ಒಟ್ಟು 9381 ಕಡೆಗಳಲ್ಲಿ , 133 ದಾಸರು , 5307 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಬ್ರಹ್ಮಣ್ಯ163ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ಪ.ದೇಹಿ ದೇಹಿ ತವ ಸ್ನೇಹ ಸುಖ ವಚಂಬ್ರೂಹಿ ಸುವಚನಂ ಗಹನ ಜ್ಞಾನಂ 1ಅಭ್ರೋಡುಪ ನಿಭ ಶುಭ್ರಶರೀರಾದಭ್ರ ದಯಾನಿಧೆ ವಿಭ್ರಾಜಿತಶಂ 2ವಾಸವಸೇನಾಧೀಶ ಖಳಾನ್ವಯನಾಶ ಸ್ವಜನ ಪರಿಪೋಷ ಸುತೋಷಂ 3ಭೂರಿಫಲದ ಭಯದೂರ ಕುಮಾರ ಕುಮಾರಸುಧಾರಾತೀರಗ ಸುಮತಿಂ4ಪನ್ನಗನೃಪಸುಪನ್ನಗನಗಪ ಪ್ರಸನ್ನವೆಂಕಟಪತಿ ಚಿನ್ಮಯ ಭಕ್ತಿಂ 5
--------------
ಪ್ರಸನ್ನವೆಂಕಟದಾಸರು
ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು |ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ಪ.ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು |ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ 1ಭಕ್ತಿರಸದಲಿ ತನ್ನ ಚಿತ್ತಪರವಶನಾಗಿ |ಅಚ್ಯುತನ ನಾಮವನು ಬಚ್ಚಿಟ್ಟು ಕೊಂಡವಗಲ್ಲದೆ 2ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ |ಆನಂದ ಪೂರ್ಣ ಪುರಂದರವಿಠಲನ ನೋಡಿದವಗಲ್ಲದೆ 3
--------------
ಪುರಂದರದಾಸರು
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ಶಿವನಿಂದ್ಯ ಗೈವಿರಿಪಬ್ರಹ್ಮ ಸುಜ್ಞಾನದಿ ಹರಿಹರರಾರೆಂಬಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾಅ.ಪಗರುಡವಾಹನನು ಶ್ರೀವರನು ನೋಡಿಉರಗಭೂಷಣನು ಗೌರೀಶ್ವರಗೂಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ1ಸ್ಮರನ ತಾತನು ನಾರಾಯಣನುಕೇಳಿಸ್ಮರನ ವೈರಿಯು ತ್ರಿಗಣೇಶ್ವರನುಹರಿನಿಂದನೆ ಶಿವ ಶಿರದಿ ತಾನ್ ಧರಿಸಿದಹರನ ಲಿಂಗವನಿತ್ಯಪೂಜಿಸಿ ನಮಿಸುವಾ2ಕ್ಷೀರಾಬ್ಧಿ ವಿಷ್ಣುಗೆಸತಿಗೃಹವೊ ಶಿವನನಾರೀ ಮಂದಿರ ಹಿಮಾಲಯವೂನಾರೀ ರಮೆಯ ಹೃದಯದಿ ಧರಿಸಿದವಿಷ್ಣುಮಾರನಂತಕ ಉಮೆಗಿತ್ತನರ್ಧಾಂಗವ3ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣಗೊಲಿದು ದ್ವಾರದಿ ನಿಂತ ಹರನೂಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣುಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ4ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾನಿರ್ವಾಣಿಬೌದ್ಧನುಶರ್ವದಿಗಂಬರಹರಿಯು ಜಾರನು ಜಗಪೀಠ ಶಂಕರಗೆಂದು5ರುದ್ರಾಕ್ಷಿ ಭಸ್ಮಲೇಪನವು ಶಿವಗೆಮುದ್ರೆಯು ತುಳಸಿಮಣಿ ಸರವುಊಧ್ರ್ವ ಪೌಂಡ್ರಕಗೋಪಿಕೃಷ್ಣಾಜಿನಾಸನರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು6ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯಮೂರ್ತಿಯೊಳ್ ಸಮದೆ ಯೋಚಿಸದೇವ್ಯರ್ಥ ಕೆಡುವಿರಿ ಗೋವಿಂದನ ದಾಸರುಸ್ವಾರ್ಥವಾಗದು ಕಾರ್ಯ ಹರನ ಭಕ್ತರುಕೇಳಿ7
--------------
ಗೋವಿಂದದಾಸ
ಸುಮ್ಮನೆ ವೈಷ್ಣವನೆಂದಿರಿ -ಪರ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬ್ರಹ್ಮ ಸುಜ್ಞಾನವನರಿಯದ ಮನುಜನ ಪ.ಮುಖವ ತೊಳೆದು ನಾಮವಿಟ್ಟವನಲ್ಲದೆ |ಮಿಕ್ಕ ಶಾಸ್ತ್ರಂಗಳ ನೋಡಿದನೆ ? ||ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ |ಭಕುತಿಯ ರಸದೊಳು ಮುಳುಗಿದನೇನಯ್ಯ 1ಊರ ಮಾತುಗಳೆಲ್ಲನಾಡಿದನಲ್ಲದೆ |ನಾರಾಯಣ ಕೃಷ್ಣ ಶರಣೆಂದನೆ ? |ನಾರಿಯರಿಗೆ ಮೆಚ್ಚಿ ಮರುಳಾದನಲ್ಲದೆ |ಗುರುಹಿರಿಯರಿಗೆಲ್ಲ ಎರಗಿದನೇನಯ್ಯ 2ಗಂಗೆಯಲಿ ಮಣ್ಣು ತೊಳವವನಲ್ಲದೆ |ಹಿಂಗದೆ ಸ್ನಾನವ ಮಾಡಿದನೆ ? |ರಂಗ ಶ್ರೀ ಪುರಂದರವಿಠಲನ ದಾಸರ |ಸಂಗಡ ಕೂಡಾಡಿ ತಿರುಗಿದನೇನಯ್ಯ 3
--------------
ಪುರಂದರದಾಸರು
