ಒಟ್ಟು 1457 ಕಡೆಗಳಲ್ಲಿ , 99 ದಾಸರು , 1157 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಪಾವನಕಾಯ ಗುರುರಾಯ ಜೀಯ ವರ ಭಾಗವತರ ಪ್ರಿಯ ಸುರರ ಸಹಾಯ ಪ. ಶ್ರೀ ತಂದೆ ಮುದ್ದುಮೋಹನ ದಾಸರೆಂದೆನಿಸಿ ವಾತ ಜನಕನ ಒಲಿಸಿ ವೈರಾಗ್ಯ ಧರಿಸಿ ಖ್ಯಾತಿಯನು ಪಡೆದ ಅನಾಥ ರಕ್ಷಕ ಸ್ವಾಮಿ ನೀತ ಗುರು ನಿಮ್ಮ ಪದಕೆ ನಾ ತುತಿಸಿ ನಮಿಪೆ 1 ಘನ ಅಂಶದಲಿ ನೆಲಸಿ ಅನವರತ ಸಲಹುವೊ ಮನವ ಮಾಡಿರಬಲೆ ಅಂಜಿ ಬೆದರೆ ಘನ ಜ್ಯೋತಿ ಸ್ವೀಕರಿಸಿ ತನುವಿಗಭಯ ತೋರಿ ಮನದಿ ಪದವನೆ ನಂಬೆ ರಕ್ಷಿಸಿದ ಗುರುವೆ 2 ಅಪಮೃತ್ಯು ಬಂದು ಬಹು ಅಪರಿಮಿತ ಭಯಪಡಿಸಿ ಸುಪಥ ಕಾಣದೆ ನಿಮ್ಮ ಪದವ ನಂಬಿರಲು ಸ್ವಪ್ನದಲಿ ನಿಜರೂಪ ಗುಪ್ತದಿಂದಲಿ ತೋರಿ ಆಪತ್ತು ಪರಿಹರಿಪೆನೆಂದಭಯವಿತ್ತ 3 ಪರಿಪರಿ ಅಪಮೃತ್ಯು ಪರಿಹಾರವನೆಗೈದು ಪರಮ ಹರುಷದಿ ಕಾಯ್ದು ಆಯುವನೆ ಇತ್ತು ಕರಕರೆಯ ಬಿಡಿಸಿ ಕಾಯ್ದಂಥ ಘನ ಚರಿತೆಯನು ಅರಿತು ವರ್ಣಿಸಲರಿಯೆ ಪರಮ ಪ್ರಿಯ ದೊರೆಯೆ 4 ಆಪನ್ನ ರಕ್ಷಕರೆ ಶ್ರೀ ಪತಿಯ ತೋರುವ ಘನಶಕ್ತರೆ ಕಾಪಾಡುವೋ ಕರ್ತರೆಂದು ನಾ ನಂಬಿರುವೆ ಗೋಪಾಲಕೃಷ್ಣವಿಠ್ಠಲನ ನಿಜ ಪ್ರಿಯರೆ 5
--------------
ಅಂಬಾಬಾಯಿ
ಪರಮಾನಂದದಿ ಸರಸಿಜಾಕ್ಷಿಯರೆಲ್ಲ ಪರಮ ಪುರುಷನಿಗಾರತಿ ಎತ್ತುತ ಪ ಕರಿವರ ವರದನ ಸ್ಮರಿಸುತ ಸಂತತ ನವರತ್ನದಾರತಿ ಬೆಳಗಿದರುಅ.ಪ ಗೋಪಿಕಾಲೋಲನಿಗೆ ಗೋಪಾಲಕೃಷ್ಣಗೆ ಗೋವರ್ಧನೋದ್ಧಾರ ಗೋವಿಂದಗೆ ಗೋಪಸ್ತ್ರೀಯರ ಕೂಡ್ಯಾಡಿದ ಹರಿಗೆ ಗೋಪಿಬಾಲನಿಗೆ ಎತ್ತಿದರಾರತಿ1 ನವನೀತ ಚೋರಗೆ ಬೃಂದಾವನÀದಿ ವಿರಾಜಿಪಗೆ ಇಂದಿರೆ ಸಹಿತಗೆ ಕುಂದಣದಾರತಿ ಬೆಳಗಿದರು2 ಕಮಲದಳಾಕ್ಷಗೆ ಕಮಲಮುಖಿಯರೆಲ್ಲ ಕಮಲ ಮುತ್ತಿನ ಆರತಿ ಪಿಡಿದು ಕಮಲನಾಭ ವಿಠ್ಠಲನ ಪಾಡಿ ಹರುಷದಿ ಕಮಲಾಕ್ಷಿಯರು ಶೋಭನ ಪಾಡುತ್ತ 3
--------------
ನಿಡಗುರುಕಿ ಜೀವೂಬಾಯಿ
ಪರಸೌಖ್ಯ ಪ್ರದ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತವೆಲ್ಲ | ದೂರ ಓಡಿಸುತಾ ಅ.