ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತಪರಿಹರಿಸು ರಂಗಾಪರಮಪಾತಕರು ಬಂದರು ನೆರೆದು ರಂಗಾಪ.ಪ್ರತ್ಯಕ್ಷ ಜೀವನ ಶವಕೆ ಯಮನ ಚಾರಕರುಮುತ್ತಿ ಕೊಲುವಂತೆ ಕಾಣಿಸುತದೆ ದಯಾಳುಕರ್ತನೀನಲ್ಲದಿನ್ನೊಬ್ಬ್ಬೊಡೆಯಕಾಲಮೃತ್ಯು ವಿನಯದೆಶೂಲನರಪಂಚವದನ1ನೀನರಸನೆನಗಾಗಿ ಇನ್ನೊಬ್ಬ ನೀಚರಿಗೆದೀನನಾಗುವುದುಚಿತೆ ಕರುಣಗುಣ ಖಣಿಯೆಮಾನನಿನ್ನದು ಅವಮಾನ ನಿನ್ನದು ಪಾಂಡವಮಾನಿನಿಯ ಸಮಯಕೊದಗಿದ ಭಕ್ತ ಬಂಧು 2ಮರೆಹೊಕ್ಕೆ ದಾಸವತ್ಸಲನೆಂಬ ಬಿರುದು ಕೇಳಿರುವೆ ತಪ್ಪಿಸಿಕೊಳಲುಬೇಡ ಭುವನೇಶಉರಗಗಿರಿವಾಸ ಪ್ರಸನ್ವೆಂಕಟೇಶ ಸಂಹರಿಸು ಅಪಕಾರಿಗಳ ಸಲಹು ಸಜ್ಜನರ 3
--------------
ಪ್ರಸನ್ನವೆಂಕಟದಾಸರು
ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ ?ಹರಿನಾಮ ಸ್ಮರಣೆಯೆಚ್ಚರದಲ್ಲಿದ್ದವರಿಗೆ ಪ.ಸ್ನಾನವೇತಕೆ ಸಂಧ್ಯಾ ಜಪತಪವೇತಕೆಮೌನವೇತಕೆ ಮಾಸವ್ರತವೇತಕೆ ||ಮಾನಸದಲಿ ವಿಷ್ಣುಧ್ಯಾನವ ಮಾಡುವಜ್ಞÕನವಂತರ ಸಂಗಸುಖದೊಳಿಪ್ಪವರಿಗೆ 1ಯಾತ್ರೆಯೇತಕೆ ಕ್ಷೇತ್ರಗಳ ನೋಡಲೇತಕೆಗೋತ್ರಧರ್ಮದ ಪುಣ್ಯ ಫಲವೇತಕೆ ? ||ಸೂತ್ರದಿ ಜಗವ ಮೋಹಿಸುವ ಮುರಾರಿಯಸ್ತೋತ್ರ ಮಾಡಿ ಪೊಗಳುವ ಭಾಗವತರಿಗೆ 2ಅಂಗದಂಡನೆ ಏಕೆ ಆತ್ಮಗಾಸಿಯು ಏಕೆತಿಂಗಳ ಚಾಂದ್ರಾಯಣವೇತಕೆ ? ||ಮಂಗಳ ಮಹಿಮ ಶ್ರೀ ಪುರಂದರವಿಠಲನಹಿಂಗದರ್ಚನೆ ಮಾಡುವ ಭಕ್ತ ಜನರಿಗೆ 3
--------------
ಪುರಂದರದಾಸರು
ದೂತ ಸಂವಾದ ದೇವಿಯೊಡನಾದುದು ಪ್ರೀತಿಯಲಿ ಕೇಳಿರೆಲ್ಲದಾತೆ ಶುಂಭನ ಯುದ್ಧಕೆತಾಯೆಂದಟ್ಟಿ ಮಾತ ಮುಗಿಸಿದಳಲ್ಲಪತೆರೆಕಣ್ಣ ಮುಚ್ಚಿದ್ದಿ ಯಾಕೆ ಕಾಡೊಳಗಿರುವೆ ಕೇಳೆಲೆ ಮಹಾದೇವಿಪುರುಷರು ನಿನಗಾರು ಓರ್ವಳೆ ಮಾತಾಡು ಕೇಳೆಲೆ ಮಹಾದೇವಿಕರೆಯಲು ಬಂದೆ ಹಿಮಾಚಲಕೆ ನಿನ್ನ ಕೇಳೆಲೆ ಮಹಾದೇವಿಅರಸ ಶುಂಭನ ದೂತ ಸುಗ್ರೀವ ನಾನೀಗ ಕೇಳೆಲೆ ಮಹಾದೇವಿ1ಕಣ್ಣ ತೆರೆದು ನುಡಿದಳು ದೇವಿ ಖಳನಿಗೆ ಕೇಳೆಲೋ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವನಿನ್ನಧಿಕಾರವದೇನು ಶುಂಭನಾರು ನೀನಾರು ಕೇಳೆಲೊ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವ2ನಂಬೆನ್ನ ಮಾತನು