ಒಟ್ಟು 1912 ಕಡೆಗಳಲ್ಲಿ , 108 ದಾಸರು , 1327 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ನಿತ್ಯದಲಿ ಧೂಪ ಪ ನಾನದಾರಿಹೆನೆಂದು ತಿಳಿದವಗೆ ಧೂಪನಾನು ಆತ್ಮವು ಎಂದು ಕಂಡವಗೆ ಧೂಪನಾನಾ ಜೀವ ಭ್ರಾಂತಿಯಳಿದವಗೆ ಧೂಪತಾನೆ ತಾನಾಗಿಹೆನೆಂದವಗೆ ಧೂಪ 1 ಸಂಸಾರದೊಳು ಇದ್ದು ಇಲ್ಲದವನಿಗೆ ಧೂಪಸಂಸಾರ ಸಂತೆಂದು ಕಂಡವಗೆ ಧೂಪಸಂಸಾರ ಲೇಪ ಅಂಟದವನಿಗೆ ಧೂಪಸಂಸಾರದೊಳು ಮುಕ್ತನಾದವಗೆ ಧೂಪ2 ಸೂರ್ಯ ಚಂದ್ರ ಸ್ವರದಿ ನಡೆದವಗೆ ಧೂಪಆರು ಚಕ್ರದಿ ನಡೆದವಗೆ ಧೂಪಭೋರೆನಿಪ ಓಂಕಾರ ಕೇಳ್ದವಗೆ ಧೂಪಧೀರ ಚಿದಾನಂದ ಗುರುವಾದವಗೆ ಧೂಪ 3
--------------
ಚಿದಾನಂದ ಅವಧೂತರು
ನಿತ್ಯ ನೂತನ ಮಹಿಮಭೃತ್ಯನನು ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತ ಕರ್ತು ನೀನಾಗಿರಲುಆರ್ತರುದ್ಧರ ಕಾರ್ಯ | ಪೂರ್ತಿಗೊಳಿಸೋ 1 ಉದಧಿ ವಿಧಿ ಜನಕ ವಿಶ್ವೇಶ | ಮುದ ಮುನಿಯ ಸದ್ವಂದ್ಯವದಗಿ ವರಪ್ರದನಾಗಿ | ಮುದವನ್ನೆ ಬೀರೋ 2 ಯೇಸೊ ಜನ್ಮದ ಪುಣ್ಯ | ರಾಶಿ ವದಗಿತೊ ಇವಗೆಆಶಿಸುವ ಹರಿದಾಸ್ಯ | ವಾಸವಾನುಜನೇ ಆಸುರೀ ಭಾವಗಳ | ನಾಶನವ ಗೈಯ್ಯುತ್ತಪೋಷಿಸುವುದಿವನ ಹರಿ | ದಾಸ್ಯ ಕರುಣಿಸುತಾ 3 ನಾನು ನನ್ನದು ಎಂಬ | ಹೀನ ಮತಿಯನೆ ಕಡಿದುದಾಸವಾಂತಕ ಸಲಹೊ | ಜ್ಞಾನ ಪ್ರದನಾಗೀಮೌನಿ ಮಧ್ವರ ಮತದಿ | ಸಾನು ಕೂಲಿಸಿ ದೀಕ್ಷೆಮಾನನಿಧಿ ಗುಣಪೂರ್ಣ | ನೀನಾಗಿ ಪೊರೆಯೋ 4 ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ಸರ್ವೇಶ | ಸರ್ವಸಮ ಮೂರ್ತೇಗುರ್ವಂತರಾತ್ಮಕನೆ | ದರ್ವಿಜೀವಿಯ ಕಾಯೊದುರ್ವಿ ಭಾವ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನಿತ್ಯ ಮಂಗಳಂ ಪ್ರಸನ್ನ ವಾಸುದೇವಗುರುವೆ ಪರಮಮಂಗಳಂ ಗುರುವೆಪಅನಾಥನಾದವನಿಗಾನಂದ ಮಂಗಳಂ ನಿನ್ನಧ್ಯಾನಗೈವ ಧನ್ಯರಿಗೆ ದಿವ್ಯ ಮಂಗಳಂಮಾನಸ ನಿನ್ನೊಳಗೆರಗೆ ಬಹು ಮಂಗಳಂ ಸರ್ವವೂ ನೀವೆಂದರಿತ ಮ'ಮರಿಗಖಿಲ ಮಂಗಳಂ 1ಕಂಗಳು ನಿನ್ನೊಳಿದ್ದರೆ ಶುಭಕಾರ ಮಂಗಳಂ ಭವಭಂಗಗೈವ ನಿನ್ನ ನೋಡೆ ಭವ್ಯ ಮಂಗಳಂಅಂಗಪ್ರತಿಸೇವೆಯೆ ಸರ್ವಾದಿ ಮಂಗಳಂ ಕಷ್ಟ'ಂಗುವಂಥ ನಿನ್ನ ಕೃಪೆ ಕೋಟಿ ಮಂಗಳಂ 2ಪಾದುಕೆಯೂಳಿಗವೇ ಪ'ತ್ರ ಮಂಗಳಂ ನಿನ್ನಪಾದಪದ್ಮ ಸೇವೆ ದೊರಕೆ ಬಹು ಮಂಗಳಂಓದಿದರೆ ನಿನ್ನ ಕಥೆಯ 'ಶ್ವ ಮಂಗಳಂ ನೀನಾದರಿಸಿ ಕರೆಯಲೆಮಗತ್ಯಂತ ಮಂಗಳಂ 3ನಿನ್ನ ಮುಂದೆ ಕುಣಿಯಲೆಮಗೆ ನಾನಾ ಮಂಗಳಂ ಗುಣವನ್ನು ಪಾಡಿ ಪೊಗಳಿದರಪಾರ ಮಂಗಳಂನಿನ್ನ ಚರಣತೀರ್ಥಪಾನ ಅನಂತ ಮಂಗಳಂನಿನ್ನ ದಿವ್ಯಪ್ರಸಾದವೆ ಭುವನ ಮಂಗಳಂ 4ದಾಸಾನುದಾಸನಪ್ಪುದೆ ದೊಡ್ಡ ಮಂಗಳಂ ಗುರುವಾಸುದೇವಾರ್ಯ ನಿನ್ನವರಿಗೆಲ್ಲಾ ಮಂಗಳಂಪೋಷಕನೀನಾದುದರಿಂ ಪಂತು ಮಂಗಳಂ ತ್ರಿಭುವನೇಶ ಚಿಕ್ಕನಾಗಪುರವಾಸ ಮಂಗಳಂ5
--------------
ವೆಂಕಟದಾಸರು
ನಿತ್ಯ ಮಾರುತನ ರಾಣಿ | ಭಾರ ನಿನ್ನದೇ ವಾಣೀ ಪ ಅನುದಿನ | ಅಕಟನಿಲ್ಲದೆ | ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ | ಪಕೆ ಎರಗಿದೆ ಯಾತಕೆ ಬಾರದವನಾದೆ 1 ಆರನ್ನ ಕಾಣದೆ ನಿನ್ನನು ನಾ | ಸಾರಿದೆ ಮಾಣದೆ | ವಾರ ವಾರಕೆನ್ನ ಉದ್ಧಾರವ ಮಾಳ್ಪುದು | ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ 2 ನಿತ್ಯ | ಕೃತಿಯನಂದನೆ | ಸತತ ವಿಜಯವಿಠ್ಠಲನ ಪದಾಬ್ಜದಿ | ರತಿ ಆಗುವಂತೆ ಸುಮತಿಯನು ಕರುಣಿಸೇ 3
--------------
ವಿಜಯದಾಸ