ಪ. ಅಚ್ಯುತ ಕ್ಷಿತಿ ರಮಣ ಸೇವಾ 1 ಸಾಧನಕೆ ಸಹಕಾರಿ | ಸಾಧು ಜನ ಸತ್ಸಂಗನೀ ದಯದಿ ಒದಗಿಸುತ | ಕಾಪಾಡೊ ಹರಿಯೇ |ಮೋದ ತೀರ್ಥರ ಮತವ | ಭೋಧಿಸುತ ಇವಳೀಗೆಮೋದ ಪಾಲಿಸಿ ಹರಿಯೆ ಉದ್ಧಾರ ಮಾಡೋ2 ಮಾತೃದತ್ತವು ಎನ್ನೆ | ವೆಂಕಟೇಶನ ಪೂಜೆಸಾರ್ಥಕೆನಿಪುದು ಹರಿಯೆ | ಪಾರ್ಥ ಸಾರಥಿಯೇಕಾರ್ತಸ್ವರ ಮೊದಲಾದ | ಅರ್ಥಗಳ ಯೋಚಿಸಳುವಾರ್ತೆ ಎನ್ನನು ಭವವು ಆರ್ತರುದ್ಧರಣಾ 3 ತಂದೆ ಮುದ್ದು ಮೋಹನ್ನ | ಗುರುವನುಗ್ರಹವಿಹುದುಇಂದು ನಿಮ್ಮದಿ ನಮಿಸಿ | ಅಂಕಿತದ ಪದವಾಛಂದದಲ್ಯುದ್ಧರಿಸಿ | ಉಪದೇಶಿಸುತ್ತಿಹೆನುಮಂದನುದ್ಧಟ ತನವ | ತಂದೆ ಮನ್ನಿಪುದೋ 4 ಇಂದು ಮುಖಿ ಹೃದಯದಾ | ಅಂಬರದಿ ಪ್ರಕಾಶಿಸೆನೆನಂದ ತೀರ್ಥಸುವಂದ್ಯ | ಪ್ರಾರ್ಥಿಸುವೆ ನಿನಗೇತಂದೆ ಮುದ್ದು ಮೋಹನ್ನ | ವಿಠ್ಠಲನೆ ಗುರು ಗೋ-ವಿಂದ ವಿಠ್ಠಲ ಎನ್ನ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಪರಿಪರಿ ಕೊಂಡಾಡೋ ಹರಿಯನ್ನು ಮರೆದು ನೀ ಕೆಡಬೇಡೋ ಮನವೆ ಪ ಮರವೆ ಮಾಯ ನೀಗಿ ಧರೆಭೋಗ ಮೆಚ್ಚದೆ ನಿರುತ ಭಜಿಪರ ಬಿಟ್ಟು ಅರಲವಗಲ ಹರಿ ಅ.ಪ ಕರುಣಸಾಗರನು ನರಹರಿ ಚರಣದಾಸರನ್ನು ತನ್ನಯ ಹರಣಸಮಾನ ಮಾಡಿ ಕರುಣದಿಂದವರ ಇರವ ಪೂರೈಸುತ ಪೊರೆವ ಪ್ರೇಮದಿಂದ 1 ಚಿಂತೆ ಭ್ರಾಂತಿಗಳನು ಬಿಡಿಸಿ ಸಂತಸ ಕರುಣಿಸಿ ಅವರ ಅಂತರಂಗದಿರ್ದು ಅಂತರ ತಿಳಿಯಿತು ಚಿಂತಿಸಿದ್ದನ್ನಿತ್ತು ಸಂತಸದಿಂ ಕಾಯ್ವ 2 ಸಾರಿಸಾರಿಗೆ ತನ್ನ ಚರಣಸೇರಿ ಭಜಿಪರನ್ನು ಬಿಡದೆ ಆರಭಾರ ಪೊತ್ತು ಸೇರಿ ಅವರ ಬಳಿಯ ಪಾರಸಂಭ್ರಮದಿಂ ಧೀರ ನಲೀತಿಹ್ಯ 3 ಅಮಲರೂಪ ತನ್ನ ನಿರುತ ವಿಮಲಚರಣವನ್ನು ನಂಬಿದ ಸುಮನಸರಹೃದಯಕಮಲದಿ ವಾಸಿಸಿ ನಿಮಿಷಬಿಟ್ಟಗಲದೆ ಕ್ರಮದಿ ಪಾಲಿಸುವ4 ಗೂಢದಿಂದ ಸ್ಮರಿಪ ಭಕುತರ ಗಾಢಮಹಿಮೆ ಕೃಪಾದೃಷ್ಟಿಯಿಂ ಬೇಡಿದ ವರಗಳ ಕಾಡದೆ ನೀಡುತ ರೂಢಿಯೋಳ್ ಬಿಡದೆ ಕಾಪಾಡುವ ಶ್ರೀರಾಮ 5
--------------
ರಾಮದಾಸರು
ಪಲ್ಲಕ್ಕಿ ಸೇವೆಯವಧಾನ ಆಳಪಲ್ಲಕ್ಕಿಯಲಿ ಮಂಡಿಪುದು ಶಿವ ನಿಧಾನ ಪ ಮದನ ಕೈಗಳ ಸುಭುಜ-ವಲಯದೊಳ್ತಳದ ಪೂರುಷರ ಸರಪಂಸೆಗಳತೊಳಪಗಜಪಕ್ಷಿಯಗ್ರಗಳಾ ದೇವಲಲನೆಯರ ಚಾಮರದ ಕರದ ಚಲನೆಗಳಾ 1 ವಂದಿಮಾಗಧರೆಲ್ಲ ಕರವೆತ್ತಿ ಪೊಗಳುತಿರೆದಾಂಧಣಧಣಾ ಎಂದು ಮೊಳಗೆ ಮಂಗಳವಾದ್ಯಚಂದ್ರಸೂರ್ಯರು ಜಗಜ್ಯೋತಿಯನುಪಿಡಿದಿರಲು ಗಂಧರ್ವತತಿ ಪಾಡುತಿರಲುಮುಂದೆ ರಂಭಾದಿ ಗಣಿಕೆಯರು ನರ್ತಿಸಲು ದೇವೇಂದ್ರ ಮುಕ್ತಾಛತ್ರಮಂ ಪಿಡಿದಿರಲು ಧನದಕುಂದಣದ ಪಾದುಕೆಯ ಪಿಡಿದಿರಲುವಾಯು ನಲವಿಂದ ಸೀಗುರಿಯ ವೀಜಿಸಲುಸುರರು ಮುಂದೆ ಜಯಜಯವೆಂದು ಓಲೈಸುತಿರಲು 2 ಸುರರು ಹೂಮಳೆಗರೆಯೆ ಸುರದುಂದುಭಿಯು