೆ ಕಂಚಿ ಕಾಳಹಸ್ತಿಮಂಡೆಗೆರಕೊಂಡುದೇ ಮೈಲಾರ ಮಧುರೆಯುಖಂಡಿಸಿ ತನ್ನತಾ ತಿಳಿದ ಮಹಾತ್ಮನಾ 2 ಸುಧಾ ಶರಧಿಯು ಆತ ಸಾಕ್ಷಾತ್ತು ದೈವವುವಿಧ ವಿಧದ ಜಗ ತಾನೆಯಾದಾತನುಮದಕಾಮ ಕ್ರೋಧ ಪಾಶ ಶೋಕ ವರ್ಜಿತಚಿದಾನಂದ ಗುರುವೇ ತಾನಾದ ಮಹಾತ್ಮನಾ 3
--------------
ಚಿದಾನಂದ ಅವಧೂತರು
ನಂದನಂದನ ಪದ್ಮಾನಂದನ ವಂದ್ಯನೇ| ತಂದೆ ಮಹಿಪತಿಸುತ ಪ್ರಭುವೇ ಮುಕುಂದ ಕೃಷ್ಣ ಪ ಸಿರಿಯಾ ಸೌಖ್ಯ ದಿಂದುಬ್ಬಿ ಮದದಿಂದ| ಸರಿಯನಗಾರು ಇಲ್ಲೆಂಬ ತಾಮಸದಿಂದ| ಮರದೆನೋ ಹರಿನಿಮ್ಮಾ ಸ್ಮರಣೆಯಾ ಮರವಿಂದ| ತಿರುಗಿ ದಣಿದೆ ನಾನು ನಾನಾಯೋನಿಗಳಿಂದ| ತರಹರಿಸಲಾರೆ ತಾಪತ್ರಯದುಃಖಗಳಿಂದ| ಶಿರಿಕೃಷ್ಣ ಸಲಹೆನ್ನ ಪರಮ ಕರುಣದಿ|1 ಮುನ್ನ ಮಾಡಿದಪರಾಧ ಸಕಲವ ನೀನು ಕ್ಷಮೆಯನುಮಾಡಿ ಚಿನ್ನ ಕಿಂಕರನೆಂದು ದಯದಲಿ ಅಭಯಕರವನು ನೀಡಿ ನಿನ್ನ ಸ್ಮರಣೆಯಕೊಟ್ಟು ಕರುಣ ಕಟಾಕ್ಷದಿಂದಲಿ ನೋಡಿ ಚಿನ್ನ ಶ್ರೀಕೃಷ್ಣ ಭವದಿಂದುದ್ಧರಿಸಯ್ಯಾ ತಾರಿಸಯ್ಯಾ ನೀನು2 ಪತಿತ ಪಾವನ ನೆಂಬಾಬಿರುದು ಸಾರುತಿದೆ ಗತಿಗೆಟ್ಟ ಅಜಮಿಳನ ತಾರಿಸಲಿಲ್ಲವೇ ಪಾಷಾಣ ಉದ್ದರಿಸಲಿಲ್ಲವೇ ಕ್ಷಿತಿಯೊಳೆನ್ನ ತಾರಿಸುವದೊಂದರಿದೇ ಶ್ರೀಕೃಷ್ಣಾ3 ಕರಿರಾಜನಂದದಿ ಹರಿತವಸ್ಮರಣೆ ಮಾಡಲರಿಯೇ ಶರಣ ಪ್ರಲ್ಹಾದನಂತೆ ಕರೆಯ ಬರಿಯೇ ನರೆನಂತೆ ನಾನಿನ್ನ ವಲಿಸಿಕೊಳ್ಳಲರಿಯೇ ತರಳ ಧ್ರುವನಂತೆ ಧ್ಯಾನಿಸಲರಿಯೇ ಶಿರಿಕೃಷ್ಣಾ ಗತಿಯಂಬದುವಿನಾ ಮತ್ತೊಂದರಿಯೇ 4 ನಿನ್ನ ನಾಮವನು ಕೊಂಡಾಡುವೆ ಪೊಗಳುವೆ ಚನ್ನಾಗ್ಯನುದಿನದಲನವರತಾ ತನ್ನಯಕರುವಿಗೆ ಕರುಣಿಪಗೋಪಂತೆ ಎನ್ನ ನೀಸಲಹುದು ಶಿರಿಕೃಷ್ಣರೇಯಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂದಿವಾಹನ ಸಖನೆ ಯೆಂದಿಗೆ ನೋಡುವೆ ನಿನ್ನಾ ಪ ಅರಿಗೆನಿನ್ನಾಚಾರ್ಯರಪ್ಪಣೆ ಹೊಂದಿಸುಖಿಸುತಿರುವೆನೊನಂದಿ ಅ.