ಒಟ್ಟು 6114 ಕಡೆಗಳಲ್ಲಿ , 127 ದಾಸರು , 3568 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾಗುವುದು ತಾನಾಗಿದೆ ಜಗ ನೀನ್ಯಾಕದರೋಳ್ಪಾಲಿಡುವ್ಯೋ ಪ ಕಾಣುಕಾಣುತಲಿ ಶೂನ್ಯವೆನಿಪುದೆಲ್ಲ ಜಾಣನಾಗಿ ಭವಗೆಲಿಯೆಲವೋ ಅ.ಪ ಸತತದಿ ಸತಿಸುತರ್ಹಿತಕಾಗಿ ಬಲು ಮತಿಗೆಟ್ಟತಿಯಾಗ್ವ್ಯಥೆಬಡುವ್ಯೋ ಪೃಥಿವಿ ಮೇಲೆ ನಿನ್ನ ಮತಿಯಲಿಂದ ಮಣ್ಣು ಪ್ರತಿಮೆಮಾಡಿ ಸೃಷ್ಟಿಗೊಳಿಸಿದೆಯೋ 1 ಹಲವುವಿಧದಿ ನಾನೆ ದುಡಿದು ಧಾನ್ಯಧನ ಗಳಿಸಿದೆನೆಂದು ಬಲು ಭ್ರಮಿಸುವೆಯೋ ತಿಳಿದುನೋಡೆಲೆ ಬೀಜದೊಳಗೆ ಮೊಳಕೆ ತಿದ್ದಿ ಬೆಳೆಯ ಬೆಳೆಸಿ ಸ್ಥಿತಿಮಾಡಿದೆಯೋ 2 ಎಷ್ಟುದಿನಿರ್ದರು ಬಿಟ್ಟು ಹೋಗುವುದನು ಗಟ್ಟಿಮಾಡ್ಯಾಕೆ ಭ್ರಷ್ಟನಾಗುವೆಯೋ ಸೃಷ್ಟಿಸ್ಥಿತಿಲಯಕರ್ತ ಶ್ರೀರಾಮನ ನಿಷ್ಠೆಯಿಂ ಪಾಡಿ ಮುಕ್ತಿಸುಖ ಪಡೆಯೋ 3
--------------
ರಾಮದಾಸರು
ಏನಾದರೇನು ಪ ತನು ವೈರಾಗ್ಯದಲ್ಲಿಟ್ಟನವರತಾ | ಅಣಿಮಾ ಸಿದ್ಧಿ ಅರತಾ | ಘನಗುರು ಜ್ಞಾನವಾ ಮರತು 1 ಓದಿಕಿಯಲಿ ನಿಪುಣಾದವನು ಯಲ್ಲಾ | ವೇದಾರ್ಥ ಮಾಡಬಲ್ಲಾ ಸಾಧುರಾ ಮಾರ್ಗವೆ ತಿಳಿಲಿಲ್ಲಾ 2 ಗುರು ಮಹಿಪತಿ ಸುತ ಪ್ರಭುವಲಿಯದೆ | ಪರಗತಿ ಸಾಧಿಸುವದೆ | ಬರೆ ವ್ಯರ್ಥಡಂಭದಿ ಮೆರೆವುದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಿದು ಎಲೆ ಮನ ಏನು ಇದು ನೆನೆಸಿದರೆದೆ ಝಲ್ಲೆನುವುದು ಪ ನಾನು ಯಾರೆಂಬುವ ಖೂನವ ತಿಳಿಯದೆ ಶ್ವಾನನಂದದಿ ಕೆಟ್ಟ ಹೀನಭವಕೆ ಬಿದ್ದು ಅ.ಪ ಏತಕ ಬಂದದ್ದೀ ಜನುಮಕ್ಕೆ ತಲೆಯೆತ್ತಿ ನೋಡದೆ ಕೂತಿಮುಂದಕೆ ನೀತಿಗೇಡಿ ಮಹಪಾತಕನು ಯಮ ದೂತರು ನಿಂತಾರೊ ಎಳಿಲಿಕ್ಕೆ 1 ಬೀಳಬೇಡೋ ಮಾಯದ ಜಾಲಕ್ಕೆ ಘಳಿಲನೆ ತಿಳಿತಿಳಿ ಸುಲಭದಿ ಸಮಯವು ಬಲಿಸಿ ಹರಿಯ ಧ್ಯಾನ ಕಾಲನ ನೂಕೋ 2 ಹುಟ್ಟಿಬಂದಿ ಶಿಷ್ಟಪದ ಪಡಿಲಿಕ್ಕೆ ಮರ್ತುಬಿಟ್ಟಿ ನಿಂತಿ ಬಿಟ್ಟಗಂಟ್ಹೊರಲಿಕ್ಕೆ ಭ್ರಷ್ಟಗುಣವ ಬಿಟ್ಟು ದಿಟ್ಟರಾಮನ ಗಟ್ಟ್ಯಾಗಿ ನಂಬಿ ಮುಟ್ಟು ಮುಕ್ತಿಪದಕೆ3
--------------
ರಾಮದಾಸರು
ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಪ ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು 1 ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು 2 ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ 3
--------------
ಕನಕದಾಸ
ಏನು ಇಲ್ಲದ ಎರಡು ದಿನದ ಸಂಸಾರಜ್ಞಾನದಲಿ ದಾನಧರ್ಮವ ಮಾಡಿರಯ್ಯ ಪ ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕುಹಸನಾದ ಭೂಮಿಯನು ಧಾರೆಯೆರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇ ಬೇಕು1 ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮೆಪಡಬೇಡಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ 2 ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನಚರಣ ಕಮಲವ ಸೇರಿ ಸುಖಿಯಾಗು ಮನುಜ 3 * ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಏನು ಇವನದು ಗುಮಾನ ರಾಮಾ |ನೀನೆ ನೋಡಿದೆಲ್ಲ ? ಉಳಿದಿತೇ ಮಾನಾ ? ಪ ದಶಕಂಠನಿಂದ ಬಲ್ಲಿದನೇ ?ಪಶುಪತಿ ಇವಗೇನು ವರವ ಕೊಟ್ಟಿಹನೇ ? 1 ಯಾತಕ ಅಂಜುವಿ ನೀನು ಮಹಾ |ಪಾತಕ ಹತ್ತದ ಕೊಂದರೆ ಏನೋ 2 ಗುರುಭವತಾರಕನ ತಂದೆ ನೀ |ವರವ ಕೊಟ್ಟು ಮಾತು ಅರಿತುಕೋ ಇಂದೇ 3
--------------
ಭಾವತರಕರು
ಏನು ಕರುಣವೊ ಕೃಷ್ಣ ಎಮ್ಮ ಮೇಲೆ ಪ ನಾನಾಪತ್ತುಗಳ ಕಳೆದು ಸಲಹಿದೆಯೊ ಅಕಳಂಕ ಅ.ಪ. ಕೌರವ ಕೊಟ್ಟ ಪರಿಪರಿಯ ಕಷ್ಟಗಳ ಪರಿಹರಿಸಿ ನೀ ಕಾಯ್ದೆ ಪರಮ ಕರುಣಿ ಅರಗಿನ ಮನೆಯಲಿ ಉರಿದುಪೋಗದ ತೆರದಿ ಭರದಿಂದ ರಕ್ಷಿಸದೆ ಭೀಮನೊಳು ನೀನಿದ್ದು 1 ಕಾನನದಿ ನಾವ್ ನಿದ್ರೆಗೈಯುತಿರೆ ಕಡುಘೋರ ದಾನವ ಹಿಡಿಂಬಕನು ಕೊಲ್ಲ ಬರಲು ಪ್ರಾಣಸುತ ನಮ್ಮ ಈ ಭೀಮನಿಗೆ ಬಲಕೊಟ್ಟು ಹೀನಖಳನನು ಸೋಲಿಸಿ ಕಾಯ್ದೆ ಸ್ವಾಮಿ 2 ಲೋಕಕಂಟಕನಾದ ಭೀಕರ ಬಕಾಸುರನ ನೀ ಕೊಂದು ಈ ವೃಕೋದರನಲಿ ನಿಂದು ಏಕಚಕ್ರಪುರದ ಲೋಕವನು ನೀ ಕಳೆದೆ ಏಕಮೇವಾದ್ವಿತೀಯ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ಏನು ಕರುಣೆಗೈದೆ ನಳಿನಾಕ್ಷ ಪ ಈ ನಿನ್ನ ಭಕ್ತನೊಳೇನು ಮಮತೆಯೋ ನಿನಗೆ ಅ.ಪ. ಹಿಂದೆ ಬಲಿಯು ತಾ ಯಜ್ಞವ ಮಾಡಲು ಇಂದ್ರ ಪದವು ಪ್ರಾಪ್ತಿ ನಿನ್ನಿಂದಲ್ಲದೆ ಇಂದು ಆ ಪದವಿಯನತಿಯುಕ್ತಿಯಿಂದಲಿ ಸಂದೇಹವಿಲ್ಲದೆ ಸೂರೆಗೈದವ ನೀನೆ 1 ಪರಮ ವಿದ್ವಾಂಸರನು ಧೈರ್ಯಶೀಲರನು ನೆರೆಮೋಹಗೊಳಿಸುವುದೈಹಿಕ ಭಾಗ್ಯವು ಪರಮ ಕಾರುಣ್ಯದಿಂದೊಲಿದು ನೀನಿವನನು ಸಿರಿಮೋಹದಿಂದಲಿ ಪಾರುಮಾಡಿದೆ ದೇವ 2 ನೀನಿಂದು ಗೈದುದು ಪರಮೋಪಕಾರವು ನಾನದರೊಳು ಲೇಶದೋಷವೆಣಿಸನಯ್ಯಾ ಶ್ರೀನಿಧಿ ಕರಿಗಿರೀಶನೆ ನಿನ್ನ ಚರಣಕ್ಕೆ ಆನಮಿಸುವೆನಿಂದು ದೀನವತ್ಸಲ ಸ್ವಾಮಿ 3
--------------
ವರಾವಾಣಿರಾಮರಾಯದಾಸರು
ಏನು ಕಾರಣ ಬಾಯಿ ತೆರೆದಿ - ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ಪ ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ1 ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮರೆತು ಮಾವನ ಕೊಂದು ನಿಂದೆ - ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ2 ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ 3
--------------
ಕನಕದಾಸ
ಏನು ಕಾರಣ ವೆನ್ನ ಮನೆಗಿಂದು ಬಾರನು | ಮಾನಿನಿತಂದು ತೋರಮ್ಮಾ ರಂಗನ ಪ ದೀನ ವತ್ಸಲನೆಂಬ ನಾನ್ನುಡಿ ಮಾತಿಗೆ | ನಾನೆರೆ ಮರುಳಾದೆನಮ್ಮಾ ರಂಗಗೆ 1 ಇಂದು ಜರಿದು ತನ್ನ| ಹೊಂದಿದೆ ಚರಣ ನೋಡಮ್ಮಾ ರಂಗನೆ 2 ತಾನೆ ದಯಾಂಬುಧಿ ನಾನೆವೆ ಅಪರಾಧಿ | ನ್ಯೂನಾರಿಸುವ - ರೇನಮ್ಮಾ ರಂಗನು 3 ತನ್ನ ಹಂಬಲಿಸುವ ಕಣ್ಣಿಗೆ ಮೈದೋರಿ | ಧನ್ಯಳ ಮಾಡನೇನಮ್ಮಾ ರಂಗನು 4 ಸಾರಥಿ | ಒಂದು ನೆರದಪುಣ್ಯಲೆಮ್ಮಾ ರಂಗನು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆನಿಸಿ ಅಜಭವರ ತಂದೇ ಪ ಹೊರೆಯ ಲೈತರಲು ಹಂಬಲಿಪ ಪ್ರಲ್ಹಾದಿಲ್ಲ | ಹಿರಣ್ಯ ಕಾಸುರನಿಲ್ಲ | ಸುರರಿಗುಪಟಳವೇನು ಇಲ್ಲ ಸ್ತಂಭ | ಬಿರಿದು ದೋರುವ ಅಹೋಬಲದ ಸ್ಥಳವಲ್ಲ 1 ಸಿರಿಯ ಮೋಹನ ನಿಮ್ಮ ರೂಪವನೆ ಆವರಿಸಿ | ಮರದ ಪೇರ್ಗಳೆಪಾದ ಕೊಂಬುಗಳ ಕರಧರಿಸಿ | ಸಿರಸಾಗ್ರ ಮಧ್ಯುದರ ವೆರಸೀ ಪರ್ಣ| ದಿರುವ ಅವಯವ ಮಾಡಿ ಪಾದರ್ಪೆದ್ರನಿಸೀ2 ಧರೆಗಧಿಕ ಸುಕ್ಷೇತ್ರ ಶೂರ್ಪಾಲಯವೆ ನೋಡಿ | ಮೆರೆಯುತಿಹ ಕೃಷ್ಣ ವೇಣಿಯ ತೀರದಲಿ ಮೂಡಿ | ಹರಗರುಡ ಗಣಪರೋಡಗೂಡಿ ನಲಿವ | ಗುರುಮಹಿಪತಿ ಸ್ವಾಮಿ ಕಾಯೋದಯ ಮಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಗತಿ ಎನಗಿನ್ನು ಏನು ಗತಿಯೋ ನೀನು ಸಿರಿ ಕೃಷ್ಣ ಪ ಕಾಯ ಮೊದಲಾದ ಬದುಕುಗಳೆಲ್ಲ ಸ್ಥಿರತರಗಳಲ್ಲೆಂದು ತೋರಿಸಲು ಪರಮ ಭಕುತಿಯು ಪುಟ್ಟಿ ಮೊದಲೆ ನಾ ನಿನ್ನ ಪದ ಮರೆದು ಬಿಡುವೆನು ತಡಿಯದೇ ಕರುಣಿ 1 ಹೀಗೆ ತೋರದೆ ಪೋದರೆ ಎನಗೆ ಹಂಬಲವು ಆಗುವುದು ಸತ್ಯಲೋಕಗಳ ತನಕ ಭೋಗಗಳು ಕೊಟ್ಟರೆ ಮರೆವೆ ಅದರಿಂದ ನಾ ಕೂಗುವೆನು ಕೊಡದಿದ್ದರೆ 2 ಪಾಮರನ ಮಾಡಲೆನ್ನನು ತಿಳಿಯದಲೇವೆ ಸೀಮೆ ಇಲ್ಲದ ಪಾಪ ಮಾಡುವೆನೊ ಪ್ರೇಮದಲಿ ಪಾಂಡಿತ್ಯ ನೀಡಿದರೆ ಭಕುತ ಜನ ಸ್ತೋಮ ನಿಂದಿಸುವೆನಯ್ಯಾ 3 ಧನದಿಂದ ಹೀನನ್ನ ಮಾಡೆ ಲೋಕದಲಿನ್ನು ಜನರು ಕೊಡುವುದು ಎಲ್ಲ ಎನಗೆ ಕೊಡಲೆಂಬೆ ಧನವು ನೀ ಕೊಡಲು ಬಲು ಮದದಿಂದ ಕೆಟ್ಟು ಸ- ಜ್ಜನಕೆ ಕಾಸೊಂದು ಕೊಡಿನೊ 4 ಏಸು ಪರಿಯಲಿ ಪೇಳಿದರು ಕೇಳೆನ್ನ ನಿಜ ವಾಸನಿಯು ತನಗೆ ತಾನಿಟ್ಟಾಹದೈ ವಾಸುದೇವವಿಠಲ ನೀ ಎನ್ನಯ ಮನದಲ್ಲಿ ವಾಸವನು ಮಾಡಿ ಬೋದÉೈಸದನಕೆÀ5
--------------
ವ್ಯಾಸತತ್ವಜ್ಞದಾಸರು
ಏನು ಗಳಿಸಿದ್ಯೊ ಪ್ರಾಣಿ ಜ್ಞಾನಕ ಮಾಡಿ ನೀ ಹಾನಿ ಧ್ರುವ ಶಬ್ಧಜ್ಞಾನದ ಅಂಗಡಿನೀ ಹಾಕಿ ಲುಬ್ದಿಸಿದೊ ಬಲು ಪಾಕಿ ಲಬ್ದಾಲಬ್ಧಿಯು ತಿಳಿಯದೆ ಡೊಂಕಿ ಸ್ತಬ್ಧನಾದ್ಯೊ ವಿಶ ಸೋಂಕಿ 1 ವಿದ್ಯಾ ವ್ಯುತ್ಪತ್ತಿ ತೋರಿ ನೀ ಬಹಳ ಸದ್ಯಮಾಡಿದ್ಯೊ ತಾಳ ಮೇಳ ಸಿದ್ಧಾಂತನುಭವ ನೀ ಮಾಡಿ ಹಾಳ ಕೋಳ 2 ಗಳಿಸುವದೇನೆಂದರಿಯದೇ ಖೂನ ಬಾಳಿ ಬದುಕಿ ಪಡದೇನ ಬೆಳಗು ಬೀರುತಿರೆ ಮಹಿಪತಿ ಗುರುಜ್ಞಾನ ತಿಳಕೊಬಾರದೆ ನಿಜಖೂನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನು ದುಷ್ಕøತ ಫಲವೋ ಸ್ವಾಮಿ ಶ್ರೀನಿವಾಸನೆ ಪೇಳೋ ಪ. ಏನು ಕಾರಣ ಭವಕಾನನದೊಳು ಬಲು ಹಾನಿಯಾಗಿ ಅವಮಾನ ತೋರುವದಿದು ಅ.