ಒಟ್ಟು 1005 ಕಡೆಗಳಲ್ಲಿ , 96 ದಾಸರು , 782 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡಬೇಕೆಲೋ ಭಜನೆ ಮಾಡಬೇಕೆಲೊ ಪ ಮಾಡಬೇಕು ಭಜನೆ ಮನದಿ ಕೂಡಬೇಕು ಪ್ರಣವ ಘನದೀ ಈಡ ಪಿಂಗಳ ಯಿದರೊಳಗಿರುವ ನಾಡಿ ಭೇದಗಳನು ತಿಳಿದೂ 1 ಆರು ಮೂರುಯೆಂಬೊ ದಾರಿ ಮೀರಿನೋಡುಯಿರುವ ಶಿಖರ ತೋರಿಯಾಡುವಂಥಾ ಘಂಟೆ ಭೇರಿನಾದಗಳನು ತಿಳಿದೂ 2 ವರದ ರಂಗನಿರುವನರಿಯೊ ಧರಣಿ ಕನಕಪುರಿಯ ಕೋಟೆ ಗುರುವು ತುಲಶೀರಾಮದಾಸ ರರಿತುಯಿತ್ತ ಚರಣ ಭಜನೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಮಾಡಿದಫಲವನುಭವಿಸಣ್ಣ ನೀ ಒಲ್ಲೆಂದರೆ ಬೆನ್ನ ಬಿಡದಣ್ಣ ದೊರಕುವುದ್ಹ್ಯಾಗಣ್ಣ ಪ ಜತೆಯಿಲ್ಲದೆ ನೀ ಮೊದಲ್ಹುಟ್ಟಿ ಮತ್ತು ಜತೆಯಿಲ್ಲದ್ಹೋಗ್ವುದು ಮರೆತುಬಿಟ್ಟಿ ಸತಿಸುತರ್ಹಿತರೆಂದು ಮತಿಗೆಟ್ಟ ಮಂದ ಮತಿಯಾಗಿ ಸಂಸಾರ ತಿಳಿದಿ ಗಟ್ಟಿ ಗತಿಸುವ ದೇಹದ ಸ್ಥಿತಿ ವಿಚಾರಿಸದೆ ಸತತ ಒದ್ದಾಡಿದಸತ್ಯದೊಳಗೆ ಭ್ರಷ್ಟ 1 ಗಳಿಸಲು ತುಸು ಬೇಸರಲ್ಲದ್ಹೋಗಿ ಕೇಳಿದಳುಕಿ ಅಳುಕಿ ಜನರಿಗೆ ಬಾಗಿ ಅಳಿದುಪೋಗುವ ಕಾಸು ಹಣಕಾಗಿ ಕೆಟ್ಟು ಬಳಲಿಬಳಲಿ ದುಡಿದೆಲೆ ಗೂಗಿ ನಳಿನಾಕ್ಷನ ಪೂಜೆ ಒಮ್ಮೆ ಮಾಡೆನ್ನಲು ಅಳುಮೋರೆ ಮಾಡಿದಿ ತಲೆಬಾಗಿ 2 ಕೆಟ್ಟ ಕೃತ್ಯದಿ ನಿನ್ನ ವಯ ಕಳೆದಿ ಮನೆ ಗಿಷ್ಟಮಿತ್ರರು ಬರಲತಿ ನೊಂದಿ ಕೊಟ್ಟದ್ದು ಕೊಡಲಿಕ್ಕೆ ಸಿಟ್ಟಿಗೆದ್ದಿ ನೀ ಶಿಷ್ಟರ ಸಂಗಕೆ ದೂರಾದಿ ಇಷ್ಟದಾಯಕ ನಮ್ಮ ಶಿಷ್ಟ ಶ್ರೀರಾಮನಡಿ ಗಟ್ಟ್ಯಾಗಿ ಭಜಿಸದೆ ಕೆಟ್ಟ್ಹೋದಿ 3
--------------
ರಾಮದಾಸರು
ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ಪ ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು 1 ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು | ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ | ಸದಮಲನಾಗಿ ಸ್ನಾನಾದಿಯ ಮಾಡಿ ಮ ವಿಧಿ ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ2 ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ | ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ | ಕುಂದದೆ ಸೂಸುತ ಗೆಳೆಯರ ಒಡಗೂಡಿ | ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ | ಇಂದು ಸ್ಥಾಪಿಸಿ ತುತಿಸಿ 3 ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ| ಆನನ ಕೂಗುತ ಹಾಡುತ ಪಾಡುತ | ಧ್ಯಾನವ ಗೈವುತಲಿ | ಕಾಣಬಾರದಂತೆ ಪ್ರಜೆದೊಳಗೆ ತೋರಿ | ಮಗುವಿನಂತೆ ಶ್ರೀನಿವಾಸನ ನೆನಸಿ 4 ಕೂಡಿ ಸೋಗು ವೈಯಾರದಿ | ಕಾಲಲಿ ಗೆಜ್ಜೆಯ ಕಟ್ಟಿ | ವಲಯಾಕಾರ | ಮೇಲು ಚಪ್ಪಳೆಯಿಂದ | ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ | ಯಾಲಲಿ ಹರಿಯ ಸಂಕೀರ್ತನೆ ಕೀರ್ತಿಸಿ | ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ | ಶಾಲ ಭಕುತಿ ಒಲಿಸಿ 5 ಕಿರಿಬೆವರೊದಕ ಮೊಗದಿಂದಿಳಿಯಲು | ಉರದಲಿ ಇದ್ದ ದೇವಗೆ ಅಭಿಷೇಚನೆ | ಪರವಶವಾಗಿ ಮೈಮರೆದು ತಮ್ಮೊಳು ತಾವು | ಕರದು ತರ್ಕೈಸುತಲಿ | ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ | ಎರಡು ಭುಜವ ಚಪ್ಪರಿಸಿ ಏಕಾದಶಿ | ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ6 ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ | ಮಧ್ವರಾಯರೆ ಮೂರು ಲೋಕಕೆ ಗುರುಗಳು | ಸಿದ್ಧಾಂತ ಮುನಿ ಸಮ್ಮತಾ | ಮಲ ಮೂತ್ರವನು ಕ್ರಿಮಿವ ಮನವು | ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ 7 ಸಾಗರ ಮೊದಲಾದ ತೀರ್ಥಯಾತ್ರೆಯ ಫಲ | ಭೂಗೋಳದೊಳಗುಳ್ಳ ದಾನ ಧರ್ಮದ ಫಲ | ಆಗಮ ವೇದಾರ್ಥ ಓದಿ ಒಲಿಸಿದ ಫಲ | ಯೋಗ ಮಾರ್ಗದ ಫಲವೊ | ಜಾಗರ ಮಾಡಿದ ಮನುಜನ ಚರಣಕ್ಕೆ ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ 8 ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು | ಪೋಗಾಡದೆ ಸದಾಚಾರ ಸ್ಮøತಿಯಂತೆ ಅತ್ಯಂತ ಪಂಡಿತ ಪಾವನ್ನ | ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ | ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು | ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ | ನಿತ್ಯ ಬಿಡದೆ ಕಾವಾ 9
--------------
ವಿಜಯದಾಸ
ಮಾಡು ನೀ ಹರಿಯ ಭಜನಿ ಪ ಹರಿಯ ಭಜನಿ ಮಾಡು ಹಲವು ಯೋಚನೆಯ ಬಿಡು ಶರಣರೊಳಗೆ ಕೂಡು ಸಿರಿಧರನ ನೋಡು 1 ಹರಿಜನರನ್ನೇ ನೋಡಿ ಅವರ ಪಾದವು ಪಿಡಿ ಶರೀರ ಸಾಧ್ಯನಿಕೆ ಮಾಡಿ ಶರಣ ತತ್ವವುಪಡಿ 2 ಸಿಂಧುಶಯನ ಹರಿ ಎಂದು ಸ್ತುತಿಸೂತೇರಿ ದಂದಗಳನೆ ಮರಿ ದೇವರೆಯೆಂದು ಇರಿ 3 ಸುರಮುನಿ ವಂದ್ಯನಾ ಸುಗುಣ ವಿಲಾಸ ನಾ ಅನುದಿನ ಭಜಿಸಿ 4 ದೇಹ-----ವೆಂದೂ ದಿನಮಾನ ತಿಳಿದಂದೂ ಮಹ ಹೊನ್ನ ವಿಠ್ಠಲ ಎಂದೂ ----- 5
--------------
ಹೆನ್ನೆರಂಗದಾಸರು