ಸುರತಸುಖಕೆ ಅಂಗನೆಯರ ಮೇಳದಲಿಇಹಗೆ ಆಧ್ಯಾತ್ಮದಗೊಡವೆಏತಕೆಪಭಂಗಿ ಮಧ್ಯದಿ ಕೂಡಿ ಇಹಗೆ ಭಜನೆ ಸಾಧನೆಗಳೇತಕೆರಂಗುರಾಗದಿ ಮುಳುಗುವವನಿಗೆ ರೇಚಕ ವಿದ್ಯೆಯಾತಕೆಶೃಂಗಾರದ ಪದವಿಡಿದ ಮನುಜಗೆ ಸುಷುಮ್ನದ ಮಾರ್ಗವಿದೇತಕೆ1ನಲ್ಲೆಯರ ನುಡಿಯಿಂದ ಕೇಳುವಗೆ ನಾದಧ್ವನಿ ತಂಪೇತಕೆಚೆಲ್ಲೆಗಣ್ಣರ ಕುಚದಲೊರಗುವಗೆ ಚಿತ್ಕಳ ವಿಷಯವೇತಕೆಜೊಲ್ಲು ಕುಡಿಯುತಲಿಹ ಜಡನಿಗೆ ಜ್ವಲಿಸುತಿಹ ಅಮೃತವದೇತಕೆಹಲ್ಲು ತೆರೆವಹೊತ್ತಿಲಿರುವನಿಗೆ ಹಂಸದ ಕೂಟವದೇತಕೆ2ಭಾಮಿನಿಯರ ಸಭೆಯಲಿದ್ದವನಿಗೆ ಭ್ರೂಮಧ್ಯದ ಸದರೇತಕೆವಾಮಲೋಚನೆಯ ಅಂಗಸಂಗಗೆ ಹೃನ್ಮನ ಚಿಂತನವೇತಕೆಕಾಮಿನಿಯ ಕಣ್ಬಲೆಗೆ ಬಿದ್ದವಗೆ ಕಡೆಹಾಯುವ ಚಿಂತನೆಯೇತಕೆಸ್ವಾಮಿ ಚಿದಾನಂದ ಗುರುವಿನ ಸ್ಮರಣೆಯದು ಅವಗೇತಕೆ3
--------------
ಚಿದಾನಂದ ಅವಧೂತರು
ಸುರನಾರಿಯರ ಮಹಿಮೆಪರಿಪರಿ ಹೊಗಳುತಬಿರುದಿನಕೋಲಹೊಯಿದೇವಕೋಲ ಪ.<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಉಮಾದಿಗಳಿಗೆಲ್ಲಬೊಮ್ಮ ಹ್ಯಾಂಗ ಶಪಿಸಿದಅಮ್ಮಾ ಇದು ಒಂದುಕೌತುಕಕೋಲಅಮ್ಮಾ ಇದುಕೌತುಕ ಹೇಳೆಂದಝಮ್ಮನೆ ದೂತೆ ನುಡಿದಳುಕೋಲ 1ಭಾರತಿ ದೇಹದಲ್ಲಿ ಸೇರಿದರ್ಹಾಂಗಮ್ಮಪಾರ್ವತಿದೇವಿ ಮೊದಲಾದಕೋಲಪಾರ್ವತಿದೇವಿ ಮೊದಲಾದ ಕೆಲದಿಯರುನಾರಿರುಕ್ಮಿಣಿ ಎನಗ್ಹೇಳಕೋಲ2ಪಾಂಚಾಲಿದೇವಿ ತಾನು ಪಂಚಪಾಂಡವರ ಕೂಡಿಕೆಂಚಿತಾ ಹ್ಯಾಂಗ ರಮಿಸೋಳುಕೋಲಕೆಂಚಿತಾ ಹ್ಯಾಂಗ ರಮಿಸೋಳುಮಹಿಮೆಯ ಕಿಂಚಿತ್ತಾಗಿ ಎನಗ್ಹೇಳಕೋಲ3ಇಂದುಮುಖಿಯರ ಜನ ಚಂದಾಗಿ ಹೇಳಮ್ಮಸಂದೇಹಬ್ಯಾಡ ಎನಕೂಡಕೋಲಸಂದೇಹಬ್ಯಾಡ ಎನಕೂಡ ಅದಕೇಳಿಆನಂದವ ಬಡುವೆಅನುಗಾಲಕೋಲ4ಮತ್ತೆ ರಾಮೇಶನ ಅತ್ಯಂತ ಭಕ್ತಳಉತ್ತಮ ಕಥೆಯ ಎನಗ್ಹೇಳಕೋಲಉತ್ತಮ ಕಥೆಯ ಎನಗ್ಹೇಳ ಹರುಷದಿಬಿತ್ತಿ ಬೆಳೆದೇವಧರೆಮ್ಯಾಲೆಕೋಲ5
--------------
ಗಲಗಲಿಅವ್ವನವರು
ಸುಲಭಲ್ಲ ಹರಿಭಕುತಿ ಗುರುಕೃಪೆ ಇಲ್ಲದಿಲ್ಲ ಪ.ಸಿದ್ಧಿ ಸೊಲ್ಲುವ ಗುರುಗಳುಂಟು ಧರೆಯೊಳಲ್ಲಿಗಲ್ಲಿ ಅವರೆಲ್ಲ ಹಿತಕಾರಿಗಳೆಂದಿಗಲ್ಲಸಲ್ಲ ಕೈವಲ್ಯದ ಮಾರ್ಗವ ಬಲ್ಲಬಲ್ಲಿದಭಾರತಿನಲ್ಲಗೆ ಸಲ್ಲಲಿಬಲ್ಮತದಲ್ಲಿರಿರ್ಯೆಲ್ಲ 1ಭವಸಾಗರ ವೈರಾಗ್ಯದ ನಾವೆಲಿನೀಗಿಸಾಗಿ ಜ್ಞಾನಾಗರದಾಗಮವಕೇಳಿವೇಗದೀಗ ನಿರಯಾಗಾರ ತಪ್ಪಿಸದೆ ಶ್ರೀರಂಗ ಬ್ಯಾಗೊದಗ ಸುಜÕನಾಗಿರದೆಮಗೆ ಮ್ಯಾಗೆ ಲೋಗರೋಗರಕಾಗಿ ರಹಿತಧರ್ಮರಾಗಿರೆ ತಾಗೂದು ರೋಗ 2ನಾ ನನ್ನದು ಸಂಪದೆಂಬಭಿಮಾನಿ ನೀಚನುನೀ ನಿನ್ನದು ಕೃಷ್ಣನೆಂಬ ಮತಿವಂತನೆ ಧನ್ಯ ಬಹುಪುಣ್ಯಶ್ಲೋಕರ ವೈಭವವಾಯಿತನ್ಯೋನ್ಯ ನನಗಿನ್ನ್ಯಾತರ ನೆಚ್ಚಿಕ್ಯಣ್ಣ ಪ್ರಸನ್ವೆಂಕಟರನ್ನನಪುಣ್ಯದ್ವಾರನ್ನಾಂತ ಸನ್ನುಮತಿಗನ್ಯದೆ ಏನಣ್ಣ 3
--------------
ಪ್ರಸನ್ನವೆಂಕಟದಾಸರು
ಸುವ್ವಿ ಎಂದು ಪಾಡಿರೆ ಸುಜ್ಞಾನ ದೇವರಭವಹರಿವುದು ಭಯವಿಲ್ಲ ಸುವ್ವಿಪಂಚ ಶಕ್ತಿಗಳೆಂಬಪರಮಮುತ್ತೈದೆಯರುವಂಚನೆಗೆ ದೂರಾಗಿ ವರ್ತಿಸುತ ಸುವ್ವಿವಂಚನೆಗೆ ದೂರಾಗಿ ವರ್ತಿಪಐದೆಯರುಮುಂಚೆ ಬೇಗದಲಿ ಮಡಿಯಾಗಿ ಸುವ್ವಿ1ಕ್ಷೇತ್ರದ ಒರಳಲ್ಲಿ ಕ್ಷರನೆಂಬ ಅಕ್ಕಿಯುಕ್ಷೇತ್ರಜÕನೆಂಬ ಒನಕೆಯ ಸುವ್ವಿಕ್ಷೇತ್ರಜÕನೆಂಬ ಒನಕೆಯ ಪಿಡಿದುಪಾತ್ರನಾಗೆಂದು ಹರಸುತ ಸುವ್ವಿ2ಆರು ಮೂರಾದವನ ಐದು ಎಂಟಾದವನಬೇರೇಳು ನಾಲ್ಕೆರಡು ಬಗೆಯಾದವನ ಸುವ್ವಿಬೇರೇಳು ನಾಲ್ಕೆರಡು ಬಗೆಯಾದನೆಲ್ಲನುವಾರಣದಿ ನೀವೆಲ್ಲ ತಳಿಸಿರೆ ಸುವ್ವಿ3ವಾಸನೆಯ ಮೆರುಗನು ಒಳಿತಾಗಿ ತಳಿಸುತ್ತಸೂಸದಂತೆಲ್ಲವ ಮಗುಚುತ್ತ ಸುವ್ವಿಸೂಸದಂತೆಲ್ಲವ ಮಗಚುತ್ತ ಅಕ್ಕಿಯರಾಶಿಯನು ಮಾಡಿ ಬಿಡಿರವ್ವ ಸುವ್ವಿ4ಪರವಸ್ತುವಾದವನ ಪರಬ್ರಹ್ಮವಾದವನಪರಮಾತ್ಮನೆಂಬ ಪುರುಷನ ಸುವ್ವಿಪರಮಾತ್ಮನೆಂಬ ಪುರುಷ ಚಿದಾನಂದನಪರಮನೈವೇದ್ಯದ ಪಾಕಕ್ಕೆ ಸುವ್ವಿ5
--------------
ಚಿದಾನಂದ ಅವಧೂತರು
ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ ಪಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ 1ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ 2ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ 3ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ 4ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ 5ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ 6ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ 7ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ 8ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ 9ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ 10ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ 11ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ 12ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ 13ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ 14ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ 15
--------------
ಪ್ರಾಣೇಶದಾಸರು
ಸುಳಿದನ್ಯಾರೆ ಈಗ ಸುಳಿದನ್ಯಾರೆಕೆಳದಿ ಎನ್ನುಪ್ಪರಿಗೆಯ ಮುಂದೆಹೊಳೆವ ಹೊಂಬಕ್ಕಿಯ ಮೇಲೆಥಳಥಳಿಪ ಮಿಂಚಿನಂತೆ ಪ.ಎಸೆವಮಣಿಕನಕಾಭರಣಿಟ್ಟುನಸುನಗೆ ಬೆಳಗ ವೈಸರಿಸಿಬಿಸಜಾಕ್ಷಿಯಳೋರ್ವಳ ಕೂಡಹೊಸಪರಿಸರಸವಾಡುತಲಿ1ಮುಂದುಗ್ಗಡಿಪ ಸುರಸಂದೋಹಹಿಂದಕ್ಕೆಳದಿ ಮುನಿಸಮ್ಮೋಹಅಂದದಿ ಮುಂಗಡಿರುವ ವಾದ್ಯಸಂದಣಿಯ ಸೊಬಗಿನಲ್ಲಿ 2ಎನ್ನ ಮನದಿ ನೇಹವ ಬೀರಿಇನ್ನ್ಯಾಕೆ ದೂರ ನೋಡಿದನೆಮನ್ನಿಸ್ಯವನ ತಾರೆ ಶ್ರೀ ಪ್ರಸನ್ನವೆಂಕಟವರದನ ಬೇಗ 3
--------------
ಪ್ರಸನ್ನವೆಂಕಟದಾಸರು
