ಒಟ್ಟು 684 ಕಡೆಗಳಲ್ಲಿ , 94 ದಾಸರು , 588 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೆಅವನಾರೆಲೆ ಜಾಣೆಆರೆಅವನಾರೆವೀರಹಕ್ಕಿಯನೇರಿ ನಿರುತದಿ ಧ್ವನಿಗೈದುವ ಶ್ರೀಪತಿ ಕಾಂಬೆ ಪ.ಬಾಹಭಾವವ ನೋಡೆ ಕರುಣಿಯ ಬಾಹುಬಂದಿಯ ನೋಡೆದೇಹ ಮಾಟವ ನೋಡೆ ಕರುಣಾಬ್ಧಿ ಸ್ನೇಹ ನೋಟವ ನೋಡೆಆಹೇಮಾಂಬರನೋಡೆ ಮುಕುಟವಿಟ್ಟಿಹಕುಂಡಲನೋಡೆರೂಹ ನೋಡಿ ಮೈ ಮರೆವ ಮುನಿಸಮೂಹದೆಡಬಲದರ್ಥಿಯ ನೋಡೆ 1ಆಭರಣದ ಕಾಂತಿ ಕಂಡ್ಯಾ ಮೃಗನಾಭಿ ತಿಲಕವ ಕಂಡ್ಯಾಶೋಭಿಸುವ ನಾಮ ಕಂಡ್ಯಾಕೌಸ್ತುಭಶ್ರೀವತ್ಸ ಕಂಡ್ಯಾತ್ರಿಭುವನ ಗರ್ಭ ಕಂಡ್ಯಾ ತ್ರಿವಳಿಯ ನಾಭಿ ಚೆಲ್ವಿಕೆ ಕಂಡ್ಯಾಶ್ರೀ ಭುಜಂಗವೇಣಿ ಲಕುಮಿಯಳ ತಾ ಬಿಗಿದಪ್ಪೊವಕ್ಷವÀ ಕಂಡ್ಯಾ 2ಸ್ವಾಮಿಗೆ ಮನಸೋತೆನೆ ಭಕ್ತಪ್ರೇಮಿಗೆ ಮನಸೋತೆರಾಮನಿಗೆ ಮನಸೋತೆ ನಾ ಘನಶ್ಯಾಮನಿಗೆ ಮನಸೋತೆವಾಮನಗೆ ಮನಸೋತೆನೆ ಪೂರ್ಣಕಾಮನಿಗೆ ಮನಸೋತೆಶ್ರೀ ಮನೋಹರ ಪ್ರಸನ್ವೆಂಕಟೇಶನ ನಾಮಕೆ ಮೆಚ್ಚು ಬಿದ್ದುಮನಸೋತೆ 3
--------------
ಪ್ರಸನ್ನವೆಂಕಟದಾಸರು
ಆರೆನ್ನ ಉಳುಹುವರೈ ರಂಗಘೋರಾರಣ್ಯ ಭವದಿ ಸಿಕ್ಕಿದೆ ರಂಗ ಪ.ಎಂಟು ಕಾಡಾನೆ ಎಂಟು ಕಡೆಯಲಿ ನಿಂತಿವೆಗಂಟನಿಕ್ಕಿವೆ ಮೂರು ದಳ್ಳುರಿಯಸುಂಟರಗಾಳ್ಯೆಬ್ಬರಿಸಲು ಗಿಡಗಂಟಿಲಿ ಬಿದ್ದೆ ನೀನಲ್ಲದೆನ್ನ 1ಹುಲಿಯೊಂದು ಗುಡುಗುಡಿಸುತಿದೆ ಭಯಂಕರಬಲು ತೋಳೆರಡು ಕೆಕ್ಕರಿಸುತಿವೆಸಲುಗೆಯ ಕೋತಿಯೊಂದಣಕಾಡುತಲಿದೆಮೇಲೆ ಕರಡಿಯು ಹತ್ತೆಳವುತಿದೆ 2ಕಾಳುರಗನ ಕಟ್ಟು ಮೈತುಂಬ ನನ್ನನಾಲಿಗೇಳದು ನಿನ್ನ ಕರೆಯಲಿಕೆ ನಿನ್ನಾಳಟ್ಟಿ ಕರೆಸಿಕೊಳ್ಳೆಲೆ ತಂದೆ ನಾಗೋಳಿಟ್ಟೆ ಪ್ರಸನ್ನವೆಂಕಟ ಬಂಧು 3
--------------
ಪ್ರಸನ್ನವೆಂಕಟದಾಸರು
ಇಂದುನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲಇಂದಿರೇಶ ನಿನ್ನ ನೆನೆವ ಮತಿಯ ನೀಡೊ ಮನ್ನಿಸಿ ನೋಡೊ ಪ.ಕುಚ್ಛಿತ ಕರ್ಮವಾಚರಿಸಿ ಕಶ್ಮಲ ಜನ್ಮನುಭವಿಸಿದುಶ್ಚಿತ್ತದಿ ಬಾಳ್ದೆನಯ್ಯ ದೂರಾದೆ ನಿಮಗೆ ದಮ್ಮ್ಮಯ್ಯಅಚ್ಚುತ ನಿನ್ನಿಚ್ಛೆಯಿಂದೆ ಆದಿವರ್ಣದವನಾದೆಸ್ವಚ್ಛಿತ ಭಕ್ತಿಯನಿಲಯ ಸುಜನಬಂಧು ಸುಗುಣಸಿಂಧು 1ಹೊಟ್ಟೆಯ ಹೋರಟೆಗಾಗಿ ಹೊತ್ತಾರೆದ್ದು ತಿರುಗಿ ತಿರುಗಿಕೆಟ್ಟ ವೃತ್ತಿಯನ್ನು ಹಿಡಿದೆ ಕೀಳುಮನುಜರೊಳಾಡಿದೆಬಿಟ್ಟೆ ನಿಮ್ಮ ಪೂಜೆಯನ್ನು ಬಿದ್ದೆ ಭವಾಂಬುಧಿಯನ್ನುವಿಠ್ಠಲ ಎನ್ನುದ್ಧರಿಸೊ ವಿದ್ವದ್ಹøದ್ಯ ವೇದವೇದ್ಯ 2ವೇದಶಾಸ್ತ್ರಾಭ್ಯಾಸವಿಲ್ಲ ವೇದಜÕರರ್ಚಿಸಲಿಲ್ಲಬೋಧವನು ಕೇಳಲಿಲ್ಲ ಬುದ್ಧಿ ಎನ್ನೊಳು ಚೂರಿಲ್ಲಸಾಧನವ ತಿಳಿಯಲಿಲ್ಲ ಸಾಧುಮಾರ್ಗವ ಕಾಣಲಿಲ್ಲಭೇದಜÕರೊಳ್ ಕೂಡಿಸೆನ್ನ ಭೀಮಪಾಲಾಭಿನವಲೀಲ 3ಕಾಂತೇರ ಕುಚೇಷ್ಟೆಗಳಿಗೆ ಕೀಳುಚ್ಚಾರದ ಮಕ್ಕಳಿಗೆಭ್ರಾಂತನಾಗಿ ಸ್ನೇಹ ತೋರ್ದ ಬಲೆಯೊಳ್ ಸಿಲುಕಿದೆಸಂತರಂಘ್ರಿ ಸಖ್ಯವನೊಲ್ಲೆ ಸತ್ಕಥೆಯನಾಲಿಸಲೊಲ್ಲೆಅಂತು ಮದವನಿಳಿಸಿ ಕಾಯೊಅಂಗಜಪಿತನೆ ಅಘರಹಿತನೆ4ಬಳಲಿಸಿದೆ ತನುವನು ಬಯಸಿ ಖಳರಾರ್ಥವನ್ನುನಳಿನಾಕ್ಷ ನಿನ್ನ ಬೇಡದೆ ನಾಸ್ತಿಕರಿಗೆ ಕೈಯನೊಡ್ಡಿದೆಹೊಳೆವ ಸುರಭಿಯ ಬಿಟ್ಟು ಹುಲಿಪಾಲಿಗಾಯಾಸಬಟ್ಟೆಕಳೆದೆನನಘ್ರ್ಯಾಯುಷ್ಯವ ಕುಚೇಲಮಿತ್ರ ಕರುಣನೇತ್ರ 5ವಿಷ್ಣು ತತ್ವವರಿಯದೆ ಧೀರ ವೈಷ್ಣವನೆನಿಸದೆಭ್ರಷ್ಟಮನವ ತೊಳೆಯದೆ ಬಹಿಛ್ಛಿನ್ನದಲ್ಲೆ ಮೆರೆದೆಶಿಷ್ಯ ಗುರುಗಳ ಜರಿದೆ ಶಠರನು ಅನುಸರಿಸಿದೆದುಷ್ಟವೃತ್ತಿಯನು ಬಿಡಿಸೊ ದುರ್ಗುಣಧಾಮನ ದುರಿತಶಮನ 6ಇಂದ್ರಿಯಗ್ರಾಮ ನಿನ್ನದು ಇಷ್ಟ ಬಳಗವು ನಿನ್ನದುಸೌಂದರ್ಯ ಸುಖ ನಿನ್ನದು ಸ್ವರೂಪ ಸ್ವಾತಂತ್ರ್ಯ್ರನಿನ್ನದುಮಂದಮತಿಯಿಂದ ಅಹಂಮತಿಯಲ್ಲಿ ನೊಂದೆ ಬಹುಕುಂದನೋಡದೆನ್ನ ಸಲಹೊ ಕುಂಜರವರದ ಕುಶಲಪದದ7ನಿನ್ನ ಕಥಾಮೃತವು ಕಿವಿಗೆ ನಿನ್ನ [ಕೀರ್ತನೆ ನಾಲಗೆಗೆ]ನಿನ್ನ ಲಾವಣ್ಯವು ಕಣ್ಣಿಗೆ ನಿನ್ನ ಸೇವೆ ಸರ್ವ ಇಂದ್ರಿಯಕ್ಕೆಎನಗೆ ಬೇಗ ಕರುಣಿಸಿ ಎಲ್ಲ ದುರಿಚ್ಛೆಗಳ ನೂಕುಇನ್ನು ದಾಸದಾಸ್ಯವು ಬೇಕೊ ಋಷಿಕುಲೇಶ ಹೃಷಿಕೇಶ 8ಅಚ್ಯುತಾನಂತಗೋವಿಂದ ಆದಿಪುರುಷ ಮುಕುಂದಸಚ್ಚಿದಾನಂದಸರ್ವೇಶ ಸುಚರಿತ್ರ ಕರಿವರದನೆಚ್ಚಿದೆ ತವ ಪಾದಾಂಬುಜ ನಮೊ ಬೊಮ್ಮಾದ್ಯರ ದೇವನಿಚ್ಚಪ್ರಸನ್ವೆಂಕಟ [ನಿನ್ನ ನೆನೆವ ಮ್ಮತಿಯನೀಡೊಮನ್ನಿಸಿ ನೋಡೊ] 9
--------------
ಪ್ರಸನ್ನವೆಂಕಟದಾಸರು
ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು ಪ.ಊರೂರ ನದಿಗಳಲಿಬಾರಿ ಬಾರಿಗೆ ಮುಳುಗಿ |ತೀರದಲಿ ಕುಳಿತು ನೀ ಪಣೆಗೆನಿತ್ಯ ||ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು - |ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು 1ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |ಆರಾರಿಗೋ ಹಣದ ದಾನಕೊಟ್ಟು |ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |ದಾರಿಯಾಯಿತೆ ಹೊರತು ಬೇರೆ ಫಲವುಂಟೇ? 2ಕಾಡುದೈವಗಳನ್ನು ಚಿನ್ನ - ಬೆಳ್ಳಿಗಳಿಂದೆ |ಮಾಡಿಕೊಂಡವರ ಪೂಜೆಯನೆ ಮಾಡಿ |ಕಾಡುಕಳ್ಳರು ಬಂದು ಅವುಗಳನು ಕೊಂಡೊಯ್ಯೆ |ಮಾಡಿಕೊಂಡಿರ್ದುದಕೆ ಬಾಯಬಡಕೊಳ್ಳುವೆ 3ಮಗನ ಮದುವೆಯು ಎಂದು ಸಾಲವನು ಮಾಡಿ ನೀ |ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ ||ಹಗರಣವ ಪಡಿಸಿದರೆ ಸಾಲಗಾರರು ಬಂದು |ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ 4ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು ? |ತಟ್ಟನೇ ಶ್ರೀಹರಿಯ ಪದವ ನಂಬಿ ||ದಿಟ್ಟ ಪುರಂದರವಿಠಲನೆ ಎಂದರೆ |ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು 5
--------------
ಪುರಂದರದಾಸರು
ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯಎನ್ನ ದಯದಿ ಪಾಲಿಸಯ್ಯ ಪನಿನ್ನ ಚರಣಾಂಬುಜವ ನಂಬಿದೆನೊ ಶ್ರೀ ಹರಿಯೆಬನ್ನು ಬಿದ್ದೆನು ಭವಬಂಧನವ ಬಿಡಿಸಯ್ಯ ಅ.ಪಅಮರೇಂದ್ರವಂದಿತನೆ ಅನಂತಮಹಿಮನೆಕಮಲಸಖಾನಂತಕರನೆ ||ಕಮಲಾಯತಾಂಬಕನೆ ಕಾಮಿತದಾಯಕನೆವಿಮಲಗುಣ ವಿಭೀಷಣಗೆ ಒಲಿದ ದಯದಿಂದಲೆನ್ನ1ಅಜಮಿಳ ಅಂಬರೀಷ ಅಕ್ರೂರ ವಿದುರಗೆಗಜರಾಜ ಗಿರಿಜೇಶಗೆ ||ನಿಜಭಕ್ತ ಪ್ರಹ್ಲಾದಅಜ ಧ್ರುವ ಅರ್ಜುನಗೆದ್ವಿಜ ಸುತ ರುಕ್ಮಾಂಗದರಿಗೊಲಿದ ದಯದಿಂದಲೆನ್ನ2ಅವರಂತೆ ನಾನಲ್ಲಅವರ ದಾಸರ ದಾಸಸವರಿ ಬಿಸುಟೆನ್ನ ದೋಷ ||ಪವಿತ್ರನ್ನ ಮಾಡಯ್ಯ ಪುಂಡಲೀಕ ವರದನೆಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ 3ಎಂದೆಂದು ನಿನ್ನ ಪಾದವೆನಗೆ ನೆಲೆಯಾಯಿತುಎಂದೆಂದು ನಿನ್ನ ನಾಮಭಜನೆ ||ಎಂದೆಂದು ನೀಯೆನ್ನ ಬಿಡದೆ ಪಾಲಿಸೊ ಸ್ವಾಮಿಅಂದು ಅಂಜನೆಕಂದನಿಗೆ ಒಲಿದ ದಯದಿಂದಲೆನ್ನ 4ಅಂತರಂಗದುಬ್ಬಸವ ಅಯ್ಯೋ ನಿನಗುಸಿರುವೆನುಚಿಂತೆಗಳ ಪರಿಹರಿಸೊ ||ಸಂತತ ಪಾಲಿಸೊಪುರಂದರ ವಿಠಲನೆಚಿಂತಿಪ ಗೌತಮನ ಸತಿಗೆ ಒಲಿದ ದಯದಿಂದಲೆನ್ನ 5
--------------
ಪುರಂದರದಾಸರು
ಇನ್ನೂ ದಯ ಬಾರದೇ-ದಾಸನ ಮೇಲೆ-ಇನ್ನೂ ದಯ ಬಾರದೇ ಪಮುನ್ನ ಮಾಡಿದ ದುಷ್ಕರ್ಮಗಳೆಲ್ಲವಮನ್ನಿಸಿ ಕಳೆವುದು ಇಂದಿರೆಯ ರಮಣಾ ಅ.ಪನಾನಾ ಜನ್ಮಗಳಲಿ ನಾನಾ ಜಾತಿಗಳಲಿನಾನಾ ಯೋನಿಗಳಲಿ ಜನಸಿ ಜನಿಸಿ ದೇವಾ ||ನಾನು ನನ್ನದು ಎಂದು ನರಕದೊಳಗೆ ಬಿದ್ದುನೀನೆ ಗತಿಯೆಂದು ಸ್ಮರಣೆ ಮಾಡಿದ ಮೇಲೆ 1ಕಾಮಾದಿ ಷಡುವರ್ಗ ಗಾಢಾಂಧಕಾರದಿಪಾಮರನಾಗಿ ಇದ್ದಂಥ ಪಾತಕನ ||ರಮಾಮನೋಹರಹರಿನೀನೇ ಗತಿಯೆಂದುನಾಮಾಮೃತವನು ಪಾನ ಮಾಡಿದ ಮೇಲೆ 2ಏನ ಓದಿದರೇನು ಏನ ಕೇಳಿದರೇನುಈ ನಾಮ ಸ್ಮರಣೆಗೆ ಸರಿಬಾರದು ||ಙ್ಞÕನಹೀನನ ಮೇಲೆ ದಯವಿಟ್ಟು ಪಾಲಿಸುದೀನ ದಯಾಕರಪುರಂದರವಿಠಲನೆ3
--------------
ಪುರಂದರದಾಸರು
ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ |ಫುಲ್ಲನಾಭನೆ ನೀನಿದ್ದಲ್ಲಿ ಇರಿಸೆನ್ನ ಪಮರಳಿ ಮರಳಿ ಜನ್ಮ ಮರಣವನೊಲ್ಲೆ |ದುರುತ ಕೋಟಲೆಯ ಸಂಸಾರವನೊಲ್ಲೆ ||ತುರುಕಾದು ಕೊಳಲನೂದುವ ಮುರಮರ್ದನ |ಚರಣಕಮಲಗಳ ಸ್ಮರಣೆಯೊಳಿರಿಸೆನ್ನ 1ಬಂದು ಸಂಸಾರದ ಬೇನೆಯೊಳಗೆ ಬಿದ್ದು |ನೊಂದೆನು ಕಡುಮೋಹದಿಂದ ನಾ ಬೆಂದು ||ನಂದಗೋಪನ ಕಂದ ವೃಂದಾವನಪ್ರಿಯ |ಎಂದೆಂದು ತವಪಾದ ಸ್ಮರಣೆಯೊಳಿರಿಸೆನ್ನ 2ಪುತ್ರ-ಪೌತ್ರರು ಬಂಧು-ಮಿತ್ರ ಬಾಂಧವರೆಂದು |ಕತ್ತಲೆಯೊಳು ಕಡುನೊಂದೆನಯ್ಯ ||ಸತ್ಯಮೂರುತಿ ಶ್ರೀ ಉಡುಪಿಯ ಶ್ರೀ ಕೃಷ್ಣ |ಭಕ್ತವತ್ಸಲ ಶ್ರೀಪುರಂದರವಿಠಲ 3
--------------
ಪುರಂದರದಾಸರು
ಊರ್ವಶಿ :ಸಿಂಧುಶಯನ ವನದಿಂದಇಂದಿರೇಶ ಮುದದಿಂದ ಮೌನಿಮುನಿ-ವೃಂದದಿಂದ ಸ್ತುತಿವಂದನೆಗೊಳ್ಳುತ 1ಏಸುಲೋಭಿಯೊ ತಿಮ್ಮಶೆಟ್ಟಿ ಒಂದುಕಾಸಿಗೆ ಮಾರುವ ರೊಟ್ಟಿದಾಸರ ಕೂಡಿ ಜಗಜಟ್ಟಿ ಬಹುದೇಶವ ತಿರುಗುವ ಶೆಟ್ಟಿದೂಷಣಾರಿ ಪಾದಾಶ್ರಿತಜನರಭಿ-ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ 2ದೊಡ್ಡವನೈ ಮಹಾರಾಯ ಹಳೆದುಡ್ಡಿಗೆ ನೀಡುವ ಕೈಯಅಡ್ಡಿಗೈದರೆ ಬಿಡನಯ್ಯ ಇವಬಡ್ಡಿಕೇಳುವ ತಿಮ್ಮಯ್ಯದಡ್ಡುಕೇಸಕ್ಕಿಯ ಮಡ್ಡಿಪ್ರಸಾದವಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ 3ತಿರುಪತಿಗೆ ಪ್ರತಿಯಾಗಿ ಪಡುತಿರುಪತಿಯೆಂದಿಹಯೋಗಿಮೆರಸುವನೈ ಸ್ಥಿರವಾಗಿ ಶ್ರೀವರವೆಂಕಟ ಲೇಸಾಗಿಶರಣರು ಏನೆಂದು ಸಂತೋಷಿಪಕರುಣಾಕರ ಚಪ್ಪರ ಶ್ರೀನಿವಾಸನು 4ಈ ಪರಿಯಲಿ ಒಲಿದಿಪ್ಪಾ ಬಹುವ್ಯಾಪಾರಿ ತಿಮ್ಮಪ್ಪಾಕಾಪಟ್ಯರಿಗೆ ತಾನೊಪ್ಪನಮ್ಮಗೋಪಾಲಕಜಗದಪ್ಪಶ್ರೀಪರಮಾತ್ಮ ನಾನಾಪರಿ ವಿಭವದಿಗೋಪುರದಲಿ ತಾ ವ್ಯಾಪಿಸಿ ನಿಂದನು 5ರಂಭೆ : ನಾರೀವರ್ಯಾರಮ್ಮ ನೋಡಲುಸಾರಹೃದಯರಮ್ಮತೋರಣಛತ್ರಚಾಮರ ಬಿರುದುಗಳಿಂದಭೂರಿವಿಭವದಿಂದ ಸಾರಿಬರುವರಮ್ಮ1ಕರದಿ ಕಲಶವಿಹುದು ಶಾಲಿನನಿರಿ ಮುಂದಿರುತಿಹುದುಬೆರಳಿನೊಳುಂಗುರುವರದ್ವಾದಶನಾಮಧರಿಸಿ ಸಮಂತ್ರೋಚ್ಚರಿಸುತ ಬರುವರು 2ಮಂದಿಗಳೊಡ್ಡಿನಲಿ ಬರುವರುಮಂದಸ್ಮಿತದಲಿಚಂದದಿ ಜನಗಳಸಂದಣಿಮಧ್ಯದಿಇಂದಿರೆಯರಸನ ಧ್ಯಾನದಿ ಬರುವರು 3ಹಿಂಗದೆ ಬರುತಿಲ್ಲಿ ಮನಸಿನಇಂಗಿತವರಿತಿಲ್ಲಿಬಂಗಾರದ ಭೂಷಣಸಮುದಾಯದಿಅಂಗಜಪಿತನಿಗೆ ಶೃಂಗಾರಗೈವರು 4ವಿಪ್ರೋತ್ತಮರ ಗುಣ-ಕೆಂತು ಸೈರಣೆಯಾಂತು ನಾನಿರಲಿಚಿಂತಿತಾರ್ಥವನೀವ ಲಕ್ಷ್ಮೀ-ಕಾಂತ ಶ್ರೀನಿವಾಸನಂಘ್ರಿಯಸಂತಸದಿ ಪೂಜಾದಿ ಸತತಿ-ಯಾಂತಕೊಂಡಿಹೇಕಾಂತಭಕ್ತರು 1ಒಂದು ಭಾಗ ಪುರಾಣಿಕರು ತಾವೆಂದುಕೀರ್ತಿಯನು ಧರಿಸಿ ಮ-ತ್ತೊಂದು ಭಾಗದಿ ಜೋಯಿಸರುತಾವೆಂದು ಧರ್ಮವನು ಪಾಲಿಸಿಸಿಂಧುಶಯನನ ಚಾರುಚರಣ-ದ್ವಂದ್ವಕಾನತರಾಗಿ ಲೋಕದಿವಂದ್ಯರೆನಿಸಿಯಾನಂದ ಪರರಿವ-ರೆಂದು ಶ್ರೀಗೋವಿಂದ ನಡೆಸುವ 2ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿವಾದಗೈವ ಕುವಾದಿಗಳ ಮನ-ಭೇದಿಸುತ ನಿಜವಾದ ಮಾರ್ಗವಶೋಧನೆಗೆ ತಾವೈದಿಸುವ ಮಹಾಸಾಧುಗಳಿಂದ ದೃಢವಾದ ಮಾತಿದು 3ಅಂಬುಜಾಕ್ಷಿಯೇನೆಂಬೆಮೇಗರೆಡಂಭಮಾತಲ್ಲ ಧನಿಯ ಕು-ಟುಂಬವೆನುತಲಿ ತುಂಬ ಕೀರ್ತಿಯಗೊಂಬರೆ ಎಲ್ಲ ಸಂತಸಸಂಭ್ರಮದಿ ವೇದ್ಯಾಂಬುನಿಧಿಯಲಿತುಂಬಿರುವರೀ ಕುಂಭಿನಿಯೊಳು ಜ-ಸಂಬಡುವುದು ವಾಸಿಷ್ಠಗೋತ್ರಜ-ರೆಂಬ ವಿಪ್ರಕದಂಬಪೂಜ್ಯರು 4ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆಆಲೋಚಿಸಲರಿದಾ ಕಮಲಾಲೋಲನಮಹಾಲೀಲೆ 2ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇಮೂರ್ಲೋಕದೊಳಗೆ ಇಂಥಲೀಲೆಯ ನಾನರಿಯೆ 3ಫಾಲೇಂದು ಕುಂದದ ವರ್ಣಕೋಲು ಚಾಮರಗಳನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು 4ಚಂಡವೈಶ್ವಾನರನ ತೇಜಾಖಂಡದಿಂದೋರಂತೆಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ 5ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿಆದಿನಾರಾಯಣ ಮದುಸೂದನನೆ ಮುದದಿ 6ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರುನಾದಿನಿ ಕೇಳಿದರ ಪರಿಯನೀ ದಯದಿಂದುಸುರು 7ದೇವನಾಗಮನವೆಲ್ಲನೂದೀವಟಿಗೆ ಸೇವೆಯೆಂದು ಪೇಳುವರುಭಾವುಕರು ಮನದೊಳಂದು 1ಕೇಳಿದರೆ ಆಲಸಾಯನವನು ಸುರಿದುಆಯತವನು ವರ್ಣಿಸುವಡೆ ಬಾಯಿಯುಸಾವಿರ ಸಾಲದುಶ್ರೀಯರಸನ ಮಹಿಮೆಯರಿವದಾರಿಗಳವಲ್ಲ 3ಜಯಜಯ ಭಕ್ತಸುಪೋಷಣ ಜಯಜಯದೈತ್ಯವಿನಾಶನಜಯಜಯ ಜಾಹ್ನವಿತಾತ ಜಯಜಯ ಜಗದಾತಜಯಜಯ ರವಿಶತತೇಜ ಜಯಜಯಆಶ್ರಿತ ಸುರಭೂಜಜಯಜಯ ನಾದದಿಯೇರ್ದ ನಿರ್ಭಯತೋರುತ ಒಲಿದು 4* * *ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ-ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ 1ಸೇವೆಯ ಕೈಕೊಳ್ಳು ಎನುತಡ್ಡಬಿದ್ದರು ನೋಡೆ ತಂಗಿ ಭಕ್ತಿಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ-ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ 3ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ-ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ 4ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥಮೌರಿಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ-ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ 6ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ-ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ 7ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ-ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ 8ಚಿತ್ತೈಸಿದನಿಲ್ಲಿನಿತ್ಯಉತ್ಸಹಲೋಲ ನೋಡೆ ತಂಗಿ ಭಕ್ತ-ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ 9ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ 10ಯಾವಾಗಲು ಬರುವವನಲ್ಲ ಧನಿಯೆಂದುನೋಡೆ ತಂಗಿ ನಮ್ಮದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ 11ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ-ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12ಭೂರಿಕದಳಿಚೂತಪನಸ ಫಲಗಳನ್ನುನೋಡೆ ತಂಗಿ ಮಹಾ-ಮೇರುವಿಗೆಣೆಯಾದ ಮೇರ್ವೆಶೃಂಗಾರವ ನೋಡೆ ತಂಗಿ 13ಸುತ್ತುಮುತ್ತಲು ಝಲ್ಲಿಗಳಾನಂದವ ನೋಡೆ ತಂಗಿ ಅದ-ರೊತ್ತಿಲಿರುವ ಪಲ್ಲವ ಪೂಗಳ ಮಾಲೆ ನೋಡೆ ತಂಗಿ 14ಮೇಲೆ ಕಟ್ಟಿರುವ ಪತಾಕೆನಿಶಾನಿಯ ನೋಡೆ ತಂಗಿ ಸಾಲು-ಸಾಲಿನ ಅಂಕಣದೊಳಗಿಹ ಬೊಂಬೆಯ ನೋಡೆ ತಂಗಿ 15ಬಾಣಬಿರುಸು ಜೇನುಂಡೆಯ ಶಬ್ದವ ನೋಡೆ ತಂಗಿ ವೀಣಾ-ವೇಣುಸುಗಾನ ಸಂಗೀತ ಮನೋಹರ ನೋಡೆ ತಂಗಿ16ತಾಳಮೃದಂಗ ಸುಸ್ವರ ರಂಜಿತದಿಂದ ನೋಡೆ ತಂಗಿ ಗಣಿ-ಕಾಲತಾಂಗಿಯರ ಗಾಯನದಭಿನಯನ್ನು ನೋಡೆ ತಂಗಿ 17ಕಾಲುಂಗುರ ಗೆಜ್ಜೆಗಳಕಟ್ಟಿಕುಣಿವರು ನೋಡೆ ತಂಗಿ ತಮ್ಮಮೇಲುದನೋಸರಿಸುತ್ತ ಮೋಹಿಸುವರು ನೋಡೆ ತಂಗಿ 18ಕಂತುಪಿತನು ಇಲ್ಲಿ ನಿಂತನು ವಿಭವದಿ ನೋಡೆ ತಂಗಿ ತದ-ನಂತರದಲಿ ಆರತಿಯನುಗೊಂಡನು ನೋಡೆ ತಂಗಿ 19ಭೂತಪದೊಳಗೀ ನೂತನವೆಲ್ಲುಂಟು ನೋಡೆ ತಂಗಿ ಹರಿ-ಪ್ರೀತರಾಗಿರುವನಾಥರ ಸೇವೆಯ ನೋಡೆ ತಂಗಿ 20ವೇದೋದ್ಧಾರಕ ನಿನ್ನ ಪಾದವೇ ಗತಿಯೆಂದುನೋಡೆ ತಂಗಿ ಮಹಾ-ಸಾಧುಗಳತ್ತಲು ಕಾದುಕೊಂಡಿರುವರು ನೋಡೆ ತಂಗಿ 21ಚರಣನಂಬಿದ ತನ್ನ ಶರಣರ ಪೊರೆಯೆಂದುನೋಡೆ ತಂಗಿ ತಾನುತ್ವರಿತದಿ ಬಂದನು ಉರುತರ ತೋಷದಿ ನೋಡೆ ತಂಗಿ 22ಮನೆಮನೆಗಳ ಸಮ್ಮುಖದಲ್ಲಿ ದೀಪವ ನೋಡೆ ತಂಗಿ ಎಲ್ಲಾಜನಗಳು ಕೈಗಳ ಮುಗಿದು ನಿಂದಿರುವರು ನೋಡೆ ತಂಗಿ 23ರಾಜ ಬೀದಿಯೊಳು ವಿರಾಜಿಪ ತೋರಣನೋಡೆ ತಂಗಿ ಸುರ-ಭೂಜದಂತಿಹ ಮಹಾಸೋಜಿಗಕುರುಜವ ನೋಡೆ ತಂಗಿ24ಕಂತುಜನಕನಿಲ್ಲಿ ನಿಂತು ಪೂಜೆಯಗೊಂಡನೋಡೆ ತಂಗಿ ತದ-ನಂತರದಲಿ ಮನಸಂತೋಷಪಡಿಸಿದ ನೋಡೆ ತಂಗಿ 25ಮುಂದೆ ಬರುವ ಜನಸಂದಣಿಗಳ ಮಧ್ಯ ನೋಡೆ ತಂಗಿ ಇ-ನ್ನೊಂದು ಗೂಡಿನ ಪರಿಯಂದವ ನೀನಿತ್ತ ನೋಡೆ ತಂಗಿ 26ಮಾಣಿಕ್ಯರಾಸಿಯಮಾಣದೆಇಟ್ಟರೊ ನೋಡೆ ತಂಗಿ ಸರಿ-ಗಾಣೆ ಈ ಗುಡಿಗೆ ಜಾಣೆ ನೀ ಮನವಿಟ್ಟು ನೋಡೆ ತಂಗಿ 27ಮೂಡಿತೊ ಸೂರ್ಯನ ಕಿರಣಗಳೆಂಬಂತೆನೋಡೆ ತಂಗಿ ಇಂಥಗೂಡಿನೊಳಗೆ ದಯಮಾಡಿ ಸೇವೆಯಗೊಂಡ ನೋಡೆ ತಂಗಿ28ತರುಣಿಯರನ್ನಳೆಯಿತ್ತ ಶರಧಿಯಂತುಕ್ಕುತನೋಡೆ ತಂಗಿ ಭೂರಿ-ಹರುಷದಿಂ ಬರುವ ಭಕ್ತರನೇಕರು ನೋಡೆ ತಂಗಿ 29ಹರಿಯೇ ನೀ ಎಮ್ಮಯ ಪೊರೆಯೆಂದು ಭಕ್ತಿಯೊಳ್ನೋಡೆ ತಂಗಿ ಬಂದುಚರಣಕಾನತರಾಗಿ ಅರಿಕೆಯ ಗೈವರು ನೋಡೆ ತಂಗಿ 30ಮಕ್ಕಳನರಸಿ ಮಾತೆಯು ಪೋಗುವಂದದಿನೋಡೆ ತಂಗಿ ಮಹಾ-ರಕ್ಕಸವೈರಿಯು ದಯಮಾಡಿ ಪೊರಟನು ನೋಡೆ ತಂಗಿ 31ಪರಮಪುರುಷ ಭೂರಿವಿಭವದಿ ಬರುವುದನೋಡೆ ತಂಗಿ ಬಾಣಬಿರುಸುಗಳೆಲ್ಲವು ಸುರುಸುರುಯೆಂಬುದು ನೋಡೆ ತಂಗಿ 32ಫಲ್ಲನೆ ಹೊಳೆಯುವ ಹಿಮಕರಜ್ಯೋತಿಯನೋಡೆ ತಂಗಿ ಮನಘಲ್ಲೆನಿಸುತ್ತಿಹ ಬೆಡಿಖಂಬಧ್ವನಿಯನು ನೋಡೆ ತಂಗಿ 33ಭುಗಿಲು ಭುಗಿಲು ಧಗಧಗಲೆನ್ನುತಲಿದೆ ನೋಡೆ ತಂಗಿ ಕಿ-ಡಿಗಳನುಗುಳುವ ವಸನಪ್ರಕಾಶವ ನೋಡೆ ತಂಗಿ 34ಈ ರೀತಿಯ ವಿಭವದಿ ಏರಿದ ಮೇರ್ವೆಯ ನೋಡೆ ತಂಗಿ ರತ್ನ-ದಾರತಿಯಗೊಂಡನು ಶ್ರೀನಿವಾಸನು ನೋಡೆ ತಂಗಿ 35ಲೋಕದೊಳಗೆ ನೂತನವಿದೊಂದನು ನೋಡೆ ತಂಗಿ ಅ-ನೇಕ ಮಕ್ಕಳುಗಳ ನೇತಾಡಿಸುವದ ನೋಡೆ ತಂಗಿ 36ಪುತ್ರೋತ್ಸವ ಫಲಗಳು ದೊರಕಿದ ಕಾರಣ ನೋಡೆ ತಂಗಿ ಇದು-ಪುತ್ರ ಫಲಾವಳಿ ಹರಕೆಯಂಬರು ಕಾಣೆ ನೋಡೆ ತಂಗಿ 37ಇಳಿದನು ಇಂದಿರೆಯರಸನು ಮೇರ್ವೆಯ ನೋಡೆ ತಂಗಿ ರಥ-ದೊಳಗಿದ್ದ ಪರತತ್ವರೂಪನು ಸಹಿತಲಿ ನೋಡೆ ತಂಗಿ 38ಮಾಣದೆಭಕ್ತರ ಮಮತೆಯ ಕಾರಣ ನೋಡೆ ತಂಗಿ ಮುಖ್ಯ-ಪ್ರಾಣರಲ್ಲಿಗೆ ಪೋದರಿಬ್ಬರು ಒಂದಾಗಿ ನೋಡೆ ತಂಗಿ 39ಅವರಿವರಂತಲ್ಲ ದೊರೆ ಹನುಮಂತನು ನೋಡೆ ತಂಗಿ ಪಟ್ಟ-ದರಸನ ಸಹಿತಿಲ್ಲಿ ಇಳಿಸಿದನಲ್ಲವೆ ನೋಡೆ ತಂಗಿ 40ಹನುಮನ ಸೇವೆಯ ಕೈಕೊಂಡು ಕರುಣದಿನೋಡೆ ತಂಗಿ ಮತಘನವಾದ ಶೇಷತೀರ್ಥವ ನೋಡಿ ಬಂದನು ನೋಡೆ ತಂಗಿ41* * *ಬಂದನು ತ್ರೈಜಗದೀಶ ನಡೆ-ತಂದನು ರವಿಕೋಟಿಭಾಸ ಸರ್ವೇಶ ಪ.ಪಲ್ಲಂಕಿಯಲಿ ತಾನೇರಿ ಭಕ್ತ-ಸುಲ್ಲಭ ಸುತ್ತುಬರುವನೆಲೆ ನಾರಿಸಲ್ಲಲಿತಾರ್ಥ ಋಗ್ವೇದ್ಯಜುರ್ವೇದವ-ನೆಲ್ಲವ ಲಾಲಿಸಿ ಉಲ್ಲಾಸದೊಳಗೆ 1ಸಂಗೀತನರ್ತನಗಳನು ಪೂರ್ಣ-ಮಂಗಲಕರ ವೀಣಾವೇಣುಗಾನವನುಶೃಂಗಾರ ಪದ್ಮಮೃದಂಗ ಸರ್ವಾದ್ಯಪ್ರ-ಸಂಗದಿ ಒಲಿಯುತಗಜನಕನು 2ಕಪಟನಾಟಕಸೂತ್ರಧಾರಿ ಸರೀ-ಸೃಪಗಿರಿರಾಜ ದಾನವಕುಲವೈರಿಅಪರೂಪವಾದ ಮಂಟಪದಲಿ ಮಂಡಿಸಿಕೃಪೆಯ ಬೀರಿದನು ಸೇವಿಪ ಭಕ್ತರಿಂಗೆ 3ಭಕುತರಾಯಾಸವನೆಲ್ಲ ತನಶಕುತಿಯಿಂದಲಿ ಬಿಡಿಸಿದನದನ್ನೆಲ್ಲಅಖಿಳಭಯಗಳ ನಿವಾರಿಸಿ ತೆಗೆಯುತ್ತಮುಕುತಿದಾಯಕನು ಗೃಹಾಂತರಕ್ಕೈದಿದನು 4ಇಂದ್ರಾದಿ ದೇವತೆಯರನು ಅರ್ಧ-ಚಂದ್ರಶೇಖರಪ್ರಮಥಾದಿ ಗಣವನುಇಂದುಗೋವಿಂದನು ಚಂದದಿ ಸಂತುಷ್ಟಿ-ಹೊಂದಿಸಿ ಸರ್ವಾನಂದವ ತೋರ್ದನು 5ಆದ್ಯಂತ ಭಕ್ತರ ನೋಡಿ ಶ್ರೀಪ್ರ-ಸಾದವ ನೀಡಿ ಭಕ್ತರ ಒಡನಾಡಿಮುದ್ದುಮೋಹದ ಮಡದಿಯರ ಸಮೇತದಿಗದ್ದುಗೆಯಲಿ ಸಾನ್ನಿಧ್ಯ ತೋರಿದ ಕಾಣೆ 6ಈ ರೀತಿಯಲಿ ಶ್ರೀಹರಿಯು ನಾನಾಭೂರಿವಿಭವದ ಶೃಂಗಾರ ಶೋಭಿತವುನೀರೆ ಪಂಚಮಿ ಶುಭವಾರದ ದಿವಸದಸಾರಉತ್ಸಹ ಪೂರ್ಣ ತೋರಿಸಿ ಪೊರೆದನು7ಆರತಿಯನು ಎತ್ತಿದಳು ಜಯ-ಭೇರಿರವದಿ ಆಕಾಶನ ಮಗಳುವಾರಿಧಿಶಯನ ಮುರಾರಿ ಶ್ರೀಲಕ್ಷ್ಮೀ-ನಾರಾಯಣನ ಸಾಕಾರವನ್ನು ನೋಡಿ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಂಥ ವಿಕ್ರಮಳೆ ನೀನುಎಂಥ ವಿಕ್ರಮಳೆ ನಿನಗೆಣೆ ಯಾರು ಶ್ರೀ ಲಕ್ಷ್ಮೀ-ಕಾಂತ ರೂಪದಿ ಕೊಂದೆ ಮಧುಕೈಟಭರ ದೇವಿಪಹರಿಕಿವಿಯಲಿ ಅವತರಿಸಿ ಮಧು ಕೈಟಭರ-ವರೆನಿಸಿ ಪಡೆಯೆ ವಿಧಿಯಿಂ ವರವಅರಿದುವಿಷ್ಣುವಿನಿಂದ ಮರಣ ಇವರಿಗೆಂದುಸ್ಮರಣೆಯ ಮಾಡಿದ ದೇವಿ ಪಾದಪಂಕಜಪರಮಮಂಗಳ ವಿಷ್ಣು ಎಬ್ಬಿಸು ಈ ಕ್ಷಣಹರಣವನೆ ಕಾಯಲಿ ಮೂರ್ವರು ನಿಮ್ಮಚರಣವ ನಂಬಿರಲಿ ಎತ್ತಿದಳಾಗಅರಳಿದವು ಕಣ್ಣು ಉಸಿರಾಡಿತು ಮೂಗಿನಲಿ1ಎದ್ದವನಚ್ಯುತ ಬ್ರಹ್ಮ ಏಳನೇ ಶರಧಿಯೊಳೆದ್ದ ಬಡಬನಂದದಲಿ ಮೃತ್ಯುವಗೆದ್ದ ಮೃತ್ಯುವಿನಂತಾಗಲು ಸಿಡಿಲಿನಮುದ್ದೆಯಂದದಿ ಕಣ್ಣ ಕಿಡಿಯುಕ್ಕೆ ಔಡಗಿ-ದೆದ್ದು ಚಕ್ರಕೆ ಕೈಯನಿಕ್ಕುತ ಹೊಯ್ದನುಅದ್ದಲು ಆ ಮಧುವ ಕೈಟಭನನ್ನುಒದ್ದು ಹಾಕಿದ ಶಿರವ ಇಬ್ಬರ ಕೂಡೆಬಿದ್ದರು ಮಹಾಹವ ಮೂರ್ವರ ಬಹು-ಯುದ್ಧವ ಹೇಳುವುದೇನು ಆ ಬಹು ರೌದ್ರವ2ಆದುದು ಪಂಚ ಸಹಸ್ರ ವರುಷ ಯುದ್ಧತೊಯ್ದರು ರಕ್ತದಿ ಕ್ರೋಧದುಬ್ಬಟ್ಟೆಯಿಂದಕಾದು ಕರಗಿದುದುಕವು ವಿಷ್ಣು ಬೇಸರ್ತ-ಮದ ಬೇಡಿರಿ ವರವನು ನೀಬೇಡೆನೆ ಕೊಟ್ಟ-ರಾದರೆ ಚಕ್ರದಿ ತಲೆ ಹರಿಯಲೆಂದುಛೇದಿಸಿದನು ಶಿರವ ಮೇಧಸು ಕೊಬ್ಬುಮೇದಿನಿಯಾದಿರವ ಹೊಗಳಿದ ಬ್ರಹ್ಮಮಾಧವನ ಸ್ತೋತ್ರವ ತಾನೆಯಾದಬೋಧಚಿದಾನಂದ ಬಗಳಾ ಚಾರಿತ್ರವ3
--------------
ಚಿದಾನಂದ ಅವಧೂತರು
ಎಂದೆಂದಿಗೂ ನಿನ್ನ ಪಾದವೆ ಗತಿಯೋ ಗೋವಿಂದ ಬಾರೈ ಎನ್ನ ಹೃದಯ ಮಂದಿರಕೆ ಪಮೊದಲಿಲ್ಲಿ ಬರಬಾರದು ನಾ ಬಂದೆತುದಿಮೊದಲಿಲ್ಲದ ಭವದಿಂದ ನೊಂದೆ ||ಇದರಿಂದ ಗೆದ್ದು ಹೋಗುವುದೆಂತು ಮುಂದೆಪದುಮನಾಭನೆ ತಪ್ಪುಕ್ಷಮೆಮಾಡುತಂದೆ1ಹೆಣ್ಣು ಹೊನ್ನು ಮಣ್ಣಿನಾಶೆಗೆ ಬಿದ್ದುಪುಣ್ಯ ಪಾಪಂಗಳ ನಾನರಿತಿದ್ದು ||ಅನ್ಯಾಯವಾಯಿತು ಇದಕೇನು ಮದ್ದುನಿನ್ನ ಧ್ಯಾನವ ಕೊಡು ಹೃದಯದೊಳಿದ್ದು 2ಹಿಂದೆ ನಾ ಮಾಡಿದ ಪಾಪವ ಕಳೆದುಮುಂದೆನ್ನ ಜನ್ಮ ಸಫಲ ಮಾಡಿ ಪೊರೆದು ||ತಂದೆ ಶ್ರೀಪುರಂದರವಿಠಲ ನೀನಿಂದುಬಂದು ಸಲಹೊ ನನ್ನ ಹೃದಯದಿನಿಂದು3
--------------
ಪುರಂದರದಾಸರು
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆಬೋಧನೆಯ ಮಾಡವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದುಖಂಡ ತುಂಡು ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿಭಂಗಬಿದ್ದು ಗಳಿಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿರೆಂಟೆ ಹೊಡೆದು ಬೆಳೆಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡುಕಷ್ಟಮಾಡಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡುಸೂಳೆಯಂತೆ ಕುಣಿಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿನಾನಾ ವೇಷ ಹಾಕುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡುಕಳ್ಳತನವ ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10ಉನ್ನಂತಪುರಂದರ ರಾಯನ ಧ್ಯಾನವನುಮನಮುಟ್ಟಿ ಮಾಡುವುದುಮುಕ್ತಿಗಾಗಿ ಆನಂದಕಾಗಿ* 11
--------------
ಪುರಂದರದಾಸರು
ಏನು ಗತಿಯೊ ಮುಂದೆನಗೆ ಗೋವಿಂದಶ್ರೀನಿವಾಸ ರಕ್ಷಿಸದಿರೆ ದಯದಿಂದ ಪ.ನಿಶಿದಿನ ಹಸಿವುತೃಷೆಸುಡುವ ಕುಮರಿಯುಮಸಿವರ್ಣ ಮಾಡಿ ಕೇರಿಡಿವ ಮೂರುರಿಯು 1ನಾಚಿಕಿಲ್ಲದ ವಿಷಯಾಸೆಯಸಹ್ಯನೀಚ ದುರುಕ್ತಿಯಸ್ತ್ತ್ರದ ಘನಗಾಯ 2ಮಾಯದ ಕಡಲೊಳು ಕಟ್ಟಿಹ ಕೊರಳುಆಯಾಸ ಬಡುತ ಬಡುತ ಬಿದ್ದಿತುರುಳು 3ಎಳ್ಳನಿತು ಜ್ಞಾನ ಅಹಂಕಾರ ಬಹಳಘಲ್ಲನೆ ತಗಲುವ ಜ್ಞಾನದಶೂಲ4ಮರಹುಮದಗಳೆಂಬ ಮುಸುಕಿದ ಮೆಳೆಯುಪರದಾರ ಪರನಿಂದೆಯಗ್ನಿಯ ಮಳೆಯು 5ಬೇಡಿದ ಬಯಕೆ ಸಾಧ್ಯಾಗದ ನೋವುಮೂಢತನದಿ ದಿನ ನೂಕುವ ಸಾವು 6ಇನ್ನಾರೆ ಸಜ್ಜನ ಸಂಗಕೌಷಧಮುನ್ನ ಕೊಡಿಸೊ ಪ್ರಸನ್ವೆಂಕಟ ಮುಕುಂದ 7
--------------
ಪ್ರಸನ್ನವೆಂಕಟದಾಸರು
ಕದವನಿಕ್ಕಿದಳಿದೆಕೊ ಗಯ್ಯಾಳಿ ಮೂಳಿ ಪ.ಕದವನಿಕ್ಕಿದಳಿದಕೊ ಚಿಲಕವಲ್ಲಾಡುತಿದೆ |ಒದಗಿದ ಪಾಪವು ಹೊರಗೆ ಹೋದೀತೆಂದು ಅ.ಪಭಾರತ - ರಾಮಾಯಣ ಪಂಚರಾತ್ರಾಗಮ |ಸಾರತತ್ವದ ಬಿಂದು ಕಿವಿಗೆ ಬಿದ್ದೀತೆಂದು 1ಹರಿಯ ಪಾದಾಂಬುಜಯುಗಳವ ನೆನೆವ ಭ - |ಕ್ತರ ಪಾದದರಜ ಒಳಗೆ ಬಿದ್ದೀತೆಂದು 2ಮಂಗಳ ಮೂರುತಿ ಪುರಂದರವಿಠಲನ |ತುಂಗವಿಕ್ರಮಪಾದ ಅಂಗಳ ಪೊಕ್ಕೀತೆಂದು 3
--------------
ಪುರಂದರದಾಸರು
ಕೆಡಿಸುವನಲ್ಲೊ ನೀ ಬಲು ಕರುಣಿ ನನ್ನಕಿಡಿಗೇಡಿತನ ಉಣಿಸಿತು ಭವಣಿ ಪ.ಹುಸಿಯ ನುಡಿದು ದೆಸೆಗೆಟ್ಟವ ನಾ ನನ್ನಕುಶಲ ಕಲ್ಯಾಣದೊಳಿಟ್ಟ ಕರುಣಿ ನೀಅಸಮ ಚಂಚಲ ಚಿತ್ತವುಳ್ಳವ ನಾ ದುವ್ರ್ಯಸನವಿದಾರಿ ಉದಾರಿಯು ನೀ 1ಹಗಲರಿತ ಕುಳಿಯೊಳ್ಬಿದ್ದವ ನಾ ಎನ್ನನೆಗಹಿ ನೆಗಹಿ ನೆಲೆಗೊಟ್ಟವ ನೀಬಗೆ ಬಗೆ ದೋಷಾಚರಣ್ಯೆವ ನಾ ಮತ್ತಘ ಸಂಚಿತವನೋಡಿಸುವೆ ನೀ 2ವಿಷಯದ ಬಯಕೆಲಿ ನವೆದವ ನಾ ಶುದ್ಧಭೇಷಜನಾಗಿಹೆ ಭವರೋಗಕೆ ನೀವಿಷವನುಂಡು ಕಳೆಗೆಡುವವ ನಾ ಪೀಯೂಷವನೆರೆವ ದಯಾವಾರಿಧಿ ನೀ 3ಅಹಂಕಾರದಲಿ ಬೆರೆತಿದ್ದವ ನಾಶುಭವಹ ನಾಮವನಿತ್ತು ತಿದ್ದುವೆ ನೀಮಹಿಯೊಳಗಮಿತಘ ಸಾಧಕ ನಾ ಎನ್ನಬಹುಕಲುಷವನ ದಾಹಕ ನೀ 4ಕೆಡಿಸಬೇಕಾದರೆ ತಿರ್ಯಗ್ಯೋನಿಯ ನೀಬಿಡಿಸಿ ವೈಷ್ಣವ ಜನ್ಮಕೆ ತಹೆಯಾಒಡೆಯ ಪ್ರಸನ್ವೆಂಕಟ ದಯಾಳು ನಿನ್ನಒಡಲ ಹೊಕ್ಕವನೆಂದು ನಂಬಿನೆಚ್ಚಲು 5
--------------
ಪ್ರಸನ್ನವೆಂಕಟದಾಸರು
ಕೋಲತರುವೆ ತಾಳೋ ನಿನಗೆ ಬಾಲ ಕೃಷ್ಣನೇ |ಪೇಳಿದ ಮಾತನು ಕೇಳುಶೂಲಿಮಿತ್ರನೇ ಪನಾರಿ ಜನರ ದೂರಕೇಳಿಗಾರುಗೊಂಡೆನೇ ||ಕೃಷ್ಣ||ಸೀರೆಗಳ್ಳನೆಂದು ಹೆಸರನಿಟ್ಟುಕೊಂಡೆನೇ 1ಸುದತಿಯರನು ಮೋಸಗೈವ ಹದನವರಿತೆನೇ ||ಕೃಷ್ಣ||ದಧಿಘೃತಚೋರನೆಂದು ಮೊದಲೆ ಕೇಳೆನೇ 2ಕಂಡು ಸಹಿಸಲೆಂತು ನಿನ್ನ ಭಂಡತನವನೇ ||ಕೃಷ್ಣ||ಕಂಡ ಹೆಂಗಳ ಮೇಲೆ ಬಿದ್ದು ಪುಂಡು ಮಾಳ್ಪನೇ 3ಅಂದು ಎನ್ನ ಉದರದಲ್ಲಿ ಬಂದು ಜನಿಸ್ಯಾನೇ ||ಕೃಷ್ಣ||ಸುಂದರ ಗೋವಿಂದನೆಂಬ ನಾಮಧರಿಸ್ಯಾನೇ 4
--------------
ಗೋವಿಂದದಾಸ