ಕಪಟವೇನಿಲ್ಲ ಕೇಳೆಲೆ ಮಹಾದೇವಿಶುಂಭನ ಭಾಗ್ಯ ಹೇಳಲಿಕಳವಲ್ಲ ಕೇಳೆಲೆ ಮಹಾದೇವಿತುಂಬಿವೆ ಮನೆಯೊಳು ದಿವ್ಯ ರತ್ನವು ಕೇಳೆಲೆ ಮಹಾದೇವಿಶುಂಭಗೆ ನೀನು ಕಡೆರತ್ನ ದೊರಕಲು ಕೇಳೆಲೆ ಮಹಾದೇವಿ3ಕರುಣದಿ ಕಪಟವಿಲ್ಲದಲೆ ನೀನು ಕೇಳ್ವೊಡೆ ಕೇಳೆಲೋ ಸುಗ್ರೀವಇರಬಾರದು ಸುಮ್ಮಗಿದ್ದುದನಾಡಿವೆವು ಕೇಳೆಲೋ ಸುಗ್ರೀವಪುರುಷರು ಇಂದಿನವರೆಗಿಲ್ಲ ನಾ ಸ್ವತಂತ್ರ ಕೇಳೆಲೋ ಸುಗ್ರೀವಪುರುಷರಿಗೋಸ್ಕರ ನಾನು ತಪವನು ಮಾಡುವೆ ಕೇಳೆಲೋ ಸುಗ್ರೀವ4ಶುಂಭನು ಶೀಘ್ರದಿ ಕರೆತಾರೆಂದನು ನಿನ್ನ ಕೇಳೆಲೆ ಮಹಾದೇವಿಶುಂಭನ ಭಾಗ್ಯ ದೊರಕಿದಡೆ ನೀ ಕೃತಾರ್ಥೆ ಕೇಳೆಲೆ ಮಹಾದೇವಿಶುಂಭಗೆ ನಿನಗೆ ಸಕ್ಕರೆ ಹಾಲು ಬೆರೆತಂತೆ ಕೇಳೆಲೆ ಮಹಾದೇವಿಶುಂಭಗೆ ಚಾಕರ ನಿನಗೆ ಚಾಕರ ನಾನು ಕೇಳೆಲೆ ಮಹಾದೇವಿ5ಮಾಡಬಾರದ ಪ್ರತಿಜೆÕಯ ಮಾಡಿಹೆನು ಕೇಳೆಲೋ ಸುಗ್ರೀವಆಡಲಿ ಏನ ಅದೃಷ್ಟಹೀನೆಯು ಕಂಡ್ಯಾ ಕೇಳೆಲೋ ಸುಗ್ರೀವಖಾಡಾ ಖಾಡಿಯಲಿ ಜಯಿಸಿದವನೆ ಭರ್ತನೆಂದೆನೆ ಕೇಳೆಲೋ ಸುಗ್ರೀವಕೂಡಿ ಬರುವೆ ಮಾಡಿದ ಭಾಷೆಯ ಹುಸಿಯದೆ ಕೇಳೆಲೋ ಸುಗ್ರೀವ6ಕರೆಯಲು ಬಿಗಿಯಲು ಬೇಡವೆ ನೀನೀಗ ಕೇಳೆಲೆ ಮಹಾದೇವಿಥರಥರ ಸಾಲು ಸಾಲಿನ ಛತ್ರಿ ನಿನ್ನವು ಕೇಳೆಲೆ ಮಹಾದೇವಿಇರುವನು ನೀ ಹೇಳಿದಂತ ಶುಂಭನು ಕೇಳೆಲೆ ಮಹಾದೇವಿದೊರೆವುದು ನಿನಗೆ ತ್ರೈಭುವನದರಸುತನ ಕೇಳೆಲೆ ಮಹಾದೇವಿ7ಕಂಡುದಿಲ್ಲವೋ ಈವರೆಗೆನ್ನ ಜಯಿಸಿದವರನ್ನು ಕೇಳೆಲೋ ಸುಗ್ರೀವದಿಂಡುಗಡೆದರು ಎನ್ನೆದುರು ನಿಂತವರೆಲ್ಲ ಕೇಳೆಲೋ ಸುಗ್ರೀವಗಂಡನ ಪಡೆದಿರೆಶುಂಭಜಯಿಸುವನೆನ್ನ ಕೇಳೆಲೋ ಸುಗ್ರೀವಗಂಡನಾವನಿಲ್ಲದಿರೆ ಏನ ಮಾಡುವೆ ಕೇಳೆಲೋ ಸುಗ್ರೀವ8ಚಾರ್ವಾಕರ ಮಾತಾಡಲು ಬೇಡ ಕೇಳೆಲೆ ಮಹಾದೇವಿಬರ್ವಳು ನಿನ್ನ ಮಾತಿಗೆಶುಂಭಬಹನೇ ಕೇಳೆಲೆ ಮಹಾದೇವಿಉರ್ವಿಗೆ ಕರ್ತನ ಎದುರಿಗೆ ನೀ ನಿಲ್ಲುವೆಯ ಕೇಳೆಲೆ ಮಹಾದೇವಿಗರ್ವವ ಮಾಡಲು ಮುಂದಲೆ ಹಿಡಿದೊಯ್ವರು ಕೇಳೆಲೆ ಮಹಾದೇವಿ9ಎನ್ನ ಪ್ರಾರಬ್ಧವು ಇದ್ದಂತೆ ಆಗುವುದು ಕೇಳೆಲೋ ಸುಗ್ರೀವನಿನ್ನ ಮೇಲೇನು ಮಾತಿಲ್ಲವೋ ಕೇಳೆಲೋ ಸುಗ್ರೀವಎನಗೆ ಹಿತಕಾರಿ ನೀನು ಅಹಿತ ನಾನೇ ಕೇಳೆಲೋ ಸುಗ್ರೀವಇನ್ನು ಮಾತಾಡಬೇಡವೋ ಕರೆತಾನಡಿ ಕೇಳೆಲೋ ಸುಗ್ರೀವ10ಇಂತು ವಿಳಾಸ ಮಾತನಾಡಿಯೆ ಖಳನನು ಕಳುಹಿದಳು ಪರಾಂಬೆಎಂತು ಹೇಳ್ವನೋ ಶುಂಭನಾವಾಗ ಬರುವನೋ ಎನುತಲಿ ಜಗದಂಬೆಚಿಂತೆ ಹರಿಪೆ ಸುರರನು ಶುಂಭನನುಕಟ್ಟಿಎನುತಲಿ ಸರ್ವಾಂಬಚಿಂತಯಕ ತಾನಾದ ಚಿದಾನಂದ ಕರುಣೆಯು ಬಗಳಾಂಬ11
