ಒಟ್ಟು 619 ಕಡೆಗಳಲ್ಲಿ , 2 ದಾಸರು , 612 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮ-ಶಂಕರಾದಿವಂದ್ಯ ಎನಗೆ ಮುಕ್ತಿ ತೋರಿಸೋ ಪಹುಟ್ಟು ಮೊದಲಾದಂಢ ಕಷ್ಟ ಬಿಡಿಸೋ-ನಿನ್ನಪಟ್ಟದ ರಾಣಿಗೆ ಹೇಳಿಪದವಿಕೊಡಿಸೋ ||ಇಷ್ಟ ಭಕ್ತಜನರೊಳು ಎನ್ನ ಸೇರಿಸೋ-ಈಸೃಷ್ಟಿಯೊಳು ನಿನ್ನ ದಾಸ-ದಾಸನೆನಿಸೋ 1ಅಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂ-ಬಟ್ಟಲೊಳಗಿನ ಹಾಲು ಎನಗೆ ಹೊಯ್ಯಿಸೊ ||ಗಟ್ಟಿ ಸಕ್ಕರೆ ತುಪ್ಪ ರೊಟ್ಟಿಗಳನು ಉಣ್ಣಿಸೋ-ಮುಂದೆಹುಟ್ಟಿಬಾಹಜನ್ಮಂಗಳ ಎನಗೆ ಬಿಡಿಸೋ2ಕಿಟ್ಟಿಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೋ-ಉತ್ಕøಷ್ಟ ಬಂಗಾರದೊಳು ಎನ್ನ ಕೂಡಿಸೋ ||ಬೊಟ್ಟಿಗೆ ಉಂಗುರವ ಮಾಡಿ ಎನ್ನ ಸೇರಿಸೋ-ಎನಗೆದಿಟ್ಟ ಪುರಂದರವಿಠಲನೆಂಬುದನೆ ಪಾಲಿಸೋ 3
--------------
ಪುರಂದರದಾಸರು
ವೇಣುನಾದ ಬಾರೊ, ವೆಂಕಟರಮಣನೆ ಬಾರೊ |ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ಪಪೂತನಿಯ ಮೊಲೆಯುಂಡ ನವ-|ನೀತ ಚೋರನೆ ಬಾರೊ ||ದೈತ್ಯರಾವಣನ ಸಂಹರಿಸಿದ |ಸೀತಾನಾಯಕ ಬಾರೊ 1ಹಲ್ಲು ಮುರಿದು ಮಲ್ಲರ ಗೆದ್ದ |ಘುಲ್ಲನಾಭನೆ ಬಾರೊ ||ಗೊಲ್ಲತಿಯರೊಡನೆ ನಲಿವ |ಚೆಲ್ವ ಮೂರುತಿ ಬಾರೊ 2ಮಂದಾರವನೆತ್ತಿದಂಥ |ಇಂದಿರಾ ರಮಣನೆ ಬಾರೊ ||ಕುಂದದೆ ಗೋವುಗಳ ಕಾಯ್ದ |ನಂದನಂದನನೆ ಬಾರೋ 3ನಾರಿಯರ ಮನೆಗೆ ಪೋಪ |ವಾರಿಜಾಕ್ಷನೆ ಬಾರೋ ||ಈರೇಳು ಭುವನವ ಕಾಯ್ವ |ಮಾರನಯ್ಯನೆ ಬಾರೊ 4ಶೇಷಶಯನ ಮೂರುತಿಯಾದ |ವಾಸುದೇವನ ಬಾರೊ ||ದಾಸರೊಳು ವಾಸವಾದ |ಶ್ರೀಶಪುರಂದರವಿಠಲ ಬಾರೊ5
--------------
ಪುರಂದರದಾಸರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು
ವೈದ್ಯವ ನಾನರಿಯೆ - ಭವರೋಗದ-|ವೈದ್ಯ ನೀನೆ ಹರಿಯೆ ಪನೀ ದಯದಿಂದೆನ್ನ ರಕ್ಷಿಸು-ಆದಿವೈದ್ಯ ಮುನ್ನ |ಪಾದೋದಕವನು ಎನಗೆ ಕೊಡಿಸು ಸರ್ವ-||ವ್ಯಾಧಿನಿವಾರಣ ಕಷಾಯ ನೀ ಕೊಡು 1ಹರಿನಿನ್ನ ಕರುಣವೆಂಬ-ಸ್ಮರಣೆಯ |ತ್ವರಿತ ಙ್ಞÕನದಿಂದ ||ಉರುತರ ಮಹಾತ್ಮೆಯ ಎನಗೆ ಕೊಡಿಸು ಸರ್ವ ||ದುರಿತನಿವಾರಣ ಕಷಾಯ ನೀ ಕೊಡು 2ಕೃಷ್ಣ ನೀ ಕೃಪೆವಿಡಿದು-ಕಪಟದ-|ಉಷ್ಣವಾಯುವಳಿದು ||ವಿಷ್ಣುಶಕ್ತಿಯೆಂದ ಅಭಯವ ಎನಗಿತ್ತು |ಇಷ್ಟವ ಸಲಿಸುವ ತೃಪ್ತಿಪಡಿಸುವಂಥ 3ನಿನ್ನ ದಾಸ ನಾನು-ದುರಿತಗ-|ಸಳೆನ್ನ ಕಾಡುವುವೇನು ||ಚೆನ್ನಾಗಿ ಕಾಯಕೆ ಶಕ್ತಿಯನಿತ್ತು ದೃಢ-|ವನ್ನು ಮಾಡಿ ಶ್ರೀಹರಿ ಸಲಹೆನ್ನನು 4ಪಂಡಿತದಯಾಸಿಂಧು-ಕಾಡುವ-|ಪಾಂಡುರೋಗ ಕೊಂದು ||ಪುಂಡರೀಕಾಕ್ಷಶ್ರೀಪುರಂದರವಿಠಲ ಅ-|ಖಂಡಮೂರುತಿ ಶ್ರೀಹರಿ ಸಲಹೆನ್ನನು 5
--------------
ಪುರಂದರದಾಸರು
ವ್ಯಾಪಾರವೆನಗಾಯಿತುಶ್ರೀಪತಿಯ ಪಾದಾರವಿಂದ ಸೇವೆಯೆಂಬ ಪಹರಿಕರುಣವೆಂಬಂಗಿಗುರುಕರುಣಮುಂಡಾಸುಹರಿದಾಸರ ದಯವೆಂಬ ಒಲ್ಲಿ ||ಪರಮಪಾಪಗಳೆಂಬ ಪಾಪೋಸವನೆ ಮೆಟ್ಟಿದುರುಳಾತ್ಮರಾದವರ ಎದೆ ಮೇಲೆ ನಡೆವಂಥ 1ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿನಾಲಗೆಯೆಂಬ ಲೆಕ್ಕಣಿಕೆ ||ಶ್ರೀಲೋಲನ ದಿವ್ಯನಾಮವೆಂಬುವ ಲೆಕ್ಕಶೀಲದಿ ಬರೆದು ಶ್ರೀಹರಿಗೆ ಒಪ್ಪಿಸುವಂಥ 2ನುಡಿನುಡಿಗಾನಂದ ಬಾಷ್ಪ ರೋಮಾಂಚನಮುಡುಪಿನೊಳಗೆ ಇಟ್ಟ ಕೈಜೀತವು ||ಕಡಿಮೆ ಸಂಬಳಕೆಲ್ಲ ಮುಕ್ತಿಸಾಧನವನ್ನುಕೊಡುವ ತೆರನಂತೆ ಚೀಟಿ ಬರೆಸಿಕೊಟ್ಟ 3ಹಿಂದಿನ ಸಂಸಾರ ಆಗಮನದ ಭಯಎಂದೆಂದಿಗದರ ಚಿಂತೆಯು ಬಿಟ್ಟಿತು ||ಮುಂದಿನ ಸಂಸಾರ ಸ್ಥಾನ ಭಾರಕೆಲ್ಲಸಂದಾಯವನು ಮಾಡಿ ಕತಬಿ ಹರಿಸಿಕೊಟ್ಟ 4ಕಂಡಕಂಡವರ ಕಾಲುಗಳಿಗೆರಗಿ ನನ್ನಮಂಡೆದಡ್ಡುಗಟ್ಟಿ ಬಳಲಿದೆನೊ ||ಪುಂಡರೀಕಾಕ್ಷಶ್ರೀಪುರಂದರವಿಠಲನುಕಂಡು ವೀಳೆಯ ಕೊಟ್ಟು ತನ್ನ ಸೇವೆಗೆ ಇಟ್ಟ 5
--------------
ಪುರಂದರದಾಸರು
