ಒಟ್ಟು 19658 ಕಡೆಗಳಲ್ಲಿ , 137 ದಾಸರು , 8696 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರೋಗಣೆಯ ಮಾಡೊ ಅಂಜನಾದ್ರಿಯ ವಾಸ ಆಲಸ್ಯವೇತಕೋ ಆಯಿತು ವೆಂಕಟೇಶ ಪ ತಳಿಗೆಯ ತೊಳೆದಿಟ್ಟು ಸುಳಿಬಾಳೆ ಎಲೆಯಿಕ್ಕಿ ನಳಿನಲೋಚನೆಯರುಗಳಿಂದ ಅಭಿಘರಿಸಿ ಎಳೆಯ ಮಾವಿನ ಮಿಡಿಯು ಉಪ್ಪು ಬೇವಿನ ಸೊಪ್ಪು ಹುಳಿಗೂಡಿ ಅರೆದಿಟ್ಟ ಶುಂಠಿ ಕಡಲೆ ಹಂಬೆ 1 ಕಣಿಲೆ ಕಂಚಿನಕಾಯಿ ಅಣಿಲೆ ಅಂಬಟನೆಲ್ಲಿ ಒಣಗಿದ ಮೆಣಸಿನ ಉರಿಯು ಉಪ್ಪಿನ ಹೆರೆಯು ಕಣುಮನಕ್ಕೊದಗಿಯೇ ಅಣಿಯಾಯಿತೆಡೆಯೊಳು 2 ಹೆರೆದ ತೆಂಗಿನಕಾಯ ಅರೆದ ಸಾಸಿವೆಯಿಕ್ಕಿ ಅರೆದು ಬೇಯ್ಸಿದ ಓಗರದೊಳು ಕಲಸಿಟ್ಟು ತರಿದ ಗುಳ್ಳದಕಾಯಿ ಹಾಗಲು ಕುಂಬಳಕಾಯಿ ಕೊರೆದ ಬಾಳೆಯಕಾಯಿ ಹುರಿದದೇ ತುಪ್ಪದಿ 3 ಸಣ್ಣಕ್ಕಿಯೋಗರವು ಬೆಣ್ಣೆಕಾಸಿದ ತುಪ್ಪ ಗಿಣ್ಣಲನೊರೆಹಾಲು ಸಣ್ಣ ಮೆಣಸು ಸಾರು ಅನ್ನ ಚಿತ್ರಾನ್ನವು ಮೊಸರನ್ನ ಹೆಸರ್ಹುಗ್ಗಿ ಉಣ್ಣಬಾರೆಲೋ ನೀನು ಇನ್ನು ತಡ ಬೇಡ 4 ಕೇಸಕ್ಕಿಯೋಗರವು ದೋಸೆ ಪಾಯಸವನ್ನು ಬೀಸು ಹಾರಿಗೆಯತಿರಸವು ಮಂಡಿಗೆಯು ಏಸು ಹೋಳಿಗೆ ಬೇಕೈಸನೀ ಉಣಲೇಳು 5 ಚಕ್ಕುಲಿ ಕರಜಿಯಕಾಯಿ ಮನೋಹರವು ಚೊಕ್ಕ ಬಿಳಿಯ ಬೇಳೆಸುಕ್ಕಿನುಂಡೆಯು ಕದಳಿ ರಸಾಯನವು ಇಕ್ಕಿಸಿಕೊಳ್ಳೊ ನೀ ಮಕ್ಕಳಾಟಿಕೆ ಬೇಡ 6 ಏಲಕ್ಕಿ ನಾಗರನಿಂಬೆ ಬೇವಿನಸೊಪ್ಪು ಮೇಲೆ ಒಗ್ಗರಿಸಿದ ನೀರು ಮಜ್ಜಿಗೆಯು ಹಾಲು ಮೊಸರು ಹಸಿಮಜ್ಜಿಗೆ ಸಹವಾಗಿ ಜಲವು ಮುಟ್ಟದ ಹಾಗೆ ಬೇರೆ ಬೇರಿರಿಸಿದೆ 7 ಗಾಯಿತ್ರಿ ಮಂತ್ರದಿಂ ತೋಯವ ಪ್ರೋಕ್ಷಿಸಿ ಬಾಯೊಳು ಪ್ರಣವವನು ಜಪಿಸಲಾಕ್ಷಣದಿ ರಾಯವೆಂಕಟಪತಿಯು ಆಪ್ಯಾಯನವ ಮಾಡಿ ದಾಯವಾಗಿತ್ತನು ಭಕ್ತಜನರಿಗೆಲ್ಲ 8 ಈ ರೀತಿಯಿಂದಲೆ ಆರೋಗಿಸುವುದೆಂದು ವಾರಿಜನಾಭನ ಸಾರಿ ವರ್ಣಿಸಲು ಮೋರೆಯ ಪ್ರಸಾದ ಕರೆದು ಇವನು ನಮ್ಮ ವರಾಹತಿಮ್ಮಪ್ಪನೊಂದುಗೂಡಿರುವನು 9