ಮೊಳಗೆಪರಮಋಷಿವರರು ವೇದಂಗಳನು ಪಠಿಸೆ ತುಂ-ಬುರನಾರದರು ವೀಣೆಯನು ಬಾಜಿಸಲು ಗಣನಿ-ಕರ ಖಡ್ಗಶರವ ಪಿಡಿದಿರಲುಸರಸಿಜೋದ್ಭವನು ನಿಮ್ಮುನ್ನತಿಯನರುಹುತಿರೆಸುರರಾಜಮಂತ್ರಿ ಸಮಯವ ಸೂಚಿಸುತಿರಲುವರಕೆಳದಿಪುರವಾಸ ರಾಮೇಶ ಜಯವೆಂದುಹರಿ ಹಸ್ತಲಾಘವನು ಕೊಡಲು ಗೌರಿಹರುಷದಿಂ ಮುಂಬಿನೊಳು ರಂಜಿಸುತ್ತಿರಲು 3
--------------
ಕೆಳದಿ ವೆಂಕಣ್ಣ ಕವಿ
ಪವಮಾನ ಸುತರ ಪದಕಮಲಗಳ ಸ್ತವನವು ಸಾಧನವು ಜವದಲಿ ಶ್ರೀ ಹರಿದಯ ಪಡೆವುದಕೆ ಪ ನವ ನವ ರೂಪದಿ ಅವನಿತಲದೊಳಗೆ ಭುವನಜನಾಭನ ವಿವರವನರುಹಿದ ಅ.ಪ ಶ್ರೀ ರಾಘವನಾಜ್ಞೆಯ ಶಿರದಲಿ ವಹಿಸಿ ವಾರಿಧಿಯನೆ ಲಂಘಿಸಿ ವಾರಿಜಲೋಚನೆ ಸೀತೆಯ ಕಂಡು ತೋರುವ ಭಕುತಿಯನು ಶೂರ ದಾಶರಥಿಯಂಗುಳಿಯವ ಕೊಟ್ಟು ಧೀರತನದಿ ಲಂಕೆಯ ಸೂರೆಯ ಮಾಡಿದ 1 ಪಾಂಡುಸತಿ ಮನುವನು ಜಪಿಸಲು ಜನಿಸಿ ಭೂ ಪಾಂಡು ತನುಜರೊಳು ಮಂಡನರೆನಿಸಿ ಪ್ರಚಂಡ ವಿಕ್ರಮರಾದ 2 ಬಾದರಾಯಣರೊಳು ಶ್ರವಣವ ಮಾಡಿ ಮೋದವ ಪೊಂದುತಲಿ ಸಾಧಿಸಿ ದ್ವೈತವ ಮೇದಿನಿಯಲಿ ಸಾಧುಗಳಿಗೆ ಶ್ರೀಹರಿ ಪಾದಕಮಲದಲಿ ಆದರ ನೀಡಿ ಸದಾ ಪ್ರಸನ್ನ ಪೂರ್ಣಬೋಧರೆಂದೆನಿಸಿದ 3
--------------
ವಿದ್ಯಾಪ್ರಸನ್ನತೀರ್ಥರು
ಪವಮಾನವಿಠಲ | ಕಾಪಾಡೊ ಇವನಾ ಪ ಭುವಿ ಭವ್ಯ ಮರುತಮತ | ದೀಕ್ಷೆಯುಳ್ಳವನಾ ಅ.ಪ. ಭಾವಿಮಾರುತರ ದಿವ್ಯ | ಪಾದಗಳನಾಶ್ರಯಿಸಿದೇವ ಗುಹ್ಯವು ಎಂಬ | ಆಖ್ಯಾನ ಪಠಿಸೀಭಾವಭಕ್ತಿಯಲಿಂದ | ಪೂರಿತನು ತಾನಾಗಿಧಾವಿಸಿ ಬಂದಿಹನೊ | ಎನ್ನ ಬಳಿಗಾಗಿ1 ಗುರುವನುಗ್ರಹ ಪಡೆದು | ಗುರುದತ್ತ ಅಂಕಿತವನೆರವಿನಾ ಸಾಧನವ | ವಿರಚಿಸಲು ಮಾರ್ಗಅರಿಯದಲೆ ಪ್ರಾರ್ಥಿಸುವ | ಕರುಣಪಯೋನಿಧಿಯೇಪೊರೆಯ ಬೇಕಿವನ ಪರಿಯ | ಮರುತಾಂತರಾತ್ಮ 2 ತರತಮಜ್ಞಾನವನು | ಹರಿಗುರು ಸದ್ಭಕ್ತಿಪರಿಪರಿಯಲಿಂ ವೃದ್ಧಿ | ಗೈಸಿವಗೆ ಹರಿಯೇಗುರು ಕರುಣ ಕವಚದಿಂ | ಹರಿಯ ಸರ್ವೊತ್ತಮತೆಅರಿವಾಗಲಿವಗೆಂದು | ಪ್ರಾರ್ಥಿಸುವೆ ಹರಿಯೆ 3 ಮೂರ್ತಿ | ಕೃತಿರಮಣ ದೇವ 4 ಮಧ್ವ ರಮಣನೆ ದೇವ | ಹೃದ್ಯ ಹರಿ ನಿನಕಾಂಬಹೃದ್ಯ ಸಾಧನ ಗೈಸಿ | ಉದ್ದರಿಸೊ ಇದನಾಶುದ್ಧ ಮೂರುತಿ ಗುರು | ಗೋವಿಂದ ವಿಠಲನೆಬುದ್ಧಿಯಲಿ ನೀನಿಂತು | ಶುದ್ಧ ಮತಿ ಈಯೋ 5
--------------
ಗುರುಗೋವಿಂದವಿಠಲರು