ನಿತ್ಯ ಶಾರದಾ ಕೊಡು ಎನಗೆ | ಸಾರುವೆ ನಾ ನಿನ್ನ ಪ ಪುಂಡರೀಕ ನಯನೆ ಪುಂಡರೀಕನ ರಾಣಿ ಪುಂಡರೀಕ ಚರ್ಮಾಂಬರ | ಪುಂಡರೀಕನಾಥನುತೆ ಪುಂಡರೀಕವೆ ನಮಗೆ 1 ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ | ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ | ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ 2 ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ | ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು3
--------------
ವಿಜಯದಾಸ
ನಿತ್ಯ ಚಿದಾತ್ಮಕ ಸತ್ಯ ರುಕ್ಮಿಣಿಯರು ಜೊತ್ತಿಲಾಡುತ ತಮ್ಮ ಪತಿಯ ಉತ್ತಮಗುಣಗಣ ವರ್ಣಿಸುವದಕನುವೃತ್ತರಾಗುತ ವಾದಿಸಿದರು ಪ. ಅಕ್ಕ ಕೇಳರಿಗಳ ವಶರಾಗಿ ಸೆರೆಯೊಳು ಸಿಕ್ಕಿದವರ ಮಗನಿವನು ಚಿಕ್ಕತನದಿ ಗೋವ ವಕ್ಕಲಿಗರು ಬಾಯೊ- ಳಿಕ್ಕಿದನ್ನವನುಂಡದೇನು 1 ನಿರಪರಾಧಿಯನೀತ ತರಿದನೆಂಬಕೀರ್ತಿ ಬರದಂತೆ ಸೆರೆಯೊಳುದಿಸಿದ ಸುರರೆಲ್ಲ ಗೋಪರಾಗಿರುವುದರಿತು ಸೇವ- ಕರಿಗೊಲಿವುತ್ತಲಿ ಮೆರೆವ 2 ಪಾಂಡುಕುಮಾರನ ಭಂಡಿ ಹೊಡಲು ಪಾಲ ನುಂಡನು ವಿದುರನ ಗೃಹದಿ ಗಂಡರಾಳುವ ಗರತೇರ ನೆರೆದವನ ಹೆಂಡರಾಗಿರುವದಿನ್ನೆಂತು 3 ಭಕ್ತವತ್ಸಲನೆಂಬ ಬಿರುದ ತೋರುವದತಿ ಶಕ್ತಿ ಹರಿಗೆ ಶೋಭಾಕರವು ತೊತ್ತಿನ ಮಗನಿಂದಲಿತ್ತ ಕೌರವನೆಂಬ ತತ್ವ ತೋರಿದನಲ್ಲವೇನೆ 4 ಧರೆಯನಾಳದೆ ತನ್ನ ಪರಿವಾರ ಸಹಿತಾಗಿ ಶರಧಿಯೊಳಗೆ ವಾಸವಾಗಿ ದುರುಳ ಜರಾಸಂಧ ಬರುವ ಭೀತಿಯ ತಾಳಿ ಲ್ಲಿರುವ ಕಾರಣವೇನೆ ಜಾಣೆ 5 ಈರೆಂಟು ಮತ್ತೊಂದು ಭಾರಿ ಸಮರದಲ್ಲಿ ಬಾರುಹದ್ರಥನನ್ನು ಗೆಲಿದ ಧೀರನೀತನು ಭಕ್ತ ಮಾರುತಿಯಲಿ ಜಯ ತೋರಲಂತಿರುವನು ಕಾಣೆ 6 ಜಾರ ಚೋರರಿಗೆಲ್ಲ ಗುರು ನಿಮ್ಮ ಪತಿಯೆಂದು ವೂರನಾರಿಯರೆಲ್ಲ ನುಡಿವ ಕ್ರೂರ ಮಾತನು ಕೇಳಲಾರೆನಕ್ಕಯ್ಯ ಯಿ ನ್ಯಾರಿಗೆಂದುತ್ತರ ಕೊಡುವೆ 7 ಘತಿತ ಪಾವನ ಪದ್ಮಜಾತಜನಕ ಶ್ರೀ ಪತಿ ಸುಜನಾನಂದದಾಯಿ ವಿತತ ವಿಡಂಬನ ತೋರುವ ವೆಂಕಟ ಪತಿ ದೋಷಹರ ಶೇಷಶಾಯಿ 8 ಹಸೆಗೆ ಕರೆವ ಮತ್ತು ಆರತಿಯ ಹಾಡುಗಳು
--------------
ತುಪಾಕಿ ವೆಂಕಟರಮಣಾಚಾರ್ಯ
ನಿತ್ಯ ಶುಭ ಮಂಗಳಂ ಭಯ ವಿನಾಶನದೇವ ಶ್ರೀನಿವಾಸನಿಗೆ ಪ. ಮಂಗಳಂ ಜಲಚರಗೆ ಮಂಗಳಂ ಗಿರಿಧರಗೆ ಮಂಗಳಂ ಭೂದೇವಿ ರಕ್ಷಕನಿಗೆ ಮಂಗಳಂ ನರಹರಿಗೆ ಮಂಗಳಂ ಮಾಣವಗೆ ಮಂಗಳಂ ಭಾರ್ಗವಗೆ ದಾಶರಥಿಗೆ 1 ಮಂಗಳಂ ಗೋಪಾಂಗನೆಯರ ಕಾಯ್ದವನಿಗೆ ಮಂಗಳಂ ತ್ರಿಪುರ ಸುರರಳಿದ ಹರಿಗೆ ಮಂಗಳಂ ಹಯವೇರಿ ಕಲಿಮುಖರ ಗೆಲಿದವಗೆ ಮಂಗಳಂ ಶ್ರೀಕೃಷ್ಣ ಶ್ರೀನಿವಾಸನಿಗೆ 2 ಆಪಾದಮೌಳಿ ಪಾವನರೂಪನಿಗೆ ಆಪನ್ನ ರಕ್ಷಕಗೆ ಆದಿರೂಪನಿಗೆ ಆಪದ್ಭಾಂಧವ ಶ್ರೀಗುರುಗಳಂತರ್ಗತಗೆ ಗೋಪಾಲಕೃಷ್ಣವಿಠ್ಠಲಮೂರ್ತಿಗೆ 3
--------------
ಅಂಬಾಬಾಯಿ
ನಿತ್ಯ ಸುಖಕರ ನೀರಜಾಕ್ಷರ ಭೃತ್ಯರಾಗುವ ಬನ್ನಿರಿ ಎತ್ತುವನು ಸಂಶಯವಿಡದೆ ಕೃತಕೃತ್ಯರಾಗುವವೆನ್ನಿರಿ ಪ. ಮೋದಮಯನ ಪ್ರಸಾದವನು ಕೊಂಡಾದರದಿ ಸೇವಿಪುದು ಪಾದಪದ್ಮಾಮೋದಯುತಾ ತುಳಸೀದಳಗಳನು ಮುಡಿವುದು ತೇದ ಗಂಧವ ಮಾಧವನಿಗಿರಿಸಾದನಂತರ ಕೊಳುವುದು ಭಾಗವತ ಕೇಳುತ 1 ಭೀಕರಿಪ ಮಹ ದುರಿತಗಣ ನಿರಾಕರಿಸುವನು ನಿಮಿಷದಿ ಕುಯುಕ್ತಿ ಶಕ್ತಿಯ ದೂಕುವನು ದುಷ್ಕೂಪದಿ ವಾಕುಗಳ ತಪ್ಪುಗಳನೆಣಿಸದೆ ಸಾಕುವನು ಸಂತಸದಲಿ ಒಡಗೂಡಿ ನಲಿವನು 2 ಶ್ರೀಶನನು ಭಜಿಸುವದಕೇನಾಯಾಸವಿರುವುದು ಹೇಳಿರಿ ವಾಸವಾಗಿಹ ಸಕಲ ಹೃದಯಾಕಾಶ ಪದ್ಮದಿ ಕೇಳಿರಿ ವಾಸುದೇವನ ವರ್ಣನಾಂಶವ ಲೇಶವಾದರು ತಾಳಿರಿ ಶೇಷ ಗಿರೀಶನ ದಾಸಕೂಟ ಸಮಾಶ್ರಯಣ ಸಂಗ್ರಹಿಸಿ ಬಾಳಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿತ್ಯ ಸುಪ್ರೀತ ಸರ್ವೋತ್ತಮ ಹರಿಯೆ ಚಿತ್ತಜನಯ್ಯ ಚಿನ್ಮಯ ಎನ್ನ ದೊರೆಯೆ ಪ. ಅರಿಯೆ ನಾನಾ ವಾಹನಾದಿ ವಿಧಿಯನು ಮರಿಯೆನು ಮನದಲ್ಲಿ ಮಂದಭಾವವನು ವರದೇಶ ನಿನ್ನಯ ಚರಣಾರವಿಂದವ ನೆರೆನಂಬಿದವನೆಂಬ ಪರಿಯಿಂದ ದಯವಾಗು 1 ಇಂದಿರಾವರವಿಧಿವಂದ್ಯ ಸರ್ವೇಶಾ- ನಿತ್ಯ ಸುಂದರ ವೇಷಾ ಮಂದ ಬುದ್ಧಿಯೊಳೆಂತು ಒಲಿಸುವೆ ಶ್ರೀಶಾ ತಂದೆ ನೀ ಕರುಣದಿ ಸಲಿಸಭಿಲಾಷಾ 2 ಅಣುರೇಣು ತೃಣಕಾಷ್ಠ ಪರಿಪೂರ್ಣ ನಿನ್ನ ನೆನೆದು ವಂದಿಸುವೆ ಚಂದನ ಮೂರ್ತಿಯನ್ನ ಸನಕಾದಿ ವಂದ್ಯ ಶೇಷಾಚಲನಾಯಕ ಅನಿಮಿಷ ಪತಿಯೆನ್ನ ಮನೆಯಲ್ಲಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿಂದಿಸಿದ್ದು ಕುಂದಾದದ್ದೇನೊ ಮಂದಮತಿಗಳು ನಿಂದು ಸುಜನರಿಗೆಲ್ಲ ಪ. ಅಂದನುವಾಗಿಲ್ಲೆ ಇಂದಿರೇಶನು ಮಂದಗಮನೆ ದ್ರೌಪದಿಗೆ ಅ.ಪ. ಕಂದನೆಂದು ಕೌರವನ ಸೇವೆಗೆ ಆ ನಂದದಿಂದ್ಯವರ ಬೇಡೆಂದ ಮುನಿ ಬಂದರತ್ನವ ಬಿಟ್ಟನ್ನವ ಬೇಡಿಬಾರೆನೆ ಇಂದು ಮುಖಿ ಕೈಯಿಂದಿಡಿಸಿದ ಕೃಷ್ಣ 1 ಖಡ್ಗ ತೋರಿ ಬಳ ಪ್ರಹ್ಲಾದನಂಜಿಸೆ ಗುಡ್ಡ ಪೊತ್ತ ನರಹರಿಯಾಗ ಹೆಡ್ಡನೆ ತೋರುವೆನೆಂದು ಕಂಬದಿ ದೊಡ್ಡ ಮೃಗರೂಪದಲಂಜಿಸಿದ 2 ತೊಡೆಯನು ಬಿಡು ಎನುತೊಡನೆ ನೂಕಲು ಪೊಡವಿಯಲ್ಲಿಹುದು ನಡೆ ಬಾಲಕನೆನೆ ಕಡುಭಯದಲಿ ಧೃವ ಒಡನೆ ಹರಿಯ ಪಾದ ಬಿಡದೆ ಧ್ಯಾನಿಸೆ ದೃಢವರವಿತ್ತ ಹರಿ (ಕಡೆ ಹಾಯಿಸಲು) 3 ಕರಿಯ ಕಂಬದ ತೆರದಿ ನಿಲಿಸೆ ನಕ್ರ ಪೊರೆದವನಾರೋ ಹರಿಯಲ್ಲದೆ ಶರಣಾಗತ ಚಿಂತಾಮಣಿ ಎನೆ ಕರಿ ಪರಿದು ಚಕ್ರನಿ ನಕ್ರನ ಬೇಗ 4 ಏಕಾದಶಿವ್ರತ ಏಕಭುಕ್ತನ ನೀರೆಡಿಸೆ ಮಾನುನಿ ಬರಲು ಹರಿತಾ ಕರುಣಿಪನೆಂದು ತರಳನ ಶಿರಕೆ ಕೈಹಾಕೆ ಶ್ರೀ ಶ್ರೀನಿವಾಸನ ಸುತತಾ ಕರುಣಿಸಿದ 5
--------------
ಸರಸ್ವತಿ ಬಾಯಿ
ನಿನಗಾರು ಸರಿಯಿಲ್ಲ-ಎನಗನ್ಯ ಗತಿಯಿಲ್ಲ ಪ ನಿನಗೂ ನನಗೂ ನ್ಯಾಯ ಪೇಳುವರಿಲ್ಲ ಅ.ಪ ಪಾದ ಪೊಂದಿರುವೆಬಂದ ವಿಷಯಂಗಳಿಗೆ ಎನ್ನನೊಪ್ಪಿಸಿಕೊಟ್ಟುಅಂದಗಾರನಂತೆ ನೋಡುವುದುಚಿತವೆ1 ಪರಿ ನರಕಕ್ಕೆ ಗುರಿಮಾಡುವಿಪರಸತಿಯರ ಒಲುಮೆ ನಿನಗೊಪ್ಪಿತೆಲೊ ಕೃಷ್ಣದೊರೆತನಕಂಜಿ ನಾ ಶರಣೆಂಬೆನಲ್ಲದೆ 2 ನಿನ್ನಾಜ್ಞದವನೊ ನಾ ನಿನ್ನ ಪ್ರೇರಣೆಯಿಂದಅನ್ನಂತ ಕರ್ಮವ ನಾ ಮಾಡಿದೆಎನ್ನವಗುಣಗಳನೆಣಿಸಲಾಗದೊ ಸ್ವಾಮಿಮನ್ನಿಸಿ ಸಲಹಯ್ಯ ಪರಮ ಪುರುಷ ಕೃಷ್ಣ 3
