ಒಟ್ಟು 10034 ಕಡೆಗಳಲ್ಲಿ , 132 ದಾಸರು , 5388 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಲಂ ಮಂಗಲಂ ಭವತು ತೇಮಂಗಲಂ ಮಂಗಲಂ ಪ.ಅಂಗಜರೂಪಗೆ ಅಖಿಲ ಲೋಕೇಶಗೆಶೃಂಗಾರಮೂರ್ತಿಗೆ ಶ್ರೀಕಾಂತಗೆಸಂಗೀತ ಲೋಲಗೆ ಸಾಮಜವರದಗೆಬಂಗಾರಗಿರಿವಾಸ ಭವಭವ ಹರಗೆ 1ಕೃತ್ರಿಮ ರಕ್ಕಸ ಮೊತ್ತ ಸಂಹರಗೆಭಕ್ತರ ಹೃದಯದಿ ಬೆಳಗುವಗೆಸತ್ಯಾತ್ಮಕನಿಗೆ ಸತ್ಯನೇತ್ರನಿಗೆಚಿತ್ತಜಪಿತ ಚಿನುಮಯ ಮೂರ್ತಿಗೆ 2ಉತ್ತಮ ಗೌಡಸಾರಸ್ವತ ವಿಪ್ರರಿಂನಿತ್ಯಪೂಜೆಯಗೊಂಬ ನೀಲಾಂಗಗೆಛತ್ರಾಖ್ಯಪಟ್ಟಣಮಸ್ತಕಮಕುಟಗೆಕರ್ತಲಕ್ಷ್ಮೀನಾರಾಯಣ ಗುಣಾಂಬುಧಿಗೆ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಗಲಾ ಸ್ವಸಿದ್ದ ಸಿದ್ಧಗೆ ಮಂಗಲಾ ಸ್ವಶುದ್ಧ ಶುದ್ಧಗೆ |ಮಂಗಲಾ ಸ್ವಬುದ್ಧ ಬುದ್ಧಗೆ ಸದ್ಗುರೇಂದ್ರನಿಗೆಜಯ ಮಂಗಲಾಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಆದಿಮಧ್ಯಾವಸಾನವಿಲ್ಲದೆ ನಾದ ಬಿಂದು ಕಳಾ ವಿಹೀನಗೆ |ವೇದ ವೇದಾಂತದ ವಿಚಾರವ ತಿಳಿದ ನಿಶ್ಚಲಗೆ |ಸಾಧು ಸಂತ ಮಹಾನುಭವಿಗಳು ಸಾಧಿಸುವವರಬೋಧ ಬೋಧಗೆ | ವಾದ ಮನಬುದ್ಧ್ಯಾದಿ ಉದಯಾದಿಕವ ಲಕ್ಷಿಪಗೆ1ವಿಶ್ವತೋ ಮುಖ ವಿಶ್ವನೇತ್ರನು ವಿಶ್ವಪಾಣಿಪಾದಶೀರಿಷ | ವಿಶ್ವದೊಳಹೊರಗೇಕ |ಮಯನಾ ಸೂತ್ರನು ಮಣಿಯಂತೆ | ವಿಶ್ವವನ್ನುದ್ಧರಿಸ-ಲೋಸುಗ ವಿಶ್ವದೊಳಗವತರಿಸಿ ಸಾಕ್ಷಾದೀಶ್ವರನುಕಲಿಯುಗದಿ ವಿಶ್ವಾಮಿತ್ರ ಗೋತ್ರದೊಳು2ಪರಮಪುರುಷನು ಸ್ವಪ್ರಕಾಶನು ನರಾಕೃತಿಗೆತಾ ಬಂದು ಶಿಂಧಾಪುರದಿ ಗುರುನಾಥನು-ದರದಿ ಕರಣಿಕನ್ವಯದಿ | ಸರಸ ಲೀಲಾ ನಟನೆನಟಿಸುತ ತೆರಳಿ ಭ್ರಮರಾಪುರಕೆ ಸದ್ಗುರುವರಕೃಪೆಯತಾ ಪಡೆದು ಜಗದೊಳು ಖ್ಯಾತಿ ಪಡೆದಂಗೆ3ಅಂತು ಇಂತೆನಬಾರದಾ ನಿಶ್ಚಿಂತ ರೂಪನು ಬಳಿಕ | ಸಂತಮಹಾಂತನು ಸ್ತುತಿಸಲಾತ್ಮ ಸುಬೋಧ ಬೋಧಿಯಲಿ ||ಅಂತರಂಗದ ಭ್ರಮೆಯನಳಿದೇಕಾಂತ ಭಾವಿಕ ಭಕ್ತರಿಗೆ ವಿ-ಶ್ರಾಂತವಾದ ಸ್ವ-ಪದದೊಳುದ್ಧರಿಸಿದಾತಂಗೆ4ಸ್ಪರ್ಶ ದರ್ಶನದಿಂದೆ ಝಗ ಝಗ ಧರಿಸುತಲಿ ನಾನಾ ವಿ-ಚಿತ್ರಾಚರಣವನು ಚರಿಸುತ್ತ ಸದ್ಗುರು ರಾಯ ಕಡೆಯಲ್ಲಿ,ಪರಮಹಂಸಾಶ್ರಮವ ಕೈಕೊಂಡಿನಿತುಕೆಲಕಾಲದಲಿ ಶಿಂಧಾಪುರದಿಸ್ವ-ಸ್ಥಾನ ದೊಳು ಸಹಜಸಮಾಧಿಸ್ಥಳದಲ್ಲಿ5ಶಾಲಿವಾಹನ ಶಕೆಯ ಶತಕತಿ ಮೇಲೆ ಐವತ್ತಾಗೆ ಮೂರನು |ಕಾಲು ದಕ್ಷಿಣ ಅಯನ ಸಂವತ್ಸರ ವಿರೋಧಿಕೃತು |ಕಾಳ ದ್ವಿತಿಯಾಮಾಸ ಆಶ್ವೀನ ಮೇಲೆ ಶಿವ ಬುಧವಾರಕರ್ಣವಿಶಾಲಿ ಗರ್ಜಾ ಭರಣೆ ಪ್ರಥಮಪ್ರಹರಸಮಯದೊಳು6ಆ ಸುದಿನದೊಳಗಾ ಮಹಾ ಸಂತೋಷ ಕಾಲದಿಸುರರುಪೂಮಳೆ ಸೂಸುತಿರೆ ಬ್ರಹ್ಮಾದಿಕರು ಸ್ವಸುಖದಿನಲಿದಾಡಿ |ಏಸುಕಾಲದಸುಕೃತಫಲವಿದು ವಸ್ತುಕಣ್ಣಲಿ ಕಂಡೆವೈ ಉಲ್ಲಾಸವೆನುತ ಸಮಸ್ತ ಸುರಜಯ ಘೋಷ ಮಾಡುತಲಿ7ನಿಜ ಪರಂಧಾಮಕ್ಕೆ ಸದ್ಗುರು ಬಿಜಯಮಾಡಿದನೆಂಬ ಮಹಾಶಯ | ಸುಜನರೆಲ್ಲರುಬಲ್ಲರಿದನು ಲೋಕಕಿದು ಸತ್ಯ || ತ್ರಿಜಗವೇಪುಸಿಯೆಂಬ ಮಹಾತ್ಮಗೆ ತ್ಯಜನವೆಲ್ಲಿ ಉದಾರ ಮಹಿಮಗೆ |ನಿಜವು ಜಲ ದೊರೆತಿಲ್ಲ ತೋರಲು ಕರಗಲೆರಡಹುದೇ8ನಿರಾಕಾರಾಕಾರ ವ್ಯಕ್ತಿಗೆಚರಣಒಂದೆ ಭೇದ ಮಿಥ್ಯೆಯು |ಚರಣಯುಗಕೆರಡುಂಟೆ ಈಪರಿಶರೀರ ಶರಣಂಗೆ ||ಹಿರಿದ ಕಿರಿದ ದರದರ ಹಂಗನು ಹರಿದು ಬಿಸುಟುವಶ್ರೀ ಮಹಾಶಂಕರಾನಂದ ಸರಸ್ವತೀ ಯತಿವರ್ಯ ಗುರುವರಗೆಜಯ ಜಯ ಮಂಗಲಾ ಜಯ ಜಯ ಮಂಗಲಾ9
--------------
ಜಕ್ಕಪ್ಪಯ್ಯನವರು
ಮಂಗಳ ಜಯಜಯತೂ ಜಯತು ಜಯಮಂಗಳಶುಭಜಯತುಪವಾರಿಜೋದ್ಭವನಿಗೆ ವಾಣಿ ಶಾರದೆಗೆನಾರಾಯಣನಿಗೆ ನಾರಿ ಲಕ್ಷುಮೀಗೆಮಾರಸಂಹಾರನಿಗೆ ಪಾರ್ವತೀ ದೇವಿಗೆನಾರೀ ರನ್ನೆಯರ್ ಹೂವಿನಾರತಿ ಬೆಳಗೆ1ಸೃಷ್ಟಿಕರ್ತಗೆ ಸರ್ವ ಅಕ್ಷರದಾಯಿನಿಗೆರಕ್ಷಣ ಮೂರ್ತಿಗೆ ಅಕ್ಷಯಾಶ್ರಿತೆಗೆಶಿಕ್ಷೆ ರಕ್ಷಃ ದೇವಿ ಸೃಷ್ಟಿ ಸಂಹಾರಗೆಅಕ್ಷತೆಯಿಟ್ಟು ಸ್ತ್ರೀಯರ್ ಆರತಿ ಬೆಳಗೆ2ವರಹಂಸ ಗಮನಗೆ ಮಯೂರ ವಾಹನಗೆಗರುಡ ಗಮನಗೆ ಮದಕರಿ ಧ್ವಜಿಗೆವೃಷಭವಾಹನನಿಗೆ ವರಸಿಂಹ ವಾಹಿನಿಗೆಸರಸಿಜಾಕ್ಷಿಯರ್ ಮುತ್ತಿನಾರತಿ ಬೆಳಗೆ3ಕಮಂಡಲುಧಾರಿಗೆ ವರವೀಣಾಪಾಣಿಗೆಕೌಮೋದಕಿಧರಗೆಕಮಲಸುಮಕರಗೆಡಮರು ತ್ರಿಶೂಲಧರಗೆ ತೋಮರ ಪಾಣಿಗೆಕೋಮಲಾಂಗಿಯರ್ ಕುಂಕುಮದಾರತಿ ಬೆಳಗೆ4ಅಂಬುಜಾಸನಗೆಶುಂಭಸಂಹಾರಳಿಗೆಕುಂಭಕರ್ಣಾಂತಕಗೆ ಮಹಿಷಮರ್ದಿನಿಗೆಸಂಭ್ರಮತ್ರಿಪುರಾರಿ ಚಂಡ ಮುಂಡಾರ್ದಿನಿಗೆಅಂಬುಜಾಕ್ಷಿಯರ್ ಸಂಭ್ರಮದಾರತಿ ಬೆಳಗೆ5ಚಂದದಿ ಬ್ರಹ್ಮಗೆ ಚಂದಿರವದನೆಗೆಸುಂದರ ಮೂರ್ತಿಗೆ ಇಂದಿರೆಗೆಅಂದದ ಶಿವನಿಗೆ ಅರವಿಂದನೇತ್ರೆಗೆವಂದಿಸಿ ಗೋವಿಂದದಾಸನಾರತಿ ಬೆಳಗೆ6<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಮಂಗಳ ಪದಗಳು391ಕೋಲು ಕೋಲೆನ್ನಿರೆ ರನ್ನದ ಕೋಲು ಕೋಲೆನ್ನಿರೇಕೋಲು ಕೋಲೆಂದು ರನ್ನದಕೋಲಧರಿಸಿನಿಂದುಲೋಲಾಕ್ಷಿ ದೇವಿ ಚರಿತೆಯ ಸ್ಮರಿಸುತ್ತ ರನ್ನದಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಲೋಲಾಕ್ಷಿ ದೇವಿ ಚರಿತೆ ಸ್ಮರಿಸುತ್ತ ನಲಿದಾಡಿಪಾಲಿಸೆ ಧರೆಗೆ ವರವ ಕರದೀಗಳ್ ರನ್ನದಾ1ಆದಿದೇವಿಯು ಚತುರ್ವೇದ ಗರ್ಭನನಿತ್ಯಪಾದಸೇವೆಯ ಗೈವಳ್ ಮೋದದಿ ರನ್ನದಿಕೋಲು ಪಾದಸೇವೆಯ ಗೈವಳ್ಮೋದದಿ ಮಾಧವನ ಪೂಜಿಸಿ ನಮಿಸಿಕ್ಷೀರಾಬ್ಧಿಯೊಳ್ ರನ್ನದಾ2ಘೋರದಾನವರೆಲ್ಲ ಧಾರಿಣಿ ಬಾಧಿಸಲುವಾರಿಜೋದ್ಭವನಾರದಾದ್ಯರು ರನ್ನದಾವಾರಿಜೋದ್ಭವನಾರದಾದ್ಯರು ದೇವಿಯೊಳುದೂರಿಡೆಕೇಳಿಅಭಯವಿತ್ತಳು ರನ್ನದಾ3ಸುರರುದಾನವರೆಲ್ಲ ಶರಧಿಯ ಮಥಿಸಲುಅರವಿಂದಮುಖಿ ಲಕ್ಷ್ಮಿ ಜನಿಸಿದಳೆ ರನ್ನದಅರವಿಂದ ಮುಖಿಲಕ್ಷ್ಮಿ ಜನಿಸಲು ನಾರಾಯಣನರಸಿಯೆಂದೆನಿಸಿ ಮೆರೆದಳು ರನ್ನದಾ4ಅಘವಿನಾಶಿನಿ ಜಗದಾಂಬಿಕೆ ಕೀರವಾಣಿಸುಗುಣೆ ಸುಂದರಿ ಸುಶೀಲೆಯು ಫಣಿವೇಣಿನಗುವ ಮೊಗದ ಚಂದ್ರವದನೆಯು ರನ್ನದಾ5ದುಷ್ಟ ನಿಗ್ರಹರೆಂದು ಸೃಷ್ಟಿಗೆ ನಡೆತಂದುಶ್ರೇಷ್ಠಾದಿ ನೂರೊಂದು ರೂಪಾದಳ್ ರನ್ನದಾಶ್ರೇಷ್ಠಾದಿ ನೂರೊಂದು ರೂಪಾಗಿ ಶಿಕ್ಷಾ ರಕ್ಷಾಧ್ಯಕ್ಷಳೆನಿಸಿ ಖಡುಗ ಧರಿಸಿದಳ್ ರನ್ನದಾ6ಘೋರಮಹಿಷನ ಸಂಹಾರಕೆಂದು ಬಂದುಮಾರಾಂತು ರಣದಿ ದುರುಳನ ರನ್ನದಾಮಾರಾಂತು ರಣದಿ ದುರುಳನ ಮರ್ದಿಸಿಈರೇಳು ಜಗವಾ ಪೊರೆದಳು ರನ್ನದಾ7ಶುಂಭಾ ನಿಶುಂಭ ಖಳರೆಂಬ ದೈತ್ಯರ ಗೆಲಿದುಅಂಬುಜಾಲಯದಿ ನೆಲಸಿದಳ್ ರನ್ನದಾಅಂಬುಜಾಲಯದಿ ನೆಲೆಸಲು ಪೂಜಿಸಿದಕುಂಭಿನಿಸುರರಿಗೊಲಿದಾಳು ರನ್ನದಾ8ಚಂಡ ಮುಂಡಕರೆಂಬಘೋರದೈತ್ಯರನೆಲ್ಲತುಂಡು ತುಂಡಾಗಿ ಶಿರ ಖಂಡೀಸಿ ರನ್ನದಾತುಂಡು ತುಂಡಾಗಿ ಶಿರ ಖಂಡೀಸಿ ಮೆರೆದಳುಚಂಡಿ ಕರಾಳಿ ಚಾಮುಂಡಿಗೇ ರನ್ನದಾ9ರಕ್ತ ಬೀಜನಘೋರಶಕ್ತಿಯ ಪರೀಕ್ಷಿಸಿಮುಕ್ತಿ ಪಥವ ತೋರೆ ಮಾಂಕಾಳಿ ರನ್ನದಾಮುಕ್ತಿ ಪಥವ ತೋರೆ ಮಾಂಕಾಳಿ ಅರ್ಚಿಸಿದಭಕ್ತರಿಗೊಲಿದು ನಲಿದಳ್ ರನ್ನದಾ10ದೇವರಾಮನ ಸತಿಯಾಗಿ ಲಂಕೆಗೆ ಪೋಗಿರಾವಣಾದ್ಯರನೆಲ್ಲ ಕೊಲಿಸೀದಳ್ ರನ್ನದಾರಾವಣಾದ್ಯರನೆಲ್ಲ ಕೊಲಿಸೀದಳ್ ಸೀತೆಯು ತಾಪಾವಕನುರಿ ಹೊಕ್ಕಿ ಪೊರಟಳ್ ರನ್ನದಾ11ಸೃಷ್ಟೀಶ ಭೀಷ್ಮಕನ ತನುಜೆ ರುಕ್ಮಿಣೀದೇವಿಕೃಷ್ಣಮೂರ್ತಿಗೆ ಓಲೆ ಬರೆದಾಳು ರನ್ನದಾಕೃಷ್ಣಮೂರ್ತಿಗೆ ಓಲೆ ಬರೆದು ಒಲಿಸಿಕೊಂಡುಪಟ್ಟದರಸಿಯಾಗಿ ಬಾಳಿದಳು ರನ್ನದಾ12ಮಾನಿನೀಮಣಿಪದ್ಮಾವತಿಯು ಜಲಕೇಳಿಗೈದುಶ್ರೀನಿವಾಸನ ಕಂಡು ಸ್ಮರಿಸೀದಳ್ ರನ್ನದಾಶ್ರೀನಿವಾಸನ ಕಂಡು ಸ್ಮರಿಸಿ ಕಲ್ಯಾಣವೆಸಗಿತಾನೆ ವಿಷ್ಣುವ ಪೂಜೆಗೈದಳ್ ರನ್ನದಾ13ನವರಾತ್ರಿ ದಿನದಲಿ ನವದುರ್ಗಿ ರೂಪಿನಲಿನವಗಂಧ ಕುಂಕುಮಚಂದನಪುಷ್ಪಗಳಿಂದನವವಿಧ ಪೂಜೆ ಕೊಂಬಳ್ ರನ್ನದಾ14ಮಾರಿಪೂಜೆಯ ರಕ್ತ ಹಾರಕ್ಕೆ ಮನಗೊಂಬಾಕ್ರೂರಗಣಗಳೊಡ ಸೇರಿದಳ್ ರನ್ನದಾಕ್ರೂರಗಣಗಳೊಡ ಸೇರಿ ಧಾರುಣಿಯೊಳುಚಾರುವರ್ಣ ಪೂಜೆ ಕೈಕೊಂಬಳ್ ರನ್ನದಾ15ಸರ್ವಮಂಗಲ ಮಾತೆ ಸರ್ವಸಜ್ಜನ ಪ್ರೀತೆಸರ್ವ ಆಭರಣ ಭರಿತೇಯು ರನ್ನದಾಸರ್ವ ಆಭರಣ ಭರಿತೇಯು ಪೀತಾಂಬರನೆರಿಹಿಡಿದುಟ್ಟು ರನ್ನದಾ16ಹದಿನೆಂಟು ಪೌರಾಣದಿ ಮೆರೆವ ಈ ದೇವಿ ಚರಿತೆಹದಿನೆಂಟು ಪದವಾಗಿ ನುಡಿಸೀದಳ್ ರನ್ನದಾಹದಿನೆಂಟು ಪದದಿ ತಪ್ಪಿರಲು ತಿದ್ಯೋದಿದವರವಿಧವಿಧ ಮನದ ಬಯಕೆ ಒದಗುವಾದೆ ರನ್ನದಾ17ಮಂದಗಮನೆಧರಣಿಭಾರತಗ್ಗಿಸಿ ಬಂದುನಿಂದಾಳು ವಿಷ್ಣು ವಕ್ಷಸ್ಥಲದಲಿ ರನ್ನದಾನಿಂದಿರ್ದ ವಿಷ್ಣು ವಕ್ಷಸ್ಥಲದ ರಮೆಗೆ ಗೋವಿಂದದಾಸನು ಸರಿಸಿ ನಮಿಸೂವೆ ರನ್ನದಾ18
--------------
ಗೋವಿಂದದಾಸ
ಮಂಗಳಂಜಯಮಂಗಳಂ ಪ.ವಾತಸುತ ಹನುಮನ ಒಡೆಯಗೆ ಮಂಗಳದಾತ ಶ್ರೀ ರಘುಪತಿಗೆ ಮಂಗಳ ||ಸೇತುವೆಗಟ್ಟಿದ ರಾಯಗೆ ಮಂಗಳಸೀತಾರಮಣಗೆಶುಭಮಂಗಳ1ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರಹಲ್ಲ ಮುರಿದವಗೆ ಮಂಗಳ |ಕಲ್ಲಾದಹಲ್ಯೆಯನುದ್ಧಾರ ಮಾಡಿದಬಲ್ಲಿದದಾಶರಥಿಗೆ ಮಂಗಳ2ಹರಧನು ಮುರಿದ ವಿನೋದಿಗೆ ಮಂಗಳವರದ ತಿಮ್ಮಪ್ಪಗೆ ಮಂಗಳ ||ಪುರಂದರವಿಠಲರಾಯಗೆ ಮಂಗಳಸರುವೋತ್ತಮನಿಗೆ ಶುಭಮಂಗಳ 3
--------------
ಪುರಂದರದಾಸರು
ಮಂಗಳಾತ್ರಿಪುರಸುಂದರಿಗೆ | ಮಂಗಳಾ ಶಾಕಂಬರಿಗೆಮಂಗಳಾ ಬಾದಾಮಿ ಬನಶಂಕರಿಗೆ ಜಯತು ಹಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭೂಧರಭೂಷಿಗೆ ಜಯತು |ಭೂಧರವೈರಿಗೆ ಜಯತು |ಭೂಧರವೈರಿವಾಹನನ ಸಂಹರಳಿಗೆ ||ಜಯ1ಹರಿಮಿತ್ರಿ ಲೋಚನೆ ಜಗತ್ | ಹರಿಗಾತ್ರ ಸೂಚನೀ ಜಯ ||ಹರಿಪುತ್ರ ಕೋಟಿ ಲಾವಣ್ಯ ಸುಲೋಚನೆ || ಜಯ2ಪಾಹಿಪರಾತ್ ಪರೇ ||ಜಯ||ಪಾಹಿಪರಮಪರೆ | ಜಯ |ಪಾಹಿಪರಮಪರಮೇಶ್ವರೀ ಪುರಹರೀ ||ಜಯ||ತ್ರಾಹಿತ್ರಾಹಿತ್ರ್ಯಂಬಕೇ | ಜಯ |ತ್ರಾಹಿತ್ರೈಲೋಕ್ಯಾಂಬಿಕೆ | ಜಯ |ತ್ರಾಹಿತ್ರಾಹಿತ್ರಿಪುರಿ ಶ್ರೀ ಮೂಕಾಂಬಿಕೆ ಜಯತು3ಕುಲಸ್ವಾಮೀ ಸ್ವಾಮಿನೀ | ಜಯ |ಕುಲ ಕೋಟಿಯೇ ಕಲ್ಯಾಣೀ | ಜಯ |ಕುಲರಹಿತ ಕುಲೀ ಶಾಂಕರೀಶಂಕರ ರಾಣೀ ಜಯತು4
