ಒಟ್ಟು 1795 ಕಡೆಗಳಲ್ಲಿ , 107 ದಾಸರು , 1426 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ದೇವನೆ ಪಾಲಿಸೈ ಹಿತ ಬಂಧು ನೀನೇ ರಕ್ಷಿಸೈ ಪ ಕಾವುದೈ ತವದಾಸನನು ಭವ ಬಂಧದಿಂದಂ ದಾಟಿಸೈ ಮಂದರಾಧರ ವಿಶ್ವರೂಪನೇ ಅಂದದಲಿ ಶ್ರೀಪತೇ ಬಂದು ನೀನೇ ಪಾಲಿಸೈ ನಿಜ ಬಂಧು ನ್ಯಾಯದಿ ದಾಸನ 1 ಎಲ್ಲಿ ಕೂತರೂ ನಿನ್ನ ಭಜಿಸೆನು ವಲ್ಲಭನ ಶ್ರೀ ಲಕ್ಷ್ಮಿದೇವಿಯ ಅಲ್ಲಗಳೆಯದೆ ರಕ್ಷಿಸೈ 2 ನೀನೆ ಭಕ್ತರ ತಂದೆ ತಾಯಿಯು ಚನ್ನಕೇಶವ ಸ್ವಾಮಿ ರಕ್ಷಿಸು ದೈನ್ಯದಿಂದಲಿ ಬೇಡುವೇ 3
--------------
ಕರ್ಕಿ ಕೇಶವದಾಸ
ದೇವ-ದೇವತೆಗಳ ಸ್ತುತಿ ಶ್ರೀ ಲಕ್ಷ್ಮೀ ಸ್ತುತಿ 3 ನೀನನ್ನ ಹೇಳಬಾರದೇನ ತಾಯಿ ನೀನನ್ನ ವಾನರ ವಂದಿತ ಶ್ರೀನಿವಾಸಗೆ ಬುದ್ಧಿ ಪ ಶ್ರೀನಿಧಿ ಪರನೆಂದು ನಂಬಿ ಬಂದ ಬಡ ಪ್ರಾಣಿಯ ಪೊರೆಯೆಂದು ಜಾನಕಿ ದೇವಿಯೆ 1 ಕರ ಪಿಡಿವೆನೆಂಬೊ ಘನಾ ಬಿರುದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ 2 ಉರಗಶಾಯಿ ಶಿರಿಗೋವಿಂದ ವಿಠಲ ತುರಗಗ್ರೀವ ನರಹರಿಗೆ ತ್ವರಿತದಲಿ 3
--------------
ಅಸ್ಕಿಹಾಳ ಗೋವಿಂದ
ದೇವಗಂಗೆಯು ಹರಿಯುತಿರಲು ತೀರದಲ್ಲಿ ನಾ ಬಾವಿಯನು ತೋಡುತಲಿ ಬಲು ಬಳಲಿದೆ ಪ ಗೋವು ಕರೆಯುವ ಕ್ಷೀರ ಕೊಡಕೊಡದಿ ತುಂಬಿರಲು ಬೇವಿನೆಣ್ಣೆಯ ಬಯಸಿ ಬಳಲಿ ಬೆಂದೆ ಅ.ಪ ಅರಸುತನದಲಿ ಆಳುತಿರುವ ಸ್ಥಾನವನು ನಾ ಮರೆತು ಕಡು ಹೇಡಿಯಂದದಿ ನಡೆದೆನೊ ದುರಿತರಾಶಿಗಳನ್ನು ತರಿವ ಮಂತ್ರಗಳರಿತು ಕುರುಬ ಹೊದ್ದಿರುವ ಕಂಬಳಿ ಬಯಸಿದೆ 1 ವೇದಾಂತ ಸಾಮ್ರಾಜ್ಯದಧಿಕಾರದಲಿ ಕುಳಿತು ಕಾದ ಮರುಭೂಮಿ ರಾಜ್ಯವ ಬಯಸಿದೆ ಆದರದಿ ಕರೆದು ಬಡಿಸುವರ ಭೋಜನ ತೊರೆದು ಮೂದಲಿಸುವರನು ಬೇಡಿದೆನನ್ನವ 2 ನೀಗಿ ಪುಣ್ಯವು ನಿನ್ನ ದಯವು ತಪ್ಪಿದ ಮೇಲೆ ಕೈಗೊಂಬೆ ಕರಡಿಯಾಗುವುದು ಕ್ಷಣದಿ ರಾಗಗಳ ಕಳೆದು ಮನವಚನ ಕಾಯಗಳನ್ನು ಬೇಗ ನಿನ್ನಡಿಗಳಿಗೆ ಸೆಳೆಯಲೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ದೇವದೇವತೆಗಳ ಸ್ತುತಿ ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ ಭಕುತರ ಪೊರೆವಾ ಅ.