ಪ ರಂಗನಾಯಕನೆ ಬಾರೊ ರಾಕ್ಷಸಾಂತಕನಲ್ಲವೆ ಮಂಗಳಾಂಗ ಮಾತನಾಡೊ ಮಾಯಧಾರಿ ಕೇಶವ 1 ಸಾಟಿಯೇನಹುದೊ ಹರಿ ಸಾಧು ಶಿಖರನಲ್ಲವೆ ಆಟವಾಡುವ ಬಾಲನನ್ನು ಕರುಣದಿ ಕಾಯಲಿಲ್ಲವೆ2 ಕೋಲುಪ್ಯಾಟಿಯೊಳು ನಿನ್ನ ಕೋರಿ ಕೊಸರಿ ಕೂಗುವೆ ಮೂಲಗುರುವು ತುಲಶಿರಾಮಾ ದಾಸರ ಸೇವಕನಾಗುವೆ ಹರಿದಾಸರ ಸೇವಕನಾಗುವೇ 3
--------------
ಚನ್ನಪಟ್ಟಣದ ಅಹೋಬಲದಾಸರು
ನಂದಿವಾಹನಾ ಪಾಲೀಸೊ ನೀ | ಕಂದ ನೆಂದನಾ ಪ ಕಂದು ಗೊರಳ ಮೌ | ಳೆಂದು ಶಿಖರ ಅಮರೇಂದ್ರ ಮುಖರು ಸುರ | ವೃಂದ ವ್ಯಂದ್ಯ ಪದಅ.ಪ. ನಂದ - ನಂದನಾ - ಪ್ರಿಯ ಸಖ | ಮಂದಜಾಸನಾಕಂದ ನೆನಿಸಿ ದುರ್ | ವೃಂದ ತ್ಯಜಿಸಿ ತವತಂದೆ ಯಾಜ್ಞೆಯಲಿ | ನಿಂದು ಸರಿದ ಹರ 1 ದಿತಿಸುತ | ಸ್ತೋಮ - ಪ್ರೀಯನೇ ||ಶಾಮ ಸುಂದರ ಹರಿ | ಪ್ರೇಮಾನ್ವಿತ ಸುತಕಾಮಾರಿಯೆ ಹರ | ಸಾಮಜವಾಸಾ 2 ಸೇವ್ಯ ನಂಘ್ರಿ ದಶದಿವ್ಯ ಕಲ್ಪ ತಪ | ಗೈಯ್ಯೆ ಶಯ್ಯನಾದೆ 3 ಯೋಗಿ ರೂಪ ಭವರೋಗ ವೈದ್ಯ ಹೃ | ದ್ರೋಗ ಕಳೆಯೊ ಶಿವ4 ಗೌರಿ ಮನೊ - ಹರಾ - ಕೈಲಾಸವಾಸ | ಕೈರಾತಾ ಕೃತಿಧರಾ ||ಗಿರಿ ಇಂದ್ರ ಕೀಲದಿ | ಘೋರ ತಪಸಿ ನರಸಾರೆ ನಿನ್ನ ಪದ | ಶೂರ ಪಡೆದ ಶರ 5 ಶುಕ | ಲಿಂಗಾಕಾರನೇ ||ತುಂಗ ಮಹಿಮ ನಿ | ಸ್ಸಂಗ ಹರಿಯ ದ್ವಿತಿಯಂಗ ಡಮರು ಶೂ | ಲಿಂಗಳ ಪಿಡಿದಿಹ 6 ತೈಜಸ - ತಾಮಸ | ಸಾಕಾರಿ - ಓಜಸಾ ||ನೀ ಕುಶಾಸ್ತ್ರದಲಿ | ಭೀಕರರನು ಅವಿವೇಕರ ಮಾಡ್ದೆ | ಪಿ | ನಾಕಿ ಧರ ಹರ 7 ರುಂಡ - ಮಾಲನೇ - ಮುನಿಜ ಮೃ | ಕಂಡ - ಪಾಲನೇ ||ಅಂಡಜ ಮಹ ಬ್ರ | ಹ್ಮಾಂಡ ದೊಡೆಯ ಪದಪುಂಡರೀಕದೊಳು | ಬಂಡುಣಿ ಎನಿಸಿಹೆ 8 ಶಂಭೊ - ಶಂಕರ - ಧೂರ್ಜಟೆಯೆ | ಅಂಚೆ - ಮನೋಹರಾ ||ಕಂಬು ಪಾಣಿ ಪದ | ಹಂಬಲಿಸುವೆ ಹೃದಯಾಂಬರದೊಳು ಎನ | ಬಿಂಬನ ತೋರಿಸು 9 ಸೋಮರ್ಕಾನಲ - ಈಕ್ಷಣಾ | ಭೀಮ - ಕೈಕಪಾಲ ||ಭೀಮ ಭವಾಟವಿ | ಧೂಮಕೇತು ಸಿರಿರಾಮ ಪದಾಶ್ರಿತ | ವೈಮನ ಕಳೆಯೊ 10 ಭಾವ - ಜಾರಿಯೇ - ಮುರುಹರ | ರಾವಣಾದಿ - ಪ್ರಿಯಾ ||ಸಾವಧಾನದೊಳು | ಭಾವ ಶುದ್ಧಿಸುತತೋರ್ವುವೆನಗೆ ಗುರು | ಗೋವಿಂದ ವಿಠಲನ 11
--------------
ಗುರುಗೋವಿಂದವಿಠಲರು
ನನಗೆ ಹೊತ್ತು ಹೋಗದೆ ನಾನೆಯೆ ಆಡುವೆನನಗೆ ಹೊತ್ತು ಹೋಗದೆ ಪ ಈಶನ ಅವತಾರವಾಗಿ ಜೀವನ ಅವತಾರವಾಗಿಈಶನಾಗಿ ಜೀವ ಬೊಂಬೆಯನಾಡುವೆ1 ಜೀವರ ಹುಟ್ಟಿಸಿಯೆ ಜೀವರ ಬೆಳೆಸಿಯೇಜೀವರಲಿ ಲಯಿಸುವೆ ತ್ರೈಮೂರ್ತಿಯಾಗುವೆ 2 ಎಚ್ಚರವನೆ ಕೊಟ್ಟು ಎಚ್ಚರವನೆ ಕೊಟ್ಟುಎಚ್ಚರವನೆ ತಿಳುಹಿ ನಿಚ್ಚಳ ಚಿದಾನಂದನನು ಮಾಡುವೆ3
--------------
ಚಿದಾನಂದ ಅವಧೂತರು
ನನ್ನ ಮಗನೆಂಬರು ನಾಯಿ ಮಕ್ಕಳುತನ್ನ ತಾನೆ ಬ್ರಹ್ಮವದು ತಾನೆ ವೇಷ ಹಾಕಿ ಬರೆ ಪ ಸತಿಪತಿ ತಾವು ಆಗ ಸಂಯೋಗದ ಕಾಲದಲ್ಲಿಸುತನ ಕಿವಿ ಮೂಗ ಏನ ತಿದ್ದಿದರೇನೋಅತಿ ಆಶ್ಚರ್ಯವಲ್ಲದೆ ಅವಯವ ತಾಳಿಕೊಂಡುಕ್ಷಿತಿಗೆ ಮೈದೋರುತ ತಾನೆ ಬಂದರೆ 1 ಗಂಧ ಕಸ್ತೂರಿಯ ಪೂವು ಗಮಕದಲಿ ಧರಿಸುವಾಗಒಂದನ್ನ ಸುತೆಗೆ ಗುರುತು ಮಾಡಿದರೇನೋಇಂದು ಇದೆನೆವವೆಂದು ಇಳಿದು ಸಪ್ತಧಾತು ತಾಳಿಛಂದದಿ ವಿನೋದಕಾಗಿ ತಾನೆ ಬಂದರೆ 2 ಮಂಚವೇನು ಸಂಪತ್ತಿಗೆ ಮಡಿಹಾಸಿಗೆಯೊಳಿರ್ದುಮಂಚದಲಿರುತ ಸುತಗೆ ಚೇತನ ತುಂಬಿದರೇನೋಹೊಂಚಿನೋಡಿ ಚಿದಾನಂದ ಹೊರೆಯೇರಿ ಹರುಷದಿಪಂಚವಿಂಶತಿ ತತ್ವ ಕೊಡಿ ತಾನೆ ಬಂದರೆ 3