--------------
ವ್ಯಾಸರಾಯರು
ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ ಪ ನಿತ್ಯ ಮುಕ್ತ ಪೂರ್ಣ ಕಾಮ ಒಂದಕು ಸಿಲುಕದ ಮತ್ತೆ ಇದ್ದ ನಿನ್ನ ತನು ದೀನರ ತೋರಿ ಹತ್ತು ಜನುಮವ ಕೊಟ್ಟು ಭಕ್ತ ಜನರ ಬಲು ಕೃತ್ಯ ನಿಮಿತ್ಯ ಕೊಡಿಸ್ಯಾಡಿಸಿದನರಿಯ 1 ಒಂದಕೂ ಸಿಲುಕದಾ ನಿನ್ನ ವತ್ಸದ ದಾವು ಬಂಧದಿ ಬಿಗಿಸಿತೀ ಗೋಪಿಯ ಕೈಯ ವೃಂದಾರಕರ ಸ್ತುತಿಗೊಶವಲ್ಲದವನ ಗೋಪ ಮಂದಿಯ ದೂರಿನ ಪಾತ್ರನ್ನ ಮಾಡಿತು 2 ಪೇಳಿಕೊಂಬಿಯೊ ಲೋಕದೊಡೆಯನು ನಾನೆಂದು ಊಳಿಗತನ ನಿನ್ನ ಕೈಯ ಮಾಡಿಸಿತಯ್ಯ ಕೇಳೊ ಭಕುತರಿನ್ನು ಏನಾಡಿದರನ್ನ ತಾಳಬೇಕಾಯಿತೋ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ನಿನಗಿದು ಘನವೆ-ನಿತ್ಯಾತ್ಮಕವನಜಭವಾದಿಗಳನು ಪಾಲಿಪದೇವಪ ಸದಯನೀನಾದರೆ-ಬದುಕಿಸಿ ಪಶುಗಳ ಮುದವನು ತೋರಿಸು ಮಧುಸೂಧನ ಈಗ 1 ಇದಿರಿಗೆ ನೋಡಲಾರದೆ ನಿನ್ನ ದೂರಿದೆ ಇದುವೊಂದು ತಪ್ಪುಯನ್ನದು ಎಂದು ಮುನ್ನಿಸು 2 ವಿಷದ ನೀರನು ಕುಡಿ-ದಸುವನ್ನು ಕಳಕೊಂಡ ಪಶು ಪಾಲಕರಿಗೆ ನೀನಸುವಿತ್ತು ಪೊರೆದೆ 3 ಹೊಟ್ಟೆಯೊಳಗೆ ಸತ್ತು ಹುಟ್ಟಿದ ಶಿಶುವನ್ನು ಮುಟ್ಟಿ ಜೀವನವಿತ್ತೆ ಕೃಷ್ಣಾಕೃಪಾಕರ 4 ಗುರುಸುತನನು ಯಮ ಪುರದಿಂದ ಕರೆತಂದ ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ನಿನಗಿದು ಹಿತವೇ | ಇದು ಹಿತವೇ ಪ ಕಂಸಾರಿ ಚರಣವ ನಂಬದೇ ಕ್ಷಣಿಕದ | ಸಂಸಾರದಲಿ ಬೆರಿಯಬೇಡಾ 1 ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ | ಕಣ್ಣಗೆಟ್ಟಿರುವರೇ ಮೂಢಾ 2 ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ | ಹಸಗೆಡದಿರು ವಿಷಯ ಕೂಡಾ | 3 ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ | ಮನವೇ ನೀ ಮಥನಿಸಿ ನೋಡು 4 ದಾವನು ಗುರು ಮಹಿಪತಿ ಪ್ರಭು ಭಜಿಸನು | ಅವಗಿಲ್ಲ ಸುಖಸುರವಾಟಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನಗಿನಿತು ಮಮಕಾರವಿರಲೆನಗೆ ಭಯವೇನು ಚಿನುಮಯನೆ ಧನ್ಯ ನಾನು ಪಜನಕ ನೀನೆನಗಾದೆ ತನುಜ ನಾ ನಿನಗಾದೆ ಘನಮಹಿಮ ಕಾಮಧೇನು ನೀನು ಅ.ಪಜನ್ಮಕೋಟಿಗಳಲ್ಲಿ ಪುಣ್ಯಕರ್ಮಗಳನ್ನು ಮುನ್ನ ಮಾಡಿಸಿದೆ ನೀನುಮುನ್ನಿನಾ ದೇಹಗಳು ಭಿನ್ನವಾಗಲು ಕರ್ಮವಿನ್ನುಳಿವ ಬಗೆಯದೇನುಚಿನ್ಮಯನೆ ತನುಕರಣ ಭಿನ್ನವಾದರು ಸಾಕ್ಷಿ ನಿನ್ನೊಳಿಂಬಿಟ್ಟೆಯವನುಸನ್ನುತನೆ ಬಾಲಕನಿಗುಣ್ಣ ಕಲಿಸುವ ತೆರದಿ ನಿನ್ನನಿತ್ತುದೇನೆಂಬೆನು ನಾನು 1ದುಷ್ಟಸಂಗವ ಬಿಡಿಸಿ ದುರ್ಬುದ್ದಿಯನು ಕೆಡಿಸಿ ಶಿಷ್ಟರೊಳು ತಂದು ನಿಲಿಸಿಕಷ್ಟಸಾಧನಗಳನು ಮುಟ್ಟಲೀಸದೆ ಸುಲಭ ನಿಷ್ಠೆಯಲಿ ಚಿತ್ತವಿರಿಸಿಹುಟ್ಟುಹೊಂದುಗಳನ್ನು ಕೊಟ್ಟು ಮೋಹಿಸುತಿರುವ ಪುಟ್ಟ ಫಲಗಳ ತೇಲಿಸಿಮುಟ್ಟಿ ನಿನ್ನಯ ಪದವನಿಟ್ಟು ಹೃದಯಾಂಬುಜದಲಿಷ್ಟಮೋಕ್ಷವ ತೋರಿಸಿ ನಿಲಿಸಿ 2ವಿದ್ಯವಿಸ್ತರವಾದರದ್ದುವದು ಗರ್ವದಲಿ ಬುದ್ಧಿ ನಿಲ್ಲದು ನಿನ್ನಲಿಇದ್ದು ವೃದ್ಧರ ಪಥದಿ ಹೊದ್ದಿ ಶುದ್ಧತ್ವವನು ಶ್ರದ್ಧೆ ಸೇರದು ನಿನ್ನಲಿಉದ್ದುರುಟುತನದಿಂದ ಬಿದ್ದು ವಾದದ ಮಡುಹವದ್ದು ಸುಕೃತವ ಕಾಲಲಿಇದ್ದ ನಿಜಸ್ಥಿತಿುವಗೆ ಸಿದ್ಧವಾಗದುಯೆಂದು ನಿರ್ಧರಿಸಿ ನೀನೆ ದಯದಿ ಇಲ್ಲಿ 3ಅನಿಮಿತ್ತ ಬಂಧು ನೀನೆಂಬುದನು ಫಲುಗುಣನು ಮನದೊಳೆಣಿಸಿದುದಿಲ್ಲವೆಅಣುಮಾತ್ರದುಪಕಾರ ಜನರಿಂದ ನಿನಗುಂಟೆ ಮನಕೆ ದೂರ ನೀನಲ್ಲವೆವನಜಭವ ದಿಕ್ಪಾಲ ಮನುಗಳೈಶ್ವರ್ಯಗಳು ನಿನಗೆ ಗಣನೆಗೆ ಬರುವವೆಇನಿತು ಬ್ರಹ್ಮಾಂಡಗಳ ನೆನದು