ಶಕ್ತನಾದರೆ ನಂಟರೆಲ್ಲ ಹಿತರು - ಅಶಕ್ತನಾದರೆ ಆಪ್ತರವರೆ ವೈರಿಗಳು ಪ.ಕಮಲಾರ್ಕರಿಗೆ ನಿರುತ ಕಡುನಂಟುತನವಿರಲುಕಮಲ ತಾ ಜಲದೊಳಗೆ ಆಡುತಿಹುದುಕ್ರಮತಪ್ಪಿ ನೀರಿನಿಂದ ತಡಿಗೆ ಬೀಳಲು ರವಿಯಅಮಿತ ಕಿರಣಗಳಿಂದ ಕಂದಿ ಪೋಗುವುದು 1ವನದೊಳುರಿ ಸುಡುತಿರಲು ವಾಯು ತಾ ಸೋಂಕಲ್ಕೆಘನ ಪ್ರಜ್ವಲಸುತಿಹುದು ಗಗನಕಡರಿಮನೆಯೊಳಿರ್ದಾ ದೀಪ ಮಾರುತನು ಸೋಂಕಿದರೆಘನಶಕ್ತಿ ತಪ್ಪಿ ತಾ ನಂದಿ ಹೋಗುವುದು 2ವರದ ಶ್ರೀ ಪುರಂದರವಿಠಲನ ದಯವಿರಲುಸರುವ ಜನರೆಲ್ಲ ಮೂಜಗದಿ ಹಿತರುಕರಿಯ ಸಲುಹಿದ ಹರಿಯ ಕರುಣ ತಪ್ಪಿದ ಮೇಲೆಮೊರೆಹೊಕ್ಕರೂ ಕಾಯ್ವ ಮಹಿಮರುಂಟೇ ದೇವ 3
--------------
ಪುರಂದರದಾಸರು
ಶರಣು ಶರಣು ನಿನಗೆಂಬೆನೊ ವಿಠಲಎರವುಮಾಡದೆಯೆನ್ನ ಕಾಯೊ ವಿಠಲಪಅರಸಿ ರುಕ್ಮಿಣಿಗೆ ನೀನೇನೆಂದೆಯೊ ವಿಠಲಸರಸಿಜಸಂಭವಸನ್ನುತವಿಠಲ ||ಬಿರುದಿನ ಶಂಖವ ಪಿಡಿದೆಯೊ ವಿಠಲಅರಿತು ಇಟ್ಟಿಗೆಯ ಮೇಲೆ ನಿಂತೆಯೊ ವಿಠಲ 1ಶಶಿಮುಖಿಗೋಪಿಯರ ರಾಜನೆ ವಿಠಲಕುಶಲದಿ ಗಜುಗವನಾಡಿದೆ ವಿಠಲ ||ದಶರಥನಂದನ ರಾಮನೆ ವಿಠಲಕುಸುಮಬಾಣನಯ್ಯ ಕಾಯೊ ನೀ ವಿಠಲ2ಕಂಡೆ ಗೋಪುರದ ವೆಂಕಟನೆ ವಿಠಲಅಂಡಜಾಧಿಪ ವಾಹನನೆ ವಿಠಲ ||ಪಂಡರಿಕ್ಷೇತ್ರದ ಪಾಲನೆ ವಿಠಲಪುಂಡರೀಕವರದಪುರಂದರವಿಠಲ3
--------------
ಪುರಂದರದಾಸರು
ಶರಣು ಶರಣು ವಿನಾಯಕಬಟ್ಟ ಮುತ್ತಿನ ಪದಕ ಹಾರನೆ ದಿವ್ಯಬಾಹು ಚತುಷ್ಕನೆಪಕ್ಷಿ ವಾಹನನಾದಪುರಂದರವಿಠಲನ ನಿಜದಾಸನೆ3
--------------
ಪುರಂದರದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಪವಾಗಭಿಮಾನಿ ವರಬ್ರಹ್ಮಾಣಿಸುಂದರವೇಣಿ ಸುಚರಿತಾಣಿ ಅ.ಪಜಗದೊಳು ನಿಮ್ಮ ಪೊಗಳುವೆನಮ್ಮಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ 1ಪಾಡುವೆ ಶ್ರುತಿಯ ಬೇಡುವೆ ಮತಿಯಪುರಂದರವಿಠಲನ ಸೋದರ ಸೊಸೆಯೆ2
--------------
ಪುರಂದರದಾಸರು
ಶೋಭನ ಶೋಭನವೆ ನಮ್ಮಶ್ರೀ ಭೂದೇವಿಯರ ಅರಸು ವೆಂಕಟಗೆ ಪ.ಅಂದು ಕ್ಷೀರಾಂಬುಧಿಯನ್ನು ಮಥಿಸಲಾಗಇಂದಿರೆ ಹರುಷದಿಂದುದಿಸಿ ಬಂದು ||ಮಂದಾರ ಮಾಲೆಯ ಹಾಕಿದ ದೇವಗೆಕಂದರ್ಪಕೋಟಿ ಲಾವಣ್ಯ ಮೂರುತಿಗೆ 1ಜನಕನ ಮನೆಯಲ್ಲಿ ರಾಜಾಧಿರಾಜರುಎಣಿಕೆಯಿಲ್ಲದೆ ಬಂದಿರಲಾಗಿ ||ಸನಕಾದಿವಂದ್ಯನ ಕಂಡು ಸಂತೋಷದಿಜನಕಜೆ ಮಾಲೆಯ ಹಾಕಿದ ರಾಮಗೆ 2ರುಕುಮನು ಶಿಶುಪಾಲಗೀವೆನೆಂಬ ಮಾತಿಗೆಸಕಲ ರಾಯರು ಬಂದಿರಲಾಗಿ ||ಭಕುತಿ ವತ್ಸಲನ ಕಂಡು ಸಂತೋಷದಿರುಕುಮಿಣಿ ಮಾಲೆಯ ಹಾಕಿದ ಕೃಷ್ಣೆಗೆ 3ಸತ್ಯಭಾಮೆ ನೀಳಾ ಭದ್ರಾ ಕಾಳಿಂದಿಯುಮಿತ್ರವಿಂದಾ ಲಕ್ಷಣಾ ಜಾಂಬವತಿ ||ಮತ್ತೆ ಸೋಳಾಸಾಸಿರ ಗೋಪಿಕೆಯರಪ್ರತ್ಯಕ್ಷವಾಳಿದ ಕಲ್ಯಾಣಗೆ 4ಪದ್ಮದೇಶದಲೊಬ್ಬ ದೇವಾಂಗನೆಯುಪದ್ಮಮುಖಿಯು ಶ್ರುತಕೀರ್ತಿಯಾಗಿ ||ಪದ್ಮನಾಭ ಶ್ರೀ ಪುರಂದರವಿಠಲಗೆಪದ್ಮಾವತೀ ಪ್ರಿಯ ಶ್ರೀನಿವಾಸಗೆ 5
--------------
ಪುರಂದರದಾಸರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು
ಶ್ರೀ ಮಧ್ವರಾಯರ ಸೇವೆ ದೊರಕುವುದುಜನುಮ ಸಫಲ ಕಾಣಿರೋ ಪಶ್ರೀಮದಾನಂದ ತೀರ್ಥರ ಪಾದವ ನೆನೆವರುಸಾಮಾನ್ಯಸುರರುಕಾಣಿ-ಬೊಮ್ಮನಆಣಿಅ.ಪಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲಅಗುಣನು ಪರಬೊಮ್ಮನು-||ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದುಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ 1ಹರಿಸರ್ವೋತ್ತಮನಿತ್ಯತರುವಾಯ ರಮಾದೇವಿತರುವಾಯ ವಿಧಿಪ್ರಾಣರುಸರಸ್ವತಿಭಾರತಿಗರುಡ ಅನಂತ ರುದ್ರತರುವಾಯ ಆರು ದೇವಿಗಳು 2ಸೌಪರ್ಣಿವಾರುಣಿದೇವಿ ಅಪರ್ಣಾದೇವಿಯರು ಸಮರುದ್ವಿಪದಿ ಮನ್ವಾದಿಗಳು ||ಈಪರಿತಾರತಮ್ಯ ಜಪ-ಧ್ಯಾನಾರ್ಚನೆಯಿಂದಅಪವರ್ಗದನ ಸೇವೆಯ ಮಾಡಿರೊ ಎಂಬ 3ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿಚೆಂದದಿಂದಲಿ ಲಾಲಿಸಿ ||ಇಂದಿರಾರಮಣ ಗೋವಿಂದನೇ ದೈವವೆಂದು |ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ 4ಹಿಮಗಿರಿಯಿಂದ ಸೇತುವೆಯ ಪರ್ಯಂತರಭ್ರಮಿಸುತ ಸುಜನರಿಗೆ ||ಕ್ರಮತತ್ತ್ವ ಬೋಧಿಸಿ ಕಮಲನಾಭನಮೂರ್ತಿಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ 5ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದುಧಾತ್ರೀ ಮುದ್ರೆಯ ತೋರಿಸಿ ||ಈತನೇ ಹನುಮಂತ ಈತನೇ ಭೀಮಸೇನಈತನೇ ಭವಿಷ್ಯದ ಬ್ರಹ್ಮಜೀವೋತ್ತಮ6ಶ್ರೀಮದನಂತನೆ ಅನಂತಕಾಲಕೆಯೆಂದುಯಮಕ ಭಾರತ ತೋರಿಸಿಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದುಪ್ರೇಮಿಪುರಂದರವಿಠಲನ ದಾಸನಾದ7
