ಒಟ್ಟು 800 ಕಡೆಗಳಲ್ಲಿ , 94 ದಾಸರು , 732 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಘ್ನೇಶ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ದುರಿತ | ಉದ್ಧರಿಸೊ ಇವನಾ ಅ.ಪ. ಮೂಲ ಕಾರಣ ಜಗಕೆ | ಪಾಲಾಬ್ಧಿಶಯ ನಿನ್ನ ಲೀಲೆಗಳ ತೋರುತ್ತ | ಸಲಹೊ ಇವನಾಕೀಲಾಲ ಜಾಸನುತ | ಮಾಲೋಲ ಶ್ರೀ ಹರಿಯೆವ್ಯಾಳ್ಯ ವ್ಯಾಳ್ಯಕೆ ಪಾಪ | ಜಾಲಗಳ ಹರಿಸೋ 1 ಆಪ್ತ ಸತಿಸುತರಲ್ಲಿ | ವ್ಯಾಪ್ತ ನಿಹ ಹರಿಯೆಂದುಸೂಕ್ತೋಪಚಾರಗಳ | ಪ್ರಾಪ್ತಿಗೈಸುತಲೀ |ಮೌಕ್ತಿಕೋ | ಪಾಯವೇ | ದೋಕ್ತಸಮನಿಸುತಕೀರ್ತಿಕೊಡಿಸಿವಗೆ ಶ್ರೀ | ಕಾಂತ ಮೂರುತಿಯೇ2 ಪಾಂಚ ಭೌತಿಕ ದೇಹ | ಪಂಚತ್ವ ಪಡೆವುದನೆಸಂಚಿಂತನೆಯ ಕೊಟ್ಟು | ಪಂಚ ಪಂಚಾತ್ಮಾಮುಂಚೆ ತಿಳಿಸಿವಗೆ ಸ | ತ್ಪಂಚ ಭೇದ ಜ್ಞಾನವಾಂಛಿತಾರ್ಥದನಾಗೊ | ಅಂಚೆವಹಪಿತನೇ 3 ನಂದ ಮುನಿ ಮತದ ಮಕ | ರಂದ ಉಣಿಸುತ ಇವಗೆಸಂದೇಹ ಕಳೆದು ಆ | ನಂದಗಳ ನೀಯೋಇಂದಿರಾರಾಧ್ಯ ಪದ | ಮಂದಾಕಿನೀ ಜನಕಕಂದನನು ಕಾಪಾಡು | ಯೆಂದು ಪ್ರಾರ್ಥಿಸುವೇ 4 ಕಾಲ | ಯಾವ ಸಮಯದಲಿರಲಿದೇವತವ ಸಂಸ್ಮರಣೆ | ಭಾವದಲಿ ಮಾಳ್ವಾಭಾವ ಪಾಲಿಸುತಿವಗೆ | ನೀವೊಲಿಯ ಬೇಕೆಂದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಿಜಯರಾಯರ ಪಾದವ ನೀ ಮಾನವ ಪ ವೃಜಿನವೆಲ್ಲವ ಕಳೆದು ಕರುಣದಿ | ಅಜನನಯ್ಯನ ತೋರುವ ಅ.ಪ. ಜಗಕೆ ಹರಿ ಪರನೆಂದು ತಾ ಭುಜ ಯುಗಗಳೆತ್ತಿ ಸಾರಿದಾ || ಭೃಗು ಮುನಿ ಇವರೆಂದು ಭಾವಿಸಿ ಮಿಗೆ ಸುಭಕ್ತಿಲಿ ಸರ್ವದಾ 1 ವರಹಜಾ ತಟದಲ್ಲಿ ಚೀಕಲ | ಪರವಿಗ್ರಾಮದಿ ಜನಿಸಿದ || ಪರಿಪರಿಯಲನುಭವಿಸಿ ಬಡತನ ಭವ ವೈರಾಗ್ಯ ಧರಿಸಿದ 2 ಭಕುತಿ ಪೂರ್ವಕವಾಗಿ ಬಿಡದಲೆ | ಸಕಲಕ್ಷೇತ್ರವ ಚಲಿಸಿದಾ || ಮುಕುತಿ ಸುಖದಾತಾರನಾದ | ಲಕುಮಿ ರಮಣನ ತುತಿಸಿದಾ 3 ತಾ ಸುಸ್ವಪ್ನದೊಳೊಂದು ದಿನ ಶ್ರೀ ವ್ಯಾಸ ಕಾಶಿಗೆ ತೆರಳಿದಾ || ವಾಸುದೇವನ ಕಂಡು ನಮಿಸಿ ಲೇಸು ವರ ಸ್ವೀಕರಿಸಿದಾ 4 ಪುರಂದರಾರ್ಯರ ಕವನಗಳು ಮೂರೆರಡು ಲಕ್ಷಕೆ ತ್ರಯಪದ ಕೊರತೆ ತಾ ಪೂರೈಸಿದ 5 ಬಾಲೆಯೋರ್ವಳು ಬಂದು ಪ್ರಾರ್ಥಿಸೆ ಕೇಳುತಾಕೆಯ ಪತಿಯನು ಕಾಲ ಪಾಶವ ಬಿಡಿಸಿ ಕರುಣದಿ ಪಾಲಿಸಿದ ಸುಮಹಾತ್ಮರ 6 ಶ್ರೀಮನೋಹರ ಶಾಮಸುಂದರ ನಾಮ ಮಹಿಮೆಯ ವಿಧ ವಿಧ ಭೂಮಿ ಸುಮನಸ ಸ್ತೋಮಕನುದಿನ ಪ್ರೇಮದಿಂದಲಿ ಬೀರಿದ 7
--------------
ಶಾಮಸುಂದರ ವಿಠಲ
ವಿಠ್ಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ ಶ್ರೀಲೋಲ ಪ ಗೊಟ್ಟು ಸಲಹೊ ಜಗಜಟ್ಟಿ ಪಂಢರಿರಾಯ ಅಪ ಯದುವಂಶೋದ್ಭವ ಕೇಶವ ಹೇ ಏಕಮೇವ ಮಧುವೈರಿ ಮಹಾವೈಭವ ಸದಮರಾನಂದ ಸ್ವಭಾವ ಮತ್ಕುಲ ದೈವ ಇನ ಬಾಂಧವ ವಿಧಿನದಿಪಿತ ನಾರದ ಮುನಿ ಸನ್ನುತ ವೈರಿ ಸದಮಲಗಾತುರ ಪದೆ ಪದೆಗೆ ಸಂಪದವಿಯ ಬಯಸುವ ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ1 ನಿತ್ಯ ಪ್ರಭಾವ ಪತಿತಪಾವನ ಸುರ ಜೀವ ಅತಿಶಯ ಲೀಲಾಮಾನವ ನರಕಂಠೀರವ ಚ್ಯುತಿ ಪೂರಾನಾದಿ ಗುರುಗೋವ ರತಿಪತಿಪಿತ ಶತಕ್ರತು ಸುತ ಸಾರಥಿ ಪಥ ಹಿತವಾಗಿ ತೋರೊ ಮಾ- ರುತ ಮತ ಶ್ರಿತಜನ ಚತುರರ ಸತತ ಸಂ - ದಿತಿಸುತ ಮಥನ 2 ಶರಣು ಶರಣು ಸರ್ವೇಶ ಇಟ್ಟಿಗೆವಾಸ ದುರುಳರ ಸಂಗ ವಿನಾಶ ಪರಮ ಪುರುಷ ವಿಲಾಸ ನಿರವಕಾಶ ವರಪ್ರದ ಪೂರ್ಣಪ್ರಕಾಶ ಮೊರೆಹೊಕ್ಕೆನೊ ನಿನ್ನ ಚರಣ ಸರಸಿಜವ ಹರಿಯನ್ನೊಳಗಿಪ್ಪ ಮರಪೆ ಕಳೆದು ನಿನ್ನ ಸ್ಮರಣೆ ಮಾಡುವಂತೆ ಕರುಣದಿಂದಲಿ ನೋಡುಧೊರೆ ವಿಜಯವಿಠ್ಠಲ ಪುರಂದರಪ್ರಿಯ 3
--------------
ವಿಜಯದಾಸ
ವಿಠ್ಠಲನ ಮಂತ್ರ ಜಪಿಸೋ ಎಲೆ ಮನವೆ ಕುಟಿಲವನು ಕಳೆದು ಬಲು ಕುಶಲತನವೀವದು ಪ ಆಗಮ ಸಿದ್ಧಾಂತದಲ್ಲಿ ಪೊಳೆವ ಮಂತ್ರ ಯೋಗಿಗಳ ಮನಕೆ ಬಲು ಸೌಮ್ಯ ಮಂತ್ರ ಸಾಗರವು ಮಥಿಸಲು ಉದಿಸಿ ಪೊರೆದ ಮಂತ್ರ ಯೋಗಿಗಳು ನೆನೆದರೆ ಸವಿಯಾದ ಮಂತ್ರ 1 ಸುಧಾಮಗೆ ವೊಲಿದು ಸೌಭಾಗ್ಯವಿತ್ತ ಮಂತ್ರ ಕದನದೊಳು ಫಲ್ಗುಣನ ಕಾಯಿದ ಮಂತ್ರ ಮಧುರಾಮೃತವಾಗಿ ಜಿಹ್ವೆಗೆ ಒಪ್ಪುವ ಮಂತ್ರ ಯದುಕುಲಾಗ್ರಣಿಯಾದ ವಿಶ್ವಮಂತ್ರ 2 ಹಾರೈಸಿದವರಿಗೆ ವರವನೀವ ಮಂತ್ರ ಕಾರುಣ್ಯನಿಧಿ ವಿಜಯವಿಠ್ಠಲರೇಯನ್ನ ಮಂತ್ರ ಸೇರಿದವರನ್ನ ಬಿಡದೆ ಪೊರೆವ ಮಂತ್ರ 3