ಪಾಂಡು ರಂಗ ವಿಠಲ | ಪೊರೆಯ ಬೇಕಿವಳ ಪ ಕುಂಡಲಿಯ ಶಯ್ಯ ಬ್ರ | ಹ್ಮಾಂಡದೊಡಿಯಾ ಅ.ಪ. ಹಸುಳೆ ತನ ಸ್ವಾಪದಲಿ | ಎಸೆವ ನಂಜುಡೇಶದರ್ಶನಾಕಾಂಕ್ಷಿಸುತ | ನುಸುಳಿ ಗುಡಿ ಪೊಗಲೂಅಸಮ ಗುರು ಸುಧೀಂದ್ರ | ಶಿಷ್ಯರನು ತಾ ತೋರಿಎಸೆವ ಸದ್ಗತಿಗೆ ಗುರು | ದರ್ಶನವೆ ಪಥವೆಂದೇ 1 ಲೀಲೆಯೊಳ್ ತೈಜಸನು | ಮಾಲೆಧರ ದಂಪತಿಯಶೀಲ ರೂಪವ ತಾಳಿ | ಬಾಲಕಿಯ ಬಯ್ದೂ |ಏಳಲನ ಮಾಡದಲೆ | ಶೀಲ ಗುರು ಬಳಿ ಪೋಗಿಬಾಲಕಿಯು ಪರಮಾನ್ನ | ಮೆಲುವಂತೆ ಮಾಡ್ಡಾ 2 ಗುರು ಹಿರಿಯರಾ ಸೇವೆ | ಹರಿಯಲ್ಲಿ ಸದ್ಭಕುತಿವರಜ್ಞಾನ ಪಾಲಿಸುತ | ಮೆರೆಸೊ ಈ ಶಿಶುವವರ ಪ್ರದಯಕನಾಗಿ | ಸರುವ ಸದ್ಧಭಿಲಾಷೆಗರೆನು ಹರ್ಷವನೀಯೋ | ಮರುತಾಂತರಾತ್ಮಾ 3 ಕಲಿಹೆಚ್ಚದಾ ಯುಗವು | ಸತಿಮಂತ್ರ ತಂತ್ರಗಳುಫಲಿಸಲಾರವು ಹರಿಯೆ | ಜಲಜನಾಭಾಚೆಲುವ ತವನಾಮ ಸ್ಮøತಿ | ಘಳಿಗೆ ಬಿಡದಲೆ ಕೊಟ್ಟುಒಲಿಯೊ ಕಾರುಣ್ಯನಿಧಿ | ಬಾಲ ಗೋಪಾಲ4 ಪಾವನದ ಅಂಕಿತವ | ಓದಿ ಸೂಚಿಸಿದಂತೆತಾವಕಳಿಗಿತ್ತಿಹೆನು | ಶ್ರೀ ವರನೆ ಹರಿಯೇ |ದೇವ ದೇವೇಶಗುರು | ಗೋವಿಂದ ವಿಠ್ಠಲನೆನೀ ವೊಲಿದು ದಾಸತ್ವ | ಭಾವ ಸಿದ್ಧಿಪುದೋ 5
--------------
ಗುರುಗೋವಿಂದವಿಠಲರು
ಪಾಂಡುರಂಗ ಹರಿ ವಿಠಲ | ಕಾಪಾಡೊ ಇವನಾ ಪ ತೊಂಡ ವತ್ಸಲ ನೆಂಬ | ಬಿರಿದುಳ್ಳೊ ದೇವಾ ಅ.ಪ. ದಾಸವತ್ಯರ ಕರುಣ | ಲೇಸಾಗಿ ಪಡೆದಿಹಗೆಆಸುಪ್ತಿಪತಿ ಸೂಚ್ಯ | ಮೀಸಲುಪದೇಶದಾಸದೀಕ್ಷಾರೂಪ | ಆಶೆಯುಳ್ಳವಗಿತ್ತುಆಶಿಷವನಿತ್ತಿಹೆನೊ | ಹೃಷೀ ಕಪನ ಮೂರ್ತೇ 1 ಪಾದ ಮಹಿಮಾನುಭವಸಾಧಿಸೊ ಇವನಲ್ಲಿ | ಶ್ರೀ ದ ಶ್ರೀ ಹರಿಯೇ 2 ಊರ್ಮ ಷಟ್ಕಳವಕಳೆಯೆ | ಕರ್ಮನಿಷ್ಕಾಮಕದಿಪೇರ್ಮೆಯಲ್ಲಾ ಚರಿಪ | ಸನ್ಮಮನವ ನೀಯೋನಿರ್ಮಲಾತ್ಮನೆ ದೇವ | ಹಮ್ರ್ಯ ಗಹ್ವರದಲ್ಲಿಪರ್ಮ ನಿನ್ನಯರೂಪ | ತೋರಿಸೋ ಹರಿಯೇ 3 ಭವ | ಅಂಬುಧಿಯ ಕಳೆಯೋ 4 ಕೈವಲ್ಯಪ್ರದ ಹರಿಯೆ | ಭಾವುಕರ ಪರಿಪಾಲನೋವಿಲ್ಲದಾ ಸ್ಥಳಕೆ | ಬಯ್ವದೋ ಇದನಾಈ ವಿಧದ ಭಿನ್ನಪವ | ಸಲಿಸೆಂದು ಪ್ರಾರ್ಥಿಸುವೆಧೀವರನೆ ಹರಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪಾಂಡುರಂಗನೆ ಪಾಲಿಸೆನ್ನನು ಬೇಡಿಕೊಂಬೆನು ವರವ ನೀಡಯ್ಯ ನೀನು ಪ. ಸುರರು ನಿರುತ ನಿನ್ನನು ಬಿಡರು ಕರಗಳನೆ ಜೋಡಿಸುವರು ವರಗಳನೆ ನೀಡೆಂಬರು ಭರದಿ ಹದಿನಾಲ್ಕು ಜಗದ ಉದರದಿ ಇಂಬಿಟ್ಟ ಭೋಜ ಸಿರಿಸ್ತುತಿಗೆ ಸಿಲ್ಕ ರಾಜವರ ರವಿಶತರ ತೇಜ ಭೀಮರಥಿಯ ತೀರದಲ್ಲಿ ಮಹಾನಂದ ಭರಿತ ನಂದನ ಕಂದ ಪೂರ್ಣಸುಖವನ್ನೆ ಕೊಟ್ಟು ಅನುದಿನ ಸೇರಿಸೊ ವೈಕುಂಠ 1 ಇಂದು ನಾ ಮಾಡ್ದ ಪುಣ್ಯ ಬಂದು ಕೈಸೇರಿತಿನ್ನ ಸುಂದರಾಂಗನೆ ಎನ್ನ ಬಂಧ ಪರಿಹರಿಸಿ ಬೇಗದಿಂದ ಉದ್ಧರಿಸೋ ಈಗ ನಂದನ ಕಂದ ರಂಗ ಬಂಧುವೇ ಪಾಂಡುರಂಗ ಕಮಠ ವರಹ ವೇಷಧಾರಕನೆ ನಾರಸಿಂಹನೆ ದೈತ್ಯಸಂಹಾರಿ ಗಂಗಾಪದಧಾರಿ ಕ್ಷತ್ರಿಯ ಕುಲವೈರಿ ಪೊಗಳಲು ಜೀಯಾ ಶೇಷಗೊಶವಲ್ಲವಯ್ಯಾ 2 ಪುಟ್ಟ ಧ್ರುವರಾಯಗಿನ್ನ ಕೊಟ್ಟೆ ಸ್ಥಿರ ಪಟ್ಟವನ್ನ ಎಷ್ಟು ವರ್ಣಿಸಲಿ ನಿನ್ನ ಇಷ್ಟ ಫಲದಾಯಕನ್ನ ಇಟ್ಟಿಗೆ ಪೀಠನಿಲಯ ದಿಟ್ಟ ಶ್ರೀ ಕೃಷ್ಣರಾಯ ಕಷ್ಟಪರಿಹರಿಸು ಗೋಪಾಲಕೃಷ್ಣವಿಠ್ಠಲ ಜೀಯ ಪಾಡಲಿ ಹಗಲಿರುಳು ಕೊಡದಿರು ವಿಠ್ಠಲಯ್ಯ ಬಲವಂತÀ ರಕ್ಷಿಸೆನ್ನ ವಸಂತ ಶ್ರೀದ ಕೈಯ ಮುಗಿವೆ ಸರ್ವದಾ 3
--------------
ಅಂಬಾಬಾಯಿ
ಪಾದ | ಜಯ ಮುಖ್ಯ ಪ್ರಾಣ ಮೋದ | ತೀರ್ಥಾರ್ಯ ಎನ್ನ ಹಂಬಲಿಗೆ ಕೊಡೊ ಭೇದ | ಅರ್ಥಗಳ ವಾದ ಪ. ಪಾದ ಹೃದಯ ನಿತ್ಯ ಹರಿಯ ಬಿಂಬ ತೋರಿಸಿ ಎನ್ನ ಭವದ ಅಂಬುಧಿ ಕಡೆ ಮಾಡು ವೇಗದಿ ಅ.ಪ. ನೂರ ತೊಂಭತ್ತಷ್ಟ | ಕಲ್ಪದಲಿ ಹರಿಯ ಆರಾಧಿಸಿದೆಯೊ ಶ್ರೇಷ್ಠ | ಅಲ್ಲಿಂದ ಮುಂದೆ ಸ- ವಿೂರ ಪದಕೆ ದಿಟ್ಟ | ಬಂದೆಯೊ ಉತ್ಕøಷ್ಟ ಪಾದ ಭಜಿಸಿ ಮೂರು ಅವತಾರವನೆ ಧರಿಸಿ ವೀರ ಕಪಿರೂಪದಲಿ ರಾಮರ ವಾರಿಜಾಂಘ್ರಿಯ ಭಜಿಸಿ1 ಭುಜ ಪರಾಕ್ರಮ ಭೀಮ | ನೆಂದೆನಿಸಿ ಕೌರವ ಧ್ವಜವ ಕೆಡಹಿದ್ಯೊ ಸೋಮ | ವಂಶಕೆ ತಿಲುಕ ನೀ ಧ್ವಜ ಕಪಿಗೆ ಬಹುಪ್ರೇಮ | ನಿನ್ನಲಿ ಹರಿಯ ಧಾಮ ದ್ವಿಜನ ಉದರದಿ ಜನಿಸಿ ಅಲ್ಲಿಂ ಕುಜನ ಮತವನು ತರಿದು ಹರಿಯ ಪಾದ ಭಜನೆ ನಿಜಗತಿಗೆ ಬಹು ಶ್ರೇಷ್ಠವೆನಿಸಿದೆ 2 ವ್ಯಾಪಕನೊ ನೀ ಎಲ್ಲಾ | ಕಡೆಯಲಿ ನಿನ್ನ ರೂಪ ತುಂಬಿಹದಲ್ಲಾ | ಎನಗದನು ತೋರೊ ಪತಿ ಗೋಪಾಲಕೃಷ್ಣವಿಠ್ಠಲ | ಲೀಲ ನೀ ಪರಿಪರಿಯಿಂದ ತಿಳಿಸಿ ತಾಪ ಹರಿಸೊ ಮೂರು ವಿಧದ ಪಾಪಿ ಎಂದು ಎನ್ನ ನೂಕದೆ ಕಾಪಾಡೊ ಪಂಚರೂಪ ಮೂರುತಿ 3
--------------
ಅಂಬಾಬಾಯಿ