ಪ ದುರಿತ ತಿಮಿರಕೆ ಸವಿತ ವ್ರಾತ ಸೇವಿತ ತ್ವರಿತ ಮಧ್ಬಂಧು ಪೊರೆಯೊನೀನೆಂದು ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ 1 ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ- ಭಾರ್ಗವಿ ಪ್ರಕಟನಾಗಿಹನ 2 ತೋರಿಸುವದಕೆ ಅಸುರನ ಮಥಿಸಿ ನೆಲಸಿಕರುಣದಿ ದಿವಿಜರೊಡೆಯನ3 ಪೋಪುದು ವೃಜಿನ ತಿಳಿವದು ಮುನ್ನ ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ ಹೃದಯದಿ ಪೊಳಿವ 4 ತರುವರ ಸಂಸ್ಥಾ ಚರಿತ ತ್ರಿಗುಣಾತೀತ ಪದಯುಗಲ ಬಿಡದನುಗಾಲ ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ5
--------------
ಕಾರ್ಪರ ನರಹರಿದಾಸರು
ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ದೇಹ ಭಾವವು ಹೋಗಿ ದೇವನೇ ತಾನಾಗಿದೇಹಗುಣವೆಲ್ಲಿಯದೋ ಮುಕ್ತ ಪ ಗರುಡನ ಮನೆಯೊಳಗೆ ನಾಗರ ಜಾತಿಯಪರಿ ನಡೆವುದೇನೋ ಮುಕ್ತಶರೀರ ಸಹಿತದ ಬ್ರಹ್ಮಾಗಿ ತಾನಿರೆಹರಿವವೆ ಪ್ರಾಣಗಳು ಮುಕ್ತ1 ಉರಿಯದು ಉರಿಯಲು ಉರಿಯಲಿಅರಗದು ಇಹುದೇನೋ ಮುಕ್ತಕರುವಿಟ್ಟೆರಕದಿ ಥಳಥಳ ಹೊಳೆಯದೆಇರುವುದೇ ಈ ಇಂದ್ರಿಯಗಳು ಮುಕ್ತ2 ರವಿಯದು ಬೆಳಗಿರೆ ಕಿರಣ ಕಾಂತಿಯಿಂಗೂಗೆಗಳೆಲ್ಲ ತಿರುಗುವವೋ ಮುಕ್ತಖವ ಖವ ಖವಿಸುತ ಪರವಶವಿರೆವಿವರಿಸೆ ಮನವೆಲ್ಲೊ ಮುಕ್ತ 3 ಈಶನ ಕಣ್ಣುರಿ ಭುಗು ಭುಗು ಭುಗಿಲೆನೆಏಸು ಉಳಿವುದು ಕಾದು ಮುಕ್ತಿಸೂಸುವ ಮುಖದಲಿ ತೃಪ್ತಿಯೆ ತುಂಬಿರೆವಾಸನೆ ಎಲ್ಲಿಹುದೋ ಮುಕ್ತ 4 ಪರಮಾತ್ಮನು ತಾ ಪರಿಪೂರ್ಣನಾನಿರೆಮೆರೆವುದು ಅವಿದ್ಯೆ ಮುಕ್ತಗುರು ಚಿದಾನಂದ ಸಹಜದಿ ತಾನಿರೆಇರುವುದೆ ಜೀವತ್ವ ಮುಕ್ತ 5
--------------
ಚಿದಾನಂದ ಅವಧೂತರು
ದೇಹಿ ನಿರ್ವಿಘ್ನದಾಯಕ ಫ ಲಂಕಾಧಿಪತಿ ಗರ್ವಾಹಂಕಾರವ ಮುರಿದು ಕುಂಕುಮ ಚಂದನಾಲಂಕೃತನಾಗಿ ನಿಶ್ಚಂಕೆಯೊಳಿಹ ಬಿರುದಂಕ ಕೃಪಾಲಯ 1 ಸಿರಿ ಖಂಡ ಪರಶು ಜಾತಾ ಉಂಡಲಿಗೆಯ ಪ್ರೀತ | ಮಾರ್ತಾಂಡ ಕಿರಣ ಭಯ ಖಂಡಿತ ಗಣಪ ಪ್ರಚಂಡ ವಿನಾಯಕ 2 ದೋಷರಹಿತ ಉರ್ವಿಯ ಪಾದ ವಾಸವ ಭವ ಕಮ ಪುರಾಧೀಶ ಗಣೇಶನೆ 3
--------------
ಕವಿ ಪರಮದೇವದಾಸರು
ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ದೋಷ ರಾಸಿಯಳಿದು ಪ ಭಾಸುರ ಗುಣಗಣ ಭವ್ಯ ಶರೀರ ಅ.ಪ ಚಿತ್ತ ನಿನ್ನ ಪದ ಸೇವೆಯೊಳಿರಲಿ-ಚಿಂತೆ ಇತರ ಬಿಡಲಿ ಅಂತರಂಗದಲ್ಲಾನಂದಿಸಲಿ-ಅಹಂಕೃತಿಯನ್ನೆ ಬಿಡಲಿ ಪಂಕಜ ಪಂಥವ ಪಾಲಿಸೊ ಪರಮ ಪುರುಷ ಹರಿ 1 ಅರಿಷಡ್ವರ್ಗಗಳಟವಿಯ ಖಂಡಿಸು-ಆನಂದದಲಿರಿಸು ದುರ್ಮತಿಯನೆ ಬಿಡಿಸು ಸನ್ನುತ ನಿರುತವು ನಿಲ್ಲಿಸೋ ನೀರಜಾಕ್ಷ ಹರಿ2 ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ ಭಜಕರ ಪಾವನ ಭವನುತ ಚರಣ-ಋಜಗಣನುತಾಭರಣ ವಿದಾರಣ ಕೋವಿದನುತ ಹರಿ 3
--------------
ವಿಜಯದಾಸ
ದ್ರೌಪದಿ ಸುಳಾದಿ ಪುರಂದರ ಗುರು ನಾಗೇಶಾವೇಶ ಗುರು ಶ್ರೀಪಾದ ರಾಯ ಗುರು ಯೋಗಿ ಟೀಕಾರ್ಯ ಗುರು ಶ್ರೀಮದಾಚಾರ್ಯ ಗುರು ನಾಗಶÀಯನ ನೀನು ಸಕಲ ಜಗದ್ಗುರು ಈತ ಗುರು ಸಂತತಿಗೆ ವಂದೀಸಿ ತಾತ್ವಿಕರ ಜಾಗು ಮಾಡದೆ ನಮಿಪೆ ಜ್ಞಾನ ಪ್ರದಾತರೆಂದು ಆಗಮ ಪೌರಾಣ ಶೃತಿ ತತಿಗಳೊಳೆಲ್ಲ ಆಗುವಳಭಿಮಾನಿ ಭಾರತೀದೇವಿ ಎಂದು ಈಗ ಈ ಮಹಿಮಳ ಚರಿತೆ ಬುದ್ಧಿಗೆ ದೇವಿ ತಾಗಿಸಿದಂದದಿ ಸಾಗಲಿ ನುಡಿವುದು ನಾಗರಾಜನ ಜನನಿ ಸ್ವಪ್ನದಿ ಸುಳಿದಳು ಕೂಗಿದೆ ಅಯೋನಿಜೆ ದುಃಖರಹಿತಳೆಂದು ಭಾಗವತರ ಕಾಯ್ವ ಭಾಗ್ಯ ಸಂಪನ್ನದೇವಿ ಯೋಗಿ ಜನರಿಗೆಲ್ಲ ಗುರುಪತ್ನಿ ಎಂದೆನಿಪೆ ಆಗಾಗ ಅವತರಿಸಿ ಅನಿಲನ ಕಾರ್ಯಕ್ಕೆ ಆಗುವೆ ಸಹಕಾರಿ ಅಸುರರ ಸಂಹಾರಿ ಶ್ರೀ ಗುರೋರ್ಗುರು ಹರಿ ಗೋಪಾಲಕೃಷ್ಣವಿಠಲ ಭಾಗವತರ ಕಾಯ್ವ ನಿನ್ನದ್ವಾರದಿ ಸ್ಮರಿಸೇ 1 ಕೃತಿಸುತೆ ಕೊಂಡದಿ ಉದಿಸಿ ಸುತೆ ಎನಿಸಿದೆ ದ್ರುಪದನಿಗೆ ಚ್ಯುತರಹಿತ ಯೌವನಯುತೆ ಐವರಿಗರಸಿಯು ಆದೆ ಪ್ರತಿಯಿಲ್ಲದ ಪತಿವ್ರತೆ ಸುರತತಿ ಜನನಿಯು ನೀನೌ ಮಾ- ರುತ ಸುತನಲ್ಲದೆ ನಿನಗಿನ್ನಿತರರ ಸಂಗವು ಉಂಟೆ ಸುತರಂದದಿ ನಾಲ್ವರ ತಿಳಿದತಿಶಯದಲಿ ಅವರವರಾ ಸತಿಯರ ನಿನ್ನೊಳಗಡಿಗಿಸಿ ರತಿ ಕಾಲದಲೊಲಿದಿತ್ತೆ ಮತಿವಂತರಿಗಲ್ಲದೆ ಪ್ರತಿ ಜನರಿಗೆ ಮೋಹಕವು ಕ್ಷಿತಿಯೊಳು ನೀನವತರಿಸೀ ಕ್ಷಿತಿಗೇ ತೋರಿದ ಲೀಲೆ ಅತಿ ಸೌಭಾಗ್ಯದಿ ಮೆರೆದೆ ಕ್ಷಿತಿಪತಿಸೂಯಾಗದಲಿ ಖತಿಗೊಳ್ಳಲು ಖಳ ಜನರು ಸ್ಥಿತ ಸಾಮ್ರಾಜ್ಯವ ಕಂಡು ಕ್ಷಿತಿಭಾರವನಿಳುಹಲು