ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿನೊಳಗೆ ನೋಡೊ ಹರಿಯ - ಒಳ -ಗಣ್ಣಿನಿಂದಲಿ ನೋಡೊ ಮೂಜಗದೊಡೆಯ ಪ.ಆಧಾರ ಮೊದಲಾದ ಆರು - ಚಕ್ರಶೋಧಿಸಿ ಸುಡಬೇಕು ಈ ಕ್ಷಣ ಮೂರು ||ಸಾಧಿಸಿ ಸುಷಮ್ನ ಏರು ಅಲ್ಲಿಭೇದಿಸಿ ನೀ ಪರಬ್ರಹ್ಮನ ಸೇರು 1ಎವೆಹಾಕದೆ ಮೇಲೆನೋಡು - ಮುಂದೆತವಕದಿಂದಲಿ ವಾಯು ಬಂಧನಮಾಡು ||ಸವಿದು ನಾದವ ಪಾನಮಾಡು - ಅಲ್ಲಿನವವಿಧ ಭಕ್ತಿಯಲಿ ನಲಿನಲಿದಾಡು 2ಅಂಡದೊಳಗೆ ಆಡುತಾನೆ -ಭಾನು -ಮಂಡಲ ನಾರಾಯಣನೆಂಬುವನೆ ||ಕುಂಡಲಿತುದಿಯೊಳಿದ್ದಾನೆ - ಶ್ರೀ ಪು -ರಂದರ ವಿಠಲನು ಪಾಲಿಸುತಾನೆ 3
--------------
ಪುರಂದರದಾಸರು
ಕದವನಿಕ್ಕಿದಳಿದೆಕೊ ಗಯ್ಯಾಳಿ ಮೂಳಿ ಪ.ಕದವನಿಕ್ಕಿದಳಿದಕೊ ಚಿಲಕವಲ್ಲಾಡುತಿದೆ |ಒದಗಿದ ಪಾಪವು ಹೊರಗೆ ಹೋದೀತೆಂದು ಅ.ಪಭಾರತ - ರಾಮಾಯಣ ಪಂಚರಾತ್ರಾಗಮ |ಸಾರತತ್ವದ ಬಿಂದು ಕಿವಿಗೆ ಬಿದ್ದೀತೆಂದು 1ಹರಿಯ ಪಾದಾಂಬುಜಯುಗಳವ ನೆನೆವ ಭ - |ಕ್ತರ ಪಾದದರಜ ಒಳಗೆ ಬಿದ್ದೀತೆಂದು 2ಮಂಗಳ ಮೂರುತಿ ಪುರಂದರವಿಠಲನ |ತುಂಗವಿಕ್ರಮಪಾದ ಅಂಗಳ ಪೊಕ್ಕೀತೆಂದು 3
--------------
ಪುರಂದರದಾಸರು
ಕಮಲೇಶ ನಿನ್ನ ವಿಮಲಯುಗಳಪಾದಕಮಲಕೆಅಮರರುಭ್ರಮರಗಳುಪ.ಅತಿಸುವಟು ರೂಪದಿ ವಿತರಣ ಬೇಡಲುಕ್ರತದೆಡೆ ಮೂರಡಿಕ್ಷಿತಿನೋಡೆಅತುಳಚರಿತ ವಸುಮತಿಯನಳೆಯುತಲಿದ್ವಿತಿಯ ಪದಕೆ ಅಬ್ಧಿಸತಿಯ ಪಡೆದ ಪಾದಕೆ 1ಹಲವು ಕಾಲವು ತನ್ನ ನಲ್ಲನ ಶಾಪದಿ ಅಹಲ್ಯೆಯು ತಾನಿಳೆಯಲ್ಲಿ ಕಲ್ಲಾಗಿರಲುಸುಲಭದಿ ಭಕ್ತರ ಸಲಹುವ ಬಿರುದಿಗೆಲಲನೆಯ ಮಾಡಿದ ಸುಲಲಿತ ಪಾದಕೆ 2ಚಿನ್ನತನದೊಳೆ ಉನ್ನತ ಭಕ್ತ ಧ್ರುವನ್ನ ದೃಢಮತಿಯನ್ನೆ ಕಂಡುತನ್ನ ಕರುಣದಿ ಪಾವನ ಪದವಿತ್ತ ಪ್ರಸನ್ನ ವೆಂಕಟೇಶನ ಶ್ರೀಪಾದಕೆ 3
--------------