ಪಾದ ಕಿಂಕರ ನನ್ನ ಕೈಬಿಡು- ವುದುಚಿತವೇ ರಂಗ ಪ. ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ- ತದಿ ನೀ ಕಾಯೊ ಎನ್ನೊಡೆಯ ರಂಗ ಅ.ಪ. ಅಜಗರಶಯನನೆ ಬುಧಜನ ನಮಿತನೆ ತ್ರಿಜಗವಂದಿತಪಾದ ಪದುಮಜ ಜನಕನೆ 1 ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ ಶಶಿಭೂಷಣಸಖ ಶಿಶುವ ಕಾಪಾಡೊ 2 ಸಾಂದೀಪಗೊಲಿದೆ ಸಂದೇಹವಿಲ್ಲ ತಂದೆ ಹೆಳವನಕಟ್ಟೆ ರಂಗ ಕೃಪಾಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ ಪಾಡಿ ತೂಗುವಳೊ ಮೋಹದಲಿ ಯಶೋದ ಯೋಗಿ ಜನರು ಕೊಂಡಾಡಲ್ವಿನೋದ 1 ಜಲಧಿ ಭೂದೇವಿ ಪ್ರಜ್ವಲಿಸುವ ಆಲದೆಲೆಯು ತಾನಾಗಿ ನಿದ್ರೆಹಸಿವು ಬಿಟ್ಟು ನಿರುತದಿ ಆತನ- ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ 2 ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ- ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ ಕಟುತರದಲಿ ನಾಲ್ಕು ವೇದವ ತೋರುತ ಪಟುತರದಲಿ ಯೋಗನಿದ್ರೆ ಮಾಡಿದನು 3 ಹದಿನಾಲ್ಕು ಲೋಕ ತನ್ನುದರದಲ್ಲಿಡುವ ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ ಅಜಭವಸುರರೆಲ್ಲ ಭಜನೆಯ ಗೈವರು ಮುದದಿ ಶಯನವ ಮಾಡೊ ಮಧು ಮುರಾಂತಕನೆ 4 ಕಡಲಶಯನ ಹರಿ(ಯ) ತೊಟ್ಟಿಲೊಳಿಟ್ಟು ಬಿಡದೆ ನಾರಿಯರೆಲ್ಲ ಪಾಡಿ ತೂಗುವರು ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ 5
--------------
ಹರಪನಹಳ್ಳಿಭೀಮವ್ವ
ಪಾದುಕೆಗಳ ಭಾಗ್ಯಶ್ರೀಗುರುವು ಶ್ರೀರಂಗಪಟ್ಟಣಕಾಗಿ ಬಿಜಯಂಗೈದು ಮಠದಲಿಯೋಗಪೀಠದಲಿರ್ದ ಸಮಯದಿ 'ಪ್ರಕುಲ ಬಂದುಆಗ ಚಾತುರ್ಮಾಸ್ಯ ಒದಗಿರಲಾಗಿ ಪ್ರಾರ್ಥನೆಗೈದ ಕಾರಣರಾಗರ'ತನು ವಾಸುದೇವನು ನೆಲಸಿದನು ದಯದಿ 1ತೀರಿ ವ್ರತವನು 'ಶ್ವರೂಪದ ದಾರಿಯಲಿ ಸಂಚರಿಸಿ ಪುನರಪಿಮಾರಹರನಾಲಯದ ಮುಂದಣ ಮಠಕೆ ಬಂದಿರುತಾಸಾರಿ ಸಾಯಂಕಾಲದಲಿ ಕಾವೇರಿಯಲಿ ಸ್ನಾನವನು ಮಾಡಿಯೆನಾರೆಯಣನಾಮವನು ಸ್ಮರಿಸುತ ಬಹುದ ನಾಂ ಕಂಡೆಂ 2ಕಂಡ ಬಳಿಯಲೆ ಭಕ್ತಿಭಾವದಿ ದಂಡದಂತಾನೆರಗೆ ಕೃಪೆುಂಮಂಡೆಯೆತ್ತೇಳಾರು ನೀನೆಂದಾಗ ಮಂದಲಿಸಿಪುಂಡಾರೀಕಾಂಬಕನ ದಾಸನೆ ಗಂಡುಗಲಿಯಾಗಿಹೆಯ ಕ್ಷೇಮವೆಕಂಡೆ'ಂದಿಗೆ ಬಹುದಿವಸಕೆಂದಾಗ ನುಡಿಯುತಿರೆ 3ಆ ಬಳಿಯ ಮನೆುರಲು ಮಾಳಿಗೆ ಶೋಭಿಸುತ ಬೆಳುದಿಂಗಳಿಗೆ ಬಲುಗಾಬರಿಯ ಸಂದಣಿ ಮಹಾನವ'ುಯ ಮಹೋತ್ಸವದಾಕಾಬರಿದ ಮೇಲಿದ್ದ 'ಪ್ರನು ತಾ ಭುಜಿಸಿ ತಾಂಬೂಲಶೇಷವತೂಬಿರಿಯೆ ಮುಕ್ಕುಳಿಸಿ ಗುರುಶಿರದೊಳಗೆ ಬಿದ್ದುದದು4ಹರಹರಾಗುರುಕೃಪೆಯೆಕೋಪವುಬರಬಹುದುನಿನಗೆನುತನುಡಿಯಲು