--------------
ವರಹತಿಮ್ಮಪ್ಪ
ಅರೋಗಣೆಯ ಮಾಡೋ ವಾರಿಜರಮಣಾ| ಸಾರಿದವರಿಗೆ ಅಭಯವನೀವಕರುಣಾ ಪ ಪೊಂಬ್ಹರಿವಾಣದಿ ರನ್ನಬಟ್ಟಲುಗಳು| ಅಂಬುಜಾನನರಿಸಿ ಲಕುಮಿಯವೆರಸಿ 1 ಪರಿಪರಿ ಮಾವಿನ ತನಿವಣ್ಗಳ ನೋಡಿ| ಮೆರೆವ ಸುದ್ರಾಕ್ಷ ದಾಳಿಂಬರ ಸವಿಯಾ 2 ಶಾಲ್ಯೋದನ್ನದಿ ಸುಘೃತ ಪರಿಪರಿಯ ವಿ| ಶಾಲ ಶಾಖಂಗಳ ಸವಿಯನೆ ಕೊಳುತಾ 3 ಪಂಚ ಭಕ್ಷ್ಯವು ಕೆನೆವಾಲು ಸೀಕರಣಿಯು| ಮುಂಚೆ ಶರ್ಕರದ ಪಾಯಸ ಪರಿಪರಿಯ 4 ದಧ್ಯೋದನ್ನದಲುಹಗಾಯಿ ಸ್ವಾದಿಸುತಾ| ಸದ್ವಿದ್ಯದ ಮನ ಕಲ್ಪತರುವೆಲ್ಲಾ 5 ಪತ್ರಸುಮನ ಫಲತೋಯಭಕ್ತರುಕೊಟ್ಟ| ರರ್ಥಿಲಿ ಕೊಂಬೊ ದಯಾಳುತನದಲ್ಲಿ6 ತಂದೆ ಮಹೀಪತಿ ನಂದನ ಸಾರಥಿ| ಎಂದೆಂದು ಸ್ಮರಣೆಗೊದಗಿ ಮುದ್ದು ಮುಖದಿ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅರ್ಚನೆ ಬಗೆ ಕೇಳಿ ಲೋಕ ಪ ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ ಅ.ಪ ಜಡವ ಪೂಜಿಸಿದರಲ್ಲೇನೊ ತಾನು | ಜಡ ತುಲ್ಯ | ನಾಗಿದ್ದಕೆ ಸಮವೇನು || ಕೆಡದಿರು ಇದರೊಳಗೆ ನೀನು ತಿಳಿ | ಒಡನೆ ಕರ್ಮಗಳೆಲ್ಲೇನುಂಟು ಕಾಣೋ 1 ಏಕಾಂತದಲಿ ನಿನ್ನ ಮನಸು ಅ | ನೇಕವಾಗುವುದು ನಿರಂತರ ಗುಣಿಸು || ನೀ ಕೇಳು ಯೋಚಿಸಿ ಗಣಿಸು | ಸರ್ವ ಆಕಾರದಲ್ಲಿ ಶ್ರೀ ಹರಿಯನ್ನೆ ನೆನಸು 2 ತ್ರಿವಿಧ ಜೀವರು ಮಾಡುವಂಥ ನಡತಿ | ಹವಣವ ನೋಡಿದು ಬಿಡು ನಿನ್ನ ಪಂಥ || ಕವಿಗಳೊಡನೆ ಸುಪಂಥದಿಂದ | ಪವಮಾನಮತ ಪೊಂದಿ ಭಜಿಪುದು ಇಂಥ 3 ದ್ಯುಣುಕ ಪಿಡಿದು ಬಹುಕಾಲತನಕ | ನಿತ್ಯ ಸುಶೀಲ || ಗುಣವಂತನಾಗೊ ನೀ ಬಹುಳ ಸುಖ- | ವನಧಿ ರಂಗನ ವ್ಯಾಪಾರವೆನ್ನೊ ಬಾಲ 4 ಆವಾಗ ಮರೆಯದಿರು ಹರಿಯ ಕಂಡ | ಠಾವಿನಲಿ ಯೋಚಿಸು ಅರಗಳಿಗೆ ಬಯಸದಿರು ಸಿರಿಯ || ದೇವ ವಿಜಯವಿಠ್ಠಲ ದೊರೆಯ ನಿನ್ನ ಭಾವದಲಿ ತಿಳಿಯೊ ಆತನ ಚರಿಯಾ 5
--------------
ವಿಜಯದಾಸ
ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿರ್ತವಾಗಿ ಪೂರ್ಣಬೆರ್ತು ಕೂಡುವಾ ಬನ್ನಿ ಗುರ್ತದಿಂದ ಧ್ರುವ ಸೂರ್ಯನಿಲ್ಲದ ಸೂಪ್ರಕಾಶ ತುಂಬೇದ ಹೇಳಲೇನ ತೂರ್ಯಾವಸ್ಥೆಯೊಳು ಬೆರೆದು ಕೂಡಿದ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರಿಯ ಹೇಳುವದಲ್ಲ ಅರುವ್ಹೆಸ್ಥಾನ ಪರಿಯಾಯದಿಂದ ಪರಿಣಿಮಿಸಿ ನೋಡಿ ಪರಮ ಪ್ರಾಣ 1 ಚಂದ್ರನಿಲ್ಲದೆ ಬೆಳದಿಂಗಲು ಬಿದ್ದದ ಬಲು ಬಹಳ ಇಂದ್ರಾದಿಕರೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದ್ರವಾದ ಸುವಸ್ತುವಳಗೊಂದದೆ ಅಚಲ ಸಾಂದ್ರವಾದ ಸುಖತುಂಬಿ ತುಳುಕತದೆ ಥಳ ಥಳ 2 ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬ್ಯಾಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ ದೀನ ಮಹಿಪತಿಗೆ ತಾನೆತಾನಾದ ಸದ್ಗುರುವೀಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ ಧ್ರುವ ಅಲ್ಲಿಂದಲ್ಲಿದ್ದು ತಿಳಿಯದು ಲೋಕಾ 1 ಅಲ್ಯಾವನಾದರ ಅಲ್ಲೆವೇ ತಿಳಿದಾ 2 ಬಲ್ಲಮಹಿಮರ ಬಲಗೊಂಡು ಕೇಳಿ 3 ಒಳಗಲ್ಲ ಹೊರಗಲ್ಲ ಒಳಿತಾಗಿ ಕೇಳಿ4 ಕೆಳಗಲ್ಲ ಮ್ಯಾಲಲ್ಲ ತಿಳಿದುಕೊಂಡು ನೋಡಿ 5 ಹಿಂದಲ್ಲ ಮುಂದಲ್ಲ ಸಂಧಿಸಿ ನೋಡಿ 6 ಎಡಕಲ್ಲ ಬಲಕಲ್ಲ ಪಡಕೊಂಡು ನೋಡಿ 7 ದೂರಲ್ಲ ಸಾರ್ಯಲ್ಲ ಅರಿತಿನ್ನು ನೋಡಿ 8 ಬೆಡಗಿನ ಮಾತಲ್ಲ ಕಡಗಂಡು ನೋಡಿ 9 ಸ್ಥೂಲಲ್ಲ ಸೂಕ್ಷ್ಮಲ್ಲ ಭೇದಿಸಿ ನೋಡಿ 10 ಮನದಿರಗಿ ಉನ್ಮನವಾಗಲಿಕ್ಕೆ 11 ಕಣ್ಣದಿರಗಿ ಕಣ್ಣ ನೋಡಲಿಕ್ಕೆ 12 ಎಚ್ಚತ್ತು ಅಲ್ಲಿವೆ ಯೋಚಿಸಲಿಕ್ಕೆ 13 ಅರವಿನ ಮುಂದ ಮರವಿನ ಹಿಂದ 14 ಜಾಗ್ರ ನಿದ್ರಿ ಮಧ್ಯ ಅರುವಾಗಲಿಕ್ಕೆ 15 ಗುರುಕೃಪೆಯಿಂದಲಿ ಗುರುತಿಟ್ಟು ನೋಡಿ16 ಸಾಧಕನಾದರ ಸಾಧಿಸಬಹುದಿದು 17 ಭೇದಿಸೇನೆಂದರೆ ಭೇದಿಸಬಹುದಿದು 18 ಸೂರ್ಯಾಡೇನಂದರ ಸೂರ್ಯಾಡಬಹುದಿದು 19 ಖೂನಹೇಳಿದ ಮ್ಯಾಲ ಙÁ್ಞನೇನಬಹುದು 20 ಹೆಜ್ಜೆ ಹೇಳಿದ ಮ್ಯಾಲ ಸಜ್ಜನ ಅವನೀಗ 21 ಚೆನ್ನಾಗ್ಹೇಳಿದ ಮ್ಯಾಲ ಮನ್ನಿಸಬಹುದಿದು 22 ಗುರುತಹೇಳಿದ ಮ್ಯಾಲ ಗುರುಸ್ವರೂಪ ತಾಂ 23 ಸರಗಹೇಳಿದ ಮ್ಯಾಲ ಶರಣೆಂಬುದಾತಗ 24 ಅಲ್ಲಿಂದಲ್ಲೆಂಬುದನುಭವಾಗಬೇಕು 25 ಅನುಭವದೋರಿದ ಘನಗುರು ನಮ್ಮಯ್ಯ 26 ಲೇಸು ಲೇಸು ನಮ್ಮ ಭಾಸ್ಕರ ಗುರುದಯ 27 ಭಾಸುತ ಭಾಸ್ಕರಕೋಟಿ ತೇಜಾದನು 28 ದಾಸಮಹಿಪತಿಗೆ ಲೇಸು ಲೇಸಾಯಿತು 29
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಲ್ಲೇನಿಲ್ಲೇನು ಮತ್ತಿಲ್ಲೇನು ಪ ಅಲ್ಲೇ ನಿಲ್ಲೇನು | ಹರಿರೂಪಗಾಣದೇ ಡಂಭದಿ ತಿರುಗಿದ | ಅಲ್ಲೇ ನಿಲ್ಲೇನು 1 ಕರ್ಮಧರ್ಮವ ಮಾಡಿ ಸ್ವರ್ಗವ ಪಡೆದನು | ಅಲ್ಲೇ ನಿಲ್ಲೇನು| ಮರ್ಮವ ಗಾಣದ ವಿಷಯದ ಸಂಭ್ರಮ | ಅಲ್ಲೇ ನಿಲ್ಲೇನು 2 ಅಲ್ಲೇನಿಲ್ಲೇನು | ವನಿತೆ ಮಕ್ಕಳ ಬಿಟ್ಟು ಶಿಷ್ಯರ ನೆರಹಿದ | ಅಲ್ಲೇ ನಿಲ್ಲೇನು 3 ಎಲ್ಲ ಶಾಸ್ತ್ರವನೋದಿ ಪ್ರಾಕೃತಹಳಿದನು | ಅಲ್ಲೇ ನಿಲ್ಲೇನು | ಬಲ್ಲವ ನಾನೆಂಬ ಗರ್ವವು ಸೇರಿತು | ಅಲ್ಲೇ ನಿಲ್ಲೇನು 4 ಅಲ್ಲೇ ನಿಲ್ಲೇನು | ಮನದಲೆಚ್ಚರವಿಲ್ಲ ಕವಾಟಹೊಕ್ಕನು ಅಲ್ಲೇ ನಿಲ್ಲೇನು 5 ಮಹಿಪತಿ ನಂದನ ಸಾರಿದ ಸ್ವಹಿತ ಅಲ್ಲೇ ನಿಲ್ಲೇನು | ಶ್ರೀಹರಿ ನಾಮದ ನಂಬುಗೆ ಇರಬೇಕು | ಅಲ್ಲೇ ನಿಲ್ಲೇನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಲ್ಲೇನು ಇಲ್ಲವೋ ಪ ಸಿರಿಯು ಇರುವದೆಂದು ನೀನು ಗರುವದಿಂದ ಹರಿಯ ಮರೆತು ಉರುಳಿ ಪೋಪ ತನುವ ಪೋಷಿಸುತಲಿ ಬಹುತೋಷಿಸೂತಲಿ 1 ಮತಿಯ ತೊರೆದು ಪತಿತನಾಗಿ ಬಾಳ ಬೇಡೆಲೊ ಗತಿತೋರರವರೆಲೊ 2 ಧರಣಿಗೊಡೆಯನಾದ ನಿನ್ನ ಭರದಿ ಯಮನ ಚರರು ಕರೆಯೆ ನೀ ತಿಳಿದು ನೋಡಲೆ 3 ಬನ್ನ ಬಿಟ್ಟು ಲಜ್ಜೆ ಬಿಟ್ಟು ಬಲು ನೀಚನಾದೆಲೊ 4 ಮಂದಮತಿಯೆ ಕೇಳು ನೀನು ಮುಂದೆ ಹಿರಿದು ಬಳಲಬೇಡ ಪೊಂದಿ ಭಜಿಸೊ ರಂಗೇಶವಿಠಲನ ಸುಖವೀವ ದೊರೆಯನ 5