--------------
ಚಿದಾನಂದ ಅವಧೂತರು
ನಂಬಿ ಕೆಟ್ಟವರಿಲ್ಲವೊ, ರಂಗೈಯನನಂಬದೆ ಕೆಟ್ಟರೆ ಕೆಡಲಿ ಪ ಅಖಿಳ ಲೋಕೇಶನಕಂಬು ಕಂಧರ ಕೃಷ್ಣ ಕರುಣಾ ಸಾಗರನಅ.ಪ ತÀರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದಕರಿರಾಜನೊಬ್ಬ ಸಾಕ್ಷಿ ಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವ ರಹಿತನ ದೊರೆಯೂರು ಯೇರಬಂದ ಪುತ್ರನನ್ನುಕೊರಳಿÀ್ಹಡಿದ್ಹೊರಡಿಸಲು ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ ಸಿರಿ
--------------
ವ್ಯಾಸರಾಯರು
ನಂಬಿಗಿಲ್ಲಾ ಈ ಮನಸಿನಾ ಪ ಒಂದು ನೆನೆಯೆ ಮತ್ತೊಂದು ನೆನೆಯುತಾ | ಒಂದರೆ ಘಳಿಗೆ ಹೊಂದದೆ ಸದ್ಗುಣ | ಕೂಪ ಹೋಗುವಂದದಿ ವಿಷಯ | ಮ | ದಾಂಧದಿ ಜೀವನ ಬಂಧಿಸುದೈಯ್ಯಾ 1 ಧೀರ ಶಾಸ್ತ್ರ ವಿಚಾರ ಕರ್ಮದಿ | ಶೂರರ ತಪ ವಿಹಾರರ ಜಗದೊಳು | ಆರಾದರಾಗಲಿ ಕ್ರೂರ ಕರ್ಮದಾ | ಗಾರ ಹುಗಿಸಿ ಘನ ಹೊರುವದೈಯ್ಯಾ 2 ಪುಣ್ಯದ ದಾರಿಗೆ ಕಣ್ಣವ ದೆರಿಯದು | ಅನ್ಯಾಯದಿ ಒಡಲನೇ ಹೊರುವದು | ಸನ್ನತ ಮಹಿಪತಿ ಚಿನ್ನನ ಪ್ರಭುದಯ | ಮುನ್ನಾದರ ಇನ್ನಾನರಿಯೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿದೆ ನಾನಿನ್ನ ನಾರಾಯಣ ವಿಶ್ವಂಭರ ಮೂರುತಿಯೇ ಕಂಬುಧರ ಕಮಲಾಂಬಕ ಶ್ರೀಹರಿ ಪಾರ್ಥನ ಸಾರಥಿಯೇ ಪ ವಾರಿಜನಾಭನೆ ಪಾರುಗಾಣಿಸೊ ಸಂ- ಮಾರಮಣನೆ ಮೊರೆಹೊಕ್ಕೆ ಲಾಲಿಸೊ ಮುರಹರ ಗೋವಿಂದ 1 ಪುಣ್ಯುಪುರುಷ ಲಾವಣ್ಯ ನಿಧಿಯೆ ಕಾ- ವನಜಾಪ್ತವಂಶ ಚಂದ್ರ 2 ಕಾಮ ಜನಕ ಸುತ್ರಾಮವಿನುತ ಶುಭ- ನಾಮಸುಜನಪ್ರೇಮಿ ತಾಮಸದೂರ ಸುಧಾಮವರದ ಗುರು- ರಾಮವಿಠಲಸ್ವಾಮಿ 3
--------------
ಗುರುರಾಮವಿಠಲ