--------------
ವಿಜಯದಾಸ
ವಿಷಯಾಸೆ ಬಿಡಲೊಲ್ಲದೋ ದೇವ ಪ. ವಸುದೇವಸುತ ನಿನ್ನ ವಶವಾಗೋತನಕ ಅ.ಪ. ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ 1 ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆÀಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ2 ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ3 ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] 4 ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ 5
--------------
ವಾದಿರಾಜ
ವಿಷ್ಣು ತೀರ್ಥರಪಾದ | ನಿಷ್ಠೆಯಿಂದಲಿ ಭಜಿಸೆಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ ಪ ಜಿಷ್ಣುಸಖ ಶ್ರೀ | ಕೃಷ್ಣ ಭಕುತರುಶ್ರೇಷ್ಠ ದಂಪತಿ | ಗರ್ಭಜಾತರುಸುಷ್ಠಜಯಮುನಿ | ಸೇವೆಯಿಂದಲಿಇಷ್ಟವರದಿಂ | ದುದಯರಾದರು 1 ಬಾಲ್ಯದಲ್ಲು ಪನೀತ | ಆರ್ಯರಿಂದು ಪದಿಷ್ಟಆರ್ಯ ಐಜೀವರ್ಯ | ಗುರುಕುಲವಸಿತ |ಕ್ರೌರ್ಯ ಹರಿಜಪ | ದೈರ್ಯದಿಂದಲಿವೀರ್ಯವತ್ತರ | ಜಪಿಸಿ ಗುರುಸುತವರ್ಯನಪಮೃತಿ | ಕಳೆದು ಗುರುವಿಂಮಾನ್ಯವಂತನು | ಎನಿಸಿ ಮೆರೆದ 2 ಮಲದ ಅಪಹಾರಿಯ | ಜಲಪ್ರವಾಹದಿ ನಿಂದುಘಳಿಗೆ ಇರಲು ಉದಯ | ವಲಿಸಿ ಮಧ್ವವಿಜಯಒಲಿಮೆಯಿಂದಲಿ | ಸೂರ್ಯನಘ್ರ್ಯವಕಾಲಮೀರದೆ | ತಾನು ಕೊಡುತಲಿಮೂಲಗ್ರಂಥವ | ತಿಳಿಯ ಬೋಧವಇಳೆಯ ಸುರರಿಗೆ | ಪೇಳ್ದ ಮಹಿಮಾ 3 ಅವಧೂತ ಚರ್ಯದಿ | ಅವನಿಯೊಳ್ಚರಿಸುತ್ತಭುವನ ಪಾವನ ಸುಧೆ | ದಿವಿಜರಿ ಗುಣಿಸೀ |ಶ್ರವಣ ಗೈಸುತ | ಸುಧೆಯ ಗ್ರಂಥವಅವನಿಯೊಳು | ತತ್ವಾರ್ಥಬೋಧಿಸಿಪ್ರವರ ಭೂಸುರ | ಮುಕ್ತಿಮಾರ್ಗದಹವಣೆ ಗೈದಿಹ | ಭುವಿಯದಿವಿಜ 4 ವನವನಚರಿಸುತ್ತ | ಮುನಿವಳ್ಳಿಯಲಿಮುನಿಯೋಗ್ಯವೆನಿಸುವ | ವಾನಪ್ರಸ್ಥಾಶ್ರಮದಿ |ಘನಸುವ್ರತವನೆ | ಅಸಿಯಪತ್ರದಿಮನವನಿರಿಸುತ | ಗಣ್ಯನಾದೆಯೊಅನಘ ಹರಿಕಾ | ರುಣ್ಯ ನಿನ್ನಲಿಗಣನೆಗೈಯ್ಯಲು | ಮನುಜಗಸದಳ 5 ಯತಿ ಸತ್ಯವರರಿಂದ | ಯತಿ ಆಶ್ರಮವ ಪೊಂದಿಕ್ಷಿತಿಯ ಸಂಚರಿಸುತ್ತ | ಅನ್ನಾಳಿಗಾಗಮೀಸೀ |ಹಿತನು ದೇಶಾದಿ | ಪತಿಯ ರೋಗವಹತಗೈದು ಅನ್ನವ | ಜೊತೆಲುಂಬುವಯತನ ಸಾಧಿತ | ಪ್ರಾಪ್ತಕ್ಷಾಮವಹತವ ಗೈಸಿದೆ | ರಮೆಯನೊಲಿಸೀ 6 ಬೋಧ | ಗ್ರಂಥಗಳ್ರಚಿಸೀ |ಮೋದದಿಂ ವೃಂದಾವನಸ್ಥರುಸಾದು ಸೇವೆಗೆ ಅಭಯನೀಡುತನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತರಾಗಿಹ7
--------------
ಗುರುಗೋವಿಂದವಿಠಲರು
ವೃಂದಾವನದೊಳು ಶೋಭಿಸುತಿರುವಳು ಸುಂದರ ಶ್ರೀ ತುಳಸಿ ಪ ನಂದನಂದನ ಗತಿ ಪ್ರಿಯಳೆಂದೆನಿಸುತ ಭವ ಬಂಧವ ಬಿಡಿಸುತ ಅ.ಪ ನಿತ್ಯವು ಪ್ರಾತಃಕಾಲದೊಳೆದ್ದು ಪವಿತ್ರ ಚಿತ್ತದಲಿ ಭಕ್ತಿಯಲಿ ಸ್ತೋತ್ರವ ಗೈಯುತ ಸುತ್ತಿ ಪ್ರದಕ್ಷಿಣೆ ಮತ್ತೆ ನಮಿಪರಘ ಬತ್ತಿಸಿ ಸಲಹುತ 1 ತುಳಸಿ ವೃಂದಾವನ ಮಹಿಮೆಯ ಮನದಲಿ ನಿಲಿಸಿ ಸೇವಿಸುವ ಸಜ್ಜನರ ಕಲಿದೋಷಗಳನು ಕಳೆದು ಸತತ ಶ್ರೀ ನಿಲಯನÉೂಳ್ ಭಕ್ತಿಯ ಕೊಡುವೆನೆಂದೆನುತ 2 ತುಳಸಿ ದಳದಿ ಶ್ರೀ ಕರಿಗಿರೀಶನ ವಿಲಸಿತ ಪೂಜೆಯ ಮಾಡುವರ ಸುಲಲಿತ ಸತ್ಪಥದೊಳು ನಡೆಸುತ ನಿ ರ್ಮಲಮತಿ ಕರುಣಿಸಿ ಸಲಹುವೆನೆನ್ನುತ 3
--------------
ವರಾವಾಣಿರಾಮರಾಯದಾಸರು
ವೆಂಕಟ ಕೃಷ್ಣವಿಠಲ | ಲೆಂಕನನ ಸಲಹೋ ಪ ಪಂಕಜೋದ್ಭವ ಪಿತನೆ | ವೆಂಕಟೇಶಾ ಅ.