ಶ್ರೀಪತಿ ಪತಿಮನವರಿಯುತ ಕುರು ಪತಿಸಭೆಯಲಿ ಭ್ರಮಿಸುತ ಜಾರುತ ಸರಸಿಯೋಳ್ ಬೀಳುತಿರೆ ಪತಿ ಶ್ರೀಪತಿ ಮೊಗವೀಕ್ಷಿಸಿ ಅತಿ ಹಾಸ್ಯದಿ ನೀ ನಗಲು ಖತಿಗೊಳ್ಳಲು ಕುರುಪತಿ ಕಲಕಿತು ದ್ವೇಷದ ಭಾವಗಳು ಪತಿ ಭಾರದ ಹರಣಕೆ ಮೂಲಾಯಿತು ನಿನ್ನಯ ನಗೆ ಕಿಡಿ ತಾ ಕಾತುರಕ್ಕಸ ತರುಗಳಿಗೆ ಸೋಕಿತು ಕಾಮನ ಬಿಸಿಯು ಮತಿಹೀನರು ನಿನ್ನನು ಬಯಸುತ ಬರೆ ದ್ವೇಷಾಗ್ನಿ ಜ್ವಲಿ ಸುತ ವಾಯು ಸಹಾಯದಲಿ ಹುತಗೈಸಿದೆ ಖಳತತಿಯ ಪತಿಯಂತರ್ಗತ ಕೃಷ್ಣನ ನುತಿಸುತ ಭಕ್ತ್ಯಾಜ್ಯಾಹುತಿ ಕ್ಷಿತಿ ಭಾರವನಿಳುಹಿಸಿದೆ ಹಿತತಂಗಿಯೆ ಗೋಪಾಲಕೃಷ್ಣವಿಠ್ಠಲಗೇ ನೀ ಪ್ರತಿಯುಂಟೆ ನಿನಗೆ ಈ ಕ್ಷಿತಿಯೊಳು ನಾಕಾಣೆ 2 ಮಡಿಯದೆ ದುರ್ಯೊüೀಧನನು ಮುಡಿಯನು ಕಟ್ಟೆನು ಎಂಬ ದೃಢ ಸಂಕಲ್ಪಳೆ ಪುಷ್ಪ ಮುಡಿಯಲಪೇಕ್ಷಿಸಿದೆ ನೀ ಒಡೆಯುವರುಂಟೇ ಇದರ ಒಡಲಿನ ಮರ್ಮವ ದೇವಿ ಒಡೆಯ ವೃಕೋದರ ನಿನ್ನ ನುಡಿ ಕೇಳುತ ವನ ಪೊಕ್ಕು ಮಡುಹುತ ಯಕ್ಷರ ತಂದು ಮುಡಿಸಿದ ಸೌಂಗಂಧಿಕವ ಪೊಡವಿಯೊಳ್ಹರಡಿತು ವಾರ್ತೆ ಒಡಲರಿಯದೆ ಜನತತಿಗೆ ಪಿಡಿಯುತ ಕರದಲಿ ಪುಷ್ಪ ಒಡೆಯನ ಪ್ರೇಮದಿ ನೋಡಿ ಮುಡಿಸಿದೆ ಸಿರಿಹರಿ ಮುಡಿಗೆ ಕಡು ಭಕ್ತಿಯೊಳಂತರದಿ ಬಿಡುಬಿಡು ಬಿಂಕವ ಲೀಲೆ ಕೊಡು ಕೊಡು ಭಕ್ತಿಯ ಬಾಲೆ ಪಡಿಸಾನಂದವ ಶೀಲೆ ನುಡಿಸಡಿಗಡಿಗ್ಹರಿ ಲೀಲೆ ಒಡಗೂಡತ ಪತಿಯೊಡನೆ ನಡೆಸಿದ ಚರಿತೆಗಳೆಲ್ಲ ಕಡು ಮೋಹವು ರಜ ತಮರಿಗೆ ಕೊಡುವುದು ಸುಖ ಸುಜನರಿಗೆ ಪೊಡವಿಪತಿ ಗೋಪಾಲಕೃಷ್ಣವಿಠಲ ನಿನ್ನ ನಡೆನುಡಿ ಮೆಚ್ಚುತ ನಡೆಸಿದ ಭಾರತ ನಾಟಕವÀ 3 ಆನಂದ ಜ್ಞಾನಪೂರ್ಣೆ ಆಗಾಗ ಒದಗಿದ ಹೀನ ದುಃಖದ ಸÉೂೀಂಕು ಉಂಟೆ ನಿನಗೆ ಇನ್ನು ಪ್ರಾಣಪತಿಗಳೈವರೆದುರಲಿ ಖಳ ನಿನ್ನ ಮಾನ ಹಾನಿಯ ಗೈಸೆ ಜಗವೆ ತಲ್ಲಣಿಸಿತು ಮಾನಾಭಿಮಾನ ಬಿಟ್ಟು ಶ್ರೀನಿಧಿ ಗತಿ ಎನ್ನೆ ಅಕ್ಷಯ ವಸನವು ಪ್ರಾಣಪಂಚಕ ಹರಿಯಾಧೀನವೆಂಬುವ ತತ್ವ ಪ್ರಾಣಕ್ಕೆ ಪ್ರಾಣಬಿಂಬ ಸ್ವಾಮಿ ಎಂಬುವ ತತ್ವ ಮಾನಾಭಿಮಾನ ತೊರೆದು ಪ್ರಾಣೇಂದ್ರಿಯವ ಜರಿದು ಮಾನಸದಲಿ ಹರಿಯ ಸ್ಮರಿಸಿದರಕ್ಷಯ ಸ್ಥಾನಪ್ರಾಪ್ತಿಯು ಎಂಬ ತತ್ವರಹಸ್ಯಗ- ಳಾನು ಸೂಚಿಸೆ ನಿನ್ನ ಕೃತಿಯಲ್ಲದಿನ್ನಿಲ್ಲ ದಾನವರೆಲ್ಲ ನಿನ್ನ ಕಾಮಿಸಿ ನೋಡಲವರು ಏನೆಂಬೆ ಮಾಡಿದಂಥ ಅಲ್ಪಸ್ವಲ್ಪದ ಪುಣ್ಯ ಕ್ಷೀಣಗೈಸುತ ಸೆಳೆದು ಹೀನ ಪಾಪದಿ ನೂಕಿ ಹಾನಿಗೈಸಿದೆ ಪವಮಾನಸುತನಿಂದಲಿ ಮಾನುನಿಮಣಿ ಸರ್ವಕ್ಷೇಮ ಪಾಲಿಪ ಭಕ್ತ- ರಾನನದಲಿ ನೋಡೆ ಜ್ಞಾನಾನಂದವನಿತ್ತು ಹೀನ ನರಕದಿ ಬಿದ್ದ ಭ್ರಾತೃಸಹಿತದಿ ಕುರುಪ ಕಾಣದೆ ನಿನ್ನ ಮಹಿಮೆ ಜ್ಞಾನರಹಿತನಾಗಿ ಜಾಣೆ ಶ್ರೀ ಗೋಪಾಲಕೃಷ್ಣವಿಠ್ಠಲನ ನಿಜ ಜ್ಞಾನ ಪಾಲಿಸಿ ಕಾಯೆ ಭೀಮಸೇನನ ಜಾಯೆ 4 ಮುಕ್ತರ ಬಂಧುವೆ ನೀನು ಭಕ್ತಿಯದಾತಳÉ ನೀನು ತತ್ವ ತಿಳಿಸುವೆ ನೀನು ಚಿತ್ತದೆ ನೆಲಸುವೆ ನೀನು ಹತ್ತದು ದುಃಖವು ನಿನಗೆ ಸುತ್ತದು ಶೋಕವು ನಿನಗೆ ಮುಕ್ತಾರ್ಥವ ಕೊಡುವವಳೆ ಮತ್ತೆ ಅಯೋನಿಜಹಳೆ ಮುತ್ತು ಮಾಣಿಕ್ಯವು ನವರತ್ನದ ಆಭರಣಗಳ ಕಂಚುಕ ನೆತ್ತಿಲಿ ಮಕುಟವನಿಟ್ಟು ಚಿತ್ತದೊಲ್ಲಭನಂಕದಲಿ ಹತ್ತಿ ಸಿಂಹಾಸನದಲಿರೆ ಸುತ್ತಲು ಸೌಪಣ್ರ್ಯಾದಿ ಸುರಸ್ತ್ರೀಯರು ಓಲೈಸೆ ಚಿತ್ತದಿ ಸಿರಿಹರಿಯನು ಭಕ್ತಿಲಿ ಭಜಿಸುತ ಮುಕ್ತಾ- ಮುಕ್ತರ ಕೃಪಪಾಂಗದಲಿ ಸುತ್ತಲೀಕ್ಷಿಸಿ ಕಾವೆ ಭಕ್ತಿಲಿ ದ್ರೌಪದಿ ಎಂದು ಎತ್ತಿದ ಸ್ವರದಲಿ ಕೂಗೆ ಚಿತ್ತದೊಲ್ಲಭನೊಡನೆ ಚಿತ್ತೈಸೆನ್ನಯ ಮನಕೆ ಹತ್ತಿಕಾಡುವ ಎನ್ನ ದುಷ್ಕøತ ಕರ್ಮಗಳೆಲ್ಲ ಕತ್ತರಿಸುತ ಕಾಯಮ್ಮ ಸತ್ಯಾಪ್ರಿಯನನು ತೋರೆ ಆರ್ತಜನರ ಪಾಲ ಗೋಪಾಲಕೃಷ್ಣವಿಠ್ಠಲನ್ನ ಅರ್ಥಿಯಿಂದಲಿ ಎನ್ನ ಚಿತ್ತದಿ ತೋರೆಲೆ ಜನನಿ 5 ಜತೆ ತತ್ವದೇವತೆಗಳ ಜನನಿ ತತ್ವಾರ್ಥ ತಿಳಿಸೇ ಆಪ್ತ ಗೋಪಾಲವಿಠ್ಠಲನೆಂದೆನಿಸೇ
--------------
ಅಂಬಾಬಾಯಿ
ದ್ವಂದ್ವಾತೀತನ ಮಾಡೋ ನಿದ್ರ್ವಂದ್ವನೆ ಪ ಸರ್ವಕಾಲದಿ ನೀನೆ ಸರ್ವಸ್ವವೆನ್ನುತ ಉರ್ವಿಯೊಳಾನಿರ್ಪ ಪರಿತೋರು ದೇವಾ 1 ಸರ್ವೇಶ ಕರ್ಮಗಳೆಲ್ಲವ ನಿನಗಿತ್ತು ಗರ್ವವರ್ಜಿತನಾಗಿಹುದನ್ನು ನೀಡೈ 2 ಈಶ ನೀನೆನ್ನೊಳು ವಾಸಿಸುವವನಾಗಿ ಭಾಸಿಪುದನು ತೋರು ಜಾಜೀಶಾಶಾ 3
--------------
ಶಾಮಶರ್ಮರು