ಮಾಧವ ಗೀತೆ ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ ಮಾಧವ 1 ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು ವರರ ವಚನ ಮಣಿಗಳನ್ನು ಮನದೊಳಾರಿಸಿ ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ ಮಾಧವ 2 ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ- ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು ಮನೆಯ ದಾಸಿ ಸುರನಿ ಮಾಧವ 3 ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ ಭೋಕ್ತ ಮಾಧವ 4 ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು ನೀನೆ ಧೃತಿಯು ನೀನೆ ಸ್ಮøತಿಯು ನೀನೆ ಮತಿಯು ಮಾಧವ 5 ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ ಮಾಧವ 6 ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು ಏನ ಬಲ್ಲೆನೈಯ ನಾನು ಜ್ಞಾನಪೂರ್ಣನೈಯ ನೀನು ಮಾಧವ 7 ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ ಮಾಧವ 8 ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ ನೀನೆ ಕೃಪೆಯಿನೊಲಿಯದಿರಲು ಜ್ಞಾನ ಬಾರದು ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ ಮಾಧವ 9 ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು ನಿತ್ಯ ನಿನ್ನ ಭಜಿಸುತಿಪ್ಪ ಮಾಧವ 10 ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು ಮಾಧವ 11 ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ ಮಾಧವ 12 ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ ಮಾಧವ 13 ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ ಮಾಧವ 14 ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ ಮಾಧವ 15 ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು ತರಣಿ ಮುಣಗ ದುಡಿದು ಬಡಿದು ಮಾಧವ 16 ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ ನರಕ ಭಾಗಿ ಪಾಮರಂಗೆ ನಿನ್ನ ನಾಮವು ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ ಮಾಧವ 17 ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು ಬಾರದವರಿಗೆಂದು ಕರುಣ ಘೋರತನದ ದನುಜರವರು ಶೌರಿ ಮಾಧವ 18 ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು ದಾಳಿ ಮಾಳ್ಪ ವಿಷಯಗಳನು ಹೂಳಿ ಜ್ಞಾನ ಭಕ್ತಿಯನ್ನು ಮಾಧವ 19 ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ ಮಾಧವ 20 ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ ಮಾಧವ 21 ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು ಮಾಧವ 22 ಉಂಡ ಮನೆಗೆ ಬಗೆವರೆರಡನವರು ಭಂಡರು ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ ಮಾಧವ 23 ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ ಮಾಧವ 24 ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು ನೋಡರೊಮ್ಮೆಗಾದರವರು ಬಡವರೆಂಬುದ ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು ಮಾಧವ 25 ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ ಮಾಧವ 26 ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು ಕಾಮಲೋಭ ಮೋಹಗಳನು ಬಿಡಲು ಬಾರದು ನಿತ್ಯ ಪರರ ಮಾಧವ 27 ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ ಮಾಧವ 28 ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು- ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು ದುರುಳ ವಿಷಯಗಳಿಗೆ ಮನವ ಮಾಧವ 29 ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ ಮಾಧವ 30 ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ ಮಾಧವ 31 ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ ಮುಂದ ನೊಂದನರಿಯೆ ಮಾಧವ 32 ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ
--------------
ಲಕ್ಷ್ಮೀನಾರಯಣರಾಯರು
ಮಾಧವಾ ನಿಮ್ಮ ನಾಮ ಸಾಲದೇ ಪ ಪರಗತಿ ಸುಖವನು ಸ್ಮರಿಸಲು ನಿನ್ನನಾ|| ಪರಿಪರಿ ತಪದಿಂದಾ ಚರಿಸುವ ದ್ಯಾತಕೆ ನಾ 1 ಕರಿಕಿರಿಯನ್ನಲು ಶರೆಯನು ಬಿಡಿಸಿದ| ಶರಣ ಪ್ರಹ್ಲಾದನ ದುರಿತದಿ ಕಾಯ್ದ2 ದ್ರೌಪದಿ ಸ್ಮರಿಸಲು ಆಪತ್ತ ಹರಿಸಿದ| ಆ ಪತಿತ-ಜಮಿಳ ಪಾಪದಿ ತರಿಸಿದ 3 ನೆನೆಯಲು ಪಿಂಗಳಾ ಕ್ಷಣದಿ ಗತಿಯ ಕೊಟ್ಟಾ| ಬಿನುಗು ಮಂಡೂಕನ ವಿಮಾನದಿ ಮೆರೆಸಿದಾ4 ದುರುಳನ ಕೈಯಿಂದ ಹರಣಿಯ ಕಾಯಿದಾ| ಗುರಿಯಾ ತಪ್ಪಿಸಿ ಸೆರೆ ಹೊರೆದ ಕಪೋತಕ5 ಹಲವು ಸಾಧನದಿಂದ ಬಳಲುವ-ದ್ಯಾತಕ| ತಿಳಿದವ ಬೇಡಿದ ಫಲವನೇ ಕೊಡುತಿಹ 6 ತಂದೆ ಮಹಿಪತಿ ನಂದನ ಸಾರಥಿ| ಎಂದೆಂದು ನನಗಿದೆ ಛಂರದಿ ಕುಡು ಕಂಡ್ಯಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾನವ ನಿನ್ನಾ | ಪಡೆದು ಕೊ ಸದ್ಗತಿಯನು ಪ ತಡಿಯದೇ ಸದ್ಗುರು ಅಡಿಗಳ ಪೂಜಿಸಿ | ಒಡನೆ ಭವಾಂಭವಾಂಬುಧಿ ಥಡಿಯವ ಸಾರೆಲೋ ಅ.ಪ ಪತ್ರೇಂದ್ರವಾಹನನು | ಮಣಿಗಣ ಸೂತ್ರದಂದದಿ ಜೀವನು | ಚಿತ್ರ ವಿಚಿತ್ರದಲಿ ಅಡಿಸುವ | ಗು | ಣತ್ರಯ ವಾದಲಿ | ಕಳತ್ರ ಸುಮಿತ್ರ ಸಮಂಧ | ಧತ್ರಿಲಿ ಮಾಯ ಚರಿತ್ರವಿದೆಂದು 1 ತಾನಾರು ತನುವಾರದು ತನುವಿನ | ತಾನೀ ಸಂಮಂಧವಾರದು | ಜ್ಞಾನಿಗಳನು ಮತದಿ ತಿಳಿದು ನೋಡು | ಸ್ವಾನುಭವದ ಬೋಧದೀ | ಹಾನಿ ಯಶ _ ಸುಖ ಮಾನಾಪಮಾನವು | ಮಾನವರಿಗೆ ಪ್ರಾಚೀನ ಫಲೆಂದು 2 ಹಿಂದಾದ ನೆನಹಿಸದೇ ವಾಸನೆಗಳ | ಮುಂದೇನು ಕಾಮಿಸದೇ | ಕ | ನಸಿನಾನಂದ ವಿದೆಂದು ಭಾವಿಸೀ | ತಂದೆ ಮಹಿಪತಿ ಕಂದಗ ಸಾರಿದ | ದ್ವಂದ್ವಗೆಲಿದು ಗೋವಿಂದ ನೆನೆಯುತ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾನವ ನೀನು ತಿಳಿ ಮಮಕುಲವ ಪೇಳುವೆನು ತಿಳಿದು ಭವದ ನೆಲೆ ಪ ಒಳಹೊರಗೊಂದಾಗಿ ನಳಿನಿನಾಭನ ಪ್ರೇಮ ಗಳಿಸುವ ಕುಲ ನಂದು ಅ.ಪ ಸೊಲ್ಲು ತಿಳಿಯುವಂಥ ಖುಲ್ಲ ಜನರ ಬಳಿ ನಿಲ್ಲದಂಥ ಬಲ್ಲಿದ ಕುಲ ನಂದು 1 ಹರಿಯ ಜರೆಯುವಂಥ ಪರಮ ದುರುಳರನೊದೆವಂಥ ಹರಿಹರಿಯೆಂದೆಂಬ ವರಸುಧೆಯಮೃತಭರಿತ ಪರಲೋಕದ ಅರಿವಿನ ಕುಲನಂದು 2 ತಾಮಸವನು ತ್ಯಜಿಸಿ ದಾಸರ ಪ್ರೇಮವನು ಬಯಸಿ ಭೂಮಿಯೊಳು ಶ್ರೀರಾಮರಹೀಮೆಂದು ನೇಮಿಸಿಕೊಂಡ ನಿಸ್ಸೀಮಕುಲವು ನಂದು 3
--------------
ರಾಮದಾಸರು
ಮಾನವ ಪ ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಅ ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊಅನ್ನದಿಂದ ಬಂದ ಕಾಮ ನಿನ್ನದೇನೆಲೊಕರ್ಣದಿಂದ ಬರುವ ಘೋಷ ನಿನ್ನದೇನೆಲೊನಿನ್ನ ಬಿಟ್ಟು ಹೋಹ ದೇಹ ನಿನ್ನದೇನೆಲೊ1 ಹಲವು ಜನ್ಮದಿಂದ ಬಂದಿರುವನು ನೀನೆಲೊಮಲದ ಗರ್ಭದಲಿ ನಿಂದಿರುವನು ನೀನೆಲೊಜಲದ ದಾರಿಯಲಿ ಬಂದಿರುವನು ನೀನೆಲೊಕುಲವು ಜಾತಿ ಗೋತ್ರವುಳ್ಳವನು ನೀನೆಲೊ 2 ಕಾಲಕರ್ಮ ಶೀಲ ನೇಮ ನಿನ್ನದೇನೆಲೊಬಾಲವಿದ್ಯೆ ಬಯಲ ಮಾಯೆ ನಿನ್ನದೇನೆಲೊಕೀಲು ಜಡಿದ ತೊಗಲಗೊಂಬೆ ನಿನ್ನದೇನೆಲೊಲೋಲ ಆದಿಕೇಶವನ ಭಕ್ತನಾಗೆಲೊ 3
--------------
ಕನಕದಾಸ
ಮಾನವನ್ಯಾಕದ್ಯೋ ಎಲೊ ಎಲೋ ಮಾನವನ್ಯಾಕದ್ಯೋ ಪ ಮಾನವನ್ಯಾಕದ್ಯೋ ಹೀನನೆ ಥೂಥೂ ಮಾನವಜನುಮದ ಖೂನವ ತಿಳಿಯದೆ ಅ.ಪ ನರನಾಗವತರಿಸಿಬಂದಿಹ್ಯ ಪರಿಯನು ಶೋಧಿಸಿ ಅರುಹುಗೂಡಿ ಸಿರಿವರನ ಕಥಾಮೃತ ಪರಮಭಕ್ತಿಯಿಂದ ಶ್ರವಣಮಾಡದ 1 ತನುನಿಜವಲ್ಲೆನಿಸಿ ಸತತದಿ ತನುಧನರ್ಪಿಸಿ ಘನತರಭಕುತಿಲಿ ವನಜನಾಭನ ಘನಸತ್ವಚರಿತವನು ಮನನ ಮಾಡದ 2 ಮಂದಮತಿಯ ಹರಿದು ಜಗಕೆ ಬಂದ ಕುರುಹು ತಿಳಿದು ಸಿಂಧುಶಯನ ಮಮತಂದೆ ಶ್ರೀರಾಮನ ಬಂಧುರಂಘ್ರಿ ನಿಜಧ್ಯಾಸವ ರುಚಿಸದ 3