--------------
ಚಿದಾನಂದ ಅವಧೂತರು
ದೂತೆ ಕೇಳ ದ್ರೌಪತಿಯ ಖ್ಯಾತಿ ಕೇಳಿದ ಮನುಜರಿಗೆಪಾತಕದೂರಾಗೊದೆಂಬೋ ಮಾತು ನಿಜವಮ್ಮಪ.ಉಮಾಶಚಿ ಶಾಮಲಾ ಉಷೆ ತಮ್ಮ ಪತಿಗಳ ಬೆರೆದು ರಮಿಸೆಬೊಮ್ಮಕಂಡುಕೋಪಿಸಿ ಶಾಪ ಝಮ್ಮನೆ ಕೊಟ್ಟಾನು1ಪರಮಮದದ ಬಾಲೆಯರಿವರುಪರಪುರುಷನ ಬೆರೆಯಲ್ಯಾ ್ಹಂಗೆನರದೇಹ ಬರಲೆಂದು ಬೊಮ್ಮಗೆ ನಾಲ್ವರು ನುಡಿದರು 2ಚಂದಾಗಿ ನಾಲ್ವರ ದೇಹ ಒಂದೇ ಮಾಡಿ ತೋರೆ ಬೊಮ್ಮಗಬಂದವು ಮೂರು ನರದೇಹಗಳ ಲೊಂದಾಗಿರಲೆಂದು 3ತಪ್ಪು ನಮ್ಮದೆಂದು ಶಾಪ ಒಪ್ಪಿಕೊಂಡು ನಾಲ್ವರುಜಪಿಸಿ ಸಾವಿರ ವರುಷ ಗೌಪ್ಯದಿ ಭಾರತಿಯ 4ಬಂದು ಮೊರೆಯ ಪೊಕ್ಕವರ ಚಂದಾಗಿ ದೇಹದಲ್ಲಿಟ್ಟುಅನಂದದಿಂದ ವಿಪ್ರಕನ್ಯೆ ಎಂದು ಜನಿಸಿದಳು 5ಎಲ್ಲರಕರ್ಮಒಂದಾಗಿ ಎಲ್ಲೆಲ್ಲೆ ಭಿನ್ನ ತೋರದ್ಹಾಂಗೆಫುಲ್ಲನಾಭನ ದಯವ ಪಡೆದಳು ಅಲ್ಲೆ ಆ ಬಾಲೆ 6ಮುದ್ಗಲ ನೆಂತೆಂಬೊ ಋಷಿಯು ಬಿದ್ದು ನಕ್ಕ ಬ್ರಹ್ಮನ ಕಂಡುಮುದ್ದು ಮಗಳ ರಮಿಸಿದಾತಗೆ ಬುದ್ಧಿಯಿಲ್ಲವೆಂದು 7ತ್ವರೆಯಿಂದಬೊಮ್ಮಮುನಿಗೆ ಬೆರಿಯೆ ಭಾರತಿಯ ಕಂಡುಕರವಮುಗಿದು ಎರಗಿ ಮುನಿಯು ಮೊರೆಯ ಹೊಕ್ಕಾನು8ಮಾರುತನ ದೇಹದಲ್ಲೆ ಭಾರತಿಯು ರಮಿಸುವಾಗಹಾರಿತಯ್ಯ ಸ್ಮøತಿಯು ಸುಖವು ತೋರದು ನಮಗಿನ್ನು 9ಮಂದಗಮನೆಯರಿಂದಭಾರತಿಇಂದ್ರ ಸೇನಳಾಗಿ ಜನಿಸೆಬಂದ ಮರುತ ದೇಹದ ಮುನಿಯು ಚಂದದಿ ಮದುವ್ಯಾದ 10ಮರುತ ಅಕೆÉಯಿಂದ ರಮಿಸ ಮಾರುತದೇಹದ ಮುನಿಯು ಏನುಗುರುತು ಇಲ್ಲಧಾಂಗೆ ಆತ ಇರುತಲಿದ್ದನು 11ಬಾಲೆಯ ಸಂತೋಷ ಪಡಿಸಿ ಮೂಲರೂಪಕಂಡುವಾಯುಮ್ಯಾಲ ವನಕೆ ನಡೆದ ಮುನಿಯು ಆ ಕಾಲದಲೆಚ್ಚತ್ತು12ಇಂದ್ರಸೇನ ಬಂದು ಆಗ ಇಂದಿರೇಶನದಯವ ಪಡೆಯೆನಂದಿವಾಹನ ನಮ್ಮ ಪತಿಯ ವಂದಿಸೆಂದಾರು 13ಪತಿಯ ಬಯಸಿದ ಬಾಲೆಯರಿಗೆ ಚತುರ್ವಾಹ ನುಡಿದನು ಶಿವನುಅತಿಶಯ ರೋದನವ ಮಾಡೆ ಮಿತಿ ಇಲ್ಲದಲೆ ಅಂಜಿ 14ಮಂದಗಮನೆಯ ಧ್ವನಿಯಕೇಳಿ ಬಂದ ಇಂದ್ರ ಬಹಳದಯದಿಬಂದಿತೆನಗೆ ಇಂಥಕ್ಲೇಶಎಂದು ನುಡಿದಳು15ಬಂದು ವರವ ಬೇಡಿ ಪತಿಗಳ ಹೊಂದಿರೆಂದು ನಾಲ್ಕುಬಾರಿಬಂದಿತೆಮಗೆ ಇಂಥಕ್ಲೇಶಎಂದು ನುಡಿದಳು16ಇಂಥ ಅನ್ಯಾಯ ಯಾಕೆಂದು ನಿಂತ ಒಟುಗೆ ನುಡಿದ ಇಂದ್ರಭ್ರಾಂತ ನರನ ನಿಂದೆ ಶಚಿಯ ಕಾಂತೆಗೆ ಶಿವನು 17ನಾನು ಸೃಷ್ಟಿ ಮಾಡಿದವನು ನೀನು ಏನು ನುಡಿದ ಶಿವನುಮಾನವನಾಗೊ ಬೊಮ್ಮಗ ತಾನು ಆತಗೆ 18ಉಮಾ ಮೊದಲಾದವರಿಗೆಲ್ಲ ತಮ್ಮ ಪತಿಗಳ ಹೊಂದಿರೆಂದಉಮಾ ನಿಮ್ಮ ಬೆರಿಯ ಬ್ಯಾಡ ಸುಮ್ಮನೆ ಹೋಗೆಂದ 19ಎತ್ತು ಗಿರಿಯ ಕೆಳಗ ಇದ್ದ ಮತ್ತÀ ನಾಲ್ವರ ನೋಡೆಸತ್ತ ಎಂದು ತಿಳಿಯೋ ನಿನ್ನ ಚಿತ್ತಕತಾ ಎಂದು 20ಕೇಳಿದ ಬೊಮ್ಮನ ನುಡಿಯು ತಾಳಿದ ಬಾಲಿಯರು ಬೆರೆದುಬಹಳ ಪ್ರೇಮದಿಂದಭಾರತಿಇಳಿದಳು ಬಂದು21ರಾಮೇಶನಕ್ಲುಪ್ತತಿಳಿದು ಭೀಮಸೇನನಾದ ವಾಯುಕಾಮಿನಿಯರ ಸಹಿತ ದ್ರೌಪತಿ ಪ್ರೇಮದಿ ಜನಿಸಿದಳು 22
--------------
ಗಲಗಲಿಅವ್ವನವರು
ದೇವಕಿಯುದರ ಸಂಜಾತನೆ ತ್ರುವಿಕಾವನ ಪಿತ ಕಮಲಾಕ್ಷನೆ ತ್ರುವಿಶ್ರೀ ವೈಭವಸಚ್ಚಿದಾನಂದ ತ್ರುವಿಭಾವಕಿಗೋಪಿಯ ಕಂದನೆ ತ್ರುವಿ......... ತ್ರುವಿ1ಮಧುರೆಯೊಳುದಿಸಿದ ಮಹಿಮನೆ ಜೋ ಜೋಯದುಕುಲ ತಿಲಕ ಯಾದವರಾಯ ಜೋ ಜೋ ||ಮಧುಕೈಟಭ ಮುರಮರ್ದನ ಜೋ ಜೋಚದುರನಾಗಿ ತುರುಗಳ ಕಾಯ್ದೆ ಜೋ ಜೋ 2ಗೋಕುಲಪಾಲಕ ಗೋವಿಂದ ತ್ರುವಿಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ||ಪಾಕ ಶಾಸನ ಮುಖ್ಯ ಸುರವಂದ್ಯ ತ್ರುವಿಲೋಕವೀರೇಳ ಪೆತ್ತಾತನೆ ತ್ರುವಿ ........... ತ್ರುವಿ 3ಶ್ರುತಿಚೋರ ಸಂಹಾರಕ ದೇವ ಜೋ ಜೋಜತನದಿ ಸುರರಿಗಮೃತವಿತ್ತೆ ಜೋ ಜೋ ||ಕ್ಷಿತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋಮತಿಯುತ ಬಾಲಕನತಿ ರಕ್ಷ ಜೋ ಜೋ 4ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿಯತಿವಂಶ ಜನನಭಾರ್ಗವರೂಪ ತ್ರುವಿ ||ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವಿರತಿಪತಿಪಿತಸುರನುತ ಕೃಷ್ಣ ತ್ರುವಿ ......... ತ್ರುವಿ5ಗೋಪಿಕಾನಂದ ಮುಕುಂದನೆ ಜೋ ಜೋಭೂಪರೊಳ್ಕಾದಿ ಬಳಲಿದನೆ ಜೋ ಜೋಶ್ರೀ ಪುರುಷೋತ್ತಮ ನರಸಿಂಹ ಜೋ ಜೋಅಪಾರ ಮಹಿಮಾರ್ಣವ ದೇವ ಜೋ ಜೋ........