ದ್ವಾದಶನಾಮ ಸ್ತುತಿ ನಿನ್ನ ನೋಡಿ ಧನ್ಯನಾದೆನು ಶ್ರೀರಂಗನಾಥ ಪ ನಿನ್ನ ನೋಡಿ ಧನ್ಯನಾದೆ ಪನ್ನಗಶಯನ ರಂಗ ಮನ್ನಿಸಿ ರಕ್ಷಿಸು ಎನ್ನ ಮುನ್ನಜನ್ಮ ಬಾರದಂತೆ ಅ.ಪ. ಅರ್ಚ ಶೇಷಶಯನ ಲಕ್ಷ್ಮಿಗೆರಗಿ ಕೇಶವ ನಿಮ್ಮ ಸ್ತುತಿಸುವೆ 1 ಆದಿಸೃಷ್ಟಿಯಲ್ಲಿ ಬ್ರಹ್ಮನ ನಾಭಿಕಮಲದಲ್ಲಿ ಸೃಷ್ಟಿಸಿ ವೇದಸಾರವಾದ ಪ್ರಣವ ಓದಿ ಪೇಳಿದ ನಾರಾಯಣ 2 [ಆರ್ತಿ]ಯಿಂದ ಅಜನು ನಿಮ್ಮ ಮೂರ್ತಿಗಾಗಿ ತಪವ ಮಾಡೆ ಮಧುವೈರಿ ಮಾಧವಾ 3 ಪ್ರಣವಾಕಾರ ವಿಮಾನದಲ್ಲಿ ನಾಲ್ಕು ವೇದಶೃಂಗವಿರಲು [ವಿಷ್ಣು] ಪರವಾಸುದೇವರಿಂದ ಬಂದ ಶ್ರೀಗೋವಿಂದ 4 ಸತ್ಯಲೋಕದಲ್ಲಿ ನಿಂತು ನಿತ್ಯಪೂಜೆಯನ್ನು ಗ್ರಹಿಸಿ ಮತ್ತೆ ಇಕ್ಷ್ವಾಕುಗೊಲಿದ ವಿಶ್ವಮೂರುತಿ ವಿಷ್ಣುವೇ 5 ಸರಯು ತಮಸ ತೀರಮಧ್ಯದಿ ಹರಿಯೆ ನಿಮ್ಮನಿರಿಸಿ ದೊರೆಯು ಪರಮಪುರುಷನಿಂದ ಪೂಜೆ ಗ್ರಹಿಸಿದ ಮಧುಸೂದÀನ 6 ರಾಜ್ಯಾಭಿಷೇಕ ಕಾಲದಲ್ಲಿ ರಾಮಚಂದ್ರರು ರಾಕ್ಷಸೇಂದ್ರಗೆ ಕೊಡಲು [ರಾಜ್ಯವ] ಕಾವೇರಿ ಮಧ್ಯದಿನಿಂದು ತ್ರಿಜಗವಳೆದ ತ್ರಿವಿಕ್ರಮ 7 ಫಾಲ್ಗುಣ ಮೀನ ಉತ್ತರ ಫಲ್ಗುನೀ ನಕ್ಷತ್ರದಲ್ಲಿ ಬಾಲನಾಗಿ ಚಂದ್ರಪುಷ್ಕರಿಣಿ ತೀರದಿ ನಿಂದ ವಾಮನ 8 ಜಾಮಾತನೆನಿಸಿ ಗ್ರಹಿಸಿ[ದ] ಶ್ರೀದೇವಿ ಸಹಿತ ಶ್ರೀಧರ 9 ಮಳೆಯನಿಟ್ಟು ಧ್ವಜವಕಟ್ಟಿ ಸುರರ ಕರದು ಯಾಗವ ಮಾಡಿ ಯಾತ್ರದಾನದ [ತಳೆದ] ಹೃದಯವಾಸ ಹೃಷಿಕೇಶವ 10 ವೀರ ಮರುದಿನದಿ ಜಟಾಶೋಧಕರ ಮಂಟಪದಿ ನಿಂದು (?) [ಧೀರ] ಮುದುಕಿಗೊಲಿದು ದಧ್ಯಾನ್ನವ ಉಂಡ ಶ್ರೀಪದ್ಮನಾಭ 11 ನಾಲ್ಕು ದಿವಸದಲ್ಲಿ ನಾಗವೈರಿಯನ್ನು ಏರಿಬಂದು ಕಲ್ಪವೃಕ್ಷವು ಸರ್ಪವಾಹನ ಏರಿದ ದಾಮೋದರ 12 ಆರು ದಿವಸದಲ್ಲಿ ವರಿಯೂರಿಗೆ ಹೋಗಿ ನಿಮ್ಮ ಸಂತೈಸಿ ಮಾಲೆಧರಿಸಿದ ಸಂಕರ್ಷಣ 13 [ಮಾರನೆ] ದಿವಸದಲಿ ಚೂರ್ಣಾಭಿಷೇಕವನು ಧರಿಸಿ ವಾಸುದೇವ 14 ಎಲ್ಲೇಕೆರೆಗೆ ಪೋಗಿ ಭೂಮಿಯೆಲ್ಲ ನೋಡಿ ಹರುಷದಿಂದ ಅ[ಲ್ಲೆ] ತೇಜಿಯನೇರಿ ತೇರಿನೆದುರೆ ಪೇರಿಬಿಟ್ಟ ಪ್ರದ್ಯುಮ್ನ 15 ಪಂಗುನ್ಯತ್ತರವು ಬರಲು ಉಂಗುರವನು ಬೇಡಿತಂದು ಅನಿರುದ್ಧ 16 ತಿಂದ ಪಂಜಿನಪ್ರಹಾರ ಹರುಷದಿಂದ ಪುರುಷೋತ್ತಮ 17 ಪತ್ನಿಯೊಡನೆ ಪ್ರೇಮಕಲಹ ಅರ್ತಿಯಿಂದ ಮಾಡುತಿರಲು ವಿಷ್ಣು ಚಿತ್ತರ ವಾಕ್ಯದಿಂದ ಅರಸಿಗೇರಿದಾ ಅಧೋಕ್ಷಜಾ 18 ಮಂದರೋದ್ಧರ ತನ್ನ ಇಂದಿರೆಸಹಿತವಾಗಿ ಬಂದು ಗೋರಥವನೇರಿ ನಾಲ್ಕುಬೀದಿ ಮೆರೆದ ನಾರಸಿಂಹ 19 ವಾರಿಜಾಕ್ಷ ರಥವನಿಳಿದು ಕಾವೇರಿಯಲ್ಲಿ ತೀರ್ಥವಿತ್ತು