ಪ್ರಸನ್ನವೆಂಕಟದಾಸರು
ಕರುಣಾದಿ ಪೊರಿ ಎನ್ನ ಗುರುವೇ ಪಶರಣು ಪೊಕ್ಕೆನೊಚರಣಕಮಲಕೆಕರುಣಿಸೆನ್ನನು ಕರುಣಸಾಗರ ಅ.ಪತಾಪತ್ರಯದಿ ಬಹುಬೆಂದೇಭವ-ಪಾಪಮೋಚಕ ನಿಷ್ಪಾಪಿ - ಜನರ ಪಾಲಕಾಪಾಡೊ ನೀ ಎನ್ನಅಪಾರಮಹಿಮನೆದ್ವಾಪರದಿ ಯದುವರನು ಸಾಂ -ಭೂಪ ಬಕನಳಿದು ಸಲಹಿದ -ನಾಪರಿಯಲಿ ಎನ್ನಸಲಹೋ 1ಕಾಮಿತ - ಫಲದ ನೀನೆಂದೂ ಬಲು -ಸ್ವಾಮಿ ನೀ ಗುರುಸಾರ್ವಭೌಮ ನಿನ್ನಂಘ್ರಿಯುಗ -ತಾಮರಸವ ಮನೋ - ಧಾಮಾದಿ ನಿಲಿಸೆಂದೆಆಮಹದ್ಭಯ ಕಳದ ತೆರದಿ 2ತಾತನಿನ್ನನು ಬಾಧೆ ಬಡಿಸೇ ಶಿರಿ-ದಾತಗುರುಜಗನ್ನಾಥ ವಿಠಲನತಿಮಾತು ಲಾಲಿಸಿ ಕಾಯೋ ಯತಿಕುಲ -ಭೀತಿಯನು ಸದೆದು ಪಾಲಿಸ -ನಾಥರಕ್ಷಕನಲ್ಲೆ ಗುರುವರ 3
--------------
ಗುರುಜಗನ್ನಾಥದಾಸರು
ಕರುಣಿಯೆಂಬೆ ಕರುಣಾಬ್ಧಿಯೆಂಬೆ ಶರಣು ಶರಣೆಂಬೆಪರಮಭಾಗವತರ ಅರಿಗಳ ತರಿದು ನೀನರಕ ತಪ್ಪಿಸಿ ನಿಜಪುರಕೊಯ್ಯುವೆಯೆಂದು ಪ.ತಾಯಿಯೆಂಬೆ ತವರೂರೆಂಬೆತ್ರಾಹಿತ್ರಾಹಿ ಎಂಬೆಬಾಯೆಂಬೆ ಮಾನವರಘ ಕಾಣಿಸುತಿರೆನೀಯಜಾಮಿಳಗಾಶ್ರಯನಿತ್ತೆಯೆಂದು 1ತಾತನೆಂಬೆ ಆದ್ಯಾಪ್ತನೆಂಬೆ ನಾಥನಾಥೆಂಬೆಪಾತಕಕೌರವರಾತಂಕ ಬಿಡಿಸಿ ಸಂಪ್ರೀತಿಲಿ ಪಾಂಡವರ ಕಾಯುವೆಯೆಂದು 2ಏಕನೆಂಬೆ ಅನೇಕನೆಂಬೆ ಸಾಕು ಸಾಕು ಎಂಬೆಶ್ರೀಕಾಂತ ಪ್ರಸನ್ವೆಂಕಟೇಕಾಂತ ದಾಸರಬೇಕಾಗಿ ದಡ ನೂಕುವೆಯೆಂದು 3
--------------
ಪ್ರಸನ್ನವೆಂಕಟದಾಸರು
ಕರುಣಿಸಬಾರದೆ ಕಂಜನಾಭನೆ ಕೈಯ ಮುಗಿವೆನಯ್ಯಾ ಪ.ವರಫಣಿಗಿರಿ ಸುಸ್ಥಿರಮಂದಿರ ಶ್ರೀಗುರುಜನಾರ್ದನಾಮರಗಣ ಪಾಲಕಅ.ಪ.ಅಪರಾಧಗಳಾಲೋಚಿಸುವರೆ ಸರೀ-ಸೃಪರಾಜನಿಗಳವೆಕೃಪೆಯಿಂದಲಿ ಸಂರಕ್ಷಿಸದಿದ್ದರೀ-ಯಪಕೀರ್ತಿಯು ಶ್ರೀಹರಿ ನಿನಗಲ್ಲವೆ 1ಕನಕಪುರಂದರಮುಖ್ಯ ದಾಸರಂತೆಗುಣವೆನಗಿನಿತಿಲ್ಲಜನರ ವಿಡಂಬನಕೆ ದಾಸನಾದರೂಘನಕೃಪಾರ್ಣವನೆ ಕನಕಾಂಬರಧರ2ಲಕ್ಷ ಮಾತ್ಯಾತಕೆ ಲಕ್ಷ್ಮೀನಾರಾಯಣರಕ್ಷಾಮಣಿ ನೀನೆಪಕ್ಷೀಂದ್ರವಾಹನ ಪಾಪವಿಮೋಚನತ್ರ್ಯಕ್ಷಮಿತ್ರನೆನ್ನಕ್ಷಿಗೋಚರನಾಗಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕರುಣಿಸಿ ಬಾರೆಲೆ ತಾಯೆ ಮಾಧವನಾವ್ಯಾಕೃತನಕರೆತಾರೆ ನೀರೆ ಬೇಕಾದವಳನಿನಿತುವಿರಹವಾರಿಧಿಯಲ್ಲಿ ನೂಕಿ ಓಡಿರುವನಲ್ಲೆ ಸಲೆ ಪ.ಬಿಸಜಕುಟ್ಮಳಕುಚವಸೋಂಕಿಮುದದಿ ಪಿಡಿದುಶಶಿಮೊಗದಿ ಮೋಹವನಿಡುವ ನುಡಿವಎಸೆವ ಕೊನೆವಲ್ಲಲಳುಕಿಸಿ ಎನ್ನಅಧರಪೀಯೂಷವನೊಲಿದೊಲಿದು ಸವಿದಕೋವಿದಪೊಸಮದಕರಿಯ ಸೊಂಡಿಲ ತೋಳಲಮರ್ದಪ್ಪಿಮಿಸುನಿಪುತ್ಥಳಿಯ ತೆರದಿ ಮೆರೆದಅಸಿಯ ಮಾಣಿಕಳೆ ಕೇಳಸುರಹರನಾಳಿದನೀಅಸುತೊರೆವೆ ತಾನಪಕಾರೆ ನೀರೆ1ಎಂಟೆರೆಡು ಕಳೆದೋರಿ ಸವಿದೋರಿ ಸುಖಬೀರಿ ಸಲೆಕಂಠಮಾಲೆಯ ಕೊಟ್ಟನೆ ನೆಟ್ಟನೆಎಂಟೆರಡವಸ್ಥೆಗಳ ಮೇಳಿಗೆಯ ಕ್ಷಣಲವಕೆವೆಂಠಣಿಸಿ ಅಮೃತವೆರೆದ ನೆರೆದಕಂಟಕಿಯು ದಾವಳೊ ಹರಿಯನೊಯ್ದಳಕದಿಂಗಂಟಿಕ್ಕಿದಳೊ ಬಿಡದೆ ಮಡದೆಉಂಟು ಮಾಡಿದನಲಾಮಂದಮುಗ್ಥೆಗೆ ಅಸಿಕಕಂಟಕಬಲೆಯ ಕಾಣೆ ಜಾಣೆ 2ಸರಸವಾತಿನ ಜಾಣ್ಮೆಯೆಂತುಸುರುವೆನಬಲೆಹರಣಳಿಯದೆಂದು ಪೇಳೆ ಕೇಳೆನಿರುತವನ ಕಿರುವೆರಳ ಸೌಂದರ್ಯಮಂ ನೆನೆಯುತಿರುವೆ ಪುಸಿಯಲ್ಲ ಕಾಣೆ ಪ್ರಾಣೆಕರುಣಿ ಬಲುನೊಂದರೆಂದದು ತನಗೆಕುಂದುಮರೆಯದಿನಿತೆಲ್ಲ ಒರೆಯೆ ಚತುರೆಯೆಭರದಲೊಮ್ಮದೊಮ್ಮೆ ಬಂದು ಪ್ರಸನ್ನವೆಂಕಟಗಿರಿಯರಸನೆಂದನಕ್ಕ ರಸಿಕ 3
--------------
ಪ್ರಸನ್ನವೆಂಕಟದಾಸರು
ಕರ್ತಕೃಷ್ಣಯ್ಯ ನೀ ಬಾರಯ್ಯ ಎನ್ನಾರ್ತ ಧ್ವನಿಗೊಲಿದು ಬಾರಯ್ಯ ಪ.ಸುಗುಣದ ಖಣಿಯೆ ನೀ ಬಾರಯ್ಯ ನಮ್ಮಘವನೋಡಿಸಲು ನೀ ಬಾರಯ್ಯಧಗೆಯೇರಿಸಿತುತಾಪಸುಧಾಮುಗುಳ್ನಗೆ ಮಳೆಗರೆಯೆ ಬಾರಯ್ಯ 1ವೈರವರ್ಗದಿ ನೊಂದೆ ಬಾರಯ್ಯ ಮತ್ತಾರು ಗೆಣೆಯರಿಲ್ಲ ಬಾರಯ್ಯಸೇರಿದೆ ನಾ ಶರಣ್ಯ ಬಾರಯ್ಯ ಒಳ್ಳೆದಾರಿಯ ತೋರಲು ನೀ ಬಾರಯ್ಯ 2ವೈರಾಗ್ಯ ಭಾಗ್ಯ ಕೊಡು ಬಾರಯ್ಯ ಜ್ಞಾನಾರೋಗ್ಯದಭೇಷಜಬಾರಯ್ಯಜಾರುತದಾಯು ಬೇಗ ಬಾರಯ್ಯ ಉದಾರಿ ಪ್ರಸನ್ವೆಂಕಟಪ ಬಾರಯ್ಯ 3
--------------
ಪ್ರಸನ್ನವೆಂಕಟದಾಸರು
ಕರ್ಮಬಂಧನ ಛೇದನ - ಶ್ರೀ - |ರಾಮನ ನಾಮವ ನೆನೆ ಮನವೆ ಪ.ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
--------------
ಪುರಂದರದಾಸರು
ಕಲಮದಾನಿ ನಾರಾಯಣರಾವ328ಎಂದಿಗೆ ಕಾಂಬೆನೊಮುರಹರಮಂದರೋದ್ಧರಅಂದುಇಂದುಎನದೇ ಮನ್ಮನಮಂದಿರದೊಳಿಂದಿರಾವರ ಪಭೋಗಿಶಯ್ಯದಿ ಯೋಗ ನಿದ್ರೆಯಲಿಜಾಗರಾದೆನೋಹರಿಜಾಗುಮಾಡದೆ ಹೃದಯ ಪದ್ಮದಿಭಾಗವತರ ಭಾಗ್ಯದ ದೇವ 1ಸಿರಿಯ ಸುರುಚಿರ ಊರುಗಳ ಮೇಲೆಚರಣಯುಗ್ಮವನಿರಿಸಿಪರಮಸುಖಕೆ ಮರಳುಗೊಂಡೆನ್ನಮರತೆಯಾದರೆಸ್ವರಮಣನಿನ್ನ 2ಸುರರುಋಷಿ ಪಿತೃ ಧರಣೀಶ ಗಂಧರುವನರರ ವರದ ಭಕ್ತಿಲಿಕರೆಪ ಸೇವೆಗೆ ಮೆಚ್ಚಿ ಎನ್ನನುತೊರೆದು ಬಿಡಲು ಸಿರಿವಿಠಲ ನಿನ್ನಎಂದಿಗೆ ಕಾಂಬೆನೊಮುರಹರ3
--------------
ಸಿರಿವಿಠಲರು
ಕಲಿಯುಗದ ಮಹಿಮೆಯನು ಕಾಣಬೇಕಿಂತು ಪ.ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |ಗುರುಹಿರಿಯರೊಳು ದೋಷವೆಣಿಸುತಿಹರು |ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |ತರುಣಿಯರ ನುಡಿಗಳನು ಲಾಲಿಸುತ್ತಿಹರು 1ಕಂಡುದನೆ ಹೇಳರು ಕಾಣದನೆ ಹೇಳುವರು |ಉಂಡ ಮನೆಗೆರಡನ್ನೆ ಎಣಿಸುತಿಹರು ||ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |ದಂಡಿಸುವರಿಂಗೆ ಧನಗಳನು ಕೊಡುತಿಹರು 2ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |ಒಳ್ಳೆಯವರೊಡನೆ ವಂಚನೆ ಮಾಳ್ಪರು ||ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |ಬಲ್ಲಿದವರಿಗೆ ಬಾಯ ಸವಿಯನುಣಿಸುವರು 3ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು 4ಮಾಡಿದುಪಕಾರವನು ಮರೆತುಕಳೆವರು ಮತ್ತೆ |ಕೂಡಾಡಿ ಬೇಡುವರು ಕುಟಿಲತ್ವದಿಂದ ||ರೂಢಿಗೊಡೆಯನು ನಮ್ಮ ಪುರಂದರವಿಠಲನ |ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ 5
--------------
ಪುರಂದರದಾಸರು
ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿಫುಲ್ಲನಾಭನಿನ್ನ ಪಾದಪಲ್ಲವ ಛಾಯೆಯ ಬಿಡೆಪ.ಶೂಲಕೋಟಿಗಂಜೆಕರವಾಳಘಾತಿಗಂಜೆವಿಶ್ವಪಾಲಕ ನಿನ್ನ ದಿವ್ಯನಾಮಮಾಲಿಕೆ ವಜ್ರಾಯುಧುಂಟು 1ಪೋಕಜನಕಂಜೆ ದುರಿತಾನೀಕ ಬರಲಂಜೆ ಜಗದೇಕ ನಿನ್ನ ಶ್ರೀಪದಾರಾಧಕರ ಬಲ ಉಂಟೆನಗೆ 2ಅಂದು ಅಪಮೃತ್ಯು ಬಂದೆನ್ನಂದಗೆಡಿಸಲು ಎನ್ನತಂದೆ ಪ್ರಸನ್ವೆಂಕಟೇಶ ಬಂದು ಕಾಯಿದ ಹವಣು ಬಲ್ಲೆ 3
--------------
ಪ್ರಸನ್ನವೆಂಕಟದಾಸರು
ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|ನಾಗಸಂಪಿಗೆ ಅರಳಲು ಪಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |ನಿದ್ದೆ ತಿಳಿದೇಳಯ್ಯ ಕೃಷ್ಣ 1ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |ಹೊಸದಾದ ಹಸುವಿನೀ ತುಪ್ಪವನ್ನು ||ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |ಹಸುಳೆ ನಿನಗಾರೋಗಣೆಗೆ ಮಾಡುವೆ 2ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |ಕಂದರೊಳಗತಿ ನೀನು ಹಟಿಯಾದೆಯ ||ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |ಕಂದ ಅಳಬೇಡವೊ ಪುರಂದರವಿಠಲ 3
--------------
ಪುರಂದರದಾಸರು