ಪ. ಅಬುಜ ಜಾಂಡೋದರನೆ | ಶಬರಿ ಎಂಜಲನುಂಡೆಕುಬುಜೆಗಂಧಕೆ ಒಲಿದು | ಸದ್ಗತಿಯನಿತ್ತೆಇಭವರದ ನೀನಾದೆ | ಕುಲಶೀಲನೆಣಿಸದಲೆವಿಭುವೆ ಈ ಭಕುತಂಗೆ | ವೈಭವವ ತೋರೋ 1 ಮಧ್ವಮತ ತತ್ವದಲಿ | ಶುದ್ಧ ಭಕುತಿಯ ತೋರ್ಪಶ್ರದ್ಧಾಳು ಎನಿಸಿಹನು | ಬುದ್ಧಿ ಪೂರ್ವಾಸಿದ್ಧಾಂತ ತಾತ್ಪರ್ಯ | ಬುದ್ಧಿಗೆಟಕೂವಂತೆಉದ್ಧರಿಸ ಬೇಕಿವನ | ಅಬ್ದಿಜೆಯ ರಮಣ 2 ನೀಚೋಚ್ಚ ತರತಮದ | ಸ್ವಚ್ಛ ಜ್ಞಾನವ ನೀಯೊಮತ್ಸ್ಯಕಚ್ಛಪರೂಪಿ | ಸಚ್ಚಿದಾನಂದಾನಿಚ್ಚ ನಾಮಸ್ಮರಣೆ | ಸ್ವಚ್ಛ ಪೇರ್ಮೆಲಿ ಗೈವಉತ್ಸಾಹ ಇವಗಿತ್ತು | ಉದ್ಧರಿಸೊ ಹರಿಯೇ 3 ವ್ಯಾಜ ಕರುಣೀ4 ಪಾಕ್ಕು ಕರ್ಮವ ಕಳೆದು | ಲೋಕದಲಿ ಸತ್ಕೀರ್ತಿಬೇಕಾದ ವರಗಳನೆ | ತೋಕನಿಗೆ ಈಯೋನಾಗನದಿ ಪಿತ ಗುರೂ | ಗೋವಿಂದ ವಿಠ್ಠಲನೆವಾಕು ಮನ್ನಿಸಿ ಕಾಯೋ | ಶ್ರೀ ಕರಾರ್ಜಿತನೇ 5
--------------
ಗುರುಗೋವಿಂದವಿಠಲರು
ವೆಂಕಟ ನರಹರಿ ವಿಠಲ | ಪಂಕಕಳೆದಿವಳಾ ಪ ಸಂಕಟವ ಪರಿಹರಿಸಿ | ಕಾಪಾಡ ಬೇಕೋ ಅ.ಪ. ಸಾರ ಶರಧಿಯು ಎಂಬವೀರವೈರಾಗ್ಯ ಕಂ | ಸಾರಿ ಕೊಡುತಿವಳಾಪಾರುಗೈ ಭವದಕೂ | ಸಾರವನು ಎಂದೆನುತಮಾರಾರಿಸ್ವದ್ವಿನುತ | ಪ್ರಾರ್ಥಿಪೆನೊ ಹರಿಯೆ 1 ಪತಿಸುತರು ಭ್ರಾತೃ ಶ್ರೀ | ಪತಿಯೆ ನೀನಾಗಿ ಹರಿಮತಿ ಮತಾಂವರರಂಘ್ರಿ | ಹಿತಸೇವಕಳೆನಿಸಿಪಥವು ಸಾಗಲಿ ದೇಹ | ಯಾತ್ರೆಯ ಸುಮಾರ್ಗದಲಿಗತಿಗೋತ್ರ ನೀನೆಂಬ | ಮತ್ತಿಯಿತ್ತು ಪೊರೆಯೊ 2 ಪಾದ ಕಮಲನೇಮ ಸೇವೆಯನಿತ್ತು | ಉದ್ದರಿಸೊ ಹರಿಯೇ 3
--------------
ಗುರುಗೋವಿಂದವಿಠಲರು
ವೆಂಕಟಪತೇಧೀರ | ಮಾಡೋಯನ್ನ ಸಂಕಟ ಪರಿಹಾರ || ಶಂಕರನ ವರ ಬಿಂಕರಕ್ಕಸಂ ಕಳೆದು ನಿ:ಶ್ಯಂಕನಾದ ಪ ನಿಜಾಂಕ ಗುಣಪೂರ್ಣಾಂಕ ನಿನ್ನಯ ಕಿಂಕರರ ಕಿಂಕರನು ನಾನು | ವರದ ಕೋಮಲ ಶುಭಾಂಗ| ಪಾವನಗಂಗ | ಬೆರಳಲಿಪಡೆದರಂಗ ಉರಗಾದ್ರಿ ಸ್ಥಿರನಿವಾಸ || ಶಿರೆಯೆರಗುತಿರುವರು ಮಹಿಮ ನಿನ್ನದು 1 ಅಂಡಜವಾಹನ ಧೋರೆ | ಪುಂಡಲೀಕವರದನೆ | ಗೋಪಾಲನೇ | ಪಾಂಡವರಕ್ಷಕನೆ | ಹಿಂಡು ದೈವರ ಗಂಡ | ವೀರ ಪ್ರಚಂಡ | ಜಗದುದ್ದಂಡ ಮಂಡಲಾಧಿಪ ದೇವ ದೇವ 2 ಪಾಲಸಾಗರ ಶಯನ | ಪಾವನ್ನ | ಪಾಲಿಸೋ ದಾಸರನ್ನ | ಜ್ವಾಲಾ ಹೆನ್ನೆವಿಠಲ | ಭಕ್ತವತ್ಸಲ | ಲಾಲಿತ ಗುಣಶೀಲ | ಪಾಲಿತಾಮರ ಲÉೂೀಲಗೋಪಿ ಬಾಲಾ ಲೀಲಾ ವಿಶಾಲನಾಯಕ | ಮಂಗಮನೋಹರ3