--------------
ಜಕ್ಕಪ್ಪಯ್ಯನವರು
ಮಂಗಳಾರತಿ ಕೀರ್ತನೆಗಳು259ಮಂಗಳಂ ಜಯ ಮಂಗಳಂ | ಜಯಮಂಗಳಂಪರಮೇಷ್ಟಿಜನಕ ಉಪೇಂದ್ರಾ ಪವೇದ ಉದ್ಧಾರ ಶ್ರೀಬಾದರಾಯಣಮಧು |ಸೂದನ ಅಮರರ ಕಾಯ್ದ ದಯಾಬ್ಧೀ 1ನಂದಗೋಪಾತ್ಮಜಸಿಂಧೂರಪಾಲ ಮು- |ಕುಂದಪಾಲಿಪುದೆನ್ನ ಇಂದೀವರಾಕ್ಷಾ 2ತುಂಗವಿಕ್ರಮನೆ ಕಾಳಿಂಗ ಮರ್ದನ ದೇವಾ |ಗಂಗ ಜನಕ ಶ್ರೀವಿಹಂಗವಾಹನನೇ 3ಸಣ್ಣರೂಪದಿ ಬಲಿಯನ್ನು ತುಳಿದ ಶ್ರೀ ವಾ- |ಮನ್ನ ಕ್ಷಿತಿಪಹರ ವನ್ನಜನಾಭಾ 4ಪ್ರಾಣೇಶ ವಿಠಲ ಶ್ರೀಮಾನಿನಿಪ್ರತಿಶತ|ಮೀನಾಂಕಲಾವಣ್ಯಭಾನುಪ್ರಕಾಶಾ 5
--------------
ಪ್ರಾಣೇಶದಾಸರು
ಮಂಜುಳ ವೇಣುಗಾನವ ಮಾಡಿ ಮೋಹಿಪ ಜಗವಕಂಜಜನಯ್ಯ ಮುರಾರಿ ಕಾಮಿನಿಯರಿಗುಪಕಾರಿ ಪ.ಯಮುನೆಯ ಪುಲಿನದಿ ಯದುಕುಲ ಚಂದ್ರ ಹೊಂದೆರಮಣೀರ್ವಕ್ಷ ಮಧ್ಯದಿ ರಾಜಿಸುತ ಕುಲಾಂಬುಧಿ 1ಪೂರ್ಣ ಪೀಯೂಷಕರನು ಪೂರ್ವಾಚಲಕೆ ಸಾರ್ದನುಪೂರ್ಣಾನಂದ ಮುಕುಂದ ಪವನ ಸಂಚಾರದಿಂದ 2ಕುಂದನೀಲೋತ್ಪಲ ಜಾಜಿಕಮಲಮಲ್ಲಿಗೆ ಜುಜಿ( ?)ಮಂದಾರಪುನ್ನಾಗಭುಜಮೂಲದಿ ಗೋಪಾಲರಾಜ3ಕುಸುಮಾಕರಕುಂಜದಿ ಕುಶಲಕ್ರೀಡಿತನಾದಿಸುಸಪ್ತ ಸ್ವರದಿಂದ ಸುಖದಾನಂದ ಮುಕುಂದ 4ಕತ್ತಲೆವಿರಿ ಸಂಪಿಗೆಕಮಲಮೊಲ್ಲೆ ಮಲ್ಲಿಗೆಸುತ್ತಿದ ಎಳೆಪಲ್ಲವ ಮಾರನಂತಹ ಚೆಲುವ 5ಮುತ್ತಿನ ಚೊಲ್ಲೆಯಲ್ಲಿಯ ಮುಂಗುರುಳಲ್ಲಿ ವಲಯಕಸ್ತೂರಿ ತಿಲಕ ಒಪ್ಪೆ ಕವಿದಡರ್ವದ್ವೀರೇಫೆ 6ಕಡೆಗಣ್ಣಿನ ನೋಟದಿ ಕುಡಿಹುಬ್ಬಿನ ಮಾಟದಿಮಡದೇರ್ಗೆ ಮಾರಶರ ಮೂಡಿಸುತತಿ ಸುಂದರ 7ಮುಗುಳುನಗೆಮೊಗದ ಮಣಿಕುಂಡಲ ಕರ್ಣದಯುಗ ಕರ್ಣಾಕರ್ಣಿಕರಾಯತ ನಟ ನರಾಕಾರ 8ವನಮಾಲೆವೈಜಯಂತಿಶ್ರೀವತ್ಸಕೌಸ್ತುಭಕಾಂತಿಮಿನುಗುವಾಮೋದ ಗಂಧಮುಡಿ ತೋರೋ ಶ್ರೀ ಗೋವಿಂದ 9ಹಾರಕೇಯೂರ ಕಂಕಣ ಹೊಳೆವ ಮಧ್ಯಒಡ್ಯಾಣಚಾರುಪೀತಾಂಬರೋತ್ತರಿ ಚೀರದಿಂದೆಸೆವಹರಿ10ವಾಮಬಾಹುವಿಲೊಪ್ಪುವ ವೇಣುವಿನ ಘನರವಬ್ರಹ್ಮ ಗಂಧರ್ವರ ಗಾನ ಬಗೆಗೆ ಮೀರುವ ದೇವ 11ಸುಲಲಿತಂದುಗೆ ಗೆಜ್ಜೆ ಸಂದ್ರೇಖೆ ಶೋಭಿತಹೆಜ್ಜೆಕೆಲದ ಗೋಪಾಂಗನೇರ ಕಾಮಧೇನು ಸಾರೋತ್ತರ 12ಧರೆಗೆರಗಿದ ಜಡೆ ಸಲೆ ಕಾಳಿಂದಿ ಮೇಲಾಡೆ ಸಕಳ ಪಕ್ಷಿಮೃಗವು ಸಂಚರಿಸದೆ ನಿಂದವು 13ಜಡಂಗಳು ಚೇತರಿಸೆ ಜನದ ಚೇಷ್ಟೆ ಥಂಬಿಸೆಕಡುರಸತುಂಬಿತುಳುಕಲಜಭವಾಂಡೊಲಿಯಲು14ವೃಕ್ಷಗಳ ಶೃಂಗಾರಿಯ ವತ್ಸಗಳಾವದೊರೆಯಈಕ್ಷಿಸಿ ತೃಣ ಮೆಲ್ಲದೆಯಿದ್ದವು ಗೀತಕೇಳುತ 15ನೀರಸ ತರುಫಲಾಗೆ ನಿತ್ಯಪ್ರಜÕತೆಗೆನೀರದಗೆ ಸ್ವರಗೈಯೆ ನಿಗಮನಯ್ಯ ಮರೆಯ 16ಮಂಗಳಮೇಘಘರ್ಜನೆ ಮಾಡಿದವು ಮೆಲ್ಲಮೆಲ್ಲನೆರಂಗನ ಮೇಲಮೃತ ಧಾರೆಯವಿತ್ತವರ್ಥಿಯಿಂದ 17ನಂದವ್ರಜದ ವನವು ನಂದನ ಚೈತ್ಯಾಧಿಕವುನಂದಸೂನುವಿನ ಗೀತ ನಾದ ವೇದಾನಂತಾನಂತ 18ಕಮಲಜ ಭವೇಂದ್ರಾದಿಕರು ಭ್ರಾಂತಿಯನೈದಿದರುಅಮರಜನ ನಾರೇರು ಅಂಗಜವಶವಾದರು 19ಗೋಷ್ಠದ ಗೊಲ್ಲ ಗೋಪೇರ ಗೋವರ್ಧನ ಗೋಪಾಲರದೃಷ್ಟಕೆ ಸುರಮುನಿ ಗಂಧರ್ವರು ಪೊಗಳಿದರಾಗ 20ಸುರಭ್ಯಾಗಾರದಿ ಕೃಷ್ಣ ಸಂಚರಿಸಲು ಸರ್ವೇಷ್ಠಪೂರಣವಪ್ಪಿತುಧರೆಪರಮಮಂಗಳ ಸಾರಿ21ಸುರರುಸುಖ ಸಂಭೃತ ಶರಧಿಯೊಳೋಲಾಡುತಸಿರಿಮಂಗಳವ ಹೇಳಿ ಸುರಿದರರಳ ಮಳೆ22ಪ್ರಸನ್ನತರ ಚರಿತ ಪ್ರಸನ್ನಾವ್ಯಾಕೃತಗಾತ್ರಪ್ರಸನ್ನಪೂರ್ಣ ಪ್ರಜೆÕೀಷ್ಠ ಪ್ರಸನ್ನವೆಂಕಟಕೃಷ್ಣ 23
--------------
ಪ್ರಸನ್ನವೆಂಕಟದಾಸರು
ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |ಮಡಿ ಮಾಡುವ ಬಗೆ ಬೇರುಂಟು ಪ.ಪೊಡವಿ ಪಾಲಕನ ಧ್ಯಾನ ಮಾಡುವುದು |ಬಿಡದೆ ಭಜಿಸುಮದು ಅದು ಮಡಿಯಾ ಅಪಬಟ್ಟೆಯ ನೀರೊಳಗಿಟ್ಟು ಒಣಗಿಸಿ |ಉಟ್ಟರೆ ಅದು ತಾ ಮಡಿಯಲ್ಲ ||ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |ಬಿಟ್ಟರೆ ಅದು ತಾ ಮಡಿಯೊ 1ಪರಧನ ಪರಸತಿ ಪರನಿಂದೆಗಳನು |ಜರೆದಹಂಕಾರಗಳನೆ ತೊರೆದು ||ಹರಿಹರಿಯೆಂದು ದೃಢದಿ ಮನದಲಿಇರುಳು ಹಗಲು ಸ್ಮರಿಸಲು ಮಡಿಯೋ 2ಎಚ್ಚರವಿಲ್ಲದೆ ಮಲ ಮೂತ್ರ ದೇಹವ |ನೆಚ್ಚಿ ಕೆಡಲು ಬೇಡಲೊ ಮನವೆ ||ಅಚ್ಚುತಾನಂತನ ನಾಮವ ಮನಗೊಂಡು |ಸಚ್ಚಿಂತೆಯಲಿರುವುದೆ ಮಡಿಯೊ 3ಭೂಸುರರು ಮಧ್ಯಾಹ್ನಕಾಲದಲಿ |ಹಸಿದು ಬಳಲಿ ಬಂದರೆ ಮನೆಗೆ ||ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |ಹಸನಾಗಿ ಉಂಬುವುದು ಅದು ಮಡಿಯೊ ? 4ದಶಮಿ - ದ್ವಾದಶಿಯ ಪುಣ್ಯಕಾಲದಲಿ |ವಸುದೇವ ಸುತನ ಪೂಜಿಸದೆ ||ದೋಷಕಂಜದೆ ಪರರನ್ನು ಭುಜಿಸಿ ಯಮ - |ಪಾಶಕೆ ಬೀಳ್ವುದು ಹುಸಿಮಡಿಯೊ ? 5ಸ್ನಾನ -ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |ಜಾÕನ -ಮಾನ - ಸುಮ್ಮಾನದಿಂದ ||ದೀನವಂದ್ಯನಸುಜನ ಸಂತರ್ಪಣ |ಅನುದಿನಮಾಡುವುದು ಘನಮಡಿಯೊ6ಗುರು ಹಿರಿಯರ ಹರಿದಾಸರ ನೆನೆದು |ಚರಣಕೆರಗಿ ಭಯ ಭಕ್ತಿಯಿಂದ ||ಪರಿಪರಿ ವಿಧದಲಿ ಪುರಂದರವಿಠಲನ |ನೆರನೆಂಬುವುದು ಉತ್ತಮ ಮಡಿಯೊ 7