ಗುರುವು ಕಂಡಾ ಬಳಿಯ ಕೇಶವಮೂರ್ತಿಯೆಂಬವನುಅರಿಯದಾದೈ ಮೇಲೆ ಕುಳಿತೀ ಬರುವ ಯತಿಗಳ ನ್ಯಾಯವೇಯೆಂದರುಹಲಾ ದ್ವಿಜಬೆದರಿ ಧುಂ'ುಕ್ಕಿದನು ಭೂತಳಕೆ 5ತಪ್ಪಿದೆನು ದಮ್ಮೈಯ ಗರ್ವವನೊಪ್ಪಿಕೊಳಬೇಕೆನಗೆ ಗತಿಯೇನಪ್ಪುದೋ ಕಂಗಾಣದಾದೆನು ವಾಸುದೇವಾರ್ಯಾತಪ್ಪಿದೆನು ತಪ್ಪಿದೆನು ತಪ್ಪಿದೆ ತಪ್ಪಿದೆನು ತಪ್ಪಿದೆನೆನುತ್ತಲಿಧೊಪ್ಪನಡಗೆಡ'ದರ ತನುವನು ನೋಡ್ದ ಗುರುವರನು 6ತಂದೆ ಬಾ ಯನ್ನಯ್ಯ ಬೆದರದಿರೆಂದಭಯವನು ಕೊಡುತ ಕರುಣಾಸಿಂಧು ವಾಗಮೃತದಲಿ ನೆನಸಿದ ಪರಿಯನೇನೆಂಬೆಕಂದನಪ್ಪನು ಸುಗುಣವಂತನು ಮುಂದಣೀ ದಿವಸಕ್ಕೆ ನಿನಗೆನುತೆಂದು ಮತ್ತವರಾಡಿದುಕ್ತಿಯನೆಂತು ಬಣ್ಣಿಪೆನು 7ಸಹಜ ತಂಬುಲ ಶಿರದ ಮೇಲಕೆ ಬಹುದು ಗುರುಕೃಪೆ ರೂಪವೆತ್ತೀ''ತ ಪ್ರಾಯಶ್ಚಿತ್ತಗೈದುರು 'ರತಿಯನು ಕಲಿಸಿಸಹಜ ಸುಖಸಂ'ತ್ಪದ' ತಾ ಬಹುದುನೊದಗಿಸಿತಾಗಿ ಮುಂದೀಬಹು ಜನರ ಗ್ಠೋಯನು ಬಿಡಿಸಿದುದೆಂದರುತ್ತರವಾ 8ಇರುವುದನುಚಿತ ಜನಸಮೂಹದಿ ಬರುವುದನುಚಿತ ಬರದ ಮಾರ್ಗದಿಕರದು ಮನ್ನಿಸಿ ಜನರ ಕ್ಷೇಮವ ಕೇಳ್ವುದನುಚಿತವುಅರಿಕೆದಟ್ಟಿತು ಮನಕೆ ಗುರು ತಾನುರುಹು ಸಂನ್ಯಾಸವನು ಥೂಯೆಂದಿರದೆ ಮೋರೆಯ ಮೇಲೆ ತಾನುಗುಳಿದನು ಸಿದ್ಧ'ದೂ 9ಪ್ರೇಷೆ ತಾ ಜ್ಞಾನಕ್ಕೆ ಮಾತೃವು ಪ್ರೇಷೆಯೇ ಜ್ಞಾನಕ್ಕೆ ತಂದೆಯುಪ್ರೇಷೆ ಭವಸಾಗರವ ದಾಂಟಿಪ ನಾವೆ ಸುಖಕರವೂಪ್ರೇಷೆ ಸರ್ವೋತ್ಕರುಷವಪ್ಪುದು ಪ್ರೇಷೆಯನ್ನುಚ್ಚರಿಸಿ ಮತ್ತಭಿಲಾಷೆುಂ ಜನಸಂಗಗೈಯ್ಯಲ್ಕಾಯ್ತೆ ನಿಗ್ರಹವೂ 10ಭಲರೆ ಗುರುವರ ಧನ್ಯನಾದೆನು ಮರೆತೆ ತಪ್ಪಿದೆ ಮುಂದೆ ಜನರೊಳಗಿರೆನು ಗುಹೆಯನು ಪೊಕ್ಕು ಮೌನವ್ರತ ಸಮಾಧಿಯಲಿುರುವವೋಲ್ ವೈರಾಗ್ಯವನು ನೀ ಕುರುಣಿಸಿದೆಯೆಂದೆನುತ ನಗುತಲಿಹರುಷದಿಂ ಕಾವೇರಿಗೈತಂದನು ಗುರೂತ್ತಮನು11ಸಾ'ರದ ಸಂಖ್ಯೆಯಲಿ ಮೃತ್ತಿಕೆ ುೀವುದಕ್ಕೆನ್ನುವನು ನೇ'ುಸಿಭಾ'ಸುತ ಪ್ರಣವವನು ಸ್ನಾನವ ಮಾಡಿ ನಿಯಮದಲಿಭಾವವಳಿಸಿ ಕಮಂಡಲವ ಜಲಕೀವ ಸಮಯದಲುಗುಳ್ದ 'ಪ್ರನಭಾವದಲಿ ನಡುಗದಿರು ಸುತನಹನೆಂದ ಗುರುವರನು 12ಏನನೆನ್ನುವೆನಾ ದ್ವಿಜನು ಸುತ 'ೀನನತಿ ಯತ್ನಗಳ ಮಾಡುತಭಾನು'ಂಗೆರಗುತ್ತಲಿದ್ದನು ಪುತ್ರಕಾಮುಕನುಏನು ಕೃಪೆಯೋ ತಿಂಗಳೆರಡಕೆ ಮಾನಿನಿಯು ತಾ ಗರ್ಭದಾಳಿಯೆಸೂನುವನು ತಾ ಪಡೆದಳೀ ಗುರು ಪೇಳ್ದ ದಿವಸದಲಿ 13'ುಂದು ಕಾವೇರಿಯಲಿ ಗುರುವರ ಬಂದು ಮಠಕಾಕ್ಷಣವೆ 