--------------
ರಾಮದಾಸರು
ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು ಪ ಜ್ಞಾನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಅ.ಪ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಈ ಮನಸ್ಸು ಇಟ್ಟು 1 ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ2 ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ | ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ || ತವಕ ಬೀಳದಲೆ ಪೂಜೆ ವಿಧಾ | ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ 3 ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಿಂದ ಬಳಿಕ ಮಾಧÀವರಿಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ 4 ದೋಷರಾಶಿಗೆ ದ್ವೇಷನಾಗಿ ಈ ಶರೀರವÀ ಘಾಸಿಮಾಡದೆ | ಪಾದ || ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ | ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು5
--------------
ವಿಜಯದಾಸ
ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು ಬಾರದೆ ಬಿಡದಲ್ಲ ಪ ಜಗಕೆ ಕಾರಣ ದೇವ ತಾನಿರಲುಬೊಗಳಿಕೊಂಬೆ ಭೇದವಿಲ್ಲೆಂದುತೆಗೆವನು ಯಮ ಬೆನ್ನ ಚರ್ಮ ಇದುನಗೆಯಲ್ಲ ಕೇಳೋ ತಿಳಿಯೊ ದುಷ್ಕರ್ಮ 1 ಭೇದವಿಲ್ಲೆಂದು ತಿಳಿದು ನೀಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊಸಾಧಿಸಿ ನೋಡಲು ನಿನಗೆ ಇಷ್ಟುಬದುಕುಂಟಾದರು ಉಸುರಲಿನ್ಯಾಕೋ 2 ಅಕ್ಕತಂಗಿಯರಿರಲು ನೀನುರೊಕ್ಕವಿಕ್ಕಿ ಮದುವೆ ಆಗುದ್ಯಾಕೊಚಿಕ್ಕ ತಂಗಿತಾಯಿ ಮೊದಲು ನಿನ್ನಲೆಕ್ಕದಲ್ಲಿ ನೋಡಲು ಒಂದಲ್ಲವೇನೋ3 ಸಂಕರ ಮತಕೆ ನೀ ಹೊಂದಿ ಪಂಕದೊಳು ಬೀಳಬೇಕಲ್ಲೊಸಂಕಟಗೊಳಗಾದಿಯಲ್ಲ ನಿನ್ನಬಿಂಕವ ಮುರಿವರು ಯಮನವರಲ್ಲೊ4 ಇನ್ನಾದರು ಭೇದಮತವನುಚೆನ್ನಾಗಿ ತಿಳಿಯೋ ರಂಗವಿಠಲನುತನ್ನ ದಾಸ್ಯವನು ಕೊಟ್ಟುಉನ್ನತ ಪದವೀವನು ನಿನಗೆ 5
--------------
ಶ್ರೀಪಾದರಾಜರು