--------------
ಹೆನ್ನೆರಂಗದಾಸರು
ವೆಂಕಟಾ ಹರಿವಿಠಲ | ಪಂಕಕಳೆದಿವನಾ ಪ ಪಂಕಜಾಕ್ಷನೆ ದೇವ | ಕಾಪಾಡ ಬೇಕೋ ಅ.ಪ. ಅಂಧಕಾರದಲಿಪ್ಪ | ಮಂದಮತಿಯುದ್ಧರವಮಂದರೋದ್ಧಾರಿ ಹರಿ | ಮಾಡಿ ಪೊರೆಯಿವನಾ |ನಂದಮುನಿ ಮತ ತಿಳಿಸಿ | ಸಂದೇಹಗಳ ಕಳೆದುಸಂದೋಹ ಸಂಸ್ಥಿತನ | ಉದ್ಧರಿಸೊ ಬೇಕೋ 1 ಸೃಷ್ಟ್ಯಾದಿ ತವ ಮಹಿಮೆ | ನಿಷ್ಠೆಯಿಂದಲಿ ಭಜಿಪಸುಷ್ಠುಮನವನೆಯಿತ್ತು | ಕಾಪಾಡೊ ಹರಿಯೇಕೃಷ್ಣಮಾರುತಿ ಇವನ | ಕಷ್ಟ ಸಂಚಯ ಕಳೆದುಶ್ರೇಷ್ಠ ತವದಾಸ್ಯದಲಿ | ಇಟ್ಟು ಪೊರೆ ಇವನಾ 2 ಸತ್ಸಂಗ ಸದ್ವ್ಯಸನ | ಸನ್ಮಾರ್ಗದಲಿ ಇಟ್ಟುಕುತ್ಸಿತರ ಸಂಗವನು | ದೊರಗೈ ಹರಿಯೇ ಮತ್ಸ ಕೇತನ ಜನಕ | ಭಕ್ತವತ್ಸಲನಾಗಿವತ್ಸನ್ನ ಪೊರೆವವರು | ಮತ್ತಾರು ಇಹರೋ 3 ಹರಿಗುರುಗಳಾ ಸೇವಾ | ಪರಮ ಪ್ರೀತಿಲಿ ಮಾಳ್ವವರಮತಿಯನೇ ಕೊಟ್ಟು | ಪೊರೆಯ ಬೇಕಿವನಾ |ಹರಿಯ ನಾಮಾಮೃತವ | ನಿರುತದಲಿ ಸವಿದುಂಬಪರಮ ಸೌಭಾಗ್ಯವನೆ | ಕರುಣಿಸೋ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವ ಸ್ವಾತಂತ್ರನೇಭವವನದಿ ಉತ್ತರಿಸಿ | ಪೊರೆಯ ಬೇಕಿವನಾ |ದುರ್ವಿಭಾವ್ಯನೆ ಗುರು | ಗೋವಿಂದ ವಿಠಲನೇದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ವೆಂದೆನುತ ಬಂದೆನು ನಾ ಪ ಬಂದಾ ಬಂದಜನಕಾನಂದ ಕೊಡುತಲಿ ವಂದಿಸಿ ಭಜಿಪರಘಂಗಳ ಕಳೆದು ಸಲಹುವಿಯೋ ಸದ್ಗುರು ರಾಘವೇಂದ್ರಾ 1 ಭೀತರಾಗುತ ನಿನ್ನಡಿಗಳ ಸೇವಿಸಲು ಆದರದಿಂದಲವರ ಭವ-ಭಯವ ಪರಿಹರಿಸಿ ಸಲಹಿ ಉದ್ಧರಿಸುವೆ ಗುರುರಾಘವೇಂದ್ರಾ 2 ದುಷ್ಟ ಜನರು ಕೂಡಿ ಕೆಟ್ಟಯೋಚನೆ ಮಾಡಿ ಗುಟ್ಟಾಗಿ ನಿಮ್ಮ ಪರೀಕ್ಷಿಸ ಬೇಕೆಂಧು ಜೀವ ವಿದ್ದವನ ನಿರ್ಜೀವನೆನುತ ತರಲು ಸತ್ಯದಿ ನಿರ್ಜೀವನನ್ನಾಗಿ ಮಾಡಿದೆ ಪ್ರಭವೆ 3 ಕುಹಕಿ ಜನರು ಎಲ್ಲಿ ವನಕೆತುಂಡನು ತಂದು ಚಿಗುರಿಸ ಬೇಕೆನುತಲಿ ಕೇಳಲು