'ಪ್ರರಸಂದಣಿಯ ನೆರೆ ಕಳು'ಯೆನಗಪ್ಪಣೆಯ ಕೊಡಲಾಗಿಬಂದು ಮನೆಯೊಳಗಿದ್ದು ರಾತ್ರಿಯು ಸಂದ ಬಳಿಕಾನೈದಿ ನದಿಯೊಳು'ುಂದು ಗುರವರಗೆರಗಲೈದಿಯೆ ಕಾಣೆ ನಾನಲ್ಲಿ 14ಸ್ನಾನಕೈದಿದರೇನೊ ಬಂದರೆ ಕಾಣುವೆನು ನ'ುಸುವೆನುಯೆಂದೇನಾನು ನೋಡಿದೆ ಬಾರದಿರೆ ಮಧ್ಯಾಹ್ನ ಪರಿಯಂತಭಾನು'ಂಗಘ್ರ್ಯವನು ಕೊಟ್ಟು ಮಹಾನುಭಾವರ ನೆನನೆನದು ದುಂಮಾನದಿಂದಿರುತಿದ್ದೆ ಸಾಯಂಕಾಲ ಪರಿಯಂತ 15ಇರುಳಿಗೂ ಬರದಿರಲು ಪಾದುಕೆುರಲು ಪೂಜಿಸಿ ನ'ುಸಿಯಗಲಿದಪರಮ ತಾಪದಿ ಕುದಿದು ರೋದನಗೈದೆ ಪಂಬಲಿಸಿಗುರುವರನೆ ನಿನ್ನಂಘ್ರಿಕಮಲದ ದರುಶನವು ಮರೆಯಾಯ್ತೆ ದೀನನಕರೆದು ಮನ್ನಿಸಿ ಕಾಯ್ದೆಯಲ್ಲೈ ವಾಸುದೇವಾರ್ಯಾ 16ಏನು ಗತಿ ಮುಂದೆನಗೆ ಮಾರ್ಗವದೇನನುಗ್ರ'ಸಿಪ್ಪ ಮಂತ್ರ 'ದೇನು ಜಪಿಸುವ ಮಾನವೆಂತಿದರರ್ಥವೇನಹುದುನಾನರಿಯದವನೆಂಬುದನು ನೀ ಜ್ಞಾನದ್ಟೃಯೊಳರಿದು ರಕ್ಷಿಸುದೀನನನು ಕೈ'ಡಿದು ಬಿಡುವರೆ ವಾಸುದೇವಾರ್ಯಾ 17ಭವಸಮುದ್ರದಿ ಮುಳುಗುತೇಳುತ ಲವಚಿ ತೆಗೆವರ ಕಾಣದಳಲುತಕ'ದು ತಮ ಕಂಗಾಣದಿರೆ ನೀನಾಗಿ ದಯತೋರಿಭವಭವಾಂತರದುರಿತಗಳ ಪರಿಭ'ಸಿಯಭಯವನಿತ್ತು ಸಲ'ದದಿ'ಜವಂದ್ಯನೆಯಗಲಿದೈ ಶ್ರೀ ವಾಸುದೇವಾರ್ಯಾ 18ಅರಿಯೆ ಹೃತ್ಕಮಲದಲಿ ಭಾ'ಪ ಪರಿಯನಿದಿರಿಟ್ಟಿರಲು ನೀ ಶುಭಕರದ ಮೂರುತಿಯಾಗಿ ಗ್ರಂಥಾರ್ಥಗಳ ಶೋಧಿಸಿಯೆಅರಿಯಬೇಕೆಂಬಿಚ್ಛೆ ಬರಲಿಲ್ಲುರುವ ನಿನ್ನಯ ವಾಗಮೃತ ರಸಸುರಿಯೆ ತಾನೇ ಪಾನಗೈಯುತ ಮತ್ತನಾಗಿದ್ದೆ 19ಜೀ'ಸುವೆ ನಾನೆಂತು ಧರೆಯೊಳು ಪಾವನದ ಮೂರುತಿಯ ಕಾಣದೆಭಾವದಲಿ ಸುಖಗೊಳಿಪ ವಾಕ್ಸುಧೆಯರತ ಕಾರಣದಿಂದೇವ ಮರೆಯಪರಾಧ'ದ್ದರು ಕಾವ ಕರುಣೆಗೆ ಕೋಪವೇ ಸಂಜೀವ ನೀ ಭುವನಕ್ಕೆ ತೋರೈ ವಾಸುದೇವಾರ್ಯಾ 20ಮೊರೆುಡುತಲೀ ರೀತಿುಂದಿರುತಿರಲು ಪಾದುಕೆಗಳಿಗೆ ನ'ುಸುತಬರಲು ಪಲ್ಲವ ಬಾಯ್ಗೆ ಗುರುಕೃಪೆುಂದ ತಾನಾಗಿತಿರುಪತಿಯ ವೆಂಕಟನೆ ಮೂರ್ತಿಯ ಧರಿಸಿ ಯತಿವರನೆನಿಸಿದುದನಾಹರುಷದಿಂ ಪಾಡಿದೆನು ಕೀರ್ತನ ನೆವದಿ ಮೈಮರೆದೂ 21
--------------
ತಿಮ್ಮಪ್ಪದಾಸರು
ಪಾಪಿಯೊಳು ನಾ ಬಂದೆ ಪರದೇಶಿ ನಾನಾದೆ ಕಾಪಾಡುವರ ಕಾಣೆ ಕೈಪಿಡಿ (ದು) ಆಪತ್ತು ಬಂದ ಕಾಲಕ್ಕೆ ಆರಯ್ವರೊಬ್ಬರಿಲ್ಲ ಶ್ರೀಪತಿಯೆ ಕಡೆಹಾಯಿಸೊ ತಂದೆ ತಾಯೆಂಬುದನು ನಾ- ನೊಂದು ಗುರತನರಿಯೆ ನಿಮ್ಮ ಕಂದ -
--------------
ಹೆಳವನಕಟ್ಟೆ ಗಿರಿಯಮ್ಮ