ಮಾಯಾ ಕಾರ್ಯವಾಕೆಯೆ ಮಿಥ್ಯವೂಈ ರೀತಿುಂದಲಾತ್ಮನಿಛ್ಛೆಯಲಿದುಸೇರಿದಂತಿಹುದಾಗಿ ಭ್ರಾಂತಿಯು ಜಾರುವನ್ನೆಗ ಪೊಳೆಯಲು1ಮುನ್ನ ನೀ ಬಂದೆನೆಂಬಲ್ಲಿ ಪರವiನುಭಿನ್ನವಿಲ್ಲದೆ ಪೂರ್ಣವಾಗಿರಲಿನ್ನು ನಿನಗೆಡೆಯಾವದೂಅನ್ಯ ವಿಲ್ಲದನನ್ಯನೀಶನೆ ನಾನುನಿನ್ನ ಕಾರ್ಯದ ನೇತ್ರಮಾತ್ರಕ್ಕುನ್ನತ ಕೃತಿಯಾಗಿರೇ 2ಮರುಭೂಮಿಯೊಳು ಮುಸುಕೆ ಮಿತ್ರನ ಕಾಂತಿಕೆರೆಯ ನೀರಿನ ಹಾಗೆ ಕಾಣುತಲಿರಲು ನೋಡಿದರುದಕವೆಬರಿಯ ಚೌಳೆಂತಾ ಪರಿಯು ನಿನ್ನಯ ತೋರ್ಕೆನಿರತ ಉಂಟೆಂಬಂತೆ ನಿನ್ನಯ ಮರುಳಿನಿಂ ಮುಂದಿರುತಿರೆ 3ಹೊಳೆಯಲಿಲ್ಲವು ಹುಸಿಯಾಗಿ ನೀ ಮುನ್ನಬಳಿಕ ನಿನ್ನೊಳು ಬದ್ದನೆಂಬೀ ಬಗೆಯು ತನಗೆಂತಪ್ಪುದೂತಿಳಿದು ನೋಡಲು ತಾನೊಬ್ಬನಾತ್ಮನುಕಳೆದು ಕೂಡುವ ಮಾತು ಮಾತ್ರವೆಯಳವಿಗೊಂಡಿರವಿಷ್ಟಕೆ 4ಅರಿವಿನಾ ಘಟ್ಟಿಯಾಗಿಹೆ ನಾ ನಿತ್ಯವರಿವು ಮರವೆಗಳೆಂದು ತೋರ್ದರು ಕರಣಧರ್ಮಗಳಲ್ಲದೆಬೆರದು ಬೇರಾಹ ಬಗೆಯಂದಿಗಿಲ್ಲವುತಿರುಪತಿಯ ಶ್ರೀ ವೆಂಕಟೇಶನೆ ತರುಬಿಕೊಂಡಿರೆ ವಿಶ್ವವಾ 5ಕಂ||ನುಡಿಯಲು ಜೀವನು ಕೋಪದಿಕಿಡಿಗೆದರುವ ಕಂಗಳಿಂದಭಿಮಾನನ ಬಲದಿಂತಡೆಯದೆ ತನು ಜೀವನನಾರ್ಭಟಿಸುತ ವಾದಿಸಿದುದ ಪುಸಿತನ ಬಂತೆಂಬುದರಿಂ
--------------
ತಿಮ್ಮಪ್ಪದಾಸರು
ಮಾಯಾ ಭ್ರಮಿತನಾದ ಮೂಢನಪರಾಧ ಶತವನು ಪಗುಣ ಮೂರರೊಳು ಬದ್ಧನಾಗಿ ಮತ್ತೆಗುಣಕಾರ್ಯ ವಿಷಯಂಗಳೊಳು ಸಕ್ತನಾಗಿಗುಣ ಹತ್ತರಭಿಮಾನಿಯಾಗಿ ುಪ್ಪಗುಣಹೀನನಿಗೆ ಜ್ಞಾನ ದೊರಕೊಳ್ಳದಾಗಿ 1ಪುಣ್ಯ ಪಾಪ ಮಿಶ್ರವೆಂಬ ಕರ್ಮಜನ್ಯವಾದ ಸ್ಥೂಲದೇಹ ತಾನೆಂಬಭಿನ್ನಮತಿಗೆ ದೊರಕೊಂಬ ಜ್ಞಾನವಿನ್ನುಂಟೆ ನಿರ್ಣೈಸೆ ಸುಗುಣ ಕದಂಬ 2ಚಂಚಲವಾಗಿಪ್ಪ ಮನವು ಅಲ್ಲಿವಂಚನೆುಂ ಮಾಳ್ಪ ಸ್ತುತಿ ಪೂಜೆ ಜಪವುಸಂಚಿತವಾುತಘ ವ್ರಜವು ಹೀಗೆವಂಚಿಪ ಮಾಯೆಯ ಗೆಲಲಾರಿಗಳವು 3ಕರ್ಮಕಲಾಪವ ಕಳಿದು ಚಿತ್ತನಿರ್ಮಲನಾಗಿ ಬ್ರಹ್ಮವ ನೆರೆ ತಿಳಿದುಹಂಮಳಿದುಳಿವದೆಲ್ಲಿಯದು ನೀನುಸುಮ್ಮನಿರದೆ ಕಾಯೆ ಸುಲಭವಾಗಿಹುದು 4ಬಂಧನವಿದ ಪರಿಹರಿಸು ಕೃಪೆುಂದಲಿ ಭವದಿಂದಲೆನ್ನನುದ್ಧರಿಸು ತಂದೆ ನೀ ತಿರುಪತಿಯರಸು ಲೋಕಬಂಧು ಶ್ರೀ ವೆಂಕಟರಮಣ ನಿರೀಕ್ಷಿಸು 5ಓಂ ವಿಶ್ವರೂಪ ಪ್ರದರ್ಶಕಾಯ ನಮಃ
--------------
ತಿಮ್ಮಪ್ಪದಾಸರು
ಮಾಯಾಮಯ ಜಗವೆಲ್ಲ ಇದ- ರಾಯತ ತಿಳಿದವರಿಲ್ಲಪ. ಕಾಯದಿಂ ಜೀವನಿಕಾಯವ ಬಂಧಿಸೆ ನೋಯಿಸುವಳು ಸುಳ್ಳಲ್ಲಅ.ಪ. ತಿಳಿದು ತಿಳಿಯದಂತೆ ಮಾಡಿ ಹೊರ- ಒಳಗಿರುವಳು ನಲಿದಾಡಿ ಹಲವು ಹಂಬಲವ ಮನದೊಳು ಪುಟ್ಟಿಸೆ ನೆಲೆಗೆಡಿಸುವಳೊಡಗೂಡಿ 1 ಯೋಷಿದ್ರೂಪವೆ ಮುಖ್ಯ ಅ- ಲ್ಪಾಸೆಗೆ ಗೈವಳು ಸಖ್ಯ ದೋಷದಿ ಪುಣ್ಯದ ವಾಸನೆ ತೋರ್ಪಳು ಜೈಸಲಾರಿಂದಶಕ್ಯ2 ಕರ್ತ ಲಕ್ಷ್ಮೀನಾರಾಯಣನ ಭೃತ್ಯರ ಕಂಡರೆ ದೂರ ಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ- ರಾರ್ಥಕೆ ಕೊಡಳು ವಿಚಾರ3
--------------
ತುಪಾಕಿ ವೆಂಕಟರಮಣಾಚಾರ್ಯ