ಸುಳಿದವನಾರಮ್ಮಯ್ಯ ಬೆಟ್ಟದಮೇಲೆಹಳುವದೊಳಿಹ ತಿಮ್ಮಣ್ಣ ಪ.ವಾರೆದುರುಬಿಗೆ ಸಂಪಿಗೆಗೂಡಿ ವಿಹಗವನೇರಿ ಬರುವನಕ್ಕವಾರಿಜಾನನವಜ್ರಮಣಿದಂಥಾನಗೆ ಸೊಬಗೇರಿದಹರಿಕಾಣಕ್ಕ1ಅಡಿಗೊಮ್ಮೆ ಜೀಯಾ ಪರಾಕೆಂಬ ಸುರಮುನಿಗಡಣದ ವೀರನಾರಮ್ಮನುಡಿದರೆ ನುಡಿವ ನುಡಿಯದಿದ್ದರೊಲ್ಲದಬೆಡಗಿನ ಮಹಿಮ ನೀರೆ 2ಮಕರಕುಂಡಲಶಂಖ ಚಕ್ರಕೌಸ್ತುಭಶಿರಿಯುಕುತ ವಕ್ಷದವನಾವನೆಅಖಿಳಜಗವ ತನ್ನ ಬಸುರಲಿ ಬಚ್ಚಿಟ್ಟಸಖಶ್ರೀನಿವಾಸದೇವನೆ3ಸಾಮಗಾನವನಾದರಿಪ ಶಾಮಲಾಂಗದಕೋಮಲದಾರುಹೇಳೆವ್ಯೋಮಕಚಾಜಾದಿ ವಂದಿತಾನತಜನಪ್ರೇಮವಾರಿಧಿ ನೋಡೆಲೆ 4ಸಿರಿಅಂಜನಾದ್ರಿಯೊಳಾವಾಗ ಮಂಗಳಚರಿತನು ದಾರೆ ತಂಗಿಮರೆಹೊಕ್ಕವರಕಾವಪರಸನ್ನವೆಂಕಟವರದನ ನಂಬು ಬೇಗ 5
--------------
ಪ್ರಸನ್ನವೆಂಕಟದಾಸರು
ಸುಳ್ಳು ಮಾತಿನ ನಿನ್ನಾಚಾರವು ತಿಳಿವಿಕೆ ಏನೇನಿಲ್ಲಎಲ್ಲ ಡಂಭವು ನಡತೆಯ ವಿವರವು ಗತಿಗೆನೀ ದೂರಾದೆಯಲ್ಲಪಮಂಡೆಯ ಬೋಳಿಸಿ ಕಣ್ಣನೆ ಮುಚ್ಚುವಿಪಿಟಿಪಿಟಿ ಏನದು ಮಂತ್ರದಂಡವೇತಕೆ ಮನಸದು ಚಂಚಲಏತಕೆ ಮಾಡುವಿ ತಂತ್ರ1ಕೈಯಣ ಗಿಂಡಿಯ ಕಂಕುಳ ಪೆಟ್ಟಿಗೆಕಟ್ಟಿಯಿಹುದು ತಲೆಗಟ್ಟುಬೈಗಳೆಂಬುವು ಪರಿಪರಿ ನೋಡಲುಕೋತಿ ಹಾರಿಕೆಯಳವಟ್ಟು2ಜ್ಞಾನವದಿಲ್ಲವು ಪುಸ್ತಕ ಮನೆಯೊಳುಹೋಳಿಗೆ ತುಪ್ಪದ ಗಬಕುಧ್ಯಾನವಿಲ್ಲವು ಮೌನವಿಲ್ಲವು ಯಮನಕೈಯಿಂದ ದುಬುಕು3ನಿರಿವಿಡಿದುಟ್ಟಿಹ ಪಂಚೆಕಚ್ಚೆಯಧೋತ್ರನಾಮ ವಿಭೂತಿಯ ಬೆಳಕುಪರಮಾನ್ನವ ಸಕ್ಕರೆಯನು ಕಲಸಿನುಂಗುವೆ ಗುಳುಕು ಗುಳುಕು4ಮುಂದೆ ಹೇಳುವನ ಮೆಟ್ಟಿಕೊಂಡುಂಬುದುಇಂತಿದು ನಿನ್ನಯ ಬದುಕುಸುಂದರ ಚಿದಾನಂದ ಸ್ವರೂಪವ ತಿಳಿವುದುಎಂದುಎಂದಿಗೆ ಬಲುಧಡಕ5
--------------
ಚಿದಾನಂದ ಅವಧೂತರು
ಸುಳ್ಳೇ ತೋರಿದೆ ಜಗವೆಲ್ಲಸುಳ್ಳಾದವರಿಗೆ ಸುಳ್ಳುಸುಳ್ಳೇ ತೋರಿದೆ ಜಗವೆಲ್ಲಪಮೂರು ಮೂರುತಿ ಮೂರು ಶಕ್ತಿಯೆ ಸುಳ್ಳುಮೂರು ಸ್ಥಾನ ಮೂರು ಗುಣಗಳೇ ಸುಳ್ಳುಮೂರು ಮೂಲವೇ ಸುಳ್ಳು ತಾನಿಹುದೇ ಸುಳ್ಳು1ಚಂದ್ರ ಸೂರ್ಯರುಗಳೆಂಬುವರೆ ಸುಳ್ಳುಇಂದ್ರರು ಅಹಮಿಂದ್ರರು ಸುಳ್ಳುಸಾಂದ್ರನಕ್ಷತ್ರವೇ ಇದು ಸುಳ್ಳು ತಾನಿಹುದೆ ಸುಳ್ಳು2ದಿಗ್ಗಜಗಳು ದಿಕ್ಪಾಲಕರೆ ಸುಳ್ಳುವಗ್ಗಿಗರಹ ವಸು ಎಂಬರು ಸುಳ್ಳುಸ್ವರ್ಗವೆಂಬುದು ಅದು ಸುಳ್ಳು3ಬಹುಲೋಕವು ಭುವನಂಗಳು ಸುಳ್ಳುಇಹಪರ ಎಂಬವು ಎರಡಿವು ಸುಳ್ಳುಬಹಿರಂಗವೆಂಬುದಿದು ಸುಳ್ಳು ತಾನಿಹುದೆ ಸುಳ್ಳು4ನಾನಾರೂಪದ ಬಹೂರೂಪವೆ ಸುಳ್ಳುನಾನಾ ವಿನೋದಂಗಳು ಇವು ಸುಳ್ಳುನಾನಾ ಬೆಳಕುಗಳು ಅವು ಸುಳ್ಳು ತಾನಿಹುದೆ ಸುಳ್ಳು5ಬ್ರಹ್ಮಾಂಡವು ತಾನಿಹುದೇ ಸುಳ್ಳುಪಿಂಡಾಂಡವು ತಾ ಮೊದಲಿಗೆ ಸುಳ್ಳುಕಂಡೆನೆಂದೆಂಬುವು ಎಲ್ಲ ಸುಳ್ಳು ತಾನಿಹುದೆ ಸುಳ್ಳು6ಸುಳ್ಳು ಚಿದಾನಂದನೆಂಬುದು ಸುಳ್ಳುಸುಳ್ಳಿನ ಕೀಲನು ಅರಿತರಿಗೆ ಸುಳ್ಳುತಿಳಿಯದವರಿಗೆ ನಿಜಸುಳ್ಳು ತಾನಿಹುದೇ ಸುಳ್ಳು7
--------------
ಚಿದಾನಂದ ಅವಧೂತರು
ಸೇವಕತನದ ರುಚಿಯೇನಳೆದೆಯೋ |ದೇವ ಹನುಮರಾಯ ನೀ ವೈರಾಗ್ಯ ಬೇಡಿ ಪಉದಧಿಯ ದಾಟಿ ಸೀತೆಯ ಕಂಡು ಬಂದಾಗಮದುವೆಯ ಮಾಡೆನ್ನಬಾರದಿತ್ತೆ ||ಪದದಿ ಪಾಷಾಣವ ಪೆಣ್ಣ ಮಾಡಿದನಿಗೆಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ 1ಕ್ಷಣದೊಳು ಸಂಜೀವನ ಗಿರಿ ತಂದಾಗಧನವನು ಬೇಡಲು ಕೊಡದಿಹನೇ ||ವಿನಯದ ವಿಭೀಷಣಗೆ ರಾಜ್ಯಪದವನಿತ್ತವನಿಗೆನಾಶ್ಚರ್ಯವೊ ಹನುಮ ನೀನೊಲ್ಲದೆ 2ಸಾರ್ವಭೌಮನು ತಾನೆ ಮೆಚ್ಚಿ ಬಂದಾಗಲೆಉರ್ಪಿಯ ಬೇಡಲು ಕೊಡದಿಹನೇಸರ್ವವ ತೊರೆದು ಶ್ರೀ ಪುರಂದರವಿಠಲನನಿವ್ರ್ಯಾಜ ಭಕುತಿಯ ಬೇಡಿಕೊಂಡೆಯಲ್ಲದೆ 3
--------------
ಪುರಂದರದಾಸರು
ಸೈಶಬಾಸ ಗಬರು ದರೋಡೆ ಬರತದಅಬಬ್ಬ ನೋಡಿದರೆ ಆರ್ಭಟಸಬಬ ಐತಿದು ಸಾಧುರ ಪುಣ್ಯಶುಭನುಡಿಯುತದ ಶಕುನದ ಹಕ್ಕಿಪಐದು ಮಂದಿ ನೆಲೆಗಳ್ಳರು ಕೂಡಿಊರ ಆತ್ಮದಲಿ ಸೇರುವರುಐಕ್ಯದಿಂದ ಶ್ರೀ ಗುರುವಿನ ಕೂಡಿಐದು ಮಂದಿ ಬಿಟ್ಟೋಡುವರು1ಎಂಟು ಹತ್ತು ಮಂದಿ ಬಂಟರು ಕೂಡಿಮುತ್ತಿಗೆ ಹಾಕಿ ನಿನ್ನ ಕೆಡಿಸುವರುಸತ್ಯನಾದ ಶ್ರೀ ಗುರುವಿನ ನೆನೆದರೆಹತ್ತು ಮಂದಿ ಬಿಟ್ಟೋಡುವರು2ನೋಡಿ ಬಗೆಯೋ ನಿನ್ನ ಕಾಡವು ಹುಲಿಗಳುಬೇಡಿದ ಪದಾರ್ಥ ದೊರಕುವುದುಕೂಡಿ ಭಜಿಸೊ ಶ್ರೀ ಚಿದಾನಂದನಮೂಲ ಮಂತ್ರಪ್ರಣವದೊರಕುವುದು3
--------------
ಚಿದಾನಂದ ಅವಧೂತರು