--------------
ಪುರಂದರದಾಸರು
ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು
ಮಧ್ವರಾಯರ ನೆನೆದು ಶುದ್ಧರಾಗಿರೊ |ಹೊದ್ದಿ ವೈಷ್ಣವ ಮತಭವಾಬ್ಧಿದಾಟಿರೋಪಉದಯದಲಿ ಏಳುವಾಗ ನದಿಯ ಸ್ನಾನ ಮಾಡುವಾಗಒದಗಿನಿತ್ಯಕರ್ಮಗಳನು ನಡೆಸುವಾಗ ||ಹೃದಯದಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗಸದಮಲಾನಂದ ಹನುಮನನ್ನು ನೆನೆಯಿರೊ 1ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗಪ್ರೇಮದಿಂದ ವೈಷ್ಣವರು ಅರ್ಚಿಸುವಾಗ ||ಆ ಮಹಾ ಭಕ್ಷ್ಯಭೋಜ್ಯ ಆರೋಗಣೆ ಮಾಡುವಾಗನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೊ 2ಕರಗಳನ್ನು ತೊಳೆದು ತೀರ್ಥ ತುಳಸೀದಳವ ಮೆಲ್ಲುವಾಗಪರಿಪರಿಯ ಪುಷ್ಪವೀಳ್ಯ ಅರ್ಪಿಸುವಾಗಸರುವಾಂತರ್ಯಾಮಿ ಗುರುಮಧ್ವರಂತರಾತ್ಮಕಪುರಂದರವಿಠಲಗೆ ಸಮರ್ಪಣೆ ಮಾಡಿರೊ3
--------------
ಪುರಂದರದಾಸರು
ಮನವ ಶೋಧಿಸಬೇಕುನಿಚ್ಚ - ದಿನ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ದಿನದಿ ಮಾಡುವ ಪಾಪ ಪುಣ್ಯದ ವೆಚ್ಚ ಪಧರ್ಮ ಅಧರ್ಮ ವಿಂಗಡಿಸಿ - ದು - |ಷ್ಕರ್ಮಕೆ ಏರಿದ ಬೇರ ಕತ್ತರಿಸಿ ||ನಿರ್ಮಲಾಚಾರದಿ ಚರಿಸಿ -ಪರ - |ಬೊಮ್ಮಮೂರುತಿ ಪಾದಕಮಲವ ಭಜಿಸಿ1ತನುವ ದಂಡಿಸಿ ಒಮ್ಮೆ ಮಾಣೊ - ನಿನ್ನ - |ಮನವ ಶೋಧಿಸಿ ಪರಮಾತ್ಮನ ಕಾಣೊ ||ನೀನು ನಿನ್ನೊಳಗೆ ಜಾಣನೊ - ಮುಕುತಿ - |ಯೇನೂ ದೂರಿಲ್ಲವೊ ಒಂದೇ ಗೇಣೊ 2ಆತನ ಭಕ್ತರಿಗೆ ಕೇಡಿಲ್ಲ - ಅವ - |ಪಾತಕ - ಪತಿತಸಂಗವ ಮಾಡ ಸಲ್ಲ ||ನೀತಿವಂತರು ಕೇಳಿರೆಲ್ಲ - ನಮ -|ಗೀತನೆ ಗತಿಯೀವ ಪುರಂದರವಿಠಲ 3
--------------
ಪುರಂದರದಾಸರು
ಮನವು ನಿನ್ನಲಿ ನಿಲ್ಲಲಿಅನುದಿನನಿನ್ನ ನೆನೆದುಮನವು ನಿನ್ನಲಿ ನಿಲ್ಲಲಿ ಪ.ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ 1ನಿನ್ನಗುಣವರ್ಣಿಸುತ ನಿನ್ನವರ ಮನ್ನಿಸುತನಿನ್ನಪಾವನ್ನಲಾವಣ್ಯ ಧ್ಯಾನಿಸೆ2ಸಂತೋಷ ನಿರಂತರವು ಸಂತ ಜನ ಸಹವಾಸವುಶಾಂತತ್ವವಾಂತು ಮಹಾಂತಧೈರ್ಯದಿ 3ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣಚಿತ್ತದೊಳಿತ್ತೆಲ್ಲ ಹೊತ್ತುಹೊತ್ತಿಗೆ4ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನಧೈರ್ಯದಂತರ್ಯ ಗಾಂಭೀರ್ಯ ಭಾವದಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮನವೆ ಶ್ರೀನಾರಾಯಣನನು ಸ್ಮರಿಸದೆಮಾಯಾಪಾಶಕೆ ಸಿಲುಕುವರೇ ಪ.