--------------
ಪುರಂದರದಾಸರು
ಶ್ರೀನಿವಾಸಾ ನೀನೇ ಪಾಲಿಸೋ ಶ್ರೀಯುತಜನಪಾಲಗಾನಲೋಲ ಶ್ರೀ ಮುಕುಂದನೇ ಪಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವವೇಣುಗೋಪಾಲಾ ಗೋವಿಂದಾ ವೇದವೇದ್ಯ ನಿತ್ಯಾನಂದಾಅ.ಪಎಂದಿಗೆ ನಿನ್ನ ಪದಾಬ್ಜವ-ಪೊಂದುವ ಸುಖಎಂದಿಗೆ ಲಭ್ಯವೋ ಮಾಧವಾ ||ಅಂಧಕಾರಣ್ಯದಲ್ಲಿ ನೊಂದು ತತ್ತಳಿಸುತಿಹಅಂದದಿಂದ ಈ ಭವದಿನಿಂದುನೊಂದೆನೋ ಮುಕುಂದ1ಎಷ್ಟುದಿನ ಕಷ್ಟಪಡುವುದೋ-ಯಶೋದೆಯ ಕಂದದೃಷ್ಟಿಯಿಂದ ನೋಡಲಾಗದೆ ||ಮುಟ್ಟಿ ಭಜಿಸುವನಲ್ಲ ಕೆಟ್ಟ ನರಜನ್ಮದವನುದುಷ್ಟಕಾರ್ಯ ಮಾಡಿದರು ಇಷ್ಟನಾಗಿ ಕೈಯ ಹಿಡಿದು 2ಅನುದಿನಅನೇಕ ರೋಗಗಳ-ಅನುಭವಿಸಿದೆನೊಘನಮಹಿಮ ನೀನೆ ಬಲ್ಲೆಯಾ ||ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವಹನುಮದೀಶಪುರಂದರವಿಠಲ ನೀ ಎನಗೆ ಒಲಿದು3
--------------
ಪುರಂದರದಾಸರು
ಶ್ರೀಪತಿಯು ನಮಗೆ ಸಂಪದವೀಯಲಿ - ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ ಪ.ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟಹರನಿತ್ಯ ನಮಗೆ ಸಹಾಯಕನಾಗಲಿಸರರೊಳುನ್ನತವಾದನಿತ್ಯ ಭೋಗಂಗಳನುಪುರುಹೂತಪೂರ್ಣ ಮಾಡಿಸಲಿ ನಮಗೆ1ವಿನುತ ಸಿದ್ಧಿಪ್ರದನು ವಿಘ್ನೇಶ ದಯದಿಂದನೆನೆದ ಕಾರ್ಯಗಳೆಲ್ಲ ನೆರವೇರಿಸಲಿದಿನದಿನದಿ ಅಶ್ವಿನಿಗಳಾ¥ತ್ತುಗಳ ಕಳೆದುಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ 2ನಿರುತ ಸುಜ್ಞಾನವನುಈವ ಮಧ್ವರಾಯ |ಗುರುಗಳಾಶೀರ್ವಾದ ನಮಗಾಗಲಿಪುರಂದರವಿಠಲನ ಕರುಣದಿಂದಲಿ ಸಕಲಸುರರೊಲುಮೆ ನಮಗೆ ಸುಸ್ಥಿರವಾಗಲಿ 3
--------------
ಪುರಂದರದಾಸರು