ನಿರ್ಮಿಸಿ ಬಳಿಕ ಕ್ಷಣದೊಳಳಿಸುವದಿಲ್ಲವೆ ನಿಜವೆ 4ನಿನ್ನ ಭಜಿಸುವ ಭಾವವಿನ್ನುಂಟೆ ಜಡಮತಿಗೆ ಅನ್ಯವಿಷಯದಿ ಮೋಹಿಸೆತನ್ನ ಮರೆದತಿದುಃಖದುನ್ನ ತದ ಸಂಸಾರ ವೆನ್ನದೆನ್ನುತ ದುಃಖಿಸೆನಿನ್ನ ನೆನಯದೆ ಬಹಳ ಜನ್ಮವೇಗದ ನದಿಯಲುನ್ನಿಸುವ ಕರ್ಮ ಹೊದಿಸೆಭಿನ್ನ ಬುದ್ಧಿಯಲೊಂದಿ ತನ್ನ ತಾನರಿಯದಿರೆ ನಿನ್ನಿಂದ ಮುಕ್ತನೆನಿಸೆ ನಿಲಿಸೆ 5ಚಲಿಸದಂದದಿ ಮನವ ನಿಲಿಸಿ ನಿನ್ನೊಳು ಬಾಹ್ಯವಳಿವ ಬಗೆುಲ್ಲವಲ್ಲನಳಿನನಾಭನೆ ನೀನು ಸುಲಭನೇ ಯೋಗಿಗಳು ಬಳಲುವರು ಕಾಣರಲ್ಲನಿಲುವೆ ಮನದಲಿ ನೀನೆ ಸಲಹೆಂದು ಭಜಿಸಿದರೆ ಗೆಲರೆ ಸಂಸೃತಿಯನೆಲ್ಲತಿಳುಹಿ ಸುಲಭದ ದಾರಿಯೊಳಗೆನ್ನ ನೀನಿರಲು ಬಳಲುವಿಕೆುಲ್ಲವಲ್ಲಾ ಲಲ್ಲಾ 6ಬಿನುಗು ಭೋಗವನುಂಡು ಜುಣುಗಿ ಮತ್ತದರಲ್ಲಿ ಮನವೆರಗಿ ಮುಳುಗುತಿಹುದುತನುವಿನಭಿಮಾನದಲಿ ನೆನಹು ತಗ್ಗದು ಮತ್ತೆ ಕನಲಿ ಮುರಿದೇಳುತಿಹುದುಅನುವರಿಯದಂಧತಮದಲಿ ತಾನು ನೆರೆಹೊಕ್ಕು ಘನದುಃಖಬಡುತಲಿಹುದುಇನಿತವಸ್ಥೆಯಲಿರುವ ಮನಕೆ ಸಿಕ್ಕಿರಲೆನ್ನ ದಿನಕರನೆ ಕೈವಿಡಿವುದು ಸೆಳೆದು 7ಧ್ಯಾನ ಧಾರಣೆುಂದ ನಿನ್ನ ಮೂರ್ತಿಯ ನಿತ್ಯ ಮಾನಸದಿ ನಿಲಿಸಬೇಕುಧ್ಯಾನಾಂಗ ನಿಯಮಗಳನಭ್ಯಾಸವಂ ಮಾಡಿ ತಾನು ತಾನಾಗಬೇಕುಏನೊಂದ ಕಂಡರೂ ನಾಮರೂಪವ ಬಿಟ್ಟು ನೀನೆಂದು ನಿಲ್ಲಬೇಕುಏನೆಂಬೆನಿವನೆಲ್ಲ ನೀನೆ ಸಾಧಿಸಿಕೊಟ್ಟು ದೀನನನು ಸಲಹಬೇಕು ಸಾಕು 8ಪರಮ ಕರುಣಾನಿಧಿಯೆ ಪರಿಪೂರ್ಣ ಪರಮೇಶ ಪರಮಸಂವಿದ್ರೂಪನೇಶರಣಜನಸುರಧೇನು ದುರಿತಭೂಧರಕುಲಿಶ ಕರಿವರನ ರಕ್ಷಿಸಿದನೇಮರೆಯೊಕ್ಕೆ ನಿನ್ನಡಿಯ ಮರವೆಯನು ಪರಿಹರಿಸು ಅರಿವಿನೊಳು ಪೊಗಿಸು ನೀನೆತಿರುಪತಿಯ ನೆಲೆವಾಸ ವರದ ವೆಂಕಟರಮಣ ಅರವಿಂದದಳನೇತ್ರನೆ ಅಜನೆ 9ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರ ಕಾಯ ನಮಃ
--------------
ತಿಮ್ಮಪ್ಪದಾಸರು