ಕಮುಂಡದೊಳಿದ್ದ ದಿವ್ಯೋದಕ ಪ್ರೋಕ್ಷಿಸಿ ಚಿಗುರಿಸಿ ಫಲ ಮಾಡ್ದೆ ಅದ್ಭುತ ಮಹಿಮಾ 4 ಮಾವಿನರಸದೊಳು ಮುಳುಗಿ ಮೃತನಾದಾ ಬಾಲಕನಿಗೆ ಪ್ರಾಣಗಳನಿತ್ತೆ ದಯದೀ ಭುವಿಯೊಳು ನಿಮ್ಮ ಮಹಿಮೆಗೆಣೆಕಾಣೆ ಮಂತ್ರಾಲಯದೊರೆ ಗುರು ರಾಘವೇಂದ್ರಾ 5 ``ಶ್ರೀರಾಘವೇಂದ್ರಾಯ ನಮಃ'' ಎಂಬ ದಿವ್ಯನಾಮವ ಮನುಜನು ಪ್ರತಿದಿನ ಭಜಿಸುತ್ತಲಿರಲು ಘೋರ ದುರಿತಗಳೆಲ್ಲ ದೂರವ ಮಾಡಿ ನಿನ್ನ ಚರಣಸೇವಕರನ್ನು ಸಲಹುವಿಯೋಗುರುವೇ6 ಶ್ರೀ ರಘುರಾಮನ ಪ್ರಿಯಭಕ್ತನಾದ ಶ್ರೀ ಗುರು ರಾಘವೇಂದ್ರರ ಚರಣ ಭಜಿಸಿರೊ ನಂಬಿದ ಭಕ್ತರ ಬೆಂಬಿಡದೆ ಸಲಹುವ ಘನ್ನಕೃಪಾನಿಧಿ ನಮ್ಮ ಗುರು ರಾಘವೇಂದ್ರಾ 7
--------------
ರಾಧಾಬಾಯಿ
ವೈಕುಂಠ ವಿಠ್ಠಲನೆ ನೀನಿವನ ಸಾಕಬೇಕಯ್ಯ ಶ್ರೀ ಹರಿಯೆ ಪ ನಾಕಪತಿಯೆ ನಿನ್ನ ತೋಕನೆಂದೆನಿಸಿ ಕೃಪಾಕರುಣೆ ಕಾಪಾಡ ಬೇಕೊ ಹರಿಯೆ ಅ.ಪ. ಪುಂಡಲೀಕ ವರದ ಪಾಂಡುರಂಗನೆ ನಿನ್ನತೊಂಡನಾಗಿಹನ ಕೈಗೊಂಡು ಕಾಪಾಡೊ ಹರಿಯೆ |ಅಂಡಜಸುವಾಹನನೆ ಮಾರ್ತಾಂಡ ಶತತೇಜಭಾಂಡ ಕಾರಕ ಭೀಮ ಗೊಲಿದಂತೆ ಒಲಿಯಬೇಕು 1 ಇಹಪರಗಳೆರಡಕ್ಕೂ ಅಹಿಶಯ್ಯ ನಿನ ಪಾದವಹಿಸೆ ಸೇವಿಪನಯ್ಯ ಸಹಜ ಭಕ್ತಿಯಲಿವಿಹಗೇಂದ್ರ ವಾಹನನೆ ಐಹಿಕದ ಭಯಹರಿಸಿವಿಹಿತ (ಕರುಣ)ದಿಂದಿವನ ಕಾಪಾಡು ಬೇಕು ಹರಿಯೇ 2 ವಿಘ್ನಹರ ನಿನ್ನಲ್ಲಿ | ಲಗ್ನ ಗೈಸಿಹಮನವ ನಿ-ರ್ವಿಘ್ನತೆಯ ನೀಡಯ್ಯ ಸರ್ವಕಾಲದಲಿಯಜ್ಞೇಶ ಯಜ್ಞ ಭುಗ್ ಯಜ್ಞಸಾಧನ ಯಜ್ಞಯಜ್ಞಾನು ಸಂಧಾನ ಸರ್ವಕಾರ್ಯದಲೀಯೊ 3 ವೃಂದಾರ ಕೇಂದ್ರ ರಿಂ | ವಂದ್ಯ ಹಯಮುಖ ಪಾದಭೃಂಗರೆಂದೆನಿಸುವ ಭಾವಿ ಮರುತರ ಚರಣದೀಸಂಧಿಸುತ ಧೃಡಭಕ್ತಿ ವೃಂದಾವನಾಖ್ಯಾನಸಂದೋಹ ಸುಜ್ಞಾನ ನೀನಿತ್ತು ಸಲಹೊ ಹರಿಯೇ 4 ಪತಿ ನಿನ್ನ ಹಂಬಲಿಸಿ ಬೇಡುವೆನುಇಂಬಿಟ್ಟು ತವ ಪಾದದ್ಹಂಬಲವ ನೀಯೋಉಂಬುಡುವ ಕ್ರಿಯೆಗಳಲಿ ಬಿಂಬ ಕ್ರಿಯೆಗಳ ತಿಳಿಸಿಬಿಂಬ ತವರೂಪ ಹೃದಯಾಂಬರದಿ ತೋರಿ ಸಲಹೋ 5 ಪಂಚಪಂಚಸುತತ್ವ | ಪಂಚ ಭೇದದಜ್ಞಾನಸಂಚಿಂತೆಯ ನೀಯೋ ವಾಂಛಿತಾರ್ಥದನೇಪಂಚ ಅವಿದ್ಯೆಯ ಕಳೆದು ಪಂಚಸು ಪರ್ವದಲಿಪಂಚಾಸ್ಯನಲಿ ನಿನ್ನ ಪಂಚರೂಪವ ತೋರಿಸೋ 6 ದಿವಿಜ ವಂದ್ಯಮಧ್ವಾಂತರಾತ್ಮ ಗುರು ಗೋವಿಂದ ವಿಠಲ ತವದಿವ್ಯ ರೂಪವ ತೋರಿ ಕಾಪಾಡೊ ಹರಿಯೆ 7