ಪ. ಹಂಬಲವೂ ಹಿರಿದಾಯ್ತು ಎನ್ನ ನಂಬಿಕೆಯೂ ಕಿರಿದಾಯ್ತು ಸಂಭ್ರಮವಲ್ಲ ಕುಟುಂಬಿಗೆರೆನ್ನಯ ಹಂಬಲಿಸರು ನಾನೆಂಬುವದೇನಿದು 1 ಹಣವಿಲ್ಲಾ ಕೈಯೊಳಗೆ ಸ- ದ್ಗುಣವಿಲ್ಲಾ ಮನದೊಳಗೆ ಜನಿತಾರಭ್ಯದಿ ತನುಸುಖವಿಲ್ಲೈ ಘನದಾಯಾಸವ ಅನುಭವಿಸುವದಾಯ್ತು 2 ಪೋದರೆಲ್ಲ್ಯಾದರು ಅಪ- ವಾದವ ಪೇಳ್ವರು ಜನರು ಆದರವಿಲ್ಲೈ ಶ್ರೀಧರ ತವ ಚರ- ಣಾಧಾರವೆ ಇನ್ನಾದರೂ ಕೃಪೆಯಿಡು 3 ಗೋಚರವಿಲ್ಲೆಲೊ ರಂಗ ಎನ್ನ ಪ್ರಾಚೀನದ ಪರಿಭಂಗ ನಾಚಿಕೆ ತೋರದ ಯಾಚಕತನವ- ನ್ನಾಚರಿಸುವ ಕಾಲೋಚಿತ ಬಂದುದು 4 ಸೇರಿದೆನೆಲೊ ರಂಗ ಕೃಪೆ ದೋರೆನ್ನೊಳ್ ನರಸಿಂಗ ಭಾರವೆ ನಿನ್ನ ಮೈದೋರಿ ರಕ್ಷಿಸುವುದು ನಾರದನುತ ಲಕ್ಷ್ಮೀನಾರಾಯಣ ಗುರು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಏನು ದುಷ್ಕøತ ಫಲವೋ ಸ್ವಾಮಿ ಶ್ರೀನಿವಾಸನೆ ಪೇಳೋ ಪ. ಏನು ಕಾರಣ ಭವಕಾನನದೊಳು ಬಲು ಹಾನಿಯಾಗಿ ಅವಮಾನ ತೋರುವದಿದು ಅ.ಪ. ಹಂಬಲವೂ ಹಿರಿದಾಯ್ತು ಎನ್ನ ನಂಬಿಕೆಯೂ ಕಿರಿದಾಯ್ತು ಸಂಭ್ರಮವಲ್ಲ ಕುಟುಂಬಿಗೆರೆನ್ನಯ ಹಂಬಲಿಸರು ನಾನೆಂಬುವದೇನಿದು 1 ಹಣವಿಲ್ಲಾ ಕೈಯೊಳಗೆ ಸ- ದ್ಗುಣವಿಲ್ಲಾ ಮನದೊಳಗೆ ಜನಿತಾರಭ್ಯದಿ ತನುಸುಖವಿಲ್ಲೈ ಘನದಾಯಾಸವ ಅನುಭವಿಸುವದಾಯ್ತು 2 ಪೋದರೆಲ್ಲ್ಯಾದರು ಅಪ- ವಾದವ ಪೇಳ್ವರು ಜನರು ಆದರವಿಲ್ಲೈ ಶ್ರೀಧರ ತವ ಚರ- ಣಾಧಾರವೆ ಇನ್ನಾದರೂ ಕೃಪೆಯಿಡು 3 ಗೋಚರವಿಲ್ಲೆಲೊ ರಂಗ ಎನ್ನ ಪ್ರಾಚೀನದ ಪರಿಭಂಗ ನಾಚಿಕೆ ತೋರದ ಯಾಚಕತನವ- ನ್ನಾಚರಿಸುವ ಕಾಲೋಚಿತ ಬಂದುದು4 ಸೇರಿದೆನೆಲೊ ರಂಗ ಕೃಪೆ ದೋರೆನ್ನೊಳ್ ನರಸಿಂಗ ಭಾರವೆ ನಿನ್ನ ಮೈದೋರಿ ರಕ್ಷಿಸುವುದು ನಾರದನುತ ಲಕ್ಷ್ಮೀನಾರಾಯಣ ಗುರು5
--------------
ತುಪಾಕಿ ವೆಂಕಟರಮಣಾಚಾರ್ಯ