--------------
ರಂಗೇಶವಿಠಲದಾಸರು
ಅವತರಿಸಿದ ನೃಸಿಂಹ | ಶ್ರೀ ಹರಿ ಪರಬ್ರಹ್ಮ ಪ ತವಕದಿ ಭೂ ಭಾರವನಿಳುಹುವುದಕೆ ಅ.ಪ ನೊಡನೆ ಘುಡುಘುಡಿಸಿ ಕಿಡಿಗಳುದುರೆ ಕೋಟಿ ಸಿಡಿಲಿದೆನ್ನುತ ಕಿವುಡುಗೊಳೆ ಲೋಕವು 1 ತುಂಬಿ ಪೊಗೆ ಸುತ್ತಿ ಉರಿಯಲು ಶ ತಾನಂದಾದ್ಯಮರರು ಕರಗಳ ಮುಗಿ ದಾನತರಾಗಿ ನಮೋನಮೋಯೆನಲ್ 2 ಚಿಟಿಲು ಚಿಟಿಲು ನಿರ್ ನಿಟಿಲು ಶಬ್ದದಿ ಕ್ತಟಗಳೊಡೆಯೆ ಲಟಕಟಿಸೆ ಭುವನಚಯ ಹಟಯೋಗದ ಮುನಿಕಟಕವು ಗುರುರಾಮ ವಿಠಲನ ಪೊಗಳುತ ಮಿಟಿಮಿಟಿ ನೋಡಲು 3
--------------
ಗುರುರಾಮವಿಠಲ
ಅವತಾರ ಸಿರಿವರ ಘನ ಕರುಣಾಕರ ಪೊರೆಯೈ ಪ. ನಿಗಮಚೋರನನ್ನು ಕೊಂದು ನಗವಪೊತ್ತನೆ ವಿಗಡದೈತ್ಯನನ್ನ ಸೀಳಿ ಜಗವನಾಂತನೇ 1 ಘುಡುಘುಡಿಸಿ ಕಂಬವನು ಒಡೆದುಬಂದನೆ ಪಿಡಿದು ಖಳನ ಕರುಳಬಗೆದು ಕೊರಳೊಳಾಂತನೆ2 ಇಂದ್ರಗನುಜನಾಗಿ ದಾನವೇಂದ್ರ ಗೊಲಿದು ನೀಂ ನಿಂದು ಬಾಗಿಲಕಾವ ಗೊಲ್ಲನಂದಮೇನಿದೈ 3 ಹಡೆದತಾಯ ಶಿರವಪಿಡಿದು ಕಡೆದ ಭಾರ್ಗವ ಮಡದಿಚೋರನನ್ನು ಕೊಂದ ಒಡೆಯ ರಾಘವ 4 ಮಾವ ಕಂಸನ ಕೊಂದ ವಸುದೇವನಂದನ ಮಾಧವ 5 ಮತ್ತೆ ತ್ರಿಪುರ ಸತಿಯರ ಚಿತ್ತಕಲಕಿದ ಉತ್ತಮಾಶ್ವವನ್ನೆ ಹತ್ತಿ ಕಲ್ಕಿಯೆನಿಸಿದ 6 ಉರಗಶಯನ ಗರುಡಗಮನ ಪರಮಪಾವನ ವರದ ಶೇಷಶಿಖರಧಾಮ ಶ್ರೀನಿಕೇತನ 7
--------------
ನಂಜನಗೂಡು ತಿರುಮಲಾಂಬಾ
ಅವತಾರ ಹರಿಯ ವಿವರಿಸೆ ಬ್ರಹ್ಮಗಳ ಅಳವಲ್ಲಾ ಪ ಸುರಿವ ಮಳೆ ಹನಿ ಎಣಿಸಬಹುದು ಧರಣಿಯ ರಜ ಕಡಗಣಿಸ ಬಹುದು ಪರಮಾಣು ವರ ವೆಣಿಸಬಹುದು 1 ತಾರೆಯ ಲೆಖ್ಖವ ಹಿಡಿಯಲು ಬಹುದು ನೀರಸ್ವಿಯ ಮಾಪವ ಮಾಡಬಹುದು ಮೇರುಗಿರಿ ತೂಗಿ ನುಡಿಯ ಬಹುದು 2 ಅನಂತ ಗುಣಗಣ ನಿಲಯನುಯನಿಸಿ ಘನಗುರು ಮಹಿಪತಿ ಪ್ರಭು ಅವತರಿಸಿ ಅನುಚರರ ಹೊರೆವನು ಕರುಣಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅವತಾರತ್ರಯ ಅಕ್ಷಯ ನೀನಾಮೃತಂ ಕುಕ್ಷಿಯೊಳಗೆ ಪೂರ್ಣವಾಗಿಹ ಅಕ್ಷಯಾಂತಕನೀಕ್ಷಿಪುದು ಸುಜನರು ಪ ಇಕ್ವಾಕು ಕುಲಾಧ್ಯಕ್ಷ ರಾಘವನಾ ಶಿಕ್ಷೆಯಲಿ ಪ್ರಾಣ ರಕ್ಷಕನೆÉಂದರುಹಲು ಧರೆಗೆ ತಕ್ಷಣದಿ ಮರುದ್ವಾಕ್ಷ ಮರಕಟ ಕೃತಿಯ ತೋರಿ ಜಲಧಿಯನೆ ಪಾರಿ ರಕ್ಷಕೇಂದ್ರನ ಪುರಸೇರಿ ರಕ್ಕಸಿಯದೆಡೆಯಲಿ ಜನನಿಗೊಂದಿಸಿ ಲಕ್ಷಣದುಂಗುರವ ತೋರಿ ರಕ್ಷಸದಕ್ಷರವನಳಿದಾ 1 ಯದುಕುಲದೊಳುದಯಿಸೆÉ ಹರಿಯು ತದನರಿತು ವಾಯು ಉದಭವಿಸಿ ಭೀಮಾಭಿಧಾನದಿ ಮುದಗೊಳಿಸಲಿಳೆಗೆ ಕುದಿಯುವ ಬಕ ಹಿಡಿಂಬರರಳಿದು ಕೀಚಕನ ಸದೆದು ಅಧಮಕಾರವ ಕುಲವನಳಿದು ವಧಿಸಿzಖಿಲ ಬಲವ ತೋರಿ ಮುದವ ಬೀರಿ ಧರೆಯ ಜನಕೆ ಯಶವ ಗಳಿಸಿದವನ ಇಹಕೆ ಚರಕೆ2 ಗುರುವಾಗವತರಿಸಿ ಧರೆಯ ಸುಜನರು ಕರುಣಾಬ್ಧಿ ಹರಿಯು ಧರೆಯೊಳುಡುಪಿ ಪುರದಿ ಜನಿಸಲಿ ಸುರರಿಗೆ ತಿಳಿಯಲು ಹರಿಯ ಮತವ ಸೃಜಿಸಲಿಳೆಯಲು ತದಾಜ್ಞೆಯ ಕೇಳಲು ಭರದಿ ಮಧ್ವನಾಮ ಪಡೆದು ಹರಿಮತವ ಪಿಡಿಯ ಬೋಧಿಸಲು ನರಸಿಂಹವಿಠಲನ ಸ್ಮರಣೆಯಗೈದು ನರಜನ್ಮ ಸಾರ್ಥಕವು ಪರಮಪದವ ಗೈದು 3
--------------
ನರಸಿಂಹವಿಠಲರು
ಅವತಾರತ್ರಯ ಚರಣ ಸೇವಕರನ್ನು ಪೊರೆದ ಪ್ರಾಣೇಶನ್ನಹರುಷಾದಿ ವಂದಿಸಿ ವರಬೇಡಿರೈ ಪ ಕರುಣ ಸಾಗರ ಕಲ್ಪತರು ಭಕ್ತ ಕುಮುದ ಚಂದಿರನೆನಿಸುತಭೀಷ್ಟ ಸುರಿಸುವ ನೋಡಿರೈ ಅ.ಪ. ಸುದತಿ ಜಾನಕಿಯಾಪದಕೆರಗಿ ಪೇಳಿದ ಮುದದಿ ರಾಮನಹೃದಯ ವಾರುತಿಯಾಮುದ್ರಿಕೆಯ ಸಲಿಸುತ ವದಗಿದಸುರತ ಒಡೆದ ಕೀರುತಿಯಾಪಿಡಿಯಲ್ಕೆ ಕ್ಷಣದೊಳು ಕದನಕಂಠಕನೆನಿಪರಾವಣನೆದುರಿಸಿ ಗರ್ವ ಶಿಕ್ಷಿಸಲುಪುಚ್ಛದಲಿ ಪಟ್ಟಣ ಸುಟ್ಟು ದಹಿಸಿದಸದಯಕಾಮನ ಕಾರ್ಯ ಪೂರ್ತಿಯಾ 1 ದುರುಳ ಹರಣ ಸಂನುತ ಚರಣ ಕಮಲª Àಧರೆಯೊಳಗೆ ಪರಿಪರಿ ಮೆರೆದಾ 2 ಮರಳಿ ಭೂಸುರನು ಮಂದಿರದೊಳು ಜನಿಸಿತಾಗುರು ಮಧ್ವಮುನಿಯೆಂದು ಕರೆಸೀದನುವರವೇದವ್ಯಾಸರಾ ಕರುಣಪಡೆದು ದೇಶ ಸಂಚರಿಸಿದಾನಿಂದಕರ ಧಿಕ್ಕರಿಸಿದಾ ಸೇವಕರನುದ್ಧರಿಸಿದಾಗ್ರಂಥಗಳ ರಚಿಸಿ ಭರದಿ ಕಲಿ ಸಂಕರನೋಳ್ವಾದಿಸಿದಾಗುರು ಇಂದಿರೇಶನೆ ಧರೆಗೆ ಪಿತನೆಂದರುಹಿ ಸಾಧಿಸಿದಾಕರಕಂಜಜಾತದಿ ಕರಕೆ ಶಾಸ್ತ್ರದರಿವ ಬೋಧಿಸಿದಾನವರತ್ನ ಭಾಸಿತ ಕರಣಕುಂಡಲಮಕುಟ ಸಕಲಾಭರಣ ಭೂಷಿತಸುಮನಸೋತ್ತುಮ ಮುನಿಪ ಮಾನಂದಾತ್ಮಬುಜಗುಣದರಸೆ ಘನಸುಂದರ ಸುಖಪ್ರದ 3
--------------
ಗುರುಇಂದಿರೇಶರು
ಅವತಾರತ್ರಯ ಮೂರು ರೂಪವ ತೋರೋ ಮಾರ್ಜಿವದೊಡೆಯಾ ಪ. ಸಾರುವೆನು ಶರಣೆಂದು ಚಾರುತವ ಚರಣಕ್ಕೆ ಅ.ಪ.ಅಂಜನೆಯಲುದ್ಭವಿಸಿ ಸಂಜೀವನವ ತಂದುಕಂಜನಾಭನ ದಯದಿಅಂಜದತಿ ಕೆಂಜಡೆಯ ಪಿತಗಂಜಲಿ ಮುಗಿಯುವೆನು 1 ವಾರಿಧಿಯ ನೆರೆದಾಂಟಿ ನಾರಿಗುಂಗುರವಿತ್ತುಕ್ರೂರ ಕೀಚಕನ ಸಂಹಾರವನೆ ಮಾಡುತಲಿವೀರ ಬದರಿಲಿ ಪೋಗಿ ಸಾರಶಾಸ್ತ್ರವ ತಿಳಿದಧೀರ ಮಧ್ವಾಚಾರ್ಯ ಭೀಮ ಕರುಣವ ತೋರೋ 2 ಎರಡೈದು ಶಿರದವನ ಪುರವನೇ ನೀನುರುಹಿದುರುಳ ದುರ್ಯೋಧನನ ಧುರದಿ ಗೆಲಿದುವರ ಉಡುಪಿ ಕ್ಷೇತ್ರದಲಿಸಿರಿಯ ರಮಣಾ ತಂದೆ ವರದ ವಿಠ್ಠಲರೇಯಾ3
--------------
ಸಿರಿಗುರುತಂದೆವರದವಿಠಲರು
ಅವತಾರತ್ರಯ (1) ಕರುಣದೆನ್ನನು ಕಾಯಬೇಕಯ್ಯಾ ಕದರೂರ ರಾಯಕರುಣದೆನ್ನನು ಕಾಯಬೇಕ್ಕೆಹರಸುರಾದಿಗಳಿಂದ ವಂದ್ಯನೇದುರಿಥ ಪರಿಹರಿಸಿಹ ಪರಕೆ ನೀ-ನ್ಹರುಷದಲಿ ಸಾಧನ ಮಾಡಿ ಪ ಅಂಜನಿಯ ಗರ್ಭದಲ್ಲಿ ಜನಿಸಿದೆಯೊ ಶ್ರೀರಾಮನಂಘ್ರಿಕಂಜದಲ್ಲಿಹ ಭ್ರಮರನೆನಿಸಿಯಾಅಂಜದಂಬುಧಿಯ ದಾಟಿ ಸೀತೆಯ -ನಂಜಿಸುವ ರಾವಣನ ಬಲಗಳಭಂಜಿಸಿದಿ ಧರೆಯೊಳಗೆ ತೇಜಃಪುಂಜನಾಗಿಹ ಪ್ರಭುವೆ ಎನ್ನನು 1 ಅಖಿಳ ಕುರುಬಲಅಂತಕನಿಗೊಪ್ಪಿಸಿದಿ ಜಗದಾ -ದ್ಯಂತ ಸುಜನರಿಗಿತ್ತಿ ಸಂತಸಸಂತತೆನ್ನನು ಬಿಡದೆ ಪವನನೆ 2 ಮಧ್ಯಗೇಹನಲ್ಲಿ ಪುಟ್ಟಿದೆಯೊ ಸಚ್ಛಾಸ್ತ್ರ ಪಠಿಸಿ ಆ -ಪದ್ಧ ಮತದವರನ್ನು ಕುಟ್ಟಿದಿಯೊಉಧ್ವನುತ ರಮಾಪತಿ ವಿಠ್ಠಲನಸದ್ಯ ಮನದಲಿ ತೋರಿ ಕೊಟ್ಟೆ -ನ್ನುದ್ಧರಿಸಿ ಭವಕಡಲ ದಾಟಿಸೊಮಧ್ವಮುನಿ ಸಜ್ಜನತ್ಪ್ರಸಿದ್ಧನೆ 3
--------------
ರಮಾಪತಿವಿಠಲರು
ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ಸುವಿನೋದವ ಪಡೆದರು ಸುರನರಜನರು ಪ ಪವನಸುತರ ಮತ ಭುವಿಯಲಿ ಸುಲಭದಿ ವಿವರಿಸಿ ಜನರಿಗೆ ಪ್ರವಚನವೆಸಗಲು ಅ.ಪ ಗುರು ಬ್ರಹ್ಮಣ್ಯರ ವರಪದ ಕಮಲಗಳ ಪರತÀರ ಭಕುತಿಯಲಿ ಪರಿಪರಿ ಸೇವಿಸಿ ಗುರುಕರುಣದಲಿ ಹರುಷವ ಪೊಂದುತಲಿ ವರವ ಪಡೆದ ಭೂಸುರ ರಾಮಾರ್ಯರ ವರಸತಿಯುದರದಿ ವಹ್ನಿಪುರದೊಳವ ತರಿಸುವ ಧರೆಯೊಳು ಸುಜನಗಣವನು ದ್ಧರಿಸಲು ಮುದದಲಿ ಸಿರಿಪತಿಭಕುತನು 1 ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ ಯತಿಯಾಶ್ರಮವಹಿಸಿ ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ ಯತಿಯಲಿ ಶಾಸ್ತ್ರಾಮೃತ ಪಾನ ಮಾಡುತ ಅತಿ ಸುಲಭದ ಶ್ರುತಿಗಳ ಸಾರವ ಕ್ಷಿತಿ ಸುರರೊಳಗತಿ ಹಿತದಲಿ ಅರುಹಲು 2 ಗಜಗಹ್ವರ ದೇಶದ ನರಪತಿಗಳಿಗೆ ನಿಜವರ ಕರುಣದಲಿ ವಿಜಯಾಭ್ಯುದಯಗಳನು ಸತತ ಪೊಂದಿಸುತ ರಜತಕನಕ ನವಮಣಿಗಣಯುತ ವಾ ರಿಜವನು ಪೋಲುವ ಸಿಂಹಾಸನದಲಿ ಸುಜನ ಸಮೂಹಕೆ ನಿಜಪದಯುಗಳಾಂಬುಜ ಸೇವೆ ನೀಡಲು 3 ನಂದತೀರ್ಥರ ವರಶಾಸ್ತ್ರಗಳನ್ನು ಚಂದದಿ ವಿವರಿಸಲು ಚಂದ್ರಿಕಾ ನ್ಯಾಯಾಮೃತ ಮೊದಲಾದ ಗ್ರಂಥಗಳನು ರಚಿಸಿ ಮಂದಜನಕೆ ಮುಚುಕುಂದನ ಶುಭಗುಣ ವೃಂದಗಳನು ಸುಖದಿಂದ ಬೋಧಿಸಲು ಅಂದಪದಗಳನು ರಚಿಸುತ ಶುಭಗುಣ ಸಾಂದ್ರನ ಭಜನಾನಂದ ಪೊಂದಿಸಲು 4 ವಿಜಯೀಂದ್ರ ವಾದಿರಾಜ ಮೊದಲಾದ ನಿಜವರ ಶಿಷ್ಯರುಗಳ ವ್ರಜಕೆ ಶಾಸ್ತ್ರಾರ್ಥಗಳನು ಬೋಧಿಸುತ ಪುರಂದರ ಸುಜನ ಶಿರೋಮಣಿ ಕನಕ ಪ್ರಮುಖ ಪೂಜಿತ ಪದಯುಗಳಾಂಬುಜ ಯತಿಶೇಖರ ವಿಜಯಸಾರಥಿಯು ಪ್ರಸನ್ನನಾಗಲೆಂದು 5
--------------
ವಿದ್ಯಾಪ್ರಸನ್ನತೀರ್ಥರು