--------------
ಗುರುಗೋವಿಂದವಿಠಲರು
ವ್ಯರ್ಥವಾಗೊದÉೂ ಜನ್ಮ ಸಾರ್ಥಕಾಗದೊ ಭಕ್ತಿ ಭಾವದಿಂದ ಪುರುಷೋತ್ತಮನ ಪೂಜಿಸದ ಜನ್ಮ ಪ ಪರಮ ಶ್ರೇಷ್ಠಜನ್ಮದಿ ಬಂದು ಪರಮ ಭಕುತಿಯಿಂದಲೀಗ ಪರಮಾತ್ಮನ್ನ ಪಾದವ ಭಜಿಸದೆ ಪಾಮರನಾಗಿ ಕಳೆವೋ ಜನ್ಮ 1 ಲಕ್ಷ್ಯ ಇಟ್ಟಧೋಕ್ಷಜ ನಿನ್ನನುಗ್ರಹ ಅಪÉೀಕ್ಷಿಸದಲೆ ಲಕ್ಷ್ಮೀಪತಿಯ ಪಾದವನ್ನಲಕ್ಷ್ಯ ಮಾಡದವನ ಜನ್ಮ 2 ಕರ್ಮ ಕಳೆದು ಪಂಚಮುಖನ ಪ್ರಿಯನ ನಾಮ ಮುಂಚೆ ನೆನೆಯದವನ ಜನ್ಮ 3 ನಿತ್ಯ ನಿನ್ನ ನಾಮ ಬಿಟ್ಟನಿತ್ಯ ಮಾರ್ಗ ಹಿಡಿದು ಮುಂದೆ ಕೆಟ್ಟು ಹೋಗೋದಕ್ಕೆ ಒಡಂಬಟ್ಟು ಹರಿಯ ಬಿಟ್ಟ ಜನ್ಮ 4 ಏಸುಏಸು ಜನ್ಮದಲ್ಲಿ ಬ್ಯಾಸರದಲೆ ಸಲಹುತಿಹ ಭೀ- ಮೇಶ ಕೃಷ್ಣನಂಘ್ರಿಗಳನು ದರ್ಶನ ಮಾಡದವನ ಜನ್ಮ 5
--------------
ಹರಪನಹಳ್ಳಿಭೀಮವ್ವ
ವ್ಯಾಸಾರ್ಯಾ - ವ್ಯಾಸಾರ್ಯ ಪ ದೈಶಿಕಾರ್ಯ ಬ್ರಹ್ಮಣ್ಯರ ಕರಜನೆ ಅ.ಪ. ಭವ ಪರಿಹರಿಸುವೆ 1 ಭೀಕರವೆನೆ ನೃಪ | ಗಾಕುಹುಯೋಗವತಾಕುವ ಮುನ್ನವೆ | ನೀ ಕಳೆದೆಯೊ ಗುರು 2 ಪನ್ನಗ ನಗಪ ಪ್ರಪನ್ನ ಭಜಕ ನಿನ | ಗಿನ್ನುಂಟೇ ಸಮ 3 ಮಂದ ಜನರೋದ್ಧರ | ವೆಂದು ರಚಿಸಿದೇಚಂದ್ರಿಕಾದಿ ತ್ರಯ | ಸುಂದರ ಗ್ರಂಥ 4 ವ್ಯಾಸ ತ್ರಯಾಭಿಧ | ಲೇಸು ಗ್ರಂಥ ಸಂಕಾಶಿಸೆ ಬಹು ವಿಧ | ಆಸುರಿ ಮತ ಹನ5 ದಾಸ ಪಂಥ ಉಪ | ದೇಶಿಸೆ ಶ್ರೀನಿವಾಸ ನಾಯಕರ | ದಾಸರೆಂದೆನಿಸಿದೆ 6 ವಾಸವ ನಾಮಕ | ದಾಸರಿಂದ ದಿಗ್ದೇಶ ಪ್ರಸರ ಮಹಿ | ದಾಸನ ನಾಮವು 7 ಶ್ವಸನನ ಮತ ವಿ | ದ್ವೇಷಿವಾದ ಹರದೇಶ ದೇಶ ಹನು | ಮೇಶ ಪ್ರತಿಷ್ಠಿತ 8 ಸಾರ್ವ ಭೌಮ ಗುರು | ಗೋವಿಂದ ವಿಠಲನತೋರ್ವುದೆನ್ನ ಹೃದ | ಯಾ ಕಾಶದಲಿ 9
--------------
ಗುರುಗೋವಿಂದವಿಠಲರು