ದರ್ಪಣದ ಗೃಹದಿ ನಿಂದ ಅರ್ತಿಯಿಂದ ಅಚ್ಚುತ 20 ಸಪ್ತ ಆವರಣವೆಲ್ಲ ಶಬ್ದವಿಲ್ಲದೆ ಸುತ್ತಿ ಬಂದು ಭಕ್ತ ಭಾಷ್ಯಕಾರರಿಗೊಲಿದ ದುಷ್ಟಮರ್ದನ ಜನಾರ್ಧನ 21 ಪೃಥವಿಯೊಳಗಾಶ್ಚರ್ಯವಾದ ಪ್ರತಿಯಿಲ್ಲದ ಪಲ್ಲಕ್ಕಿಯೇರಿ ಅತಿಶಯದಿಂದ ಬಂದ ಉರಗಶಯನ ಉಪೇಂದ್ರ 22 ಅಂದು ಸುರರ ಛಂದದಿಂದ ಮಂದಿರಕ್ಕೆ ಕಳುಹಿ ರಂಗ ಬಂದು ಭಕ್ತರ ಪಾಪ[ವ] ಪರಿಹರಿಸಿದಾ ಶ್ರೀಹರಿ 23 ಅಷ್ಟು ಚರಿತ್ರೆಯನ್ನು ಕೇಳಿ ಕಟ್ಟಿದ ಕಂಕಣವ ಬಿಚ್ಚಿ ಶ್ರೇಷ್ಠವಾದ ಸ್ಥಾನದಲ್ಲಿ ಮಂತ್ರಿ ಸಹಿತನಿಂದ ಶ್ರೀಕೃಷ್ಣ 24 ದಕ್ಷಿಣಗಂಗೆಯಾಗಿ ನಿಂದು ಭಕ್ತನ ದ್ವೀಪವನ್ನು ನೋಡುತ ಮುಕ್ತಿಮಾರ್ಗವನ್ನು ತೋರಿದ ಭಕ್ತವತ್ಸಲ ವೆಂಕಟರಂಗ 25
--------------
ಯದುಗಿರಿಯಮ್ಮ
ದ್ವಾರಪಾಲಕರಿಗಾನಮಿಪೆ ನಿತ್ಯ ಶ್ರೀ ರಮಣ ನಾರಯಣನ ಪುರತ್ರಯದೊಳಿಹ ಪ ಜಯ ವಿಜಯ ಬಲಪ್ರಬಲ ಚಂಡ ಪ್ರಚಂಡ ನಿ ರ್ಭಯ ನಂದ ಸುನಂದ ಕುಮುದ ಕುಮುದಾ ಧಾಮ ಸುಧಾಮ ಸಂ ಪ್ರಿಯ ತಮನ ಆಜ್ಞಾಧಾರಕರೆಂದೆನಿಸುವ 1 ಲಸದೂಧ್ರ್ವಪುಂಡ್ರ ದ್ವಾದಶನಾಮ ಶಂಖ ಸುದ ರುಶನ ಸುಗದಾ ಪದ್ಮ ನಾಮ ಮುದ್ರಾ ಕುಸುಮ ಮಾಲಿಕೆ ಧರಿಸಿ ನಸುನಗುತಹರ್ನಿಶಿಗಳಲಿ ಹರಿಯ ತುತಿಪಾ 2 ಕುಂಡಲ ಹಾರ ಪದಕ ಕಂ ಕಣ ನಡುವಿನೊಡ್ಯಾಣ ಪೀತಾಂಬರ ಕ್ವಣಿತನೂಪುರ ಗೆಜ್ಜೆ ಚರಣಾಭರಣ ಸುಲ ಕ್ಷಣರಾದ ಸರ್ವಾಂಗ ಸುಂದರರೆನಿಸುವಾ 3 ಕರದೊಳೊಪ್ಪುವ ಗದಾಯುಧ ಕುಂದರದನ ಕ ಸ್ತುರಿನಾಮ ಮಾಣಿಕಕ್ಷತೆಯ ಧರಿಸಿ ಕುಸುಮ ಕೇಸರಿ ಗಂಧದಿಂ ಭಯಂ ನಿತ್ಯ 4 ಮೂರು ಬಾಗಿಲಲಿ ಶ್ರೀ ದೇವಿಯಿಪ್ಪಳು ವಾಯು ಭಾರತಿ ಆಜ್ಞದಿಂದೀ ದೇವರು ವೀರಜಯ ವಿಜಯಾದಿಗಳಿಗೆ ವಿಷ್ವಕ್ಸೇನ ಪ್ರೇರಕನು ತಾನಾಗಿ ಶ್ರೀಶನರ್ಚಿಪನೆಂದು 5 ಹೃದಯ ಶ್ರೋತ್ರ ಚಕ್ಷುವದನಾದಿ ಕರಣದೊಳು ನದನದಿಗಳೊಳು ಮಹೋದಧಿಗಳೊಳಗೆ ಉದಿತ ಭಾಸ್ಕರ ಮಂಡಲದಿ ದೇವಗೃಹದಿ ಸದಸದ್ವಿಲಕ್ಷಣ ಸುದತಿಸಹ ಪೂಜಿಸುವ 6 ದ್ರುಹಿಣ ಮೊದಲಾದ ಸುಮನಸ ಪೂಜ್ಯ ಚರಣಾಬ್ಜ ಮಹಿಮ ಮಂಗಳಚರಿತ ಸುಗುಣ ಭರಿತ ಅಹಿರಾಜ ಶಯನ ಜಗನ್ನಾಥವಿಠಲನ ಸ ನ್ಮಹಿಮೆಗಳ ತಿಳಿಸಿ ತೋರಿಸಲಿ ಮನ್ಮನದೀ 7 ತೀರ್ಥಕ್ಷೇತ್ರ
--------------
ಜಗನ್ನಾಥದಾಸರು
