ಒಟ್ಟು 873 ಕಡೆಗಳಲ್ಲಿ , 94 ದಾಸರು , 730 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಹರಿಗೆ ಪ್ರಥಮಾಂಗ ಮಧ್ವಮೂರ್ತಿ ಪ ದೇಹ ಚತುರದಿ ಇದ್ದು ಜಗವ ಸಲಹುವೆ ದೊರೆಯೆ ಅ.ಪ. ಅಮೃತರೂಪನೆ ಹರಿಯ ಅಮೃತಮಯ ಭಕ್ತಿಯೊಳು ರಮೆ ಸಹಿತ ರಾಜಿಪನ ಅಚ್ಛಿನ್ನ ಅರ್ಚಕನೆ ಸಮರರಿಯೆ ನಿನಗಿನ್ನು ಅಜನುಳಿದು ಜೀವರೊಳು 1 ನಿನ್ನ ನಾಮಸ್ಮರಣೆ ನಿಸ್ವಾರ್ಥಿಯ ಕಥನ ನಿನ್ನ ವೈಭವ ಧ್ಯಾನ ಅಮೃತಪಾನ ನಿನ್ನ ಗುಣ ಕ್ರಿಯ ರೂಪ ನೆನೆನೆನೆದು ಸುಖಿಸುವನು ಧನ್ಯ ಸುರಕುಲದವನು ಜೀವನ್ಮುಕ್ತನವನಿಯೊಳು 2 ನಿನ್ನಲ್ಲಿ ಹರಿ ಇದ್ದು ಜಗವ ನಡೆಸುವ ತಾನು ನಿನ್ನಲ್ಲಿ ಶ್ರೀಹರಿಯ ಒಲುಮೆ ಅಮಿತ ನಿನ್ನ ಕರವಶ ಮುಕ್ತಿ ಮಾಡಿಹನು ಯದುಪತಿಯು ನಿನ್ನ ದಾಸರೆ ಹರಿಯ ಪುರವಾಸಿಗಳು ಸ್ವಾಮಿ3 ಜ್ಞಾನ ಬಲ ಭಕ್ತಿ ವೈರಾಗ್ಯ ಲಾಘವ ಶಕ್ತಿ ಧ್ಯಾನ ವಿದ್ಯಾ ಬುದ್ಧಿ ಕುಶಲ ತೇಜ ಪೂರ್ಣಪ್ರಾಜ್ಞತೆ ಸಿರಿಯ ಮಾಧುರ್ಯ ಶುಭವಾಕು ಪೂರ್ಣಧೈರ್ಯವು ಕಾರ್ಯ ಪೂರ್ಣ ನಿನ್ನಲಿ ಅಭಯ 4 ವಾಣಿ ಭಾರತಿ ನಿನ್ನ ವೈಭವವ ನೆನೆನೆನೆದು ಧೇನಿಸುತ ಆನಂದಮಗ್ನರಾಗಿ ಕಾಣದಲೆ ಕೊನೆ ಮೊದಲು ತತ್ವದ ಕಮಲದಲಿ ಜೇನಾಗಿ ಕ್ರೀಡಿಪರೊ ಮೈಮರೆದು ಸುಖ ಸುರಿದು 5 ಶಿವ ಶೇಷ ದ್ವಿಜ ರಾಜ ಸುರರಾಜ ಮೊದಲಾದ ಕಮಲ ರಜವ ಲವ ಬಿಡದೆ ಪೊತ್ತಿಹರೊ ಆನಂದ ಶರಧಿಯಲಿ 6 ಅಮಿತ ವೈಭವ ಗಾತ್ರ ಕಾಳಕೂಟವನುಂಡು ಮೆರೆದ ಮಹಿಮ ಶ್ರೀಲೋಲ ನಿನ್ನಲ್ಲಿ ಆನಂದ ಲೀಲೆಗಳ ಕೊಲಾಹಲದಿ ಮಾಳ್ಪ ಕಾರುಣ್ಯರೂಪದಲಿ 7 ರೇಣು ತೃಣ ಕಾಷ್ಟ ಬಹಿರಂತರದಲ್ಲಿ ಘನ ಮಹತ್ತು ಅಣು ಜೀವ ಚಿದ್ದೇಹದಲ್ಲಿ ಅನವರತ ಅಲ್ಲಿಪ್ಪ ಸರ್ವಮಂಗಳ ಹರಿಯ ಗುಣನಿಕರಗತ ಚಿತ್ರ ಜಗದಸುವೆ ನಿರ್ದೋಷ 8 ರಾಮದೂತನೆ ಹನುಮ ಹರಿ ಧೌತ್ಯಯನಗೀಯೊ ಬಂಟ ಸತತ ಹರಣ ವೃಕೋದರ ವೀರ ಶ್ರೀ ಮನೋಹರನÀಲ್ಲಿ ದಾಸ್ಯ ದೀಕ್ಷೆಯ ದೇಹಿ 9 ಪನ್ನಗ ರುದ್ರ ಸುರಗಣವು ಮೊದಲಾದ ಚರಾಚರ ಭ್ರೂ ಚಲನ ಮಾತ್ರದಿಂದ ಖರೆ ಸೃಷ್ಟಿ ಸ್ಥಿತಿ ಮುಕ್ತಿಯೈದುವರೊ ಘನ ಮಹಿಮ ವರ ವೇದ ಪ್ರತಿಪಾದ್ಯ 10 ಪರಮಮಂಗಳ ಜಯೇಶವಿಠಲನಂಘ್ರಿ ಸರಸಿಜವ ಬಿಡದ ಮಧುಪರಾಜ ಶರಣರಿಗೆ ಸುಜ್ಞಾನ ಶರಧಿಯನು ಪೊಂದಿಸಿದೆ ಕರುಣನಿಧಿ ಆನಂದಮುನಿ ನಿನ್ನ ಕೃಪೆ ಮುಕ್ತಿ 11
--------------
ಜಯೇಶವಿಠಲ
ಶ್ರೀಹರಿದಾಸವೃಂದ ಸ್ತೋತ್ರ ದಾಸವರ್ಯರಿಗೊಂದಿಪೆ ದಾಸವರ್ಯರಿಗೆರಗಿ ಜನ್ಮಾಂತರದ ದೋಷವ ಪರಿಹರಿಸಿಕೊಂಬೆ ಪ ನಾರದ ಮುನಿಹರಿಯಾಜ್ಞ್ಞೆಯಿಂದಲೆ ಪುರಂ - ದರ ದಾಸರಾಗಿಜನಿಸಿದ ದಾ - ನಾರಾಯಣನ ದಿವ್ಯನಾಮದ ಮಹಿಮೆಯ ಮೂರು ಲೋಕಗಳಲ್ಲಿ ಹರಹಿದ 1 ಭಜಿಸುವ ಭಕುತರ ಅಗಣಿತದೋಷವ ನಿಜವಾಗಿ ಪರಿಹರಿಸುವಂಥ ದಾಸ - ಸುಜನ ಪೋಷಕ ದುಷ್ಟಕುಜನ ಕುಠಾರ ಶ್ರಿ ವಿಜಯರಾಯರ ಪಾದಕ್ಕೆರಗುವೆ 2 ಕೋಪರಹಿತಭಕ್ತ ಪಾಪವಿದೂರಕ ಭೃಂಗ ದಾ - ತಾಪ ಸೋತ್ತುಮಭವ ತಾಪನಿವಾರಕ ಗೋಪಾಲದಾಸರಿಗೆರಗುವೆ 3 ಧರಿಯಸುರರ ಉದ್ಧರಿಸಲೋಸುಗ ದಿವ್ಯ ಹರಿಕಥಾಮೃತ ಸಾರಗ್ರಂಥವದಾ - ವಿರಚಿಸುತಙÁ್ಞನಪರಿಹರಿಸಿದಂಥ ಹರಿಭಕ್ತಾಗ್ರಣಿ ಶ್ರೀ ಜಗನ್ನಾಥ 4 ಧರೆಯೊಳು ಹರಿಲೀಲಾಮೃತ ವೃಷ್ಟಿಗರೆಯಲು ಪರಿಪರಿ ಕಥೆಗಳ ರಚಿಸಿದ ದಾ - ವರದೇಂದ್ರ ಮುನಿಗಳ ಪಾದಸಾರಸಭೃಂಗ ಪರನುಸುಚರಿತ ಶ್ರೀ ಪ್ರಾಣೇಶ 5 ಹರಿಭಕ್ತಿ ಮಾರ್ಗವ ಪರಿಪರಿಶಿಷ್ಯರಿ ಗರುಹಿ ಕರುಣದಿಂದುದ್ಧರಿಸಿದ ದಾ - ಪರಮತತಿಮರಕ್ಕೆ ತರಣಿಸ್ವರೂಪ ಶ್ರೀ ಗುರುಪ್ರಾಣೇಶಾರ್ಯರಿಗೆರಗುವೆ6 ಗುರುಪಾದ ಸೇವೆಯ ಪರಿಪರಿಗೈದು ಈ ಧರಿಯೊಳು ಧನ್ಯರೆಂದೆನಿಸಿದ ದಾ - ಹರಿದಾಸ ಕುಲರತ್ನ ಸರುವ ಸದ್ಗುಣ ಪೂರ್ಣ ವರಶ್ರೀಪ್ರಾಣೇಶದಾಸಾರ್ಯ 7 ಗುರುಪ್ರಾಣೇಶರ ಕರಸರಸಿಜ ಸಂಜಾತ ಪರಮಭಾಗವತರೆನಿಸಿದ ದಾ ಮರುತಮತದ ತತ್ವವರಿದಂಥ ಸುಖದ ಸುಂ - ಮೋದ ವಿಠಲರೆಂಬ 8 ಭೂಮಿಯೋಳ್ ವರದೇಶ ವಿಠ್ಠಲನ ನಿಜಭಕ್ತ ಸ್ತೋಮಕ್ಕೆ ಶಿರಬಾಗಿ ನಮಿಸುವೆ ದಾ ಆ ಮಹಾತ್ಮರಪಾದರಜಾದೊಳೆನ್ನನು ದೇವ ನೇಮದಿಂದಲಿ ಹೊರಳಾಡಿಸೊ 9
--------------
ವರದೇಶವಿಠಲ
ಶ್ರೀಹರಿಯ ಮಂಗಳ ಪದಗಳು ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ಪ ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರ ಪಾರ್ಥಸಾರಥಿ ಹರಿಗೆ ಅ.ಪ. ನೀರೊಳು ಪೊಕ್ಕವಗೆ ಕಡಲೊಳು ಭಾರವ ಪೊತ್ತವಗೆಮೂರು ಪಾದದಿ ಸರ್ವಧಾರುಣಿ ಅಳೆಯುತಧೀರ ಬಲಿಯ ಮನೆ ದ್ವಾರ ಕಾಯ್ದವಗೆ 1 ಕ್ಷತ್ರಿಯರ ಗೆಲಿದವಗೆ ಗಾರ್ಜಿತ ಸತ್ರವ ಕಾಯ್ದವಗೆಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದಬತ್ತಲೆ ಕುದುರಿಯ ಹತ್ತಿ ಮೆರೆದವಗೆ 2 ಸೃಷ್ಟಿಯು ಇಲ್ಲದವಗೆ ಜಗವನು ಸೃಷ್ಟಿ ಪಾಲಿಪಗೆಬಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿದ-ಭೀಷ್ಟ ನೀಡಲು ಸುಖ ಪುಷ್ಪವಂದಿತಗೆ 3 ನಂದಗೋಕುಲದಲ್ಲೆ ಬೆಳೆಯುವ ಮಂದಜಾಕ್ಷಿಯರಲ್ಲೆಒಂದೊಂದು ಆಟಗಳಾಡಿ ಸುಖವನಿತ್ತನಂದ ಬಾಲಕನಾದ ಇಂದಿರೇಶನಿಗೆ4
--------------
ಇಂದಿರೇಶರು
ಶ್ರೀಹರಿಯ ಸ್ತುತಿ ಕಡಲಶಾಯಿ ಪ ರುಧಿರ ಮೂಲ ಸಾಸ್ಥಿಯ ಕಾಯಾ ಒಳ್ಳೆ ಮೃದು ನರ ಜಾಲಗಳ ಸುತ್ತಿಹ ಮೈಯಾ ಅದರೊಳು ನಿನ್ನಾದಿ ಕಾರ್ಯಾ ಮತ್ತೆ ಸದಮಲ ಪ್ರಾಣೇಶ ನಿನಗೆ ತಾ ಸಹಾಯ 1 ಸಂತತ ಹರಿಯ ಕೊಂಡಾಡಿ ಮಧ್ವ ಪಂಥವ ಪಿಡಿದು ದುವ್ರ್ಯಸನವನೀಡಾಡಿ ಕಂತುಪಿತನ ನಾಮಾ ಪಾಡಿ ಎನ್ನ ಚಿಂತೆ ತಾರಕನೆಂದು ನಂಬಿದೆ ಕೂಡಿ 2 ನರದೇಹ ಕೊಡುವವನು ನೀನು ನಿನ್ನ ಮರೆದಧಮದ ಶಾಸನ ಕರ್ತಾ ನಾನು ನರಸಿಂಹವಿಠಲನು ನೀನು ನಿನ್ನ ಕರುಣೆ ತಪ್ಪಿದ ಮೇಲೆ ಜೀವನವೇನು 3
--------------
ನರಸಿಂಹವಿಠಲರು
ಶ್ರೀಹರಿಯ ಸ್ತುತಿ ಅಂಬುಜಾಕ್ಷನೆ ಪಾಲಿಸೊ ಅಂಬುಜಾಕ್ಷನೆ ಕೇಳು ಕಂಬುಕಂಧರ ನಿನ್ನ ನಂಬಿದ ಜನರನು ಇಂಬಾಗಿರಕ್ಷಿಸುವ ಪ ಹರಿಯೆ ನೀ ಭಕುತರ ಸುರತರುವೆಂದು ಅರಿದು ನಿನ್ನಡಿಗೆ ಬಂದು ಕರುಣಾಸಿಂಧು ವರವೇನು ಎನ್ನ ಪರಿಚರ್ಯವೆಲ್ಲವನು ಜರಿದು ಎನ್ನನು ಪೊರಿಯೆಂದು ಭಕ್ತರ ಬಂಧು ಕರಿವರದನೀತರಿವಿದುರುಳನ ಪೊರೆವಿ ಸುಜನರ ಅರವಿದೂರನೆ ಸ್ಮರಣೆಮಾತ್ರದಿ ತರಣಿಸುತನ ಪುರದಭಯವನು ಪರಿಹರಿಸುವಿ 1 ಭವರೋಗವೈದ್ಯ ನೀ ಅವಧಿಯೂ ಇಲ್ಲದೆ ಸ್ವವಶವ್ಯಾಪಿಯಾಗಿ ದಿವಿಜಯ ಪೊರೆವಿ ಭಕುತರ ಕಾಯ್ಯಿ ಅವನೀಲಿ ಜನಿಸಿದ ಪವನ ವೈರಿಯ ಕವಿಶಿ ಮೋಹದಿ ಕೆಡಿಶಿದಿ ನರನನ್ನು ಪೊರದಿ ಅವನಿಪಿತ ನಿನ್ನ ಯುವತಿ ವೇಷವ ಕವಿಗಳೆಲ್ಲರು ಸ್ತವನ ಮಾಳ್ಪರು ಪವನ ಪ್ರಿಯನೆ ಭುವನ ತಾತನೆ ಶಿವಗೆ ವರವಿತ್ತೆ ಪವನನಯ್ಯನೆ 2 ತರಳ ಪ್ರಹ್ಲಾದನ ಪೊರೆದು ಪಾಂಚಾಲಿಗೆ ವರವಿತ್ತೆ ಕರಿಪುರಾಡರಸರ ಪ್ರಭುವೆ ಸುರತರು ವೇಷಶರಣಾಗತರನು ಪೊರೆವನೆಂಬ ನಿಜ ಬಿರುದನು ಮೆರಿಸುತ ಶಿರಿಯಿಂದೊಪ್ಪುತ ವರ ಭಕ್ತಾಗ್ರೇಸರ ನರಪಾಂಬರೀಷನ ಪೊರೆವಂಥ ಸುರಪತಿ ಶಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಶ್ರೀಹರಿಯು ದಾಸರಿಗೆ ಒಲಿದ ಸ್ತೋತ್ರ ನೀನಾಗಿ ನೀಎನಗೆ ಒಲಿಯೋ ಸರ್ವೇಶ ಪ ದೀನ ವತ್ಸಲ ವೇಧಪಿತ ಶ್ರೀದ ಶ್ರೀಶ ಅ.ಪ ಕರಿಯಂತೆ ನಿನ್ನರಿತು ಕರೆಯಲರಿಯೆನು ನಾನು | ನಾರಿಯಂತೆ ಸವಿದು ಕೊಡಲರಿಯೆ ಪಣ್ಣು || ತರುಗಳಂತೆ ತಪಸ್ಸು ಸಂಸ್ಮರಣೆ ನಾನರಿಯೆ ಕರುಣಾಭ್ಧಿ ನೀನೇ ಪೊರೆ ಎನ್ನ ಶ್ರೀಹರಿಯೆ 1 ಹೇಮ ಕಾಮಿನಿ ಭೂಮಿ ಸಾಧನಕ್ಕೊದಗಬೇಕು | ಮಮ ಅಹಂಕಾರ ದುಷ್ಟದಿ ರತಿ ಸಾಕು || ಭೂಮನಿನಗೆ ಪ್ರಿಯ ಸೇವೆಯಾಗಲಿ ಸರ್ವ | ಕಾಯ ಕ್ರಿಯೆಗಳು ದೇವ ದೇವ 2 ಎನ್ನ ಸರ್ವಾಭೀಷ್ಟಗಳು ಸಿಧ್ಧಿ ಆಗುವವು | ನಿನ್ನ ಔದಾರ್ಯ ಕೃಪೆಯಿಂದ ಎಂದೆಂದೂ || ನಿನ್ನಧೀನವು ನಾನುರಕ್ಷಕನು ನೀ ಶ್ರೀಶ || ಎನ್ನುವದೊಂದೇ ಬಲ್ಲೆ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಹರಿಶರಣರು ನಮ್ಮವರು ಭವ ಶರಧಿಯ ಜಿಗಿದರು ನಮ್ಮವರು ಪ ಪರಮನ ಚರಣದಿ ಅರಿವಿಟ್ಟುರತರ ದುರಿತದಿಂದುಳಿದರು ನಮ್ಮವರು ಅ.ಪ ನಿತ್ಯತೃಪ್ತರು ನಮ್ಮವರು ಜಗ ಮಿಥ್ಯೆಂದರಿತರು ನಮ್ಮವರು ನಿತ್ಯ ಸರ್ವೋತ್ತಮ ಹರಿಯೆಂಬ ವೃತ್ತಿ ಬಲಿಸಿದರು ನಮ್ಮವರು 1 ಸತ್ತು ಚಿತ್ತರು ನಮ್ಮವರು ಮಹ ನಿತ್ಯ ಮುಕ್ತರು ನಮ್ಮವರು ಮುಕ್ತಿದಾಯಕನಂ ಗುರ್ತಿಟ್ಟರಿಯುವ ಸತ್ವ ಕಾಲಗಳು ನಮ್ಮವರು 2 ನಿರ್ಮಲಾತ್ಮಕರು ನಮ್ಮವರು ನಿಜ ಧರ್ಮ ನಿರತರೈ ನಮ್ಮವರು ಬೊಮ್ಮನಯ್ಯನ ಮರ್ಮ ತಿಳಿದು ದು ಷ್ಕರ್ಮವ ಗೆಲಿದರು ನಮ್ಮವರು 3 ದೋಷದೂರರು ನಮ್ಮವರು ನಿ ರಾಸೆ ತಾರರು ನಮ್ಮವರು ಹೇಸಿದೈವಗಳ ಆಶಿಸಿ ಬೇಡದ ಕೇಶವನ ದಾಸರು ನಮ್ಮವರು 4 ಭಜನಾನಂದರು ನಮ್ಮವರು ಸ್ಥಿರ ನಿಜ ಪದವರಿದರು ನಮ್ಮವರು ಕುಜನ ಕುಹಕಿಗಳ ಗಜಿಬಿಜಿಗಳುಕದೆ ಸುಜನರೆನಿಸಿದರು ನಮ್ಮವರು 5 ಭೂರಿ ಶೀಲರು ನಮ್ಮವರು ದುಷ್ಟ ಕೇರಿಯ ಮೆಟ್ಟರು ನಮ್ಮವರು ಸಾರಸಾಕ್ಷನ ಸವಿಸಾರವರಿದು ಪಾದ ಸೇರಿಕೊಂಡಿರುವರು ನಮ್ಮವರು 6 ಸದಮಲಾನಂದರು ನಮ್ಮವರು ದು ರ್ಮದವ ನೂಕಿದರು ನಮ್ಮವರು ಅಧಮತನದಲಿಂದೊದರುವ ಹೊಲೆಯರ ಎದೆಯ ತುಳಿವರೈ ನಮ್ಮವರು 7 ಮೋಸಕೆ ಸಿಲ್ಕರು ನಮ್ಮವರು ಯಮ ಪಾಶವ ಗೆಲಿದರು ನಮ್ಮವರು ಈಶನ ತಿಳಿದರು ನಮ್ಮವರು 8 ಸುಗಣ ಸಂತರು ನಮ್ಮವರು ಮಹ ಭಗವದ್ಭಕ್ತರು ನಮ್ಮವರು ರಘು ಶ್ರೀರಾಮ ಜಗಸರ್ವೋತ್ತಮೆಂದು ಪೊಗಳುತ ನಲಿವರು ನಮ್ಮವರು 9
--------------
ರಾಮದಾಸರು
ಶ್ರೀಹರಿಸ್ತುತಿ ಅಕ್ಕಾ ನೋಡೆ ಚಿಕ್ಕ ಕೃಷ್ಣನೂ ಪೊಕ್ಕಿಹ ರಿಂದಾವನಕೀಗ ಬಾ ಪ. ಸಿಕ್ಕನೆ ಪೋಗದಿರೆ ಲಕ್ಕುಮಿಯರಸ ದಕ್ಕಿಸಿಕೊಳ್ಳೆವೆ ಸಿಕ್ಕದೆ ಬಿಟ್ಟಾರೆ ಅ.ಪ. ಸದ್ದು ಮಾಡದೆ ಬನ್ನಿ ಇಲ್ಲಿದ್ದವರೆಲ್ಲ ಮುದ್ದು ಶ್ರೀ ಕೃಷ್ಣನ ಬಳಸುವ ಬಾರೆ ವಾಹನ ಎದ್ದು ಅಭಯನೀವ ಶುದ್ಧ ಕೋಲಾಟಕೆ ಸಿದ್ಧನಾಗುವನೆ 1 ನವನೀತ ಚೋರನ ರವಿಶತಕೋಟಿ ಕಿರೀಟ ಪ್ರಕಾಶ ಜವದಿ ಪೊಳೆವ ಗೋವಲಯಪಾಲನ ಅವನೀಧವನೊಲಿಸಲು ಪೋಗುವ ಬಾ 2 ಆರಿಗೂ ಸಿಗನೆ ನಾರದ ವಂದ್ಯನೆ ತಾರಕೆಗಳ ಮಧ್ಯ ಚಂದ್ರನಂತಿಹನೆ ನಾರಾಯಣ ಶ್ರೀ ಶ್ರೀನಿವಾಸನ ಸೇರಿ ಸುಖವ ಸುರಿಸಲು ತವಕದಿ 3
--------------
ಸರಸ್ವತಿ ಬಾಯಿ
ಶ್ರೀಹರಿಸ್ತುತಿ ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ ಎದೆಯ ಮೇಲಿರುವ ಲಕ್ಷ್ಮಿ ಕದನಮಾಡುತವೆ ಕೊಲ್ಲಾಪುರಕೆ ನಡೆತರಲು ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ ಇದು ನಿನಗೆ ಸದನಾಯಿತೊ ದೇವ 1 ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ ನೆತ್ತಿಯನೊಡೆದುಕೊಂಡು ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2 ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ ಭೂರಮಣನ್ವರಾಹನಿಂದ ನೂರುಪಾದ ಭೂಮಿಕೊಟ್ಟರೆ ಸಾಕೆಂದು- ಪಾಯದಿಂದದನ್ವ್ಯಾಪಿಸಿ ತಾಯಿ ಬಕುಳಾದೇವಿಯಿಂದ ಪೂ ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3 ನಾಟಕಧಾರಿ ಕಿರಾತರೂಪವ ಧರಿಸಿ ಬೇಟೆಗೆನುತಲಿ ಪೋಗಲು ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಲಿ ಮನಸೋಲಿಸಿ ಬೂಟಕತನದಿ ಜಗಳಾಟವನ್ನೆ ಮಾಡಿ ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4 ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತಿ ವಾರ್ತೆಯನ್ನು ಬಳಿಯ ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ ಸಿದಾಕಾಶನಲ್ಲಿ ಚದುರಮಾತಿನ ಚಪಲ ಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತೆಯೊ ಮಹದೇವ5 ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ ಕರ ವೀರದಿಂದೆ ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ ಕೊಂಡು ಪರಮ್ಹರುಷದಿಂದ ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6 ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು ಹಾಕಿದ ರತ್ನಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ ಸಾಕಾಗದೇನೊ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೆ ದೇವ 7 ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ಗಂಬದ ಸುತ್ತ ಪ್ರಾಕಾರವೊ ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ ನೋಡಿದೆನು ನಿನ್ನ ಭಕುತರ ದೇವ 8 ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೆ ನಮಗೆ ಕಣ್ಣಾರೆಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲು ಕಾಣೆ ಜಗದಿ ಎನ್ನ ಕಿವಿಗಾನಂದವೊ ದೇವ 9 ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ ಮೇಲಲೆವೊ ಪೀತಾಂಬರ ಮಾಲೆ ಶ್ರೀವತ್ಸದ್ಹಾರ ಮೇಲಾದ ಸರಿಗೆ ಸರ ಪದಕವೊ ಕಮಲ- ದಳಾಯತಾಕ್ಷನ ನೋಡಿದೆ ದೇವ 10 ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ ವರ ಶಂಖ ಚಕ್ರಧಾರಿ ಗಿರಿಯ ಭೂವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ11
--------------
ಹರಪನಹಳ್ಳಿಭೀಮವ್ವ
ಶ್ರೀಹರಿಸ್ತುತಿ ಈ ಮಹಾಮಹಿಯ ಪ ವೇದವನು ಸಾಧಿಸುತ 1 ಹರುಷದೊಳಾ ಗಿರಿಯನೆತ್ತಿ 2 ಹರಣವನು ಹೀರುತಲಿ 3 ವರ ಪ್ರಹ್ಲಾದನಿಗೊಲಿದು 4 ಈರಡಿಯ ಮಾಡುತಲಿ 5 ಕುಲವನು ತಾನಳಿಸುತಲಿ 6 ಶರಣಶಿಖಾಮಣಿಗೊಲಿದು7 ಸರಸದೊಳಾತುರುಗಳನು 8 ವಧಿಸುತಲಾ ತ್ರಿಪುರರನು 9 ಕಳೆವನು ಭೂಭಾರವನು 10 ಕಿಂಕರರಿ ಗೊಲಿದವನು11
--------------
ವೆಂಕಟ್‍ರಾವ್
ಶ್ರೀಹರಿಸ್ತುತಿ ಜೈ ಹರಿ ವಿಠ್ಠಲ ಪಾಂಡುರಂಗ 1 ರಕುಮÁಯೀಧವ ಪಾಂಡುರಂಗ 2 ಸಾಧುಜನಾರ್ಚಿತ ಪಾಂಡುರಂಗ 3 ಕಾಲಾಂತಕಪ್ರಿಯ ಪಾಂಡುರಂಗ 4 ಕರಿರಾಜವರದ ಪಾಂಡುರಂಗ 5 ವನಜಾಸನನುತ ಪಾಂಡುರಂಗ 6 ಕುಟಿಲಾಂತಕಹರೆ ಪಾಂಡುರಂಗ 7 ಭಾವಜಪಿತಹರೆ ಪಾಂಡುರಂಗ 8 ಫಣಿಪತಿಶಯನ ಪಾಂಡುರಂಗ9 ದುರಿತವಿದೂರ ಪಾಂಡುರಂಗ 10 ವನಜನಾಭಹರೆ ಪಾಂಡುರಂಗ 11 ವಾತಾತ್ಮಜನುತ ಪಾಂಡುರಂಗ 12 ಜಗದೋದ್ಧಾರ ಪಾಂಡುರಂಗ 13 ಪುಂಡರೀಕವರದ ಪಾಂಡುರಂಗ 14 ದೀನಮಂದಾರ ಪಾಂಡುರಂಗ 15 ಸಿಂಧುಶಯನಹರೆ ಪಾಂಡುರಂಗ 16 ಶ್ರೀಕರಸೇವಿತ ಪಾಂಡುರಂಗ 17 ನರಕಾಂತಕಹರೆ ಪಾಂಡುರಂಗ 18 ಸಾಮಗಾನಪ್ರಿಯ ಪಾಂಡುರಂಗ 19 ಕ್ಷಾತ್ರಕುಲಾಂತಕ ಪಾಂಡುರಂಗ | ಧಾತ್ರೀರಮಣ ಪಾಂಡುರಂಗ 20 ಕಾಮಿತಫಲದ ಪಾಂಡುರಂಗ 21 ಪಾವನಚರಿತ ಪಾಂಡುರಂಗ 22 ಉತ್ತಮದೇವನೆ ಪಾಂಡುರಂಗ 23 ಸೋಜಿಗಪುರುಷನೆ ಪಾಂಡುರಂಗ24 ಭಾನುಪ್ರಕಾಶ ಪಾಂಡುರಂಗ 25 ಸುರಭಿನಿವಾಸ ಪಾಂಡುರಂಗ 26 ಭಕುತಪೋಷಕ ಪಾಂಡುರಂಗ27 ತ್ರಿಗುಣಾತೀತಾ ಪಾಂಡುರಂಗ 28 ಚಂದ್ರಮೌಳಿಹಿತ ಪಾಂಡುರಂಗ26 ಸುರಮುನಿಸನ್ನುತ ಪಾಂಡುರಂಗ30 ದಾನವಾಂತಕ ಪಾಂಡುರಂಗ 31 ಭೂಸುರವಂದಿತ ಪಾಂಡುರಂಗ32 ಸೃಷ್ಟಿಗೊಡೆಯ ಶ್ರೀ ಪಾಂಡುರಂಗ 33 ಉರ್ವಿರಮಣ ಪಾಂಡುರಂಗ 34 ಶೃತಿತತಿವಿನುತ ಪಾಂಡುರಂಗ 35 ಜೀವೋತ್ತಮನುತ ಪಾಂಡುರಂಗ36 ನಾಕಾಧಿಪನುತ ಪಾಂಡುರಂಗ 37 ಮೋದದಾಯಕ ಪಾಂಡುರಂಗ38 ಭಾಗವತಪ್ರಿಯ ಪಾಂಡುರಂಗ39 ಕರುಣಿಗಳರಸನೆ ಪಾಂಡುರಂಗ40 ತಾಪತ್ರಯಹರೆ ಪಾಂಡುರಂಗ41 ಕರ್ಮಾಧಿಪತೆ ಪಾಂಡುರಂಗ42 ಕಪಟನಾಟಕ ಪಾಂಡುರಂಗ43 ಬಾದರಾಯಣ ಪಾಂಡುರಂಗ44 ಮುಂದೆ ದಾರಿಯೇನೋ ಪಾಂಡುರಂಗ 45 ಪಾಶಪರಿಹರಿಸೊ ಪಾಂಡುರಂಗ 46 ಎಷ್ಟು ಪೊಗಳಲೋ ಪಾಂಡುರಂಗ 47 ಇಷ್ಟದಾಯಕ ಪಾಂಡುರಂಗ 48 ಜನುಮ ನೀಗಿಸೊ ಪಾಂಡುರಂಗ 49 ಘನ್ನಮಹಿಮನೆ ಪಾಂಡುರಂಗ 50 ದೀನವತ್ಸಲನೆ ಪಾಂಡುರಂಗ 51 ಪಾದ ಪಾಂಡುರಂಗ52 ಶುಭಮಂಗಳಹರೆ ಪಾಂಡುರಂಗ 53 ಶ್ರೀಶಕೇಶವ ಪಾಂಡುರಂಗ 54
--------------
ಶ್ರೀಶ ಕೇಶವದಾಸರು