ಜೋ ಜೋ 6ಮಣ್ಣೊಳಗಾಡಿ ನೀ ಬಂದೆಯ ತ್ರುವಿಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿಚಿಣ್ಣಸುಮ್ಮನೆ ಇರು ಶ್ರೀ ಕೃಷ್ಣ ತ್ರುವಿ ............ ತ್ರುವಿ7ತಾರಕ ಸತಿವ್ರತಹಾರಕ ಜೋ ಜೋವಾರಣ ಹಯವೇರಿ ಮೆರೆದನೆ ಜೋ ಜೋ ||ಸಾರಿದವರ ಸಂತೈಸುವ ಜೋ ಜೋಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ.......ಜೋ ಜೋ 8ಶರಣಾಗತ ವಜ್ರಪಂಜರ ತ್ರುವಿಕರುಣಾಕರ ಕಮಲಾಕ್ಷನೆ ತ್ರುವಿ ||ಧರಣಿಧರಶಾಯಿ ಶ್ರೀವರ ತ್ರುವಿ ||ವರದ ಶ್ರೀ ಪುರಂದರವಿಠಲನೆ ತ್ರುವಿ ........... ತ್ರುವಿ 9
--------------
ಪುರಂದರದಾಸರು
ದೇವದೇವೇಶ ಶ್ರೀ ಹರಿಯಲ್ಲದೆ ಪ.ಆವ ತಂದೆಯು ಸಲಹಿದನು ಪ್ರಹ್ಲಾದನಆವ ತಾಯಿ ಸಲಹಿದಳು ಧ್ರುವರಾಯನಆವ ಸುತ ಸಲಹಿದನು ಆ ಉಗ್ರಸೇನನಜೀವರಿಗೆ ಪೋಷಕನು ಹರಿಯಲ್ಲದೆ 1ಆವ ಬಂಧುವು ಸಲಹಿದನು ಗಜರಾಜನನುಆವಪತಿ ಕಾಯ್ದ ದ್ರೌಪದಿಯಮಾನ ||ಆವ ಸೋದರರು ಸಲುಹಿದರು ವಿಭೀಷಣನಜೀವರಿಗೆ ದಾತೃ ಶ್ರೀ ಹರಿಯಲ್ಲದೆ 2ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆಆವ ರಕ್ಷಕ ಪಕ್ಷಿಜಾತಿಗಳಿಗೆಆವ ಪೊಷಕನು ಗರ್ಭದಲ್ಲಿದ್ದ ಶಿಶುಗಳಿಗೆದೇವ ಶ್ರೀ ಪುರಂದರವಿಠಲನಲ್ಲದಲೆ 3
--------------
ಪುರಂದರದಾಸರು
ದೇವರ ನಾಮ(ಶ್ರೀಶ ಸ್ತೋತ್ರ)38ಶ್ರೀಕರಾರ್ಚಿತ ಶ್ರೀಶ ಶ್ರೀ ಶ್ರೀನಿವಾಸಭಕುತವತ್ಸಲ ನಮೋ ಕಾರುಣ್ಯ ಶರಧೇ ಪಲೌಕೀಕ ವಿಷಯದಲಿ ಕಾಯಮನದಿಂಚರಿಸಿ |ಶ್ರೀಕರನೆ ನಿನ್ನನಾ ಸಂಸ್ಮರಿಸಲಿಲ್ಲಾಲೋಕ ಬಂಧುವೇ ಶರಣು ಶರಣು ಕರುಣಾಂಬುಧಿಯೇನೀಕಾಯಬೇಕೆನ್ನ ತಪ್ಪು ಎಣಿಸದಲೆ 1ನಾರಾಯಣವಾಸುದೇವಸಂಕರುಷಣಪ್ರದ್ಯುಮ್ನ ಅನಿರುದ್ಧ ಆತ್ಮಾಂತರಾತ್ಮಶ್ರೀ ಕೃಷ್ಣ ಕಪಿಲನೆ ಸರ್ವಕರ್ತನು ನೀನೆಸರ್ವ ಪ್ರೇರಕ ಸರ್ವ ಸ್ವಾಮಿ ಮಮ ಸ್ವಾಮಿ 2ವಿಶ್ವವಿಷ್ಣು ವಷಟ್ಕಾರ ಶ್ರೀಭೂರಮಣವಿಶ್ವತೋಮುಖ ಸರ್ವ ವಶಿ ವಿಶ್ವನಾಥವಿಶ್ವಪಾಲಕ ನಮೋ ಶ್ರೀರಾಮ ವಿಧಿತಾತವಿಶ್ವರೂಪನೇ ಶ್ರೀ ಪ್ರಸನ್ನ ಶ್ರೀನಿವಾಸ3
--------------
ಪ್ರಸನ್ನ ಶ್ರೀನಿವಾಸದಾಸರು
ದೇವರನಾಮ - ಶ್ರೀ ಸೇತುಮಾಧವ ಸ್ತೋತ್ರ62-1ಸೇತುಮಾಧವ ವಿಭುವೇ | ನಿನ್ನಯ ದಿವ್ಯವೃತತಿಜ ಪದಯುಗಳ |ಸತತ ನಂಬಿದೆ ಎನ್ನ ಹಿತದಿ ಪಾಲಿಸಿ ಸದಾಕೃತ ಕೃತ್ಯ ಧನ್ಯನ ಮಾಡಿ ಸಲಹೋ ಸ್ವಾಮಿ ಪಪುಟ್ಟಿದಾರಭ್ಯ ನಿನ್ನ | ನಾಮವ ಒಂದು |ತೃಟಿಯು ಭಜಿಸಲಿಲ್ಲವೋ |ವಿಠ್ಠಲರಾಯ ಪರಮೇಷ್ಟಿಯ ಪಿತ ಎನ್ನಕಷ್ಟಗಳಳಿದು ಸಲಹೋ ಸರ್ವೋತ್ಕøಷ್ಟ ||ಕೃಷ್ಣ ಕೃಷ್ಣಾವರದ ಅಜಮಿಳಭ್ರಷ್ಟತನವ ಎಣಿಸದೇ ಬಹುನಿಷ್ಟವಿಪ್ರಸುಧಾಮಗೊಲಿದತ್ರಿಧಾಮ ನಮೋ ಮಧ್ವೇಷ್ಟಪಾಹಿ1ಸೇತು ಸರ್ವಾಶ್ರಯನೇ | ನೀನೊಬ್ಬನೇ |ಮುಕ್ತಾ ಮುಕ್ತಾಶ್ರಯನು |ತ್ರಾತನೀನೇವೆ ಯೆಂದರಿತವರ ಭೀತಿಹರಪಾತ ಸರ್ವೋತ್ತಮ ಜಗದೇಕ ಈಶದ್ಯುಧರಾ ಪಾತಾಳ ಸರ್ವಾಧಾರನಾಗಿಹಪ್ರಭುವೇ ನಿನ್ನಯ ಅತಿ ಅಗಾಧಸುಮಹಿಮೆ ಅನಂತವು |ಮೋದಮಯ ದಶಶತಸಹಸ್ರಾನಂತರೂಪನೇ ||2ಹೀನಮಂದನು ನಾನೆಂದು | ದೂರನೀ ||ಎನ್ನ ಮಾಡದೇ ಸಲಹೋ |ಎನ್ನ ಹಿರಿಯರು ನಿನ್ನಚ್ಛನ್ನ ಭಕ್ತರೋಘನದಯಾಂಬುಧೇ ಗಂಗಾಜನಕ ಪಾವನ ನಾಮಾ |ಮನೋವಾಕ್ಕಾಯದಿ ನಿಂತು ಎನ್ನೊಳುನೀನೆ ಮಾಡಿ ಮಾಡಿಸುವುದೆಲ್ಲನಿನಗೆ ಸುಪ್ರೀತಿಯಾಗಲೋ ಮುಕ್ -ಕಣ್ಣ ವಿಧಿಪ ಶ್ರೀ ಪ್ರಸನ್ನ ಶ್ರೀನಿವಾಸ ಶ್ರೀಶ || 3
--------------
ಪ್ರಸನ್ನ ಶ್ರೀನಿವಾಸದಾಸರು
ದೇಹವೇಕೆ ನಮಗೆ ದೇಹ - ದೇಹ ಸಂಬಂಧಗಳೇಕೆ |ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ |ಮುಚ್ಚಿ ಹೂಳಿದ ಹೊನ್ನು ಹಣವೇತಕೆ |ಪಚ್ಚೆ ಮಾಣಿಕವಜ್ರ ವೈಡೂರ್ಯವೇತಕೆ |ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ 1ಹೆಂಡಿರು ಮಕ್ಕಳು ಏಕೆ - ಹಣ ಹೊನ್ನು ಎನಲೇಕೆ |ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ |ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ 2ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |ಚೆಂದುಳ್ಳ ವಿಹಿತ ಕರ್ಮಗಳೇತಕೆ |ಇಂದಿರೇಶ ನಮ್ಮ ಪುರಂದರವಿಠಲನ |ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ 3
--------------
ಪುರಂದರದಾಸರು
ದೊರೆಗಳಿಗೆ ಯದುಪತಿ ಗರವು ಹಮ್ಮನೆ ಬಿಟ್ಟುಬರಬೇಕು ಎಂದು ಹಸೆಮೇಲೆಹಸೆಮೇಲೆ ಹರುಷದಲೆಮುದದಿ ಪಾಂಡವರು ಬರಬೇಕು ಪ.ನೂರು ಸೂರ್ಯನ ಬೆಳಕಿನಥೋರ ಮುತ್ತಿನ ಹಸೆಗೆವೀರಪಾಂಡವರು ಬರಬೇಕುಬರಬೇಕು ಎನುತಲೆನಾರಿ ರುಕ್ಮಿಣಿಯು ಕರೆದಳು 1ಮತ್ತೆ ಸೂರ್ಯನ ಬೆಳಕಿಲಿವಿಸ್ತರಿಸಿದಹಸೆಮ್ಯಾಲೆಚಿತ್ತೈಸಬೇಕು ಐವರುಚಿತ್ತೈಸಬೇಕು ಐವರು ಎನುತಲಿಸತ್ಯಭಾಮೆಯು ಕರೆದಳು 2ಥೋರ ಮುತ್ತಿನ ಹಸೆಗೆಚಾರುರತ್ನವ ರಚಿಸಿವೀರ ಪಾಂಡವರÀ ಕರೆದರುವೀರ ಪಾಂಡವರÀ ಕರೆದರುಆರು ನಾರಿಯರು ಹರುಷದಿ 3ಹದಿನಾರು ಸಾವಿರ ಚದುರೆಯರುಹರುಷದಿ ಅದ್ಬುತವಾಗಿಬೆಳಗೋಹಸೆ ಮೇಲೆಅದ್ಬುತ ಬೆಳಗೊ ಹಸೆಮೇಲೆಮುದದಿ ಪಾಂಡವರ ಕರೆದರು 4ವೀರ ರಾಮೇಶನ ತಂಗಿಯರುಪೋರಬುದ್ಧಿಯಬಿಟ್ಟುನಾರಿಯರು ಬನ್ನಿರಿಹಸೆಮ್ಯಾಲೆಹಸೆಮ್ಯಾಲೆ ಹರುಷದಿನೂರು ನಾರಿಯರು ಕರೆದರು 5
--------------
ಗಲಗಲಿಅವ್ವನವರು
ದೋಷ ಎಣಿಸದೆ ಕಾಯೊ ಜೀಯಾ ಪಕಂಡ ಕಂಡವರ ಭಜಿಸೀ -ಬೇಡಿತೋಂಡವತ್ಸಲ ಕರುಣೆ ಸಲಿಸೀಪಾದಪುಂಡರೀಕ್ಯನ್ನೊಳಗೆ ಇರಿಸಿಕಾಯೋ 1ಮಾqಬಾರದ ಕೃತ್ಯವಾ - ನಾ ಬಲುಮಾಡಿದೆಗೃಹಕೃತ್ಯವಾಬೇಡದಕಿ ಭೃತ್ಯತ್ವವಾ - ಈ ದೋಷನೋಡದಲೆ ಭಕ್ತತ್ವವಾ ನೀಡೊ 2ದೀನ ಜನಪಾಲ ನಿನ್ನಾ-ರೂಪಧ್ಯಾನ ಮಾಡಿದೆ ಬಿಡದೆ ಘನ್ನಾ-ಗತಿಎನು ಪೇಳಯ್ಯಾ ಎನಗೆ ಮುನ್ನಾ ಸ್ವಾಮಿ 3ಗುರುರಾಘವೇಂದ್ರರಾಯ - ಎನ್ನಶರಣು ಪೊಕ್ಕೆನೊ ನಿನಗೆ ನಾನಯ್ಯಾ ಕರುಣೀ 4ಮಾತ ಪಿತ ಭ್ರಾತ್ರÀ ಬಂಧೂ - ಎನಗೆದಾತನಿನ್ನ ದೂತನೆಂದೂ- ಬಂದ-ನಾಥನನು ನೀ ಕಾಯುವುದು ಪ್ರಭುವೇ 5ಕರುಣಸಾಗರನೆ ಈಗ - ತವರೂಪಶರಣು ಪೊಕ್ಕವನ ವೇಗಾ-ಭವ-ಅರಣ ದಾಟಿಸುವಂಥ ಯೋಗಾ ಪೇಳಿ 6ಹೋಗುತಿದೆ ಹೊತ್ತು ಪದುಮಾಕ್ಷ -ಹ್ಯಾಗೆಆಗುವದೊ ನಿನ್ನಅಪರೋಕ್ಷಜಾಗುಮಾಡದೆಸಲಿಸ್ಯನ್ನಪೇಕ್ಷಾ ಸ್ವಾಮಿ7ಪಾರದೋಷಗಳನ್ನೆ ತಾಳೋಘೋರಅಙ್ಞÕನ ಕೀಳೋ- ಪರಲೋಕಸೇರಿಸೆನ್ನನು ಕೃಪಾಳೋ ಸ್ವಾಮಿ 8ಎಷ್ಟು ಪೇಳಲಿ ಎನ್ನ ತಾತಾ - ಕೃಪಾ -ದೃಷ್ಟಿಯಲಿನೋಡುನಾನಿನ್ನ ಪೋತಾಧಿಟ್ಟ ನೀಗುರುಜಗನ್ನಾಥಾ- ವಿಠಲನನಿನ್ನೊಳಗೆ ತೋರೋದಾತಾಖ್ಯಾತಾ9
--------------
ಗುರುಜಗನ್ನಾಥದಾಸರು
ದ್ರೌಪದಿ ಕೃಷ್ಣಾ ಪಾಂಚಾಲಿ | ದೇವಿ |ಗೋಪತಿಧ್ವಜವಂದ್ಯೆಕಾಳಿ | ಆಹಾ |ಪಾಪಗಳೆಣಿಸದೆಲೇ ಪುನೀತನ | ಮಾಡೆ |ಶ್ರೀ ಪವನನ ಕರುಣಾಪಾತ್ರೆ ಸುಚರಿತ್ರೆ ಪವಾಣಿ ಭಕ್ತಿಗೆ ಅಭಿಮಾನಿ | ತಾಯಿನೀನೆ ಗತಿಯೆಲೆ ಸುಶ್ರೋಣಿ | ಶ್ರೀಶಧ್ಯಾನವ ಮಾಡಲು ಮನ ಪೋಣಿಸುವ |ದೇನನೊಲ್ಲೆನು ಪೂರ್ಣಜ್ಞಾನಿ| ಆಹಾ ||ದೀನ ರಕ್ಷಕೆ ಮಿಕ್ಕ ಹೀನ ದೇವರಪಾದ|ಕ್ಕೆ ನಮಿಸುವ ಮತಿಯನೆಂದು ಕೊಡದಿರೆ 1ಶಾರದೆ ಹರಿಯ ಕುಮಾರಿ | ನಿನ್ನ |ಸಾರಿದೆ ಕುಜನ ಕುಠಾರಿ | ದಯಾ |ವಾರಿಧೆ ಸುಜನೋಪಕಾರಿ | ತೋರೆ |ಸಾರೆಗರಿದು ಮುಕ್ತಿ ದಾರಿ | ಆಹಾ ||ಶ್ರೀ ರಮಣ್ಯುಳಿದೆಲ್ಲ ನಾರೀ ಶಿರೋಮಣಿ |ಆರಾಧಿಸುವೆ ಯೆನ್ನ ದೂರ ನೋಡಲು ಬೇಡ 2ಹಲವರಿಗೆಲ್ಲ ಬಾಯ್ದೆರೆದು | ಬೇಡಿ |ಕೊಳುವದೇನದೆ ದಿನ ಬರಿದು | ಸಾಧು |ನೆಲೆಯದೋರರು ಹತ್ಯಾಗರೆದು | ಬುದ್ಧಿ |ಕಲಿಸೆ ಭಾರತಿಯೆನ್ನ ಮರೆದು | ಆಹಾ |ಇಳೆಯೊಳು ಶ್ರಮಪಡಿಸಲು ಸಲ್ಲ ದಿತಿಜರ |ನಳಿದ ಪ್ರಾಣೇಶ ವಿಠಲಗಚ್ಛಿನ್ನ ಭಕ್ತಳೆ 3
--------------
ಪ್ರಾಣೇಶದಾಸರು
ಧನ್ಯನಾದೆನೀದಿನ ನಿನ್ನ ಕಂಡ ಕಾರಣ ಪ.ಪನ್ನಗಾದ್ರಿವಾಸ ಸುಪ್ರಸನ್ನನಾದ್ದರಿಂದ ನಾ ಅ.ಪ.ವ್ರತನೇಮ ಜಪ ತಪ ಹಿತಮಾದುದೈ ಸುತಪಕೃತಿಪತಿ ತವ ಕೃಪಾಶತಧೃತಿಲೋಲುಪಾ 1ವಿದಿಭವಾದಿಗಳಿಂದ ವಿನಮಿತ ವಿಶ್ವಾನಂದಪದುಮನಾಭ ಗೋವಿಂದ ಪವನನಯ್ಯ ಮುಕುಂದ2ಪ್ರೀಯ ತಪೋವಾಸನನೀಯುವ ದೇವರ ದಾನತೋಯಜಾಕ್ಷಲಕ್ಷ್ಮೀನಾರಾಯಣ ಪರಾಯಣ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಧನ್ಯರೆ ನೀವು ಧನ್ಯರೆಪನ್ನಂಗ ಶÀಯನನ ಕನ್ಯೆಯರುನಮಮ್ಯಾಲೆ ಅನಂತ ದಯಮಾಡಿಮನ್ನಿಸಿ ಬನ್ನಿರಿ ಪ.ಇಂದಿರಾ ದೇವಿಯರು ಕುಂದುನೋಡದೆನಮ್ಮ ಮಂದಿರಕ್ಕೆ ಬನ್ನಿರೆಂದು ದ್ರೌಪತಿಯು 1ಮುದ್ದು ಪಾದಕೆ ನಾನು ಬಿದ್ದು ಬೇಡುವೆದಯಇದ್ದರೆ ಬಾ ಅನಿರುದ್ಧನ ರಾಣಿ 2ಕಡುಬ್ಯಾಗಸುಭದ್ರಾ ಅಡಿಗೆರಗುತಕರಹಿಡಿದು ರಾಮೇಶನ ಮಡದಿ ಬಾರಮ್ಮ 3
--------------
ಗಲಗಲಿಅವ್ವನವರು
ಧಾನ್ಯ ದೊರಕಿತು ಎನಗೆಧನವು ದೊರಕಿತು ಪಓಣಿಯೊಳಗೆ ಹೋದ ಮಾ-ಣಿಕ್ಯದ ಹರಳು ದೊರಕಿತೋ ಅ.ಪಕಟ್ಟಿಹಗೆಯ ಹಾಕುವುದಲ್ಲಒಟ್ಟಿ ಕೆಸರ ಬಡಿಯುವುದಲ್ಲ ||ಮುಟ್ಟಿ ಹಿರಿದು ಮೇಯಿಸಿದರೊಂದಿಷ್ಟು ಸೂಡು ಸವಿಯಲಿಲ್ಲ 1ಹರಿದುಗೊಣಸುಹಚ್ಚುವುದಲ್ಲಮುರಿದು ಸಣ್ಣಗೆ ಮಾಡುವುದಲ್ಲ ||ಅರಿದುಇದನು ಪೇಟೆಗೆ ಒಯ್ದರೆಕರೆದು ಬೆಲೆಯನು ಕಟ್ಟುವುದಲ್ಲ 2ಪಾಲುಪಸುಗೆಹಂಚುವುದಲ್ಲಮೇಲೆಚಾರರುಒಯ್ಯುವುದಲ್ಲ ||ಶ್ರೀಲೋಲಪುರಂದರವಿಠಲನಮೂಲನಾಮ ದೊರಕಿತಲ್ಲ 3
--------------
ಪುರಂದರದಾಸರು