ವನಜನಾಭನ ಪದ ವನರುಹಯುಗ್ಮವಅನುದಿನನೆನೆಯದೆ ಒಣಗುವರೇವನಿತಾಲಂಪಟನಾಗುತ ಸಂತತಮನಸಿಜಯಂತ್ರಕೆ ಮನಮರಗುವರೇ ಅ.ಪ.ತುಂಡು ಸೂಳೆಯರ ದುಂಡುಕುಚವ ಪಿಡಿದುಗಂಡಸುತನವನು ಕೆಡಿಸುವರೆದಂಡಧರನ ಬಾಧೆ ಹೆಂಡತಿಯನು ಪಡಕೊಂಡು ವೇದನೆಯನು ತಾಳುವರೆಕಂಡು ಕಂಡು ನೀ ಗುಂಡಿಗೆ ಬಾಳ್ವರೆಹೆಂಡಿರ ಸುಖರಸ ಉಂಡರು ಸಾಲದೆ 1ಬಂದ ಸುಖಕೆ ನೀ ಮುಂದುವರೆಯುತಲಿಮಂದಅಸಮ ದುಃಖ ತಾಳುವರೇಬಂದುದೆನ್ನ ಕಣ್ಣ ಮುಂದೆಯನುಭವಿಪೆಎಂದಿಗೆನ್ನಾಜೆÕಯು ಬಂದಪುದೋ ನಿಜ 2ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹಪಟ್ಟ ಭಾಗ್ಯವನೆಲ್ಲ ತೋರೊ ನೀನುಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ-ನಷ್ಟು ಸುಖವನ್ನು ಕಾಣೆನಿನ್ನುಇಷ್ಟಾರ್ಥಗಳೆಲ್ಲ ದೊರೆಕುವುದೈಪರಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3ವಿಷಯ ಪಳಂಚಿತನಾಗುವ ಸಂತತಪಂಚಡಕೀರನು ಆಗುವರೇಮುಂಚೆ ಮಾಡಿದಕರ್ಮಸಾಲದೆಂದೆನುತಲಿಸಂಚಿತಪಾಪವ ಸಂಗ್ರಹಿಸುವರೇಚಂಚಲಾಕ್ಷಿಯರ ಚಪಲದ ಮಾತನುವಂಚನೆ ಎಂಬುದು ತಿಳಿಯದೆ ಇರುವರೆ 4ಸಾರಿಸಾರಿ ಕೈ ಮುಗಿದು ಬೇಡುವೆನು ವಿ-ಕಾರ ದುರ್ಬುದ್ಧಿಯ ಬಿಡು ಎಂದುಭಾರಿ ತಪ್ಪುಗಳ ಕ್ಷಮಿಸಿಕಾವಲಕ್ಷ್ಮೀನಾರಾಯಣ ನೀನೇ ಗತಿಯೆಂದುಪಾರಮಾರ್ಥಿಕ ವಿಚಾರವ ಮಾಡುತಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮರತೆ ಮರತೆ ಬಗಳ ಮಹಾಮಂತ್ರವಸುರತರುವಿಗೆ ತರುವಾದ ಬ್ರಹ್ಮಾಸ್ತ್ರವಪಭುಗುಭುಗಿಸಿ ಭುವನಗಳನ್ನೆಲ್ಲಾ ಪಾಲಿಪ ಮಂತ್ರಧಗಧಗಿಸಿ ಝಗ ಝಗಿಸಿ ನಿಗಿ ನಿಗಿವ ಮಂತ್ರಜಗದೊಡೆಯರಾದವರಿಗೆ ಒಡೆಯಳ ಮಂತ್ರತಗತಗನೆ ಶತಕೋಟಿರವಿಸೂಸುವ ಮಂತ್ರ1ಸರಸಿಜಾಸನ ತಾನೆ ಜಪಿಸುತಿಹ ಮಂತ್ರಹರಿಹರರುಅನವರತಸ್ಮರಿಸುವಾ ಮಂತ್ರಸುರಪ ಇಂದ್ರಾಗ್ನಿಗಳಿಗಭಯ ನೀಡಿಹ ಮಂತ್ರದುರುಳರಿಪು ವನಗಳಿಗೆದಾವಾಗ್ನಿಮಂತ್ರ2ಹರಿಯ ಸಮಭಾಗ್ಯ ಕೋ ಎಂದು ಕೊಡುವ ಮಂತ್ರಹರಗೆ ಸರಿಯಾದ ಸತ್ವವನೀವ ಮಂತ್ರಗುರುಚಿದಾನಂದ ತಾನಾದ ಬಗಳ ಮಹಾ ಮಂತ್ರಪರಬ್ರಹ್ಮ ಸತ್ಯ ಬ್ರಹ್ಮಾಸ್ತ್ರ ಮಂತ್ರ3
--------------
ಚಿದಾನಂದ ಅವಧೂತರು