ಶ್ರೀಹರಿಸ್ತುತಿ ಮಂಗಳಾಚರಣೆ ಉಡುಪ ವಂಶಜ ಹರಿಯು ಉಡುಪತಿಯ ತಪದೆಡೆಯೊ ಳುಡುಪ ಶೇಖರನನ್ನು ತನ್ನ ಬಳಿಯಿರಿಸಿ ಕಡೆಗೋಲು ನೇಣುಗಳ ಪಿಡಿದು ನಿಂತಿರುವ 1 ಬೆನಕ ದೇವನೆ ನಿಜದಿಯಾಗಸಕೆ ಒಡೆಯನವ ನಾದವಾಹಿನಿಯನ್ನು ತನ್ನಲ್ಲಿಯಿರಿಸಿ ಗುರುಗಳುಪದೇಶದಿಂ ಜ್ಞಾನವೊದಗಿಪ ಜನಕೆ ಪೊಡಮಡುವೆನವನಡಿಗೆ ಯೆಡರು ಬರದಂತೆ 2 ಸರಸತಿಯೆ ನೀ ನನ್ನ ರಸನೆಯಲಿ ನೆಲೆನಿಂತು ನಿನ್ನ ಮಾವನ ಪೊಗಳಲೆನಗೆ ಮತಿತೆತ್ತು ಅವನೊಲುಮೆಯಿಂದೆನಗೆ ಮುಕುತಿಯನು ಪಡೆವಂತೆ ಹರಸು ನೀನ್ ಭಗವತಿಯೆ ನಿನ್ನ ವಂದಿಸುವೆ 3
--------------
ನಿಡಂಬೂರು ರಾಮದಾಸ
ಶ್ರೀಹರಿಸ್ತುತಿಗಳು ಇಂದಿರಾಪತಿ ನಂದಕಂದನು ಬಂದ ನೋಡುವ ಬಾ ಪ ಸುಂದರಮಂದರಧರ ಮುಕುಂದನ ಅ.ಪ ನಿರುತಮವನ ಸನ್ನಿಧಿಯಲಿಬೆರೆತು ಪಾಡುವ 1 ಪಾದ ಒದಗಲೆಂದು ನಮಿಸಿನಾವು ಪಾಡಿ ಪೊಗಳುತ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಹರಿಸ್ತುತಿಗಳು ಕಂಡು ನಾ ಧನ್ಯನಾದೆನೋ ಶ್ರೀ ಪುರುಷೋತ್ತಮ ಪುಂಡರೀಕಾಕ್ಷ ವಿಷ್ಣುಪಾದವ ಪ ಮಗಧನಾ ದೇಶದಲ್ಲಿ ಚಂಪಕಾರಣ್ಯದಲ್ಲಿ ಮಧುವನದ ಮಧ್ಯದಿನಿಂದ ಮದನನಯ್ಯನ ಪಾದವ 1 ಶ್ರೇಷ್ಠ ಗಯಾಸುರನ ಶಿರವ ಮೆಟ್ಟಿ ಅವನ ದರ್ಪವ ನಷ್ಟವನ್ನು ಮಾಡಿದ ಸೃಷ್ಟಿಗೀಶ್ವರನ ಪಾದವ 2 ಮಂಡೆಯನ್ನು ತುಳಿದ ಭೂಮಂಡಲಾಧಿಪನ ಪಾದವ 3 ಪಿಂಡವಿಟ್ಟವರ ಪಿತೃಗಳಿಗೆ ಆನಂದಲೋಕವೀವ ಪಾದವ 4 ಹರಿಗೆ ಅಭಿಷೇಕ ಮಾಡಿ ಭರದಿ ಭಜನೆ ಮಾಳ್ಪ ಪಾದವ 5 ಸಾಸಿರನಾಮದಿಂದ ಉಲ್ಲಾಸದಿ ಪೂಜಿಸಿ ಜನರು ಲೇಸಾಯಿತೆಂದು ಪೋಪ ಈಶನ ಪಾದವ 6 ಸಂಧ್ಯಕಾಲದಲ್ಲಿ ಹರಿಗೆ ಗಂಧಮಾಲೆಯನ್ನು ಧರಿಸೀ ಸು ಗಂಧವಾದ ತುಳಸಿ ಸುತ್ತಲು ಗೋವಿಂದನ ಶ್ರೀಪಾದವ 7 ಪಾದ ಪಾದ ಪಾದ ಪಾದ 8 ಪಾದ [ಸಜ್ಜನರಿಗೆ ] ಮುಕ್ತಿಯನ್ನು ಕೊಡುವ ಪಾದವ 9
--------------
ಯದುಗಿರಿಯಮ್ಮ
ಶ್ರೀಹರೀ ಕೃಷ್ಣಮುರಾರಿ ಕೇಶವ ಚಕ್ರಧಾರಿ ಪ ಸುಂದರ ಸುಮನಸ ವೃಂದ ಮುನಿಮಾನಸ ನಂದಗೋವರ್ಧನೋದ್ಧಾರೀ 1 ನಿತ್ಯ ಹಂಸ ಡಿಂಬಿಕ ಚಾಣೂರ ವೈರೀ2 ವಾತ ವತ್ಯ ಪ್ರಲಂಬ ಖ್ಯಾತ ಬಕಧೇನುಕ ಪೂತನಿ ಪ್ರಾಣಾಪಹಾರಿ3 ಕಂತುಪಿತ ಶ್ರೀಲಕ್ಷ್ಮೀಕಾಂತ ಕೃಷ್ಣ ಶ್ರೀಮದ- ನಂತ ಸುದರ್ಶನಧಾರೀ 4 ಸಾರಥಿ ದುರಿತೋತ್ತಾರೀ 5
--------------
ಅನ್ಯದಾಸರು