ಕಾಡದಿರೆನ್ನ ಕಿಡಿಗೇಡಿ ಮನವೆಓಡದಿರು ಅಚ್ಯುತಾಂಘ್ರಿನೋಡುಮನವೆಪ.ಬೆಲೆಯಿಲ್ಲದಾಯು ರತ್ನದ ಮಾಲೆ ಹರಿದಿದೆಆಲಸಿಕ್ಯಾತಕೆ ಹರಿಯ ಊಳಿಗಕೆಹುಲಿಯ ಬಾಯಿಯ ನೊಣನ ತೆರನಂತೆ ಮೃತ್ಯುಮುಖದಿಸಿಲುಕಿಹೆನು ಸರಸವಾಡದೆ ನಂಬು ಹರಿಯೆ 1ಕಂಡ ಕಡೆಯಲಿ ತಿರುಗಿ ಬಳಲಿದೆಯಲ್ಲದೆ ಬೇರೆಉಂಡುಟ್ಟು ಸುಖಿಸಿ ಯಶಸೊದಗಲಿಲ್ಲಪುಂಡರೀಕಾಕ್ಷಾಂಘ್ರಿ ಪುಂಡರೀಕವ ಹೊಂದಿಬಂಡುಣಿಯೆನಿಪರ ಸೇರು ಸಾರು 2ಗೋವರಂತಖಿಳ ಪಶುಗಳನು ದಾತಾರನಿಗೆತಾವು ಒಪ್ಪಿಸುವಪರಿಸತಿಸುತರನುದೇವದೇವ ಪ್ರಸನ್ನ ವೆಂಕಟಪಗರ್ಪಿಸಿಹೇವಹೆಮ್ಮೆಯ ಬಿಟ್ಟು ಸತತ ಹೊಗಳದೆ3
--------------
ಪ್ರಸನ್ನವೆಂಕಟದಾಸರು
ಕಾಂತೆ ಸೈರಿಸಲಾರೆ ಕಂಜಾಕ್ಷನಗಲೀರೆಕಂತುಶರದ ಬಲ ಕಡುವೇಗವಾಯಿತಲೆಕಾಂತ ಮೂರುತಿಯ ಕರೆತಾರೆ ತಾಯೆ ಪ.ಸೀತಕರನ ಪ್ರಭೆಯು ಶುಕದುಂಬಿಗಳ ರವವುಸೋತಬಾಲೆಯ ಮುಂದೆ ಸರಸವೆ ಸೊಗಸೋದೆನೀತವೇನೆಲೆ ತಂಗಿ ನೀರಜನಾಭಗೆ 1ನೀರೊಳು ಕರೆದೆನ್ನನೀಲಜೀಮೂತವರ್ಣನೀರಜದ್ವಕ್ತ್ತ್ರವ ನಖದಿಘಾಸಿಮಾಡುವನಾರಾಯಣನೆನ್ನ ಸುಳಿದರಿನ್ನೇನೆ 2ಅಧರದೊಳಿಟ್ಟುಕೊಳಲು ಅತಿಮೋಹಿಸುವ ನಲ್ಲಯದುಕುಲದರಸ ಮೆಚ್ಚೆ ಎನ್ನೊಳು ಘನ್ನಮಧುಪಕುಂತಳ್ಯಾವಳೊ ಮನೆಗೊಯ್ದಳೊ 3ಆವಗವನಕೇಳಿಆಡುವವನ ಸಾಲಿದಾವಸುಕೃತದಿಂದ ದೊರೆತನೊ ಶ್ರೀಮುಕುಂದಆವ ದುಷ್ಕøತ ಬಂದು ಅಗಲಿಸಿತಿಂದು 4ಚಂಪಕದಲರ್ಮಾಲೆ ಚಂದನದ ಲೇಪ ಒಲ್ಲೆಕಂಪಿನೊಳಗೆನಿಂದುತಕ್ರ್ಕೈಸುವಾನಂದಸಂಪನ್ನ ತಾ ಬಂದು ಸಲಹುವನೆಂದೆ 5ಪರಿಯಂಕದಲಿ ಕುಳಿತು ಪರಿಪರಿಯ ಸುಖವಿತ್ತುಕರದಿ ಕಂಕಣವಿಟ್ಟು ಕಡÉಯ ಪೆಂಡ್ಯಾ ಕೊಟ್ಟುಕರುಣಿಜರಿದುತರವೆ ತನಗಿದು6ಇಂದಿರೆರಮಣ ಎನ್ನ ಇಚÉ್ಭಯಸುರಧೇನುಸುಂದರ ರನ್ನ ಪ್ರಸನ್ನ ವೆಂಕಟೇಶನಸಂದೇಹವಿಲ್ಲದೆ ಶರಣು ಹೊಂದಿದೆನೊ 7
--------------
ಪ್ರಸನ್ನವೆಂಕಟದಾಸರು