ಧನುರ್ಮಾಸದ ಸೇವೆಯ ಗೀತೆ ಧನುರ್ಮಾಸದ ಸೇವೆಯ ನೋಡುವ ಬನ್ನಿ ದಾನವಾಂತಕ ರಂಗನ ಪ. ಶ್ರೇಯೋನಿಧಿಗಳಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ 1 ಮಾರ್ಗಶಿರ ಮಾಸದಲಿ ಮಹಾನುಭಾವ ಶ್ರೀರಂಗನಾಥನಿಗೆ ಮಹದುತ್ಸವವನ್ನು ನಡೆಸಬೇಕೆನುತಲೆ ಮಹಾಪುರುಷರು ಸಂಕಲ್ಪವ ಮಾಡಿದರು 2 ಕೇಶವ ಮಾಸದಲಿ ಎದ್ದು ದಾಸರು ಮೂರನೆ ಜಾವದಲಿ ಭೂಸುರರಿಗೆ ಎಚ್ಚರವಾಗಬೇಕೆಂದು ಬಾ ರೀಸಿದರು ಭೇರಿ ದುಂದುಭಿ ವಾದ್ಯಗಳ 3 ಕನಕಿ ಸುಜೋತಿ ಹೇಮಾವತಿಯ ಕಪಿಲೆ ಕಾವೇರಿ ತೀರ್ಥದಲಿ ಸ್ನಾನವ ಮಾಡಿ ತೀರ್ಥವ ತಂದು ನೇಮದಿ ನೀಲವರ್ಣನಿಗಭಿಷೇಕವ ಮಾಡಿದರು 4 ಛಳಿಗೆ ಕುಲಾವಿಯನಿಟ್ಟು ಶಾಲುಗಳ ಹೊದಿಸಿ ನಳಿನನಾಭ ರಂಗಗೆ ಪರಿಪರಿ ಪುಷ್ಪದ ಸರಗಳ ಧರಿಸಿಯೆ ಶ್ರೀಮೂರ್ತಿಯ ಸರವನು ಧರಿಸಿದರಾಗ 5 ತಾಪಹರವಾದ ಸೂಕ್ಷ್ಮದ ದಿವ್ಯ ಧೂಪವನು ಬೆಳಗಿದರು ವ್ಯಾಪಿಸುವ ತಿಮಿರವ ಪರಿಹರಿಸಿ ರಂಜಿಸುವ ದೀಪವ ಬೆಳಗಿದರು ಶ್ರೀಪತಿಗೆ 6 ಋಗ್ವೇದ ಯಜುರ್ವೇದವು ಸಾ ಮವೇದ ಅಥರ್ವಣವೇದಂಗಳು ದ್ರಾವಿಡವೇದ ಪುರಾಣಶಾಸ್ತ್ರಗಳನು ಬಾಗಿ ಲಾ ವೊಳಗೆ ನಿಂತು ಭಕ್ತರು ಪೇಳಿದರು 7 ವಾರಾಂಗನೆಯರಾಗ ವೈಯ್ಯಾರದಿಂದ ಆರತಿಗಳನೆ ತಂದು ವಾರಿಜನಾಭಗೆ ನೇಮದಿಂದಲೆ ಗುಂ ಭಾರತಿಗಳನೆತ್ತಿ ನೈವೇದ್ಯವ ತಂದರು 8 ಮುದ್ಗಾನ್ನ ಘಮಘಮಿಸುವ ಪಾಯಸ ದಧ್ಯೋದನಗಳು ಪರಿಪರಿ ಶಾಕಪಾಕವು ಆ ದಿವ್ಯ ಭಕ್ಷ್ಯನೈವೇದ್ಯವ ಪರಮಪುರುಷಗೆ [ಆದ್ಯರು] ಆರೋಗಣೆ ಮಾಡಿದರು 9 ಕಳಿಯಡಿಕೆ ಬಿಳಿಯೆಲೆಯು ಕರ್ಪೂರದ ಹಿಟ್ಟಿನ ಮಂಗಳಾರತಿಯನೆತ್ತಿದರಾಗ 10 ಆ ಮಹಾ ಶ್ರೀನಿವಾಸ ರಂಗ ನೈವೇದ್ಯವ ಶ್ರೀಮಧ್ರಾಮಾನುಜರ ಮತದಿ ನೇಮದಲಿ ವಿನಿಯೋಗವ ಮಾಡಲು ಪಾವ ನಾಮಾದೆವೆಂದೆನುತ ಪೋದರು ಎಲ್ಲ 11
--------------
ಯದುಗಿರಿಯಮ್ಮ
ಧನ್ಯಗೈಸಿದೆನಗ ಗುರು ಮಹಿಪತಿ ತಾನು ಪ ವಿಜಯಗ್ಹೇಳಿದ ಹರಿಗೀತೆಯಲಿ | ಸುಜನ್ಮಾಹುದು ಸಂತರಲ್ಲಿ ದುರ್ಭರದ 1 ಕಿವಿಯೊಳು ಸುಜ್ಞಾನ ಗುಟ್ಟು 2 ದೊಡ್ಡದರೊಳಿಹ ಚಿದ್ಘನ ವಾ ದೋರಲಿ 3 ಇಂಬಾಗಿರಲು ಗುರುದಯ ಕಾಮಧೇನು 4 ಕಂದಗೊಲಿದನು ಇಹಪರಗತಿಯಾ ಹೊಣೆಯಾಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು